ಒಟ್ಟು 3977 ಕಡೆಗಳಲ್ಲಿ , 126 ದಾಸರು , 2593 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದನು ರಘುವೀರ ರಣಧೀರ ಪ ತಡೆ ಭರತನೆ ಮುಂದಡಿಯಿಡಬೇಡ ದುಡುಕಿ ಬೀಳದಿರು ಬಡಜನ ಮುಖಕೆ 1 ಸೀತಾನಾಥನ ದೂತನಾದೆನ್ನ ಮಾತನು ಕೇಳು ಆತುರಪಡದೆ 2 ಭ್ರಾತನ ನೋಡಲು ಕಾತರನಾಗಿ ವಾತವೇಗದೊಳು ಆತನು ಬರುತಿಹ 3 ಅದೊ ನೋಡದೊ ನೋಡದರ ದೆಶೆಯಲಿ ವಿದುಶತಕಿಲ್ಲದಗದಿರದದ್ಯುತಿಯ 4 ಅದೊ ಪುಷ್ಪಕವು ಅದರ ಪ್ರಭೆ ನೋಡು ಅದರಿರವ ನೋಡು ಒದಗಿ ಬರುತಿದೆ 5 ಧಾಮ ಮಧ್ಯೆ ನಿ ಸ್ಸೀಮ ನಿಮ್ಮಣ್ಣ ರಾಮನ ನೋಡು 6 ವಾಮದಿ ಸೀತಾಭಾಮೆ ಕುಳ್ಳಿಹಳು ಪ್ರೇಮದಿ ಲಕ್ಷ್ಮಣ ಚಾಮರ ಬೀಸುವ 7 ಬಲದಿ ಸುಗ್ರೀವ ನೆಲೆಸಿಹ ನೋಡು ಕೆಲದಿ ವಿಭೀಷಣ ನಲಿಯುತ ನಿಂತಿಹ8 ಅಂಗದ ತನ್ನಯ ಜಂಘೆಲಿ ದೇವನ ಮಂಗಳ ಚರಣವ ಹಿಂಗದೆ ಸೇವಿಪ 9 ವೃದ್ಧ ಜಾಂಬವ ಗದ್ದುಗೆ ಮುಂದಿಹ ಯುದ್ಧ ಪ್ರವೀಣರು ಸಿದ್ಧರಾಗಿಹರು 10 ಉಳಿದ ಕಪಿ ದನುಜ ದಳಗಳು ಹಿಂದೆ ಕಲಕಲ ಮಾಡುತ ಉಲಿಯುತಲಿಹವು 11 ಅರರೆ ವಿಮಾನವು ತಿರುಗಿತು ನೋಡು ಧರಣಿಗೆರಗುತಿದೆ ಭರದೊಳು ನೋಡು 12 ಭಳಿರೇ ರಾಮನು ಇಳಿದನು ನೋಡು ಕಳವಳವೆಲ್ಲವ ಕಳೆಯುತ ನೋಡು 13 ಬಂದನು ಅದಕೊ ಬಂದೇ ಬಂದನು ಇಂದುಮುಖಿಯ ತಾ ಹಿಂದಿಟ್ಟುಕೊಂಡು14 ಮುಂದೆ ಬರುವ ಕಪಿಯನು ಉಳಿದು ಸುಂದರ ಮುಖವು ಕುಂದಿದೆ ನೋಡು 15 ನಡೆದು ಬರುತಿಹ ಮಡದಿಯೊಡಗೂಡಿ ತಡಮಾಡದಿರು ಪೊಡಮಡು ಪೋಗು 16 ಇಂತು ನುಡಿದು ಧೀಮಂತನಾದ ಹನು- ಮಂತ ಚಿಗಿದು ಖಗನಂತೆ ಬಂದಿಳಿದ17 ವಾತಸುತನ ಸವಿಮಾತಲಿ ಭರತನು ಪ್ರೀತಿಲಿ ತಿರುಗಿದನಾತುರದಿಂದ 18 ನೋಡುತ ರಾಮನ ಓಡುತ ಬಂದೀ ಡಾಡಿದ ತನುವ ಬಾಡಿದ ಮುಖದಿ 19 ಅನುಜನ ನೋಡಿ ದನುಜಾರಿಯಾಗ ಮನ ಮರುಗಿದ ಬಲು ಕನಿಕರದಿಂದ 20 ರಂಗೇಶವಿಠಲ ಕಂಗಳ ಜಲದೊಳು ಮಂಗಳಯುತನಾಲಿಂಗನಗೈದ 21
--------------
ರಂಗೇಶವಿಠಲದಾಸರು
ಬಂದರು ನಾರದರ್ಹರುಷದಲಿ ನಿಂದು ಯಜ್ಞ ನೋಡುತ ಮುದದಿ ಇಂದು ಯಾರಿಗರ್ಪಣೆ ಮಾಡುವಿರೆನೆ ಬಂದಿತು ಸಂಶಯ ಋಷಿಗಳಿಗೆ ಮಂಗಳಂ ಜಯ ಮಂಗಳಂ ಪ ತ್ವರದಿಭೃಗು ಮುನಿಗಳು ಹೊರಡುತಲಿ ಹರಬ್ರಹ್ಮರು ಸರಿಯಲ್ಲೆನುತ ಹರಿವೈಕುಂಠದಿ ಮಲಗಿರೆ ನೋಡುತ ಭರದಿಂದೊದೆಯೆ ವಕ್ಷಸ್ಥಳಕೆ ಮಂಗಳಂ ಜಯ ಮಂಗಳಂ 1 ನೊಂದಿತು ಪಾದವೆಂದುಪಚರಿಸೆ ಇಂದಿರಾದೇವಿ ಕೋಪಿಸಿ ತೆರಳೆ ಬಂದು ಋಷಿಗಳಿಗರುಹಿದರು ಶ್ರೀಗೋ- ವಿಂದಗೆ ಸಮರಿಲ್ಲೆಂದೆನುತಾ ಮಂಗಳಂ ಜಯ ಮಂಗಳಂ 2 ಮಡದಿ ಇಲ್ಲದೆ ಬೇಸರ ಪಡುತಾ ಪೊಡವಿಗಿಳಿದು ಹುತ್ತದೊಳಗಿರಲು ಕೊಡಲಿಯ ಗಾಯಕೌಷಧ ಹುಡುಕುತ ಹರಿ ಅಡವಿಗಳಲಿ ಸಂಚರಿಸಿದಗೆ ಮಂಗಳಂ ಜಯ ಮಂಗಳಂ3 ಭೂಮಿಗೊಡೆಯ ವರಹನನು ನೋಡಿ ಕಾಮಿನಿ ಬಕುಳೆ ಸೇವೆಗೆ ಮಾಡಿ ಕಾಮಜನಕ ಬೇಟೆಗೆ ಹೊರಟನು ಬಹು ಪ್ರೇಮದಿಂದಲಂಕರಿಸಿದ ಹರಿಗೆ ಮಂಗಳಂ ಜಯ ಮಂಗಳಂ4 ವನವನ ಚರಿಸಿ ಸ್ತ್ರೀಯರ ನೋಡಿ ವನಜಾಕ್ಷೇರು ನಡುಗುತ ಭಯದಿ ಘನಮಹಿಮಗೆ ಕಲ್ಲು ಕಲ್ಲೆಸೆಯೆ ಹಯ ವನದಿ ಮೃತಿಸೆ ಗಿರಿ ಏರಿದಗೆÉ ಮಂಗಳಂ ಜಯ ಮಂಗಳಂ 5 ಕಾಮಿನಿ ಬಕುಳೆಗೆಲ್ಲವ ಪೇಳಿ ಕೋಮಲೆ ಕೊರವಿ ರೂಪವ ತಾಳಿ ವ್ಯೋಮರಾಜನ ಪುರದಲಿ ಧರಣಿಗೆ ಸಾಮುದ್ರಿಕೆ ಪೇಳಿದ ಹರಿಗೆ ಮಂಗಳಂ ಜಯ ಮಂಗಳಂ 6 ವಶಿಷ್ಟ ಕಶ್ಯಪರು ಶುಕರುಗಳು ವಿಶಿಷ್ಟ ಬಂಧುಗಳ ಕರೆಸುತಲಿ ಪಟ್ಟದರಸಿ ಲಕುಮಿಯು ಬರೆಹರುಷದಲಿ ಕಟ್ಟಿ ಮಾಂಗಲ್ಯ ಹರಿ ಪದ್ಮಿನಿಗೆ ಮಂಗಳಂ ಜಯ ಮಂಗಳಂ 7 ಜಯ ಜಯ ವೆಂಕಟ ಪದ್ಮಿನಿಗೆ ಜಯ ಜಯ ಪದ್ಮಾವತಿಪ್ರಿಯಗೆ ಜಯ ಜಯ ಕಮಲನಾಭ ವಿಠ್ಠಲಗೆ ಜಯ ಜಯ ಶ್ರೀ ಶ್ರೀನಿವಾಸನಿಗೆಮಂಗಳಂ ಜಯ ಮಂಗಳಂ 8
--------------
ನಿಡಗುರುಕಿ ಜೀವೂಬಾಯಿ
ಬಂದರು ಹರಿಯ ವಾಲಗಕೆ ಭಕ್ತ | ವೃಂದ ಸಹಿತ ಸುರ ಶ್ರೇಷ್ಠ ಮೊದಲಾದವರು ಪ ನಾಗಾರಿ ಸುತ ಬಂದ | ನಾಗಾರಿ ಬಂದಾ | ನಾಗಾನ ಧನು ಬಂದ ನಾಗಪುಂಗವ ಬಂದ | ಗಮನ ಬಂದ | ನಾಗ ಬಂದಾ || 1 ನಾಗಶಯ ಮುಖವಾದ ನಾಗವಾಹನ ಮಿತ್ರ | ನಾಗ ಚರ್ಮಾಂಬರ ಸಖನು ಬಂದಾ | ನಾಗಾರಿ ಸುತೆಯಳನಾಳಿದವನು ಬಂದಾ | ನಾಗಾರಿ ಬಾಂಧವ ಬಂದಾ || 2 ನಾಗದ್ವೇಷಿಕನು ನಾಗಾನಾದನನುಜ | ನಾಗಕೇತನನ ಕೊಂದಗ್ರಜನು ಬಂದಾ | ಸಿರಿ ವಿಜಯವಿಠ್ಠಲರೇಯ | ನಾಗವಾಹನನಾಗಿ ಬರುವ ಸಂಭ್ರಮದೊಳು ||3
--------------
ವಿಜಯದಾಸ
ಬಂದಾ ಸುಂದರವದನ ಮಂದಹಾಸದಿ ರಘು ನಂದನ ಧನು ಬಳಿಗೆ ಪ ವಂದಿಸಿ ಕೌಶಿಕಗೆ ತಂದೆಯ ನೆನೆದು ಆ ನಂದ ಮನದಲಿ ಮುಂದೆ ಮುಂದಕೆ ನಡೆದು ಚಂದದಿ ಬರುತಿಹ ಅಂದನೋಡಿ ಮುನಿ ವೃಂದ ಮನದೊಳಾನಂದವ ಪೊಂದುತ ಇಂದಿರೇಶನಿವನೆಂದು ತಿಳಿದು ಭೂ ನಂದನೆ ಇವನವಳೆವಂದು ಪೇಳುತಿರೆ ಅ.ಪ. ಸಿಂಧುಶಯನ ಭಜಕ ಮಂದಾರ ಮುನಿಜನ ವೃಂದ ಕುಮುದ ಚಂದ್ರ ಮಂದಜಾಸನ ವಂದ್ಯ ಸಿಂಧುಸುತಾಲೋಲ ಸಿಂಧೂರ ಪರಿಪಾಲ ಸಿಂಧೂರ ಗಮನದಿ ಸಿಂಧೂ ಗಂಭೀರ ಬರೆ ಇಂದುವದನೆಯರು ಚಂದವ ನೋಡುತ ಇಂದೀವಗೇ ಜಯವೆಂದು ನುಡಿಯುತಿರೆ ಇಂದುಧರನ ಧನು ಬಂಧನ ಮಾಡಲು ಇಂದಿರೇಶ ಶ್ರೀ ಕರಿಗಿರಿ ಮಂದಿರ 1
--------------
ವರಾವಾಣಿರಾಮರಾಯದಾಸರು
ಬಂದಿದೆ ದೂರು ಬರಿದೆ ಪಾಂಡವರಿಗೆ ಪ ಕೊಂದವರಿವರು ಕೌರವರನೆಂಬಪಕೀರ್ತಿ ಅ ಮುನ್ನಿನ ವೈರದಿ ಕಡು ಸ್ನೇಹವ ಮಾಡಿಉನ್ನತ ಲೆತ್ತ ಪಗಡೆಯಾಡಿಸಿತನ್ನ ಕುಹಕದಿಂದ ಕುರುಬಲವ ಕೊಂದವನುಘನ್ನಘಾತಕ ಶಕುನಿಯೊ ಪಾಂಡವರೊ 1 ಮರಣ ತನ್ನಿಚ್ಛೆಯೊಳುಳ್ಳ ಗಾಂಗೇಯನುಧುರದೊಳು ಷಂಡನ ನೆಪದಿಂದಲಿಸರಳ ಮಂಚದ ಮೇಲೆ ಮಲಗಿ ಮೊಮ್ಮಗನಕೊರಳ ಕೊಯ್ದವನು ಭೀಷ್ಮನೊ ಪಾಂಡವರೊ 2 ಮಗನ ನೆಪದಿ ಕಾಳಗವ ಬಿಸುಟು ಸುರನಗರಿಗೈದಲು ವೈರಾಗ್ಯದಲಿಜಗವರಿಯಲು ಕುರುವಂಶಕ್ಕೆ ಕೇಡನುಬಗೆದು ಕೊಂದವನು ದ್ರೋಣನೊ ಪಾಂಡವರೊ3 ತೊಟ್ಟ ಬಾಣವ ತೊಡಲೊಲ್ಲದೆ ಮಾತೆಗೆಕೊಟ್ಟ ಭಾಷೆಗೆ ಐವರ ಕೊಲ್ಲದೆನೆಟ್ಟನೆ ರಣಮುಖದಲಿ ತನ್ನ ಪ್ರಾಣವಬಿಟ್ಟು ಕೊಂದವನು ಕರ್ಣನೊ ಪಾಂಡವರೊ 4 ಮಥನಿಸಿ ಸೂತತನವ ಮಾಡಿ ರಣದೊಳುಅತಿಹೀನಗಳೆಯುತ ರವಿಸುತನರಥದಿಂದಿಳಿದು ಪೋಗಿ ಕೌರವಬಲವನುಹತ ಮಾಡಿದವನು ಶಲ್ಯನೊ ಪಾಂಡವರೊ 5 ಜಲದೊಳು ಮುಳುಗಿ ತಪವ ಮಾಡಿ ಬಲವನುಛಲದಿಂದೆಬ್ಬಿಸಿ ಕಾದುವೆನೆನುತಕಲಿ ಭೀಮಸೇನನ ನುಡಿಗೇಳಿ ಹೊರವಂಟುಕುಲವ ಕೊಂದವನು ಕೌರವನೊ ಪಾಂಡವರೊ6 ಕವುರವ ಪಾಂಡವರಿಗೆ ಭೇದ ಪುಟ್ಟಿಸಿಪವುಜೊಡ್ಡಿ ಕುರುಕ್ಷೇತ್ರದಿ ಕಾದಿಸಿಸವುಶಯವಿಲ್ಲದೆ ಕುರುಬಲವ ಕೊಂದವನುಹಿವುಸಕನಾದಿಕೇಶವನೊ ಪಾಂಡವರೊ 7
--------------
ಕನಕದಾಸ
ಬಂದು ನಿಲ್ಲೋ | ಕಣ್ಣ ಮುಂದೆ ಪ ಬಂದು ನಿಲ್ಲೋ ನಿನ್ನ ಪಾದಕ್ಕೆ ವಂದಿಪೆ ಇಂದಿರೆಯರಸಾ ಗೋವಿಂದ ಮುಕುಂದಾ ನೀ ಅ.ಪ. ಅರಳಿದ ಕೆಂದಾ | ವರೆಯ ಧಿಕ್ಕರಿಸುವ ಚರಣಾರವಿಂದವ | ನಿರುತ ತೋರು ನೀನು 1 ಭ್ರಮರ ಕುಂಡಲ ಮಂಡಿತ || ಮೇಲಾದ ರಾಕೇಂದು | ಮುಖವ ತೋರಿಸುತಲೀ2 ಪದುಮನೇತ್ರನೆ ನಿನ್ನ | ಸದನವೆನುತಯೆನ್ನ || ಹೃದಯದೊಳಗೆ ನಿಂತು ನಾ | ಮುದದಿ ಭಜಿಸುವಂತೇ 3 ಕರಿಯ ಮೊರೆಯ ಕೇಳಿ | ಕರುಣದಿಂ ಬಂದಂತೆ || ಕರೆದಾಗ ನಿನ್ನ ದಿವ್ಯ | ಚರಣಾವ ತೋರಿಸುತಾ4 ಅಜಭವಾದಿಗಳಿಗೆ | ನಿಜಪದವನಿತ್ತಂತೆ || ಭಜಿಪ ಭಕ್ತರಿಗೊಲಿವ | ವಿಜಯವಿಠ್ಠಲರೇಯಾ5
--------------
ವಿಜಯದಾಸ
ಬಂದೆನವ್ವ ಭಾವಕಿಯರನ್ನೆತಂದೆನವ್ವ ಕುಶಲವಸಿಂಧುಶಯನನ ಮುಂದೆನಿಂದು ಸುದ್ದಿ ಹೇಳಿದೆನವ್ವ ಪ. ಅಚ್ಯುತ ಕರವ ಮುಗಿದು ಹೇಳಿದೆನವ್ವ 1 ಮಂದಗಮನೆಯರ ಕೋಪ ಮಂದವಾದ ಮ್ಯಾಲವ್ವಸಿಂಧುಶಯನನ ಮುಂದೆ ನಿಂದು ಸುದ್ದಿ ಹೇಳಿದೆನವ್ವ 2 ಅಚ್ಯುತ ಶಾಂತನಾದ ಮ್ಯಾಲವ್ವಇಂತು ರಾಮೇಶನ ಮುಂದೆ ನಿಂದು ಸುದ್ದಿ ಹೇಳಿದೆನವ್ವ 3
--------------
ಗಲಗಲಿಅವ್ವನವರು
ಬಯಲ ಜಾತ್ರೆಗೆ ನಡೆಹೋಗುವ ಬಾರದಲೆ ಅಲ್ಲಿರುವ ಪ ಶಾಂತಿ ಎಂದೆಂಬ ಕಂಟಲೆಗಳು ಶಮೆ ಹುರಿಗೆಜ್ಜೆ ಎತ್ತುಗಳುದಾಂತಿ ಎಂದೆಂಬ ಕಾವಡಿಗಳು ದಮೆ ಎಂಬ ಹೂಜೆಗಳು1 ಮಂಗಳವೆಂಬ ಬಾಲಕರು ಮುಕ್ತಿ ಎಂಬ ಮುತ್ತೈದೆಯರುಸಂಗ ಹರರಹ ವಿಟಗಾರರು ಸೈರಣೆ ಎಂಬ ಹಿರಿಯರು 2 ಸಂತೋಷವೆಂಬ ಅಂಗಡಿಗುಂಪು ಸಹಜದ ಹೂಕಂಪುಶಾಂತರೆನಿಪ ದೊರೆಗಳ ಗುಂಪು ಸುಖ ಛತ್ರಿಯ ತಂಪು 3 ಓಂಕಾರನಾದದ ನಗಾರಿ ವೀಣಾನಾದದ ತುತ್ತೂರಿಸಂಕಲ್ಪ ಸುಳ್ಳೆಂಬ ತಂಬೂರಿ ಸಾಮವೆನಿಸುವ ಭೇರಿ 4 ಅಮೃತ ಬಿಂದುವಿನ ಮೊಗೆಯುದಾರಿದಾರಿಗೆ ಸೋಹಂಸ್ಮರಣೆ ದೃಢ ಮನವದು ಚಡಿಯು 5 ಆನಂದ ವನಗಳ ಸಾರುತ ಆಯಾಸ ಕಳೆಯುತ್ತಸ್ವಾನಂದ ಗೋಪುರ ಕಾಣುತ ಸುಮ್ಮಾನವ ಪಡೆಯುತ6 ಮೃಢನಾಳ ದ್ವಾರವ ಪೋಗುತ ಮುಂದೆ ಚಂದ್ರನ ಕಾಣುತಅಡರಿದ್ವಿದಳ ಸದರೇರುತ ಅತ್ತತ್ತ ಸಾರುತ 7 ಕಮಲ ಪೀಠವನೇರುವರ ಮಹೇಶನೆನ್ನು ಅವರ8 ತುರೀಯವೆಂದೆಂಬ ಬಯಲಗೂಡಿ ತಾವು ಹೋಗುವ ನಾಡಿಹರ್ಷದ ಧೂಳ ದರ್ಶನ ಮಾಡಿ ಹಾಯಿಗುಡಾರ ಹೂಡಿ9 ಶಿಂಶುಮಾರವೇ ದೇವರ ಪೀಠ ಸಿದ್ಧವೆಂಬ ಕವಾಟಸಂಶಯವಿಲ್ಲದ ಎಡೆಯಾಟ ತತ್ಪುರುಷರ ಕೂಟ10 ಸೂರ್ಯ ಕೋಟಿಗೆ ಘನವುಒತ್ತೊತ್ತು ಪೂರ್ಣಾಭಿಷೇಕ ಓಂ ಎಂದೆಂಬ ಸ್ವರವು 11 ಸುವಾಸನೆ ಎಂದೆಂಬ ಧೂಪವು ಸುಂದರ ಪುಷ್ಪಗಂಧತಾವು ಮಾಡುವ ಭಾವದಲಿಂದ ತೃಪ್ತಿ ನೈವೇದ್ಯ ಚಂದ12 ಎರಡಿಲ್ಲದೇಕಾರ್ತಿ ಬೆಳಗುತ ಎಲ್ಲೆಡೆ ತಾ ಹೊಳೆಯುತಹೊರ ವೊಳಗೆಂಬುದ ಮರೆಯುತ ಹೇಮದ ತಗಡಾಗಿ ಇರುತ13 ಬೆಳಕ ಕಂಡಾರತಿ ಎತ್ತುತ ಬೆಳಗನು ಬೆಳಗುತ್ತತಿಳಿದು ಪ್ರದಕ್ಷಿಣೆ ಮಾಡುತ ತೋರುವುದು ಬ್ರಹ್ಮವದೆನ್ನುತ 14 ಭಯದ ವಿಸರ್ಜನೆ ಮಾಡುತ ಬಯಲಾಗಿಯೆ ತೋರುತಬಯಲ ಚಿದಾನಂದನಿಗೆರಗುತ್ತ ಬ್ರಹ್ಮನಾಗಿ ತಾನಿರುತ 15
--------------
ಚಿದಾನಂದ ಅವಧೂತರು
ಬಯಸಿ ಕರೆದರೆ ಬರುವರೇನಯ್ಯಾ ನರಹರಿಯ ದಾಸರು ಬಯಸಿ ಕರೆದರೆ ಬರುವರೇನಯ್ಯಾ ಪ ಬಯಸಿಕರೆದರೆ ಬರುವರೇನೋ ಜಯಶ್ರೀ ಮುರಹರಿಯ ನಾಮ ಓದಿ ಕಳೆದುಕೊಂಡ ಶೂರರು ಅ.ಪ ಮಹ ವಿಷಯಲಂಪಟ ಬಿನುಗು ತ್ರಿಗುಣೆಂಬ್ಹೇಸಿಕೆಯ ಬಳಿದು ಸುಸ್ಸಂಗಶ್ರವಣ ಮನನದಿಂ ನಿಜಮೂಲ ಮರ್ಮರಿದು ಆಸನವ ಬಲಿದು ಲೇಖ್ಯದಮೇಲೆ ಘನ ಅನಂದದಿರುವರು 1 ಆರು ದ್ವಯಗಜ ಇಕ್ಕಡಿಯ ಗೈದು ಬಿಡದ್ಹಾರಿಬರುವ ಆರು ಹುಲಿಗಳ ತಾರ ಸೀಳೊಗೆದು ಬಲುಘೋರಬಡಿಪ ಆರುನಾಲ್ಕು ಶುನಕಗಳು ತುಳಿದು ಸತ್ಪಥವ ಪಿಡಿದು ಸಾರಾಸಾರ ಸುವಿಚಾರಪರರಾಗಿ ಮಾರನಯ್ಯನ - ಪಾರಮಹಿಮೆಯ ಅಮೃತ ಪೀರುವವರು 2 ತಾಸಿನ ಜಗಮಾಯವೆಂದರಿದು ಇದು ಸತ್ಯವಲ್ಲೆಂದು ಬೇಸರಿಲ್ಲದೆನುಭವದಿ ದಿನಗಳೆದು ಸುಚಿಂತದನುದಿನ ದಾಸದಾಸರ ಸಾಕ್ಷಿಗಳ ತಿಳಿದು ನಿಜಧ್ಯಾಸದ್ಹುಡಿಕ್ಹಿಡಿದು ನಾಶನಭವದ್ವಾಸನೆಯ ನೀಗಿ ಸಾಸಿರನಾಮದೊಡೆಯ ನಮ್ಮ ಶ್ರೀಶ ಶ್ರೀರಾಮಚರಣಕಮಲದಾಸರಾಗಿ ಸಂತೋಷದಿರುವರು 3
--------------
ರಾಮದಾಸರು
ಬರಡು ಕಣ್ಗಳಿದ್ದರೇನು ಮನದ ಕಣ್ಣ ತೆರೆಯದ ಪ. ತರಳಗೊಲಿದ ವರದರಾಜದೊರೆಯ ನಿಜವನರಿಯದ ಅ.ಪ. ನಾರದಾದಿ ಮೌನಿವರರು ಸಾರಿಬಂದು ಸೇವಿಸಿ ಸಾರಸಾಕ್ಷನ ಮನವನೊಲಿಸಿ ಸಾರಭೂತರೆನಿಸಿದರು ಮನದ ಕಣ್ಣ ತೆರೆಯದಿಂತು 1 ತರಳಗೊಲಿದು ಕಂಬದಿಂದ ಬಂದು ಹಿರಣ್ಯನುರವ ಬಗೆದು ಕರುಳಮಾಲೆ ಧರಿಸಿ ಮೆರೆವ ನರಹರಿಯ ಕಾಣದ 2 ಈ ಕಳಂಕವೆಲ್ಲ ತೊಳೆದು ಶ್ರೀಕಟಾಕ್ಷಕೆ ಪಾತ್ರನಾಗಲು 3 ಶರಧಿಶಯನ ಪರಮಪಾವನೆ ಶರಣರಕ್ಷಕನೀತನ ವರದ ಶೇಷಶೈಲಧಾಮನ ವರದಿ ಪಡೆವೆ ಮನದಕಣ್ಗಳಂ 4
--------------
ನಂಜನಗೂಡು ತಿರುಮಲಾಂಬಾ
ಬರಬಾರದಾಗಿತ್ತು ಬಂದೆನಯ್ಯಾ ಪ ಕರೆತರಲು ಬಂದುದಕೆ ಫಲವೇನೊ ದೇವಾಅ.ಪ ತರಳತನದಲ್ಲಿ ಎನ್ನ ಕರಣಗಳು ಮಾಡಿದ ಪರಿಪರಿಯ ಕ್ರೀಡೆಗಳ ಫಲವೇನೊ ಎನಗೆ ದುರುಳ ಸಂಗದೊಳಿದ್ದು ಹರುಷದಿಂದಲಿ ಎನ್ನ ಆಯುವನು ಕಳೆದೆ1 ಸತಿಸುತರು ಹಿತರಿವರು ಎನಗೆಂದು ಉಬ್ಬುಬ್ಬಿ ಮಿತಿ ಇಲ್ಲದಾ ಕಾರ್ಯಗಳನೆ ಮಾಡೀ ಗತಿಯೇನು ಮುಂದು ಹಿತವು ಯಾವುದು ಎಂದು ಮತಿಗೆಟ್ಟಮೇಲೆನಗೆ ಗೊತ್ತಾಗುವುದೆಂತೋ 2 ಶ್ವಾನ ಸೂಕರಗಳು ಸ್ವೇಚ್ಛೆಯಿಂದಲಿ ಚರಿಸಿ ತನ್ನ ಪರಿವಾರವನೆ ತಾ ಪೊರೆಯುತಿಹವೋ ಎನ್ನ ಸತಿಸುತರುಗಳ ಉದರಪೋಷಣೆಗಾಗಿ ಹೀನಸೇವೆಯಿಂದ ಉಪಜೀವಿಸಲು ಬಹುದೆ 3 ತನುಬಲವು ಇದ್ದಾಗ ಕೋಣನಂದದಿ ತಿರುಗಿ ಜ್ಞಾನ ಕರ್ಮಗಳನ್ನು ಆಚರಿಸದೇವೆ ಧನ ವನಿತೆ ಮೋಹಕೆ ಕೊನೆಮೊದಲು ಇಲ್ಲದೆ ಮನವೆಲ್ಲವನು ನಾನು ಹೊಲೆಗೆಡಿಸಿದಮೇಲೆ4 ವಿಕಳಮತಿಯನು ಹರಿಪ ಅಕಳಂಕ ಹರಿಭಕ್ತ- ರಕುಟಿಲಾಂತಃತರಣ ದೊರೆತು ಎನ್ನ ಸಕಲಾಪರಾಧಗಳ ಕ್ಷಮಿಸುವರ ಸಂಗ ನೀ ಕರುಣಿಸದಿದ್ದ ಮೇಲೆ ಶ್ರೀ ವೇಂಕಟೇಶಾ 5
--------------
ಉರಗಾದ್ರಿವಾಸವಿಠಲದಾಸರು
ಬರಬಾರದೇನೋ ಹರಿಯೇ | ಹೇ ದೊರೆಯೆ ಪ ಕರೆದು ಚೀರುತಲಿರೇ | ಮರೆಯಲಿಪ್ಪುದು ಥರವೇ ಅ.ಪ. ಅಕ್ಷಯ ಹಾಕೀ | ಭರದಿ ಸಲಹಿದೆ ಅಂದೂ1 ಸರಿ ಅಧಿಕರು ನಿನಗೇ | ನರ ಸುರರಲಿ ಯಾರೂಇರರು ಎಂಬುದ ತಿಳಿದು | ಗರುವ ಮಾಡುವಿ ಏನೊ 2 ಬಂಧು ನೀನಲ್ಲವೇನೋ | ಎಂದೆಂದಿಗೂ ನೀನುಇಂದು ಎನ್ನಯ ಕಣ್ಣಾ | ಮುಂದಕೆ ಬಂದು ನಿಲ್ಲೋ3 ದೇಹದಿ ಜೀವಾಂತರದೀ | ಬಹಿರಂತರದಿ ವ್ಯಾಪ್ತಮುಹುರ್ಮುಹು ಪ್ರಾರ್ಥಿಸುವೇ | ಮಹ ಮಹಿಮನೆ ಬಾರೊ 4 ಗುರು ಗೋವಿಂದ ವಿಠಲಾ | ಸುರ ಶತೃಗಳು ಪಟಳಾಹರಿಸೆನ್ನ ವಿದ್ಯಾಪಟಲಾ | ತೋರೋ ನಿನ್ನ ಮುಖ ಕಮಲಾ 5
--------------
ಗುರುಗೋವಿಂದವಿಠಲರು
ಬರಿದೆ ದಣಿಯಬೇಡಿ | ಬಯಲ ಸಾಧನ ಕೂಡಿ | ನೆರೆ ಮಾಡಿ ಸಾಧು ಸಂತರಾ | ದಯವಂತರಾ ಪ ಏನು ಓದಿದರೇನು | ಏನು ಕೇಳಿದರೇನು | ಜ್ಞಾನಿಗಳೊಡನಾಡದೇ | ಅನುಭವವಾಗುದೇ 1 ಬುಡದಲಿ ಫಲವಿದೆ | ತುದಿಮರನೇರುವರೇ | ಬಿಡು ಬಿಡು ನಾನಾ ಸಾಯಸಾ | ಭ್ರಾಂತಿ ವೇಷಾ 2 ಗುರು ಮಹಿಪತಿ ನುಡಿ | ಸಾರಿದ ನಂದ ನೋಡಿ | ಮರೆಯದೆ ಮಾಡಿ ಸಾಧನಾ | ಹರುಷ ನಿಧಾನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬರಿದೆ ಬಯಸಲು ಬರುವುದೇನೆಲೆ ಮರುಳು ಯೋಚನೆ ಬಿಡೆಲೆ ಮನಸೆ ಪ ಹರಿಯ ಬಳಿಯಲಿ ಪಡೆದಷ್ಟಲ್ಲದೆ ದೊರಕದೆಂದಿಗೆ ಬೇರೆ ತಾನು ಅ.ಪ ಶಾಂತಿತಾಳತಿಭ್ರಾಂತಿ ನೀಗಿ ಸಂತಜನ ಕೃಪಾಪಾತ್ರನಾಗಿ ಕರು ಣಾಂತರಂಗ ಸಿರಿಕಾಂತನಂಘ್ರಿಯ ಅಂತರಂಗದಿ ಭಜಿಸದೆ 1 ಶಮೆಯಗೂಡಿಹ್ಯ ಭ್ರಮೆಯನಳಿದು ಸುಮನದೋಳಿರ್ದು ಕ್ರಮದಿ ಅನುದಿನ ವಿಮಲ ಹರಿಕಥೆ ಶ್ರವಣದಿಂ ರಮಾರಮಣನಂಘ್ರಿಗೆ ನಮಿಸದೆ 2 ದಮೆಯ ಪಡೆದು ದಾಸನಾಗಿ ವಿಮಲನಾಮದ ಬಲವಗಳಿಸಿ ಅಮಿತಮಹಿಮ ಶ್ರೀರಾಮನಂಘ್ರಿ ಕಮಲವೊಲಿಸಿ ಭವತುಳಿಯದೆ 3
--------------
ರಾಮದಾಸರು
ಬರುವ ಸಂಭ್ರಮವನ್ನು ನೋಡಿ ಪರಮ ಕರುಣಾಕರೆಯ ಪಾಡಿ ಪ. ಹೆದ್ದಾರಿ ಮಧ್ಯದಿ ಸ್ವಾರಿ ಬರುತಾ ದಾರಿದ್ರ್ಯ ದೈನ್ಯವೋಡಿಸುತಾ ಸ್ವರ್ಣಧಾರೆಯನು ಸರ್ವತ್ರ ತರುತಾ ಸಾರಿಸಾರಿಗೆ ವರವ ಕೊಡುತ 1 ಶುಕ್ಲನಭಮಾಸಭೃಗುವಾಸರದಲಿ ಶುಭಲಗ್ನಸಂಜೆ ವೇಳ್ಯದಲಿ ವಿಭವದಲಿಪೂಜಿಸುವುದೆಂದು ವಲ್ಲಭೆಗೆಂದ ವಚನ ತಿಳಿದಿಂದು 2 ಲಕ್ಷ್ಮೀದೇವಿಯನು ತನ್ನ ದಾಸರನು ಮೀಸಲಳಿಯದ ಸೌಖ್ಯಗಳನು ಮೆರೆವುದನು 3
--------------
ತುಪಾಕಿ ವೆಂಕಟರಮಣಾಚಾರ್ಯ