ಒಟ್ಟು 6252 ಕಡೆಗಳಲ್ಲಿ , 125 ದಾಸರು , 4339 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯರಾಘವ ಜಯರಾಘವ ಜಯರಾಘವ ರಾಮಾ| ಶ್ರಯಕಾರಣಸುಖಪೂರಣ ಭವತಾರಣ ನಾಮಾ ಪ ಜಗಪೋಷಣ ಮೃದುಭಾಷಣ ಸುರತೋಷಣಕಾರಿ| ಅಘಶೋಷಣ ಕುಲಭೂಷಣ ಖರದೂಷಣ ಹಾರಿ 1 ಅತಿಸುಂದರ ಗುಣ ಮಂದಿರ ದಶಕಂದರ ಹರಣಾ| ಧೃತಮಂದಿರ ಗಜೇಂದರ ಪ್ರಯಾ ಸಾಂದರ ಕರುಣಾ 2 ಪತಿ ವಾಣೀಪತಿ ದಿವಸಾಪತಿ ಧೇಯ| ಗುರುಮಹೀಪತಿ ಸುತಸಾರಥಿ ಸೀತಾಪತಿರೇಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯವ ಪಾಲಿಸಿ ಸಲಹೆ ಜನನಿ ಜಯಲಕ್ಷ್ಮಿ ಜಯಂಕರಿ ಪ ಭಯವಿಮೋಚನೆ ಭಜಿಪೆ ನಿನ್ನ ಜಯವ ವೊಂದಿಸಿ ಭವದಿ ಎನ್ನ ದಯದಿ ಬೆಂಬಲಿರ್ದು ಬಿಡದೆ ಕೈಯ ಪಿಡಿದು ಕಾಯೌ ಸುದಯೆ 1 ಜ್ಞಾನಜ್ಯೋತಿ ಸುಪ್ರಕಾಶ ಮಾಣದಿತ್ತು ಮಮತೆಯಿಂದ ಹಾನಿತಾರದೆ ಪೊರೆಯೆ ಸತತ 2 ಕಾಮಿತಾರ್ಥ ಪೂರ್ಣೆ ಸುತಗೆ ಭೂಮಿಯಾತ್ರೆ ವಿಜಯನೀಡು ಶಾಮಸುಂದರ ಸ್ವಾಮಿ ಶ್ರೀ ರಾಮನ ಪಟ್ಟದರಾಣಿ ಕರುಣಿ 3
--------------
ರಾಮದಾಸರು
ಜಯಶ್ರೀ ರಾಮನ ಜಾನಕಿ ಪ್ರೇಮನ ಅನುದಿನ ಪ ಶುಭ ಕಲ್ಯಾಣನ ಮಾಧವ ಮುಕುಂದನ 1 ವಿಶ್ವ ಪ್ರಕಾಶನಾ --ನಂದದಿ ಹೃದಯ ಗೋವಿಂದನ ಬಿಡದಿನ್ನು 2 ಕಂದರ್ಪ ಜನಕನ ಕರಿರಾಜ ವರದನ ಸಿಂಧುಶಯನ ಹರಿ ಶ್ರೀ ಜಗನ್ನಾಥನ 3 ಸೌಂದರ್ಯ ರೂಪನ ಪುರುಷೋತ್ತಮನ ಕುಂದರದನ ಹರಿ ಕೋಮಲಾಂಗನ 4 ಪರಮ ಪುರುಷನ ಪತಿತಪಾವನನ ನರಹರಿರೂಪನ ನಾರಾಯಣನ 5 ಗರುಡಾರೂಢನ ಕರುಣಾಸಾಗರನ ಉರದಲಿ ಲಕ್ಷ್ಮಿಯ ಧರಿಸಿ ಕೊಂಡಿಹನ 6 ಉರಗಾದ್ರಿ ವಾಸನ ವಸುದೇವಸುತನಾ ಭವಪಾಪ ಸಂಹಾರನ 7 ಶರಣರ ಕಾಯುವನ ಶ್ರೀನಿವಾಸನ ಉರಗಶಯನನ ಹರಿವಾಸುದೇವನಾ 8 ಮಂಗಳಮೂರುತಿ ಮಹಾನುಭಾವನ ಗಂಗೆಯ ಪಡೆದನ ಘನ ಗಂಭೀರನ9 ಶೃಂಗಾರ ಭೂಷಣನ ಸುಗುಣ ಪ್ರತಾಪನ ಅಂಗನೆಯರೆಡ ಬಲದಲಿರುವನ 10 ರಂಗನಾಯಕನ ರಾಜಾಧಿರಾಜನ ಮಂಗಾರಮಣನ ಮಧುಸೂದನನಾ 11 ರಂಗವುಳ್ಳ ಪೀತಾಂಬರ ಧರನಾ ಕಂಬು ಕಂಧರನಾ 12
--------------
ಹೆನ್ನೆರಂಗದಾಸರು
ಜಯಾ ಜಯಾ ಪ ಈ ಮುದ್ದುಮುಖವೊ ಮತ್ತೆ ತನುವಿನ ಕಾಂತಿ ಈ ಬಿಲ್ಲು ಈ ಬಾಣ ನಿಂತಭಾವ 1 ಬಂಟ ಈ ಭಾಗ್ಯ ಆವ ದೇವರಿಗುಂಟು ಮೂಲೋಕದೊಳಗೆ 2 ಜಯ ಇನಕುಲೋದ್ಧರಣ ಜಯ ಮುನಿಕೃತ ಶರಣ ಜಯ ದನುಜವಿದಾರಣ ಜಯ ತಮಹರಣ 3 ಧರೆಯೊಳತಿಭಾರವನು ಇಳುಹಿ ಕಮಲಜ ಮುಖ್ಯ ಸುರರ ಮೊರೆಯನು ಕೇಳ್ದು ನರರೂಪ ತಾಳ್ದು 4 ದಶರಥನ ಗರ್ಭದಲಿ ಜನಿಸಿ ಮುನ್ನ ಮುನಿ ಮನೋರಥ ಕಾಯಿದ ಪುಣ್ಯಚರಿತ್ರ5 ಅಸುರರನು ಅಳಿದು ಅಹಲ್ಯಳಿಗಿತ್ತ ವರವಿತ್ತು ಮಿಥಿಳ ಪುರದಿ ಹರನ ಧನುವನುರೆ ಮುರಿದು 6 ಅತುಳ ಬಲದಲಿ ಸೀತೆಯ ಒಲಿಸಿದ ಭಾರ್ಗವ ಮ- ಹಿತÀಳ ಬಲವಂತ ದೇವೋತ್ತುಂಗ ಜಯತು 7 ಭರದಿಂದಲಯೋಧ್ಯಾಪುರವನು ಶೃಂಗರಿಸೆ ಹರುಷತನದಲಿ ರಾಮಗರಸುತನವೆನಲು 8 ಕಿರಿಯ ಮಾತೆಯು ಬಂದು ಭರತನಿಗೆ ಪಟ್ಟವೆನೆ ಸಿರಿಸಹಿತ ಹೊರಹೊಂಟ ಕರುಣಾಳು ಜಯತು 9 ಅನುಜ ಅವನಿಜೆ ಸಹಿತ ವನವಾಸವ ಮಾಡಿ ವನಜಾಕ್ಷ ಪತಿಯಾಗೆಂದು ರಾಕ್ಷಸಿಯು ಬರಲು 10 ಅನುವಾಯಿತೆಂದು ನಾಸಿಕವ ಹರಿದು ಭಂಗಿಸಿದೆ ಬಿನುಗು ಹೊಮ್ಮøಗವೆಚ್ಚ ಘನಮಹಿಮ ಜಯತು 11 ಜಕ್ಕಿದ ವಾಲಿಯನು ಕೊಂದು ಕುಲಸೈನ್ಯ ಸಹವಾಗಿ ನಿಲ್ಲದೆ ಸೇತುವೆಗಟ್ಟಿ ಅಸುರರೊಡಗೂಡಿ 12 ಖುಲ್ಲ ದಾನವ ಕುಂಭಕರ್ಣ ರಣಮುಟ್ಟಿ ಎಲ್ಲರನು ತರಿದಂಥ ಬಲ್ಲಿದನೆ ಜಯತು 13 ದÉೀವಕ್ಕಳು ಹರುಷದಲ್ಲಿ ಪೂಮಳೆಗರೆಯೆ ಭೂಮಿಜೆಯ ಸಹಿತ ಸೌಮಿತ್ರಿಯೊಡಗೂಡಿ 14 ಕ್ಷೇಮದಿಂದಯೋಧ್ಯಪುರದಿ ಸುಖದಲ್ಲಿರ್ದ ಸ್ವಾಮಿ ಶ್ರೀಹಯವದನ ರಘುಕುಲತಿಲಕನಲ್ಲವೆ 15
--------------
ವಾದಿರಾಜ
ಜಲಧಿ | ನಿಮ್ಮ ಮೊರೆಹೊಕ್ಕವರ ಕಾಯ್ದು ಪೊರೆಯುವಿರಿ ದಯದಿ ಪ. ಅರಿಯರು ಜಗದೊಳಗೆ ನರರು ನಿವಿ್ಮೂ ಮಹಿಮೆ ಕರಕರೆಪಡುತಿಹರು ಭವದೊಳಗೆ ಪರಮ ನಮ್ರತೆಯಿಂದ ಚರಣಕೆರಗಲು ಬಂದು ಉರುತರದ ಕಾರುಣ್ಯದಿಂದ ಪೊರೆಯುವಿರಿ 1 ಇಲ್ಲವೊ ಆಸೆ ಆಡಂಬರದ ದ್ರೌವ್ಯದಲಿ ಎಲ್ಲೆಲ್ಲಿ ನೊಡಲು ತತ್ವಬೋಧೆ ಉಲ್ಲಾಸದಿಂದ ಸಜ್ಜನರಿಗರುಹುತ ಮೋದ ಎಲ್ಲೆ ಕಾಣಿಸದಂಥ ಆನಂದವೀವ ಗುರು 2 ತಂದೆ ಮುದ್ದುಮೋಹನವಿಠ್ಠಲನೆಂದೆಂಬ ಬಹು ಚಂದದ ಅಂಕಿತದಿ ಜಗದಿ ಉದಿಸಿ ಮಂದರಿಗೆ ಸುಜ್ಞಾನ ತಂದು ರಕ್ಷಿಸುವಂಥ ಒಂದೊಂದು ಮಹಿಮೆಗಳ ಪೇಳಲೆನ್ನೊಶವೆ 2 ಅನಾದಿಯಿಂದಲಿ ಹೀನ ದೆಸೆಯೊಳಗಿದ್ದು ನಾನಾ ಜನ್ಮದಿ ಬಂದು ಕರ್ಮದಲಿ ತೊಳಲಿ ದೀನತ್ವವೈದುವ ಮಾನವನ ಕರುಣಿಸಿ ಸಾನುರಾಗದಿ ಹರಿಯ ಪದಕೆ ಸೇರಿಸುವಂಥ 3 ಸೃಷ್ಟಿ ಸ್ಥಿತಿ ಲಯಗಳಿಗೆ ಕರ್ತ ಹರಿ ಎಂತೆಂದು ಶ್ರೇಷ್ಠ ಕನಿಷ್ಠದ ಅರ್ಥ ತತ್ವ ತಿಳಿಸಿ ಕಷ್ಟ ಬಿಡಿಸುವ ಜಗತ್ಕರ್ತ ಒಬ್ಬನೆ ಹರಿಯು ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲನೆನುವ 5
--------------
ಅಂಬಾಬಾಯಿ
ಜವದಿ ಪಾಲಿಸೊ ಪ್ಲವಗೋತ್ತುಮ ಮರುತಾ ನಂಬಿದೆ ನಿರುತಾ ಪ ಅವನಿಶಾರ್ಚಿತ ಪವನಾತ್ಮಜ ಹನುಮಾ ಭವಸುರನುತ ಭೀಮಾ ಅ.ಪ ಮಾರುತಿ ಅಂಜನ ಗರ್ಭದೊಳುದವಿಸಿ ವಾರಿಧಿಯುತ್ತರಿಸಿ ಧಾರುಣಿ ಸುತೆಗತಿ ಹರುಷವಗೊಳಿಸಿದಿ | ನೀ ದ್ವಾಪರ ಯುಗದಿ ನಾರಿಯ ಮೊರೆ ಕೇಳಿ ದುರುಳನ ಶಿರ ತರಿದಿ ಆ ನಾರಿವೇಷದಿ 1 ಅದ್ವೈತರ ನೀನಳಿಸುವಲೋಸುಗದಿ | ಸದ್ಗುರುವರ ಜಗದಿ ಮಧ್ಯಾಸದನ ಸತಿಯುದರದಿ ಜನಿಸಿದಿ | ಸದ್ವೈಷ್ಣವರ ಪೊರೆದಿ ಸಿದ್ಧಾಂತವ ಸ್ಥಾಪಿಸಿ ಬದರಿಗೆ ನೀಪೋದೆ | ಮದ್ವಾಭಿದಾನದಿ 2 ನಂಬಿದೆ ವೃಕೊಜಠರಾ ದಶಶಿರ ಪುರನಾಥಾ ಪತಿ ಶಶಿಕುಲಸಂಜಾತಾ 3
--------------
ಶಾಮಸುಂದರ ವಿಠಲ
ಜಾಣಿ ರಂಗಯ್ಯನ ಕಾಣದೆ ನಿಲ್ಲದು ಮನ ವಾಣಿ ರಮಣನ ಪಿತನ ವೇಣದಿ ಕರೆತಾರಮ್ಮ ಪ. ಜರಿಯ ಸುತನು ತಾನು ಜಗಳಕೆ ಬಾಹೋನೆಂದು ಕರೆಸಿದ ವಿಶ್ವಕರ್ಮನ ಕರೆಸಿದ ವಿಶ್ವಕರ್ಮನ ದ್ವಾರಕಾವಿಪುರನಿರ್ಮಿಸೆಂದ ಕ್ಷಣದಾಗೆ ಜಲದೊಳು1 ತಳಿರು ತೋರಣನಿವಹ ಮೇರುವಿಗೆ ಪೊನ್ನ ಕಳಸ ಮೇರುವಿಗೆ ಪೊನ್ನ ಕಳಸ ಕನ್ನಡಿ ಮನೋಹರವಾಗಿದ್ದು ಸಟಿಯಿಲ್ಲ2 ದ್ವಾರಕಾಪುರದ ಶೃಂಗಾರ ವರ್ಣಿಸಲು ಮೂರು ಕಣ್ಣವಗೆ ವಶವಲ್ಲಮೂರು ಕಣ್ಣವಗೆ ವಶವಲ್ಲ ನಾಲ್ಕು ಮುಖದವಗೆ ಬಲುಮಿಗಿಲು3 ಹದಿನಾರು ಸಾವಿರ ಚದುರೆಯರ ಮಂದಿರ ಮದನನಯ್ಯನ ಮನೆಮಧ್ಯಮದನನಯ್ಯನ ಮನೆಮಧ್ಯ ದ್ವಾರಕೆಅದ್ಬುತವಾಗಿ ಬೆಳಗಿದೆ 4 ಶಿಶುಪಾಲ ದಂತವಕ್ತ್ರ ಮೊದಲಾದ ಮಹಾಅಸುರರನ್ನೆಲ್ಲ ಅಳುಹಿದ ಅಸುರರನ್ನೆಲ್ಲ ಅಳಿದು ದ್ವಾರಕೆಯಲ್ಲಿನಸು ನಗುತಿದ್ದ ನರಹರಿ 5 ಸತ್ಯದಿ ರುಕ್ಮಿಣಿ ಸತ್ಯಭಾಮಾದೇವಿ ವಾರಿಜ ಮುಖಿ ಷಣ್ಮಹಿಷೇರಸಹಿತಾಗಿಷಣ್ಮಹಿಷೇರ ಸಹಿತಾಗಿಕಾರುಣ್ಯಸಿಂಧು ರಾಮೇಶ ಕುಳಿತಿದ್ದ 6 ಶ್ರೀ ರಮಾರಮಣನಾದ ಶ್ರೀ ಕೃಷ್ಣನ ಅರಮನೆಗೆಸುಭಧ್ರೆ ಮುಯ್ಯ ತರುತಾಳೆಸುಭಧ್ರೆ ಮುಯ್ಯ ತರುತಾಳೆÀಹಸ್ತಿನಾವತಿಯ ಭೂಸುರರೆಲ್ಲ ಬರತಾರೆ7
--------------
ಗಲಗಲಿಅವ್ವನವರು
ಜಾಣೆ ನಂಬಿದೆ ಇಸ್ಟೇಟರಾಣೀ ನೀನೊಲಿದೆನ್ನ ಪಾಣಿಯೊಳಗೆ ಬಂದು ಕಾಣಿಸಮ್ಮ ಪ ವಾಣಿ ಶ್ರೀಲಕುಮಿಶ ರುದ್ರಾಯಣಿಯರಿಗಿಂತ ಕ್ಷೋಣಿಯೊಳಗೆ ಬಹುಮಾನಿತೆ | ನೀನಮ್ಮ ಅ.ಪ ಜನಕನು ಗಳಿಸಿದ ಧನವೆಲ್ಲಾ ಕಳಕೊಂಡೆ ದನಕರ ಹೊಲಮನೆಯನು ಮಾರಿದೆ ಜನರೊಳಗಪಹಾಸ್ಯಗೊಳಗಾದೆ ಕೇಳಮ್ಮ ವನಿತೆ ಮಕ್ಕಳ ಕೈಲಿ ಕೊನೆಗೆ ಪರಟೆ ಕೊಟ್ಟೆ 1 ಉಣಲು ಅನ್ನವು ಕಾಣೆ | ಉಡಲು ವಸ್ತ್ರವು ಕಾಣೆ ಕಡುಕಷ್ಟ ಕಡಲೋಳು ಮುಳುಗಿದೆ ನೋಡಮ್ಮ ಪೊಡವಿಯೋಳ್ ನಿನ್ಹೊರತು ಕಡೆ ಹಾಯಿಸುವಂಥ ಕಾಣಿ ಕೈಪಿಡಿದು ರಕ್ಷಿಸೊ ರಕ್ಷಿಸೋ ನೀನಮ್ಮ 2 ಎಲ್ಲಾ ಹಾಳಾಯಿತು | ಸಾಲ ಬಹಳಾಯಿತು ಜೋಳಿಗೆ ಬಂದಿತು ಕೂಳಿಗೆ ಮನೆ ಮನೆ ಚಾಲುವರಿದೆನಮ್ಮಾ 3 ಹಾರಿ ಹೋಗುವದಮ್ಮಾ ಪಕ್ಕಾರಂಗು ಧಾರುಣೀಶರ ಮಧ್ಯ ತೋರೀದ ಸಮಯದಿ ಆ ರಾಣಿ ವರ್ಗವ ಥರ ಥರ ನಡುಗಿಸುವಿ 4 ಅಕ್ಕರದಲಿ ಎರಡೆಕ್ಕದೊಳು ಬಂದು ಪಕ್ಕನೆ ನೀ ಎನ್ನ ಕೈಯೊಳು ಬಾರೆ ಮುಕ್ಕಣ ಸಖ ತನ್ನ ಬೊಕ್ಕಸದೊಳಗಿನ ರೊಕ್ಕ ಹಾಕಲು ಅವನ ಲೆಕ್ಕಸೆ ನಮ್ಮ 5 ಕಾಮಿತ ದಾಯಿನಿ ಕಾಮಿನಿ ಶಿರೋಮಣಿ ಶಾಮಸುಂದರ ಸಾರ್ವಭೌಮನ ರಾಣಿ ಶ್ರೀಮಂತ ಜೋಕರನ ಪ್ರೇಮದ ಭಗಿನಿಯೆ ನಾ ಮೊರೆ ಹೊಕ್ಕೆನು ನೀ ದಯಮಾಡು ತಾಯೆ 6
--------------
ಶಾಮಸುಂದರ ವಿಠಲ
ಜಾನಕಿರಾಮ ಜಾನಕಿರಾಮ ಪ ನೃತ್ಯವನಾಡೊ ವರಗಳ ನೀಡೋ 1 ವಾರಿಧಿ ಬಂಧ ವಸುದೇವ ಕಂದ ಸ್ವಾರಸ್ಯ ತಂದ ಸತ್ಕರುಣದಿಂದ 2 ಶಿರಿವಾಸ ಸಿರಿದೇವಿ ತೋಷ ಉದ್ಧವ ಘೋಷ3
--------------
ವಿಜಯದಾಸ
ಜಾನಕೀಶ ವಿಠಲ ನೀನಿವನ ಪೊರೆಯೋ ಪ ಮೌನಿಕುಲ ಸನ್ಮಾನ್ಯ | ಆನತೇಷ್ಟಪ್ರದನೆಆನಮಿಸಿ ಪ್ರಾರ್ಥಿಸುವೆ | ಭಿನ್ನಪವ ಪಾಲಿಸೋ ಅ.ಪ. ಸತಿ ಸ್ವಪ್ನದಲಿ | ಅವನಿಜೆಯ ವಲ್ಲಭನೆ ತವನಾಮ ಸೂಚಿಸಿಹೆ | ಎನ್ನ ರೂಪದಲೀಭವವನಧಿ ದಾಟಲ್ಕೆ | ತವನಾಮ ಸಂಸ್ಮರಣೆನವಪೋತವೆನಿಸಿಹುದು | ಪವನಾಂತರಾತ್ಮಾ 1 ನಿತ್ಯ ತವ ಪದದಲ್ಲಿ | ಭಕ್ತಿ ಕರುಣಿಸೋ 2 ಮಧ್ವಮತ | ಸಾಕಷ್ಟು ತಿಳಿಸುತ್ತಾಮಾಕಳತ್ರನೆ ಇವನಾ | ವ್ಯಾಕುಲದಲ್ಹರಿಸೀಲೌಕಿಕವೆಲ್ಲ ವೈ | ದೀಕ ವೆಂದೆನಿಸುತ್ತಪ್ರಾಕ್ಕು ಕರ್ಮವ ಕಳೆಯೊ | ಲೋಕ ಲೋಕೇಶಾ 3 ತಾರತಮ್ಯ ಜ್ಞಾನ | ಮೂರೆರಡು ಭೇದಗಳಸಾರತಮ ಹರಿಯು ನಿ | ಸ್ಸಾರ ಜಗವೆಂಬಾಚಾರುಮತಿಯನೆ ಇತ್ತು | ಪಾರಗಾಣಿಸು ಭವವಧೀರ ನೀನಲ್ಲದಲೆ | ಆರು ಕಾಯುವರೋ 4 ಜೀವ ಬಹು ಪರತಂತ್ರ ದೇವ ನಿಜ ಸ್ವತಂತ್ರಈ ವಿಧದ ಸುಜ್ಞಾನ | ಸಾರ್ವಕಾಲದಲೀದೇವ ನೀ ದಯದಿ ಈ | ಜೀವಂಗೆ ಕರುಣಿಸೇಭಾವದಲಿ ಬೇಡ್ವೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಜಾಹ್ನವಿ ಜಗತ್ರಯ ಪಾವನಿ ಪ್ರಣತಕಾಮದೆ ಪದ್ಮಜಾಂಡ ಸಂಭೂತೆ ಪ ಸೃಷ್ಟೀಶ ಪದಜಾತೆ ವಿಶ್ವಮಂಗಳ ಮಹೋ ತ್ಕøಷ್ಟ ತೀರ್ಥಗಳೊಳುತ್ತಮಳೆನಿಸುವೇ ಕಷ್ಟವರ್ಜಿತವೆನಿಪ ತ್ರಿಪಥಗಾಮಿನಿ ದಯಾ ದೃಷ್ಟಿಯಿಂದಲಿ ನೋಡು ಪ್ರತಿದಿನದಿ ಎನ್ನಾ 1 ಕರ್ಮ ಸಾಕ್ಷಿಯೆನಿಸುತಿಹ ಅರ್ಕದೇವನು ಬಂದ ಸಮಯದಲ್ಲಿ ಶರ್ಕರಾಹ್ವರು ಸ್ನಾನಗೈಯೆ ದುರಿತಗಳು ಸಂ ಪರ್ಕವಾಗದ ತೆರದಿ ಸಂತೈಪೆ ದಯದಿ 2 ಕಾರುಣಿಕ ಬಹಿರಾವರಣದಿಂದ ನೀ ಪೊರಟು ವಾರಾಹಿಯೊಡಗೂಡಿ ಭಕ್ತಜನರ ಪ್ರಾರಬ್ಧ ಕರ್ಮಗಳನುಣಿಸಿ ಮುಕ್ತರನ ಮಾಳ್ಪೆ ದೂರಗೈಸುವೆ ಸಂಚಿತಾಗಾಮಿಗಳನೂ 3 ನಂದಿನೀ ನಳಿನಿ ಸುಸೀತಾ ಮಲಾಪಹರ ಳೆಂದ ಮಾತ್ರದಿ ಪುನೀತರನು ಮಾಳ್ಪೆ ಸಂದರುಶನ ಸ್ವರುಶನ ಸ್ನಾನಗಳ ಫಲ ಪು ರಂದರಾರ್ಯರೆ ಬಲ್ಲರಲ್ಪರು ಅರಿಯರು 4 ಮಾತೆ ವಿಜ್ಞಾಪಿಸುವೆ ಬಿನ್ನಪವ ಕೇಳು ಸಂ ಪ್ರೀತಿಯಿಂದಲಿ ಕರುಣಿಸೆನಗೆ ಇದನೆ ಶ್ರೋತವ್ಯ ವಕ್ತವ್ಯ ಮಂತವ್ಯ ಸ್ತವ್ಯ | ಜಗ ನ್ನಾಥ ವಿಠ್ಠಲನೊಬ್ಬನೆಂದು ತಿಳಿವಂತೇ5
--------------
ಜಗನ್ನಾಥದಾಸರು
ಜಾಹ್ನವಿ ಜನಕ ಮೂಜಗತ್ಪತಿ ಸುರಕುಲ ಸನಕಾ ದೀಜನ ಮನೋಹರ ಮಾಣಿಕ್ಯ ಕನಕಾ ವೈಜಯಂತಿ ಹಾರ ಪಾವನ್ನ ಪದಕ ಪ ಕೇಶಿಭಂಜನ ವ್ಯೋಮಕೇಶ ವಂದಿತ ಪಾದ ಕ್ಲೇಶನಾಶನ ವಾತೇಶನ ಜನಕ ಕೇಶರಿರುಹ ಮುಂಜಿಕೇಶನೆ ಕುಂಕುಮ ಶೌರಿ 1 ವಾರುಣಿ ಪತಿನುತ ವಾರುಣನ ಭಯ ನಿ ವಾರಣಾ ವಾರಣಾಶಿ ಪುರದರಸೆ ವಾರಣ ನಗರಿಯ ವಾರನಹತಪಲ್ಲ ವಾರುಣಿ ಪಾಣಿಯೆ ನಾರಾಯಣನೆ ಜೋ ಜೋ 2 ಮಾದೇವಿ ರಮಣ ಭೂಮಿದೇವಿ ಉದ್ಧಾರ ಮಾಧುರ್ಯ ವಚನ ಉಮಾದೇವಿ ವಿನುತಾ ಮಾಧಾರ ಮಹಶೂರ ಮತ್ಕುಲನೆ ಪ್ರೇ ಮಾಧವ ರಾಯಾ 3 ಗೋವಳಿ ಪರಿಪಾಲ ಗೋವಳೇರಾ ಪ್ರಿಯಾ ಗೋವುಗಳ ಕಾಯಿದ ಗೋವಳರಾಯಾ ವಿಪ್ರ ಸಂರಕ್ಷ ಗೋವಿದಾಂಪತಿ ರಂಗ ಗೋವಿಂದ ನಂದ 4 ಮಧುಕೈಟಭಾಸುರ ಮದಗರ್ವ ಮರ್ದನ ನಿತ್ಯ ಮಧುರನ್ನ ಪಾನಾ ಮಧುರಾಪುರ ಪಾಲ ಮದಗಜ ಹರಣಾ ಶಾ ಮದವರ್ಣ ಶರೀರ ಮಧುಸೂದನನೆ 5 ಇಷ್ಟಭಕ್ತರ ಕುಲ ಇಷ್ಟದೈವವೆ ಸರ್ವ ಇಷ್ಟಾರ್ಥ ಕೊಡುವ ಬಲಿಷ್ಟನು ನಿನ್ನ ಇಷ್ಟ ಅಷ್ಟಯೆಂದು ತಿಳಿಯಲಿ ವಶವಲ್ಲ ವಿಷ್ಣು ಸರ್ವೋತ್ತಮ ವಿಶ್ವನಾಟಕನೆ6 ಅಕ್ರಮದಲಿ ಸ್ವರ್ಗ ಆಕ್ರಮಿಸಿ ಬಲಿ ವಿಕ್ರಮನಾಗಿ ಕಾಲಕ್ರಮಣಿ ಮಾಡೆ ಶಕ್ರಮರ್ಚಿಸೆ ಅನುಕ್ರಮನಾಗಿ ಪ ರಾಕ್ರಮದಲಿ ಬೆಳದೆ ತ್ರಿವಿಕ್ರಮನೆ 7 ವಾಮಲೋಚನೆಯರ ವಾಮನ ಕೆಡಿಸಿದೆ ವಾಮನವಾಶಿಷ್ಟವಾ ಮುನಿವಂದ್ಯ ವಾಮನದಲಿ ದಾನವಾಮನ್ಯಗಳರನ್ನು ಅ ವಮಾನ ಮಾಡಿದೆ ಸಿರಿವಾಮನನೆ 8 ಶ್ರೀಧರ ರಮಣನೆ ಶೃಂಗಾರ ವಾರಿಧಿ ಶ್ರೀಧನ ಸಂಪತ್ತಾಶ್ರಿತ ಜನರಿಗೆ ಶ್ರೀಧೇನು ನೀನಯ್ಯಾ ಶ್ರೀ ಕರುಣಾಕರ ಶ್ರೀದೇವಿ ಉರಭೂಷಾ ಶ್ರೀಧರನಂತಾ 9 ಋಷಿಕೇಶನ ತಾತ ಋಷಿಜನ ಸಂಪ್ರೀತ ಋಷಿಕುಲೋದ್ಭವ ಪುರುಷ ರಾಮ ಮಹಾ ಋಷಿನಾಮಧೇಯನೆ ಋಷಿಪತ್ನಿ ಪಾಲನೆ ಋಷಿಗಳ ಒಡೆಯನೆ ಹೃಷಿಕೇಶ ದೇವ 10 ಪದುಮಜಾಂಡದಲ್ಲಿ ಪದುಮೆ ಮಾತನು ಕೇಳಿ ಪದುಮನಾಭಿಯಲ್ಲಿ ಪದುಮಜನ ಪೆತ್ತ ಪದುಮಾಸ್ಯ ಪದುಮಾಕ್ಷ ಪದುಮಕರನೆ ಪಾದ ಪದುಮ ಮಿಗಲು ಕಾಂತಿ ಪದುಮನಾಭನೆ11 ಧಾಮನಿಧಿಕುಲನು ಧಾಮನೆ ನಿರುತ ತ್ರಿ ಧಾಮನಿವಾಸ ಸುಧಾಮನ ಮಿತ್ರ ಧಾಮ ಪುಣ್ಯಧಾಮ ಭಕ್ತ ಹೃದ್ವನಜ ಧಾಮ ಮಧುಕರನೆ ದಾಮೋದರ ಧರ್ಮಾ 12 ಶಂಖ ಸುರಾಹರಾ ನಿಃಶಂಕ ಚರಿತ ಶಂಖಪಾಣಿ ಶಶಾಂಕ ಸುವದನ ಸಂಖ್ಯೆಯಿಲ್ಲದೆ ತಾಯಿ ಸಂಕಲೆ ಹರಿಗಡಿದೆ ಸಂಕರುಷಣನುವುಜ ಸಂಕರುಷಣನೆ 13 ಪ್ರಧಾನ ಮೂರುತಿ ಪ್ರದ್ವೀಪ ವರ್ಣ ಸುಪ್ರದಾಯಕನೆ ಪ್ರದೇಶ ಪರಿಮಾಣ ವರಪ್ರದ ಸಿದ್ಧನೆ ಪ್ರದ್ಯುಕ್ತ ಅವ್ಯಕ್ತ ಪ್ರದ್ಯುಮ್ನ ವಿಶ್ವ14 ವಾಸುವಾನುಜ ಶ್ರೀನಿವಾಸ ಪುಂಡ್ರೀಕ ವಾಸುದೇವನ ಶಮನಪುರದಲ್ಲಿ ವಾಸಮಾಡಿಸಿದಯ್ಯಾ ವಾಸವಾರ್ಚಿತ ಶ್ರೀ ವಾಸುದೇವ 15 ಅನುಗಾಲವು ನಿನ್ನ ಅನುಸರಿಸಿದೆ ನಾನು ಅನುಕೂಲವಾಗಿ ಎನ್ನನು ಸಾಕುವುದು ಅನುಮಾನವ್ಯಾತಕೆ ಅನಿಮಿತ್ತ ಬಂಧು ಅನಿರುದ್ಧ ಶ್ರೀಶಾ 16 ಪುರುಷ ಪುರುಷ ಶ್ರೇಷ್ಠ ಪುರುಷಾರ್ಥ ಕಾರಣ ಪುರುಷೇಶ್ವರ ತತ್ಪುರುಷಾದಿ ಪುರುಷ ಪುರುಷ ಬೀಜ ವೇದ ಪುರುಷ ಪರಮ ಪುರುಷ ಪುರುಷರು ಮೋಹಿಸುವ ಪುರುಷೋತ್ತಮನೆ 17 ಅಕ್ಷಯ ಬಲ ಸಹಸ್ರಾಕ್ಷ ರಕ್ಷಕ ಅಕ್ಷರಪರ ಬ್ರಹ್ಮ ಗೀರ್ವಾಣಧ್ಯಕ್ಷ ಅಕ್ಷಯ ಪಾತ್ರಿಯ ಶಾಖಾದಳವನ್ನು ಅಕ್ಷಯ ಮಾಡಿದಧೋಕ್ಷಜ ಚಕ್ರಿ 18 ನರಸಖ ನರಹರಿ ನಾರಾಯಣ ವಾ ನರ ದಳನಾಯಕ ನಾರದ ವಿನುತ ನರಕ ಉದ್ಧಾರಕ ನರಕಾಂತಕ ಕಿ ನ್ನರ ಸುರನರೋರಗ ವೃಂದ ನರಸಿಂಹ 19 ಸಚ್ಚಿದಾನಂದಾತ್ಮ ಸಚಲ ವಿಗ್ರಹನೆ ಸಚ್ಚರಾಚರದೊಳೂ ಗುಣಪರಿಪೂರ್ಣ ಸಚ್ಛಾಸ್ತ್ರದಲಿ ನಿನ್ನ ಸಾಮರ್ಥಿ ಪರಿಪೂರ್ತಿ ಸಚ್ಚೂತ ಚುತಿ ದೂರ ಚಿನ್ಮಯ ರೂಪಾ 20 ಜನನ ಮರಣ ನಾಶ ಜನನಾದಿಕರ್ತಾಂ ಜನಸುತಗತಿ ಪ್ರೇಮಾಂಜನ ಗಿರಿಧಾಮ ಜನಕವರದ ಸಜ್ಜನರಘದಹನ ದು ರ್ಜನರ ಕುಲರಾತಿ ಜನಾರ್ದನನೆ 21 ವೀಂದ್ರವಾಹನ ಮಹೇಂದ್ರಧಾರನೆ ಗ ಜೇಂದ್ರನ್ನ ಬಿಡಿಸಿ ನಕ್ಷೇಂದ್ರನ ಸೀಳಿ ನಾ ಗೇಂದ್ರ ಶಯನ ಗುಣಸಾಂದ್ರ ಗೋಕುಲ ಚಂದ್ರ ಇಂದ್ರಮಣಿ ನಿಭ ರಾಮಚಂದ್ರ ಉಪೇಂದ್ರಾ 22 ಹರಿ ಎನುತಾ ಹರಿ ಹರಿದು ಓಡಿ ಬರೆ ಹರಿದು ಪೋಗಿ ಪರಿಹರಿಸಿದ ಖಳನ ಹರಿ ಹರಿಯು ನಲಿವನೆ ಹರಿರೂಪ ಪರಿ ಹರಿನಾಮವೆ ಗತಿ ಹರಿ ಸರ್ವೋತ್ತಮಾ23 ಕೃಷ್ಣದ್ವಯಪಾಯನ ಉತ್ಕøಷ್ಟ ಮುನೇಶ ಕೃಷ್ಟಿಗೆ ಬಂದ ಕಷ್ಟ ಓಡಿಸಿದೆ ಕೃಷ್ಣವತ್ರ್ಮನೆ ಸಂತುಷ್ಟೀಲಿ ಸುಖಬಡುವ ಕೃಷ್ಣಾವತಾರ ಕೃಷ್ಣ ಕಮಲೇಶ 24 ನಿನ್ನ ಮಹಿಮೆಯನ್ನು ಬಣ್ಣಿಸಲಳವಿಲ್ಲ ನಿನ್ನೊಳಗೆ ನೀನು ಬೀಯ ಬೀಜವನು ಎನ್ನ ಪಾಲಿಸುವುದು ವಿಜಯವಿಠ್ಠಲ ಪ್ರಸನ್ನ ಭಕ್ತರ ವರದ ಬಾಲ ಗೋಪಾಲ ಜೋ ಜೋ 25
--------------
ವಿಜಯದಾಸ
ಜಾಹ್ನವಿ ದೇವಿ ಜಯ ಭಕುತ ಸಂಜೀವಿ ಜಯ ಪ್ರದಾಯಕ ವೀವೆ ಜಯ ಎಮ್ಮ ಕಾವೆ ಪ ಅಜನ ಸಭೆಯಲಿ ವರುಣಗೆ ಶಾಪವು ಬರಲು ಪ್ರಜಪಾಲನಾದ ಶಂತುನ ನಾಮದೀ ನಿಜರೂಪದಲಿ ಬಂದು ಅಷ್ಟವಸುಗಳ ಪಡೆದೆ ಭಜಿಸಬಲ್ಲೆನೆ ನಿನ್ನ ಬಹು ಭಾಗ್ಯವಂತೇ1 ಸಗರರಾಯನ ವಂಶವನ್ನೆ ಉದ್ಧಾರೆ ಅಗಣಿತೋದಯ ಪಾರಂವಾರೆ ಶುಭಶರೀರೆ ಮುಗುವೆನು ಕರವೆತ್ತಿ ಸಂತತ ವಾರಂವಾರೆ 2 ಏನು ಧನ್ಯರೊ ಎನ್ನ ಕುಲಕ ಪಾವನೆಯೆನಲು ನೀನುಬ್ದಿ ಪೊರದೆ ಉತ್ಸಾಹದಿ ಮೆರೆದೆ ಮಾನನಿಧಿ ವಿಜಯವಿಠ್ಠಲನ ಸನ್ನಿಧಿಯಲ್ಲಿಜ್ಞಾನಪೂರ್ವಕ ವೊಲಿದು ಭಕುತಿ ಕೊಡು ಎನಗೆ 3
--------------
ವಿಜಯದಾಸ
ಜಿತಮನವ ನೀಡೆನಗೆ ಜಿಷ್ಣುಸಖನೆ ರತಿಪತಿಪಿತ ನಿನ್ನ ಹಿತದಿ ಭಜಿಸುವೆನೊ ಪ. ದುಷ್ಟ ಇಂದ್ರಿಯಗಳು ಕೆಟ್ಟ ವಿಷಯಗಳಲ್ಲಿ ಕಟ್ಟ್ಟೆ ಎನ್ನಯ ಮನವ ಸೆಳೆಯುತಿಹವೊ ಕೃಷ್ಣಮೂರುತಿ ನೀನೆ ದೃಷ್ಟಿಯಿಂದಲಿ ನೋಡಿ ಒಟ್ಟುಗೂಡಿಸಿ ನಿನ್ನ ಪಾದದಲ್ಲಿಡಿಸೊ 1 ಎಂಟು ಜನ ದುಷ್ಟರು ಆರು ಜನ ಕಳ್ಳರು ಕಂಟಕರಾಗಿನ್ನು ಕಾಡುತಿಹರೋ ಎಂಟುದಳಗಳಿಪ್ಪ ನೆಂಟರೆನಗಾಗರೊ ಎಂಟೆರಡು ಇಂದ್ರಿಯವ ಬಂಧನದೊಳಿರಿಸೊ 2 ಮೂರು ತಾಪಗಳಿಂದ ಮೂರು ಗುಣದೊಳು ತಿರುಗಿ ಮೂರು ಮಾರ್ಗವ ಕಾಣೆ ಮುರವೈರಿಯೆ ಮೂರು ಅವಸ್ಥೆಗಳ ವಿವರವರಿಯದ ಎನಗೆ ದಾರಿ ತೋರಿ ಸಲಹೊ ಕಾರುಣ್ಯನಿಧಿಯೆ 3 ಡಿಂಬ ಮಧ್ಯದಲಿರುವ ಅಂಬರದಲಿ ನಿನ್ನ ಬಿಂಬರೂಪವ ತೋರೊ ಶಂಭು ಸಖನೆ ಅಂಬುಜನಾಭ ಎಪ್ಪತ್ತೆರಡು ಸಾಹಸ್ರ ತುಂಬಿದ ನಾಡಿಯೊಳು ರೂಪಗಳ ತೋರೊ4 ಮನದಲ್ಲಿ ನೆಲಸಿಹನೆ ಮನುಶಬ್ದವಾಚ್ಯನೆ ಮನದಿಂದ ಭಿನ್ನನೆ ಮನಪ್ರೇರಕ ಮನವ ನಿನ್ನಲಿ ನಿಲಿಸಿ ಅನುಗಾಲ ಸಲಹುವುದು ಚಿನುಮಯನೆ ಗೋಪಾಲಕೃಷ್ಣವಿಠ್ಠಲನೆ 5
--------------
ಅಂಬಾಬಾಯಿ
ಜೀವ ಕರ್ತೃತ್ವದ ಭ್ರಮೆಯ ಬಿಡಿಸೊ ಪ ಜೀವೇಶನೊಡೆಯ ಶ್ರೀ ವೇಣುಗೋಪಾಲ ಹರಿ ಅ.ಪ ಮಿಥ್ಯೆವೆಂಬುದು ಬಲ್ಲೆ ಕರ್ತೃತ್ವ ನಮಗಿಲ್ಲ ಪ್ರತ್ಯಕ್ಷಕಪವಾದದಲ್ಲಿ ಬಾಳ್ವೆ ವ್ಯರ್ಥಧಾವತಿಪಡುವೆ ಸರ್ವಕರ್ತನ ಮರೆದು ಯತ್ನಕೆ ವಶವಲ್ಲ ಮಿಥ್ಯೆ ಭಾವವು ಬಿಡಲು 1 ವಿಷಯ ವಿಷವದು ಬಲ್ಲೆ ತಲ್ಲೋಭ ಬಿಡಲರಿಯೆ ವಿಷಮಗತಿ ಪ್ರವಹದಲಿ ವಿವಶನಾಗಿ ಹುಸಿನಂಬಿ ತೆರಳುತಿಹೆ ಹರುಷ ಕಾಣದೆ ನಿಜದೆ ಕೃಶನಾದೆ ಹರಿಯೆನ್ನ ಕೈಪಿಡಿದು ಉದ್ಧರಿಸೊ 2 ಗುಣವಿಲ್ಲ ದೋಷಿಲ್ಲದೆಡೆಯಿಲ್ಲ ಎನ್ನಲ್ಲಿ ದನುಜಾರಿ ನಿನ್ನವರ ಕರುಣ ಉಂಟೊ ಪ್ರಣತಾರ್ಥಿ ಹರ ಶ್ರೀ ಜಯೇಶವಿಠಲನಲ್ಲಿ ವಿನುತ 3
--------------
ಜಯೇಶವಿಠಲ