ಒಟ್ಟು 2613 ಕಡೆಗಳಲ್ಲಿ , 114 ದಾಸರು , 2097 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸತ್ಯಭೋಧ ಯತಿಕುಲವರನೆ ನಿತ್ಯ ತುತಿಸಿ ವಂದಿಸುವ ತಾವಕರೊಳು ಎಣಿಸೋ ಪ ಅರ್ಥಿಜನ ಚಿಂತಾಮಣಿ ಸತ್ಕರುಣಿ ಶ್ರೀನಿವಾಸನ ಗುಣ ಸಾನುರಾಗದಲಿ ವ್ಯಾ ಖ್ಯಾನ ಪೇಳುವ ಕಾಲದಿ ಶ್ವಾನರೂಪದಿ ಪವಮಾನ ಜನರು ನೋಡೆ ಕಾಣಿಸಿಕೊಂಡನಂದೊ ತಾ ಬಂದು 1 ಬವರಗೋಸುಗ ಬಂದ ಯವನಾಧಿಪತಿ ನಿಮ್ಮ ಸುವಿಚಿತ್ರ ಮಹಿಮೆ ಕಂಡು ಪ್ರವಿನೀತನಾಗಿ ಕಪ್ಪವೆ ಕೊಟ್ಟು ನಮಿಸಿದ ಕವಿ ಆವಾ ವಿಭವಾ ವರ್ಣಿಸುವಾ 2 ಇವರು ದೇವಾಂಶರೆಂದರುಪುವಗೋಸುಗ ಬಂದು ದಿವಿಜತರಂಗಿಣಿಯು ಶಿವನಂಗಭೂರುಹ ಮೂಲ ಭಾಗದಲಿ ಉ ದ್ಭವಿಸಿ ಕಂಗೊಳಿಸಿದಳು ಕೃಪಾಳು 3 ಸ್ವಾಂತಸ್ಥ ಮುಖ್ಯ ಪ್ರಾಣಾಂತರಾತ್ಮಕ ಭಗ ವಂತನಂಘ್ರಿ ಕಮಲ ಸಂತತ ಸರ್ವತ್ರ ಚಿಂತಿಸುತಿಪ್ಪ ಮ ಹಾಂತರಿಗೇನಚ್ಚರೀ ವಿಚಾರ 4 ಚಾರು ಚರಿತ ಭೂ ಸುರವರ ಸನ್ನುತನೇ ಪರಮ ಪುರುಷ ಜಗನ್ನಾಥ ವಿಠ್ಠಲ ನಿಮ್ಮ ಪರಿಪರಿ ಮಹಿಮೆ ಎಲ್ಲಾ ತಾ ಬಲ್ಲಾ 5
--------------
ಜಗನ್ನಾಥದಾಸರು
ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆನಿತ್ಯ ಜ್ಞಾನಿಯಾದ ಮೇಲೆ ಚಿಂತೆಯಾತಕೆ ಪ ಕಾಲ ಬದುಕಲ್ಯಾತಕೆಮಾನಿನಿಯ ತೊರೆದ ಮೇಲೆ ಭೋಗವ್ಯಾತಕೆ 1 ಮಾತು ಕೇಳದೆ ಮಲೆತು ನಡೆವ ಮಕ್ಕಳ್ಯಾತಕೆಪ್ರೀತಿಯಿಲ್ಲದೆ ಎಡೆಯಲಿಕ್ಕಿದ ಅನ್ನವ್ಯಾತಕೆನೀತಿಯರಿತು ನಡೆಯದಿರುವ ಬಂಟನ್ಯಾತಕೆಸೋತ ಹೆಣ್ಣಿಗೆ ಓತು ನಡೆಯದ ಪುರುಷನ್ಯಾತಕೆ 2 ಸನ್ನೆಯರಿತು ನಡೆಯದಿರುವ ಸತಿಯು ಯಾತಕೆಮನ್ನಣಿಂದ ನಡೆಸದಿರುವ ದೊರೆಯು ಯಾತಕೆಮುನ್ನ ಕೊಟ್ಟು ಪಡೆಯದಿನ್ನು ಬಯಸಲ್ಯಾತಕೆಚೆನ್ನ ಆದಿಕೇಶವನಲ್ಲದ ದೈವವ್ಯಾತಕೆ 3
--------------
ಕನಕದಾಸ
ಸತ್ಯವತಿಸೂನು ವೇದವ್ಯಾಸ ಲಕುಮಿಶಾ | ನಿತ್ಯ ನಿನ್ನ ನೆನೆಸುವ ಭೃತ್ಯರೊಡನೆ ಪೊಂದಿಸು ದೇವ ಪ ವಾಸುಕಿ ಇಲ್ಲಿ ಮದನಾರಿಯ ವಲಿಸಿ | ತನ್ನ ಬದುಕುವಗೋಸುಗ ಉಪಾಯದಲಿ ನಿಂದರೆ | ವೈರಿ ತಾರಕನ್ನ ಸದೆದು | ಇಂದ್ರಾದ್ಯರ ಕೂಡ ಮುದದಿಂದ ಸ್ಥಿರವಾಗಿ ಮೆರೆದ 1 ಷಣ್ಮೊಗನು ಸತತ ತಾನು ಅನ್ನದಾನ ಮಾಡುತ ಹಾ | ವನ್ನನಾಗುದಕ್ಕೆ ಪ್ರಸನ್ನ ಮೋದದಲಿ | ನಿನ್ನ ಪೊಲಿಸಿಲ್ಲಿಗೆ ಬಾಹಾ | ದೆನ್ನ ಭಕುತಿಗೆ ಮೆಚ್ಚಿ | ವಾಸುದೇವ 2 ಕಲಿಯುಗದೊಳಗೆ ವಿಪ್ರಕುಲದಲಿ ಮಾರುತಿ ಎನಿಸಿ | ಬಲು ಮಾಯಿಗಳ ಮೋಹನ ಶಾಸ್ತ್ರವಳಿದು ಬದರಿಯ | ಬಳಿಗೆ ಬಂದು ಶಿಲಾಪ್ರತಿಮೆಗಳನೆ ಪಡೆದು ತಂದು | ಪೊಳೆವಂದದಲಿ ಇಳೆಯೊಳಗೆನಲು 3 ಅಂದಿನಾರಭ್ಯ ಪಾರ್ವತಿನಂದನ ಕುಕ್ಕೆಪುರದಲ್ಲಿ | ನಿಂದು ಸರ್ವರಿಂದ ಪೂಜೆ ಚಂದದಿ ಕೊಳುತಾ | ಮಂದ ಕುಷ್ಟರೋಗಗಳ ಹಿಂದುಮಾಡಿ ಓಡಿಸಿ | ಗೋ ಪಾದ ಧ್ಯಾನದಿಂದ ಲೋಲಾಡುತಲಿರೆ 4 ಮರುತದೇವ ಸಂಪುಟಾಕಾರವಾದ ನೀನದರೊಳು | ಚಾರು ಸಿಲೆ ರೂಪವಾದ ಪಾರಾಶರ ಋಷಿ | ಧಾರುಣಿಗೆ ರಹಸ್ಯವ ತೋರಿಕೊಳುತಲಿ | ಮಾರ ಗೊಲಿದ ವಿಜಯವಿಠ್ಠಲಾ 5
--------------
ವಿಜಯದಾಸ
ಸನ್ನುತ | ವಿಠಲ ಪೊರೆ ಇವಳಾ ಪ ಯಜನ ಯಜ್ಞಾಭಿದನೆ | ಗಜವರದ ಹರಿಯೇ ಅ.ಪ. ಗುರು ಹಿರಿಯರ ಸೇವೆ | ಈ ನೆರೆಮಾಳ್ವಳೇಕನ್ಯೆಕರ ಪಿಡಿದು ಪೊರೆ ಇವಳ | ಕಾರುಣ್ಯ ಸಿಂಧೋತರತಮಾತ್ಮಕ ಜ್ಞಾನ | ಮೂರೆರೆಡು ಭೇದಗಳಅರಿವಾಗುವಂತೆಸಗೊ | ಮರುತಾಂತರಾತ್ಮಾ 1 ದುರಿತ ರಾಶಿಗಳಳಿದು | ವರಸುವೈರಾಗ್ಯವನುಕರುಣಿಸುತ ಪೊರೆ ಇವಳ | ಧರೆಯಮರ ವಂದ್ಯಾಇರಿಸಿ ಸತ್ಸಂಗದಲಿ | ನೆರೆಸು ಸಾಧನಗೈಸೊಪರಮಾತ್ಮ ಪರಮೇಶ ಪರಿಪೂರ್ಣ ಹರಿಯೇ 2 ವನಧಿ ಉತ್ತರಿಸೊ | ಭವದೂರ ಹರಿಯೇಸವನತ್ರಯದಲಿ ನಿನ್ನ | ತವ ನಾಮ ಸ್ಮøತಿಯಿತ್ತುಅವನತಳ ಪೊರೆಯೊ ಗುರು | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಸನ್ನುತ ವಿಠಲ | ಇವನ ಪೊರೆಯೋ ಪ ಅವಿಕಾರಿ ಆದ್ಯ ನಿರ | ವದ್ಯ ಎಲೊ ಹರಿಯೆ ಅ.ಪ. ತೈಜಸನೆ ನೀನಾಗಿ | ಮಾಜದಲ್ಯುಪದೇಶಯೋಜಿಸುವೆನೆಂದೆನುತ | ಪೇಳ್ದುದಕ್ಕಾಗೀಆರ್ಜವದ ಮನದಲ್ಲಿ | ಪ್ರಾರ್ಥಿಸಲು ಸ್ವಪ್ನದಲಿಯೋಚಿಸಿಹೆ ಅಂಕಿತವ | ಹೇ ನೈಜಮೂರ್ತೇ 1 ಚಿಣ್ಣನಿರುವನು ಇವನು | ಕಣ್ಣೆಗೆವೆಯಂದದಲಿಇನ್ನೀವನ ಕಾಯುವುದು | ಬನ್ನಬಡಿಸದಲೇಅನ್ನ ಆರೋಗ್ಯಕ್ಕೆ | ನಿನ್ನನೆ ಮೊರೆಯಿಡಲಿಅನ್ಯ ಹಂಬಲ ನೀಗೊ | ಪನ್ನಂಗ ಶಯನಾ 2 ತೊಡರು ಬರಲಿ | ಬಿಡದೆ ನಿನ್ನಂಘ್ರಿಯನುಧೃಡಭಕ್ತಿಯಿಂ ಸ್ಮರಿಪ | ಮುದ ಮನವ ನೀಯೋ |ಎಡಬಲದಿ ನೀನಾಗಿ | ಬಿಡದೆ ಬೆಂಬಲ ವಿರಲುಕಡು ಭವಾರ್ಣವವೆಲ್ಲ | ಅಡಿಯ ಪರಿಮಿತಿಯೋ 3 ಸಿರಿ ವಾಯು ಮೊದಲಾದಸುರರೆಲ್ಲ ಹರಿಯ ಕಿಂಕರರೆಂಬ ಮತಿಯಿತ್ತುಪೊರೆವುದಿವನನ ಎಂದು | ಹರಿಯೆ ಭಿನ್ನವಿಪೆ 4 ನಾಮ ಸ್ಮರಣೆ ಯೆಂಬ | ವಜ್ರಕವಚವ ತೊಡಿಸಿಈ ಮಹಾ ಕಲಿಯುಗದಿ | ಸಾಧನವ ಗೈಸೋಶ್ರೀ ಮನೋಹರ ಗುರು | ಗೋವಿಂದ ವಿಠಲಯ್ಯಈ ಮಹತ್ತುಪಕಾರ | ನಾ ಮರೆಯನಯ್ಯ 5
--------------
ಗುರುಗೋವಿಂದವಿಠಲರು
ಸನ್ನುತ ವಿಠಲ | ಕಾಪಾಡೊ ಇವನಾ ಪ ಭದ್ರಮೂರುತಿ ದೇವ | ಪ್ರಾರ್ಥಿಸುವೆ ಹರಿಯೇ ಅ.ಪ. ಸುವಿನೀತ ನಿಹನಿವನು | ಸುವಿವೇಕ ಕೊಟ್ಟಿವಗೆವಿವಿಧ ಭೋಗಗಳಿತ್ತು | ಕಾಪಾಡೊ ಹರಿಯೇ |ಅವನಿಸುರರಾ ಸೇವೆ | ಅವಿರತದಿ ದೊರಕಿಸುತಪವನಮತದಲಿ ಚರಿಪ | ಭಾಗ್ಯ ಕರುಣಿಸುತಾ 1 ತಂದೆ ತಾಯ್ಗಳಸೇವೆ | ಬಂದುರದಿ ಗೈವಂಥಬಂದೆ ಮನವನು ಇತ್ತು | ಕಾಪಾಡೊ ಹರಿಯೇಇಂದಿರಾ ರಮಣ ನೀ | ನಂಘ್ರಿ ಭಕ್ತಿಯನಿತ್ತುಛಂದದಲಿ ಸಾಧನವ | ನೀಗೈಸಬೇಕೊ 2 ಗುರುವಂತರಾತ್ಮ ಗುರು | ಗೋವಿಂದ ವಿಠಲನೆಶರಣು ಬಂದವ ನನ್ನ | ಕೈಯ ಬಿಡದೇತರತಮಜ್ಞಾನಾದಿ | ಅರಿವ ನೀ ಇತ್ತಿವಗೆಕರುಣದಿಂದ್ದುರಿಸೆ | ಪ್ರಾರ್ಥಿಸುವೆ ಹರಿಯೇ 3
--------------
ಗುರುಗೋವಿಂದವಿಠಲರು
ಸನ್ನುತ ವಿಠಲ | ಭಾರ್ಗವಿಯ ರಮಣಾ ಪ ಯೋಗ ಮಾರ್ಗದಲಿ ಹೃ | ದ್ರೋಗ ಹರಿಸಿವಗೇ ಅ.ಪ. ಮುಗ್ದ ತರಳನು ಇವಗೆ | ದಗ್ಧ ಪಾಪವ ಮಾಡಿಮಧ್ವ ಸಿದ್ಧಾಂತಗಳ | ಪಧತಿಯ ತಿಳಿಸೋ |ಕೃದ್ಧಖಳ ದುರ್ಯೋಗ | ವದ್ದು ಕಳೆದೂರಕ್ಕೆಬುದ್ಧಿ ಜನ ಸಂಯೋಗ | ಬದ್ಧವಾಗಲಿ ಇವಗೇ 1 ನಿತ್ಯ ಮಂಗಳನೇ 2 ಭಾವಿ ಬೊಮ್ಮರು ಹಾಗು | ಭಾವಿ ಮರುತರ ಕರುಣಭಾವುಕಗೆ ಇರುವುದನು | ಭಾವಿತವು ಅವಗೇಭಾವ ಉದ್ರೇಕ ಸ | ದ್ಭಾವ ಭಾವಿತ ನನ್ನನೀವೊಲಿದು ಕಾಯೊ | ಕೃಪಾವಲೋಕನದಿ3 ಹರಿ ನಿನ್ನ ವಾರ್ತೆಯಲಿ | ಇರಲಿ ರತಿ ಇವಗಿನ್ನುಗುರು ಹಿರಿಯರಾ ಸೇವೆ | ಪರಮ ಭಕುತಿಂದಾವಿರಚಿಸುವ ಸೌಭಾಗ್ಯ | ಕರುಣಿಪುದೊ ಶ್ರೀ ಹರಿಯೆಮರುತಾಂತರಾತ್ಮ ತವ | ಸ್ಮರಣೆ ಸುಖ ಕೊಡುತಾ 4 ಭವ | ರೋಗವನೆ ಪರಿಹರಿಸೋನಾಗೇಶ ಶಯ್ಯ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಸನ್ನುತ ವಿಠಲಾ | ಹಿತದಿ ಪೊರೆ ಇವಳಾ ಪ ಮತಿವಂತಳೆಂದೆನಿಸಿ | ಅತಿಶಯದಿ ಹರಿಯೇ ಅ.ಪ. ಹರಿ ಗುರು ಸದ್ಭಕ್ತಿ | ನಿರುತ ಹಿರಿಯರ ಸೇವೆಗೆರಗಲೀಕೆಯ ಮನಸು | ಪರಮ ಪೂರುಷನೇ |ಪರಮಾತ್ಮ ಪರತತ್ವ | ದರಿವು ಆಗುತ ಭವದಪರಿಹರಕೆ ಮಾರ್ಗವನೆ | ತೋರೋ ಗುಣಪೂರ್ಣ 1 ಗಜ ಪಂಚಾಸ್ಯ | ಪರಮ ದಯ ಪೂರ್ಣಹರಿನಾಮ ನಿರುತದಲಿ | ಸ್ಮರಿಪ ಸೌಭಾಗ್ಯವನುಕರುಣಿಸುತ ಪೊರೆ ಇವಳಾ | ಮರುತಾಂತರಾತ್ಮ 2 ಪರಿ ಪರಿ ಪೋಷಿಸಿವಳಾ 3
--------------
ಗುರುಗೋವಿಂದವಿಠಲರು
ಸನ್ನುತ ಶ್ರೀರಾಮ ಪ ಭೂಲಲಾಮ ಪಾವನಕರ ನಾಮಾ ಕಾಲಕರ್ಮಕಾರಣ ಭವಭೀಮ ಅ.ಪ ಕುಶಿಕ ಮಹಾಧ್ವರ ರಕ್ಷಕ ನಾಮ ಸನ್ನುತ ರಾಮ ನಿಶಿಚರ ತಾಟಕಾ ಮರ್ದನ ರಾಮ 1 (ದೀನನೆನ್ನ ಕಾಯೊ ಶ್ರೀರಾಮ) 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸನ್ನುತ ಸತತ ಸದ್ಗುಣಪೂರ್ಣ ಪ್ರಥಮಾಂಗ ಸಂಪೂಜ್ಯ ಶರ್ವಮಿತ್ರ ಪ ಪ್ರತಿ ಪ್ರತಿ ಕ್ಷಣ ನಿನ್ನ ಪತಿತಪಾವನ ಪಾದ ಕ್ಕತಿ ದೈನ್ಯದಲ್ಲೆರಗಿ ಮೊರೆ ಇಡುವೆ ಪೊರೆಯೆಂದು ಅ.ಪ. ಕೋರಿದರೆ ಮನಕರಗಿ ಹಾರಿ ಬರುವಿಯೆಂದು ನಾರದರೆ ಮೊದಲಾದ ನಿಜಭಕ್ತರೆಲ್ಲ ಸಾರಿಹರು ಸರ್ವೇಶ ಸಾರತಮ ಸರ್ವರೊಳು ಘೋರ ಭವದಿಂದೆನ್ನ ಪೊರೆ ಎನಲು ಬರೆಯಂತೆ 1 ಕೃಪೆಯಿಂದ ನೀ ನೋಡೆ ಬ್ರಹ್ಮಾಂಡ ದೋಷಗಳು ಲುಪ್ತವಾಗುವುದಯ್ಯ ಒಂದೆ ಕ್ಷಣದಿ ನಿಪುಣನಾಗುವನವನು ಇಹಪರ ನಿಧಿ ಒದಗಿ ಅಪರಿಮಿತ ಸುಖ ಉಣುವ ಅಪ್ರತಿಮ ಕೀರ್ತಿಯು 2 ವಿಧಿ ಶಿವ ಶಕ್ತ ಸುರರಿಂದ ಸಂಸೇವ್ಯ ಜಯೇಶವಿಠಲ ಕೀರ್ತಿಪೂರ್ಣಾ ಪರಿ ದೋಷಗಳು ಪರಮ ಕೃಪೆ ವೀಕ್ಷಣದಿ ಪರಿಹರಿಸಿ ಬೆರೆ ಎನ್ನ ಪರಭಕ್ತಿ ನಿಧಿ ಇತ್ತು 3
--------------
ಜಯೇಶವಿಠಲ
ಸನ್ನುತ ನಮೋಸ್ತು ಜಗದಾಧಾರಾ ಪ ನಮೋಸ್ತು ಮೀನ ಶರೀರಾ ಅ.ಪ ನಮೋಸ್ತು ಕೌಸ್ತುಭಧರಾ ಕೂರ್ಮ ಶರೀರಾ 1 ಮೃಗೇಂದ್ರ ಸದ್ಯುಶಾ ಶ್ರೀಪತೇ ವರಾಹ ರೂಪ ನಮೋಸ್ತುತೇ 2 ತಲ್ಪ ವಿರಾಜಿತೇ ಸನ್ನುತ ನೃಸಿಂಹರೂಪ ನಮೋಸ್ತುತೇ 3 ಪುರಂದರ ಫಲಪ್ರದಾ ಸಕಲೇಷ್ಟದಾ ನಮೋಸ್ತು ವಾಮನ ಶ್ರೀಕರಾ4 ರಮಾಮನೋಹರ ಶ್ರೀಹರೇ ಭಂಜನ ನಮೋಸ್ತು ಪರಶುಧರಾಹರೇ 5 ಪ್ರದೀಪ ಹನುಮತ್ಸೇವಿತ ಭವ ವಿನಾಶ ಭೂಮಿಸುತಾನ್ವಿತಾ 6 ಕೃಪಾಕರಾ ಪಶುಪಾಲಕಾ ಪ್ರವೀಣ ಗೋಪಬಾಲಕಾ 7 ಪಿತಾಯ ವ್ರತ ನಿರ್ಮೂಲತೇ ಬುದ್ಧ ಶರೀರತೇ 8 ಧರ್ಮೋದ್ಧರಾಯ ತುರಂಗ ವಿರಾಜತೇ ಗಮನ ಸುರೇಶ ಕಲ್ಕಿ ಮಹಾತ್ಮತೇ 9 ಪರ್ವತಧರ ಧರಾಯ ನೃಸಿಂಹತೇ ಪ್ರಬುದ್ಧಕಲ್ಕಿ ದಿಶಾಕಲತೇ 10 ಶುಭಾಂಗ ಗರುಡ ತುರಂಗತೇ ನಾರಾಯಣಾಯ ಭಕ್ತೋದ್ಧಾರತೇ 11
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸನ್ನುತ ಪಾದ ಭಕುತಿಯ ಬಿತ್ತಿ 1ದೇಹವೆ ನಾನೆಂಬ ದೈನ್ಯವ ಬಿಡಿಸಿಸಾಹಸದಲಿ ಸಕಲ ಸಾಧನವ ತೊಡಿಸಿಮೋಹ ಮತ್ಸರವೆಂಬ ಮೋಸವ ಕೆಡಿಸಿಸೋಹಮೆಂಬರಿವಿನಲ್ಲಿ ಸೊಗಸಾಗಿ ನಡೆಸಿ 2ಕಾಲಕರ್ಮಂಗಳ ಮೂಲವ ಕಿತ್ತು ಗೋಪಾಲಾರ್ಯ ನಿಜಸುಖ ಶೀಲವನಿತ್ತುಮೇಲಾದ ಮುಕುತಿಯ ಕೀಲಕಳೆದೆತ್ತುಶ್ರೀಲಕ್ಷ್ಮಿಯರಸನೆ ಚಿತ್ತವನಿತ್ತು 3
--------------
ಗೋಪಾಲಾರ್ಯರು
ಸನ್ನುತ ಭೂಲಲಾಮ ರಾವಣಸಂಹರಣ ಅ.ಪ ವಿನುತ ಮರಕತ ಗೋಮೇಧಿಕ ಮಣಿಹಾರಾ | ಸನ್ನುತ ನಿಗಮಾಧಾರಾ || 1 ನಿರುಪಮ ಶೂರಾ ಪುಣ್ಯಶರೀರಾ | ಪರಮೋದಾರಾ ಮಾಂಗಿರಿವರ || 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸನ್ನುತೆ ಶಂಕರಿ ದೇವಿ ಪ ನಿನ್ನ ನಾಮಂಗಳನು ನುತಿಸುವೆ || ಎನ್ನುತೆರಗುವ ದೀನನೆನ್ನೊಳುಅ.ಪ. ಆದಿಮೊದಲು ಮಧು ಕೈಟಭರನು ಸೀಳಿ | ಮೇದಿನಿಯನು ಪೊರೆದವಳು | ದೇವಿ ಮೇದಿನಿಯನು ಪೊರೆದವಳು || ಕ್ರೋಧದಿಂದಲಿ ಮಹಿಷ ವದನನ | ಭೇದಿಸಿದೆ ನೀ ಧೂಮ್ರಲೋಚನ ಕಾದಿ ಗೆಲಿದಿಹ ದೇವಿ ಎನ್ನೊಳು 1 ರುಧಿರ ರುಧಿರವ ಹೀರುತಲಿ || ದೇವಿ | ರುಧಿರವ ಹೀರುತಲಿ || ಸದೆದು ಮಹಿಯೊಳು ಕೆಡುಹುತವನನು | ಪದುಮಲೋಚನೆ ದೇವಿ ಎನ್ನೊಳು 2 ಶುಂಭದೈತ್ಯರ ಮರ್ದಿಸಿದೆ ನೀ | ಮಣಿಯುವ ದೀನನೆನ್ನೊಳು 3 ಭ್ರಮರ ರೂಪದಿ | ಚರಣ ಸ್ಮರಿಸುವನಾಥನೆನ್ನೊಳು4 ನೆಷ್ಟೆಂದು ಸಹಿಸಲಿ ದೇವಿ | ನಾನಿ | ನ್ನೆಷ್ಟೆಂದು ಸಹಿಸಲಿ ದೇವಿ || ದುಷ್ಟನಾಶಿನಿ ಶಿಷ್ಟ ಪಾಲಿನಿ || ಅಷ್ಟವಿಧ ಸೌಭಾಗ್ಯದಾಯಿನಿ | ಭೀಷ್ಟವನುಕೊಡು ಎಂದು ಬೇಡುವೆ 5
--------------
ವೆಂಕಟ್‍ರಾವ್
ಸನ್ಮಾರ್ಗ ಸನ್ಮಾರ್ಗಯಿದು ಪ ಮನ್ಮಥ ಜನಕನ ಮನದಿ ಭಜಿಸುವುದು ಅ.ಪ ಕರ್ತ ನೀನು ಹರಿಭೃತ್ಯನಾನು ಯೆಂ- ದತ್ಯಂತ ಮನೋಹರುಷದಿ ಕುಣಿವದು 1 ಪದುಮ ನಾಭನಿಗೆ ಪೂಜೆಯೆಂದರಿವುದು 2 ಛಳಿಮಳೆಗಾಳಿ ಬಿಸಿಲುಗಳೊಳಗೆ ಶ್ರೀ ವಿಭೂತಿ ತಿಳಿಯುವುದು 3 ಕರೆಕರೆ ಸಂಸಾರದ ಭಾರದೆ ತಾ ಮರೆಯದೆ ನಿರತವು ಹರಿಗರ್ಪಿಸುವುದು 4 ಪಾಮರಜನದೊಳು ಸೇರದೆ ಶ್ರೀಗುರು- ರಾಮ ವಿಠ್ಠಲನ ನಾಮ ಜಪಿಸುವುದು 5
--------------
ಗುರುರಾಮವಿಠಲ