ಒಟ್ಟು 3122 ಕಡೆಗಳಲ್ಲಿ , 120 ದಾಸರು , 2350 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಾರತೀಶನ ಸೇರಿರೋ ಭವವಾರಿಧಿ ದಾಟುವರೆ ಸಾರ ತೋರುವ ಪ. ತುಂಗ ವಿಷಯಾಂಗಜನಿತೋತ್ತುಂಗ ತರಂಗದೊಳು ಅಂಗಜಾತ ತಿಮಿಂಗಿಲನು ತಾನುಂಗುವ ನಿಮಿಷದೊಳು ಮಂಗಳಾತ್ಮಕ ಮಾರುತನ ಸದಪಾಂಗಲೇಶವನೈದೆ ಸುಲಭದಿ ರಂಗನಿರವನು ತೋರಿ ಸಲಹುವ 1 ತ್ರೇತೆಯೊಳಗಿನ ಜಾತನಿಗೆ ರಘುನಾಥನ ತೋರಿಸಿದ ಕಾತುರದ ಪುರಹೂತನನು ಯದುನಾಥನಿಗೊಪ್ಪಿಸಿದಾ ಭೂತನಾಥನ ವಾಕ್ಯಬಲದಿಂದಾತ್ಮ ಜೀರಿಗೈಕ್ಯಪೇಳುವ ಪಾತಕಿಗಳನು ಗೆದ್ದು ತ್ರಿಜಗನ್ನಾಥ ಮುತ್ತಿದನೆಂದು ಮೆರಸಿದಿ 2 ಸೂತ್ರನಾಮಕ ಪ್ರಣವನಾಯಕ ಕ್ಷತ್ರಪುರದೊಳಿರುವಾ ಶತ್ರುತಾಪನ ಶೇಷಗಿರಿ ಪತಿಪುತ್ರನೆನಿಸಿ ಮೆರೆವಾ ಚಿತ್ರಕರ್ಮ ಚಿರಂತನಾಣುಗ ಪುತ್ರಮಿತ್ರಕಳತ್ರ ಭಾಗ್ಯದ ನೇತ್ರ ವಿಷಯ ಪರತ್ರ ರಕ್ಷಕ ಧಾತ್ರಪದಸತ್ಪಾತ್ರನೆನಿಸುವ 3
--------------
ತುಪಾಕಿ ವೆಂಕಟರಮಣಾಚಾರ್ಯ
ಭಾರತೀಶನೆ ಉದ್ಧರಿಸುವದೆನ್ನ ಪ ಕಂಸಾರಿ ಪ್ರೀಯ ಸಂ - ಸಾರ ಬಂಧನ ನಿವಾರಿಸೊ ಜವದಿ ಅ.ಪ ಅಂಜನಾದೇವಿಯ ಸಂಜಾತನೆ ಭವ ಭಂಜನ ಹರಿಪದಕಂಜಾರಾಧಕ 1 ಮಾರುತಿ ನಿನ್ನ ಸುಕೀರುತಿ ತ್ರಿಜಗದಿ ಸಾರುತಲಿದೆಯುದ್ಧಾರಕನೆಂದು 2 ಹರಿಕುಲಜಾತನೆ ಹರಿಸಂಪ್ರೀತನೆ ಹರಿಹಯ ವಿನುತನೆ ಹರಿದುರಿತವನು 3 ಕಾಮಿತ ಫಲದ ನಿಸ್ಸೀವÀು ಪರಾಕ್ರಮಿ ಪ್ರೇಮವ ಕೊಡು ಶ್ರೀ ರಾಮನ ಪದದಿ 4 ಕುಂತಿ ಕುಮಾರಾದ್ಯಂತ ವಿದೂರನೆ ಅಂತರಂಗದಿ ಹರಿಚಿಂತನೆಯಕೊಡು 5 ಧರ್ಮಾನುಜಸದ್ಧರ್ಮ ಸ್ಥಾಪಕನೆ ಕಿರ್ಮೀರಾಂತಕ ನಿರ್ಮಲ ಚರಿತ 6 ಭೀಮನೆ ಸುದ್ಗುಣ ಧಾಮನೆ ಕುರುಕುಲ ಸೋಮನೆ ಸುರಮುನಿಸ್ತೋಮನಮಿತನೆ 7 ಅರ್ಜುನಾಗ್ರಜನೆ ದುರ್ಜನ ಶಿಕ್ಷಕ ಧೂರ್ಜಟಿವಂದ್ಯನೆ ಮೂರ್ಜಗ ಕರ್ತಾ 8 ಆರ್ಯನೆ ಕೃತ ಸತ್ಕಾರ್ಯನೆ ಜಗದೊಳು ನಾರ್ಯಕುರುಪನೂರು ಶೌರ್ಯದಿ ತರಿದ 9 ಕರಿವರದನ ಚರಣಾರವಿಂದ ಯುಗ ನಿರುತ ಸ್ಮರಿಪತೆರ ಕರುಣಿಸು ಭರದಿ 10 ದುಷ್ಟದ್ವಂಸಕನೆ ಶಿಷ್ಟಪಾಲಶ್ರೀ - ಕೃಷ್ಣನಂಘ್ರಿಯಲಿ ನಿಷ್ಠೆಯ ತೋರೋ 11 ಮಧ್ಯಗೇಹ ಸುತ ಸದ್ವೈಷ್ಣವ ಯತಿ ಅದ್ವೈತಕರಿ ಹರಿ ಸಿದ್ಧಾಂತ ಕರ್ತಾ 12 ಮಿಥ್ಯಾವಾದಿಬಾಯಿ ಎತ್ತದಂತ ಶ್ರು - ತ್ಯರ್ಥವ ಪೇಳ್ದ ಸಮರ್ಥನಹುದು ನೀ 13 ಹರಿಸರ್ವೋತ್ತಮ ಸಿರಿಯು ಅಕ್ಷರಳು ಸುರರೊಳು ನೀನೆ ಪಿರಿಯನು ಸತ್ಯ 14 ಸದಮಲಚರಿತನೆ ಹೃದಯದ ತಿಮಿರವ ವದೆದು ತರಿವುದಕೆ ಉದಿತ ಭಾಸ್ಕರ 15 ಮೂರು ರೂಪಾತ್ಮಕ ಸಾರಿದೆಯನ್ನಯ್ಯs ಪಾರದುರಿತ ಪರಿಹಾರವ ಗೈಸೊ 16 ಹೇಸಿಕೆ ಭವದಲಿ ನಾಶಿಲುಕಿಹೆ ವರ - ದೇಶ ವಿಠಲನ ಸೋಶಿಲಿ ತೋರೊ 17
--------------
ವರದೇಶವಿಠಲ
ಭಾರತೀಶನೆ ಬೇಗ ಬಾರೊ ಮನ್ಮನದಲಿ ಹರಣ ಪ ಚಾರು ಭಾಸ್ಕರ ಕ್ಷೇತ್ರ ಗಾರನೆ ದಶರಥಕುಮಾರ ಸೇವಕಾಗ್ರಣಿ ಅ.ಪ ವಾರಿಧಿ ಲಂಘಿಸಿದ ಶೂರನೆ ಗಿರಿಯಾಶ್ರಯದಿ ತೋರುವಿ ಶ್ರಮಪರಿ- ಹಾರಾರ್ಥಿಗಳ ತೆರ ಘೋರ ಪಾತಕಾಂಬುದ ಸ ಮೀರ ಪಾಲಿಸೆನ್ನನು 1 ತಂದು ನೀಡಿದಿ ದ್ರುಪದ ನಂದಿನಿಯಳಿಗೆ ಸೌ ಗಂಧಿಕ ಪುಷ್ಪ ದಯದಿ ವಂದಿಸುವೆನು ಮನ ಮಂದಿರದಲಿ ಯದು ನಂದನನಂಘ್ರೀ ನೋಳ್ಪಾ ನಂದವ ಕರುಣಿಸೊ 2 ಭೇದಾಬೋಧಿಸಿ ಬಲುಮೋದವ ಗರಿವ ಶಾಸ್ತ್ರ ನೀದಯದಲಿ ರಚಿಸಿ ವಾದಿ ಮದಗಜ ಮೃ ಗಾಧಿಪನೆನಿಸಿದ ಮೋದತೀರ್ಥಾಹ್ವಯಾ- ಗಾಧ ಮಹಿಮ ಗುರು 3 ಸತತ ಸೇವಿಪ ಗರ್ಭವತಿಯಾಗಿರುವ ವಿಪ್ರ ಸತಿಯ ನುಡಿಯ ಲಾಲಿಸಿ ನತಜನ ಪಾಲನೆ ಪ- ರ್ವತ ದಿಂದಿಳಿದಶ್ವತ್ಥ ಕ್ಷಿತಿರುಹ ಮೂಲದಿ ಪಾ- ರ್ವಾತಿ ನಾಥ ಸೇವಿತನೆ 4 ಈ ಸುಕ್ಷೇತ್ರದೊಳು ವಿದ್ವಾಂಸ ದೇವರಾಜಾಖ್ಯ ಸನ್ನುತ ವಾಸಕಾರ್ಪರ ನರ ಕೇಸರಿ ಗತಿ ಪ್ರಿಯ ದಾಸ ಪಾಲಿಸೊ ಗುರು ವ್ಯಾಸರಾಜ ಪೂಜಿತ 5
--------------
ಕಾರ್ಪರ ನರಹರಿದಾಸರು
ಭಾರ್ಗವಿ ಪ ಮಹಾಲಕುಮಿ ಶ್ರೀಪತಿಗೆ ಸಮಾಸಮಳೆನಿಸಿರಲು ಅ.ಪ ಮಡುವ ಸೇರಿದ ಒಡೆಯ ಬಿಡದೆ ಮಂದರಗಿರಿಯ ಪೊಡವಿಬಗೆದು ಒಡೆದು ಕಡುಕ್ರೂರನಾದ ಬಡವನಂತೆ ಬೇಡಿ ಕೊಡಲಿ ಪಿಡಿದಿಹ ಕೆಡುಕ ಮಡದಿಯಾ ಕಳಕೊಂಡು ಕಡಹನೇರಿದ ಕ್ರಿಯಕೆ 1 ಮುಗುಧರನ ಮಾಡಿದ ಶುದ್ಧಸ್ತ್ರೀಯರನೆಲ್ಲಾ ಖಗಗಮನ ತಾ ತುರುಗವನು ಹತ್ತಿದಾಯೋಗ ಭೃಗುಮುನಿಯ ಅಪಚಯಕೆ ಕರವೀರಪುರದಲಿರೆ ನಾಗಗಿರಿಗಿಳಿದ ಪತಿಯ ಪರಿಣಯವನೆಸಗಿದೆ2 ನಾಗರಾಜನ ಕೂಗ ಕೇಳಿದಾಗ್ಹೇಳದಲೆ ಬೇಗ ಸಾಗಿಬಂದಾ ಸರಸಿನಾ ಬಳಿಗೇ ಅಂಗಜನ ವೈರಿಯ ಇಂಗಿತವನರಿತು ಹೆಂಗಳಾರೂಪದಲಿ ಮೋಹಿಸಿದ ಮಾಯಕ್ಕೆ 3 ಕ್ಷಮೆಯಸಾಗರಳೆ ನಿನ್ನ ಅನುಪಮ ಸನ್ಮಹಿಮೆ ಅಮಿತವಾಗಿಹುದು ಜಗಕಾರ್ಯದಿ ಅಮಮ ನೀನಿರಲು ನಾಭಿಕಮಲದಲಿ ಬ್ರಹ್ಮನ ಜ- ನುಮ ತೋರಿದ ಹರಿಯ ಸ್ವರಮಣನ ಕಾರ್ಯಕೆ4 ಗುಣತ್ರಯಂಗಳಭಿಮಾನಿ ಶ್ರೀ ವೇಂಕಟೇಶನರಾಣಿ ಎಣೆಯಂಟೆ ಹರಿಗುಣವನೆಣಿಸುವ ಪ್ರವೀಣೆ ಘನ್ನ ಉರಗಾದ್ರಿವಾಸವಿಠಲನ ಕರುಣ ಪೂರ್ಣಪಾತ್ರಳೆ ಹರಿಯ ವಕ್ಷಸ್ಥಳನಿವಾಸಿನಿಯೇ5
--------------
ಉರಗಾದ್ರಿವಾಸವಿಠಲದಾಸರು
ಭಾರ್ಗವಿ ದೇವಿಭೃಗುವಾರ ಬರಲಿಬೇಕು ಪ ಭೃಗುವಾರ ಬರಲಿಬೇಕ್ಹಗಲು ಪಾಯಸವುಂಡುನಗುತ ರಾತ್ರಿಲಿ ತಾಂಬೂಲಗಳ ಮೆಲ್ಲುವುದಕ್ಕೆ ಅ.ಪ. ನೂಪುರ ಮುಖ ಭೂಷನೀ ಪದ ಕುಣಿಸುತ್ತಶ್ರೀಪತಿ ಸಹ ಸುಖಾಲಾಪಗಳಾಡುತ 1 ಕಂಕಣ ಮುಖರತ್ನಾಲಂಕಾರಗಳನಿಟ್ಟುಕಿಂಕರರಿಗೆ ಮುಖಾಲಂಕಾರ ತೋರುತ2 ಶಂಕರ ಮುಖ್ಯ ಸುರಪುಂಖ ಮಧ್ಯದಿ ಶ್ರೀಮ-ದ್ವೇಂಕಟೇಶನ ದಿವ್ಯ ಟೊಂಕಾದೊಳಗೆ ಕೂತು 3 ಪಕ್ಷಿವಾಹನ ದಿವ್ಯ ವಕ್ಷಸ್ಥಳಾಶ್ರಿತೆಲಕ್ಷ್ಮೀಲೀಲಾಮೃತ ಲಕ್ಷ್ಮೀ ಕೇಳುವುದಕ್ಕೆ 4 ಇಂದಿರೇಶನ ಮೃದು ಸುಂದರೋತ್ಸಂಗದಿಪೊಂದಿ ಭಕ್ತರ ಪೂಜಾನಂದ ಭುಂಜಿಪುದಕ್ಕೆ 5
--------------
ಇಂದಿರೇಶರು
ಭಾವಜನಯ್ಯ ನಿನಗೊಲಿದ ನಾರಿಯರುಗಳ ಲಾಲಿಸೋ ಪ ಇಂದೀವರಾಯತಾಕ್ಷಿಯೊಳು ತಾ ಮುನಿದಿರಲು ಕಂದರ್ಪಣೆರಾಯ ಕೇಳಿ ತನ್ನ ಚಂದಿರನು ದಳಪತಿಗೆ ನೇಮವನು ಕೊಟ್ಟು ನಲ- ವಿಂದ ಗಿಳಿತೇರನೇರಿ ಬರಲೂ ಮುಂದೆ ಉಗ್ಘಡದ ಕೋಗಿಲೆ ಪಾಡಿ ರಭಸ- ದಿಂದ ವಾದ್ಯಗಳು ಮೊಳಗೇ ಸಂದಣಿಸಿ ಝೇಂಕಾರಗೈದ ಭ್ರಮರಾಳಿಗಳ ವೃಂದದವರನೆಂತು ಬಣ್ಣಿಸುವರೆನ್ನಳವಲ್ಲ 1 ಅಗ್ಗದ ವಸಂತ ಮಾರುತರು ಒಗ್ಗಿ ನಲಿದಾಡುತ್ತ ಬರಲು ವೆಗ್ಗಳ ಸುಗಂಧ ಪರಿಮಳದ ಪೂವಲರುಗಳ ಒಗ್ಗಿನಲಿ ಕೂಡೆ ಬರಲೂ ತನ್ನ ಕಗ್ಗೊಲೆಗೆ ದಾಳಿಯಿಟ್ಟುದು ಕಾಮ ಪುಸಿಯಲ್ಲ ದಗ್ಗಡೆಯ ಮಾಡುವುದುಚಿತವೆ ನಿನ್ನ ಸಖಿಯಳನೂ 2 ಈ ತೆರದೊಳಿಹ ಪ ಕೊಳುವಳ್ ಕಳ ರಳ್ತೆ ಸಂಜೆ ಭಟರೊಗ್ಗಿನಲಿ ಭಾರಿಯಾಗಿ ಲಲೂ ಮತ್ತೆ ಕೆಂದಳಿರ ಸಂಪಗೆಯ ಕಿಡಿಯಲರುಗಳು ಒತ್ತಿ ಸೂಸುತ್ತ ಬರಲೂ ತನ್ನ ಬತ್ತಳಿಕೆಯೊಳಗೊಂದು ಕೂರಲಗ ತೆಗೆ ವೃತ್ತ ಕುಚದಬಲೆಯಳ ಮನ್ನಿಸದೆ ಸುರಪುರದ ಸುತ ಲಕ್ಷ್ಮೀಶನಹುದೆ ಭಳಿರೇ 3
--------------
ಕವಿ ಲಕ್ಷ್ಮೀಶ
ಭಾವವೇ ಕಾರಣವೊ ಭವಕೆ ದೇವ ಪ ಭಾವಜಾಪಿತ ನಿನ್ನ ಭಾವ ಬಿಡದವ ಧನ್ಯ ಅ.ಪ. ಭಾವಸೂತ್ರದಿ ಸಿಕ್ಕ ಬರಿ ಬೊಂಬೆ ಜಗವಯ್ಯ ಭಾವಧಾರಕ ನೀನು ಎನ್ನಿಂದಲೇನಹುದೊ 1 ಎಂತು ನೀ ಕುಣಿಸಿದರೆ ಅಂತು ಕುಣಿವುದೊ ಜಗವು ತಂತ್ರ ನಿನ್ನದು ದೇವ ಜಾವ ಜಾವದಿ ಭ್ರಾಂತಿ ರೋಗವ ನೀಗಿ ಶಾಂತಿ ಪಾಲಿಸು ಹರಿಯೆ ಸ್ವಾಂತರದಿ ಸಂತತ ದರುಶನವ ಕೊಟ್ಟೆನಗೆ 2 ವಿಷಯ ಸಂಗವ ಬಿಡಿಸು ಹೃಷಿಕೇಶ ಮೃಡಮಿತ್ರ ವಿಷಮಗತಿ ಪರಿಹರಿಸು ಪ್ರಾಣಮನದ ವೃಷಭಾದ್ರಿಪಸಖ ಜಯೇಶವಿಠಲನೆ ಕರುಣಾಬ್ಧಿ ವೃಷ್ಟಿ ಮದ್ಬಿಂಬಗಿದು ವಿಹಿತ 3
--------------
ಜಯೇಶವಿಠಲ
ಭಾವಿಸಮೀರ ಗುರು ಶ್ರೀ ವಾದಿರಾಜ ನಿಮ್ಮ ಸೇವಿಪ ಜನರಿಗಭೀಷ್ಟವನೀವ ಪ ಹನುಮ ಭೀಮ ಮಧ್ವರೊಡಗೂಡಿ ವೃಂದಾವನ- ದೊಳು ಮೆರಸುವ ಮುಂದಿನ ಸೊಬಗ ಪಂಥದಿ ವೀರಶೈವರ ಗುರುವನೆ ಗೆದ್ದು ಹತ್ತಿದೆ ಮುತ್ತಿನ ದಿವ್ಯ ಪೀಠವನು 1 ಕುಂಡಿನೇಶನ ತನುಜಾತೆಯ ಪತ್ರವ ಪುಂಡರೀಕಾಕ್ಷನಿಗರ್ಪಿಸಿದ್ಯಲ್ಲೋ ಮದುವೆಯ ಸಮಯದಿ ಶಪಥದಿಂದಲಿ ಬಂದು ವಧುವಿನ ಭಾಗ್ಯವನುಳಿಸಿದೆಯಲ್ಲೋ 2 ಅರಿತುಂಡು ವಿಷವ ನೀನರಗಿಸಿಕೊಂಡ್ಯಲ್ಲೊ ನರಪತಿತನಯನ ಬದುಕಿಸಿದ್ಯಲ್ಲೋ ಭಜಿಸುತ ರಾಜೇಶ ಹಯಮುಖನಂಘ್ರಿಯ ತ್ರಿಜಗದೊಳಧಿಕ ಸೋದಾಪುರದೊಳು ನಿಂದ್ಯೋ 3
--------------
ವಿಶ್ವೇಂದ್ರತೀರ್ಥ
ಭಾಸಿಸುತಿಹ | ದಾಸರ ನೋಡಿ || ವ್ಯಾಸ ತೀರ್ಥರ ದಾಸರು ಪ ಪುರಂದರ ಕರ್ಮಜರ ಗುರು ಅ.ಪ. ಚಾರು ಚರಣ |ಧೃತ :ನೀರಜ ಹೃತ್ಸರೋರುಹದೊಳಾರಾಧಿಸ್ಯಪಾರಸುಖದಿ ಸಮೀರ ಮತ ಪ್ರಸಾರವ ಪಡಿಸೀ 1 ದಾಸಕೂಟ ಸನ್ಮೌಳಿಮಣಿ ವಿದಿತ ಜ್ಞಾನೀನ್ಯಾಸ ಕೋವಿದ ವ್ಯಾಸತೀರ್ಥ | ದಾಸ ಸುರಪ ದಾಸನೆನಿಸಿ ||ಧೃತ :ದಾಸಪಂಥ ಪೋಷಿಸೀದ ದಾಸವರ್ಯಆ ಸಮೀರ ಶಾಸಿತ ಗೌರೀಶನ ಬಳಿವಾಸಿಸಿ 2 ನಾಕಪತಿಯ ನಾಮದಾಸ | ಶತ ಚತುರ ವರ್ಷಲೋಕ ಲೋಕ ಪ್ರಕಾಶಿಸಿ | ಆಕೆವಾಳರ ವಾಕಿನಲ್ಲಿ |ಧೃತ :ಸಾಕು ಸಾಕನೆ ಪ್ರಾಕೃತ ಗೀತೆಯ ಝೇಂಕರಿಸಿದಶುಕ ಪಿತ ಗುರುಗೋವಿಂದ ವಿಠಲ ಸ್ವೀಕೃತ ಭಕುತ 3
--------------
ಗುರುಗೋವಿಂದವಿಠಲರು
ಭಾಳೆ ಗಾಬರಿಗೊಂಡಳು ಇಂದಿರಾದೇವಿಭಾಳೆ ಗಾಬರಿಗೊಂಡಳು ವ್ಯಾಲಾಶಯನನು ಇವಳ ಪೇಳಿದಂತಿರಲುಏನು ಬಾಳು ಯಾತಕೆ ಎಂದಳು ಪ. ಸಂಡಿಗೆ ಹಪ್ಪಳ ಮಂಡಗಿ ಗುಳ್ಳೋರಿಗೆ ದಿಂಡು ಸೂರಣವು ಮೊದಲಾಗಿದಿಂಡು ಸೂರಣವು ಮೊದಲಾಗಿ ಬಡಿಸೋರುದುಂಡು ಮುತ್ತುಗಳು ಉದುರುತ1 ಅಪಾರ ಮಹಿಮಗೆ ರೂಪಸುಂದರಿಯರು ಸೂಪ ಪರಮಾನ್ನ ಮೊದಲಾಗಿಸೂಪÀ ಪರಮಾನ್ನ ಮೊದಲಾಗಿ ಬಡಿಸುವವರಭಾಪುರಿ ಮುತ್ತು ಉದುರುತ 2 ಘೃತ ಘೃತ ಮೊದಲಾಗಿ ಬಡಿಸುವವರತೋರ ಮುತ್ತುಗಳು ಉದುರುತ 3 ನಗಧರನ ಪುರದೊಳಗೆ ಹಗಲು ರಾತ್ರಿಯು ಬಂದೆಝಗ ಝಗಿಸುವ ಮಣಿಯು ಖಚಿತದಝಗ ಝಗಿಸುವ ಮಣಿಯು ಖಚಿತವಾದುದರಿಂದಹಗಲು ರಾತ್ರಿಗಳು ತಿಳಿಯವು4 ಮಂದ ಗಮನೆಯರೆಲ್ಲ ಮಿಂದು ಮಡಿಯುಟ್ಟು ಇಂದಿರಾಪತಿಯ ಸರಿಯಾಗಿಇಂದಿರಾಪತಿಯ ಸರಿಯಾಗಿ ಊಟಕ್ಕೆ ಬಂದುಕುಳಿತವರು ಕಡೆಯಿಲ್ಲ5 ಪುಂಡರಿಕಾಕ್ಷÀನು ಉಂಡು ಕೈತೊಳೆದನು ದುಂಡುಮಲ್ಲಿಗೆಯ ಸೆಳಿಮಂಚದುಂಡು ಮಲ್ಲಿಗೆಯ ಸೆಳಿ ಮಂಚವನೇರಿದ ಪಾಡವಪ್ರಿಯ ಹರುಷದಿ 6 ಹದಿನಾರುಸಾವಿರ ಚದುರೆಯರು ಒಂದಾಗಿಚಲುವ ರಾಮೇಶನ ಉಪಚಾರಚಲುವ ರಾಮೇಶನ ಉಪಚಾರ ಮಾಡುವ ಸುದತೆಯರ ಸುಖಕೆ ಎಣೆಗಾಣೆ7
--------------
ಗಲಗಲಿಅವ್ವನವರು
ಭಿಕ್ಷೆ ನೀಡೋ ಹರಿಯೇ ಮುಕ್ತಿಗೊಡೆಯನೇ ಪ ಹಗಲು ಇರಳು ಎಡೆಬಿಡದಲೆ ಪೊಗಳುತ ತವ ನಾಮ ಮಹಿಮೆಯ ಜಗದೀಶನೆ ನಿನ್ನ ಚರಣ ಯುಗಳಲಿ ಬಹು ಭಕ್ತಿ ಮನ ಬಗಿ ಬಗಿಯಲಿ ನಲಿದಾಡುವ 1 ನಿತ್ಯನೆ ಸರ್ವೋತ್ತಮನೇ ಮುಕ್ತಿಪ್ರದನೇ ಪರಮಾತ್ಮನೇ ಉತ್ತಮ ವೃತ್ತಿಯಾನಿತ್ತು ನೇತ್ರದಿ ತವ ನೋಡುತ ವರ ಸ್ತೋತ್ರ ದಿನಾ ಪಾಡುತಿರುವೆ 2 ಎನ್ನಪರಾಧಗಳನ್ನು ಮನ್ನಿಸಿ ಸಲಹಯ್ಯಾ ಜೀಯಾ ಹನುಮೇಶವಿಠಲರಾಯಾ ನಿನ್ನ ಸ್ಮರಣೆಯಲ್ಲಿ ಕಾಲ ವನ್ನು ಕಳೆಯುತಿರುವ ದಿವ್ಯ 3
--------------
ಹನುಮೇಶವಿಠಲ
ಭೀಮಶೇನಾರ್ಯರು | ಭೂಮಿತ್ಯಜಿಸಿ ಪರಂ ಧಾಮವ ಸೇರಿದರು || ಶ್ರೀಮತ್ ಕಾರ್ಪರ ಕ್ಷೇತ್ರ | ಸ್ವಾಮಿಯ ಸಂಪೂರ್ಣ ಪ್ರೇಮ ಪಡೆದವರು | ಕೇಳಿದವರು ಪ ಪರಿಮಳ ಗಾತ್ರರ ಕರುಣ ಪ್ರಸಾದದಿ ಧರೆ ಸುರಾಗ್ರಣಿ ಎನಿಪ ವರ ಜಯಾರ್ಯರ ಪತ್ನಿ | ನರಸಾಂಬೆಯಗರ್ಭ ಶರಧಿಗೆ ಹರಿಣಾಂಕರು ಸುಶಾಂತರು 1 ಎಡರೇಸು ಬಂದರೂ ಬಿಡದೆ ಸ್ವಧರ್ಮವ ಕಡುಭಕ್ತಿ ಪೂರ್ವಕದಿ ಹುಡುಗನ ಮಾತಿಗೆ | ಒಡೆದುಸ್ತಂಭದಿ ಬಂದ ಒಡೆಯನರ್ಚಿಸಿದವರು | ಕೋವಿದರು 2 ಪಂಚಬಾಣನ ಗೆದ್ದು | ಪಂಚ ಭೇದವನರಿತು ಪಂಚಾಸ್ಸನುತ ಮಾನವ ಪಂಚಾಶ್ಯದಯದಿ ಪ್ರಪಂಚ ಸಾಗಿಸುವಂಥ ಪಾಂಚಾಲಿಪತಿ ಪ್ರಿಯರು | ನಿಷ್ಕಿಂಚನರು 3 ವತ್ಸರ ಪರಿಯಂತ ನಿಷ್ಟೆಯಲಿ ನಿರುತ ತಪ ಚಳಿ ಮಳೆ ಸಹಿಸಿ ಪರಮೇಷ್ಟಿ ಜನಕನ ನಿರುತ ಸೇವಿಸಿದವರು | ನಿರ್ಮಮರು 4 ವಿನಯ ಸುಶೀಲ ಸದ್ಗುಣದಿ ಭೂಷಿತರಾದ ತನಯರೀರ್ವರ ಕರೆದು ರಿಣವಿನು ತೀರಿತು ಎನುತ ಪೇಳುತ ದ್ವಿಜಗಣಿಕೆ ದಕ್ಷಿಣೆ ನೀಡಿ ನಮನ ಮಾಡಿ 5 ಹರುಷ ಭರಿತರಾಗಿ ಸರ್ವಜಿತು ನಾಮದ ವರುಷದೊಳ್ ಯುಗ ಮಾಸದಿ | ಶರದಪಕ್ಷ ಪ್ರತಿಪದ ಪ್ರಥಮ ಕಾಯ 6 ವರುಷಂ ಪ್ರತಿ ತಪ್ಪದೆ | ಚರಿಸುತ ದೇಶದೋ ಳಿರುವ ಸದ್ಭಕ್ತರಿಗೆ | ವರಶಾಮ ಸುಂದರ ನರಹರಿದರುಶನ | ಗರೆದ ಪಾಲಿಸಿದವರು ಪಾವನ್ನರು 7
--------------
ಶಾಮಸುಂದರ ವಿಠಲ
ಭುವನ ತ್ರಾಣ ಸದ್ಭವ ಪ್ರವೀಣ ಪ ಶ್ಲೋಕ : ಹೀನಾಹೀನ ವಿವೇಕವಿಲ್ಲದೆಸೆವಾ | ನಾನಾ ವಿಧ ಪ್ರಾಣಿ ಭ | ಜ್ಞಾನಾ ಜ್ಞಾನ ತ್ರಿಕಾಖಿಳ ಕ್ರಿಯೆಗಳು | ಹೇ ನಾಥ ನಿನ್ನಿಂದಲಿ || ನಾನಾ ರೂಪ ವಿಶಿಷ್ಟನಾದಿ ರಿಪುಸ್ಸೇನೇಯ ಸಂಹರಿಸಿದೆ1 ಪದ: ಏನ ಹೇಳಲಿ ನಿಜ ಸಂಶಯ ಜನರಾಸೆಯ | ಉದ್ಧರಿಸುವ ಬಗೆಯಾ ಜ್ಞಾನ ಭಕುತಿ ವಿರಕ್ತಿಯಾ | ಕೋಟಿ ಮುಕ್ತಿಯಾ | ನೀ ಕೊಡುವಿ ಕಾಣಯ್ಯಾ | ಶ್ರೀ ನಾರಸಿಂಹನ ಪದಾಶ್ರಯಾ ಗುಣ ಸಂಚಯ | ಮಾಡೊ ಎನ್ನಲ್ಲಿ ದಯಾ | ಮಾಡಿದೆನಯ್ಯಾ | ಮುಂದೇನೋ ಉಪಾಯ 2 ಶ್ಲೋಕ: ನೀನೊಬ್ಬಾನಲ್ಲದಾವ ದೇವತೆಗಳು | ದಾವಂಗೆ ಬಿಟ್ಟೀರ್ವರು | ಜೀವಾತ್ಮಗೆ ಪೇಳ್ವಿರೊ || ಶ್ರೀ ವತ್ಯಾಂಕÀನ ಆಜ್ಞೆಯಿಂದ ತನು ಬಿಟ್ಟಾವ್ಯಾಳಿಗೆ ಪೋಪಿಯೋ | ಪದ: ಕಂಸಾರಿ ಚರಣವ ಭಜಿಸದೆ | ನಿನ್ನ ನೆನೆಯದೇ | ನಾ ಭ್ರಮಿಸಿದೆ ಬುದ್ಧಿಸಾಲದೇ || ಬಹು ಪಾಮರನಾದೆ | ಸಂಶಯ ಬಿಟ್ಟಿನ್ನು ತಪ್ಪದೇ | ನಿನ್ನ ನಂಬಿದೆ | ಇನ್ನು ಬಿಡುವುದು ಚಂದೇ | ಸಂಸಾರದಲ್ಲಿ ಪದೇ ಪದೇ ದುಃಖಪಡಿಸದೆ | ಉದ್ಧರಿಸೆನ್ನ ತಂದೆ 2 ಶ್ಲೋಕ : ಶ್ರೀಶ ಪ್ರೀತಿಗೆ ಕೀಶನಾದೆ ರವಿಯ | ಗ್ರಾಸಕ್ಕೆ ಬೆನ್ನಟ್ಟಿದೆ | ಈಶಾಧೀಶರು ಆತಗಾಗಿ ನಿನಗೆ | ಕಾಶರಭವನ್ಹಾಕಲು || ಲೇಶಾಯಾಸವು ಆಗಲಿಲ್ಲ ನಿನಗೆ ಶ್ವಾಸಾ ಬಿಡದಾಯಿತೋ | ಆಶಾಪಾಶ ಸಮಸ್ತ ಮೂರುಜಗಕೇ | ಆ ಶಕ್ತಿ ಅತ್ಯದ್ಭುತ 3 ಪದ: ವನಧಿ ಲಂಕಾಪುರವ ನೈದಿದೀ|| ಅಂಜದೆ ಸೀತೆಯಾ ನೋಡಿದಿ | ಮಾತನಾಡಿದಿ | ಚೂಡಾರತ್ನವ ಪಿಡಿದಿ | ಬಂಧಿಸಿ ಮನವ ಸಂಚರಿಸಿದಿ | ಆರ್ಭಟಿಸಿ | ರಕ್ಕಸರ ಸೀಳಿದಿ 3 ಶ್ಲೋಕ : ಕನ್ಯಾ ದೇಶನ ಕಂಡು ಅವನ ಪುರವ | ಹವ್ಯಾದಗೆ ಅರ್ಪಿಸೀ | ಅವ್ಯಾಷ್ಟಾಯೆಂದ ವಿಭೀಷಣಾಲಯವನು | ಅವ್ಯಸ್ತ ನಿರೀಕ್ಷಿಸಿ || ರಘುರಾಮರ ದಿವ್ಯಾಂಘ್ರಿಗೇ ವೊಂದಿಸೀ ಸೇವ್ಯ ನಿಜ ಕೃತ್ಯ ಅರ್ಪಿಸಿದೆಯೊ | ಅವ್ಯಾಜ ಭಕ್ತಾಗ್ರಣೇ 4 ಪದ: ಯೋಗ್ಯವ | ಬದಲು ಕಾಣದೆ ದೇವಾ ಸದ್ಭಾವ | ನೋಡಿ | ಗಂಧಮಾದನವ | ಭವ | ಮೊರೆ ಐದಿವರವ 4 ಶ್ಲೋಕ : ಸಂತುಷ್ಟನಾಗಿ ಸ್ವಯಂ | ನಿಂತ್ಹಾಂಗೆ ನೀ ಹುಟ್ಟಿದಿ | ಸಂತಾಪಪ್ರದನಾಗಿ ದುಷ್ಟ ಮಣಿನ್ಮುಂತಾದ ದೈತ್ಯಾಘಕೇ | ಪದ: ಭೀಮಾಸೇನನೆಂಬುವರು | ಧೃತರಾಷ್ಟ್ರನ್ನ ಸುತರು | ಭೀಮನ್ನ ಕೊಲ್ಲಬೇಕೆಂಬೋರು | ವಿಷವನಿತ್ತರು || ಸರ್ಪಗಳ ಕಚ್ಚಿಸಿದರು | ಕ್ಷೇಮವಾಯಿತು ಏನಾದರು | ಸುರತರು | ಮೋಕ್ಷ ಮಾರ್ಗವ ತೋರು 5 ಶ್ಲೋಕ : ಋಕ್ಷ ಕೇಸರಿ ಮಹಾ | ವೃಕ್ಷಾದಿ ಸಂಹಾರಕಾ | ಲಾಕ್ಷಾಗಾರವು ಬಿಟ್ಟು ನಿನ್ನವರ ನಾ | ಸುಕ್ಷೇಮದಿಂದೈದಿಸಿ | ಭಿಕ್ಷಾರ್ಥಾವಿನಿಯುಕ್ತನಾಗಿ ಬಕನಾ | ಲಕ್ಷಿಲ್ಲದೇ ಕುಟ್ಟಿದೀ | ಸಾಕ್ಷೀ ಮೂರುತಿ ಚಿತ್ರವೇ ನಿನಗದಧ್ಯಕ್ಷಗ್ರ ಸರ್ವೇಶಗಾ 6 ಪದ : ದ್ರುಪದಜೆ ಎನಿಸಿದಳು | ಘೋರ ದುಃಶಾಸನು ಮುಟ್ಟಲು | ಮೊರೆಯಿಟ್ಟಳು ದ್ವಾರರಾದಳು | ಧೀರನೆನವೆ ಹೃದಯದೊಳು ಹಗ ಲಿರುಳು | ಭಜನೆಗಳಿಪ್ಪನಂಘ್ರಿಗಳು || 6 ಶ್ಲೋಕ : ಎಲ್ಲಾ ದೈತ್ಯರು ಹುಟ್ಟಿ ಭೂತಳದಿ ನಿನ್ನಲ್ಲೆ ಪ್ರದ್ವೇಷದಿಂ | ದಿಲ್ಲೇ ಇಲ್ಲ ಮುಕುಂದನಾ ಗುಣಗಳು | ಸುಳ್ಳಷ್ಟು ಈ ವಿಶ್ವವೊ || ಇಲ್ಲೆಂಧೇಳಲು ಸದ್ಗುಣಕ್ಕೆ ಗೊತ್ತಿಲ್ಲಾ ತಾನಾಗ ಈ ತತ್ವವೊ | ಪದ : ಸೂನು | ರಾಜತಾಸನದಲ್ಲಿ ಇದ್ದನು | ಒಬ್ಬ ಯತಿಪನು | ವರ ಪಡೆದನು | ಭಾವೀ ಶಿಷ್ಯ ನಿನ್ನನು | ದ್ವಿಜನಾಗಿ ಬಂದು ಆ ಯತಿಯನು ಪೊಂದಿದಿ ನೀನು | ತುರ್ಯಾಶ್ರಮವನು ಯಿನ್ನು 7 ಶ್ಲೋಕ : ದುರ್ವಾದ್ಯುಕ್ತ ಭಾಷ್ಯ ಸಂಘಗಳನು | ಸರ್ವೇದ್ಯನೀ ಖಂಡಿಸೀ | ಸರ್ವಾನಂದದಿ ದಿವ್ಯ ಶಾಸ್ತ್ರಗಳನು | ವಾಗಾಜಯಂ ನಿರ್ಮಿಸಿ || ಗರ್ವೋಚಿÀಸಲ್ಲೋಕಕೆ | ಚೂಡಾಮಣಿ ಪದ: ರಜತಪೀಠ ಪುರದಲ್ಲಿ | ನೀ ಕಲಿಯುಗದಲ್ಲಿ | ಇರುವಿ ಮತ್ತೊಂದರಲ್ಲಿ | ಪಟ್ಟವಾಳಿದಿ ಅಲ್ಲಿ |ವಿಠ್ಠಲನ ವಿಜಯಪಾದದಲ್ಲಿ ಅನುದಿನದಲ್ಲಿ8
--------------
ವಿಜಯದಾಸ
ಭೂತೇಶನುತ ವಿಠಲ | ಕಾಪಾಡೊ ಇವನಾ ಪ ಓತ ಪ್ರೋತನು ಆಗಿ | ದಾತನೀನಿರುವೇ ಅ.ಪ. ಪಾದ | ದಾಸ್ಯವನೆ ಕಾಂಕ್ಷಿಸುವವಾಲಿಭಂಜನ ರಾಮ | ಪಾಲಿಸೋ ಇವನಾ 1 ತೈಜಸನೆ ನೀನು ಗುರು | ರಾಜರೂಪಿಲಿ ತೋರಿನೈಜೋಪದೇಶವನು | ಪೊಂದುವುದು ಎನುತಾ |ಮಾಜದಲೆ ಪೇಳಿರಲು | ವಾಜಿವದನನೆ ನಿನ್ನಬ್ರಾಜಿಷ್ಣು ನಾಮದಲಿ | ಅಂಕನವ ಗೈದೇ 2 ದಾಸ ದಾಸರ ಗುಣಾ | ದಾಸನೆಂದೆನಿಸುತ್ತಕೇಶವನ ಗುಣನಾಮ | ಸೂಸಿಕೊಂಡಾಡಿ |ಲೇಸಾದ ಆನಂದ | ಭಾಸಿಸುತ್ತಲಿ ಗುಹಾ ವಾಸನನು ಕಾಂಬಂಥ | ಮಾರ್ಗದನು ಆಗೋ 3 ಮಧ್ವಮತ ತತ್ವಗಳು | ಬುದ್ಧಿಯಲ್ಲಿ ಸ್ಛುರಿಸುತ್ತಶುದ್ಧಭಾವದಿ ಮನನ | ಸಿದ್ಧಿಸುತಲಿವಗೇ |ಅದ್ವೈತ ತ್ರಯಜ್ಞಾನ | ಶ್ರದ್ಧೆ ಭಕ್ತಿಯ ಉದಿಸೆಮಧ್ವರಮಣನೆ ಹರಿಯೆ | ಉದ್ಧಾರ ಮಾಡೋ4 ಸರ್ವಜ್ಞಾ ಸರ್ವೇಶ | ಸರ್ವಾಂತರಾತ್ಮಕನೆದರ್ಪಿಜೀವಿಯ ಪೊರೆಯೆ | ಪ್ರಾರ್ಥಿಸುವೆ ಹರಿಯೇ |ದುರ್ವಿ ಭಾವ್ಯನೆ ಗುರು | ಗೋವಿಂದ ವಿಠ್ಠಲನೆಅವ್ಯಾಜ ಕರುಣನಿಧಿ | ಭಿನ್ನಪವ ಸಲಿಸೋ5
--------------
ಗುರುಗೋವಿಂದವಿಠಲರು
ಭೂರಿ ವಂದಿಸುವೆಚೈತ್ರಮುಖ ಮಾಸದಲಿ ದ್ವಾದಶದಾತ್ಮ ರೂಪಗಳಿಂದ ಗಗನದಿವ್ಯಾಪ್ತನಾಗುತ ಸರ್ವಜೀವರ ವಾರ್ತಿ ನುಡಿಸುವನು 1 ಶೌರಿ ರಕ್ಷಿಪನುಹತ್ತು ಆರು ಸಹಸ್ರ ಋಷಿಗಳಿಗೆತ್ತುವೆನು ಕರಗಳಾ ನಮಣಸತ್ಕøತಿ ಪೂರ್ಣಮಾಡುತ ಇಂದಿರೇಶನ ಜ್ಞಪ್ತಿ ಕೊಡಲೆಂದು 2
--------------
ಇಂದಿರೇಶರು