ಒಟ್ಟು 3206 ಕಡೆಗಳಲ್ಲಿ , 124 ದಾಸರು , 2368 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನವೇ ಇದೆ ಮರೆಯಾದೆನಮ್ಮಮನಸಿಜನಯ್ಯನ ನೆನೆಸಾದೆ ಹೋದೆ ಪ ವೈಷ್ಣವ ಜನ್ಮವೆ ಬಯಸು ಏಕೋವಿಷ್ಣು ಸದಯದಿ ಷಡ್‍ವರ್ಗವ ಜಯಿಸು ||ಜಿಷ್ಣು ಸಖನ ದಾಸ್ಯ ವಹಿಸು ನೀನೆಶ್ರೇಷ್ಠನೆನ್ನದಲೇ ಶೀತೋಷ್ಣವ ಸಹಿಸು 1 ನವ ವಿಧ ಭಕುತಿಯ ಮಾಡು ಪದ್ಮಭವಾದ್ಯರು ಶ್ರೀಹರಿಗೆ ಎಲ್ಲಿ ಈಡು ||ಪವನಾ ಮತಕೆ ಉಂಟೇ ಜೋಡು ಮಾ-ಧವನ ಮೂರ್ತಿಯ ಮನದಣಿಯ ನೀ ನೋಡು 2 ಅಂಘ್ರಿ ಭಜಿಸು 3
--------------
ಮೋಹನದಾಸರು
ಮನವೇ ಚಿಂತಿಸು ಹರಿ ಮುರಾರಿಯ ಪ ಮಾಯಾ ಮನುಜಾಕಾರವ ತಾಳ್ದ ಸನಕಾದಿ ಸನ್ಮುನಿವಿನುತಪದ ವನಜಾತಯುಗಳನನು ಅ.ಪ ಪುರುಹೂತರಿಗೆ ತಾತನ ರತಿದೇವಿ ಸರಸಿಜಾಸನನಿಗೆ ಕರುಣಿಸಿವೇದವÀ ತರಳಗಭಯವನಿತ್ತು ತರಿದು ನೃಪರನು ದುರುಳರಾವಣ ಹರಣ ನೀಲಾಂಬರ ಯದುವರ ತುರಗವಾಹನ 1 ಸುಗುಣ ಗಣಾರ್ಣವನ ಸಜ್ಜನರಿಗೆ ಸುಗತಿಯಪಾಲಿಪನ ಸುರಪಾಲನ ನಿಗಮಚೋರನಕೊಂದು ಮೃಗನರವ ರೂಪವ ತಾಳಿ ಜಗವನಳೆದನ ಭೃಗುಜ ಶಾಖಾ ಮೃಗವ ವಧಿಸಿ ಹಲನೇಗಿಲನು ಪಿಡಿ ನಿಗಮನುತ ಕಲಿಯುಗದ ವೈರಿಯ 2 ಒಲಿದು ಪೂಜೆಯ ಕೊಂಬನ ಕುಂಭಜಶಾಪ ಕಲುಷವ ಕಳೆದವನ ವ್ಯಾಘ್ರಾಚಲದಲಿ ನಿಂತು ಭಕ್ತರ ಸಲಹುವ ಕಾರುಣ್ಯನಿಲಯ ಸಜ್ಜನಮನೋ ನಿಲಯ ಶ್ರೀನಿವಾಸನ ಜಲಜನೇತ್ರನ ಜಲಜಗಾತ್ರನ ವಿಲಸಿತಾಂಬುಜ ಮಾಲ ಭಕ್ತರಿ ಗೊಲಿವ ಶ್ರೀ ವರದಾರ್ಯವಿಠಲನ 3
--------------
ವೆಂಕಟವರದಾರ್ಯರು
ಮನವೇ ಚಿಂತಿಸು ಹರಿಯ-ಮುರಾರಿಯ ಪ ಮಾಯಾ ಯುಗಳನು-ಮನವೇ ಅ.ಪ. ಸ್ಮರವಿರಿಂಚಿನಯ ಪಿತನ-ಗೌರೀವರ-ಪುರಹೂತರಿಗೆ ತಾತನೆ ರತಿದೇವಿ-ಸರಸತಿಯರ ಮಾವನ-ಶ್ರೀರಮಣನ ಸರಸಿಜಾಸನಿಗೆ ಕರುಣೀಸುವೇದವ ಗಿರಿಯ ನೆಗೆಹಿ ವಿಶ್ವಂಭರೆಯ ದಾಡೆಯೊಳೆತ್ತಿ ತರಳಗಭಯವನಿತ್ತು ಮೂರಡಿ ಧರೆಯ ಬೇಡುತ ದುರುಳ ರಾವಣಹರಣ ನೀಲಾಂ- ಬರನ ಯದುವರ ತುರಗವಾಹನ1 ನಿಗಮಾಂತ ಗೋಚರನ-ನಿತ್ಯಾನಂದ-ಸುಗುಣಗಣಾರ್ಣವನ ಸಜ್ಜರಿಗೆ-ಸುಗತಿಯಪಾಲಿಪನ ಸುರಪಾಲನ ನಿಗಮಚೋರನ ಕೊಂದು ನಗವ ಬೆನ್ನೊಳು ಪೊತ್ತು ಜಗವನುದ್ಧರಿಸಿ ನರಮೃಗದರೂಪವ ತಾಳಿ ಜಗವ ನಳೆದನ ಭೃಗುಜ ಶಾಖಾ ಮೃಗವ ವಧಿಸಿ ಹಲ ನೇಗಿಲನು ಪಿಡಿದುಗುರು ಕೊನೆಯಿಂ ನಗುವನೆ ನೆಗಹಿದ-ನಿಗಮನುತ ಕಲಿಯುಗದ ವೈರಿಯ 2 ಪೂಜೆಯಕೊಂಬನ ಕುಂಭಜ ಶಾಪ-ಕಲುಷವ ಕಳೆದನ-ವ್ಯಾಘ್ರಾಚಲ ದಲಿನಿಂತು ಭಕ್ತರ ಸಲಹುವ ಕಾರುಣ್ಯನಿಲಯ ಸಜ್ಜನ ಮನೋನಿಲಯ ಶ್ರೀನಿವಾಸನ ಜಲಜಬಾಂಧವ ಕುಲಪವಿತ್ರನ ಜಲಜನೇತ್ರನ ಜಲಜ ಗಾತ್ರನ ವಿಲಸಿತಾಂಬುಜ ಮಾಲಭಕ್ತರಿಗೊಲಿವ ಶ್ರೀವರದಾರ್ಯ ವಿಠಲನ 3
--------------
ಸರಗೂರು ವೆಂಕಟವರದಾರ್ಯರು
ಮನವೇನೆಂಬುದನರಿಯೋ ಮನುಜ ಮನ ವೇನೆಂಬುದನು ಧ್ರುವ ಮನವೇನೆಂಬುದನನುಭವಕೆ ತಂದು ಖೂನದಲಿಡದೆ ಜ್ಞಾನದಲಿ ನಾನಾ ಶಾಸ್ತ್ರವ ಓದಿ ನೀ ಅನುದಿನ ಏನು ಘಳಿಸಿದ್ಯೊ ಮರುಳ ಮನುಜ1 ಉತ್ಪತ್ತಿ ಸ್ಥಿತಿ ಲಯ ಕರ್ತನೆಂದೆನಿಸಿ ಪ್ರತ್ಯೇಕರವನು ತೋರುತಲಿ ಮತ್ತೆ ಬ್ಯಾರ್ಯಾದ ಪರಬ್ರಹ್ಮೆಂದು ತಾ ಚಿತ್ತ ಭ್ರಮಿಸುದು ದಾವುದೊ ಮನುಜ 2 ಏಕೋ ವಿಷ್ಣು ವೆಂದೆನಿಸಿ ಮುಖದಲಿ ಪೋಕ ದೈವಕೆ ಬಾಯದೆರೆಸುತಲಿ ನಾಕುವೇದವ ಬಲ್ಲವನೆಂದೆನಿಸಿ ವಿಕಳಿಸುತಿಹ್ಯದು ದಾವುದೊ ಮನುಜ 3 ಉತ್ತಮೊತ್ತಮರ ಕಂಡಾಕ್ಷಣ ಹರುಷದಿ ನಿತ್ಯಿರಬೇಕೀ ಸಹವಾಸವೆನಿಸಿ ಮತ್ತೊಂದರಘಳಿ ಗಾಲಸ್ಯವ ತೋರಿ ಒತ್ತಿ ಆಳುವದು ದಾವುದೊ ಮನುಜ 4 ಪಾಪವ ಮಾಡಬಾರದು ಎಂದೆನಿಸಿ ವ್ಯಾಪಿಸಿಗೊಡದೆ ಕಾಣದನಕ ಉಪಾಯದಲಿ ಅಪಸ್ವಾರ್ಥವು ಇದಿರಡೆ ಅಪಹರಿಸುವದು ದಾವುದೊ ಮನುಜ 5 ಪ್ರಾಚೀನವೆ ತಾಂ ನಿಜವೆಂದರುಹಿಸಿ ಆಚರಣೆಯ ಬ್ಯಾರೆ ತೋರುತಲಿ ನೀಚ ಊಚ ಹೊಡೆದಾಡಿಸುತ ನಾಚಿಸುತಿಹುದು ದಾವೊದೊ ಮನುಜ 6 ಸಗುಣ ನಿರ್ಗುಣ ಬ್ಯಾರೆರಡನೆ ತೋರಿ ಬಗೆ ಬಗೆ ಸಾಧನ ತೋರಿಸುತ ಬಗೆದೊಂದೆವೆ ಭಕುತಿಗೆ ನೆಲೆಗೊಳಿಸಿದ ಪ್ರಗತಿ ತೋರುವುದು ದಾವುದೊ ಮನುಜ 7 ಧ್ಯಾನಕೆ ಕೂಡಿಸಿ ಮೋನವ ಹಿಡಿಸಿ ಅನುದಿನ ಜಪವನು ಮಾಡಿಸುತ ಘನವಾಗಿಹÀ ಅನುಭವ ಸುಖದಾಟದ ಖೂನ ದೋರಿಸುದು ದಾವುದೊ ಮನುಜ 8 ಮರವಿಗೆ ತಾನೆ ಅರಿವೇ ಕೊಟ್ಟು ತಿರಿವು ಮರವಿನಂಕುರದ ಕುರ್ಹುವಿನ ಇರಹು ತೋರಿಸುದು ದಾವುದೊ ಮನುಜ 9 ಮನವಿನ ಮೂಲವು ತಿಳಿವದು ಭಾನುಕೋಟಿ ಪ್ರಕಾಶನ ಕರುಣದಲಿ ನಾನು ನಾನೆಂಬವರಿಗೆ ಇದರ ಖೂನ ಲೇಶ ತಿಳಿಯದೊ ಮನುಜ 10 ಹರಿಯೆ ಗುರುವೆಂದರುಹಿಸಿ ಆತ್ಮಲಿ ಶರಣಹೋಗುವ ಭಾವನೆದೋರಿ ತರಳಮಹಿಪತಿ ಗುರುದಯ ಪಡಕೊಂಡಿಂದು ಯೋಗ್ಯನಾಗುವದಿದೊಂದೆ ಮನುಜ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮನಸಿನನುತಾಪವನು _ ಪರಿಹರಿಸು _ ಹರಿಯೇ ಪ ವನಜ ನಾಭನು ನೀನೇ ಮನದ ಪ್ರೇರಕನಲ್ಲವೇ ಅ.ಪ. ಅನುದಿನದಿ ಧನವನಿತೆ _ ಎಂತೆಂಬ ಕಾನನದಿ ಮನಸು ಮಾಡೀ ಬಹಳ _ ಶ್ವಾನನಂದದಿ ತಿರಿದೇ ಕನಸಿಲಾದರು ನಿನ್ನ _ ಧ್ಯಾನವನು ಮಾಡದೆಲೆ ಮನುಜ ಪಶುವೆನಿಸಿದೆನು _ ದೀನವತ್ಸಲ ಸ್ವಾಮಿ 1 ಸಂಸಾರ ವೆಂಬುವುದು _ ಹಿಂಸೆರೂಪವೆಸಿದ್ಧ ಹಂಸರೂಪಿಯ ಮರೆತ _ ಸಂಶಯಾತತಜನಕೆ ಧ್ವಂಸ ಗೈಸಿ ವಿಷಯ _ ವಾಸನೆಯ ತರಣಿಯನು ಶೌರಿ _ ದಾಸನೆನ್ನನು ಮಾಡಿ2 ಜ್ಞಾನ ತಿರುಳನು ತಿಳುಹಿ _ ಧ್ಯಾನಬಗೆಯನು ಅರುಹಿ ಮಾನಾಭಿಮಾನವನು _ ನಿನಗೆ ಸಮರ್ಪಿಸಿ ಸು ಜ್ಞಾನಿಗಳ ಸಹ ಶ್ರೀ ಕೃಷ್ಣವಿಠಲನ ನಿತ್ಯ ಗಾನದಲಿ ಮೆಚ್ಚಿಸುವ ಭಾಗ್ಯ ಶೀಲನ ಮಾಡೀ 3
--------------
ಕೃಷ್ಣವಿಠಲದಾಸರು
ಮನುಜಾವತಾರ ಶ್ರೀ ರಾಮನೆಂಬುದು ನಿಜವೆಮುನಿಮನಕೆ ನಿಲುಕದವನುಅನುಪಮನು ನಿಜಜನರನುದ್ಧರಿಸಬೇಕೆಂದುತನುವಿಡಿದು ತೋರಿಸಿದನು ತಾನು ಪದಶರಥಗೆ ಸುತನೆಂಬುದದು ವರವನಿತ್ತುದಕೆಸಸಿನೆ ಬಿಡೆ ಮುಕ್ತಿ ಪಥಕೆಎಸೆದು ವನದೊಳು ಹೊಳೆದುದದು ಮುನಿಗಳೆಲ್ಲರಿಗೆವಶವಾದನೆಂಬ ನೆವಕೆಶಶಿಮುಖಿಯನಗಲಿದುದು ನಿಜ ಭಕ್ತ ರಾವಣನಅಸುರ ಜನ್ಮದ ಭಂಗಕೆಕುಸುಮಶರ ವಶನಾದ ವಾಲಿ ವಧೆಯವನಘವನಶಿಸಿ ನಿಜವೀವದಕ್ಕೆ ನಿಲುಕೆ1ಸುಗ್ರೀವ ಮೊದಲಾದ ವಾನರರ ನೆರಹಿದುದುಸ್ವರ್ಗದವರವರಾಗಲುದುರ್ಗತಿಸ್ಥ ಕಬಂಧ ಮೊದಲಾದವರ ಶಾಪನುಗ್ಗುನುಸಿಯಾಗುತಿರಲುದುರ್ಗರೂಪದ ಮೋಕ್ಷ ಭಜಕರಿಗೆ ವಶವೆಂದುಮಾರ್ಗ ಸೇತುವ ತೋರಲುನುಗ್ಗಿ ಲಂಕಾದ್ವೀಪದೊತ್ತಿನಲಿ ನಿಂದು ಅಪವರ್ಗಧಸಿಗೆಯ ಮಾಡಲು ಕೊಡಲು 2ಕರುಣರಸವೇ ಬಾಣವೆಣಿಸೆ ಪುಷ್ಪಸಮಾನದುರಿತ ಮಾರ್ಜನ ಪಾವನಧರಣಿಯೊಳಗಿರಲೇಕೆ ಪುರವರಕೆ ಬಾಯೆಂದುಕರೆವ ಪರಿಯವರ ಗಾನಧುರದಿ ಸಾಕ್ಷಾತ್ಕಾರಿಪ ಛಲವಿಡಿದ ರಾವಣನುನೆರೆ ತನ್ನ ತಿಳಿದ ಜಾಣತಿರುಪತಿಯ ವೆಂಕಟನು ಸಕಲರಿಗೆ ಮುಕ್ತಿಯನುಕರುಣದಿಂ ಕರೆದಿತ್ತನು ತಾನು 3 ಓಂ ವತ್ಸ ವಾಟೀಚರಾಯ ನಮಃ
--------------
ತಿಮ್ಮಪ್ಪದಾಸರು
ಮನೆಯ ನಿರ್ಮಲಗೈದು ಮೋದಬಡಿಸುವುದು ವನಜನಾಭನ ಭಕ್ತಿಯಂಬವಳ ಬಿರಿದು ಪ. ಬಾಯಿಮೊದಲಾದೈದು ಬಾಗಿಲುಗಳಲ್ಲಿ ವಾಯುವಂದ್ಯನ ಚರಿತ ವರ್ಣನಾದಿಗಳಾ ಛಾಯಗೊಂಬುವ ತೆರದಿ ಚಿತ್ರಕೃತ್ಯವನೂ ನಿತ್ಯ ನಲಿವುದನು 1 ಬುದ್ಧಿ ದೀಪವನು ಬಹು ಶುದ್ಧಕನು ತಾ ತದ್ದಾರಿ ಮನವ ಮೇಲುದ್ಧರಿಸಿಕೊಳುತಾ ಸಿದ್ಧಗಮ್ಯನ ಪದಕೆ ಸರಿಯಾಗಿಸುತಾ ಬದ್ಧ ಬೊಗಳುತಾ ಜನರ ಬಾಯಿ ಮುಚ್ಚಿಸುತಾ 2 ದೋಷ ದುಷ್ಕøತ ಕೆಸರ ಲೇಶವಿಡಗೊಡಳು ಆಶೆಯೆಂಬುವ ಬಲೆಯ ಕೊೈಸಿ ಬಿಸುಟುವಳು ಈಶ ಮಾನಿತ್ವಕವಕಾಶವೇನಿಡಳು ಕೇಶವನ ಕರತಂದು ಕಾವಲಿರಿಸುವಳು 3 ಇವಳಾಶ್ರಯವ ಪೊಂದಲ್ಯಾರಭಯವಿಲ್ಲ ನವರೂಪಳನ್ನುಸರಿಸಿ ನಲಿವ ಸಿರಿನಲ್ಲ ತವಕದಿಂದಲಿ ತಾನೆ ಓಡಿ ಬಂದೆಲ್ಲಾ ಯುವತಿಯರ ಕೂಡಿ ತಾ ಪಾಡುವರೆ ಬಲ್ಲಾ 4 ಕಂಜನಾಭನ ಕರುಣ ಪಂಜರದೊಳಿರಿಸಿ ಸಂಜೀವನೌಷಧವ ಸುಲಭದೋಳ್ ಕುಡಿಸಿ ಅಂಜಿಕೆಯ ಬಿಡಿಸಿ ರಿಪು ಪುಂಜವನ ಕಡಿಸಿ ಮಂಜುಳಾತ್ಮಕ ಮಾಧವನ ಮುಂದೆ ಕರಿಸಿ 5 ದಾನ ವ್ರತಾದಿಗಳನೇನ ಮಾಡಿದರು ಶ್ರೀನಿವಾಸನ ಕರುಣ ಸಾಧ್ಯವಾಗಿರದು ನೀನೆ ರಕ್ಷಕನೆಂಬ ಧ್ಯಾನದಲಿ ಮೆರದು ಜ್ಞಾನ ಭಕ್ತಿಗಳಿಂದ ನಲಿವುದೇ ಬಿರುದು 6 ಯುಕ್ತಿಯಿಂದಲಿ ನೋಡಲೆಲ್ಲ ಶಾಸ್ತ್ರದಲಿ ಭಕ್ತಿಯೋಗವ ಪೇಳ್ವವೇಕಮತ್ಯದಲಿ ಭುಕ್ತಿ ಮುಕ್ತಿಯ ಶೇಷ ಭೂಧರೇಶನಲಾ ಸಕ್ತಿಯಿರೆ ಸಕಲಾರ್ಥವೀವನುತ್ಸವದಿ 7
--------------
ತುಪಾಕಿ ವೆಂಕಟರಮಣಾಚಾರ್ಯ
ಮನ್ನಿ ಮನ್ನಿಗೆ ಉಣ್ಣ ಬಂದಾ | ತನ್ನವರೊಳಗಿದ್ದ ಸರ್ವ ಸಾರಭೋಕ್ತಾ ಪ ಭಕುತರಗೋಸುಗ ಭಕುತಿಯ ಕೈಕೊಂಡು ಇಂದು 1 ಭೂವದರೊಳಗಿದ್ದು ದೈತ್ಯರ ಗೆದ್ದಂತೆ | ಆವಿಷ್ಣುವಾಗಿ ಮನ್ನಣೆಯ ಕೈಕೊಳುವಲಿ 2 ನಂಬಿದ ದಾಸರ್ಗೆ ಪ್ರಾರಬ್ಧ ಕರ್ಮವು | ಉಂಬೋದು ಬಿಡದಂದು ತದಾಕಾರ ರೂಪದಿ3 ದಿವಿಜರ ಒಡಗೂಡಿ ದಿನ ಪ್ರತಿದಿನದಲ್ಲಿ 4 ತನ್ನ ಸಂಕಲ್ಪವು ಸಿದ್ಧಿ ಮಾಡುವೆನೆಂದು ಘನ್ನತೆಯಲಿ ನಮ್ಮ ವಿಜಯವಿಠ್ಠಲಸ್ವಾಮಿ 5
--------------
ವಿಜಯದಾಸ
ಮನ್ನಿಸಯ್ಯ ಮದನಜನಯ್ಯ ಘನ ಮುನ್ನೀರಶಯ್ಯ ಸ್ವಾಮಿ ಹಯವದನರಾಯಾ ಪ ಬಾರಿಬಾರಿಗೂ ಈತನ ಮಂದಿರದಲಿ ನಿನ್ನ ಚೆನ್ನಿಗ ರೂಪವ ತೋರೋ ನಿನ್ನ ಕರುಣದಿ ಅ.ಪ. ಈಶಾ ಭವಪಾಶಾ ಎಂಬೋ ಬೀಸಿದ ಬಲೆಯೊಳು ಗಾಸಿಗೆರೆದೆನೂ ರಂಗಾ ಕೃಪಾರಿಣ ವಾಸಿ ಪಂಥಗಳು ವಾಸುದೇವನೆ ಲೇಸ ಮಾರ್ಗವ ಕಾಣೆ ನಿನ್ನಾಣೆ ದಾಶರಥಿಯೇ ನಿನ್ನ ದಾಸರ ಕೂಡಿ ಸಂತೋಷಪಡುವ ಸಿರಿಯೆನಗಿತ್ತು ಸಲೆ ಮೀಸಲವ ಮಾಡೋ ದೇವರ ದಯಾಳೊ1 ಪಂಚಭೂತಗಳಲಿ ಪಂಚಾಗ್ನಿಗಳಲಿ ಪಂಚದ್ವಿಗುಣ ಪಂಚರಲಿ ಮತ್ತೆ ಪಂಚಪ್ರಾಣದಲಿ ಪಂಚವಿಂಶತಿ ಮಾರ್ಗ ತೋರೋ ಶ್ರೀಕಾಂತಾ ಪಂಚ ಹಿಡಿಸಿ ಪಂಚೊಂದೋಡಿಸಿ ಪಂಚನಾಲಕು ಭಕ್ತಿ ಕೊಂಚವಾಗದ ಹಾಗೆ ಸಂಚಿತಾಗಮಾ ಮುಂಚೆ ಓಡಿಸೋ ಶ್ರೀವತ್ಸಲಾಂಛನನೇ2 ಶ್ರೀನಿವಾಸನೇ ನಿನ್ನ ಧ್ಯಾನಮಾತ್ರದಿ ಬರುವೋ ಬಿಗನು ಅಘನಾಶÀನವೆಂದೊ ನಾನಿಂದೂ ಬೆಂಬಿದ್ದ ಅಬಲನ ಮನ್ನಿಸೋದಲ್ಲದೆ ಹೀಗೆ ಮುನಿಸೋರೇನೋ ಶ್ರೀಹರೆ ನಿನ್ನ ಸನ್ನಿಧಿಗೊಪ್ಪಿಸಿದೆನೊ ಮನ ಬಂದುದು ಮಾಡೊ ಘನತೆ ನಿನ್ನದು ದೇವಾ ದೀನ ದಯಾನಿಧೆ ಉರಗಾದ್ರಿವಾಸಾ 3
--------------
ಮಹಾನಿಥಿವಿಠಲ
ಮನ್ನಿಸೈ ಹರಿ ಪನ್ನಗೇಂದ್ರಶಯನ ಪ ಘನ್ನವಾದ ಪಾಪವನ್ನು ಮಾಡಿ ಜಗದಿ ನಿನ್ನ ನಾಮ ಮರದೆ ಸನ್ನುತಾಂಗ ಸಲಹೊಅ.ಪ ಜ್ಞಾನ ಶೂನ್ಯವಾಗಿ ನಾನಾ ವಿಷಯಗಳಲಿ ನಾನು ನನ್ನದೆಂಬ ಹೀನ ಮಮತೆಯಿಂದ ದಾನವಾರಿ ನಿನ್ನ ಧ್ಯಾನಿಸದಲೆ ಕಾಲ ಸಾನುರಾಗದಿಂದ ಶ್ವಾನನಂತೆ ಕಳೆದೆ 1 ರೋಗಹರನೆ ಭವದ ರೋಗವೈದ್ಯನೆಂದು ಬಾಗಿ ನಿನ್ನನುತಿಪೆ ನಾಗಾರಿವಾಹನ ಯೋಗಿವಂದ್ಯನೆ ಚನ್ನಾಗಿ ನಿನ್ನ ಸ್ತುತಿಪ ಭಾಗವತರ ಸಂಗ ದೇವ ಪಾಲಿಸಯ್ಯ 2 ರಕ್ಷಿಸೆಮ್ಮ ಬಿಡದೆ ಲಕ್ಷ್ಮಿರಮಣದೇವ ಕುಕ್ಷಿಯೊಳಗೆ ಜಗವ ರಕ್ಷಿಸುತ್ತ ಪೊರೆವ ಸೂಕ್ಷ್ಮ ಸ್ಥೂಲದೊಳು ಪ್ರತ್ಯಕ್ಷನಾದ ಹರಿ ಉ- ಪೇಕ್ಷಿಸದಲೆ ಕಾಯೋ ಪಕ್ಷಿವಾಹನ ದೇವ 3 ಕಡಲೊಡೆಯನೆ ದೇವ ಮೃಡನ ಸಖವೆ ಕಾಯೊ ಅಡಿಗಡಿಗೆ ಸ್ತುತಿಸಿ ಬಿಡದೆ ಮುಗಿವೆ ಕಯ್ಯ ಎಡಬಲದಲಿ ಶ್ರೀ ಭೂಮಡದೇರಿಂದ ಮೆರೆವ ಉಡುಪ ಮುಖನೆ ಕಾಯೋ ಕಡಲೊಡೆಯನೆ ರಂಗ 4 ಕಮಲಪತ್ರದಳಾಕ್ಷ ಕಮಲಜೋದ್ಭವೆ ಪ್ರಿಯ ಕಮಲಸಂಭವ ಜನಕ ಕಮನೀಯ ಸ್ವರೂಪ ಕಮಲನೇತ್ರೆರ ರಸಕಮಲಪುಷ್ಪಮಾಲಾ ಹೃ- ತ್ಕಮಲದೋಳು ಶೋಭಿಪ ಕಮಲನಾಭ ವಿಠ್ಠಲ 5
--------------
ನಿಡಗುರುಕಿ ಜೀವೂಬಾಯಿ
ಮನ್ನೀಸಯ್ಯಾ - ಮನಸಿಜನಯ್ಯಾ |ಮೌನಿಜನರ ಪ್ರಿಯ ಪಂಡರೀರಾಯಾ ಪ ಪರಿ | ಅನಘ ನೀ ಕರುಣಿಸಿ ಅ.ಪ. ಪರಿ ಏನಿದು ಹರಿಮೊರೆ ಕೇಳೆನನ್ನದು | ಪೊರೆವುದು ಜೀಯಾ 1 ಪರಿ ಗೋಪಿ ಜನರ ಪ್ರಿಯದ್ರೌಪತಿ ಗೋಪ್ತಾ | ಬಲು ಆಪ್ತಾ |ಕೈಪಿಡಿಯುವುದೀ | ಪಾಪಿಯಾದೆನ್ನನುಶ್ರೀಪತಿ ಶ್ರೀಹರೇ | ಮುರಾರೇ ||ಲೇಪಿಸು ಕೀರ್ತಿಕ | ಲಾಪಗಳ್ನಿನ್ನ ಸು-ರಾಪಗಪಿತ ಶ್ರೀ ಪಾವನ ಮೂರ್ತೇ 2 ಭವ ಶರ ನಿಧಿಯಲಿ | ಭವಣೆಯ ಪಡಲಾರೆಭವ ಜನಕನ ಪಿತಾ | ಹೇ ದಾತಾ |ಹವಣೆಯು ದಾವುದು | ಭವವನುತ್ತರಿಸಲುತವಪದ ಸ್ಮರಿಸುತಾ | ಸ್ಮರಿಸುತ್ತಾ ||ಸವನ ಮೂರರೊಳು | ಅವಶದಿ ಕೀರ್ತಿಸಿಬೆವರೆಂಬ ವಿರಜೆಯ | ಅವಗಾಹಿಸುವನುಭವವ ಕೊಡಿಸು ಹರಿ | ಅವನಿಜೆ ವಲ್ಲಭಪವನ ವಂದಿತ ಗುರು | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಮನ್ಮಥ ಚರಿತೆ340 ವರಸಿದ್ಧಿ ಗಣೀಶನ ಬಲಗೊಂಡೀ- ಶ್ವರನ ಪದಕೆ ನಮಿಸಿ | ಶಾರದೆಯ ಹರುಷದಿ ಸಂಸ್ಮರಿಸಿ | ಚ ತುರ್ಮುಖಗಳ ನೆರೆ ಭಜಿಸಿ ಹರುಷದಿ ನುತಿ ಮಾಡಿ | ಮಾಡಿ- ದ ಕೃತಿಯ ಸುಜನರು ನೋಡಿ 1 ಕಾಮಜನಕ ನಿಷ್ಕಾಮಜನಾಪ್ತ | ಸು- ಧಾಮನ ಸಖ ಹರಿಯು | ಮೂರು ಲೋಕಗಳಿಗೆ ತಾ ದೊರೆಯು | ಎನ್ನಹೃ- ತ್ಕಮಲದೊಳೀಪರಿಯು ಕಾಮನ ಸುಚರಿತೆಯು | ಸಜ್ಜನರು- ಇಹಪರ ಸದ್ಗತಿಯು | 2 ಪೃಥಿವಿಯೊಳಿಹ ಸುಜನರು ಕೇಳಿ | ಮ ನ್ಮಥ ಚರಿತ್ರೆಯನು | ಸಹ- ರ್ಷೋತ್ಕರದಿ ನೀವ್ಗಳಿದನು | ಭಜಿಸೆ ಸ- ದ್ಗತಿಗಳನು ಕೊಡುವನು | ಶತಮುಖವಂದಿತ ಸಿರಿದೇವಿಯರಸ- ನೊಲಿದು ಪಾಲಿಸುವನು | ಜನರ ಕೋ- ರಿದ ಕೋರಿಕೆಗಳನು | ತಾ ಕೊಟ್ಟವರನು ಪಾಲಿಪ ತಾನು 3 ತಾರಕಾಸುರನ ಭಯದಿಂದಲಿ ವೃಂ- ದಾರಕರೆಲ್ಲ ಕೂಡಿ | ಮನದಿ ಆಲೋಚನೆಗಳ ಮಾಡಿ | ವನಜ ಸಂ- ಭವನಡಿಗಳ ಬೇಡಿ | ಯಾರು ನಮಗೆ ದಿಕ್ಕೆಂದು ಕಳವಳಿಸಿ ನಾರಾಯಣನ ತ್ವರಿತದಲಿ | ಕಂಡು ವಂ- ದಿಸಿದರು ತವಕದಲಿ | 4 ವಾರಿಜಾಕ್ಷ ಪರುಷೋತ್ತಮ ವಿಶ್ವಾ- ಧಾರ ಪರಾತ್ಪರನೆ | ಅನಂತನವ- ತಾರ ಕೃಪಾಕರನೆ | ನಾವೆಲ್ಲ ಸೇರಿದೆವೈ ನಿನ್ನನೆ | ತಾರಕಾಸುರನ ಬಾಧೆ ಪರಿಹರಿಪ- ರ್ಯಾರನು ನಾವ್ ಕಾಣೆವೈಯ್ಯ | ಉ-- ದ್ಧಾರ ಮಾಳ್ಪನು ನೀನೆ | ಭಕ್ತಜನ- ವಾರಿಧಿ ಚಂದ್ರಮನೆ | 5 ಎನಲು ಸುರರೊಡನೆ ನುಡಿದನಾಗಲಾ- ವನಜನಾಭ ತಾನು | ಈ ಕಾರ್ಯ- ಕೆನಾ ಮಾಡುವುದೇನು | ಭ- ವಾನೀಧವನಾಗಿ ಶಿವನು | ಘನತಪವನಾಚರಿಸುತ್ತ ಮೇರುಗಿರಿ ಗುಹೆಯೊಳು ಕುಳಿತಿಹನೊ | ಫಾಲದಲಿ ಉರಿಗುಣ್ಣುಳ್ಳವನು | ಏನಾದರು ಸರಿ ತಾ ಲೆಕ್ಕಿಸನು | 6 ಕಾಮನಿಂದ ಶಂಕರನ ತಪಕಿಡಿಸಿ ಕರುಣಿಸಬೇಕೆಂದು ಬೇಡಿ | ಕೊಂ- ಡರವ ನಿಮ್ಮೊಳು ದಯಮಾಡಿ | ತ- ಕ್ಕಯೋಚನೆಗೈಯ್ಯುವ ನೋಡೀ | ತಾಮಸನ ಮುರಿದು ನಿಮಗೆ ಸಂತತವ ಕೊಡುವನು ಮುದಗೂಡಿ | ಎಂದು ಪೇಳಿದ ಶ್ರೀಹರಿಯನುಡಿ | ಕೇಳಿ ಇಂದ್ರನು ಗುರುವನು ನೋಡಿ 7 ಚಂದದಿಂದ ಸೇರಿ | ಸ್ಮರಗೆಯಿದ- ರಂದವೆಲ್ಲವುಸುರಿ | ಅವನಮನ ಶೌರಿ ಕಂದನೆಯಂತಾದರು ತಂದರೆ ಸುಖ- ವೆಂದನುಪಕಾರಿ | ಗುರು ವಂದಿಸೆ ಸುರರ ದೊರಿ | ಬೀಳ್ಕೊಂಡು ಬಂದನು ಕುಸುಮಪುರಿ8 ಕುಸುಮಾವತಿಯಲಿ ಮೀನಕೇತನನ ಶಶಿನಿಭವದನೆಯರು | ಸೇ- ವಿಸುತಿರೆ ಹಸನಾದ ಪನ್ನೀರು | ಪುನಗು ಅಗರು | ಕುಸುಮಶರನ ಉಪಚರಿಸುತ ಬಾಲೆಯ- ರೆಸೆಯಲು ಮೋದದೊಳು | ರತಿ- ಕ್ರೀಡೆಯಲಿ ಮನಕರಗಲು | ಬೃ ಹಸ್ಪತಿಯನಿತರೊಳೈತರಲು 9 ಊಳಿಗದವರಿಂದ್ಹೇಳಿ ಕಳುಹೆ ಗುರು ಕೇಳಿ ಸುದ್ದಿ ಮಾರಾ | ತವಕ ಪರಿಪರಿಯುಪಚಾರ | ಶ್ರೀಪತಿಯ ಕುಮಾರ | ಬಂದಹದ- ನೇನೆನುತ ಪದಾರ | ವಿಂದ- ಕೆರಗಿದನಾ ಕುಸುಮಶರ 10 ಭಯದೊಳಮರರೆಲ್ಲ | ಕ್ಷೀರಸಾಗರಕೆ ಪೋಗಿ ಎಲ್ಲ | ಬಿನ್ನೈ- ಸಲು ಕೇಳಿ ಸಿರಿಯನಲ್ಲಾ | ಅರಘಳಿಗಾಲೋಚಿಸಿ ಎನ್ನೊಳುನುಡಿ- ದನುಕೇಳಿಸಿರಿಯನಲ್ಲಾ | ಖಳಗೆಧರೆ- ಪರಿ ಎಲ್ಲವನು ಬಲ್ಲ 11 ಕಾಮನು ಪುಷ್ಪ ಶರಗಳಿಂದೆಸೆಯಲು ಗೌ- ರಿಮನೋಹರನೂ | ಬ- ಹಿರ್ಮುಖನಾಗುತ ಶಂಕರನೂ | ನಿ- ಕ್ಷೇಮವ ಪಾಲಿಪನು | ರಜತಗಿ ರಿವಾಸಿ ಮಹೇಶ್ವರನು | ಇದಕೆ ಗುರಿಯಾದ ಎನ್ನ ಮಗನು 12 ನಾವು ಪೇಳಿರುವೆವೆಂದು ನಮ್ಮ ಸು- ಕುಮಾರ ಮನ್ಮಥನಿಗೆ | ಇದೆಲ್ಲಾ ಪೇ- ಳಿವಿವರಮಾಗೆ | ಕರೆದುಕೊಂ- ಡ್ಹೋಗಿ ಶಿವನ ಬಳಿಗೆ | ಪಾವಕಾಕ್ಷ ಬಲು ಕರುಣಾನಿಧಿಯಿ- ನ್ನೇನು ಚಿಂತೆ ನಮಗೆ | ಬೇಗನಡೆ ಯೆಂದ ಹರಿಯು ಎನಗೆ | ಸಕಲವೂ ತಿಳಿಸಿದೆ ನಾನಿನಗೆ | 13 ಪರಿಯೋಚನೆ ಮಾಡು | ಸ- ತ್ಕೀರ್ತಿಯ ಸಂಪಾದನೆ ಮಾಡು | ಭರದಿ ಹೂ ಶರಗಳ ನೀ ಹೂಡು | ಹರನ ತಪವ ಭಂಗಿಸಿ ನಮ್ಮೆಲ್ಲರ ಕರುಣದಿ ಕಾಪಾಡು | ತಂದೆಯ- ಪ್ಪಣೆಯ ಮನದಿ ನೋಡು | ಮೂಜಗದಿ ಯಾರು ನಿನಗೆ ಜೋಡು | 14 ಈ ಪರಿಪೇಳಿದ ಗುರುವಿನ ನುಡಿಯನು ಶ್ರೀಪತಿಯ ಕುಮಾರ | ರತಿಯೊಡನೆ ಮಾರ | ನುಡಿದಳಾ ಶಿವನು ಮಹಾಕ್ರೂರ | ಆಪತ್ತೊದಗುವುದೀಗ ಬೇಡ ಎಂ- ಕಂದರ್ಪಮನದಿ ಸೋತು | ಬೃಹಸ್ಪತಿ- ಗೆಂದ ಕಾಮನಿನಿತು 15 ಸಮ್ಮತಿಯಿದು ಕೇಳಿ | ಪೂಶರನ ಬಿಡಲು ಚಂದ್ರಮೌಳಿ | ಕೋಪಿಸಲಾ ಹಣೆಗಣ್ಣೆನಗಾಳೀ | ಬ್ರಹ್ಮಾಂಡಗಳಾದರು ದಹಿಸುವುದು ಎನ್ನಳವೇ ಎಂದಾ | ಈ ಕಾರ್ಯಕೆ ನಾನು ಬಾರೆನೆಂದ | ನುಡಿಗೆ ಸುರ- ಗುರುಮತ್ತಿಂತೆಂದ | 16 ಮರೆಹೊಕ್ಕಿರುವಮರರ ಪಾಲಿಸುನೀ ಕಂದರ್ಪ | ಜಗ- ತ್ಕಾರಣನೈನಿಮ್ಮಪ್ಪ | ಪೇಳ್ದನುಡಿ ನಡಿಸಲು ಬೇಕಪ್ಪಾ | ಪರಿಪರಿಯಲಿ ನೋಡಿದರು ಜಗದೊಳಗೆ ನಿನ್ನ ಸರಿಯಾರಪ್ಪಾ | ನಮ್ಮ ನುಡಿ ಮೀರಬಾರದಪ್ಪಾ | ಅಷ್ಟು ಪೇಳಿ- ದರು ಕಾಮವೊಪ್ಪಾ | 17 ಕಾಮನವೊಪ್ಪಿಸಿ ಕರದೊಯಿದಮರರು ಕೈಲಾಸವ ಸೇರಿ | ಅರುಹಿದರು ಗಿರಿರಾಜ ಕುಮಾರಿ | ಕೇಳಿನಡೆತಂದಳಾಗಗೌರಿ | ವ್ಯೋಮಕೇಶನಿಹ ಗವಿಯ ದ್ವಾರಕೇ ಬರಲು ನೋಡಿ ನಂದಿ | ತಾಯಿನೀ- ನಿಲ್ಲಿಗೇಕೆ ಬಂದಿ | ಏನು ಅ- ಪ್ಪಣೆಯೆಂದನು ನಂದಿ 18 ವಂದನೆ ಒಳಗೆ ಹೋಗುವನು ಇವನನೀ ತಡೆಯಬೇಡವಯ್ಯ | ಎನ್ನ ಕಂದನು ಇವ ಕೇಳಯ್ಯ | ಎಂದು ಪೇ- ಳಿದ ಗೌರಿಯ ನುಡಿಯಾ | ಮುದದಿ ಶಿರದೊಳಾಂತನು ನಂದೀಶ್ವರ ಮುಂದೆ ಕೇಳಿ ಕಥೆಯ | ಅನಿತರೊಳ್ ಬಂದ ಕಾಮರಾಯ | ಪೋಗ ಬಹು- ದೆಂದ ಪ್ರಥಮಗೇಯ | 19 ಕಾಮಪೊಕ್ಕನಂದು | ಕರದಿ ಜ- ಪಮಾಲೆ ಪಿಡಿದು ಮುಂದು | ಮ- ಹಾಮಂತ್ರಗಳ ಜಪಿಸುತಂದು | ನೇಮದೊಳೇಕೋಭಾವದೊಳಿರುತಿಹ ಸೋಮಧರನ ಕಂಡ | ಏ- ನು ಮಾಡುವದೆಂದು ಪ್ರಚಂಡಾ | ಇಕ್ಷುಧ- ನುಶರಗಳ ಕೈಕೊಂಡಾ | 20 ವಿನಯದಿಂದ ಪ್ರಾರ್ಥಿಸಿ ಮಾತಾಡಿಸು- ವೆನೆಂದು ಶಂಕರನ | ನುತಿಸಿ ಬೇಡಿ- ದನು ಶೂಲಧರನಾ | ಎಷ್ಟಾದರು ಕರಗಲಿಲ್ಲವನಮನಾ | ಪರಿಪರಿಯೋ- ಚನೆ ಮಾಡಿ ಮನ್ಮಥನು | ಬೆರಗಾಗುತಾ ನಿಂತಾ ಸಮಯನೋಡುತ- ಲಿರತಿಯ ಕಾಂತಾ | ಮನ ದಿ ಹೊಂದಿದನು ಮಹಾಚಿಂತಾ 21 ನೆಂದು ಯೋಚಿಸಿದನು | ಇ- ಕ್ಷು ಧನುವನು ಜೇ ಹೊಡೆದಾನು | ಮಹೇ- ಶನ ಮರ್ಮಸ್ಥಳಗಳನು | ಪುಷ್ಪ ಬಾಣಗಳೂಡೆಸೆಯೆ ಮ- ಶರಗಳನು ಸುರಿದಾನು | ಜ- ನರೆ ಕೇಳೀಯಾಶ್ಚರ್ಯವನು | 22 ಆ ಮಹೇಶ್ವರನ ಮೂಲ ತಿಳಿಯಲಿಂ- ದ್ರಾದಿಸುರರಿಗಳವೆ | ಕೇಳಿಯೀ ಕಾಮನೇನು ಲಕ್ಷ್ಯವೆ | ಕರಿಚರ್ಮಾಂಬರನಾ | ಮೀನ ಕೇ- ತನನ ಬಾಣಕೆ ಮನಾ | ಬಹಿರ್ಮು- ಖನಾಗಿ ನೋಡಿ ಸ್ಮರನಾ | 23 ಕಣ್ಣುತೆಗೆದು ಮುಕ್ಕಣ್ಣಯಲೋ ನಿನ- ಗೆನ್ನೊಳೇಕೆ ಪಂಥಾ | ಛೀ ಛೀನಡಿ ಹೋಗು ಹೋಗು ಭ್ರಾಂತ | ಎಂದು ತಾ- ತನ್ನನಿಜಸ್ವಾಂತ-| ವನ್ನು ಪೂರ್ವದಂದದಿ ತಪದಲ್ಲಿರಿಸಚ- ಪೋಲ್ವಂದದಲಾ ಶಾಂತಾ | ಶೂರ್ಪಕಾ- ರಿಯು ಎದುರಲಿ ನಿಂತಾ | 24 ನಾನು ಬಂದಾ ಕಾರ್ಯವ ಕೇಳದಲೆ ಇ- ದೇನೀ ಪುರಹರನು | ಛೀಹೋಗೋ- ಗೆಂದು ಗರ್ಜಿಸಿದನು | ಎನುತ ತೆ- ಗೆದೆಚ್ಚ ಪೂಶರವನು | ನಾನಾವಿಧದಲಿ ತನ್ನ | ಚಮತ್ಕಾ- ರಗಳ ತೋರಿಸಿದನು | ಮನದಿ ಭಯಗೊಳುತ ಮನಸಿಜನು | ಮುಂದಾಗುವ ಕಥೆಯ ಕೇಳಿಯಿನ್ನು 25 ಭರ್ಗಕಣ್ದೆರೆದು ನೋಡಲಾಕ್ಷಣದಿ ಭರದಿಂ ಮನ್ಮಥನಾ | ಕೋಪಕಿಡಿ- ಯಿಡುತ ಫಣೆಗಣ್ಣ | ತೆಗೆದು ನೋಡಲು ತಕ್ಷಣ | ಚಿಣ್ಣಾ ಭುಗ್ಗು ಭುಗ್ಗುಯೆಂದೇಳ್ವ ಉರಿಗಳಿಂ ದಗ್ಧನಾದ ಮದನಾ | ಭಸ್ಮದಂ- ತಿದ್ದು ಮರ್ಮಸದನಾ | ಅಗ್ನಿವ್ಯಾ ಪಿಸೆ ಬ್ರಹ್ಮಾಂಡವನಾ 26 ಸುರರು ಕಿನ್ನರರು ಗಡಗಡ ನಡುಗುತ ಬೆರಗಾದರು ನೋಡಿ | ಅವರ- ಶಿರವನಲ್ಲಾಡಿ | ಚರರು ಬಂದು ರತಿಗೀ ಸುದ್ದಿಯ ಪೇಳಿ- ದರು ದುಃಖ ಮಾಡಿ | ಕೇಳಿ ನಾರಿಯರು ಶೋಕವಮಾಡಿ | ರತಿಯು ನೆಲದೋಳ್ ಬಿದ್ಹೊರಳಾಡಿ | 27 ಹಾಹಾರಮಣಾ ಹಾ ನಿಜೇಶ ಹಾ ಪ್ರಾಣಕಾಂತಕಾಮಾ | ಎನ್ನ ಕರ್ಕಶನಿಸ್ಸೀಮ | ಸಾಹಸ ಮಾಡುವೆನೆಂದು ಪೋಗಿ ಶಂ- ಕರನಿಂದಲಿ ಮಡಿದೆ | ಪೇಳಿದಮಾ- ತ್ಕೇಳದೆ ನೀ ನಡೆದೇ | ಪೋಗಬೇ- ಡೆಂದು ನಾನು ನುಡಿದೆ 28
--------------
ಗುರುರಾಮವಿಠಲ
ಮನ್ಮಥಪಿತ ವಿಠಲ ನೀನಿವಳ ಸಲಹೊ ಹರಿಯೇಮನ್ಮನೋರಥ ಭಿನ್ನಪವ ಸಲಿಸೋ ಪ ಜನ್ಮಜನ್ಮಾಂತರದ ಪುಣ್ಯ ಸಂಚಯ ಫಲಿಸಿನಿನ್ನ ದಾಸತ್ವದಲಿ ಕಾಂಕ್ಷೆ ಬಹುಯಿರಿಸೆನನ್ನೆಯಿಂದಲಿ ಪೂಜೆ ಪರಿಕರಂಗಳ ಕೊಂಡುಸ್ವಪ್ನ ಸೂಚಕದಂತೆ ನಿನ್ನರ್ಚನೆಯ ಕಾತುರಳ 1 ತರತಮದಿ ಸುಜ್ಞಾನ ಹರಿಗುರೂ ಸದ್ಭಕ್ತಿಪರಮ ವೈರಾಗ್ಯವನು ವಿಷಯಾದಿಗಳಲೀಪರತತ್ವ ಹರಿಯೆಂಬ ವರಮತಿಯ ನೀನಿತ್ತುಗುರುಮಧ್ವ ಮತದಲ್ಲಿ ಪರಮದೀಕ್ಷೆಯನೀಯೋ 2 ಪತಿ ಸುತರು ಹಿತರಲ್ಲಿ | ಗತಿದಾತ ಗುರುವಿನೊಳುಕ್ಷಿತಿರಮಣ ತವವ್ಯಾಪ್ತಿ ಮತಿಯ ಪಾಲಿಸುತಗತಿ ದೋರೊ ಸನ್ಮುಕುತಿ ಪಥವನೀ ಸಲಿಸುತ್ತಹುತವಹಕ್ಷಾಂತರ್ಗತ ಮನದಿ ನೆಲಸುತಲೀ 3 ಸಂಜೀವ ಪಿತನೇ |ನಂಜು ಸಂಸ್ಕøತಿ ಬಂಧ ಮೋಚಕೇಚ್ಛೆಯ ಮಾಡಿಅಂಜಿಕೆಯನೆ ಕಳೆಯೊ | ಕಂಜಾಕ್ಷ ಹರಿಯೇ 4 ಪಾವಮಾನಿಯ ಪ್ರೀಯ ಭಾವುಕಳ ಹೃದ್ಗತನೆನೀವೊಲಿದು ತವಸ್ಮರಣೆ ಸರ್ವದಾ ಸರ್ವತ್ರಈವುದಿವಳಿಗೆ ಎನ್ನ ಬಿನ್ನಪವ ಸಲ್ಲಿಪುದುಗೋವಿದಾಂಪತಿಯೆ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಮರದೆನೋ ಯನ್ನ ಶ್ರೀಹರಿಯೇ ಭಕ್ತರಿಸಿರಿಯೇ ಸ್ಮರಿಸುವರ ಧೊರಿಯೇ ಭಜಿಸವರನ ಬಿಡದಲೆ ಬಿರುದು ನಿನ್ನದೆಂದು ಪೇಳುತಿರೆ ಶೃತಿ ಪ ತಂದೆ ಕಂದನ ಭಾದಿಸಲು ಶ್ರೀಧರ ಬೇಗ ಬಂದೆನ್ನ ಸಲಹೆನ್ನಲು ಮಂದರಧರ ವಳಿ- ತೆಂದು ಸಂಧಿಸಿ ಕಾಲದ್ವಂದ್ವ ರೂಪವನೇ ಕರುಣಾಸಿಂಧು ಶ್ರೀಹರಿ 1 ಅಂದು ಅಜಾಮಿಳನು ಅಕ್ಷರದ್ವಯದಿಂದ ಮುಕ್ತನಾದನು ಕುಂದರದನ ದ್ರೌಪದಿ ಮಾನಕಾಯಿದಿ ಇಂದಿರೇಶನೆ ಮುದದಿ ಭವ ಬಂಧನದಿ ಬಲುನೊಂದೆನೋ ಇಂದು ವದನ 2 ಘನತರ ಶಿಲೆಯಾಗಿರಲು ಪಾದಸ್ಮರಿಸಲಾಕೆಯು ದುರಿತ ಕರಿವರದ 'ಹೆನ್ನೆಯ ಉರಗಶಯನಾಂಬುರುಹ ನಯನ 3
--------------
ಹೆನ್ನೆರಂಗದಾಸರು
ಮರವೆ ಮುಸುಕಿದುದುತಾ ಪರಮ ಕೃಪೆವಂತ ಬಂದು ಪ್ರಳಾಪವೇನಿದುಯೆಂದು ನನ್ನಯತಾಪವನು ತಂಪಿಸುತ ಬಿಗಿಯಪ್ಪಿದನು ದೇಶಿಕನು 1ಕಂಗಳೊಳಗಾನಂದಜಲ ಸುರಿದಂಗದೊಳು ರೋಮಾಂಚವಾಗಿಯೆಮಂಗಳಾಕೃತಿಗಂಡು ಚರಣಕ್ಕೆರಗಿದೆನು ಮರಳಿಕಂಗಳೊರತೆಯ ತೊಡೆದು ದಿವ್ಯ ಕರಂಗಳಿಂದಲಿ ಶಿರತಡ' ಸರ್ವಾಂಗವನು ಬಿಗಿಯಪ್ಪಿಯಭಯವನಿತ್ತ ದೇಶಿಕನು 2ನಿನ್ನೊಳಾನಿಹೆನೆಲ್ಲಿ ಪೋಪೆಡೆಯನ್ನು ತೋರಿಸು ನನಗೆ ನೀನಾರೆನ್ನ ಮನ ನಿನ್ನುವನುಳಿದು ನಿಲಬಲ್ಲುದೇ ಮಗನೇಇನ್ನು ಧೈರ್ಯವ ಮಾಡು ಗಿರಿಗುಹೆಯನ್ನು ಸೇರ್ವೆನು ನಾನು ಜನತತಿಯನ್ನು ಹೊದ್ದುವದಿಲ್ಲವೆಂದುಸುರಿದನು ದೇಶಿಕನು 3ಇರಿಸಿರುವೆನೀ ಪಾದುಕೆಗಳನು ಹರುಷದಿಂದರ್ಚಿಸುತ ಭಾ'ಸುಬರಿಯ ಭ್ರಾಂತಿಯ ಬಿಟ್ಟು ಭಕ್ತಿಯ ಬಲದಿ ಮಂತ್ರವನುನಿರುತ ಜಪಿಸುತ್ತಿರು ಯಥೇಚ್ಛೆಯೊಳರಿವು ಸುಖಸಂಪತ್ತಿ ಲಭಿಪುದುಪರಮ ಭಕತನು ನೀನೆನುತ ವಾಚಿಸಿದನು ದೇಶಿಕನು 4'ಜಯದಶ'ುಯ ದಿವಸ ಲಭಿಸಿತು 'ಜಯಕರ ಮುಂದಿನ್ನು ನಿನಗೆಲೆದ್ವಿಜನೆ ಸುತ ಪೌತ್ರಾದಿ ಕುಲಪಾರಂಪರೆಗೆ ನಿನ್ನಾಸುಜನತೆಯ ಕರುಣಿಪುದು ಭಕ್ತವ್ರಜದೊಲೋಲಾಡುವದು ತಪ್ಪದು'ಜಯಸಾರಥಿ ನಿನ್ನ ವಶವೆಂದನು ಗುರೂತ್ತಮನು 5ಅನಿತರೊಳು ಜನಸಂದಣಿಯ ಧ್ವನಿಯನು ತಿಳಿದು ನಾನೆದ್ದೆ ಬೇಗದಿಘನಕೃಪಾನಿಧಿ ಗುರುವ ಕಾಣದೆ ಮತ್ತೆ ಬಳಲಿದೆನುಇನನುದಿಸಿದೊಂದರೆಘಳಿಗೆ ತಲೆಯನು ಬಿಡದೆುದ್ದಲ್ಲಿ ಪಾದುಕೆಯನು ಶಿರದಿ ತಾಳಿದೆನು ಮನೆಗೈದಿದೆನು ಹರುಷದಲಿ 6ತಿರುಪತಿಯ ವೆಂಕಟನು ಸುಖವನು ಕರುಣಿಸಲು ದೇಶಿಕನ ತನುವನುಧರಿಸಿ ಪಾದುಕೆುತ್ತು ಸಲ'ದನೊಲಿದು ಕೃಪೆುಂದಹರುಷದಿಂದೀ ದಿವಸ ಶ್ರೀ ಗುರುವರನ ಪೂಜಾಕಾರ್ಯವೆನಿಪುದುನಿರುತ ಭಜಿಸುವರಿಂಗೆ ಸಕಲೇಷ್ಟಾರ್ಥ ಸಿದ್ಧಿಪುದು * 7
--------------
ತಿಮ್ಮಪ್ಪದಾಸರು