ಒಟ್ಟು 2062 ಕಡೆಗಳಲ್ಲಿ , 101 ದಾಸರು , 1654 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಿಕ್ಕ ಸಮಯ ನಿಜ ತಿಳಿಯದಲೆ ಬರಿ ಕಕ್ಕುಲಾತಿ ನಿನಗ್ಯಾಕಲೆ ಮರುಳೆ ಪ ಬೊಕ್ಕಸ ಭಂಡಾರವೆಲ್ಲ ಸುಳ್ಳೆ ಸುಳ್ಳೆ ನಿನ್ನ ನಿಕ್ಕುವ ಮನೆ ಊರ್ಹೊರಗಿದೆಲೆ ಅ.ಪ ಮೇಲುಮಾಳಿಗೆಮನೆ ಸ್ಥಿರವಲ್ಲ ಬಹು ಬಾಳುವೆ ಧನಸಿರಿ ನಿನಗಿಲ್ಲ ನಾಳೆ ಬಂದೊದಗಲು ಯಮಶೂಲ ಹಿಂ ಬಾಲಿಸಿ ನಿನಗೊಂದು ಬರೋದಿಲ್ಲ 1 ಬಂಧುರ ಬುವಿಯಧಿಕಾರ ನಿಖಿಲ ಮಹ ಅಂದಣೈಶ್ವರ್ಯ ಛತ್ರ ನಂಬಿಗಿಲ್ಲ ತಂದೆ ತಾಯಿ ಬಂಧು ಬಳಗೆಲ್ಲ ನಿನ ಗೊಂದುಕೊಂದು ಸಂಬಂಧವಿಲ್ಲ 2 ಅತಿರಥರೆಲ್ಲರೀ ಭೂಮಿ ಸುಖ ನೆಚ್ಚಿ ಮತಿಗೆಟ್ಟು ಪೊಂದದಿರತಿ ದು:ಖ ಜತೆಯಲಾರ್ವೊಯ್ಯಲಿಲ್ಲಂತೆಕ್ಕ ಸುಳ್ಳೆ ವ್ಯಥೆ ಬಟ್ಟರು ತಿಳಿಯದಿದರ ಲೆಕ್ಕ 3 ಕ್ಷೋಣೆ ಪಾರುಪತ್ಯತನವೆಲ್ಲ ತಿಳಿ ಆನೆ ಕುದುರೆ ಒಂಟೆ ನಿನ್ನದಲ್ಲ ಕಾಣುವುದೆಲ್ಲ ಮಾಯಭವಜಾಲ ಮತ್ತು ಮನುಷ್ಯಜನುಮ ಸೀಗೋದಲ್ಲ 4 ನಾನು ನೀನೆಂಬುವ ದುಷ್ಟಮದ ಸುಟ್ಟು ಜ್ಞಾನದೊಡನೆ ಗೆಲಿ ಭವಬಾಧೆ ಧ್ಯಾನದಾಯಕ ಶ್ರೀರಾಮಪಾದ ನಿಜ ಧ್ಯಾನವಿಡಿದು ಪಿಡಿ ಮುಕ್ತಿಪದ 5
--------------
ರಾಮದಾಸರು
ಸಿಟ್ಟು ತ್ಯಜಿಸಲೆ ಖೊಟ್ಟಿ ಮನವೆ ಎಷ್ಟು ಪೇಳಲಿ ನಿನಗೆ ಸಿಟ್ಟಿನಿಂದಲಿ ಎಷ್ಟೋ ಜನರು ಕೆಟ್ಟು ಪೋದದ್ದರಿಯಲೊ ಪ ಸಿಟ್ಟಿನಿಂದ ಹಿರಣ್ಯಕನ ಎಷ್ಟು ವರಬಲ ಕೆಟ್ಟಿತ್ತೊ ಸಿಟ್ಟಿನಿಂದಲೆ ರಾಣವನ ಆರುಕೋಟಿ ಆಯುಷ್ಯ ಅಳಿಯಿತೊ 1 ಸಿಟ್ಟಿನಿಂದಲೆ ಮುಪ್ಪುರಂಗಳ ಅಷ್ಟಭೋಗವು ತೀರಿತೋ ಸಿಟ್ಟಿನಿಂದಲೆ ಕುರುಪನ ಕುಲ ನಷ್ಟವಾಗಿಪೋಯಿತೊ2 ದುಷ್ಟ ಕಂಸನು ಸಿಟ್ಟಿನಿಂದ ನಷ್ಟ ಪೊಂದಿದ್ದರಿಯೆಲೊ ಸಿಟ್ಟಿನಿಂದಲೆ ಸೇರಿದರು ಯಮ ಪಟ್ಟಣವ ದಿಟ್ಟರೆಂಬರೆಲ್ಲರು 3 ಸಿಟ್ಟಿಗೆದ್ದ ವಿಶ್ವಾಮಿತ್ರನ ಎಷ್ಟು ತಪವೇನಾಯಿತು ಸಿಟ್ಟಿಗೆ ಮನಗೊಟ್ಟ ಬಳಿಕ ನಷ್ಟ ತಪ್ಪದು ಕಾಣೆಲೊ 4 ಅಷ್ಟು ಯಾತಕೆ ನೀನೆ ಯೋಚಿಸು ಸಿಟ್ಟಿನಿಂದ ನೀನೇನಾದಿ ಶಿಷ್ಟ ಶ್ರೀರಾಮನಡಿಗೆ ಪೊಂದಿ ಸಿಟ್ಟನಳಿದು ಬದುಕೆಲೊ 5
--------------
ರಾಮದಾಸರು
ಸಿದ್ದಮಾಡಿಕೊ ಹರಿನಾಮ ಬದ್ಧನಾಗದಲೆ ಶುದ್ಧಬುದ್ಧಿಯು ನಿನ್ನೊಳಿದ್ದ ಸಮಯದಲ್ಲೇ ಪ ಕಿತ್ತಿ ಅರ್ಭಟಿಸುತ ಸುತ್ತಿದ ಮಹ ಧನುರ್ವಾಯ ಪಿತ್ತ ಕಫ ಮೇಲಕ್ಕೆ ಒತ್ತಿಕೊಂಡೊಯ್ದು ಕುತ್ತಿಗೆ ಅಡರಿಕೊಂಡೆತ್ತೆತ್ತ ಬೊಗಳಿಸುವ ಹೊತ್ತಿಗ್ಗೆ ಹರಿನಾಮ ಮತ್ತಾಗಿ ಬರದು 1 ನಾಲಗೆ ಸೆಳೆಯುವುದು ಆಲಿಗಳು ತಿರುಗುವುವು ಮೇಲಕ್ಕ್ಹರಿವುವು ನಯನ ನೀಲಗೊಂಬೆಗಳು ಕಾಲಚಕ್ರನಿಗಂಜಿ ಮಲ ಒಸರುತಿರುವಾಗ ನೀಲಶ್ಯಾಮನ ನಾಮ ನಾಲಗ್ಗೆ ಬರದು 2 ಎಂಟೆರಡು ವಾಯುಗಳ ಕಂಠನಾಳಕೆ ಸೇರಿ ಸುಂಟರಗಾಳ್ಯಂತೆ ಅಂಟಿ ಸುಳಿಸುತ್ತೆ ಮೀಂಟಿ ಕರ್ಣದಿ ಒದರಿ ಹೊಂಟೋಗ್ವ ಸಮಯ ದ್ವೈ ಕುಂಠ ನಾಮವು ತಂಟೆಗೆ ಬರದು 3 ಅಡವು ಬಂದು ಅವಯವ ಕೂಡಿಕೊಳ್ಳಲು ಸೊನ್ನೆ ಕಾಯ ನಾಡಿಗಳು ಕುಂದಿ ನೋಡಿ ಸತಿಸುತರಂ ಮಾತಾಡೇನೆಂದೆನಲಾಗ ರೂಢಿಗೀಶನ ಧ್ಯಾನ ಕೂಡಿ ಬರದಯ್ಯ 4 ಮೂಳನಾಗಿ ಸಮಯ ಹಾಳುಮಾಡಿಕೊಳ್ಳದೆ ಕಾಲನಾಳಿನ ಮಹ ಧಾಳಿಯನು ಗೆಲಿಯೊ ಕಾಲಿಮರ್ದನ ಜಗತ್ಪಾಲ ಶ್ರೀರಾಮನಡಿ ಕಾಲತ್ರದಲಿ ದೃಢದಿ ಮೇಲಾಗಿ ಭಜಿಸಿ 5
--------------
ರಾಮದಾಸರು
ಸಿಂಧುಶಯನನೆ ಸರ್ವಬಂಧುಬಳಗ ನೀನೆ ತಂದೆ ನೀ ಬಿಟ್ಟರೆ ಬಂಧುಗಳ್ಯಾರಿಲ್ಲ ಪ ಒಂದು ವೃಕ್ಷದಿ ಬಂದು ಪಕ್ಷಿಗ ಳ್ವøಂದ ಗೂಡಗಲ್ಹೋಗುವಂದದಿ ಒಂದಕೊಂದು ಸಂಬಂಧವಿಲ್ಲದ ಬಂಧುವೆಂಬುವರೆಲ್ಲ ಪುಸಿಯು ಅ.ಪ ಕೊಳದಿ ಮಕರಿಗೆ ಸಿಲ್ಕಿ ಬಳಲುತಿರುವ ಕÀರಿಯ ಬಲವಾಗುಳಿಸಿದರಾರು ಬಳಗ ಹಿಂಡುಗಳಿರ್ದು ನಳಿನಲೋಚನ ನೀನೆ ಗತಿಯೆನೆ ಒಲದು ಆ ಕ್ಷಣ ಕರಿಯನುಳುಹಿದಿ ತಿಳಿದು ಭಜಿಸುವ ದಾಸಜನಕತಿ ಸುಲಭನೆಲೊ ನೀ ಜಲಜನಾಭ 1 ಕುರುಪತಿಸಭೆಯೊಳು ಇರುತಿರೈವರು ಪರಿ ದುರುಳ ಕೊಳ್ಳುತಲಿರೆ ನೆರೆದ ಪತಿಗಳು ಸುಮ್ಮನಿರುತಿರೆ ಹರಿಯೆ ಗತಿಯೆಂದು ತರುಣಿ ಮೊರೆಯಿಡೆ ಮಾನವ ಕಾಯ್ದಿ ಚರಣಭಕ್ತರ ನಿರುತರಸುರಧೇನು 2 ದೃಢದಿ ಶ್ರೀಹರಿಯೆಂದು ನುಡಿಯುವ ಬಾಲಗೆ ಹಿರಣ್ಯ ಕಡುವೈರಿಯಾಗಿ ಗಡನೆ ತೋರ್ಹರಿ ಮೂಢ ಎಲ್ಲೆನೆ ಒಡನೆ ಕಂಬದಿ ಮೂಡಿ ದುರುಳನ ಒಡಲ ಬಗಿದು ಪಿಡಿದು ಭಕ್ತನ ಬಿಡದೆ ಸಲಹಿದಿ ಕಡುದಯಾನಿಧೆ 3 ಇಳೆಪತಿ ಪಿತನಿದಿರೊಳ್ ಮಲತಾಯಿಕೃತಿಯಿಂದ ಬಲುನೊಂದು ಧ್ರುವರಾಜ ಕಳವಳಗೊಂಡು ಜಲಜನಾಭನ ಮೊರೆಯನಿಟ್ಟು ಚಲಿಸದೆ ಮನಮುಟ್ಟಿ ತಪಿಸಲು ಒಲಿದು ಧ್ರುವಪದವಿತ್ತಿ ಭಕ್ತರ ಕಲ್ಪಿತವನೀವ ಕಲ್ಪತರು ನೀನು 4 ಪ್ರಾಣೇಶ ಶ್ರೀರಾಮ ಧ್ಯಾನಿಪರಿಗೆ ಸತ್ಯ ನಾನಾದೈವದ ಬಲವು ನೀನೆಯಾಗಿರುವಿ ಕಾನನದಿ ಕಲ್ಲನ್ನು ತುಳಿದು ದಾನ ಕೊಟ್ಟೆಯ ಜೀವ ಸುದತಿಗೆ ಜ್ಞಾನವಿಲ್ಲದಧಮ ಎನಗೇನು ಶಕ್ಯ ನಿನ್ನ ಮಹಿಮೆ ಪೊಗಳಲು 5
--------------
ರಾಮದಾಸರು
ಸಿರಿ ಇಂದಿರೇಶ ದಾಸಜನಪೋಷ ದಾಸನಾಶೋತ್ತರಕೆ ಬೇಸರಿಯಬೇಡ ಪ ಭೇದಭಾವನೆ ಬಿಡಿಸು ವಾದಮತಿ ಪರಿಹರಿಸು ಸಾಧುಸಜ್ಜನರ ಸುಬೋಧನುಡಿಗಲಿಸು ಕ್ರೋಧ ತಾಮಸ ಕಡಿಸು ವೇದವಾಕ್ಯವ ತಿಳಿಸು ಸಾಧನದಿ ಪರಲೋಕ ಹಾದಿಯೊಳು ನಡೆಸು 1 ಶಾಂತಿ ಸದ್ಗುಣ ಕಲಿಸು ಶಾಂತಿನುಡಿಗಳು ನುಡಿಸು ಶಾಂತಿ ಮಂತ್ರವ ಬೋಧಿಸು ಶಾಂತಿಸ್ಥಿರಗೊಳಿಸು ಶಾಂತರೊಡನಾಟವಿರಿಸು ಶಾಂತಿಸುಖ ಕರುಣಿಸು ಶಾಂತಜನಪ್ರಭುವೆ ವೇದಾಂತ ಎನಗೊಲಿಸು 2 ಕಾಸಿನಾಸೆಯು ಬಿಡಿಸು ಹೇಸಿ ಬವಣೆಯ ಗೆಲಿಸು ಮೋಸಮಯಪಹರಿಸು ದೋಷದೂರೆನಿಸು ದೋಷನಾಶನ ಜಗದೀಶ ಶ್ರೀರಾಮ ನಿನ್ನ ಸಾಸಿರ ನಾಮ ಎನ್ನ ಧ್ಯಾಸದೊಳು ನಿಲಿಸು 3
--------------
ರಾಮದಾಸರು
ಸಿರಿ ಪಾಂಡುರಂಗನಾ ಪಾಡಿದೆನೊ ಜಗದಂತರಂಗನ ಖಗ ತುರಂಗನ ಬೇಡಿದೆನೊ ಗುಣಾಂತರಂಗನಾ ಪ ಕಪಿಲ ವಿಭುಹರಿ ಸಾರ್ವಭೌಮ ಸು ತಪನಂದನ ಕೃಷ್ಣ ಕೃಷ್ಣ ಗೀರ್ವಾಣ ತಪಯಜ್ಞ ಜಿತದತ್ತ ಧನ್ವಂತ್ರಿ ವಿನುತ ವೃಷಭ ಹಯ ಲಪನ ವೈಕುಂಠ ಹಂಸ ತಪನಾ ಕುಪಿತ ಜಿತ ಮುನಿ ನರನಾರಯಣ ಅಪರಿಮಿತ ರೂಪ ಧರಿಸಿದಾನಂದ ಗುಪಿತ ಮಹಿಮನ 1 ಮುನಿವನ ಜಿತ ಚಿತ್ತ ಶುದ್ಧದಿ ಜನನಿ ಜನಕನ ಚರಣ ಸೇವೆಯ ಅನುದಿನದಿ ಘನವಾಗಿ ಮಾಡುತ ಗುಣಗಳಿಂದಲಿಯಿರಲು ಇತ್ತಲು ಮುನಿ ನಾರದನು ಗಾಯನವ ಗೈಯುತ ಇನಿತು ಸೋಜಿಗ ನೋಡಿ ತನ್ನಯ ಜನಕಗರುಹಲು ನಗುತಲಾ ಮನದಿ ಕೈಕೊಂಡ ಮೂಲ ಮೂರ್ತಿಯ 2 ಪೊಡವಿಯೊಳು ನೀನವತರಿಸಿ ಆ ದೃಢü ಬಕುತನಿಗೆ ದರುಶನವೆ ಇ ತ್ತಡಿಗಡಿಗೆ ಸುಖಬಡಿಸಿ ಅಲ್ಲಲ್ಲಿ ಬಿಡದೆ ನಿಲ್ಲುವೆ ನಿಮ್ಮ ಸಹಿತಲಿ ವಿನುತ ಕಳುಹಿದ ಒಡನೆ ಸಲ್ಲಿಪೆನೆಂದ ಯಮುನಾ ತಡಿಯ ಜನಿಸಿದ ಜಗನ್ಮೋಹನಾ 3 ನಿಧಿಯ ನೋಡುವೆನೆನುತ ಗೋವುಗಳ ಮುದದಿ ಮೇಯಿಸಿಕೊಳುತ ಕಾವುತ ಒದಗಿ ಗೋವಳರೊಡನೆ ಬಂದನು ವಿಧಿ ಸಂಭವಾದ್ಯ ಭಕ್ತನ ಎದುರಲಿ ನೋಡಿದನು ಹೋ ಹೋ ಇದೇ ಸಮಯವೆಂದು ನಿಂದಾ ಹಿಂಭಾ ಗದಲಿ ಭಕ್ತಿಗೆ ಮೆಚ್ಚಿ ಬಲು ವೇಗಾ4 ತಿರುಗಿ ನೋಡದಲಿರಲು ಭಕುತನ ಮರಳೆ ಮಾತಾಡಿಸಲು ಇಟ್ಟಿಗೆ ಭರದಿ ಹಿಂದಕೆ ಒಗಿಯೆ ವಿಠ್ಠಲ ಹರುಷದಲಿ ವಶವಾಗಿ ನಿಲ್ಲಲು ಕರುಣರಸ ಸಂಪೂರ್ಣ ದೇವನ ನಿರೀಕ್ಷಿಸಿದ ಜಯವೆಂದು ಪೊಗಳಿ ವರವ ಬೇಡಿದ ಪುಂಡರೀಕನು ಗಿರಿಯನೆತ್ತಿದ ಗೋಕುಲೇಶನ 5 ಭಕುತ ಮನೋರಥ ಎನ್ನ ಪೆಸರಿಲಿ ಸಕಲ ಲೋಕದೊಳಗೆ ನೀನೆ ಮುಕುತಿ ಕೊಡುತಲಿ ಇಲ್ಲೆ ನಿಲುವದು ಅಖಿಳ ಬಗೆಯಿಂದ ಭಜನೆಗೊಳುತ ನೀ ರುಕ್ಮಿಣಿಪತಿ ಒಲಿದು ಪಾಲಿಸಿ ವ್ಯಕುತವಾದನು ಪೂರ್ವಮುಖನಾಗಿ ಸುಖವಯೋನಿಧಿ ಮೆರೆಯುತಲಿ ಇಂದೂ 6 ಕ್ರೋಶ ಯೋಜನ ಯೋಜನತ್ರಯ ದೇಶ ಪರಿಮಿತ ಕ್ಷೇತ್ರವಿಪ್ಪುದು ವಾಸ ಒಂದಿನಮಲ ಮನುಜರನ ಲೇಸು ಪುಣ್ಯಗಳೆಣಿಸಿ ಸರಸಿ ಜಾಸನನು ಬೆರಗಾಗಿ ನಿಲ್ಲುವ ದೋಷ ವರ್ಜಿತ ಹರಿಯ ನೆನೆಸುತ ಆ ಸೇತು ಮಧ್ಯದಲಿ ವಿಶೇಷವಾಗಿದ್ದ ಈ ಕ್ಷೇತ್ರ ಮೂರ್ತಿಯಾ 7 ನಂದಾ ಮಂದಾಕಿನಿ ಮಧ್ಯಾಹ್ನಕೆ ನಿಂದಿರದೆ ಬರುತಿಪ್ಪ ಪ್ರತಿದಿನ ಚಂದ್ರಭಾಗಾ ಪ್ರಸೂನುವತಿ ಅರ ಕುಂಡಲ ಚತುರ ದಿಕ್ಕಿನಲಿ ಪೊಂದಿಪ್ಪವು ಓರ್ವನಾದರು ಮಿಂದು ತೀರ್ಥದಲಿ ಆ ನಂದ ಸತ್ಕರ್ಮ ಚರಿಸಲಾಕ್ಷಣ ಇಂದಿರೇಶನು ಒಲಿವ ನಿಶ್ಚಯಾ 8 ದ್ವಾರಸ್ಥ ಜಯ ವಿಜಯ ನಾರದ ಭಾರತಿ ಪಂಚ ಕೋಟಿ ದೇವರು ಶ್ರೀರಮಣಿ ಮಿಕ್ಕಾದ ಜನರೆಲ್ಲ ಈರೆರಡು ದಿಕ್ಕಿನಲಿಯಿಹರು ಸುತ್ತಲಿ ಪಾಡುತ್ತ ಕುಣಿಯುತ್ತ ಹಾರುತಲಿ ಹಾರೈಸಿ ನಾನಾ ವಿ ಹಾರದಲಿ ಪುರಿ ಪ್ರದಕ್ಷಣಿ ವಿ ಸ್ತಾರ ಮಾಡುತಲಿಪ್ಪ ಸೊಬಗನಾ 9 ಎರಡು ವಿಂಶತಿ ಗುದ್ದು ಮೊಳವೆ ಕರಿಸಿ ಕೊಂಬೊದೊಂದೆ ನಿಷ್ಕವು ಇರದೆ ಇವು ನಾನೂರುಯಾದಡೆ ವರಧನಸ್ಸು ಪ್ರಮಾಣವೆನಿಸೊದು ಗುರುತು ತಿಳಿವದು ಇಂಥ ಧನಸ್ಸು ಅರವತ್ತು ಪರಿಮಿತಾ ಈ ಭೀಮಾ ಸರಿತೆಗಳು ಪರಿಪರಿ ತೀರ್ಥಗಳಕ್ಕು ನಿರೀಕ್ಷಿಸಿ ವಂದನೆಯ ಮಾಡುತಾ 10 ಜ್ಞಾತಿ ಗೋತುರ ಹತ್ತದೊಂದೆ ಮಾತು ಮನ್ನಿಸಿ ಕೇಳಿ ಸುಜನರು ವಾತದೇವನ ಕರುಣತನವನು ನೀತಿಯಲಿ ಪಡಕೊಂಡು ಸತ್ವದಿ ಜ್ಞಾತ ಅನುಷ್ಠಾನದಲಿ ನಡೆದು ಪು ಮಾನವ ಬಂದರಾದಡೆ ಆತುಮದೊಳು ಹರಿ ಪೊಳೆದು ಬಲು ಕೌತುಕವ ತೋರಿಸುವ ರಂಗನಾ 11 ಶಯ್ಯಾ ಹರಿ ದಿನದಲಿ ಮಾನವ ಕಾಯ ನಿರ್ಮಳನಾಗಿ ಫಂಡರಿ ರಾಯ ರಾಜೀವನೇತ್ರ ತ್ರಿಭುವನ ನಾಯಕನ ಕ್ಷೇತ್ರಕ್ಕೆ ಮನಮುಟ್ಟಿ ಗಾಯನವ ಮಾಡುತಲಿ ಬಂದ ನಿ ರ್ಮಾಯದಲಿ ಕೊಂಡಾಡಿ ದಮ್ಮಯ್ಯ ಕೈಯ ಪಿಡಿಯನೆ ಕರುಣದಿಂದ ಸಾ ಹಾಯವಾಗುವ ವಾಣಿ ಜನಕನಾ 12 ಮಕುಟ ಕುಂಚಿ ಕುಲಾಯ ಕುಂತಳ ಕುಂಡಲ ಮಣಿ ಕಿರಣ ಸ ನ್ನುಖ ಮುಕರ ಸೋಲಿಸುವ ಕಾಂತಿ ಚಂ ನಾಸಿಕ ಮುಖ ಮೃಗನಾಭಿ ಸಣ್ಣ ತಿ ಲಕ ಕೌಸ್ತುಭಗಳ ತುಲಸಿ ಮಾಲಿಕಾ ನಖ ಪದಕ ಕಟೆಕಂಬು ಕರದ್ವಯ ನಖ ಪಾದ ಭೂಷಣ ಮಾ ಣಿಕ ಇಟ್ಟಿಗೆ ಮೇಲೆ ನಿಂದ ವಿಠ್ಠಲನ 12 ಸಂಗಮ ಸುರ ಮಥನ ಕಾಳಿಂಗ ಭಂಗ ಭಾವುಕ ಭಕ್ತಜನಲೋಲ ಶೃಂಗಾರಾಂಬುಧಿ ರೋಮ ಕೋಟಿ ಕೋಟಿ ಲಿಂಗಧರ ಗೌರೀಶ ಸುರಪ ನಂಗ ಮಿಗಿಲಾದ ಮುನಿವಂದಿತಾ ಮಾ ತುಂಗ ವರದ ಗೋವಿಂದ ವರದೇಶ ಸಂಗ ನಿಃಸಂಗ ಸುಪ್ರಸನ್ನ ನೀ ಅನುದಿನ 14 ಪೇಳಲೊಶವೇ ಲೋಹದಂಡಿ ಹಿ ಯ್ಯಾಳಿ ಕ್ಷೇತ್ರದ ಮಹಿಮೆ ಸಾವಿರ ನಾಲಿಗಿಂದಲಿ ಪೊಗಳಿ ಸುಮ್ಮನೆ ವ್ಯಾಳಪತಿ ಬೆರೆಗಾಗಿ ನಿಲ್ಲುವ ಸಲಿಗೆ ನಾ ಮಾಳ್ಪರು ವಿಲಿಂಗರು ಮೇಲು ಮೇಲೀ ಭುವನದೊಳಗಿದ್ದು ಹೇಳಿ ಕೇಳಿದ ಜನರಿಗಾನಂದಾ ಬಾಲಾ ವಿಜಯವಿಠ್ಠಲರೇಯನಾ 15
--------------
ವಿಜಯದಾಸ
ಸಿರಿವರನ ಕರುಣಕ್ಕೆ ಪಾತ್ರ ನಾನಾದೆ ಪರಮ ಹರಿಭಕ್ತನಾಗಿ ಬಾಗಿ ಶರಣೆಂದು ಪ ಪರಿಪರಿಯಿಂದೊರೆದ ಕುಲಗುರುವಿನ ವಾಕ್ಯಗಳ ತರದೆ ತುಸು ಗಣಿತಕ್ಕೆ ಮರಣಭೀತಿಲ್ಲದೆ ಹರಿಸರ್ವೋತ್ತಮನೆಂಬ ವರಮಂತ್ರ ಪಠಿಸಿದ ಪರಮಪ್ರಹ್ಲಾದರಿಗೆ ನಿರುತ ಶರಣೆಂದು 1 ಪನ್ನಂಗಶಯನ ಉನ್ನತ ಮಹಿಮೆಗಳ ತನ್ನೊಳಗೆ ತಾ ತಿಳಿದು ಭಿನ್ನ ಭೇದವಿಲ್ಲದೆ ಗನ್ನಗತಕನಾದ ಅಣ್ಣನಿಗೆ ಮಹ ನೀತಿ ಯನ್ನು ಪೇಳಿದ ವಿಭೀಷಣಗಿನ್ನು ಶರಣೆಂದು 2 ವನಧಿಯನ್ನು ಲಂಘಿಸಿ ದನುಜಕುಲ ಸಂಹರಿಸಿ ವನಜನಾಭನ ಸೇವೆ ಮನುಮುಟ್ಟಿ ಗೈದು ಜನನಮರಣವ ಗೆಲಿದು ಘನಪದವಿ ಗಳಿಸಿದ ಹನುಮರಾಯರ ಪದಕೆ ಮಣಿದು ಶರಣೆಂದು 3 ತರಳತನದಲಿ ನಿಖಿಲ ಧರೆಭೋಗಗಳ ತೊರೆದು ಹರಿಮಂತ್ರ ಜಪಮಾಡಿ ಸ್ಥಿರಪದವ ಪಡೆದ ಪರಮಕಂಟಕ ಗೆಲಿದವರಿಗರಿತು ಶರಣೆಂದು 4 ನಿತ್ಯನಿರ್ಮಲ ನಿಖಿಲಕರ್ತ ಶ್ರೀರಾಮನಡಿ ಭಕ್ತರೆನಿಸಿದ ಮಹ ನಿತ್ಯಾತ್ಮರ ಸತ್ಯಪಾದಗಳೆನ್ನ ನೆತ್ತಿಯೊಳ್ಪೊತ್ತು ನಿಜ ಚಿತ್ತದಿಂ ನೆನೆನೆನೆದು ನಿತ್ಯಶರಣೆಂದು 5
--------------
ರಾಮದಾಸರು
ಸಿರಿವರನೆ ಮರೆಬಿದ್ದೆ ಶರಣಾಗತಪ್ರೇಮಿ ಪರಿಭವದ ಕಿರಿಕಿರಿಯ ಪರಿಹರಿಸು ಸ್ವಾಮಿ ಪ ಅಡಿಗಡಿಗೆ ರಿಣಕೊಟ್ಟ ಒಡೆಯರತಿಕಿರಿಕಿರಿಯು ಇಡತೊಡಲಿಕ್ಕಿಲ್ಲೆಂಬ ಮಡದಿಕಿರಿಕಿರಿಯು ಎಡಬಿಡದೆ ಹಸೆತೃಷೆಯ ಕಡುತರದಕಿರಿಕಿರಿಯು ಕಡೆಹಾಯ್ಸು ಕಡುಬೇಗ ತಡೀಲಾರೆನಭವ 1 ಮಾಡುಣಲು ಕಿರಿಕಿರಿಯು ಬೇಡುಣಲು ಕಿರಿಕಿರಿಯು ನಾಡ ನಾಡ ತಿರುಗಲು ಕಡುಕಿರಿಕಿರಿಯು ಗೂಢದೊತ್ತಟ್ಟಿರಲು ಬಡತನದ ಕಿರಿಕಿರಿಯು ಖೋಡಿ ಕಿರಿಕಿರಿ ಬೇಡ ದೂರಮಾಡಭವ 2 ಕಿರಿಕಿರಿಲ್ಲದ ನಿನ್ನ ಚರಣದಾಸರ ನೆರೆಯು ಕರುಣಿಸಿ ನಿರುತದಿಂ ಪರಿಪಾಲಿಸಭವ ಶಿರಬಾಗ್ವೆ ಚರಣಕ್ಕೆ ನೀನೆ ಪರದೈವೆನಗೆ ತರಳನರಕೆಯ ಕೇಳು ವರದ ಶ್ರೀರಾಮ 3
--------------
ರಾಮದಾಸರು
ಸೀತಾ ಕಲ್ಯಾಣ ಪಾಕ ಶೇಷಾದ್ರಿ ಬ್ರಹ್ಮಕೆ ಶರಣು ಲೋಕನಾಯಕ ಹೆಳವನಕಟ್ಟೆ ವೆಂಕಟ ನೀ ಕರುಣಿಸಿ ಸಲಹುವುದೆನಗೆ ಜಯ ಜಯ ಪ. ಮದುವೆಯ ನಾಲ್ಕು ದಿವಸದಲ್ಲಿ ಮದುವಣಿಗನು ರಾಮ ಜಾನಕಿಗೆ ಪದನ ಹೇಳುವೆ ಸುಜನರು ಕೇಳಿ ಜಯ ಜಯ 1 ಚಿತ್ತಜಪಿತ ಶ್ರೀರಾಮರಿಗೆ ಅರ್ತಿಯಿಂದರಿಷಿಣೆಣ್ಣೆಯ ಮಾಡ್ವ ಮಿತ್ರೆ ಕೌಸಲ್ಯದೇವಿ ಕೇರಿ ಕೇರಿಯ ಗುಂಟ ಮುತ್ತೈದೇರನು ಕರೆಸಿದಳು ಜಯ ಜಯ 2 ಪೀತಾಂಬರದುಡುಗೆಯನುಟ್ಟು ಜ್ಯೋತಿಯಂದದಿ ಥಳಥಳಿಸುತಲಿ ಜಾತಿಮಾಣಿಕದಾಭರಣವಿಟ್ಟು ರಾಮರ ಮಾತೆಯರೆಲ್ಲ ಶೃಂಗಾರವಾಗಿ ಜಯ ಜಯ 3 ಚೀಣ ಚೀಣಾಂಬರಗಳನುಟ್ಟು ವೇಣಿ ಕಸ್ತೂರಿಯ ಪಣೆಗಿಟ್ಟು ಜಾಣೆಯರೆಲ್ಲ ಶೃಂಗಾರವಾಗಿ ಮಲ್ಲಿಗೆ ಬಾಣನ ಪಟ್ಟದಾನೆಗಳಂತೆ ಜಯ ಜಯ 4 ಪೊಂಬಣ್ಣದ ಹಳದಿಯ ಕಲೆಸಿ ತುಂಬಿದ ಹರಿವಾಣದೊಳಗೆ ಅಂಬುಜನಾಭಗೆ ಅರಿಷಿಣೆಣ್ಣೆಯ ಮಾಡ್ವ ಸಂಭ್ರಮಕೆ ನಡೆತಂದರಾಗ ಜಯ ಜಯ 5 ಗರುಡನ್ವಲ್ಲಭ ಸೌಂದರದೇವಿ ವರುಣನ್ವಲ್ಲಭೆ ಕಾಳಕದೇವಿ ಹರನ್ವಲ್ಲಭೆ ಪಾಪ[ನಾ] ಶಿಗಂಗೆ ಸಹಿತಲಿ ಅರಿಷಿಣೆಣ್ಣೆಯ ಮಾಡಬಂದರಾಗ ಜಯ ಜಯ 6 ಬ್ರಹ್ಮವಲ್ಲಭೆ ಶಾರದಾದೇವಿ ವಾ- ಯುರಮಣಿ ಅಂಜನಾದೇವಿ ಹರುಷದಿ ಕೌಸಲ್ಯೆ ಕೈಕೆಸೌಮಿತ್ರೆಯರು ಅರಿಷಿಣೆಣ್ಣೆಯ ಮಾಡಬಂದರಾಗ ಜಯ ಜಯ7 ಅಲ್ಲಲ್ಲಿ ನಡೆವ ನಾಟಕಶಾಲೆ ಬಿಲ್ಲಾಳು ಬೆತ್ತ ಕಾಟನವರು ಸೊಲ್ಲುಸೊಲ್ಲಿಗೆ ಹಿಡಿಹೊನ್ನನು ತ್ಯಾಗವ ಚೆಲ್ಲುತ ದಶರಥ ನಡೆದನಾಗ ಜಯ ಜಯ 8 ಹೊಡೆವ ತಂಬಟೆ ಭೇರಿ ನಿಸ್ಸಾಳೆ ಬಿಡದೆ ಚೀರುವ ಹೆಗ್ಗಾಳೆಗಳು ಸಿಡಿಲು ಗರ್ಜಿಸುವಂತೆ ಪಂಚಮವಾದ್ಯದಿ ನಡೆದರು ಜನಕರಾಯನ ಮನೆಗೆ ಜಯ ಜಯ 9 ಕುಸುಮಬಾಣನ ಮಾರ್ಬಲದಂತೆ ಹಸುರು ಪಚ್ಚೆಯ ಪಲ್ಲಕ್ಕಿಗಳು ಮುಸುಕಿದ ಪರಿಮಳದೊಳಪ[ಸಾ]ತಕೆ ದಶರಥ ಬಂದನೆಂದರೆ ಜನರು ಜಯ ಜಯ 10 ಭರದಿಂದಲೆದ್ದು ಜನಕರಾಯ ತರಿಸಿ ನಿವಾಳಿಗಳನು ಹಾಕಿ ಹರುಷದಿ ಕೈಲಾಗವ ಕೊಟ್ಟಯೋಧ್ಯದ ಅರಸ[ನ] ಮನ್ನಿಸಿ ಒಡಗೊಂಡನಾಗ ಜಯ ಜಯ11 ಬೇಗದಿ ಗದ್ದುಗೆಯನು ಹಾಸಿ ಬೀಗನ ಉಪಚರಿಸಿದ ಜನಕ ಭಾಗೀರಥಿ ಪಾರ್ವತಿ ಗಂಗೆ ಸಹಿತಲಿ ನಾಗಭೂಷಣನು ಕುಳಿತನಾಗ ಜಯ ಜಯ 12 ಸುತ್ತಣ ರಾಯರಾಯರಿಗೆಲ್ಲ ರತ್ನಗಂಬಳಿಗಳ ಹರಹಿದರು ಅರ್ತಿಯಿಂದಲಿ ಸುರರೆಲ್ಲರು ಕುಳಿತರು ವಿಸ್ತರಿಸಿದ ಮಂಟಪದೊಳಗೆ ಜಯ ಜಯ 13 ಮಣಿಮಂಟಪದೊಳು ಹಸೆಹಾಸಿ ಕನಕ ಮಣಿಯ ತಂದಿಳುಹಿದರು ದಿನಕರಕುಲರಾಮ ಹಸೆಗೇಳೆನುತಲಿ ಗುಣಾವಳಿಗ[ಳ] ಕೊಂಡಾಡಿದರು ಜಯ ಜಯ 14 ಪೊಕ್ಕಳೊಳಜನ ಪೆತ್ತವನೇಳು ಅಕ್ರೂರಜನ ಪೆತ್ತವನೇಳು ಮುಕ್ಕಣ್ಣನ ರಿಪುಬಲವ ಸಂಹರಿಸಿದ ಭಕ್ತವತ್ಸಲ ಹಸೆಗೇಳೆಂದರು ಜಯ ಜಯ 15 ದಶರಥರಾಜನಂದನನೇಳು ಅಸುರಸಂಹಾರ ಕಾರಣನೇಳು ವಸುಧೆಗೊಡೆಯ ರಾಮ ಹಸೆಗೇಳೆನುತಲಿ ಋಷಿಗಳೆಲ್ಲರು ಶ್ರುತಿಗರೆದರಾಗ ಜಯ ಜಯ 16 ಋಷಿವಾಲ್ಮೀಕಿ[ಯ]ರೆಲ್ಲರು ಕೂಡಿ ಕುಶಲದ ಬಾಸಿಂಗವ ಪಿಡಿದು ಅಸುರಾರಿಯ ಮಸ್ತಕಕಳವಡಿಸೋರು ವಸುದೇವನಾಗೆಂದು ಹರಸುತಲಿ ಜಯ ಜಯ 17 ತಂಡತಂಡದ ರತ್ನ ಅಡಸಿದಾಗ ಮಣಿ ಬಿಗಿದಿದಾಗ ತೊಂಡಿಲ ಮುತ್ತೈದೇರಳವಡಿಸೋರು ಕೋ- ದಂಡ ಪಾಣಿಸತಿಜಾನಕಿಗೆ ಜಯ ಜಯ 18 ಬೆರಳಿಗೆ ಮುದ್ರೆ ಉಂಗುರವಿಟ್ಟು ಕೊರಳಿಗೆ ಏಕಾವಳಿಯನೆ ಹಾಕೋರು ತರಳಾಕ್ಷಿಯರಾ ಜಾನಕಿಗೆ ಜಯ ಜಯ 19 ಬೊಂಬೆಯ ತೊಂಡಿಲ ಮುಡಿದಿರ್ದು ಕುಂಭಿಣಿಸುತೆ ಕುಳ್ಳಿರಲಾಗಿ ಅಂಬುಜಾಂಬಕ ರಘುರಾಮನ ಹರುಷದಿ ರಂಭೆಯಿದ್ದೆಡೆಗೆ ಬಂದನೆ ನಗುತ [ಜಯ ಜಯ]20 ಬಂದನೆ ಭಾಗ್ಯಲಕ್ಷ್ಮೀರಮಣ ಬಂದನೆ ಭಕ್ತವತ್ಸಲ ಸ್ವಾಮಿ ಬಂದನೆ ಜಾನಕಿಯಡೆ ರಾಮನು ತಾ ಬಂದನೆ ಮಣಿಮಂಟಪದೆಸೆಗೆ [ಜಯ ಜಯ] 21 ಧೂರ್ಜಟಿ ಜಪಿಸುವ ನಾಮವಿಗ್ರಹ ಬಂದ ವಜ್ರಮಾಣಿಕದ್ಹಸೆಯಿದ್ದೆಡೆಗೆ ಜಯ ಜಯ 22 ಕೌಸಲ್ಯಸುತ ಕುಮಾರ ಬಂದ ಹಂಸವಾಹನಪಿತ ರಾಮ ಬಂದ ಕಂಸಾರಿ ದುಃಖವಿ [ನಾಶ] ರವಿಕುಲ ವಂಶೋದ್ಧಾರಕ ಬಂದನಾಗ [ಜಯ ಜಯ] 23 ಭಕ್ತವತ್ಸಲ ರಾಘವ ಬಂದ ಮುಕ್ತಿದಾಯಕ ಶ್ರೀರಾಮ ಬಂದ ಅರ್ಕನು ಶತಕೋಟಿತೇಜನು ಜಗಕತಿ- ಶಕ್ತ ತಾ ಬಂದನೆಂದವೆ ಕಹಳೆ ಜಯ ಜಯ 24 ಸಿಂಧುಬಂಧನ ರಾಘವ ಬಂದ ಪು- ರಂದರವರದ ಶ್ರೀರಾಮ ಬಂದ ಇಂದುವದನೆಪತಿ ರಾಮ ಬಂದನು ರಾಮ- ಚಂದ್ರ ತಾ ಬಂದನೆಂದವೆ ಕಹಳೆ ಜಯ ಜಯ 25 ಯಜ್ಞಶಿಕ್ಷಾಮಿತ್ರ ರಾಮ ಬಂದ ಸುಗ್ರೀವರಕ್ಷಕಾರಣ ಬಂದ ಲಕ್ಷ್ಮ- ಣಾಗ್ರಜ ಬಂದನೆಂದವೆ ಕಹಳೆ ಜಯ ಜಯ 26 ಯಂತ್ರವಾಹಕ ರಾಘವ ಬಂದ ಮಂತ್ರಮೂರುತಿ ರಾಮ ಬಂದ ಕಾಂತೆ ಶ್ರೀ ಜಾನಕಿರಮಣ ಬಂದನು ರಾಮ ತಂತ್ರಿ ತಾ ಬಂದನೆಂದವೆ ಕಹಳೆ ಜಯ ಜಯ 27 ದೂಷಕಹರಣ ಶ್ರೀರಾಮ ಬಂದ ವಿ- ಭೀಷಣವರದ ರಾಘವ ಬಂದ ಭಾಷೆ ಪಾಲಿಪ ರಾಮಚಂದ್ರ ಬಂದನು ಜಗ- ದೀಶ ತಾ ಬಂದನೆಂದವೆ ಕಹಳೆ ಜಯ ಜಯ 28 ತಾಟಕಪ್ರಾಣಾಪಹಾರ ಬಂದ ಜಟÁಯುಮುಕ್ತಿಕಾರಣ ಬಂದ [ತಾಟಂಕ] ಧರ ನಾರಾಯಣ ರವಿಕುಲ ಕೋಟಿ ತಾ ಬಂದನೆಂದವೆ ಕಹಳೆ ಜಯ ಜಯ 29 ವೀರ ವಿಕ್ರಮ ರಾಘವ ಬಂದ ಮಾರೀಚಮರ್ದನ ರಾಮ ಬಂದ ನಾರಿ ಶ್ರೀ ಜಾನಕಿರಮಣ ಬಂದನು ಹರಿ ರಾಮ ತಾ ಬಂದನೆಂದವೆ ಕಹಳೆ ಜಯ ಜಯ 30 ದೇವಕುಮಾರ ರಾಘವ ಬಂದ ದೇವರ ದೇವನು ರಾಮ ಬಂದ ಭಾವೆ ಶ್ರೀ ಜಾನಕಿರಮಣ ಬಂದನು ರಾಮಚಂದ್ರ ತಾ ಬಂದನೆಂದವೆ ಕಹಳೆ ಜಯ ಜಯ 31 ನಿರುಪಮಚರಿತ ರಾಘವ ಬಂದ ದುರಿತದಲ್ಲಣ ರಾಮದೇವ ಬಂದ ಭರತಶತ್ರುಘ್ನರ ಸಹೋದರಯೋಧ್ಯದ ಸುರಪತಿ ಬಂದನೆಂದವೆ ಕಹಳೆ ಜಯ ಜಯ 32 ಹೇಮಖಚಿತ ರತ್ನ ಪೀಠದಲಿ ಭೂಮಿಜೆ ಸಹಿತ ಕುಳಿತ ರಾಮ ವಾಮ ಭಾಗದಿ ಒಪ್ಪಿರ್ದಳು ಜಾನಕಿ ಆ ಮಹಾಸಭೆಯನು ಬೆಳಗುತಲಿ ಜಯ ಜಯ 33 ಕುಂದಣ ರತ್ನದಡ್ಡಿಕೆಯೊಳಗೆ ಹೊಂದಿಸಿ ನವರತ್ನ ಇರುವಂತೆ ಇಂದುವದನೆ ಜಾನಕಿ ಹರುಷದಿ ರಾಮ ಚಂದ್ರನ ಮಧ್ಯದೊಳೊಪ್ಪಿದಳು ಜಯ ಜಯ 34 ಹೇಮದ್ಹರಿವಾಣದೊಳಗ್ನಿಯನು ಕಾಮಿನಿಯರು ತಂದಿಳುಹಿದರು ರಾಮ ಮನ್ನಿಸಿ ಉಡುಗೊರೆಯಿತ್ತು ಅವರಿಗೆ ಹೇಮಾರ್ಚನೆಗಳ ತೊಡಗಿದನು ಜಯ ಜಯ 35 ಲಾಜತೊಂಡಿ[ತಂಡು?]ಲ ಆಹುತಿಗೊಟ್ಟು ಪೂಜಿಸಿದನೆ ವಿಘ್ನೇಶ್ವರನ ರಾಜವದನೆಯ ಒಡಗೊಂಡು ರಾಘವ ಪೂಜಿಸಿದನೆ ಋಷಿಮುನಿವರರ ಜಯ ಜಯ 36 ಇಂದ್ರಾದಿ ಮುನಿಗಳು ಕೈಹೊಡೆದು ಚಂದ್ರ ಸೂರ್ಯರು ಉಘೇಉಘೇಯೆನಲು ಮಂದಾರ ಮಲ್ಲಿಗೆ ಮಳೆಗಳ ಕರೆದರು ಅಂದದಿ ಸುರಜನರೆಲ್ಲರಾಗ ಜಯ ಜಯ 37 ಅರಳುವ ಕೆಂದಾವರೆ ಕುಸುಮ ಪರಿಮಳ ಸುರಮ್ಯ ಕಣ್ಗೆಸೆಯೆ ಎರಗುವ ಮರಿದುಂಬಿಗಳಂತೆ ರಾಘವ ಕರಗಳ ಪಿಡಿದೆÀತ್ತಿದ ಸತಿಯ [ಜಯ ಜಯ] 38 ಇಳೆಯ ಜಗಂಗಳನುದರದಲಿ ಅಳವಡಿಸಿದ ಮಹಾತ್ಮಕನು ಇಳೆಯ ಮಗಳನು ಎತ್ತಲಾರದೆ ರಾಮ ಬಳಲಿದನೆಂದು ನಕ್ಕರು ಜನರು ಜಯ ಜಯ 39 ಪರಾಕು ಸ್ವಾಮಿ ಪರಾಕು ದೇವ ಪಾದ ಎಚ್ಚರಿಕೆ ಸೀತಾಪತಿ ರಾಮನೆ<
--------------
ಹೆಳವನಕಟ್ಟೆ ಗಿರಿಯಮ್ಮ
ಸೀತಾರಾಮ ಶ್ರೀರಘುರಾಮ ಕಾ ಕುತ್ಸ್ಥರಾಮ ಕರುಣಾಳು ರಾಮ ಪ ಉತ್ತಮ ಗುರುಗಳಿಗೆ ಭಕ್ತಿಯಿಂದಲೆ ಎರಗಿ ಭಕ್ತವತ್ಸಲನ ಚರಿತ್ರೆ ಪೇಳುವೆನು 1 ಆದಿಮೂರುತಿಮಹಿಮೆ ವೇದಂಗಳರಿಯದು ಎನ್ನ ಭೇದಬುದ್ಧಿಗೆ ಇದು ಬೋಧವಾಗುವುದೆ 2 ಪತಿತಪಾವನ ನಿಮ್ಮ ಸ್ತುತಿಯ ಮಾಡುವುದಕ್ಕೆ ಮತಿಯ ಪಾಲಿಸಿ ಸದ್ಗತಿಯ ಕೊಡೆನೆಗೆ 3 ಆದಿಸೃಷ್ಟಿಯಲಿ ಆದುದು ಈ ಆತ್ಮ ಬಾಧೆಯ ಪಡುತಿಹುದು ಭವರೋಗದಲಿ 4 ಜನನ ಮರಣವೆಂಬ ಜಾಡ್ಯವನು ಬಿಡಿಸಿ ನಿನ್ನ ಚರಣದೊಳಿರಿಸೆನ್ನ ಕರುಣವಾರಿಧಿಯೆ 5 ಹೃಷಿಕೇಶವ ಎನ್ನ ಹೃದಯದೊಳಗೆ ಇದ್ದು ವಿಷಯಕೆ ಎನ್ನನು ವಶವ ಮಾಡುವರೇ 6 ದೆ ಮನ್ನಿಸಿ ರಕ್ಷಿಸೊ ಪನ್ನಗಶಯನ 7 ಪಾರ್ಥಸಾರಥಿ ನಿಮ್ಮ ಪಾದವ ನಂಬಿದೆ [ಅರ್ಥಿಯಿಂ] ಪಾವನ ಮಾಡೆನ್ನ ಪರಮಪುರುಷನೆ 8 ನಿಮ್ಮ ಪಾದದ ಭಕ್ತಿ ನಿಮ್ಮ ಪಾದದ ಸ್ತುತಿ ನಿಮ್ಮ ಪೊಗಳುವ ಮತಿಗತಿಯ ಕೊಡೆನಗೆ 9 ತಂದೆತಾಯಿಯು ನೀನೇ ಬಂಧುಬಳಗವು ನೀನೆ ಆ ನಂದದಿಂದಲಿ ಕಾಯೊ ಇಂದಿರಾರಮಣ 10 ಸುರರೆಲ್ಲ ಪೋಗಿ ಮೊರೆಯಿಡಲಾಗಿ ಅರಿತನು ಭೋಗಿಶಯನ ತಾನಾಗಿ11 ವಸುಧೆಯ ಭಾರವನಿಳುಹುವೆನೆಂದು ದಶರಥನುದರದಿ ಜನಿಸಿ ತಾ ಬಂದು 12 ಪಂಕಜನೇತ್ರ ಪರಮಪವಿತ್ರ [ಸು]ಕೋಮಲಗಾತ್ರ ಕೌಸಲ್ಯಪುತ್ರ 13 ಪುತ್ರರ ನೋಡಿ ಸಂತೋಷಗೂಡಿ ಅರ್ತಿಯಿಂದಲೆ ಚೌಲ ಉಪನಯನ ಮಾಡಿ 14 ನೋಡಿ ಕೌಶಿಕನ ಚಿಂತೆಯ ಮಾಡಿ ಕೂಡಿ ಅನುಜನ ಮುನಿವರನೊಡನೆ ವೋಡಿ 15 ಕರೂಶದೇಶಕೆ ಬಂದು ತಾಟಕಿಯನು ಕೊಂದು ಮ ಹ ಸ್ತ್ರೀಯೆಂದು ಆನಂದದಿ ಗ್ರಹಿಸಿ 16 ಮಾರೀಚನ ಹಾರಿಸಿ ಕ್ರತುವನ್ನು ಪಾಲಿಸಿ ತೋರಿಸಿ ಗಂಗೆಯ ಆನಂದದಿಂ ಸ್ತುತಿಸಿ 17 ಮಾಡಿ ಶಿಲೆಯ ಪಾವನ ಮಿಥಿಲಪುರಕೆ ವೋಡಿ ನೋಡಿ ಧನುವ ಮುರಿದು ಜಾನಕಿ ಕೂಡಿ 18 ಮಾರ್ಗದಲ್ಲಾಗ ಭಾರ್ಗವನ ಆಗ್ರಹವ ಬೇಗ ಮುರಿದು ತಾ ಶೀಘ್ರದಿಂ ಬಂದ 19 ಸತಿ ಸಹಿತನಿಂದು ರಾಜ್ಯ ಗ್ರಹಿಸುವೆನೆಂದ ಮಾತೆಗಾನಂದ 20 ಮಾತೆಗೆ ವಂದಿಸಿ ಸೀತೆಯನೊಡಗೊಂಡು ಸು ಮಿತ್ರೆಜಾತನ ಸಹಿತ ರಘುನಾಥ ತಾ ಪೊರಟ 21 ಪೋಗಿ ಜನಕನಿಗಾಗಿ ವನಕೆ ತಾ ಯೋಗಿ 22 ಬೇಗ ಭರತನಿಗಾಗಿ ಪಾದುಕೆಗಳ ಅನು ರಾಗದಿಂದಿತ್ತು ಯೋಗದಿಂ ಪೋಗಿ 23 ಅತ್ರಿಮಹಾಮುನಿ ಇತ್ತ ಆಭರಣವ ವಸ್ತ್ರವ ಗ್ರಹಿಸಿದ ಪುರುಷೋತ್ತಮನು 24 ವಿರಾಧನ ಕೊಂದು ಹರುಷದಿಂ ಬಂದು ಕರುಣದಿಂದ ನಿಂದು ಋಷಿಗಳಿಗಭಯವ[ನಿತ್ತು] 25 ದನುಜೆನಾಸಿಕವರಿದು ಖರದೂಷಣರ ತರಿದು ತಾನೊಲಿದು ಸತಿಗೆ ಗುಹೆಯಲ್ಲಿ ನಲಿದು26 ಬಂದು ರಾವಣ ಜಾನಕಿಯ ಕದ್ದೊಯ್ಯಲಂದು ಕೊಂದು ಮಾರೀಚನ ಗೃಧ್ರಗೆ ಮೋಕ್ಷಾವ [ನಿತ್ತು] 27 ಕಬಂಧನ ಗೆಲಿದು ಪಂಪಾತೀರದಿ ನಲಿದು ಶಬರಿಯಿತ್ತ ಫಲವನ್ನು ಸವಿದು ಹರಿಗೆ ತಾನೊಲಿದು 28 ಕುಟ್ಟಿ ವಾಲಿಯ[ನು] ರವಿಜಗೆ ಪಟ್ಟವ ಕಟ್ಟಿ ಸೃಷ್ಟಿಜಾತೆಯನರಸಲು ಕಪಿಗಳನಟ್ಟಿ 29 [ಭರದಿವಾನರ] ಕೈಲಿ ಉಂಗುರವಿರಿಸೆ ಆ ಮಾರುತಿ ಕಪಿಗಳುವೆರಸಿ ಜಾನಕಿ[ಯ]ನರಸೆ 30 ಶರಧಿಯನ್ಹಾರಿ ಸೀತೆಯ ನೋಡಿ ಗುರುತನು ತೋರಿ ದುರುಳನೊಡನ್ಹೋರಿ ಮಣಿಯ ತಂದನಾಧಾರಿ 31 ವನವನ್ನು ಮುರಿದು ಅಕ್ಷನ ತರಿದು ಅಸ್ತ್ರಕ್ಕೆ ಅ [ವನೊ]ಲಿದು ರಾವಣನೆದುರಲ್ಲಿ ನಲಿದು 32 ಪುರವೆಲ್ಲ ಸುಟ್ಟು ವಿಭೀಷಣನ ಗುಟ್ಟು ಬಾಲ ಶರಧಿಯೊಳಿಟ್ಟು ಕಪಿಗಳ ಸೇರಿದನಷ್ಟು 33 ಭಂಗಿಸಿ ಮಧುವನವ ಭರದಿಂದ [ರಾಮನೆಡೆಗೆ] ಲಂಘಿಸಿ ಮಾತೆಯ ಕಂಡೆವೆಂದೊಂದಿಸಿ ಮಣಿಯನಿರಿಸೆ 34 [ವರರಾಮ] ತಾ ನೋಡಿ ವ್ಯಸ ಮಾಡಿ ಹರಿಯನ್ನು ಕೂಡಿ ಆಲಿಂಗನೆ ಮಾಡಿ 35 ಹರಿಗನ ಕೂಡಿ ಭರದಿಂದಲೋಡಿ ಶರಧಿಯ ನೋಡಿ ಯೋಚನೆ ಮಾಡಿ 36 ವರುಣನ ವಂದಿಸಿ ವಿಭೀಷಣನ ಮನ್ನಿಸಿ ಶರಧಿಯ ಬಂಧಿಸಿ ಅಂಗದನ ಸಂಧಿಗೆ ಕಳುಹಿಸಿ 37 ಇಂದ್ರಜಿತುವೊಡನೆ ಛಂದದಿಂದಲೆ ಕಾದಿ ಬಂದ ಸರ್ಪಾಸ್ತ್ರವ ಖಗನಿಂದ ಬಿಡಿಸಿ 38 ಹಂಗಿಸಿ ರಾವಣನಕಿರೀಟವ ಮೈಯೆಲ್ಲ ನಡುಗಿಸಿ ಭಂಗಿಸಿ ತಾ ಜಗದೊಡೆಯನೆಂದೆನಿಸಿ 39 ಕುಂಭನಿಕುಂಭ ಕುಂಭಕರ್ಣರ ಕೊಂದು ಕುಂಭಿನಿಯೊಳು ನಿಂದನಂಬುಜನಾಭ 40 ಪತಿತಪಾವನ [ನನುಜನ] ಪಿತಾಮಹಾಸ್ತ್ರದಿ ಕಟ್ಟೆ ಹಿತದಿಂದೌಷಧಿ ತಂದ ಮಾರುತನ ಕುಮಾರ 41 ಮಾಯೆ ಸೀತೆಯನರಿ[ಯದೆ] ಮೋಹಪಡು ತ ಉ ಪಾಯದಿಂದಲೆ ಬಂದ ಮಾಯಾವಿಯೆಡೆಗೆ 42 ತಮ್ಮ ಲಕ್ಷ್ಮಣ ತಾನು ಹೆಮ್ಮೆಯಿಂದಲೆ ಕಾದಿ ಒಮ್ಮೆ [ಲೆ] ಅಸ್ತ್ರಗಳ ಸುಮ್ಮಾನದಿಂ ಬಿಟ್ಟು 43 ಸತ್ಯಮೂರುತಿ ಪವಿತ್ರ ತಾನಾದರೆ ಅಸ್ತ್ರವೆ ಶತ್ರುವ ಜಯಿಸಲೆಂದನಾಗ 44 ಎಂದು ಬಾಣವಬಿಡೆ ಇಂದ್ರಜಿತುವ ಕೊಂದು ಆ ನಂದದಿಂ ಲಕ್ಷ್ಮಣನ ಹೊಂದಿತಾ ಬಾಣ 45 ವಿರೂಪಾಕ್ಷ ಯೂಪಾಕ್ಷ ಶೋಣಿತಾಕ್ಪನ ಕೊಂದು ಮ ಕರಾಕ್ಷನ ಕೊಂದ ಮಹಾನುಭಾವರಾವಣನ 46 ಮೂಲಬಲವನ್ನೆಲ್ಲ ಲೀಲೆಯಿಂದಲೆ ನಿ ರ್ಮೂಲನ ಮಾಡಿ[ದ] ಲೀಲಾವಿನೋದದಿ 47 ಬಂಧುಗಳೆಲ್ಲರು ಮರಣ ಪೋಗಲು ಕಂಡು ಬಂದ ರಾವಣನು ತಾನು ಒಂದೆಮನಸಿನಲಿ 48 ಯಾರು ಇಲ್ಲದಾಗ ಚೋರತನದಲ್ಲಿ ನಾರಿಯ ಕದ್ದೊಯ್ದ ಧೀರ ಬಾರೆಂದ [ರಾಮ] 49 ಅಸ್ತ್ರಕ್ಕೆ ಅಸ್ತ್ರವ ಒತ್ತಿ ಬಿಡಲು ಆಗ ಮತ್ತೆ ಆಕಾಶವ ಮುತ್ತಿತು ಬಾಣ 50 ರಾಮರಾವಣರ್ಯುದ್ಧ ನೋಡಿ ಮಹಾಸುರರೆಲ್ಲ ಪ್ರೇಮದಿಂದಲೆ [ಹರಸಿದರು] ಆನಂದಗೂಡಿ 51 ಕತ್ತರಿಸಿದ [ರಾವಣನ]ಶಿರ ಮತ್ತೆ ಬೆಳೆಯಲು ನೋಡಿ ಚಿತ್ತದಿಂ ನೆನೆದು [ರಾಮ] ಬ್ರಹ್ಮಾಸ್ತ್ರದಿಂ ಕಡಿದ 52 ದಶಕಂಠನೆಂತೆಂಬ ಹಸನಾದ ವೃಕ್ಷವ ದಶರಥಸುತವಾತ ಬಂದು ಮುರಿಯಿತು 53 ರಾವಣನೆಂತೆಂಬ ವಾರಣ[ದ ಕೋಡ] ವೀರ ರಾ ಘವನೆಂಬ ಕೇಸರಿಯು ಮುರಿಯಿತು 54 ಪುಲಸ್ತ್ಯಪುತ್ರನೆಂಬ ರಾಜವೃಷಭವನ್ನು ಇಕ್ಷ್ವಾಕು [ಕುಲದ] ವ್ಯಾಘ್ರವು ಭಕ್ಷಿಸಿತಾಗ 55 [ಆಮಹಾ] ರಾಕ್ಷಸೇಂದ್ರನೆಂಬ ಜ್ವಲಿಸುವ ಅಗ್ನಿಯ [ಶ್ರೀ] ರಾಮಜೀಮೂತವು ಬಂದು ಕೆಡಿಸಿತು 56 ಸುರರೆಲ್ಲ ಜಯವೆಂದು ಪುಷ್ಪಗಳರಳನ್ನು ಕರೆಯಲು ಶಿರದಲ್ಲಿ ಧರಿಸಿದ [ತಾ] ಪರಮಪುರುಷನು 57 ರಾಕ್ಷಸೇಂದ್ರ [ವಿಭೀಷಣ]ಗೆ ಮಾಡಿ ರಾಜ್ಯಾ ಭಿಷೇಕವ ಮೂರ್ಜಗದಲಿ ಕೀರ್ತಿ ಪಡೆದ ರಾಘವ 58 ತಂದೆಗೆರಗಿ ಅಗ್ನಿತಂದ ಸೀತೆಯ ನೋಡಿ ಆ ನಂದದಿಂದಲೆ ಕೂಡಿನಿಂದ ರಾಘವನು 59 ಅಜಭವಸುರರೆಲ್ಲ ಭುಜಗಶಯನನ ನೋಡಿ ನಿಜವಾಗಿ ಸ್ತೋತ್ರ ಮಾಡಿದರು ನಿರ್ಮಲದಿ 60 ವೇದವನಿತ್ತು ಅಜನಿಗೆ ಭಾರವ ಹೊತ್ತು [ಆ] ಧಾರುಣಿಯ ತಂದು ಕಂಬದಿಂ ಬಂದು 61 ದಾನವ ಬೇಡಿ ಕ್ಷತ್ರಿಯಕುಲವನೀಡಾಡಿ ಜಾನಕಿಯ ತಂದು ಪ್ರಲಂಬನ ಕೊಂದು 62 ಕಾಳಿಯ ಒತ್ತಿ ಕುದುರೆಯ ಹತ್ತಿ ಜಗ ವೆಲ್ಲ ಸುತ್ತಿ ನಿಮ್ಮ ದರ್ಶನ ಮುಕ್ತಿ 63 ಜಗದೋದ್ಧಾರ ದುರಿತಕ್ಕೆ ದೂರ ಜಗಕೆ ಆಧಾರ ದುಷ್ಟರಿಗೆ ಕ್ರೂರ 64 ಪೃಥುವಿಯ ಪಾಲ ದಿಟ್ಟಗೋಪಾಲ ಸತ್ಯದಲಿ ಶೀಲ ರುಕ್ಮಿಣೀಲೋಲ 65 ಅರಿ ನಿ ಸ್ಸೀಮ ಭಕ್ತರಾಪ್ರೇಮ 66 ವಿಶಾಲನೇತ್ರ ಪರಿಪೂರ್ಣಗಾತ್ರ [ವ ರ] ಸೀತಾಕಳತ್ರ ಸುಗ್ರೀವಮಿತ್ರ 67 [ರಾಜ] ದಶರಥ ಬಾಲ ಜಾನಕೀಲೋಲ ಮೂರ್ಜಗಪಾಲ ಕೀರ್ತಿವಿಶಾಲ 68 ಸತ್ಯಮೂರುತಿ ಪವಿತ್ರ ನೀನೆ ಜಗಕೆ ಕರ್ತನೂ ಕಾರಣಮೂರ್ತಿಯೂ ನೀನೆ 69 ನಂದನಕಂದ ಮುಕುಂದ ಗೋವಿಂದ ಇಂದಿರಾರಮಣ ನೀನೆಂದು ಪೊಗಳಿದರು 70 ಪುಷ್ಪಕವನು ಏರಿ ಲಕ್ಷ್ಮೀಸಹಿತವಾಗಿ [ರಾಮ]<
--------------
ಯದುಗಿರಿಯಮ್ಮ
ಸುಖದಿಂದ ಬಾಳೆ ಬಾಲೆ | ಸುಮಂಗಲೇ | ಪ ಸುಖದಿ ಬಾಳೆ ಸಾವಿತ್ರಿಯಂತೆ ಸುತರ ಪಡೆದಿಳೆಯೊಳ್ ನಿರಂತರ ಪತಿಯ ವಾಕ್ಯದಿ ನಿರತಳಾಗಿ ಅ.ಪ ಅತಿಶಯದಿ ನಿರುತ ಪತಿಯ ಸೇವಿಸುತ್ತ ಆತನೇ ಪರದೈವವೆಂದೆನುತ ಹಿತವಚನ ವಾಡುತ ಅತ್ತಿಮಾವನ ಸ್ಮರಿಸುತ್ತ ರತಿಪತಿ ಪಿತನಂಘ್ರಿ ಭಜಿಸುತ ಪೃಥ್ವಿಯೋಳ್ ಅನುಸೂಯಳಂತೆ 1 ಸುಂದರಾಂಗಿಯೆ ಸತತ ಗೃಹ ಕಾರ್ಯ ಮಾಡುತ ಇಂದಿರೇಶನ ಪಾಡುತ್ತ | ಬಂದಂಥ ವಿಪ್ರರ ದ್ವಂದ್ವ ಪಾದಕೆರಗುತ | ಹಿಂಗಿರುವದುಚಿತ ಮಂದ ಮತಿಗಳ ಮಾತು ಕೇಳದೆ ತಂದೆ ತಾಯಿಗೆ ಕುಂದು ತಾರದೆ ಇಂದು ಮುಖಿ ನೀ ಹಿಂಗಿದ್ದರನುದಿನ ಬಂದು ಕಾಯ್ವ ಶ್ರೀರಾಮಚಂದಿರ 2 ನಡಿದಾವರೆ ಪೂಜಿಸು ಸರ್ವದಾ ಬಿಡಿ ನುಡಿಗಳಾಡದೆ ಕಡು ಕರುಣದಿ ದ್ರೌಪದಾ ಮೋದ | ಪಡಿಸುಪುತ್ರರ ಪರ ರೊಡನೆ ಕಾಲ್ಕೆದರಿ ಕಲಹವ ತೆಗೆಯದಿರು ಸಖಿ ಒಡೆಯ ಶ್ರೀ ಶಾಮಸುಂದರನು ತಡೆಯದೆ ಸಂಪದವ ನೀಯುವ 3
--------------
ಶಾಮಸುಂದರ ವಿಠಲ
ಸುಗುಣೆಯ ಕೂಟವೆ ಕೂಟ ಪ ಹಗಲಿರುಳೆನ್ನದೆ ಬಗೆ ಬಗೆ ರತಿಯೊಳು ಸೊಗಯಿಸಿ ದೇಹ ಧಾತುಗಳನು ಕೆಡಿಸುವ ಅ.ಪ ಗನುದಿನ ಬಾಧಿಪ 1 ಮಾಡಿ ಹಾಸಿಗೆ ಮಂಚಾದಿಗಳಲಿ ರೂಢಿಸಿ ಕಾಮಿನಿ ಕೂಡುವ ತೆರದೊಳೋ ಲಾಡಿ ಶರೀರದ ನಾಡಿಯ ನಿಲ್ಲಿಸುವ 2 ನಿದ್ರೆಯ ಸಮಯವ ನೋಡುತ ಮುದ್ದಾಡುತ ನಮ್ಮ ನೊದ್ದಾಡಿಸುತಿಹ 3 ತೊಗಲಿನ ನರಕ್ಕೆ ತಗಲೆ ನಿದ್ರೆಯ ನಗಲಿಸಿ ಬೇಗದಿನುಸುಳಿ ಕದ್ದೋಡುವ4 ತೊಗಟೆ ರಕ್ತದ ಸುವಿನೋಡಿ ಬುಗುಟೆದ್ದ ಗಾಯವ ವಿಗಟವ ಮಾಡುವ 5 ಕಪಟ ಕಾಟಕರ್ಮದ ನಿಸರ್ಗದಲ್ಲಿನ ಬಲು ಕೋಟಲೆಯುಂಬೆ ನಿನ್ನ ಕೂಟದ ಜನರಿಗೆ 6 ಬಿರುದನು ಪೊಗಳುತ ನಿಂದೆ ವರದವಿಠಲ ನಿನ್ನ ಶರಣರಾದವರಿಗೆ 7
--------------
ವೆಂಕಟವರದಾರ್ಯರು
ಸುಜ್ಞಾನಿ ನಡೆ ಬೇರೆ ಅಜ್ಞಾನಿ ನಡೆ ಬೇರೆ ಜ್ಞಾನದಿಂದ ಪ್ರಮಾಣಿಸಿ ನೋಡಲು ಪ ಸುಜ್ಞಾನಿ ನುಡಿಯದರ ಕಡೆತನಕ ಅಜ್ಞಾನಿ ನುಡಿ ಸದಕ ಸುಜ್ಞಾನಿಯನುಡಿ ಒಂದೆ ನಿರ್ಧಾರ ಅಜ್ಞಾನಿಯ ನುಡಿ ಪದರುದರ 1 ಸುಜ್ಞಾನಿ ಬಾಳು ಭವಲೂಟಿ ಕಡೆತನ ಅಜ್ಞಾನಿ ಬಾಳು ಸುಳ್ಳು ಮುಷ್ಟಿ ಸುಜ್ಞಾನಿಯ ವರ್ತನೇ ವಜ್ರದಗಟ್ಟಿ ಅಜ್ಞಾನಿವರ್ತನೆ ಗಾಳಿಯ ಮೊಟ್ಟೆಮೊಟ್ಟೆ 2 ಸುಜ್ಞಾನಿಗೆ ಮುಕ್ತಿಪಟ್ಟ ಕಡೆತನ ಅಜ್ಞಾನಿಗೆ ಮೃತ್ಯುಕಾಟ ಅಜ್ಞಾನಿಕಾಣುವ ಯಮನಗೂಟ ಸುಜ್ಞಾನಿ ಕಾಣುವ ಶ್ರೀರಾಮನಾಟ ಆಟ 3
--------------
ರಾಮದಾಸರು
ಸುದಯನೆ ಮಲಗಿದ್ಯಾ ತಂದೆ ಗೋವಿಂದ ಇದು ಏನು ಮಾಡಿದ್ಯೋ ಭಕುತರಾನಂದ ಪ ಗಳಿಗೆಬಿಡದೆ ಹೊನ್ನು ಅಳೆದಳೆದು ಬೇಸತ್ತು ಮಲಗಿದಿ ಸುಮ್ಮನೆ ಕಲಿಜನರ ಗತಿಯೇನು 1 ಮಹಂತರ ಅಧಿಕಾರ ಭ್ರಾಂತರೊಶಕೆ ನೀಡಿ ಚಿಂತೆ ಪರಹಿತ ಮರೆದು ಸಂತಸದ್ಹಾವಿನ ಮೇಲೆ 2 ಪ್ರತಿ ವರುಷದುತ್ಸವಕೆ ಅತಿಭಕುತಲಿ ಬರುವ ಸುತರೊಳು ದಯತಪ್ಪಿ ಅತಿ ಆನಂದದಲಿ 3 ರೂಢಿಯ ಮೇಲೆ ಗಾಢನಿದ್ರೆಯೊಳು 4 ಕಾಮಿತಜನರ ಸುರಕಾಮಧೇನಲ್ಲವೆ ನೀನು ಭೂಮಿಪಾಲಿಸು ಏಳು ಸ್ವಾಮಿ ಶ್ರೀರಾಮಯ್ಯ 5
--------------
ರಾಮದಾಸರು
ಸುಂದರ ಮೂರುತಿ ಮುಖ್ಯಪ್ರಾಣನು ಬಂದಾಬಂದಾ ಗಲಗಲಿಗೆ ಕಲಾದಿಗೆುಂದಾ ಪಕಾಯರ ಹೃದಯದಿ ಶ್ರೀರಾಮನಿರುವಾಶ್ರೀರಾಮನಿದ್ದಲ್ಲಿ ಶ್ರೀಹುನಂತ ಬರುವಾಈ ಮಾತು ನಿಜವೆಂದು ಎಲ್ಲಾ ಜನರಿಗೆತಿಳಿಸಿಕೊಡಲು ಬಂದಾ ಶ್ರೀರಾಯರ ಮಠಕೆ1ಹನುಮ ಭೀಮ ಮಧ್ವನಾನೇ ನೋಡೆಂದಕೊರರೊಳು ಶ್ರೀತುಳಸಿ ಮಾಲೆ ಹಾಕಿಕೊಂಡಾಬಲಗೈಯೊಳು ಭೀಮಗದೆ ನೋಡಿರೆಂದಾಬಾಲ ಹಾರಿಸಿ 'ೀರ ಹನುಮನಾನೆಂದಾಭೂಪತಿ 'ಠ್ಠಲನ ಮೋಹದ ಕಂದಾ 3ಗೋ'ನದಿನ್ನಿ ಹನುಮಪ್ಪ
--------------
ಭೂಪತಿ ವಿಠಲರು