ಒಟ್ಟು 4031 ಕಡೆಗಳಲ್ಲಿ , 123 ದಾಸರು , 2537 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೊಮ್ಮ ಪದವಿ ಕೊಂಡೆ ಪ ಕೂರ್ಮರೂಪನಾಗಿ | ಬೊಮ್ಮಾಂಡ ಧರ ಪರಬೊಮ್ಮನ ಪರಿಮಿತ | ಪೇರ್ಮೆ ನಿನ್ನೊಳೆಂತೂಅಮ್ಮಮ್ಮ ನಿನಸಮ | ಸುಮ್ಮನಸರೊಳಿಲ್ಲ ಅ.ಪ. ಪಾದ್ಯ ಮೂರ್ತಿ ಪಾದ ಭಜಕ ವಿನೋದ ದಿಂದಲಿ | ಭೋದಿಸುವೆ ಶೇ |ಷಾದಿಗಳಿಗೆ ಅ | ಗಾಧ ಮಹಿಮನೆ 1 ಗಾನಲೋಲನ | ಗಾನ ಮಾಡ್ಡ ಮ |ಹಾನುಭಾವ ಸು | ಶ್ವಾಸ ರೂಪದಿಮೌನಿ ಸುರರಿಗೆ | ಗಾನ ಅನು ಸಂ |ಧಾನ ಗೋಪ್ಯದಿ | ಪ್ರಾಣ ಸಲಹೋ 2 ವ್ಯಾಪ್ತ ಜಗಹರಿ | ವ್ಯಾಪ್ತಿ ಎಲ್ಲೆಡೆಪ್ರಾಪ್ತ ನಿನ ಸಮ | ಆಪ್ತರಿಲ್ಲವೊಗೋಪ್ತ ಗುರು ಗೋವಿಂದ ವಿಠಲನವ್ಯಾಪ್ತಿ ತಿಳಿಸು ಸು | ದೀಪ್ತ ಮಾರುತಿ 3
--------------
ಗುರುಗೋವಿಂದವಿಠಲರು
ಬೋಧ ಭಾನು ಬರುತೈದನೆ ನಾದ ವಿನೋದವೆಂಬ ಈಕೋಳಿಯು ಕೂಗುತೈತವರನೀಕ್ಷಿಸೆ ಸತ್ಕರುಣಾ ಕಟಾಕ್ಷದಿಂಏಳಯ್ಯ ಗುರುವರ್ಯ ಏಳಯ್ಯ ಗುರುವರ್ಯ ಯತಿಜನಾಲಂಕಾರಪಏಳು ಭಕ್ತಾಧಾರ ಯಮನಿಯಮ ಸಂಚಾರಏಳು ವಿದ್ವದ್ವರ್ಯ ಪರಮಹಂಸಾಚಾರ್ಯ ಏಳು ಗೋಪಾಲ ಯತಿವರ್ಯಾ ಸ್ವಾಮಿಅ.ಪಆಧಾರ ಮಣಿಪೂರ ಹೃದಯ ಕಮಲಗಳಲ್ಲಿನಾದ ಬಿಂದು ಕಲೆಗಳೆಂಬರುಣನುದುಸಿದಬೋಧೆಯೆಂಬರ್ಕನಾವಿರ್ಭವಿಸಿದನು ಸಹಸ್ರಾರ ಕಮಲದ ತುದಿಯಲಿವೇದವೇದ್ಯಾನಂತಮಹಿಮ ಚಿನ್ಮಯರೂಪನಾದಸೌಖ್ಯಾಕಾರ ಕಲಿ ಕಲ್ಮಷವಿದೂರಆದಿಮಧ್ಯಾಂತರಹಿತಾನಂದ ನಿತ್ಯನಿಜಬೋಧನೊಲಿದುಪ್ಪವಡಿಸಾ ಸ್ವಾಮೀ1ನಿತ್ಯವೆ ನಿಮ್ಮ ಪದವೆಂದಜಾಂಡವನಿದನನಿತ್ಯವೆಂದಖಿಳ ವಿಷಯಗಳಲಿ ವಿರತರಾಗಿಅತ್ಯಂತ ಶಮ ದಮಾದಿಗಳೆಂಬ ಸಾಧನದಿ ಮುಕ್ತಿ ಸುಖವನು ಬಯಸುತಾಪ್ರತ್ಯಕ್ಷರ ಬ್ರಹ್ಮರೈಕ್ಯವರಿಯದೆ ವಿದುಗಳತ್ಯಂತ ತ್ವರೆುಂದ ನಿಮ್ಮ ಮುಖಕಮಲದಿಂತತ್ವಮಸಿ ವಾಕ್ಯದರ್ಥವ ತಿಳಿಯಬೇಕೆಂದು ನೃತ್ಯವನು ಮಾಡುತಿಹರೂ ಸ್ವಾಮಿ 2ದೇಹೇಂದ್ರಿಯಾಂತರಂಗವನೇತಿಗಳಿದು ಸಂದೇಹದಲಿ ಕೂಟಸ್ಥ ನೀನೆಂಬುದರಿಯದೆಮಹಾ ವಿಚಾರಿಸಿ ಭಕ್ತ ಸುಲಭನೆ ದಾಟಿಸೈ ಮೋಹಸಾಗರವನೆನುತಾಪಾಹಿ ನೊಂದೆವು ಸಂಸ್ಕøತಿಯ ಬಂಧದಲಿ ನಮ್ಮಬೇಹುದೈಪಾಲಿಸಲು ಯೋಗನಿದ್ರೆಯ ಬಿಟ್ಟುದಾಹರಿಸು ವೇದಾಂತಗೋಪ್ಯವನೆನುತ ನತಸಮೂಹ ಕಾದಿದೆ ಕೃಪಾಳು ಸ್ವಾಮಿ 3ಕೇಳಿ ಭಕುತರ ದೈನ್ಯ ಸಲ್ಲಾಪಗಳನಿಂತುಲೀಲಾವತಾರ ಗುರುರಾಯನೊಲಿದೆದ್ದವರಲಾಲಿಸುತ ಧನ್ಯರಾದಿರಿ ಸನ್ಮತಿಯೊಳಿಂತು ಮೇಳಾಪವಾುತೆನುತಾಬಾಲರಿರ ನಿಮ್ಮನಂತಃಕರಣದ ಧ್ಯಾನಜಾಲಸುತ್ತಿರಲಾಗಿ ನಿಮ್ಮ ನಿಜವನು ಮರೆದುಕಾಲಕರ್ಮಾಧೀನವಾಗಿ ನೊಂದಿರಸತ್ಯವೀ ಲೋಕವೆಂದರಿಯದೆ ಎನಲು ಗುರುವೇ 4ಜೀವೇಶ್ವರರ ವಾಚ್ಯ ಲಕ್ಷ್ಯಾರ್ಥವನು ನಿಚ್ಚ ಭಾವಿಸುತ ಬ್ರಹ್ಮ ಕೂಟಸ್ಥರೆಂದವರಿಗೆ ಸ್ವಭಾವದಿಂ ಭೇದವಿಲ್ಲೌಪಾಧಿಕವಿದೆಂದು ಸಾವಧಾನದಲಿ ತಿಳಿದೂನಾವೆ ಪರಿಪೂರ್ಣಾತ್ಮರೆಂದು ಬೋಧಾಮೃತವಸೇವಿಸಿದಡನುದಿನಂ ಕೃತಕೃತ್ಯರಹಿರೆನಲ್‍ದೇವ ಕೃತಕೃತ್ಯರಾದೆವು ನಮೋ ಎನುತ ಸ್ವಭಾವ ಪದದಲಿನಿಂದರೂ ಸ್ವಾಮೀ 5
--------------
ಗೋಪಾಲಾರ್ಯರು
ಬೋಧರ ನೋಡಿರೈ ಸತ್ಯಬೋಧರ ಪಾಡಿರೈ ಪ ಚಂದ್ರಾ ಸದ್ಗುಣ ಸಾಂದ್ರಾ ಅ.ಪ. ಜವನೋಧರ್ಮ ಪ್ರಸ್ರವನೋ ಯತಿ ಪುಂಗವನೋ ರಾಮಾರ್ಚನ ಕೃತ ಪೂತ ಹಸ್ತ ಪಲ್ಲವನೋ ವಿದ್ವದ್ಧವನೋ ಕಾಮಿತೇಷ್ಟ ಪ್ರದ ಚಿಂತಾಮಣಿಗುಣಯುತನೋ ಜತಸನ್ನುತನೊ 1 ಪಚ್ಚದ್ಯತಿಯೋ ಸಜ್ಜನ ಕುನರೂಪ ಪ್ರೋನ್ನತಿಯೋ ಕವಿಜನ ಹರಿಸಮ್ಮತವೋ 2 ಹರಿಜನಧನವೋ ಅಭಯ ಸುಮನವೋ ಮದಮರ್ದನವೋ ದಾಸರ ವಶವೊ 3
--------------
ನರಸಿಂಹವಿಠಲರು
ಬೋಧಾ ಜ್ಞಾನದಾ ಬೋಧ ಮೋದಾ ಶಾಂತಿಯಾ ಸ್ವಾದಾ ಪ ಸ್ವರೂಪದಾ ಸುಖಸ್ಪದಾ ಪ್ರಶಾಂತ ಗುರುಬೋಧಾ ಬೋಧ ಅ.ಪ. ಸುಲಭಸಾಧ್ಯ ಸುವಿಚಾರಾ ವೇದಾಂತಶಾಸ್ತ್ರದ ಸಾರಾ ತಾನೇ ಪರಮಾತ್ಮನು ಎನುವಾ ಸ್ವಾನುಭವಾಮೃತಜಲಧಾರಾ ಘೋರಾ ಸಂಸ್ಕøತಿಯ ಪಾರಾ 1 ಜೀವಭಾವವ ಮರೆಯಿಸುತಿರುವಾ ಸಾವ ನೀಗುವಾ ಮಂತ್ರವಾ ಸಾರಿ ಪೇಳ್ವ ಶಂಕರಾರ್ಯ ಮೋದಾ ಶಾಂತಿಯಾ ಸ್ವಾದಾ 2
--------------
ಶಂಕರಭಟ್ಟ ಅಗ್ನಿಹೋತ್ರಿ
ಬೋಧಿಸು ಗುರುವರನೇ ಆತ್ಮರೂಪನೇ ಬಾಧೆಯ ನೀಗುಸು ಬೋಧಾತ್ಮನೇ ಶಾಂತಿಯನೀವಾ ಭ್ರಾಂತಿಯ ಕಳೆವಾ ಏಕಾಂತಪೂರ್ಣ ನಿರಾತಂಕವಾದ ಚಿಂತೆದೂರಮಾಡುವಾ ಅಂತರಾತ್ಮಜ್ಞಾನವಾ ಸಂತೋಷದಿಂದ ತಿಳಿಸೈ ಮಹಾತ್ಮನೆ ಸದ್ಗುರುರಾಯಾ ಕರುಣಿಸು ಜೀಯಾ ಮಾಯಾ ಮಹಾಮೋಹನಿಧಿಯಾ ಜ್ಞಾನಬೋಧ ನೀಡುವಾ ಸ್ವಾನುಭಾವ ತೋರುವಾ
--------------
ಶಂಕರಭಟ್ಟ ಅಗ್ನಿಹೋತ್ರಿ
ಬ್ಯಾಗ ಬಾರೋ ಗುರುರಾಘವೇಂದ್ರರಾಯಾ ಬಾಗಿ ನಮಿಪೆ ಮಹರಾಯಾ ಪ ಯೋಗಿ ಮಧ್ವಮತದಾಗಮದಿಂದಲಿ ಭಾಗವತರು ಶಿರಬಾಗಿ ಪಾಡುವರೋ ಅ.ಪ ಕುಂದಣಮಣಿಮಯ ಸ್ಯಂದನದೊಳತಿ ಸುಂದರ ಶುಭತರ ರೂಪ - ದಿಂದಲಿ ರಾಜಿಪಾಮಂದಭೋಧ ನಿಜ ನಂದದಾಯಕ ಯತಿಕುಲ ದೀಪ ಛಂದದಿ ಭಕುತ(ರ) ಕುಂದನಿಚಯಕೆ ನಿಜ ಚಂದಿರ ಸಮ ಭೂಪಾ - ಪಾದ ದ್ವಂದ್ವವು ನಿಜರಿಗೆ ನಂದ ನೀಡುವ ಪ್ರತಾಪಾ ವಂದಿಸಿ ಗುಣಗಳ ವೃಂದ ಪೊಗಳುವ ಮಂದ - ಜನರು ಬಲು - ಸುಂದರ ಶುಭಗುಣ ದಿಂದ ಶೋಭಿಪÀ ಜನ - ಸಂದಣಿಯೊಳು ನಿನ್ನ ಸುಂದರ ಮೂರುತಿ - ಛಂದದಿ ನೋಳ್ಪರೊ 1 ಕನಕ ಮಣಿಮಯ ಘನಸುಕೊಡೆಗಳು ಮಿನುಗುವ ಚಾಮರ ಚೋದ್ಯವೋ ಅನುಗ - ಕರಗತ ಮಣಿಮಯ ಛಡಿಗಳ ಅನುಪಮ ಭಾರವೋ ಮುನಿಜನ ಶಿರಮಣಿಸಿ ಗುಣ ಗಣ ಎಣಿಸುವ ಗಂಭೀರವೋ ತನು - ಮನ - ಮನಿ - ಧನ ವನುತೆರ ನಿನಗನು - ಮಾನಮಾಡದೆ ನೀಡುವಗಾಧವೋ ಘನ ಸಂತೋಷದಿ - ಮನದೊಳು ನಲಿಯುತ ಕುಣಿದಾಡುತ - ದಣಿಯದೆ ಕರಚಪ್ಪಳಿ | ಕ್ಷಣ ಕ್ಷಣದಲಿ ತ್ಮಮ - ತನು ಮರೆದೀಪರಿ ಜನರೊಳು ನಮ್ಮ ಜನುಮ ಸಫಲವೆಂಬುವರೋ 2 ಪಟುತರ ಭಟರಾರ್ಭಟಿಸುವ ಮಹ ಚಟ - ಚಟ - ಚಾಟ ಶಬ್ಧವೋ ಕುಟಿಲ ವಿಮತ ಘನ ಪಟಲ ವಿದಾರಣ ಚಟುಲ ಸ್ವಮತ ಸಿದ್ಧಾಂತವೋ ಕುಟಿಲಾಳಕಿಯರ ಕುಣಿಯುವ ಪದದಿ ಸಂ - ಘಟಿತ ಗೆಜ್ಜೆಗಳ ಶಬ್ಧವೋ ಪಟು ಗುರುಜಗನ್ನಾಥವಿಠಲರ ದಾಸರ ಧಿಟ ಪದ ಸಂಗೀತವೋ ಧಿಟಗುರುರಾಯನೆ - ಭಟರುಗಳ ಮಹÀಸು - ಕಟಕದಿ ಮೋದೋ - ತ್ಕಟದಲಿ ಇಷ್ಟವ ಥಟನೆ ಬೀರುತ ಬಲು ಪುಟಿದಾಡುತ ಹರಿ ಭಟ ಜಲಜೋತ್ಕಟ ದಿವಾಕರ 3
--------------
ಗುರುಜಗನ್ನಾಥದಾಸರು
ಬ್ಯಾಡವೊ ಕುವಾದಿ ಬ್ಯಾಡವೊ ಪ ಬ್ಯಾಡವೊ ಕೇಳು ಕುವಾದಿ ನೀ ನಾಡುವದುಚಿತವಲ್ಲ ಧಾದಿ | ಆಹಾ | ಮೂಢ ನಿನಿಗದಾವ ಖೋಡಿ ಬೋಧಿಸಿದನೊ ನಾಡಿಗೊಡಿಯ ರಂಗಗೀಡು ನೇನೆಂಬದುಅ.ಪ ಎಲ್ಲ ಜೀವರು ದೇವವೊಂದೆ ಭೇದ ವಿಲ್ಲೆಂದಾಡುವುದು ಧಂದೆ ಯಮ ಕೊಲ್ಲದೆ ಬಿಡ ನಿನ್ನ ಮುಂದೆ ನಿನ್ನ ಹಲ್ಲು ಮುರಿವನೊಂದೊಂದೆ || ಆಹಾ || ಉಳ್ಳಿಗಡ್ಡಿಯ ಉದ್ದಿ ಬೆಳ್ಳಗೆ ತೊಳೆದರೆ ಅಲ್ಲಕ್ಕೆ ಸರಿಯೇನೊ ಬಲ್ಲವರೊಪ್ಪಾರು 1 ಇದ್ದು ನೀ ಇಲ್ಲೆಂತೆಂಬಿ ಕಾಲಿ ಲೊದ್ದರೆ ಬಲು ನೊಂದು ಕೊಂಬಿ ಇ ಲ್ಲಿದ್ದವರೆಲ್ಲ ಬ್ರಹ್ಮ ನಾನೆಂಬಿ ಆ ಪರ ಬುದ್ಧಿಯಿಂದ ಶುದ್ಧ ಎಂತೆಂಬಿ || ಆಹಾ || ಬಿದ್ದುಹೋಯಿತು ನಿನ್ನ ಸಿದ್ದಾಂತವೆಲ್ಲವು ಸದ್ದು ಎನ್ನ ಕೂಡ ಗೆದ್ದು ಹೋಗಲಾರಿ ಬ್ಯಾಡವೊ 2 ಒಬ್ಬ ಬ್ರಹ್ಮ ಎಲ್ಲಾ ಮಾಯವೊ ಇ ನ್ನೊಬ್ಬನೆ ಎಲ್ಲಿಹ ಸುಖವೊ ಕುಹಕ ಶಾಸ್ತ್ರವೆಲ್ಲ ಮೃಷವೋ ಉಬ್ಬಿ ಆಡುವುದು ನಿರಯವು || ಆಹಾ || ಈ ಬಗೆಯಾಯಿತು ನಿನಗೊಬ್ಬಗೆ ಈ ಮಾತು ಬ್ಯಾಡವೊ 3 ಒಂದೆ ಆದರೆ ನಿನಗೆಲ್ಲ ನಿನ ತಂದೆಯಿಂದ ನೀ ಪುಟ್ಟಿದ್ದೆಲ್ಲ ನಿನ್ನ ತಂದೆ ನೀನು ಒಂದೆ ಎಲ್ಲಿ ಇನ್ನು ಛಂದಾಗಿ ನೀ ತಿಳಿಯೊ ಸೊಲ್ಲ || ಆಹಾ || ಸತಿ ನಿನಗೇನಾದಳೊ ಮನುಜ ಮಂದ ಮತಿಯೆ ತಾಯಿಗಂಡ ನೀನಾದೆಲ್ಲೋ 4 ಅನ್ನಕ್ಕೆ ಪರಬ್ರಹ್ಮನೆಂಬಿ ಈಗ ಅನ್ನ ಚಲ್ಲಲು ದೋಷವೆಂಬಿ ನಿತ್ಯ ಚನ್ನಾಗಿ ಪರಿಪೂರ್ತಿಗೊಂಬಿ ಈ ಅನ್ನ ನಾನು ವೊಂದೆ ಎಂಬೀ || ಆಹಾ || ನಿನ್ನ ದೇಹಕ್ಕೆ ರೋಗವು ಬಂದರೆ ನೀನು ಅನ್ನವ ಬಿಟ್ಟಿನ್ನು ಚನ್ನಾಗಿ ಮಲುಗುವಿ 5 ಭೇದವಿಲ್ಲೆಂತೆಂದರೆ ನೀನು ಮಾದಿಗರೆಲ್ಲ ಒಂದೇನೊ ಸರಿ ಹೋದವರೆಂಜಲ ತಿನ್ನೋ ಕಹಿ ಸ್ವಾದವು ನಿನಗಿಲ್ಲವಿನ್ನು ||ಆಹಾ|| ಓದನಾದರು ವೊಂದೆ ಮೇದ್ಯವಾದರು ವಂದೇ ಭೇದವಿಲ್ಲದೆ ತಿಂದು ಹೋದಿಯೋ ನರಕಕ್ಕೆ 6 ಎಲ್ಲವೂ ಬ್ರಹ್ಮಸ್ವರೂಪಾ ಬ್ಯಾರೆ ಇಲ್ಲೆಂದು ನಿನಗೆ ರೂಪಾ ಭೇದವಿಲ್ಲೆಂತೆಂಬುವದು ನಿಶ್ಚಯವು ವಾಕು ಸಲ್ಲದೆ ಇನ್ನು ಪೋದಾವು ||ಆಹಾ || ಬಲ್ಲಿದ ಪುರುಷನು ಮೆಲ್ಲನೆ ನಿನ್ನ ಸತಿ ಯಲ್ಲಿ ಮಲಗಿದರೆ ನೆಲ್ಲಿ ನೀ ಸೈರಿಸಿ7 ನಾಶವಿಲ್ಲೆಂಬುದೆ ಸತ್ಯ ದೋಷ ಮಿಥ್ಯ ಜಗ ಭೃತ್ಯ ಬಿಡದೆ ನಿತ್ಯ ||ಆಹಾ|| ದ್ವಾಸುಪರ್ಣವೆಂಬೊ ಈ ಶ್ರುತಿಗರ್ಥವು ಲೇಸಾಗಿ ತಿಳಿಯದೆ ಘಾಶಿಪಡುವಿ ವ್ಯರ್ಥ 8 ಈಶನು ನೀನಾದರೇನು ಸರ್ವ ದೇಶ ಪೋಷಿಸದೆ ಇಪ್ಪೋರೆ ನಿನ್ನ ಸಾ ಹಸ ವ್ಯರ್ಥ ಮಾಡೋರೆ ಹರಿ ದಾಸರು ಕಂಡು ಸಹಿಸೋರೆ ||ಆಹಾ || ಸತಿ ಸುತರು ಕ್ಲೇಶ ಪಡುವುದು ಬಿಡಿಸಲಾರಿಯೊ ಲೇಶ 9 ಗುರುದೈವವಿಲ್ಲವೊ ನಿನಗೆ ಒಬ್ಬ ಸರಿಯಿಲ್ಲ ಈ ಧರೆಯೊಳಗೆ ಯಾರು ಹಿರಿಯ ಕಿರಿಯರಿಲ್ಲ ನಿನಗೆ ನೀನು ಖರ ಶಬ್ದಕಿಂತ ಹೊರಗೆ ||ಆಹಾ || ಎರಡಿಲ್ಲಾಯೆಂಬೊದೆ ಇರುಳಿಲ್ಲ ಹಗಲಿಲ್ಲಾ ನರಕ ಸ್ವರ್ಗ ವಂದೇ ಅರಿಯಾದೆ ಮುಳುಗುವಿ 10 ವಂದನೆ ನಿಂದ್ಯಗಳೊಂದೇ ನಿನಗೆ ಗಂಧ ದುರ್ಗಂಧವು ವಂದೇ ಕೆಟ್ಟ ಹಂದಿಯೆಲ್ಲ ನೀನು ವಂದೇ ನಿನ್ನ ಕೊಂದರೆ ದೋಷವಿಲ್ಲವೆಂಬೆ ||ಆಹಾ|| ಎಂದಿಗೂ ಈ ಮಾತು ನಿಂದಾವೆ ನಿನಗಿನ್ನು ಮುಂದಕ್ಕೆ ಬರಲಾರಿ ಮಂದಮತಿಯೆ ಖೋಡಿ11 ಜಗದೊಳಗೆ ನೀ ನಿಂತು ಇದು ಜಗವಲ್ಲವೆಂಬೋದಕ್ಕಿಂತು ನೋಡಿ ನಗುವರೋ ಅಶುದ್ಧ ಜಂತು ಜಿಂಹ್ವೆ ಬಿಗಿದು ಕೋಯಿಸುವ ಯಮನಿಂತು ||ಆಹಾ || ಹಗಲು ಇರುಳು ವಂದೆ ನಗುತ ನಗುತಾ ಕಂಡು ತೊಗಲು ದೇಹವು ನಿನ್ನದಗೆ ಮಾಡುವುದು ವ್ಯರ್ಥ 12 ಸ್ವಾಮಿ ನಿನಗೆ ಬ್ಯಾರಿಲ್ಲಾ ನಿತ್ಯ ನೇಮ ಕರ್ಮವು ಬ್ಯಾರೆ ಸಲ್ಲ ಒಂದು ಕಾಮಿನಿ ನಿನಗೆ ಬೇಕಲ್ಲ ಪೂರ್ಣ ಕಾಮನು ನೀನೆಂಬೆಯಲ್ಲಾ ||ಆಹಾ|| ಗ್ರಾಮ ಭೂಮಿಗಳ್ಯಾಕೊ ತಾಮಸ ನಿನಗಿನ್ನು ತಾಮಸರಿಗೆಲ್ಲ ಸ್ವಾಮಿಯಾಗಿರು ಹೋಗೋ 13 ಕಾಣದೆ ಬಗಳುವೆ ಮಾಯಿ ನಾಯಿ ನಿನಗೆ ತಂದೆ ತಾಯಿ ಇನ್ನು ಕಾಣುತ ಬೊಗಳೋದು ನಾಯಿ ಈ ನಾಯಿ ಕಚ್ಚಿ ನೀ ಸಾಯಿ ||ಆಹಾ || ಬಾಯ ಮುರಿವಾ ನಿನ್ನ ನ್ಯಾಯದಿಂದಲಿ ವಾಯು ಕಾಯ ಖಂಡ್ರಿಸುವನೊ 14 ಇಷ್ಟು ಹೇಳಿದರೆ ನೀ ಕೇಳಿ ನೀ ವ್ಯರ್ಥ ನಿಷ್ಠುರಾಡಿ ನೀ ಬಾಳೀ ನಿನ್ನ ಕಟ್ಟಿಗೆ ಮುರಿದಂತೆ ಶೀಳಿ ಬಾಯ ಕುಟ್ಟಿ ತುಂಬುವ ಯಮಧೂಳಿ ||ಆಹಾ|| ಸೃಷ್ಟಿಗೊಡಿಯ ನಮ್ಮ ವಿಜಯವಿಠ್ಠಲನ ಮುಟ್ಟಿ ಭಜಿಸದಲೆ ಭ್ರಷ್ಟ ಮನುಜ ನೀ ಅಷ್ಟವೆಂದೆಂಬೋದು ಬ್ಯಾಡವೊ 15
--------------
ವಿಜಯದಾಸ
ಬ್ರಹ್ಮ ರೂಪವೇ ಈತಬ್ರಹ್ಮ ಸ್ಥಿತಿಯಿಂತುಸಮ್ಮತ ವೇದಾಂತವು ಮುಕ್ತ ಪ ಪರಿ ದೇಹ ಭಾವವ ಬಿಟ್ಟಯೋಗಿಗೆಇರ್ಪುದೇ ತನು ಭ್ರಾಂತಿ ಮುಕ್ತ 1 ಪರಿ ಸಾಕ್ಷಿಯಾಗಿ ನೋಡುವ ಜ್ಞಾನಿಗೆತನು ಭ್ರಾಂತಿ ತಾನಿಹುದೇ ಮುಕ್ತಾ 2 ಹೊಲೆಯತನ ಶುದ್ಧತನ ಎಲ್ಲಿಹುದೋ ಎಲೆ ಮುಕ್ತಾಹೊಲೆಯತನ ಶುದ್ಧತನ ಸಿದ್ಧನಿಗದೇತಕೋತಿಳಿದು ಬಾಳನು ಬಾಳ್ವ ಚಿದಾನಂದನಾದವವಗೆಬಲು ದೇಹ ಭ್ರಾಂತಿಯಹುದೋ ಮುಕ್ತಾ 3
--------------
ಚಿದಾನಂದ ಅವಧೂತರು
ಬ್ರಹ್ಮ ಸುಖದಲಿ ನಲಿದಾಡುವೆ ಧ್ರುವ ನಮೋ ಶ್ರೀ ಗಣನಾಯಕನಿಗೆ ನಮೋ ನಮೋ ಶ್ರೀ ಸರಸ್ವತಿಗೆ ನಮೋ ನಮೋ 1 ಸದ್ಗುರುವಿಗೆ ನಮೋ ಶ್ರೀ ಸ್ವಾಮಿಗೆ ನಮೋ ನಮೋ 2 ಇಷ್ಟದೈವಕೆ ನಮೋ ಮಹಿಮಗೆ ನಮೋ ನಮೋ 3 ಸೂತ್ರಾಂತ್ರಿಗೆ ನಮೋ ಸುಪಥಕೆ ನಮೋ ನಮೋ 4 ಸುಸರ್ವ ದೈವಕೆ ನಮೋ ರೂಪಕೆ ನಮೋ ನಮೋ 5 ಶಕ್ತಿಗೆ ನಮೋ ಮುನಿಗಳಿಗೆ ನಮೋ ನಮೋ 6 ಸುಭಾಗವತರಿಗೆ ನಮೋ ನಮೋ ನಮೋ 7 ಸುಮಹಿಮರಿಗೆ ನಮೋ ಸುತೀರ್ಥಕ್ಷೇತ್ರಕ್ಕೆ ನಮೋ ನಮೋ 8 ಸುಪುಣ್ಯಶ್ಲೋಕರಿಗೆ ನಮೋ ಸಜ್ಜನರಿಗೆ ನಮೋ ನಮೋ 9 ತ್ರೈಲೋಕ್ಯನಾಥಗೆ ನಮೋ ಸರ್ವೋತ್ಮಗೆ ನಮೋ ನಮೋ 10 ಸುಕರುಣಿಗೆ ನಮೋ ಭಕ್ತವತ್ಸಲಗೆ ನಮೋ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬ್ರಹ್ಮದೇವರ ಸ್ತೋತ್ರ* ಮಟ್ಟತಾಳ ಕಂಬು ವಿಹಂಗ ಗಮನ ವಿಭುವೆನಂಬಿದವರ ಪೊರೆವ ವ್ಯಾಸವಿಠಲ ನೀ-ನೆಂಬುವರನ ನಂಬಿದ ನೀಚನ ಮರಿಯಾದಿರು 2 ತ್ರಿವಿಡಿತಾಳ ಜಿಹ್ವೆ ನುಡಿಯದುಸವಿಯದ ನಾನಾ ರಸವನುಂಡು ಬಹುಕಾಲಸವೆದು ಪೋದವು ನಟ್ಟ ಮನವು ಇನ್ನು ತಿರಗದುತವ ವಿಸ್ಮøತಿಯಲಿಂದ ಭೂ ವನದೊಳಿದ್ದ ಮಾ-ನವರ ಚರಿಯದಲಿ ಕೋಪವೆ ತಗ್ಗದುಎವೆ ಇಡುವಿನಿತು ಕಾಲವಾದರು ಪೂಜಾವಿವರದಲ್ಲಿಗೆ ಚಿತ್ತವು ನಿಲ್ಲದು ಭವವಿದೂರನೆ ಕೇಳುಕವಲ ಬುದ್ಧಿಯಲಿಂದ ನವನವ ರೂಪದ ಯುವತಿಯರನಿವಹದ ಅನುಭವ ದ್ವಿವಿಧವಿಂದಿಗೇ ಕಾ-ಯವ ನೋಡಲಿದ್ದಂತೆ ಇಲ್ಲದಂತೆಧ್ರುವದಲಿ ನುಡಿವೆ ಎನ್ನವಗುಣವಿನ್ನೊಂದುಭವಸಾಗರವ ದಾಟಿಸುವ ಜ್ಞಾನಿಗಳ ಪ್ರೀತಿಯನೆ ತ-ಗ್ಗುವಂತೆ ಚತುರ ತೋರುವೆಇವುಗಳಿಂದಾಗುವ ಜನನ ಬಾಧಿಯ ಬಲ್ಲೆಜೀವರಲ್ಲಿ ಹೀನ ಜನ್ಮವ ಬರುವದು ಬಲ್ಲೆಸ್ಥಾವಿರಾಯ ವ್ಯಾನಾದಿ ನೆಗುವವು ಪುಣ್ಯಾಖ್ಯಗಿರಿಗೆಪವಿಯಂಬದನುಗಾಲ ಪಠಿಸಬಲ್ಲೆಪವನನಂತರ್ಯಾಮಿ ಶ್ರೀವ್ಯಾಸವಿಠಲ ಇಂಥಅವಿವೇಕ ಮನುಜಂಗೆ ಆವಗತಿಯಾಗುವದೊ 3 ಅಟ್ಟತಾಳ ಅನ್ಯಾಯ ನಡತಿಗಳ ಚರಿಸುತಲಿಪ್ಪಮನುಜಾಧಮನಿಗೆ ಮಹಿಯೊಳಗೆ ವಿಪ್ರಜನ್ಮವ ನೀನಿತ್ತದಾವ ಬಗೆಯ ಕಾಣೆಇನ್ನೀಗ ಮಾಡುವ ಅನ್ಯಾಯ ನಡತಿಯುತಣ್ಣನ ಕಿಡಿಯಂತೆ ತತ್ಕಾಲಕಿಪ್ಪದುಘನ್ನ ಬವಣೆ ಮುಂದೆ ಅನುಭವವೇ ನಿಜಪನ್ನಗ ಶಯನ ಶ್ರೀ ವ್ಯಾಸವಿಠ್ಠಲ ಸುಪ್ರಸನ್ನ ವದನ ದೇವ ನಿನ್ನ ಪಾದವೆ ಗತಿ 4 ಆದಿತಾಳ ಪಾದ ಚೆನ್ನಾಗಿ ಪೊಂದಿಸಿನಿನ್ನವನಿವನೆಂದು ಮನುಜರಿಂದ ನುಡಿಸಿನಿನ್ನ ಕೀರ್ತನೆಯ ವದನದಿಂದ ಪೇಳಿಸಿಇನ್ನು ಈ ಬಗೆ ಮಾಳ್ಪರೆ ಘನ್ನದಯಾಂಬುಧೇಮನ್ನ ವಾಚ ಕಾಯದಿ ಅನ್ಯಾಯ ಪೆಚ್ಚಿಸದೆಎನ್ನ ಬೆಳವಿಗೆಯಂತೆ ಬೆಳಸದಂತೆ ಮಾಡಿದೆಮನ್ನಣಿಸುವ ಜನರಿಂದ ಮಾಂದ್ಯವ ಮಾಡಿಸಿದೆಸನ್ಯಾಯವಲ್ಲ ಧೊರಿಯೆ ನಿನ್ನ ಚಿತ್ತವೊ ಸ್ವಾಮಿಸನ್ಮುನಿಗಣ ಪ್ರೀಯ ವ್ಯಾಸವಿಠ್ಠಲರೇಯಾನಿನ್ನವರವನೊ ನಿನ್ನ ಸರಿ ಬಂದ ಬಗೆ ಮಾಡೊ 5 ಜತೆ ವೇಣುಗೋಪಾಲ ದಾಸರ ಮನ ಮಂದಿರಾ |ಪ್ರಾಣ ನಿನ್ನದೊ ವ್ಯಾಸವಿಠ್ಠಲ ಗೋಪಾಲಕೃಷ್ಣ ||
--------------
ವ್ಯಾಸವಿಠ್ಠಲರು
ಬ್ರಹ್ಮಾದಿದೇವಗಣ ನಮಿತ ಪಾದಯುಗಳನೆ ನಿನಗೆ ರಂಗಧಾಮನೆ ಪ ಸುಮನಸರೊಡೆಯನೆ ಕಮಲಾಪತಿಯೆ ಅ.ಪ. ಗೋಪಾಲ ಬಾಲಕಿಯರ ಮನಕುಮುದ ಚಂದ್ರನೆ ನಿನಗೆ ರಂಗಧಾಮನೆ ಕಪಟ ರಕ್ಕಸರನು ಮಡುಹಿದನೆ 1 ಕಾವೇರಿ ತೀರದಲ್ಲಿ ನಿಂದ ಪಾವನರೂಪನೆ ಹಾವಿನಹÉಡೆಯೊಳ್ಕುಣಿದವನೆ ಸನ್ಮಂಗಳಂ ನಿನಗೆ ರಂಗಧಾಮನೆ ನಮ ತೋಹನಾಂಗೀಯ ರಾಮನಾಪಹಾರಿಯೆ 2 ಮಾನಿನಿ ದ್ರೌಪದಿಯ ಮಾನವನ್ನು ಕಾಯ್ದನೆ ನಿನಗೆ ರಂಗಧಾಮನೆ ದಿನಕರ ಕೋಟಿತೇಜನೆ ರಂಗೇಶವಿಠಲನೆ 3
--------------
ರಂಗೇಶವಿಠಲದಾಸರು
ಬ್ರಹ್ಮಾದಿವಂದ್ಯ ಪರಬ್ರಹ್ಮಾನೆ ಕಾಯೊ ಅಹಂಬ್ರಹ್ಮಭಾವವ ಬಿಡಿಸೋ ಪ ಬ್ರಹ್ಮಾನ ಜನಕನೆ ಬ್ರಹ್ಮಾಂಡದೊಡೆಯ ಬ್ರಹ್ಮಾಂಡಾಂತರ್ಯಾಮಿ ಸಲಹೋ ಅ.ಪ ಸತ್ಯವ್ರತನೆ ನೀ ಸತ್ಯಪರನು ಜಗ ಸತ್ಯ ಸೃಜಿಸಿ ಪೊರೆವೇ ನಿತ್ಯ ನಿರ್ಲಿಪ್ತನಹುದೋ 1 ಏಕರೂಪನೆ ಅನೇಕ ರೂಪದಿ ಎಲ್ಲಾ ಲೋಕಗಳೆಲ್ಲಾ ಪಾಲಿಪೆ ಲೋಕಗಳನೆಲ್ಲ ಮಾಳ್ವೆ 2 ನಿನ್ನಾಶ್ರೈಸಿದ ಭಿನ್ನಪ್ರಕೃತಿ ತ್ರಿಭಿನ್ನಗೈಸಿ ಅಂದು ಜಗದಾ ಬನ್ನ ಪಣ್ಣನ್ನ ನಿರ್ಮಿಸಿದೆಯೋ 3 ಪಣ್ಣಿಗೆ ನಾಲ್ಕು ರಸವೋ ಘನ್ನಷಡೂರ್ಮಿಗಳನ್ನೆ ನಿರ್ಮಿಸಿ ಪೊರೆವೇ 4 ಕೊಟ್ಟೆ ಸಪ್ತಧಾತು ಅಷ್ಟವಿಟಪಿಗಳನಿಟ್ಟೆ ನವಾಕ್ಷಪೊಟರೆ ದಟ್ಟದಶಚ್ಛದ ಕೊಟ್ಟು ಜಗವೃಕ್ಷ ಸೃಷ್ಟಿಯ ಮಾಡಿ ಮೆರೆದೇ 5 ಅಟ್ಟಹಾಸದಿ ಫಲಮುಟ್ಟದೆ ಇಹ ಖಗಶ್ರೇಷ್ಟನೆ ನೀ ತುಷ್ಟನೋ ಕೊಟ್ಟ ಫಲವನುಂಡಷ್ಟೂ ಸುಖಿಪ ಜೀವರೆಷ್ಟೋ ಜಗವರಿಯೇ 6 ವ್ಯಷ್ಟೀಸಮಷ್ಟಿಯ ಸೃಷ್ಟೀಯೊಳು ನೀನೆ ಶ್ರೇಷ್ಠನೇ ವ್ಯಾಪಿಸಿರುವೇ ದೃಷ್ಟಿಗೋಚರವಲ್ಲ ಅಷ್ಟಕರ್ತೃ ಪರಮೇಷ್ಟೀಜನಕ ಸಲಹೋ 7 ಅಪ್ರಾಪ್ಯಮನೋವಚ ತ್ವತ್ ಪ್ರಾಪ್ತಿಎಂತಯ್ಯ ತ್ವತ್ಪ್ರಸಾದವಿಲ್ಲದೇ ಎನ್ನ ಬಂಧಪ್ರಕೃತಿಯನೆ ಹರಿಸೋ 8 ಸೃಷ್ಟಿಯೊಳಗೆ ಸ್ವನಿಷ್ಠೆಯಿಂದಲೀ ಜಗದೃಷ್ಟೀಗೋಚರನಾಗುವೆ 9 ಮುಮುಕ್ಷುಗಳಿಗೆ ಸಾಕ್ಷಿ ಮನದಕ್ಷಿಯೊಳು ಪೊಳೆವೇ 10 ಭಕ್ತಿವಿರಹಿತ ದುರ್ಯುಕ್ತಕಾರ್ಯದಿ ಮನ ಸಕ್ತವಾಗಿಹುದು ತ್ವಧ್ಭಕ್ತಿಯ ಕೊಡು ನಿತ್ಯ11 ಹತ್ತಿಬಹುದೂ ಬೆನ್ಹತ್ತಿಕರ್ಮವು ಮತ್ತೆ ಸುತ್ತೀಸುತ್ತುತ ಜನ್ಮವಾ ಎನಗೆ ಉತ್ತಮಗತಿ ತೋರದೇ12 ಘೋರದುರಿತ ಪರಿಹಾರ ಮಾಡಿ ಪೊರೆ ಮಾರಾರಿಪಿತವಂದ್ಯ ಚಾರು ಚರಣಸ್ಮರಣಾರಾಧನೆ (ಅದು) ಸಾಕೋ 13 ಸಾರಿದೆನೋ ಶ್ರೀ ವೇಂಕಟೇಶಾಭಿನ್ನ ಉರಗಾದ್ರಿವಾಸ ವಿಠಲಾ ಪಾರುಗಾಣಿಸಿ ಪೊರೆಯೋ 14
--------------
ಉರಗಾದ್ರಿವಾಸವಿಠಲದಾಸರು
ಬ್ರಹ್ಮಾನಂದದ ಸಭಾ ಮಧ್ಯದಲಿಸುಮ್ಮನೆ ಇರುತಿಹುದೇನಮ್ಮಬ್ರಹ್ಮಾದಿಗಳಿಗೆ ದೂರಾಗಿಹನಿರ್ಮಲ ನಿರುಪಮ ತಾನಮ್ಮ ಪ ಹೇಳಲು ಬಾರದ ಸುಖರೂಪದಲಿಹೊಳೆಯುತ ಅಹುದು ಏನಮ್ಮಮೇಳದ ಲೋಕಕೆ ಕರ್ತೃ ತಾನಾಗಿಹಲೋಲ ಪರಾತ್ಪರ ತಾನಮ್ಮ 1 ಬೋಧದ ರೂಪದಿ ಹಾ.... ಎಂಬಂದದಿಬೆಳಗುತಲಿಹುದದು ಏನಮ್ಮಆದಿ ಅನಾಧಿಯು ಅವ್ಯಕ್ತವೆನಿಪಅಚಲಾನಂದವೆ ತಾನಮ್ಮ 2 ತೃಪ್ತಾನಂದದಿ ತೂಷ್ಣೀ ಭಾವದಿದೀಪ್ತವಾಗಿಹುದದು ಏನಮ್ಮಸಪ್ತಾವರಣದ ಮೀರಿ ಮಿಂಚುವಗುಪ್ತಜ್ಞಪ್ತಿಯು ತಾನಮ್ಮ 3 ಕದಲದೆ ಚೆದುರದೆ ಕೈ ಕಾಲಿಲ್ಲದೆಉಕ್ಕುತಲಿಹುದದು ಏನಮ್ಮಸದಮಲ ಸರ್ವಾತ್ಮತ್ವವೆಯಾಗಿಹಸಾಕ್ಷೀಭೂತವು ತಾನಮ್ಮ4 ತೋರುತಲಡಗದ ಸಹಜಭಾವದಿಥಳಥಳಿಸುತಿಹುದದು ಏನಮ್ಮಕಾರಣ ಕಾರ್ಯವ ಕಳೆದ ಚಿದಾನಂದಕಾಲಾತೀತನು ತಾನಮ್ಮ 5
--------------
ಚಿದಾನಂದ ಅವಧೂತರು
ಭಕುತರ ರಿಣಕಂಜಿ ಅಡಗಿದರೇ | ಅಖಿಳದಿ ಬಿಡುವರೇ ಪ್ರಕಟಿಸಿ ಬಾ ರಂಗಯ್ಯಾ ಪ ಕತ್ತಲೆಯೊಳು ಹೆಜ್ಜೆ ದೋರದೇ ತಿರುಗುತಾ | ಮತ್ತೆ ದೊಡ್ಡ ಬೆಟ್ಟದಾ ಮರಿಲ್ಯಾಡುತಾ | ಅತ್ತಿತ್ತ ನೋಡದೆವೆ ಝುಡಪಿನೊಳಗ ಹೊಕ್ಕು | ಉತ್ತಮ ನರಮೃಗದಂತಡವಿಯ ಸೇರಿ1 ಬಡತನ ದೋರಲೆಂದು ಯಾಚಕನಾದರೇನು | ಕಡಲ ಬೊರಿಯಾ ಮನೆ ಮಾಡಿರಲೇನು | ಜಡೆಗಟ್ಟ ನಾರ ಸೀರೆನುಟ್ಟು ಉಪವಾಸ ಮಾಡಿ | ಗಿಡವೇರಿ ಮಡುಹೊಕ್ಕು ಕಳವಿಲಿ ತಿರುಗುತಾ 2 ಮುನಿಯಂತೆ ದಿಗಂಬರ ರೂಪವ ತಾಳಲೇನು | ಜನದ ಕಲಿಕೀ ಮಾತು ಕಡೆಗಾಣುದೇ | ಘನಗುರು ಮಹಿಪತಿ ಸುತ ಪ್ರಭು ನಿನ್ನೊಳಿದ್ದಾ | ಸಂತೈಸಿ ಶರಣರ ರಕ್ಷಿಸಯ್ಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಕುತರ ಸಂರಕ್ಷಣಾ ನಾರಾಯಣ ಪ ಖಗಪನ ಸ್ಕಂದರೋಹ ಅಘದೂರ ಅಭಯಹಸ್ತ ಸ್ವಗತಭೇದಶೂನ್ಯ ಸರ್ವಾವಸ್ಥೆಯೊಳೆನ್ನ ವಿಗತಕ್ಲೇಶನ ಮಾಡಿ ಸತತಕಾಪಾಡಲಿ ನಿಗಮವಿನುತ ಜಗದಾದಿ ವಂದ್ಯನೆ ದೇವಾ 1 ವರುಣಪಾಶಗಳಿಂ ಜಲಚರಜಂತುಗಳಿಂ ಮತ್ಸ್ಯ ಮೂರುತಿ ತಾ ರಕ್ಷಕನಾಗಿರಲಿ ಧಾರುಣಿ ನೆಲದೊಳು ಶ್ರೀ ವಾಮನ ಕಾಯಲಿ ಸರ್ವಾಕಾಶದೊಳು ತ್ರಿವಿಕ್ರಮ ಕಾಯಲಿ2 ದುರ್ಗರಣಾಗ್ರವನ ಅರಿವರ್ಗಗಳಲಿ ನರಹರಿದೇವ ಸಂರಕ್ಷಕನಾಗಿರಲಿ ಮಾರ್ಗಗಳಲ್ಲಿ ಹಿರಣ್ಯಾಕ್ಷ ವೈರಿಯು ಕಾಯಲಿ ದುರ್ಗಮಶೈಲದೊಳು ಶ್ರೀ ಭಾರ್ಗವ ರಕ್ಷಿಸಲಿ 3 ದಾಶರಥಿ ಪ್ರವಾಸದಲಿ ನಿತ್ಯ ದೇಶಾಂತರಗಳಲ್ಲಿದ್ದರು ಕಾಯಲಿ ಈಶ ಶ್ರೀಮನ್ನಾರಾಯಣ ಎನ್ನ ಕ್ರೂರ ಕರ್ಮಗಳಿಂದ ರಕ್ಷಿಸಲನುದಿನ ನರಾವತಾರ ಎನ್ನ ಗರುವಿನಿಂ ರಕ್ಷಿಸಲಿ 4 ವಿರೋಧಿವರ್ಗದಿ ದತ್ತಾತ್ರೇಯ ಕಾಯಲಿ ಸರ್ವಕರ್ಮಬಂಧಜ್ಞಾನದಿಂದ ಕಪಿಲಾ ಮೂರುತಿ ರಕ್ಷಿಸಲಿ ಅನುದಿನದಲಿ ಎನ್ನ ಸನತ್ಕೂ- ಮಾರನು ಎನ್ನ ಕಾಯಲಿ ಕಾಮದಲ್ಲಿ 5 ದಾನವ ಮಧುಕೈಟಭ ಹರೆ ಹಯವದನ ಘನ್ನಪರಾಧದಿ ರಕ್ಷಕನಾಗಿರಲಿ ಮನ್ನಿಸಿ ದೇವತೆಗಳು ಸಾಧನವೀಯಲಿ ಸನ್ನುತಾಂಗ ಧನ್ವಂತ್ರಿಮೂರುತಿ ಹರಿ ಎನ್ನ ರಕ್ಷಕನಾಗಿರಲಿ ರುಜೆಯೊಳು6 ಜ್ಞಾನರೂಪಿ ವೃಷಭ ಸೀತಾತಪದಿಂದ ಎ- ನ್ನನುದಿನ ಈ ದ್ವಂದ್ವÀದಿ ಕಾಯಲಿ ಯಜ್ಞಮೂರುತಿ ಲೋಕಾಪವಾದದಿ ಕಾಯಲಿ ಸುಜ್ಞಬಲರಾಮನು ದುರ್ಜನರ ಭಯದಿಂ ಅನುದಿನ ರಕ್ಷಿಸಲಿ 7 ಘನ್ನಮಹಿಮ ಶೇಷ ಸರ್ಪಬಾಧೆಗಳಿಂದ ಜ್ಞಾನದಾತೃ ಹರಿಸೇವೆಗೆ ಬರುತಿಹ ನಾನಾ ವಿಘ್ನಗಳಿಂದ ರಕ್ಷಿಸುತಿರಲಿ ಘನ್ನ ಮ- ಹಾ ನರಕ ಬಾಧೆಯಿಂ ತಪ್ಪಿಸಲಿ ಕೂರ್ಮಮೂರುತಿ ಕಾಪಾಡಲಿ ನಿತ್ಯದಿ 8 ವೇದವ್ಯಾಸನು ಶುಧ್ಧಜ್ಞಾನವನೀಯಲಿ ಬುದ್ಧಿಮೋಹದಿಂದ ಬುದ್ಧನುದ್ಧÀ್ದರಿಸಲಿ ಹೃದಯದ ಕಲಿಭಾಧೆ ಕಲ್ಕಿ ತಾ ಹರಿಸಲಿ 9 ಉದಯಕಾಲದಿ ಶ್ರೀ ಕೇಶವ ರಕ್ಷಿಸಲಿ ವೇಣು ಹಸ್ತ ಗೋವಿಂದ ಸಂಗಮದಲ್ಲಿ ಪೂರ್ಣಕರುಣೆ ಯಿಂದ ಎನ್ನ ಕಾಪಾಡಲಿ ಪೂರ್ವಾಹ್ನದಲಿ ನಾರಾಯಣ ರಕ್ಷಿಸಲಿ10 ಮಾಧವ ಅಪ ರಾಹ್ನದಲೆನ್ನ ರಕ್ಷಿಸಲಿ ಬಾಧೆಯಿಂ ಸಾಯಂಕಾಲದಿ ರಕ್ಷಿಸಲಿ 11 ಪ್ರದೋಷದಲಿ ಹೃಷೀಕೇಶ ರಕ್ಷಿಸಲೆನ್ನ ಪದುಮನಾಭ ಅರ್ಧರಾತ್ರಿಯಲಿ ಸಲಹಲಿ ಶ್ರೀಧರನೆನ್ನಪರಾತ್ರಿಯಲಿ ಸಲಹಲಿ12 ಜನಾದರ್Àನನು ಎನ್ನನು ಉಷಃಕಾಲದಲಿ ಸಂಧ್ಯಾಕಾಲದಿ ದಾಮೋದರ ರಕ್ಷಿಸಲಿ ಕಾಲನಾಮಕ ಬೆಳಗಿನಝಾವದಿ ಕಾಯಲಿ 13 ನಕ್ರನ ಹರಿಸಿದ ಚಕ್ರಾಯುಧವು ಎನ್ನ ಶತ್ರುಬಾಧೆಗಳಿಂದ ರಕ್ಷಿಸುತಿರಲಿ ವಿಕ್ರಮಗದೆಯು ಆಶ್ರಿತರುಪದ್ರದು- ಅನುದಿನ 14 ಪ್ರಮಥ ಭೂತ ಪಿಶಾಚ ಪ್ರೇತ ಭಯದಿ ಪಾಂಚಜನ್ಯ ಶಂಖರಾಜ ರಕ್ಷಿಸಲಿ ದುಮ್ಮನ ಶತ್ರು ಬಾಧೆಗಳಿಂದ ಖಡ್ಗವು ಖೇಟವು ಸರ್ವ ಅನಿಷ್ಟದಿಂ ರಕ್ಷಿಸಲಿ 15 ಅವನ ನಾಮರೂಪ ದಿವ್ಯಾಯುಧದ ಸ್ಮರಣೆ ಸರ್ವ ಬಂಧಗಳೆಲ್ಲ ತಕ್ಷಣದಲ್ಲಿ ನಿವಾರಣೆಯಾಗಿ ನಿವೃತ್ತಿಮಾರ್ಗಕ್ಕೆ ಶುಧ್ಧಭಾವ ಭಕುತಿಗೆ ಕಾರಣವು ಸತ್ಯ ಗರುಡ ವಿಷ್ಟಕ್ಸೇನ ಕಷ್ಟದಿಂದ ರಕ್ಷಿಸಲಿ 16 ಹರಿಯ ವಾಹನಾದಿಗಳು ವಿಪತ್ತುಗಳ ಹರಿಸಲಿ ಸರ್ವರಂತರ್ಯಾಮಿ ನಿನ್ನ ನಂಬಿರಲು ಸರ್ವಭಾಧೆಗಳಲ್ಲ ಪರಿಹಾರವಾಗಲಿ 17 ಕಾಲ ಸರ್ವಾವಸ್ಥೆಯೊಳೆನ್ನ ಸರ್ವೋತ್ತಮ ದೇವ ಸರ್ವದಾ ರಕ್ಷಿಸಲಿ ಸರ್ವರೊಡೆಯ ಶ್ರೀಮನ್ನಾರಾಯಣ ನಿನ್ನ ಕರುಣ ಕವಚವು ಎನಗಿರಲನುದಿನ 18 ಬಹಿರಾಂತರದಿ ಮೇಲ್ ಕೆಳಗು ಮಧ್ಯದಲ್ಲಿ ದಿಕ್ಕುವಿದಿಕ್ಕಿನೊಳು ಉರಗಾದ್ರಿವಾಸವಿಠಲ ಸ್ವಾಮಿ 19
--------------
ಉರಗಾದ್ರಿವಾಸವಿಠಲದಾಸರು