ಒಟ್ಟು 2922 ಕಡೆಗಳಲ್ಲಿ , 121 ದಾಸರು , 2167 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾನವರೊಳು ಮಾನ ಹೀನನಾದೆನಗೆ ಸುಜ್ಞಾನವ ಕರುಣಿಸಿ ಸಲಹೋ ದಯಾಳೋ ಪ ಶರಧಿ ಗಂಭೀರ ಉ - ಧಾರ ವೈಯ್ಯಾರ ನೀಧೀರ 1 ಮೂಷಕ ವಾಹನನೆ ಕರದಿ ಪಾಶಾಂಕುಶ ವಿಡಿದಿಹನೆ ದೇಶಿಕರನು ನೆರೆ ಪೋಷಿಸಿ ದುರಿತ ರಾಶಿಯ ನಾಶಿಸುವ ಗುಣ ನಿಧಿಯೇ 2 ಕಿನ್ನರ ಸೇವಿತ ನಾಗ ವೈರಿಯ ಸುತ ನಾಗಶಯನ ನುತ ನೀನೆ ರಕ್ಷಿಸುಎನ್ನ 3 ಇಕ್ಷು ಪಣ್ ಫಲಗಳನು ನಾನಾ ಭಕ್ಷ್ಯ ಭೋಜ್ಯಂಗಳನು ಭಕ್ಷಿಸಿ ಕುಜನರ ಶಿಕ್ಷಿಸಿ ಸುಜನರ ರಕ್ಷಿಪೆ ನಿರುತ ನೀ ದಕ್ಷ ಮುಖಾರಿ ಸುತನೆ 4 ಹಿಂಡು ದಿವಿಜರೊಡನೆ ಪೂಜಿಸಿ ಕೊಂಡು ಹಿಗ್ಗುತಲಿಹನೆ ದ್ದಂಡ ವಿಘ್ನವ ಪರಿಖಂಡನೆಗೈದು 5
--------------
ಕವಿ ಪರಮದೇವದಾಸರು
ಮಾನವಾತ್ಮರೆ ನಿಮ್ಮ ಮಾನಸ ಪೂಜೆಯಿಂಮಾನವನಿಗೆ ಮೋಕ್ಷ ಸಾಧಿಸೀರಿ ಪ ರತ್ನ ನಿರ್ಮಿತ ಸುಚರಿತ್ರ ಮಂಟಪವನ್ನುಸತ್ಯಭಾಮೆಯ ಪತಿಗಿತ್ತು ಪೂಜಿಸುವೆ1 ಆಸನ ನೀಡುವೆ ಶೇಷಶಯನನೆ ಇಲ್ಲಿವಾಸ ಮಾಡಿ ಎನ್ನ ಸೇವೆ ಸ್ವೀಕರಿಸು2 ಧ್ಯಾನ ಮಾಡುವೆ ನಿನ್ನ ಗಾನ ಮಾಡುವೆ ನಿನ್ನಜ್ಞಾನ ಭೂಷಣ ಶೋಭಿತಾನನಾಂಬುಜ 3 ಧೃತ ವೇಣುಗೋಪಾಲ ಬಾರೋ ಮನಸಿಗೆ ತೋರೊಮೂರುತಿ ನಿನ್ನಯ ಸಮೀರ ಸಂಸ್ತುತನೆ 4 ಅಘ್ರ್ಯ ನೀಡುವೆ ನಾನು ಅನಘ್ರ್ಯ ವಸ್ತುಗಳಿಂದಸ್ವಘ್ರ್ಯಗ್ರಹಣ ಮಾಡೋ ಭರ್ಗ ಸೇವಿತನೆ 5 ಪಾದ್ಯ ನೀಡುವೆ ವೇದ ವೇದ್ಯ ಮಹಿಮನೇ ಮುನ್ನಾವದ್ಯ ಕಳೆದು ಭವದಿಂದ ಉದ್ಧರಿಸೆನ್ನ 6 ಆಚಮನವ ನೀಡುವೆ ಹೇ ಚತುರಾನನೇಶವಾಚಾಮಗೋಚರ ಮೋಚಕ ಹೇತು 7 ಸುದತಿ ಮೋಹನ ತವಮಧುಪರ್ಕವನೀವೆ ಮುದದಿ ಸ್ವೀಕರಿಸು 8 ಮತ್ತೆ ಆಚಮನವನಿತ್ತು ಪೂಜಿಪೆ ಕರವೆತ್ತಿ ಮುಗಿವೆ ಸರ್ವಭಕ್ತ ಪೋಷಕನೆ 9 ಗಂಗೆ ಯಮುನೆ ಗೋದಾ ತುಂಗೆ ಜಲವ ತಂದಿಹೆ ಅ-ನಂಗ ಜನಕ ಮಾಡೋ ಅಭ್ಯಂಗ ಸ್ನಾನ 10 ನಿರಿಗೆಗಳನೆ ಹಾಕಿ ಜರದ ಪೀತಾಂಬರ ಗ-ರುಡವಾಹನ ನೀನು ಧರಿಸು ಮಧ್ಯದಲಿ 11 ಹಾರ ಕಿರೀಟ ಕಾಂಚಿ ನೀರ ನೂಪುರ ಸು-ಕೇಯೂರ ನೂಪುರನೀವೆ ಧಾರುಣಿಪತಿಗೆ 12 ಸ್ವರ್ಣ ರಚಿಸಿದ ಸೂತ್ರವನು ಕೊಡುವೆ ಲಕ್ಷ್ಮೀರನ್ನ ಸೌರಭ ಗಂಧವನು ಸ್ವೀಕರಿಸು 13 ವಾಸುದೇವನೆ ದಿವ್ಯ ನಾಸಿಕೇಂದ್ರಿಯದಿಂದಈಸು ಧೂಪದ ಗಂಧ ವಾಸನೆ ಗ್ರಹಿಸೋ 14 ಮರುಗು ಮಲ್ಲಿಗೆ ಜಾಜಿ ಸುರಗಿ ಸೇವಂತಿಗೆಸುಮಗಳ ಪರಿಮಳ ಧರಿಸೋ ಮಧ್ಯದಲಿ 15 ಹತ್ತು ಅಂಗಗಳಿಂದ ಉತ್ತಮ ಸುಧೂಪವಎತ್ತುವೆ ನಿನಗೆ ಸರ್ವೋತ್ತಮ ಹರಿಗೆ16 ಆಕಳ ಘೃತದ ಅನೇಕ ದೀಪಗಳ್ಹಚ್ಚಿಶ್ರೀಕರ ತವ ಮುಖಾವಲೋಕಿಸುತ್ತಿಹೆನು 17 ಏಕಾರತಿ ಗೋಪಿಪ್ರೀತನೆ ಬೆಳಗುವೆನಾಕ ನಾಯಕ ಸುರಲೋಕ ಸೇವಿತನೆ 18 ಆರು ವಿಧದ ಅನ್ನ ಸಾರು ಪಾಯಸ ಭಕ್ಷ್ಯಭೂರಿ ಶಾಕಗಳೀವೆ ನೀರಜಾಂಬಕನೆ 19 ಮಾರಜನಕನೆ ಮುತ್ತಿನಾರತಿ ಬೆಳಗುವೆಶ್ರೀರಾಮನೆ ನಿನ್ನ ಮೋರೆಯ ತೋರೊ20 ಛತ್ರ ಚಾಮರ ವ್ಯಜನ ದರ್ಪಣ ಪರ್ಯಂಕಕರ್ಪುರ ತಾಂಬೂಲವಿತ್ತು ಪೂಜಿಸುವೆ 21 ಹತ್ತಾರು ಉಪಚಾರ ಚಿತ್ರ ಚರಿತನೆ ನಿನಗೆಅರ್ಥಿಯಲಿ ಕೊಡುವೆನು ಮುಕ್ತಿ ನೀಡೆನಗೆ 22 ಇಂದಿರೇಶನೆ ನಿನ್ನ ಮುಂದೆ ತುತಿಪನೆ ನಿಂತುನಂದಬಾಲನೆ ಕೃಪೆಯಿಂದ ನೋಡೆನ್ನ 23
--------------
ಇಂದಿರೇಶರು
ಮಾನಾಗ, ಉರಿಯು ಹೆಣ್ಣು ಹೈಕಳ ಕೂಡೆಶ್ರೀನಾಥ ನಿನಗೆ ಸಲ್ಲದು ಮಕ್ಕಳಾಟ ಪ ತರಳ ನೀನೆಮ್ಮ ಸೀರೆಗಳನೆತ್ತಿಕೊಂಡುತರುವನೇರುತ ಕಕ್ಕಳ ಕೆಳೆವೆತರುವಳಿತನ ಸಾಕು ನಿನ್ನ ಪೇರುರದಲಿತರುಣಿ ನಗುತಾಳೆ ಪೊಕ್ಕಾಟ ಸಾಕು 1 ಅರಸಿನ ಮಗನೆಂದು ತಾಳಿದೆವಲ್ಲದೆಸರಸಿಜಾಕ್ಷಿಯ ಮನೆಯ ಮಳಲಲ್ಲಿಸರಸದೊಳಿಹರೆ ನಿನ್ನಂಗದೊಳಿರ್ದಸುರರೋಡಬೇಕು ಸಲ್ಲದು ಮಕ್ಕಳಾಟ2 ಬೊಮ್ಮ ನಿನ್ನುದರದ ಜಗನಿನ್ನ ಅಂಗದೊಳಿದ್ದ ಸುರಮುನಿಗಳುನಿನ್ನನೆ ನಗುವರೊ ನೀನರಿಯದೆ ಎಮ್ಮಚೆನ್ನ ಹೆದ್ದಾಟ ಹೊಕ್ಕಾಟ ಸಾಕು 3 ಕಾಲ ಪೆಂಡೆಯುಹೊಸ ಹೊಸ ಚೆನ್ನಿಗ ಪರಿಹಾಸ ಸಾಕೋ4 ತುತಿಸಿ ತುತಿಸಿ ಕಾಣರು ಬ್ರಹ್ಮರುದ್ರರುಮತಿಗೊಳಗಾಗೆ ಮುನೀಶ್ವರರಶ್ರುತಿಗಳು ನಿನ್ನನು ಪುಡುಕಲರಿಯವು ಬಾಲಸತಿಯರೊಡನೆ ಖೇಳಮೇಳವೆ ಸಾಕು 5 ಸ್ನಾನಮಾಡಲೀಯೆ ಮೌನಗೌರಿಯನೋನಲೀಯದೆ ಮೌನವ ಕೆಡೆಸಿಧ್ಯಾನ ಮಾಡಲೀಯೆ, ನಿನ್ನ ಚೆನ್ನಿಗರುಹಾನಿ ನೀಗುವರು ಎಂಬುದರಿಯೆವೊ 6 ಚೆಲುವರರಸ ಶಿಖರ ಶಿಖಾಮಣಿಯೆಲಲನೆಯರ ಮನ ಸೂರೆಗಾರಫಲಿಸಿತು ವ್ರತ ನಮ್ಮ ಕೃಷ್ಣ ನಿನ್ನೊಲುಮೆಯಬಲೆಗೆ ಸಿಕ್ಕದರಾರೊ ಸೊಬಗು ಸುಗ್ಗುಳಿಯೇ7
--------------
ವ್ಯಾಸರಾಯರು
ಮಾನಿನಿ ಆ ಮಹಾಭಕುತಿಗಭಿಮಾನಿ ಪ ಸುತ್ರಾಮ ಕಾಮ ರವಿ ಸೋಮವಿನುತೆ ಮದಸಾಮಜ ಗಮನೆ ನೀಲಕುಂತಳೆ ಮೋಹನ್ನೇ-ಸುವಾಣಿ ಚನ್ನೆ ಬಾಲಾರ್ಕ ತಿಲಕರನ್ನೆ ಫಾಲೆ ವಿಶಾಲೆ ಗುಣರನ್ನೆ -ಕುಂದರದನ್ನೆ ಮೂರ್ಲೋಕದೊಳು ಪಾವನ್ನೆ ಕಾಳವ್ಯಾಳ ವೇಣಿ ಮ್ಯಾಲೆ ರ್ಯಾಗಟೆ ಪೊ ನ್ನೊಲೆ ಚವುರಿಗೊಂಡ್ಯ ಹೆರಳು ಭಂಗಾರ ಕು- ನಾಸಿಕ ನೀಲೋ ತ್ಪಲೆ ನೇತ್ರಳೆ ಪಾಂಚಾಲಿ ಕಾಳಿ ನಮೋ 1 ಪೊಳಿವೊ ಕೆಂದುಟಿ ನಸುನಗೆ ಪತ್ತು ದಿಕ್ಕಿಗೆ ಬೆಳಕು ತುಂಬಿರಲು ಮಿಗೆ ಥಳಕು ವೈಯಾರದ ಬಗೆ ಮೂಗುತಿಸರಿಗೆ ಸಲೆ ಭುಜಕೀರ್ತಿ ಪೆಟ್ಟಿಗೆ ಥಳಥಳಿಸುವ ಕೊರಳೊಳು ತ್ರಿವಳಿ ನ್ಯಾ ವಳಿ ತಾಯಿತು ಸರಪಳಿಯ ಪದಕ ಪ್ರ ವಳ ಮುತ್ತಿನ ಸರಪಳಿಗಳು ತೊಗಲು ಎಳೆ ಅರುಣನ ಪೋಲುವ ಕರತಳವ 2 ಕಡಗ ಕಂಕಣ ಮಣಿದೋರೆ-ದೋಷ ವಿದೂರೆ ಝಡಿತದುಂಗುರ ಶೃಂಗಾರೆ ಮುಡಿದ ಮಲ್ಲಿಗೆ ವಿಸ್ತಾರೆ-ಕಂಚುಕಧರೆ ಉಡಿಗೆ ಶ್ವೇತಾಂಬರ ನೀರೆ ಬಡ ನಡು ಕಿಂಕಿಣಿ ನಿಡುತೋಳ್ಕದಳಿಯ ಪೊಡವಿಗೊಡೆಯ ನಮ್ಮ ವಿಜಯವಿಠ್ಠಲನ್ನ ಅಡಿಗಳರ್ಚಿಪುದಕೆ ದೃಢಮನ ಕೊಡುವಳ 3
--------------
ವಿಜಯದಾಸ
ಮಾಯಕಾರಳೆ ಕಾಯೊ ಕರುಣದಿ ಬಾಯಿ ಬಿಡುವೆನೆ ರುದ್ರಾಣಿ ಪ ನೋಯಲಾರದೆ ದೇವಿ ಮರೆಹೊಕ್ಕೆ ನೋವು ಕಳೆಯಮ್ಮ ಭವಾನಿ ಅ.ಪ ಭಕ್ತಜನರಿಗೆ ಆಪ್ತಮಾತೃ ನೀ ನಿತ್ಯೆ ನಿರ್ಮಲರೂಪಿಣೀ ಭೃತ್ಯನೊಳು ದಯವಿತ್ತು ಪೊರೆ ಆದಿ ಶಕ್ತಿ ದೈತ್ಯಸಂಹಾರಿಣಿ 1 ಶುಂಭ ನಿಶುಂಭರೆಂಬ ಖಳರ ಜಂಬ ಮುರಿದೌ ಚಂಡಿಕೆ ಅಂಬೆನಿನ್ನನು ನಂಬಿ ಭಜಿಪೆ ಇಂಬುಗೊಟ್ಟು ಸಲಹಂಬಿಕೆ 2 ಸುರರ ಮೊರೆಕೇಳಿ ದುರುಳÀರ್ಹಾವಳಿ ದೂರಮಾಡಿ ಶೌರಿಯೆ ನೀ(ರಟ)ಸಿದವರಿಗೆ ವರವ ಕರುಣಿಸಿ ಕರುಣ ದೋರಿದೌದರಿಯೆ 3 ಅನ್ನಪೂರ್ಣೆಯೆ ನಿನ್ನ ಪಾದ ವನ್ನು ಭಜಿಸುವೆ ಕಲ್ಯಾಣಿ ಭಿನ್ನವಿಲ್ಲದೆ ನಿನ್ನ ಸುತಗೆ ಸುಖ ವನ್ನು ಕೊಡೆ ನಾರಾಯಣೆ 4 ರಾಮದಾಸರ ಪ್ರೇಮ ಜನನಿಯೆ ನೇಮದಿಂ ನಿನ್ನ ಪಾಡುವೆ ಹೈಮಾವತಿ ಎನ್ನ ಕಾಮಿತಾರ್ಥವ ಪ್ರೇಮದಿಂ ನೀಡು ಕರುಣಿಯೆ 5
--------------
ರಾಮದಾಸರು
ಮಾಯಾ ಪ ನರದೇಹ ಎಂಬುದು ಎಂಥಾ ಮರವುನೀನೇ ಬ್ರಹ್ಮಾಂತ ತೋರಿದಿ ಅರಿವು 1 ತತ್ತ್ವಮಸಿ ಮಹಾವಾಕ್ಯ ಕೇಳಿ ಹಾರಿ ಹೋಯಿತು ದ್ವೈತದ ಧೂಳಿ 2 ಮುತ್ತು ಮಾಣಿಕ ಪೆಸರಾಯಿತು ಲೋಪತುಂಬಿ ಉಳಿಯಿತು ಚಿದಾನಂದ ಸ್ವರೂಪ 3
--------------
ಚಿದಾನಂದ ಅವಧೂತರು
ಮಾಯಾ ಭ್ರಮಿತನಾದ ಮೂಢನಪರಾಧ ಶತವನು ಪಗುಣ ಮೂರರೊಳು ಬದ್ಧನಾಗಿ ಮತ್ತೆಗುಣಕಾರ್ಯ ವಿಷಯಂಗಳೊಳು ಸಕ್ತನಾಗಿಗುಣ ಹತ್ತರಭಿಮಾನಿಯಾಗಿ ುಪ್ಪಗುಣಹೀನನಿಗೆ ಜ್ಞಾನ ದೊರಕೊಳ್ಳದಾಗಿ 1ಪುಣ್ಯ ಪಾಪ ಮಿಶ್ರವೆಂಬ ಕರ್ಮಜನ್ಯವಾದ ಸ್ಥೂಲದೇಹ ತಾನೆಂಬಭಿನ್ನಮತಿಗೆ ದೊರಕೊಂಬ ಜ್ಞಾನವಿನ್ನುಂಟೆ ನಿರ್ಣೈಸೆ ಸುಗುಣ ಕದಂಬ 2ಚಂಚಲವಾಗಿಪ್ಪ ಮನವು ಅಲ್ಲಿವಂಚನೆುಂ ಮಾಳ್ಪ ಸ್ತುತಿ ಪೂಜೆ ಜಪವುಸಂಚಿತವಾುತಘ ವ್ರಜವು ಹೀಗೆವಂಚಿಪ ಮಾಯೆಯ ಗೆಲಲಾರಿಗಳವು 3ಕರ್ಮಕಲಾಪವ ಕಳಿದು ಚಿತ್ತನಿರ್ಮಲನಾಗಿ ಬ್ರಹ್ಮವ ನೆರೆ ತಿಳಿದುಹಂಮಳಿದುಳಿವದೆಲ್ಲಿಯದು ನೀನುಸುಮ್ಮನಿರದೆ ಕಾಯೆ ಸುಲಭವಾಗಿಹುದು 4ಬಂಧನವಿದ ಪರಿಹರಿಸು ಕೃಪೆುಂದಲಿ ಭವದಿಂದಲೆನ್ನನುದ್ಧರಿಸು ತಂದೆ ನೀ ತಿರುಪತಿಯರಸು ಲೋಕಬಂಧು ಶ್ರೀ ವೆಂಕಟರಮಣ ನಿರೀಕ್ಷಿಸು 5ಓಂ ವಿಶ್ವರೂಪ ಪ್ರದರ್ಶಕಾಯ ನಮಃ
--------------
ತಿಮ್ಮಪ್ಪದಾಸರು
ಮಾರಕೋಟಿ ರೂಪ ಮೈದೋರು ನೀಂ ಪ ಸೇರಿ ಸುಖಿಸಲೆಂದು ಕೋರಿ ಭಜಿಸುತಿಪರ ಪಾರಕಾಂಕ್ಷಿಯಾದೆನ್ನ ಪಾರಗಾಣಿಸೆ ಅ.ಪ ಮುನ್ನ ಭಕ್ತಬಾಲ ಧ್ರುವನು ಕಷ್ಟದೊಳಗೆ ಯನ್ನ ಕಾಯೊಯೆಂದು ಬಿನ್ನಹಂಗೈಯಲ್ ಚನ್ನರೂಪತೋರಿದೆನ್ನತಾತ ನೀ ನಿನ್ನೂ ಏಕೆ ಬಾರದಿರ್ಪೆ ಜಾಜಿಶ್ರೀಶಾ 1
--------------
ಶಾಮಶರ್ಮರು
ಮಾರಪಿತನ ತೋರಿದಲ್ಲದೆ ನಾ ಬಿಡೆ ನಿನ್ನ ಪಾದವ ಪ ಧೀರ ಹನುಮ ಘೋರ ರೂಪವ ತೋರಿ ಪಾರಲು ದೂರ ನಾ ಸಾರೆನು ಅ.ಪ. ಭಾರ ಧರಿಸಿ ಕೋರೆ ತೋರುತ ಘೋರ ರೂಪದಿ ಪೋರನೆನ್ನಿಸಿ ನಾರಿ ಹತ್ಯದಿ ಚಾರುವನವ ಸೇರಿದವನ 1 ಜಾರನೆನ್ನಿಸಿ ನಾರಿ ಮಾನವ ಸೂರೆಗೊಳ್ಳುತ ಪಾರಿಪೋಗುವ ಶೂರ ತೇಜಿಯನೇರಿ ಮೆರೆದ ವಾರಿಜಾಕ್ಷನ ಧೀರ ಕಲ್ಕಿಯ 2 ದಾರಿ ತೋರದೆ ಸಾರಿ ನಿನ್ನನು ಕೋರಿ ಭಜಿಪೆನು ಬಾರಿ ಬಾರಿಗೆ ಭಾರತೀಶನೆ ತೋರು ಕರುಣದಿ ಸಾರಸಾಕ್ಷ ರಂಗೇಶವಿಠಲನ 3
--------------
ರಂಗೇಶವಿಠಲದಾಸರು
ಮಾರಮಣಾ ಹರಿ ಗೋವಿಂದಾ ಬಾರೋ ಕೊಂಡಾಡಿ ಪಡೆವೆನಾನಂದ ಪ ನಾರದಾದಿ ಮುನಿ ಬೃಂದಾನಂದ ಬಾರೋ ಭಕ್ತಕುಮುದೇಂದು ಮುಕುಂದಾ ಅ.ಪ ನಾನಾ ಜನುಮಗಳೊಳಗುದಿಸಿದೆವಯ್ಯ ಏನೆಂದು ಪೇಳಲಿ ನಿನಗೆ ಜೀಯ ನೀನೆನಗಿತ್ತಾ ತನುಗಳನಳೆಯಲು ಏನಪೇಳಲೈ ಭೂಮಿಗೆ ನಾಲ್ಮಡಿ ಸಾನುರಾಗದಿ ಜನನಿಯಿತ್ತಾ ಘೃತ ಪಾನಕ್ಷೀರ ವಾರಿಧಿಗಿಮ್ಮಡಿಯೋಳ್ ಬಾ 1 ನೋಡಿ | ಮನಕರಗದೆ ರುಕುಮಿಣಿ ರಮಣಾ ಮೃಡ ವಂದಿತ ಸರಸಿಜ ಚರಣಾ ಪಾಡೀ ಕೊಂಡಾಡುತಿರ ದೇಕೆ ನಿಷ್ಕರುಣಾ ಬೇಡಿದರ್ಗೆ ಕೈನೀಡುತೆ ದಾನವ ಮಾಡಲಿಲ್ಲವದರಿಂದ ದರಿದ್ರತೆ ಪೀಡಿಸವೈ ನಾ [ಮಾಡಿದ] ಪಾತಕವಾರ್ಜಿಸಿ ಜನುಮಂಗಳ ಪಡೆದೆನೊ ಬಾ 2 ಸುನಾಮ ನಮಿಸುವೆ ಸುಗುಣ ವಿರಾಮ ಸನ್ನುತ ವರಮಾಧವ ಕೋಮಲಾಂಗ ಸೋಮಶೇಖರಾಧಿಪ ಸುಮಚರಣವ ನೋಳ್ಪೆನೋ ಬಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಾರುತ ಒಲಿದವಗೆ ಮಾರಮಣನು ಒಲಿವಾ ಪ ಭಾರತೀರಮಣ ಮುನಿಯೆ ಭವಹರ ಹರಿ ಮುನಿವ ಅ.ಪ. ಸುಗ್ರೀವನು ಬಂದು ಹನುಮನ್ನ ಅನುಸರಿಸೆಶೀಘ್ರದಿಂದ ಹರಿ ವಾಲಿಯ ಕೊಂದನು ||ವಿಗ್ರಹದೊಳಗೆ ಕರ್ಣನ ಗೆದ್ದ ಅರ್ಜುನನುಅಗ್ರಜನ ಕೃಪೆ ಇದ್ದ ಕಾರಣಾ1 ಹನುಮಗ್ಹರಿ ಒಲಿಯಲು ರಾವಣನ ಒಂದುಕ್ಷಣದೊಳಗೆ ಹರಿ ಖಂಡಿಸಿದನು ||ಅನುಮಾನವಿಲ್ಲದೆ ಅವನನುಜ ವಿಭೀಷಣಗೆಘನ ಪದವಿಯನಿತ್ತ ಹನುಮ ಬೋಧಿತ ಹರಿ2 ದಾತ ದಾತ 3
--------------
ಮೋಹನದಾಸರು
ಮಾರುತಿ ನಿಲ್ಲಿಸಯ್ಯ ನಿನ್ನ ಮೂದಲೆ ಮಾರುತಿ ಪ ನಿಲ್ಲಸಯ್ಯ ನಿನ್ನ ಮೂರುತಿಫುಲ್ಲವಿಸಿದೆ ನಿನ್ನ ಕೀರುತಿಬಲ್ಲಭಕ್ತಿಪಥವ ತೋರುತಿಎಲ್ಲರೊಳಗೆ ಸುಖವ ಬೀರುತಿ ಅ.ಪ. ಗಾಡಿಕಾರ ರಾಮನನ್ನು ನೋಡಿ ನೋಡಿಯವನ ಮೂರ್ತಿಮೂಡಿನಿಂತ ನಿನ್ನ ಕಣ್ಣ ನೋಡಿ ಧನ್ಯನಪ್ಪೆ ಮೂರ್ತಿ1 ಪ್ರೇಮಭಕುತಿಯಿಂದ ನಿರುತ ರಾಮನನ್ನು ಭಜಿಸಿ ನುಡಿವನಾಮವೆನ್ನ ಪಾಪಿ ಕಿವಿಯ ಧಾಮದಲ್ಲಿ ಸೇರುವಂತೆ 2 ಎನ್ನ ಕಾಡುವಂಥ ದುರಿತವನ್ನು ಸೌಖ್ಯವನ್ನುಇನ್ನು ಕೊಡುವ ನಿನ್ನ ದಿವ್ಯ ಸನ್ನಿಧಿ ತಾನಾಗುವಂತೆ 3 ನಿತ್ಯ ಸೇವಿಪಂತೆ ಧೀರತೆ ಬರುವಂತೆ ಎನ್ನೊಳು 4
--------------
ವೀರನಾರಾಯಣ
ಮಾರುತಿ ನಿನ್ನಾ ನಿರುತದಿ ಭಜಿಪೆ ತ್ವರಿತದಿ ಹÀರಿ ಸರ್ವೋತ್ತಮನೆಂಬುವ ಸರಸ ವಿಜ್ಞಾನವ ಸರಿ ಇಲ್ಲದೆ ಇತ್ತು ಪರಿಪಾಲಿಸು ಎಂದು ಶಿರಸದಿ ನಮಿಪೆ ಆರಿಸಿ ನೋಡಲು ಆರಾರು ಇಲ್ಲವೊ ಕಾರುಣ್ಯಸಾಗರ ಕರುಣಿಸೆ ನೀ ಎನ್ನಾ ಹರಿ ತಾ ಕರುಣಿಪನೆಂದು ಅರಿತು ನಿನ್ನಯ ದಿವ್ಯ ಚರಣ ಸೇರಿದೆನಯ್ಯಾ ಸರಿಬಂದದ್ದು ಮಾಡೋ ಹರಿ ಕುಲಾವರಿಯಾನೆ ಪರಿಪರಿ ಜನರನ್ನು ಪಾಲಿಸಿ ಎನ್ನನು ದೂರದಿ ಇಟ್ಟರೆ ದೊರೆತನವೇನಯ್ಯಾ ಸಾರುವೆ ಸಾರುವೆ ಸರಸಿಜನಾಭನ ಸುತನೆ ಆರುಮೂರೆರಡೊಂದು ಸಾವಿರಾ ಮೂರೆರಡು ಶತಶ್ವಾಸ ಜಪಗಳನು ಮೂರುಜೀವರಲ್ಲಿ ನೀರಜಜಾಕಲ್ಪ ಪರಿಯಂತರ ಮಾಡಿ ಅವರವರ ಗತಿಯಾ ಮರಿಯದೆ ನೀಡುವಿ ಗಿರಿಶಾನುತಪಾದ ಗುರುಜಗನ್ನಾಥ ವಿಠಲನ್ನ ಅರಿವಂತೆ ಮಾಡೋ ಧೀರಾ ಕರುಣಿಯೇ
--------------
ಗುರುಜಗನ್ನಾಥದಾಸರು
ಮಾರುತಿಯೆ ಕೃಪೆ ಮಾಡೈ ವರ ಪ ಪ್ರಾಣ ಹರ ಗಂಭೀರನೆ ಅ.ಪ. ಕಾಲ ವಕ್ಷ ವಿಮಲ ಪಕ್ಷ 1 ವಾತ ಲಂಕೇಶ ಮುಖ ಭೀತಿಸಂದಾಯಕ2 ವಿವರ್ಜಿತ ಭೀಮ ನಿತ್ಮಾತ್ಮಕ 3 ಕಾನನ ಗೋಚರ ವಾನರ ಪುಂಗವ ಜನಕೀ ಪ್ರಾಣದ ಧೇನುನಗರಹಿತ4
--------------
ಬೇಟೆರಾಯ ದೀಕ್ಷಿತರು
ಮಾರ್ಗವೇ ಕಾಣಿಸದು ವೈಕುಂಠಕೆ ಪೇರ್ಗಿರಿಗಳ ದಾಂಟಲಾರ್ಗಳವೋ ಕಾಣೆ ಪ ಭೋರ್ಗರೆವುದು ಬಲಮಾರ್ಗದಿ ಜಲನಿಧಿ ಕಾರ್ಗಡಲು ಎಡ ಮಾರ್ಗದಿ ಕಗ್ಗತ್ತಲೆ ಅ.ಪ ಹಿಂದೆ ಮೃಗಂಗಳ ಸಂದಣಿಯಾರ್ಭಟ ದಿಂದ ಮನದ ದೈರ್ಯಕುಂದಿದುದಕಟ ಮ ಹಾಂಧಕೂಪದೊಳೆನ್ನ ಎದೆ ಕುಸಿದು ಬಂಧಿಸಿತೆನ್ನ ಕಾವ ಬಂಧುಗಳಿಲ್ಲ 1 ಕೂಪದಿ ಕ್ರಿಮಿಗಳು ಕೋಪಿಸಿ ತನುವನು ಈ ಪರಿಯೆಲ್ಲವು ತಾಪತ್ರಯಂಗಳ ಧೂಪ ದೀಪಗಳ ಪಾಪದ ಫಲವೋ 2 ದಡವನು ಕಾಣದೆ ತಡಬಡಿಸುವೆನೋ ಮೃಡನು ತಾ ಮಾಂಗಿರಿಯೊಡೆಯ ಶ್ರೀರಂಗ ಕಡುಪಾತಕಿಯ ಕೈಹಿಡಿದೆತ್ತಿ ಕೃಪೆಯಿಂದ ತಡಿಗೆ ಸೇರಿಸಿ ನಿನ್ನ ಅಡಿಯಪಿಡಿಸೋ ದೇವಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್