ಒಟ್ಟು 2985 ಕಡೆಗಳಲ್ಲಿ , 113 ದಾಸರು , 1991 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಮದೂತ ನËಮಿಭಕುತ ಕಾಮಿತದಾತ ಸುರಶೇವಿತ ಪ ಈ ಮಹಿಯೊಳೂ ಗ್ರಾಮಕೂಡ್ಲಿಗಿ ಧಾಮಮಾರುತ ಪಾಹಿಸತತಅ.ಪ ಭೂಮಿಸುತೆಯ ಕ್ಷೇಮವಾರ್ತೆಯ ರಾಮಗರುಹಿದ ಪದಕೆರಗಿದ ಹೇ ಮಹಾತ್ಮನೆ ಪ್ರೇಮದಿ ರಘು ರಾಮ ನೀಡಿದ ಬ್ರಹ್ಮನ ಪದ 1 ಇಂದು ಕುಲದಿ ಬಂದು ಕೌರವ ವೃಂದ ಮಥಿಸಿದೆಯಾ ಪಾಂಡು ತನಯ ಪೊಂದಿದಿಯಾ ನಂದಗೋಪನ ಕಂದನ ಕೃಪೆಯಾ ಪಾಲಿಸಯ್ಯಾ 2 ವ್ಯಾಸಶಿಷ್ಯ ಯತೀಶ್ವರ ತವ ಶಾಸ್ತ್ರದಿ ಮತಿಯಾ ಕರುಣಿಸಯ್ಯಾ ಶ್ರೀಶಕಾರ್ಪರ ವಾಸ ಶ್ರೀನರ ಕೇಸರಿಗೆ ಪ್ರೀಯ ಮಧ್ವರಾಯಾ 3
--------------
ಕಾರ್ಪರ ನರಹರಿದಾಸರು
ರಾಮನಾಮ ಕೀರ್ತನೆ ಮಾಡೊ ಮುದಗೊಡೊ ಪ ಹೃತ್ತಾಮರಸದಿ ನೋಡೋ ಕೊಂಡಾಡೊ ಅ.ಪ ವರಋಷಿ ಎನ್ನಿಸಿದಾತನ ಮರುತಾತ್ಮಜಾದಿ ನುತನ ಸುಚರಿತನ 1 ಬ್ರಹ್ಮಾದಿದೇವ ವಂದ್ಯನಾ ರಾಜೇಂದ್ರನಾ 2 ಭರತ ಶತೃಘ್ನ ಲಕ್ಷ್ಮಣ ಸೇವ್ಯನ ಸರಸಿಜಗಾಪ್ತಜ ಭಾವ್ಯನ ನೃಪಾಗ್ರಗಣ್ಯನಾದನ ವಿನೋದನಾ 3
--------------
ಗುರುರಾಮವಿಠಲ
ರಾಮನಾಮವ ನುಡೀವೆ ಶ್ರೀರಾಮ ನಿನ್ನನು ಪಿಡೀವೆ ಪ ಧಾಮ ನೀ ಬಿಟ್ಟೇಳು ಸುರಧಾಮನಾ ಪಿಡಿ ಕೇಳು ಆಮ್ಯಾಲ ಪೇಳು ಕಾಮಿನೀಯಾತ್ಮಜರಗತಿ ಯಿನ್ನಾವುದೈ ಈ ಪರಿಯು ಮಾಡಲು ರಾಮರಾಮನುತಡಿಗಡಿಗೆ ನುಡಿದೀ ಮನೆಯೆ ಭವವೀಯವರಿವೆನು 1 ರಥಕೆ ಕುದುರೆಗಳೆರಡು ಭವರಥಕೆ ದಂಪತಿ ಜೋಡು ರಥ ನಡೆಸಿ ನೋಡು ಪಥವು ಗಮನಕೆ ಸುಲಭವಲ್ಲವೆ ಇತರ ಭಯವದಕೆನಿತಹುದು ಪೇಳ್ ಸತತನಿಲಸುತ ಗತಿಯ ತೋರಲು ಪತನೆಡರುಗಳ ಕಥೆಯನರಿಯಿಸು 2 ಪೆರ್ಮರವೆ ನೀ ಪುಟ್ಟಿ ಸಲೆಗಾರ್ನೆರಳು ಮಾಡಿಟ್ಟಿ ಮೂರ್ಲೋಕ ತೊಟ್ಟ ಶೇರಲದ ನರವಿರ್ಹಗಳು[?] ಹರಿಹರಿಯೆನುತ ಬಾಯ್ತೆರದು ನುಡಿಯಲು ಸುರತರು
--------------
ನರಸಿಂಹವಿಠಲರು
ರಾಮರಾಮೆನ್ನಿರೋ ಮುಖ್ಯ ತಾ ಕಾರಣ ನೇಮದಿಂದಾಯಿತು ಅಹಲ್ಯೋದ್ದರಣ ರೋಮರೋಮಕೆ ತಾ ಪ್ರೇಮ ಬಾಹಗುಣ ನಾಮಸ್ಮರಿಸಿ ದಶರಥಾತ್ಮಜನ 1 ಒಮ್ಮೆ ಸ್ಮರಿಸಿರೊ ರಾಮರಾಮೆಂದು ತಾ ಸುಮ್ಮನೆ ಬಾಹುದು ಸಾರದ ಅಮೃತ ಸಂಜೀವ ತಾ ಝಮ್ಮನೆ ಹಾದಿಮಾಡಿತು ಸಮುದ್ರ ತಾ 2 ರಾಮರಾಮೆನ್ನಲು ಸಾಮರಾಜ್ಯಹುದು ನೇಮದಿಂದೆನ್ನಿರೊ ಶ್ರಮ ನೀಗೋಗುದು ನಾಮ ಕೊಂಡಾಡಲು ರಾಮನಂತಾಹುದು ಸುಮ್ಮನೆಯಾದರೆ ತಾಮಸ ಬಾಹುದು 3 ರಾಮರಾಮೆಂದರೆ ಬ್ರಹ್ಮರಾಕ್ಷಸ ತಾ ಸುಮ್ಮನೆ ಒಡಿಹೋಗುದು ತಾತ್ಕಾಲತಾ ನಾಮ ಸೇವಿಸಲು ಸುಮ್ಮಲ್ಹೊಳೆದು ತಾ ಝಮ್ಮನೆ ಬಾಹುದು ಭಾಗ್ಯ ಕೈಕೊಟ್ಟು ತಾ 4 ರಾಮನಾಮವೆ ತಾ ಪಾಪಕೆ ತಾ ನಾಮ ತೇಲಿಸಿತು ನೀರೊಳು ಪರ್ವತ ನೇಮದಿಂದಾದರ ಭಕ್ತರರಹುತಾ ಸೀಮಿ ಕೈಕೊಟ್ಟಿತು ಭಕ್ತಗೆ ಶಾಶ್ವತ 5 ನಾಮವೆ ಕಪಿಕುಲವ ತಾರಿಸಿತು ಸೋಮಶೇಖರಗೆ ತಾನೆ ಪ್ರಿಯಾಯಿತು ಗ್ರಾಮನಂದಿಯಲಿ ನೇಮಪೂರಿಸಿತು ರೋಮರೋಮೆಲ್ಲ ಭರತಗ ಸುಖವಾಯಿತು 6 ಸ್ವಾಮಿ ಶ್ರೀರಾಮನಾಮ ಸುಅಮೃತ ಕಾಮಪೂರಿಸುವ ಕಾಮಧೇನುವೆ ತಾ ನೇಮದಿಂದಾಗುವ ಮಹಿಪತಿಗಿಂತ ರಾಮರಾಜ್ಯವೆ ಎನ್ನೊಳಗಾಗೆದ ತಾ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ರಾಮಾ ಕೃಷ್ಣಾ ಗೋವಿಂದಾ ಗೋಪಾಲ ಕೇಶವಾ | ಭವ ಪಾಶವಾ ಪ ಅಹಂಮಮತಾವೆಂಬಾ ಸಂಚಾರ ವಾಯಿತು | ಸೋಹಂವೆಂಬಾ ತಿಳಿವಾದೆಚ್ಚರ ಹೋಯಿತ್ತು | ನಾಹಂಕರ್ತಾನೆಂದು ಸುವಿಚಾರ ಸೇರಿದಾ | ಸೋಹಂ ಎಂದು ನುಡಿಯದಾ ಕುಮತಿ ಮೀರಿದಾ 1 ಅನಾತ್ಮದಲ್ಲಿ ಆತ್ಮ ಭಾವನೆ ಮೂಡಿದೇ | ಸನಾತನ ಚೈತನ್ಯ ತಾನೆಂದು ನೋಡದೆಲ | ಮನದಿಂದ ಈ ಕ್ಷಣ ತ್ರಯವಕೂಡಿದೇ | ಕನಸಿನಂದದಿ ಸಂಸಾರ ದೊಳಾಡಿದೇ2 ಮರಹು ಬಿಡಿಸಿ ನಿನ್ನೆಚ್ಚರ ದೋರಿಸೀ | ಚರಣದ ಭಜನೆಗೆ ಕಣ್ಣ ದೆರೆಸೀ | ಗುರುಮಹಿಪತಿ ಪ್ರಭು ದಯಬೀರಿಸೀ | ಹೊರೆವದೆನ್ನಯ ಅಪರಾಧ ಕ್ಷಮಿಸಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಾಮಾಯನ್ನಮ:ರಾಮ ಸದಾ ಓಂ ರಾಮಾಯನ್ನಮ:ರಾಮ ಪ ವೇದಾದಿ ರಾಮ ವೇದಾಂತರಾಮ ವೇದಾಂತ ವೇದಾದಿಗಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 1 ವೇದಮಯ ರಾಮ ವೇದ ನಿರ್ಮಯ ರಾಮ ವೇದ ವೇದಾತೀತಕಾದಿ ರಾಮ ಮಹ ದಾದಿಗಾದಿರಾಮ ( ಸದಾ) ಓಂ ಮಹ ದಾದಿಗಾದಿ ರಾಮ 2 ನಾದಯುತಾದಿ ರಾಮ ನಾದರಹಿತಾದಿ ರಾಮ ನಾದಾತೀತಾದ್ಯನಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 3 ಆದಿಗಾದಿರಾಮ ಅ ನಾದಿಗಾದಿರಾಮ ಆದಿ ಅನಾದಿಗಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 4 ಸತ್ಪಥದಾದಿರಾಮ ¸ À ಚ್ಚಿತ್ತದಾದಿರಾಮ ಉತ್ಪತ್ತಿ ಸ್ಥಿತಿಲಯಕಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 5 ಸ್ವರ್ಗ ಭೋಗಾದಿ ರಾಮ ಧೀರ್ಘಕ್ಕೆ ದೀರ್ಘಾದಿಗಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 6 ಜಪತಪದಾದಿ ರಾಮ ಗುಪಿತ ಗುಪ್ತಾದಿ ರಾಮ ಅಪರೋಕ್ಷ ಪರೋಕ್ಷಾದಿಗಾದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 7 ಮಂತ್ರಮಯಾದಿ ರಾಮ ಮಂತ್ರ ತಂತ್ರಾದಿಗಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 8 ಮಾಯಮಯಾದಿ ರಾಮ ಮಾಯ ನಿರ್ಮಯ ರಾಮ ಮಾಯ ಮಾಯಾದಿಗಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 9 ಕಾಲಕಾಲದಿ ರಾಮ ಕಾಲಮೂಲಾದಿ ರಾಮ ಕಾಲಕಾಲನಿಗಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 10 ದಶರಥರಾಮ ದಶರಥಗಾದಿ ರಾಮ ದಶವಿಧೌತಾರದಾದಿಗಾದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 11 ದಿವ್ಯಮಹಿಮಾದಿ ರಾಮ ಭವ್ಯಚರಿತಾದಿ ರಾಮ ದಿವ್ಯ ದೇವರ ದೇವರಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 12 ಬ್ರಹ್ಮನೆಯಾದಿ ರಾಮ ನಿರ್ಮಲಾತ್ಮಾದಿ ರಾಮ ಬ್ರಹ್ಮ ಬ್ರಹ್ಮಾದಿಗಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 13 ಸತ್ಯ ಸತ್ಯಾದಿ ರಾಮ ನಿತ್ಯ ನಿತ್ಯಾದಿ ರಾಮ ತತ್ವ ಪಂಚದಾದಿಗಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 14 ಭುವಿತ್ರಯದಾದಿ ರಾಮ ಭವಭವದಾದಿ ರಾಮ ದಿವನಿಶಿಗಳಿಗಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 15 ಬೋಧಾದಿಮಯ ರಾಮ ಬೋಧಾದಿಗಾದಿ ರಾಮ ಸ ಸಾಧನ ಸಿದ್ಧಿಯಾದಿಗಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 16 ನಿರ್ನಾಮ ರಾಮ ನಿರ್ಗುಣ ನಿರಂಜನಾದಿಗಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 17 ಭಕ್ತಭಿರಾಮ ಮುಕ್ತೀಶ ರಾಮ ನಿತ್ಯ ನಿರ್ಮಲ ಜಗದಾದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 18 ಚಿನುಮಯ ರಾಮ ಚಿದ್ರೂಪ ರಾಮ ಜನನಮರಣ ಹರಣಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 19 ರಮಾಧವ ರಾಮ ಕ್ಷಮೆಯುತ ರಾಮ ಸುಮನಸ ಭಕ್ತಾಧೀನ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 20 ಜಯ ಜಯ ರಾಮ ಜಯ ಶ್ರೀರಾಮ ಜಯವೆಂದು ನೂರೆಂಟು ಪೊಗಳಲೀ ನಾಮ ದಯದೀಯ್ವಮುಕ್ತಿ ರಾಮ ಸದಾ ಓಂ ಮಹ ದಾದಿಗಾದಿ ರಾಮ21
--------------
ರಾಮದಾಸರು
ರುದ್ರದೇವರ ಪ್ರಾರ್ಥನೆ ಫಾಲಲೋಚನ ಎನ್ನ ಪಾಲಿಸು ಬೇಗ ನೀಲಕಂಧರ ಕರುಣಾಳು ಕೇಳೀಗ ಪ. ಬಂದ ಮೋಕ್ಷಕೆ ಹೇತುವೆಂದು ಪುಟ್ಟಿದ ಮನ ಮಂದಿರ ನೀ ಎನ್ನ ಕುಂದನೆಣಿಸದಿರು 1 ತುಂಬಿತ್ತೆನ್ನುವ ಶಶಿಬಿಂದಾ ಕೂಡಿಟ್ಟಿದೀ- ಡಂಬ ನೀನೆಂತು ತ್ರಯಂಬಕನಾಗುವಿ 2 ರಾಮಚಂದ್ರನ ದಿವ್ಯ ನಾಮಾಮೃತವ ನಿತ್ಯ ನೇಮದಿ ಪನ್ನಂಗ ಲಲಾಮನ ಸೇವಿಸುವಿ 3 ಪಾವನಾತ್ಮಕ ಲಕ್ಷ್ಮಿಧಾಮನ ಸಹಸ್ರ ಸುತ್ರಾಮ ತಾನರಿಯನು 4 ವೈಷ್ಣವಾಗ್ರಣಿ ನೀನು ಕೃಷ್ಣನ ಪ್ರೀತಿಗಾಗಿ ದುಷ್ಟರಿಗೊರವಿತ್ತು ಭ್ರಷ್ಟಗೊಳಿಸುವಿ 5 ಜೇಡಿ ಮೈಯಲಿ ಧರಿಸಿ ಮೂಢರ ಮೋಹಿಸುವಿ ನೋಡುವಿ ಮನದಿ ಗರೂಡಗಮನನ 6 ಪಾದ ಪಂಕಜ ಭಜಿಸುತಕಿಂಕರವರದನಾದ ಶಂಕರರಾಯ 7
--------------
ತುಪಾಕಿ ವೆಂಕಟರಮಣಾಚಾರ್ಯ
ಲಕ್ಷ್ಮಿ ನರಹರಿ ವಿಠಲ | ರಕ್ಷಿಸೋ ಇವಳ ಪ ತ್ರ್ಯಕ್ಷ ಬಿಂಬನೆ ಸ್ವಾಮಿ | ಪಕ್ಷಿವಹ ಕರುಣಾಕಟಾಕ್ಷ ದಿಂದೇಕ್ಷಿಸುತ | ಕಾಪಾಡೊ ಹರಿಯೇ ಅ.ಪ. ಅಕ್ಷಿ ಮೂರುಳ್ಳ ನಿಟಿ | ಲಾಕ್ಷನೈ ರೂಪದಲಿಅಕ್ಷಿ ಗೋಚರನಾಗಿ | ಸ್ವಚ್ಛ ತೈಜನನೇದೀಕ್ಷೆ ದಾಸತ್ವದಲಿ | ಲಕ್ಷ್ಯವಿಟ್ಟಿಹಳ ಉ-ಪೇಕ್ಷಿಸದೆ ದಯತೋರ್ದೆ | ಲಕ್ಷ್ಮಿ ನರಸಿಂಹಾ 1 ಮನ್ಯು ಸೂಕ್ತದಿಂ ಬ | ಹ್ಪನ್ನ ಭೊಕ್ತøವಿನಿಂದಚೆನ್ನಾಗಿ ಸೇವಿತನೆ | ಅನ್ನಂತ ಮಹಿಮಾಬಿನ್ನವಿಪೆ ನಿನಗೆ ಕಾ | ರುಣ್ಯ ಮೂರುತಿ ಹರಿಯೆಕನ್ಯೆಗಭಯದನೆ ಆ | ಪನ್ನ ಪರಿಪಾಲಾ 2 ಲೌಕಿಕದಿ ಬಹುಪರಿಯ | ಸೌಖ್ಯಗಳ ನೀನಿತ್ತುಪ್ರಾಕ್ಕು ಕರ್ಮವ ಕಳೆದು | ಕಾಪಾಡೊ ಹರಿಯೇ |ಚೊಕ್ಕ ಭಕ್ತಿ ಜ್ಞಾನ | ಅಕ್ಕರದಿ ತವಪದದಿಉಕ್ಕುವ ಪರಿಮಾಡು | ರಕ್ಕಸಾಂತಕನೇ 3 ನೀಚೋಚ್ಚ ತರತಮವು | ಪಂಚ ಬೇದವನರುಹಿಸಂಚಿತವ ದಹಿಸೂವ | ಹಂಚಿಕೆಯನಿತ್ತೂಅಂಚೆವಹಪಿತನೆ ಹೃ | ತ್ಪಂಕಜದಿ ನಿನಕಾಂಬಸಂಚಿಂತನೆಯ ನೀಯೊ | ಪಂಚ ಪ್ರಾಣಾತ್ಮಾ 4 ಪಾವಮಾನಿಯ ಪ್ರೀಯ | ಸಾರ್ವಕಾಲದಿ ನಿನ್ನಪಾವನ ಸ್ಮøತಿಯಿತ್ತು | ಭಾವದಲಿ ತೋರೋ |ನೀವೊಲಿಯುತಿವಳಿನ್ನ | ಕಾವುದೆನೆ ಬಿನ್ನೈಪೆಗೋವಿದಾಂಪತಿಯೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಲಕ್ಷ್ಮೀ ನಾರಾಯಣ ವಿಠಲ | ಪೊರೆಯ ಬೇಕಿವಳಾ ಪ ವಾಹನ ದೇವ | ಲಕ್ಷುಮಿಯ ರಮಣಾ ಅ.ಪ. ಸೃಷ್ಟಿ ಸ್ಥಿತಿ ಸಂಹಾರ | ಅಷ್ಟಕ್ಕು ಕಾರಣನೆಕಷ್ಟಗಳ ಪರಿಹರಿಸಿ | ಕಾಪಾಡೊ ಹರಿಯೇ |ಶಿಷ್ಟ ಸದಾಚಾರ | ನಿಷ್ಠೆಯಲಿ ಗೈಯ್ಯುವಳುಶಿಷ್ಟೇಷ್ಟ ಹರಿಯೆ ಸದ | ಭೀಷ್ಟಗಳಗರೆಯೋ 1 ವಿೂಸಲೆಂದೆನಿಸಿರುವ | ದಾಸತ್ವದಾಕಾಂಕ್ಷೆಸಾಸಿರಕ್ಕೋರ್ವರಿಗೆ | ಲೇಸು ಪುಟ್ಟವುದೋಈ ಸಮಯದಲ್ಲೀಕೆ | ಆಶಿಸುತ್ತಿಹಳಯ್ಯಕೇಶವನೆ ಒಲಿದಿವಳ | ದಾಸ್ಯ ಸ್ವೀಕರಿಸೋ 2 ಶುದ್ಧ ತರತಮ ಜ್ಞಾನ | ಮಧ್ವೇಶನಲಿ ಭಕುತಿಇದ್ವದಕೆ ತೃಪ್ತಿಯಿಂ | ಬದ್ಧ ವೈರಾಗ್ಯಾಸಿದ್ಧಿಸುತ ಸಾಧನದಿ | ಬದ್ಧ ಕಂಕಣಳೆನಿಸೊಅದ್ವಿತೀಯನೆ ಹರಿಯೆ | ಮಧ್ವಾಂತರಾತ್ಮಾ 3 ಮುಪ್ಪುರದ ವೈರಿನುತ | ಸರ್ಪಶಯನನೆ ದೇವಾಸ್ವಪ್ನ ಸೂಚನೆಯಂತೆ | ಗೋಪ್ಯದಂಕಿತವಾಸುಪ್ತೀಶ ಇತ್ತಿಹೆನೊ | ಒಪ್ಪಿ ಕೈಪಿಡಿ ಇವಳಗುಪ್ತ ಮಹಿಮನೆ ದೇವ | ಆಪ್ರಕಟ ಹರಿಯೇ 4 ಶರ್ವಾದಿ ದಿವಿಜೇಡ್ಯ ಶಾರ್ವರೀಕರ ಪಾಲದುರ್ವಾದಿ ತಿಮಿರಕ್ಕೆ ಮಾರ್ತಾಂಡ ರೂಪೀದರ್ವಿ ಜೀವಿಯ ಕಾವ | ನಿರ್ವಹಣೆ ನಿನ್ನದೋಗುರ್ವಂತರಾತ್ಮ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಲಕ್ಷ್ಮೀ ಮನೋಜ್ಞ ವಿಠಲ | ಕಾಪಾಡೊ ಇವಳಾ ಪ ಪಕ್ಷೀಂದ್ರವಹ ಹರಿಯೆ | ಇಕ್ಷುಶರ ಪಿತನೇ ಅ.ಪ. ಸುಕೃತ | ದಿಂದ ಫಲ ತೊರೆತಿಹುದುಮಂದಾಕೀನಿ ಜನಕ | ಇಂದಿವಳ ಪೊರೆಯೆ 1 ಹರಿಯೆ ಪರತರನೆಂಬ | ಸುರರ ಮನೊ ಭಾವದಲಿಹರಿ ಗುರು ಹಿರಿಯರಲಿ | ವರಭಕ್ತಿಯುತಳೂತರತಮದ ಸುಜ್ಞಾನ | ವರಭೇದ ಪಂಚಕದಅರಿವಿತ್ತು ಪೊರೆ ಇವಳ | ಮರುತಾಂತರಾತ್ಮ 2 ಕಂಸಾರಿ ಪೂಜೆ ಎಬಂಶವನು ತಿಳಿಸುತ್ತ | ಕಾಪಾಡೊ ಹರಿಯೇಸಂಶಯವುರಹಿತ ತ | ತ್ವಾಂಶ ದರಿವಿತ್ತು ವಿಪಾಂಸಗನು ಹರಿಯಪದ | ಪಾಂಸುವನೆ ತೊಡಿಸೋ 3 ಅಕ್ಷಯ ಫಲದಾತಈಕ್ಷಿಸೋ ಇವಳ ಕರು | ಣೇಕ್ಷಣದಿ ಹರಿಯೇ 4 ಗೋವತ್ಸ ದನಿಕೇಳಿ | ಧಾವಿಸುವ ಪರಿಯಂತೆಶ್ರೀವರನೆ ನೀನಾಗಿ | ಓವಿ ಪೊರೆ ಎಂಬಾಆವ ಈ ಬಿನ್ನಪವ | ನೀವೊಲಿದು ಸಲಿಸುವುದುಗೋವಿದಾಂಪತಿ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಲಕ್ಷ್ಮೀ ಮನೋಹರ ವಿಠಲ | ರಕ್ಷಿಸೋ ಹರಿಯೇ ಪ ಲಕ್ಷಿಸದಲೇ ಇವಳ | ಲಕ್ಷಾಪರಾಧಾ ಅ.ಪ. ತೈಜಸ ಮೂರ್ತಿದರುಶನವ ತಾನಿತ್ತು | ಹರುಷ ಪಡೆಸಿಹನೋಹರಿದಾಸ್ಯಕೇ ಮಾರ್ಗ | ವರಸೂಚಿ ಎಂಬಂತೆಪರಮ ಸಿದ್ಧತೆ ತೋರ್ದೆ | ವರಸತೀ ಮಣಿಗೇ 1 ಕಾರುಣಿಕ ನೆಂ | ದರಿತು ಬೇಡುವೆ ಹರಿಯೆಸರುವ ಕಾರ್ಯದಿ ನಿನ್ನ | ಸ್ಮರಣೆ ಸುಖವೀಯೋ 2 ಎರಡು ಮೂರ್ಭೇಧಗಳ | ಅರಿವನೀಕೆಗೆ ಇತ್ತುಎರಡು ನಾಲ್ಕರ ವರ್ಗ | ದೂರಗೈಸೋಮರುತಾಂತರಾತ್ಮ ನಿ | ನ್ಹೊರತು ಕಾಯುವರಾರೊಎರಡೇಳು ಭುವನಗಳ | ಅರಸಿಯೂ ಕಾಣೇ 3 ವಿಶ್ವ ಕರ್ಮ | ಸತ್ಶ್ರವಣ ಕೊಡುತಾ 4 ಭೂವಿ ಬುಧ ಹೆದ್ದೈವ | ಮಾವಿನೋದಿಯೆ ಹರಿಯೆನೀವೊಲಿಯ ದಿನ್ನಿಲ್ಲ | ಮಾವ ಕಂಸಾರೀದೇವ ದೇವೇಶ ಗುರು | ಗೋವಿಂದ ವಿಠ್ಠಲ್ಲಭಾವದೊಳು ಮೈದೋರಿ | ಕಾವುದೀಕೆಯನೂ 5
--------------
ಗುರುಗೋವಿಂದವಿಠಲರು
ಲಕ್ಷ್ಮೀ ವೆಂಕಟೇಶ ವಿಠಲ | ರಕ್ಷಿಸೋ ಇವಳಾ ಪ ವಿಶ್ವ ವ್ಯಾಪಕನೇ ಅ.ಪ. ಪುಟ್ಟಿ ಸತ್ಕುಲದಲ್ಲಿ | ತೊಟ್ಟು ಸತ್ಸಿದ್ಧಾಂತ ಇಷ್ಟ ಪಡುತಿಹಳಯ್ಯ | ಕಷ್ಟದಾಸತ್ವಾಇಷ್ಟ ಮೂರುತಿ ನೀನು | ತೈಜಸೀ ರೂಪದಲಿಸ್ಪಷ್ಟ ತೋರಿದ ಹರಿಯೆ | ಇತ್ತೆ ಉಪದೇಶಾ 1 ಮರುತ ಮತದಲಿ ದೀಕ್ಷೆ | ಹಿರಿಯರನು ಸರಣೆಯಲಿನಿರುತ ಆಸಕ್ತಿಯನು | ಕರುಣಿಸುತ ಭವದಾಶರಧಿಯನೆ ದಾಟಿಸುವ | ಮಾರ್ಗವನೆ ತೋರೊ ಹರಿಕರುಣಾಂಬುನಿಧಿಯೆಂದು | ಮೊರೆ ನಿನಗೆ ಇಡುವೇ 2 ಕಷ್ಟ ನಿಷ್ಠೂರಗಳ | ಸುಷ್ಠುಸಮತೆಲಿ ಉಂಬಶ್ರೇಷ್ಠ ಮತಿಯನೆ ಇತ್ತು | ರಕ್ಷಿಸೋ ಇವಳಾ |ಅಷ್ಟ ಸೌಭಾಗ್ಯಗಳ | ಕೊಟ್ಟು ಕಾಯಲಿ ಬೇಕೊಕೃಷ್ಣ ಮೂರುತಿ ಹರಿಯೆ | ಭಕ್ತ ವತ್ಸಲ್ಲಾ 3 ಪರಮಾರ್ಥ ಸಾಧನಕೆ | ಗುರು ಕರುಣಬೇಕೆಂಬವರಮತಿಯ ಕರುಣಿಸುತ | ಪೊರೆಯ ಬೇಕಿವಳಾಗರುಡ ಗಮನನೆ ದೇವ | ಸರ್ವಾಂತರಾತ್ಮಕನೆಕರುಣದಿಂ ಕೈ ಪಿಡಿದು | ಉದ್ಧರಿಸೋ ಇವಳಾ 4 ಪಾವಮಾನಿಯ ಪ್ರೀಯ | ಭಾವದಲಿ ಮೈದೋರಿಜೀವಿಯನು ಉದ್ಧರಿಸೋ | ದೇವ ದೇವೇಶಾಗೋವತ್ಸದನಿ ಕೇಳಿ | ಆಪು ಪೊರೆವಂತೆ ತೋರಿಗೋವಿದಾಂಪತಿ ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಲಕ್ಷ್ಮೀನಾಥ ವಿಠಲ | ರಕ್ಷಿಸೊ ಇವನಾ ಪ ಇಕ್ಷುಚಾಪನ ಪಿತನೆ | ಅಕ್ಷರನೆ ದೇವಾ ಅ.ಪ. ನಿತ್ಯ ತೃಪ್ತಾತ್ಮಾಅರ್ಥಿಯಲಿ ಲಕ್ಷ್ಮಿಯನು | ಭಕ್ತಿಯಿಂ ಸೇವಿಸುತಪ್ರಾರ್ಥಿಸುವ ತವಪ್ರೀತಿ | ಲಕ್ಷ್ಮಿವಲ್ಲಭನೇ 1 ಅಪ್ರಮೇಯನ ಪತ್ನಿ | ಲಕ್ಷ್ಮಿಯನೆ ತುತಿಸುತ್ತಸುಪ್ರಸಾದವ ಕೊಂಡು | ಗೃಹಕಾಗಿ ತೆರಳೀಅಪ್ರತಿಮ ಸಂತಸದಿ | ಹರಿಯ ಕೊಂಡಾಡುತ್ತಅಪ್ಪವೆಂಕಟನನ್ನು | ಹಾಡಿ ಹೊಗಳಿದನಾ 2 ವೇದಾಂತ ವೇದ್ಯ ಹರಿ | ವೇದ್ಯವಾಗಲಿ ಇವಗೆಮೋದ ತೀರ್ಥರ ಮತದ | ಸಾದು ತತ್ವಗಳುಹಾದಿಯಾಗಲಿ ಮುಕುತಿ | ಸಾಧನ ಸುಮಾರ್ಗಕ್ಕೆಬಾದರಾಯಣ ದೇವ | ಮಾಧವನೆ ಹರಿಯೆ 3 ಕರ್ಮಮರ್ಮವ ತಿಳಿಸಿ | ದುಷ್ಕರ್ಮ ಪರಿಹರಿಸಿನಿರ್ಮಮನ ಮಾಡಯ್ಯ | ಬ್ರಹ್ಮಾದಿ ವಂದ್ಯಪ್ರಮ್ಮೆಯಂಗಳ ಬೋದ | ಸಲ್ಲಲಿತವಾಗಿರಲಿಅಮ್ಮಹಾ ಪರದೈವ | ಹರಿಯೆಂದು ತಿಳಿಸೊ4 ಅದೈತ ತ್ರಯದರಿವು | ಬುದ್ದಿಗೇ ನಿಲುಕಿಸುತಸಿದ್ಧಾಂತ ಪಥವೆಂಬ | ಹೆದ್ದಾರಿ ನಡಸೋಕೃದ್ಧಬಳಮರ್ದನನೆ | ಮುದ್ದು ನರಹರಿದೇವಅದ್ವಿತೀಯನೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಲಕ್ಷ್ಮೀಲೋಲ ವಿಠಲ ರಕ್ಷಿಸಲಿ ಬೇಕು ಹರಿಯೇಪಕ್ಷ್ಮಗಳು ಅಕ್ಷಿಗಳ ಅಗಲದಿಪ್ಪಂತಿವನಾ ಪ ದಾಸತ್ವ ದೀಕ್ಷೆಯಲಿ ಕಾಂಕ್ಷೆಯನು ತೋರ್ದವಗೆಮೀಸಲಿಂದಿದ್ದೆನ್ನ ಮನದಿ ತೈಜಸನೇಲೇಸು ಹರಿಕಥೆ ಸುಧೆಯ ಸಾರವನು ನೋಡೆಂದುಶ್ರೀಶತವ ಕ್ರೀಡಾ ವಿಲಾಸದಿ ಮಾರ್ಗ ತೋರೋ 1 ಕಂಕಣಾಕಾರೇಶ ಅಂಕಿತವ ನಿತ್ತಿಹೆನುಕೊಂಕುಗಳ ತಿದ್ದುತಲಿ ಕಿಂಕರನ ಸಲಹೊ |ಪಂಕಜ ಸುರರೆಲ್ಲ ಕಿಂಕರನು ನಿನಗೆಂಬಶಂಕೆ ವಿರಹಿತ ಜ್ಞಾನ ತರತಮವ ತಿಳಿಸೊ 2 ಹಿಂದಿನ ಸುಸಂಸ್ಕಾರದಿಂದಿವನ ಸಂದೋಹಬಂದುದನೆ ರಕ್ಷಿಸ್ಯಾನಂದಕರ ಮತದಲೀ |ಬಂಧು ಬಳಗವು ನೀನೆ | ತಂದೆ ತಾಯಿಯು ನೀನೆಎಂದೆಂಬ ಸುಜ್ಞಾನ ಕರುಣಿಸೈ ಹರಿಯೇ 3 ಕರ್ಮ ವೈದೀಕ ವೆನಿಸುತ್ತಕರುಣಿಸೋ ತವರೂಪ ಹೃತ್ಕಂಜದೊಳಗೇ 4 ಸರ್ವಜ್ಷ ಸರ್ವೇಶ ಸರ್ವಾಂತರಾತ್ಮಕನೆಶರ್ವವಂದ್ಯನೆ ಹರಿಯೆ ನಾಪೇಳ್ವುದೇನೋದುರ್ವಿಭಾವ್ಯನೆ ಗುರು ಗೋವಿಂದ ವಿಠ್ಠಲನೆದರ್ವಿಜೀವನು ಗೈವ ಭಿನ್ನಪವ ಸಲಿಸೋ 5
--------------
ಗುರುಗೋವಿಂದವಿಠಲರು
ಲಕ್ಷ್ಮೀಶ ಗೋವಿಂದ ವಿಠಲ ಪೊರೆ ಇವಳಾ ಪ ಪಕ್ಷ್ಮಗಳು ಅಕ್ಷಿಗಳ ಅಗಲದಿಪ್ಪಂತೇ ಅ.ಪ. ಕುಕ್ಷಿಯಲಿ ಜಗಧರಿಪ ಪಕ್ಷಿವಾಹನ ದೇವಅಕ್ಷರೇಡ್ಯನೆ ಕರುಣದೀಕ್ಷಿಸುತ ಇವಳ |ರಕ್ಷಿಪುದು ಸುಜ್ಞಾನ ಭಕ್ತಿದಾಯಕನಾಗಿಕಕ್ಷೆತರತಮ ಜ್ಞಾನ ಭೇದಪಂಚಕನರುಹಿ 1 ಪತಿಯೆ ಪರದೈವವೆಂಬುನ್ನತದ ಮತಿಯಿತ್ತುಪಥತೋರೊ ಸದ್ಗತಿಗೆ ಸರ್ವವ್ಯಾಪಕನೇ |ಹಿತದಿಂದ ಬಯಸುವಳು ತವಪಾದ ದಾಸ್ಯವನುಕೃತಿ ಪತಿಯೆ ನೀನಿತ್ತು ಸಲಹ ಬೇಕಿವಳಾ 2 ವಾಗ್ದೇವಿ ಪತಿ ಪ್ರೀಯಕೃಪೆಗೈದು | ತವಪಾದ ಹೃದುಹದಿ ನೋಳ್ಪ |ಸುಪಥವೆನೆ ಹರಿಗುರೂ ಸದ್ಭಕ್ತಿ ಕರುಣಿಪುದುವಿಪಗಮನ ಹಯವದನ ಶ್ರೀ ಲಕ್ಷ್ಮೀ ಸದನಾ 3 ಅಂಕಿತಿಲ್ಲದ ದೇಹ ಸಾಧನಕೆ ಸಲ್ಲದೆನೆಅಂಕಿತವ ವಿತ್ತಿಹೆನು ಗುರುಕರುಣದೀ | ನಿಂತು ನೀನಿವಳಲ್ಲಿ ತೋರು ತವ ಮಹಿಮೆಗಳಸಂತತದಿ ನಿನ್ನಂಘ್ರಿ ಸ್ಮರಣೆ ಕರುಣಿಸುತ 4 ಸರ್ವ ಶ್ರುತಿ ಸಮ್ಮತದ ಪವನಮತ ದೀಕ್ಷೆಯನುಸರ್ವ ಕಾರ್ಯದಿ ನಿನ್ನ ಸೇವೆ ಮತಿಯ |ಸರ್ವದಾ ಕರುಣಿಸುತ ಪೊರೆ ಎಂದು ಭಿನ್ನೈಪೆಪವನಾಂತರಾತ್ಮ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು