ಒಟ್ಟು 2008 ಕಡೆಗಳಲ್ಲಿ , 117 ದಾಸರು , 1607 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸ್ಮರಿಸಿ ತೀರ್ಥಕ್ಷೇತ್ರ ಸಜ್ಜನರು ನಿತ್ಯದಲಿ ಅರಣೋದಯದಲೆದ್ದು ಭಕ್ತಿಪೂರ್ವಕವಾಗಿ ಕಠಿಣಶ್ರಮದಿ ಮಾಳ್ಪ ಪಾಪರಾಶಿಗಳ ಪರಿಹರಿಸುತ್ತ ಸಂತ್ಯೆಸುವಾ ಪ ಭಾಗೀರಥಿ ಸರಸ್ವತಿ ಯಮುನಾ ವಾರಾಣಾ ಶ್ರೀ ಗೋದ ಫಲ್ಗುಣಿ ಶೋಣಭದ್ರಾ ನರ್ಮ ದಾ ಗಂಡಕಿ ಭಿಮರಥಿ ತುಂಗಭದ್ರೆ ಪ್ರಯಾಗ ತ್ರಿವೇಣಿ ಹೇಮಾ ವೇಗವತಿ ಗಾಯತ್ರೀ ಕಾಶಿಮಣಿಕರ್ಣಿ ಕಾ ಗೌತಮಿ ವಿಯದ್ಗಂಗಾ ಕುಮುದ್ವತೀ ಸಿಂಧು ಪಾಪಾಘನಾಶಿನೀ 1 ಸರಯು ಜಯಮಂಗಳ ಜಮದಗ್ನಿ ವರತಾಮ್ರ ಪರಣಿ ಯೋಗಾನಂದ ಕೃತಮಾಲಕುಹು ಮಹೇ ಧುನಾಶಿ ಗರುಡ ಮದಿರಾ ಮರುದ್ವತಿ ಸ್ವರ್ಣಮುಖರಿ ವರ ಝರತಾಪಿನಿ ಕಾಳಿ ಸೌ ಪರಣಿ ದಕ್ಷಿಣೋತ್ತರಪಿನಾಕಿ ಕಪಿಲ ಶೀತಳ ಕಾನಂದ ಕುರಮುಖಿ ಪ್ರಣವಸಿದ್ಧ 2 ಕಾವೇರಿ ಸಿಧು ಮಾಲತಿ ಗಾರ್ಗಿಣಿ ಹರಿ ಕುಂದ ಕುಂದಿನಿ ಶೈವ ದೇವವತಿ ಪಾತಾಳ ಗಂಗಾ ಪುನಹ ನೀರಾ ಕುಮಾರಧಾರಾ ಸಾವಿತ್ರಿ ದಾನ್ಯಮಾಲಾ ಪುಷ್ಪವತಿ ಲೋಕ ಸಿಂಧು ಧರ್ಮಕು ಭವ ನಾಶಿನಿ ವರದಾ ಮಲಾಪಹಾರಿ 3 ಸ್ವಾಮಿ ಪುಷ್ಕರಣಿ ಮಾನಸ ಚಂದ್ರ ಪುಷ್ಕರಣಿ ಭೂಮಂಡಲದೊಳುತ್ತಮೋತ್ತಮ ತ್ರಿಪುಷ್ಕರಣಿ ನಿತ್ಯ ಪದ್ಮಸರ ಚಂದ್ರಭಾಗತೀರ್ಥ ವಾಮನ ಮಯೂರ ಪಂಪಾಸರೋವರ ಪುಣ್ಯ ಧಾಮ ವ್ಯಾಸ ಸಮುದ್ರ ಧವಳಗಂಗಾ ಸುಸಾ ರೋಮಹರ್ಷತೀರ್ಥ 4 ದ್ವಾರಕಾನಗರ ಸಾಲಗ್ರಾಮ ಟರರ ಬದರಿ ಕೇ ದಾರ ನರನಾರಾಯಣ ಶ್ರೀ ಮಜ್ಜಗನ್ನಾಥ ಶ್ರೀ ಮುಷ್ಣ ಮಂದರ ಮೈನಾಕ ಕೈಲಾಸ ಕಂಚಿ ಶ್ರೀರಂಗನಾಥ ನೈಮಿಷ ದ್ವೈತವನ ಚಂಪ ಕಾರುಣ್ಯ ಕಾಶಿ ಪಂಪಾವಂತಿಕಾ ಪುರಿ ಹರಿದ್ವಾರ ಛಾಯಾಪಿಪ್ಪಲ 5 ಕೇದಾರ ಸಾಗರ ಮಂದಾಕಿನಿ ಕುಸುಮವತಿ ಆದಿಸುಬ್ರಹ್ಮಣ್ಯ ಕೋಟೇಶ್ವರ ನಂದಿ ವೇದಪಾದ ಯಯಾತಿ ಗಿರಿ ಕಾಲಹಸ್ತಿ ಕೌ ಮೋದಕೀ ಪಾಡುರಂಗ ಕ್ಷೇತ್ರ ಶ್ರೀ ವಿಷ್ಣು ಪಾಟಲೀ ಮಂತ್ರಾಲಯ6 ಮಂದರ ಮಲಯ ಕೈವಲ್ಯನಾಥ ಕಾಶೀರ ಜಾಂಬವತಿ ವೃಂ ಶ್ರೀ ವಿರೂಪಾಕ್ಷ ಕುಂದರ ನಂದಪುರಿ ಮಾಯಾ ಶ್ರೀವತ್ಸ ಗಂಧಮಾದನ ಚಿತ್ರಕೂಟ ದ್ವಾ ನರಾಚಲಾಸೌಭದ್ರಿ ಆದಿನಾಥ 7 ಈ ಮಹಿಮಂಡಲದೊಳಿಪ್ಪ ತೀರ್ಥಕ್ಷೇತ್ರ ನಾಮಗಳ ಕಾಲತ್ರಯದಲ್ಲಿ ಸರಿಸುತಿಹ ಧೀಮಂತರಿಗೆ ಸಂಚಿತಾಪ ಪರಿಹರದಾನಂತರದಲಿ ಸೋಮಾರ್ಕರುಳನಕ ಸಕಲ ಭೋಗಗಳ ಸು ತ್ರಾಮಲೊಕದ ಲುಣಿಸಿ ಕರುಣಾಳು ಪ್ರಾತ್ಯಕೆ ಸ್ವ ಅಹುದೆಂದು ಸೂತ ಶೌನಕಣೆ ಪೇಳ್ದ8 ಈ ಭರತ ಖಂಡದೊಳಗುಳ್ಳ ತೀರ್ಥಕ್ಷೇತ್ರ ವೈಭವಾಬ್ಜ ಭವಾಂಡ ಪಾರನದೊಳಗೆ ಹರಿ ಪರಮಕಾರುಣ ದಿಂದ ಸ್ತ್ರೀಬಾಲ ಗೋವಿಪ್ರಮಾತ ಪಿತೃಗಳ ಧನ ಲೋಭದಿಂದಲಿಕೊಂದ ಪಾತಕವ ಪರಿಹರಿಸಿ ಬೇಡಿದಿಷ್ಟಾರ್ಥಗಳನು 9
--------------
ಜಗನ್ನಾಥದಾಸರು
ಸ್ಮರಿಸಿ ಬದುಕಿರೊ ಗುರುವರರಾ ನರ- ಹರಿಸ್ಮರಣೆ ಮರೆಯದಲೆ ಕೀರ್ತಿಸಿ ನಲಿದವರ ಪ ದಾಸದೀಕ್ಷೆಯ ವಹಿಸಿದವರ ಹರಿ ದಾಸರ ಕೂಡಿ ನರ್ತಿಸಿ ನಲಿದವರ ಶ್ರೀಶನ ಮಹಿಮೆ ಬಲ್ಲವರ ಭವ ಪಾಶಗಳಳಿವ ಸನ್ಮಾರ್ಗಬೋಧಕರ 1 ಬಡತನದಲಿ ಬಳಲಿದವರ ಭಾಗ್ಯ ಬಿಡದೆ ಬಂದೊದಗೆ ಹಿಗ್ಗದೆ ತಗ್ಗಿದವರ ಮೃಡಸಖನೊಲುಮೆ ಪಡೆದವರ ಬಹು ಸಡಗರದಲಿ ಹರಿ ಭಜನೆ ಮಾಡ್ದವರ 2 ಪಂಕಜಾಕ್ಷನ ಪೊಗಳಿದವರ ತಂದೆ ವೆಂಕಟೇಶ ವಿಠ್ಠಲ ದಾಸರಿವರ ಬಿಂಕದಿ ಹರಿಯ ಮರೆತವರ ಗರ್ವ ಬಿಂಕಗಳಳಿಯ ಸನ್ಮಾರ್ಗಕೆಳದವರ3 ತಾಳ ತಂಬೂರಿ ಪಿಡಿದವರ ಗೆಜ್ಜೆ ತಾಳ ಮೇಳದಿ ನರ್ತಿಸಿ ನಲಿದವರ ವ್ಯಾಳ ಶಯನನ ಭಕ್ತರಿವರ ಸಂಜೆ ವೇಳೆ ಹರಿಭಜನೆ ಮಾಡಿ ನಲಿದವರ 4 ಮಡದಿ ಮಕ್ಕಳು ಬಂಧು ಜನರ ಕೂಡಿ ಕಡು ಸಂಭ್ರಮದಿ ಹರಿಭಜನೆ ಮಾಡ್ದವರ ಕಡಲ ಶಯನನ ಭಕ್ತರಿವರು ಭಾಗ್ಯ ಬಡತನ ಸಮವೆಂದು ತಿಳಿಯ ಹೇಳ್ದವರ 5 ಹರಿಗುಣ ಕೀರ್ತಿಸಿದವರ ನರ ಹರಿಯ ಮಹಿಮೆಗಳ ಶಿಷ್ಯರಿಗೊರೆದವರ ಹರಿಯೆ ಸರ್ವೋತ್ತಮನೆಂದವರ ನಮ್ಮ ಉರುಗಾದ್ರಿವಾಸ ವಿಠ್ಠಲನ ನಂಬಿದವರ6 ಮಮತೆಯ ಬಿಡಬೇಕೆಂದವರ ದೇಹ ಮಮತೆಯ ಬಿಡುತ ಹರಿಪುರ ಸೇರಿದವರ ಕಮಲಾಕ್ಷನ ಭಕ್ತರಿವರ ನಮ್ಮಕಮಲನಾಭನ ವಿಠ್ಠಲನ ನಂಬಿದವರ 7
--------------
ನಿಡಗುರುಕಿ ಜೀವೂಬಾಯಿ
ಸ್ಮರಿಸುವರಘಹರ ರಾಘವೇಂದ್ರ ಗುರುಆರುಮೊರೆ ಇಡುವೆನು ತವಪದದಲ್ಲೀ ಪ ಸುರತರು ನಿನ್ನನು | ನಿರುತದಿ ನುತಿಸುವವರವನೆ ಕರುಣಿಸು | ಗುರು ರಾಘವೇಂದ್ರ ಅ.ಪ. ಕೃತ ಯುಗದೊಳು ತಾ | ಮುನಿ ಕಶ್ಯಪನಸುತನಲಿ ಮೋದದಿ | ಸುತನಾಗಿ ಜನಿಸುತ |ಪಿತನತಿ ಬಾಧೆಗೆ | ಅಳುಕದೆ ಮನ್ಮಥಪಿತನಧಿಕೆಂದು ಬಹು | ಸಾರಿದೆ ಗುರುವರ 1 ಜನಪ ಪ್ರತೀಪನ | ಸುತ ವರನೆನಿಸುತಜನಿಸುತ ಪ್ರೀತಿಲಿ | ದ್ವಾಪರದಲ್ಲೀ |ಘನಬಲ ಬಾಹ್ಲೀಕ | ನೆನಿಸುತ ನೀನೂಅನಿರುದ್ಧ ಮೂರ್ತಿಯ | ಸೇವಿಸಿ ಮೆರೆದೆ 2 ನ್ಯಾಯಾ ಮೃತ ಚಂ | ದ್ರಿಕೆಗಳ ರಚಿಸುತಮಾಯ ಮತವನು | ಪರಿಪರಿ ಜೆರೆಯುತ |ಕಾಯ ಜನಯ್ಯನ | ಕೀರ್ತಿಯ ಬೀರುತತೋಯಜಾಕ್ಷ ಹರಿ | ಅಧಿಕೆಂದು ಸಾರಿದೆ 3 ಸಂಗವ ತೊರೆದು | ಸುಧೀಂದ್ರರ ಕರಜನೆತಂಗಾತೀರದಿ | ಮಂತ್ರಾಲಯದಲಿ |ಮಂಗಳ ಮಹಿಮನ | ಧ್ಯಾನವ ಗೈಯುತತುಂಗ ವಿಕ್ರಮ ಹರಿ | ಪರನೆಂದು ಸಾರಿದೆ 4 ವಾತನ ಮತ ವಿ | ಸ್ತರಿಸಿದ ಧೀರನೆದ್ವೈತ ದುಂದುಭಿಯ | ಮೊಳಗಿಸಿದಾತನೆ |ದೂತರ ಪ್ರಿಯ ಗುರು | ಗೋವಿಂದ ವಿಠಲನಪ್ರೀತಿಲಿ ಭಜಿಸುವ | ದಾಸಾಗ್ರಣಿಯೇ 5
--------------
ಗುರುಗೋವಿಂದವಿಠಲರು
ಸ್ಮರಿಸುವೆನು ಸದ್ಭಕ್ತಿಯಲಿ ಶ್ರೀರಾಮನ ಗುಣಧಾಮನ ಸಿರಿವಿರಿಂಚಾದ್ಯಮರಗಣ ಸಂಸ್ತುತ್ಯನ ಸಂತೃಪ್ತನಾ ಪ ಆದಿಯಲಿ ಝಷನಾಗಿ ನಿಗಮವ ತಂದನ ಮುನಿವಂದ್ಯನ ಭೂಧರಾಧರ ದಿವಿಜರಿಗೆ ಸುಧೆಗರೆದನ ಸುರವರದನ ಕಾದು ಕಿಟರೂಪದಲಿ ಭೂಮಿಯ ತಂದನ ಗುಣವೃಂದನ ಬಾಧಿಸಿದ ರಕ್ಕಸನ ತರಿದು ಪ್ರಲ್ಹಾದನ ತಾ ಪೊರೆದನ 1 ತುಳಿದನ ಅವಗೊಲಿದನ ಕೊಡಲಿ ಪಿಡಿದಾ ಕ್ಷತ್ರಿಕುಲ ವಿರಾಮನ ಭೃಗು ರಾಮನ ಮೃಡನೊರದಿ ಯುನ್ಮತ್ತ ದೈತ್ಯರು ಬಾಧಿಸೆ ಧರಿ ಪ್ರಾರ್ಥಿಸೆ ಜಡಜ ಪೀಠಾದ್ಯಮರರಾ ಮೊರೆ ಕೇಳ್ದನ ಧರೆಗಿಳಿದನ 2 ದಶರಥನ ಸತಿಯುದರದಲಿಯವತರಿಸಿದ ಮುದಗರಿಸಿದ ಬಿಸರುಹಾಪ್ತನ ವಂಶವನು ಉದ್ಧರಿಸಿದ ಮೈಮರಸಿದ ದಶದಿಶೆದಿ ಸುರರೆಲ್ಲ ಪೂಮಳೆಗರೆದರು ಸುಖಸುರಿದರು ಅಸಮಲೀಲೆಯ ತೋರ್ದರಘುಕಲಚಂದ್ರನ ಸುಖಸಾಂದ್ರನ 3 ಗಾಧಿಸುತನಧ್ವರವ ಕಾಯ್ದ ಸಮರ್ಥನ ಜಗಕರ್ತನ ವೇದಧನು ಮೊದಲಾದ ಕಲೆಗಳ ತಿಳಿದನ ಮುನಿಗೊಲಿದನ ಹಾದಿಯಲಿ ಶಿಲೆಯಾದ ಅಹಲ್ಯಳ ಪೊರೆದನ ಸಿರಿವರದನ ಮೋದದಲಿ ಹರಧನು ಮುರಿದ ಗಂಭೀರನ ಬಹುಶೂರನ 4 ಜನಕಭೂಪತಿ ತನುಜಳೆನಿಸಿದಸೀತೆಯ ಭೂಜಾತೆಯಾ ಘನಹರುಷದಲಿ ವಲಿಸಿಕರವನು ಪಿಡಿದನ ಯಶಪಡೆದನ ದನುಜರುಪಟಳತೋರಲಾಕ್ಷಣ ಸೀಳ್ಪನ ಸುರರಾಳ್ದನ ತನಗೆ ತಾನೇ ಸೋಲಿಸಿದ ಜನಮೋಹನ ಖಗವಾಹನ 5 ಜನಕನಾಜ್ಞವ ಪಾಲಿಸಿದ ದಯವಂತನ ಅಘಶಾಂತನ ಅನುಜಸತಿಸಹ ಪುರದಿ ತಾಪೊರಮಟ್ಟನ ಅತಿಧಿಟ್ಟನ ವನದಿ ಬಹು ಮುನಿಗಳ ಕಾರಾರ್ಚಿತನಾದನ ಸುಪ್ರಸಾದನ ಅನುಜ ಭರತಗೆ ದಯದಿ ಪಾದುಕೆ ಕೊಟ್ಟನ ಸಂತುಷ್ಟನ 6 ಮನುಜರಂದದಿ ಸತಿವಿಯೋಗವತೋರ್ದನ ಕುಜನಾರ್ದನ ವನಿತೆಯಂಜಲ ಫಲಗಳನು ತಾಮೆದ್ದನ ಶ್ರುತಿಸಿದ್ಧನ ದನುಜರಿಪು ಹನುಮಂತನನು ಸಾರೆ ಗರೆದನ ಕರುಣಿಸಿದನ ವನಜ ಸಖಸುತನೊಡನೆ ಸಖ್ಯವ ಮಾಡ್ಡನ ವರನೀಡ್ಡನ 7 ಲೀಲೆಯಿಂದಲಿ ತಾಳ ಮರಗಳ ಸೀಳ್ದನ ನೆರೆಬಾಳ್ದನ ವಾಲಿಯನು ಸಂಹರಿಸಿದತಿಬಲವಂತನ ಶ್ರೀಕಾಂತನ ಮೇಲೆನಿಪ ರಕ್ಕಸರನೆಲ್ಲರ ತುಳಿದನ ಅಸುಸೆಳೆದನ ಶ್ರೀಲತಾಂಗಿಯ ಕ್ಷೇಮವಾರ್ತೆಯ ಕೇಳ್ದನ ಮುದತಾಳ್ದನ 8 ಗಿರಿಗಳಿಂದಲಿ ಶರಧಿಯನು ಬಂಧಿಸಿದನ ಸಂಧಿಸಿದನ ಹರಿಗಳೆಲ್ಲರ ಕೂಡಿಲಂಕೆಯ ಸಾರ್ಧನ ರಣದಿರ್ದನ ಉರುಪರಾಕ್ರಮಿ ರಾವಣನ ಶಿರಕಡಿದನ ಹುಡಿಗೆಡೆದನ ವರವಿಭೀಷಣ ಭಕ್ತಗಭಿಷೇಚಿಸಿದನ ಪೋಷಿಸಿದನ 9 ಸಿರಿಸಹಿತ ಪುಷ್ಪಕವನೇರಿದ ಚಲುವನ ಅತಿ ಪೊಳೆವನ ತ್ವರದಿಶೃಂಗರಿಸಿದ ಅಯೋಧ್ಯಕೆ ಬಂದನ ಅಲ್ಲಿ ನಿಂದನ ಭರತ ಪ್ರಾರ್ಥಿಸಲಾಕ್ಷಣದಿ ಮೊರೆ ಕೇಳ್ದನ ಧರಿಯಾಳ್ದನ ಸರಸಿಜಾಸನ ಪ್ರಮುಖರಾರ್ಚನೆ ಕೊಂಡನ ಕೋದಂಡನ 10 ಮರುತಸುತನಿಗೆ ಅಜನ ಪದವಿಯನಿತ್ತನ ಬಹುಶಕ್ತನ ಚರಣಸೇವಕ ಜನಕಭೀಷ್ಟದಾತನ ವಿಖ್ಯಾತನ ನಿರುತ ಸನ್ಮುನಿಹೃದಯ ಮಂದಿರ ವಾಸನ ಜಗದೀಶನ ಸ್ಮರಣೆ ಮಾತ್ರದಿ ದುರಿತರಾಶಿಯ ತರಿದನ ಸುಖಗರೆವನ 11 ದೇವಕೀ ವಸುದೇವ ಸುತನೆಂದೆನಿಪನ ಜಗಕಧಿಪನ ಮಾವನನು ಸಂಹರಿಸಿ ಶಕಟನ ಕೊಂದನ ಆನಂದನ ಗೋವು ಕಾಯುತ ಗಿರಿಯ ಬೆರಳಲಿ ಆಂತನ ಬಹುಶಾಂತನ ಗೋವ್ರಜದಿ ಗೋಪಿಯರ ವಸನವ ಕಳೆದನ ಅಹಿತುಳಿದನ 12 ಲೋಕನಾಥನು ಪಾರ್ಥಸಾರಥಿಯಾದನ ಸುಪ್ರಮೋದನ ನೇಕ ಪರಿಭಗವತ್ಸುಗೀತೆಯ ಪೇಳ್ದನ ತಮಸೀಳ್ದನ ಆ ಕುರು ಕುಲವ ತರಿದ ಪಾಂಡವ ಪ್ರಾಣನ ಸುಪ್ರವೀಣನ ಆಕುರುಪ ಭೀಷ್ಮನಿಗೆ ಮುಕ್ತಿಯ ಕೊಟ್ಟನ ಅತಿಶ್ರೇಷ್ಟನ 13 ಕಪಟನಾಟಕ ನಗ್ನರೂಪದಿ ನಿಂತನ ನಿಶ್ಚಿಂತನ ತ್ರಿಪುರದಲಿ ಜಲಜಾಕ್ಷಿಯರ ವ್ರತ ಭÀಂಗನ ನಿಸ್ಸಂಗನ ಕೃಪಣವತ್ಸಲ ತುರಗವೇರಿ ತಾನಡೆದನ ಅಸಿಪಿಡಿದನ ಅಪರಿಮಿತ ಬಹುಕ್ರೂರ ಯವನ ವಿಘಾತನ ಪ್ರಖ್ಯಾತನ 14 ಈ ವಿಧದಿ ಬಹುಲೀಲೆ ಗೈವ ಸುಚರಿತನ ಜಗಭರಿತನ ಭಾವಶುದ್ಧಿಲಿ ಭಜಿಸುವವರಘಕಡಿವನ ಗತಿಕೊಡುವನ ಪಾವಮಾನಿ ಮತಾನುಗರ ಕರಪಿಡಿವನ ಭವತಡೆವನ ದೇವತತಿ ಸದ್ವಿನುತ ವರದೇಶ ವಿಠಲನ ನಿಷ್ಕುಟಿಲನ 15
--------------
ವರದೇಶವಿಠಲ
ಸ್ಮರಿಸೈ ಸತತವು ಸಂಸ್ಮರಿಸೈ ಸತತವು ಪ ಯತಿಗುಣ ಭೂಷಣ ವ್ಯಾಸ ಯತೀಂದ್ರರ ಅ.ಪ ಗುರುಬ್ರಹ್ಮಣ್ಯರ ಕರಕಮಲದಿ ಪುಟ್ಟಿ ಪರಮ ಕೀರುತಿಯಿಂದ ಮೆರೆದ ಯತೀಂದ್ರರ 1 ಸುಖಬೋಧ ಸದಾಗಮಸಾರವ ನಿಜ ಮುಖದಿಂದ ಭೂಸುರರೊಳಗರುಹಿದವರ 2 ಚಂದ್ರಿಕಾ ನ್ಯಾಯಾಮೃತ ತರ್ಕತಾಂಡವ ಚಂದದಿ ರಚಿಸಿ ಆನಂದಗೊಂಡವರ 3 ವರಕರ್ಣಾಟಕ ಸಿಂಹಾಸನದಲಿ ಮರಕತಮಣಿಯಭೀಷೇಕ ಪಡೆದವರ 4 ಉನ್ನತ ಗುಣ ಸುಖ ಚಿನ್ಮಯ ರೂಪ ಪ್ರ ಸನ್ನ ಶ್ರೀರಾಮನ ಭಕುತವರೇಣ್ಯರ 5
--------------
ವಿದ್ಯಾಪ್ರಸನ್ನತೀರ್ಥರು
ಸ್ಮರಿಸೋ ಎಲೆ ಮನವೇ | ಜಗದಯ್ಯನಾ | ಸ್ಮರಿಸೋ ಶಿವಸುಖ ಬೆರಿಸೊ ಭವದಿಂದ | ತರಿಸೊ ಗಿರಿಜಾ ರಮಣನ ಪ ಫಣಿಯಾಗಣ್ಣಿ ನೋರಣಿಯಾ | ಸದಮಲ | ಫಣಿಯಾ ಭರಣ ಭೂಷಣಿಯಾ | ಮುಕುತಿಯಾ | ಹೋಣೆಯಾ ಕೊಡಲಿಕ್ಕೆ ದಣಿಯಾನೆಂದು ಬೇಡುವರಾ 1 ಒಡಿಯನೆನ್ನದೆ ನಡಿಯಾ | ಅಂಗಜನಾ | ಹುಡಿಯಾ ಮಾಡಿದ ನಡಿಯಾ ಶರಣೆಂದು | ಪಿಡಿಯಾಲವರಿಗೆ ಪಡಿಯಾ | ನಿತ್ತು ಹೊರೆವನಾ 2 ಯತಿಯಾ ಆನಂದ ಸ್ಥಿತಿಯಾ | ಪುಣ್ಯ | ಮೂರುತಿಯಾ ವಿಮಲ ಕೀರುತಿಯಾ | ಗುರುಮಹೀ | ಪತಿಯಾ ನಂದನ ಸಾರಥಿಯಾನಾದಿ ಮಹಿಮನಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸ್ವಾಗತವು ಸ್ವಾಗತವು | ಯತಿವರ್ಯರೇಯೋಗೀಶ ಶ್ರೀಕೃಷ್ಣ | ಮೂತ್ರ್ಯುಪಾಸಕರೇ ಪ ವಿಶ್ವಭಿಧರಂತಸ್ಥ | ವಿಶ್ವರೂಪಿಯ ಹರಿಯವಿಶ್ವಸರ್ಜನ ಸ್ಥಿತೀ | ವಿಶ್ವಸಂಹರವಾ |ವಿಶ್ವತೊಮುಖವಾಗಿ | ಗುಣ ಕ್ರಿಯವ ಕೊಂಡಾಡೆವಿಶ್ವೇಶ ತೀರ್ಥರೆಂದುರು | ಕೀರ್ತಿಯುಕ್ತರೇ 1 ಬೋಧ | ಸಿದ್ಧ ಪಡಿಸಿದರೇ 2 ಶರಣ ಜನರಭಿಲಾಷೆ | ನಿರುತ ಪಾಲಿಸಿ ಪೊರೆವಸರಳ ಹೃದಯರೆ ನಿಮ್ಮ | ಚರಣದ್ವಂದ್ವಗಳಾ |ವರ ರಜವ ಶಿರದಲ್ಲಿ | ಧರಿಸುತ್ತ ಧನ್ಯನೆಹೆಮರಳಿ ಮಮಕುಲವೆಲ್ಲ | ಉದ್ಧಾರವಾಯ್ತು 3 ಕಾಲ | ಸೀಮೆ ಮೀರಿದ ಸಮಯನೇಮ ಮೀರದೆ ವೈಶ್ವ | ಹೋಮಾದಿ ಶೇಷಾ |ಪ್ರೇಮದಿಂ ವಿದ್ಯಾರ್ಥಿ | ಸ್ತೋಮ ಕುಣಿಸುತ ನಿತ್ಯಸಾಮ ಸನ್ನುತನ ನಿ | ಷ್ಕಾಮ ಭಜಿಸುವರೇ 4 ಕಾಣ್ವೋಪ ನಿಷದರ್ಥ | ಕನ್ನಡ ಸುಪದ್ಯದಲಿಇನ್ನು ರಚಿಸಿರ್ಪುದಕೆ | ಮುನ್ನುಡಿಯನಿತ್ತೂ |ಅನ್ನಂತ ಗುಣ ಗುರೂ | ಗೋವಿಂದ ವಿಠ್ಠಲನನನ್ನೆಯಿಂ ಭಜಿಸೆ ಪ್ರ | ಸನ್ನ ಮಾರ್ಗದರೇ 5
--------------
ಗುರುಗೋವಿಂದವಿಠಲರು
ಸ್ವಾಮಿ ಸದ್ಗುರುದಯವೆ ತಾ ನಿಜ ನೇಮ Pರಿಗಿದೇವೆ ಹಿತಗುಜ ಸಮಸ್ತ ಜನರಿಗಿದೆ ಸುಬೀಜ ಪ್ರೇಮವಿಟ್ಟವರಿಗ್ಹೊಳೆವದು ಸಹಜ 1 ಗುರು ಉಪಾಸನೆ ಎಲ್ಲಕೆ ಮೇಲು ಸುರಜನರಿಗಿದೊಂದೇ ಕೀಲು ಅರಿತವರಿಗೆ ಮುಕ್ತಿ ಬಾಗಿಲು ತ್ಯರ ತಿಳಿಯದವರಿಗಿದೇ ಸೋಲು 2 ನಂಬಿ ನಡೆಯಬೇಕು ಸದ್ಗುರುಪಾದ ಇಂದುದೋರಿಕೊಡುವದು ಸುಬೋಧ ಗುಂಭಗುರುತಾಗಿದೋರುದು ಸ್ವಾದ ಹಂಬಲಿಸಿಕೊಳಬೇಕು ಸುಪ್ರಸಾದ 3 ಗುರುಮಾರ್ಗವೆಂಬುದೆ ಸಾಕ್ಷಾತ್ಕಾರ ಸೂರೆಗೊಂಡು ಮ್ಯಾಲೆ ಸುಖಸಾಗರ ಮರುಳ ಬಲ್ಲವೇನಿದರ ವಿಚಾರ ಶರಣಜನರಿಗಿದೇ ಸಹಕಾರ 4 ಗುರುಕೃಪೆಯಾದವಗೆ ಪ್ರಾಂಜಳ ಸಾರಾಯ ಕೊಂಬುವನೆ ತಾ ವಿರಳ ಅರಿಯೋ ಮಹಿಪತಿ ನಿನ್ನೊಳು ಸಕಳ ಹರುಷವಾಗೆದಿಂತು ಈ ಸುಖಕಲ್ಲೋಳ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾಮಿ ಸದ್ಗುರುವೆ ನಿಮ್ಮ ಪಾದಕಮಲಕೆರಗುವೆ ಧ್ರುವ ಹಿಂಡುದೈವಕೆ ಪ್ರಚಂಡಮೂರ್ತಿ ಕೊಂಡಾಡುವ ನಿಮ್ಮ ಅಖಂಡ ಕೀರ್ತಿ 1 ಭಾವಭೋಕ್ತ ದೇವೋತ್ತಮ ಸೇವಿಸುವೆ ನಿಮ್ಮ ದಿವ್ಯನಾಮ 2 ಜಯ ಜಯ ಆನಂದ ಕಂದ ಧ್ಯಾಯಿಸುವೆ ನಿಮ್ಮ ಪಾದಾರವಿಂದ 3 ದಯಾಸಿಂಧು ದೇವ ದೇವ ಕಾಯೋ ಮಹಿಪತಿ ಪ್ರಾಣಜೀವ 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾಮೀ ರಕ್ಷಿಸು ಸುಬ್ರಹ್ಮಣ್ಯ ಕಾಮಿತಪ್ರದ ಸುರಸ್ತೋಮಾಗ್ರಗಣ್ಯಪ. ಜನ್ಮ ಜನ್ಮಾಂತರದ ಕರ್ಮಾನುಸಾರದಿಂ ದುರ್ಮತಿಗೆಳಸಿಯಹಮ್ಮಮತೆಯಲಿ ದುರಿತ ದೂರವಿರಿಸು ನಿರ್ಮಲಜ್ಞಾನೋಪದೇಶವನಿತ್ತೆನ್ನ1 ಪ್ರತ್ಯಗಾತ್ಮನ ನಾಮ ಕೀರ್ತನೆ ಗೈಯುತ್ತ ಭಕ್ತಿಸೌಭಾಗ್ಯವಿರಕ್ತಿಯ ನೀಡು ಭೃತ್ಯವತ್ಸಲ ಭವಭಯಹರ ಗಿರಿಜಾ- ಪುತ್ರನೆ ಪರಮಪವಿತ್ರ ಸುಚರಿತ್ರನೆ2 ಸುರಲೋಕವನು ಕಾವ ಧುರಧೀರ ಪ್ರಭು ನಿನಗೀ ನರಲೋಕವನು ಕಾವದುರು ಕಷ್ಟವೇನು ಪರಿಶುದ್ಧ ಸ್ಥಾನಿಕಧರಣೀಸುರಕುಲ- ಗುರುವೆಂದು ಚರಣಕ್ಕೆ ಶರಣಾಗತನಾದೆ3 ಸಾಕುವಾತನು ನೀನೆ ಸಲಹುವಾತನು ನೀನೆ ಬೇಕು ಬೇಡೆಂಬುವರ ನಾ ಕಾಣೆ ದೊರೆಯೆ ಲೋಕೇಶ ಸುಕುಮಾರ ಶೋಕಮೋಹವಿದೂರ ನೀಕರಿಸದೆಯೆನ್ನ ಸ್ವೀಕಾರ ಮಾಡಯ್ಯ4 ಪೃಥ್ವಿಯೊಳ್ಪಾವಂಜೆ ಕ್ಷೇತ್ರಾಧಿವಾಸನೆ ಸುತ್ರಾಮಾದಿ ಸುರಮೊತ್ತ ಪೂಜಿತನೆ ಕರ್ತ ಲಕ್ಷ್ಮೀನಾರಾಯಣನ ಸಾರೂಪ್ಯನೇ ದೈತ್ಯದಲ್ಲಣ ವಲ್ಲೀದೇವಿ ಮನೋಹರನೆ5
--------------
ತುಪಾಕಿ ವೆಂಕಟರಮಣಾಚಾರ್ಯ
ಹಣ್ಣ ಸವಿಯ ಬಾರದೇ ಪ ಹಣ್ಣನ್ನು ತಿಂದರೆ ಕೇಶವನೊಲಿಯುವಾ ಚನ್ನಕೇಶವ ಸ್ವಾಮಿ ಬಿಡದೆ ಪಾಲಿಸುವಾ ಅ.ಪ. ಪ್ರೀತಿಯೆನ್ನುವಂಥ ಬೀಜವನ್ನೇ ಬಿತ್ತಿ ಭೂತ ದಯೆಯೆಂಬುವ ವೃಕ್ಷವ ಬೆಳೆಸೀ ಆತುರದಲ್ಲಿ ಪರೋಪಕಾರವೆಂಬ ನೀತಿಯ ನೀರನ್ನು ನೇಮದೊಳೆರೆದೂ 1 ಅನುದಿನ ದಾನಧರ್ಮಗಳ ಟೊಂಗೆಗಳೇರಿ ತನುಮನ ಧನದಿಂದ ದೈನ್ಯರ ಸಲಹಿ ಘನತರ ಸ್ವಾರ್ಥ ತ್ಯಾಗವುಯೆಂಬ ಪರ್ಣವ ನೆನೆದು ಕೃತಜ್ಞತೆ ಕುಸುಮವ ಪಡೆದೂ 2 ವರತರ ದೇವಾಂಶ ಗುಣದಿಂದ ಬೆಳೆದಿರ್ಪ ಹರಿಭಕ್ತಿಯೆನ್ನುವ ಫಲವನ್ನೇ ಕೊಯ್ದು ಸರಸದಿ ಕೀರ್ತನೆ ಭಜನೆ ಸೂತ್ರಗಳಿಂದ ಪರಮ ಭಕ್ತೀಯೆಂಬ ಹಣ್ಣನು ತಿಂದೂ 3 ಧರೆಯಲ್ಲಿ ಸಿಗುವಂಥ ಹಣ್ಣನು ಸವಿದರೆ ನಿರುತ ತೃಪ್ತಿಯು ಆಗಲಾರದು ದೇವಾ ಅಮೃತ ಹರುಷದಿ ತಿನ್ನಲು ಘನಮುಕ್ತಿ ದಿಟವು 4
--------------
ಕರ್ಕಿ ಕೇಶವದಾಸ
ಹನುಮ ಭೀಮ ಮಧ್ಯ ಭಾರತೀಶ ಭೂರಿ ಬೋಧರ ಪ ಜಲಧಿ ದಾಟಿದಿ 1 ಕುರುಕುಲದಿ ಹುಟ್ಟಿ ದುಷ್ಟ ಕುರುಗಳಳುಹಿದಿದುರುಳ ಕೀಚಕನ್ನ ತರಿದು ತರುಣಿನುಳುಹಿದಿ 2 ಆನಂದತೀರ್ಥರಾಗಿ ವಾದವೃಂದ ಜಯಿಸಿದಿಇಂದಿರೇಶನ ತೋರಿಸಿಂದು ಕರುಣದಿಂದಲಿ 3
--------------
ಇಂದಿರೇಶರು
ಹನುಮ-ಭೀಮ-ಮಧ್ವರು ಅಸುರರನು ಅಳಿಯ ಬಂದೆನು ನಾನು ನಿನ್ನ ವೈರಿದಶರಥರಾಮನಾಳೆಂದ ಪ. ಹೊಸಕಪಿಯೆ ನೀನು ಬಂದುದೇನುಕಾರಣವೆನಲುದಿ[ಶೆÀ]ಗೆ ಬಲ್ಲಿದ ಹನುಮ ನಾ ಕೇಳೊ ನಿ-ನ್ನಸುರ ಪಡೆಯ ಮಡುಹಬಂದೆ ನಿನ್ನಎಸೆವ ಪಾದದಲೊದೆಯ ಬಂದೆ ವನದಸಸಿಯ ಕಿತ್ತೀಡ್ಯಾಡಿ ನಿಂದೆ ನಿನ್ನದಶಶಿರವ ಕತ್ತರಿಸಿ ಎಸೆವ ರಾಮರ ಮಡದಿಹಸುಳೆ ಸೀತೆಯ ಅರಸಲು ಬಂದೆ 1 ಎನ್ನ ವೈರಿಗಳು ಇನ್ಯಾರೆಂದು ರಾವಣನುಹೊನ್ನಕುಂಡಲದ ಹನುಮನೆ ಕೇಳೊಮುನ್ನವರ ಸಾಹಸವಯೇನೆಂಬೆ ಅವರಪರ್ಣಶಾಲೆಯ ಹೊಕ್ಕು ಬಂದೆ ರಾಮ-ಕನ್ಯೆ ಸೀತಾಂಗನೆಯ ತಂದೆತನ್ನ ಬಿಲ್ಲ ತಾ ಹೊತ್ತು ತಿರುಗುವುದ ಕಂಡೆ 2 ಇನ್ನು ಹೆಮ್ಮೆಮಾತ್ಯಾತಕೊ ಕಪಿಯೆಕಚ್ಚಿ ಕೀಳಲೋ ಕಣ್ಣು ಹತ್ತುತಲೆಯನೆ ಹಿಡಿದುನುಚ್ಚುನುರಿ ಮಾಡಿ ಕೊ[ಲ್ಲಲೊ]ನಿನ್ನ ಇಷ್ಟುಹೆಚ್ಚಿನ ಮಾತ್ಯಾಕೊ ನಿನಗೆ ಬಹಳಕಿಚ್ಚು ತುಂಬಿತು ಕೇಳೋ ಎನಗೆ ಒಂದುಮೆಚ್ಚು ಹೇಳುವೆನೊ ರಾಮರಿಗೆಅಚ್ಚುತನ ಬಣಕೆ ಮೀಸಲಾಗಿರು ನೀನು 3 ವಿಧಿ ಕಾಲಮ[ಣೆ]ಯಾಗಿಬೆನ್ನಬಿಡದಿಹ ಪರಿಯ ನೋಡೊ 4 ಎನ್ನ ಸೋದರಮಾವ ವಾಲಿಯನು ಕೊಂದೀಗತಮ್ಮ ಸುಗ್ರೀವಗೊಲಿದು ವರವಿತ್ತುನಿನ್ನ ಕೊಂಡೊ[ಯ್ದ]ನೆಂಬುವರೊ ನಿನ್ನಚಿನ್ನನ ತೊಟ್ಟಿಲಿಗೆ ಕಟ್ಟುವರೊ ನಿನ್ನಹೊನ್ನತುಂಬೆಂದು ಆಡ್ಸುವರೊನಿನ್ನ ಶಿರವರಿದು ವಿಭೀಷಣಗೆÀ ಪುರವ ಕೊಡಬೇಕೆನುತಎನ್ನೊಡೆಯ ಬರುತಾನೆ ತಾಳೊ ಎಂದ 5 ಎತ್ತಿಹಿಡಿವ ಕೈಪಂಜು ಲೆಕ್ಕವಿಲ್ಲ ನಾ ಹಿಡಿದವಕತ್ತಿ ಇಪ್ಪÀತ್ತು ಕಾಣೋ ಕಪಿಯೆಎತ್ತಿ ಕಡಿವೆನು ಬಾಹುದಂಡ ಬೆ-ನ್ನ್ಹ್ಹತ್ತಿ ಬಡಿಯದೆ ಬಿಡೆನು ಕಂಡ್ಯಾ ನಿನ್ನಚಿತ್ತದಲಿ ತಿಳಿದುಕೊಳ್ಳೆಂದಮತ್ತೆ ನಾ ತಾಳಿ ಕೈಗಾಯಿದೆನಲ್ಲದೆ ಬಾಯಬತ್ತಿಸದೆ ಬಿಡುವೆನೇನೋ ಕಪಿಯೆ 6 ಮತ್ತ ರಾವಣ ನೀನು ಹೊತ್ತಿದ ಭೂಮಿ ಹಣತಿಸುತ್ತಣ ಸಮುದ್ರವೆ ತೈಲಎತ್ತಿ ಹಿಡಿವಳು ಸೀತೆ ದೀಪ ನಮ್ಮಚಿತ್ತದೊಲ್ಲಭನ ಪ್ರತಾಪ ನಿನ್ನಲಂಕಪಟ್ಟಣವು ಸುಡುವಂತೆ ಶಾಪಹತ್ತು ತಲೆ ಹುಳ ಹಾರಿಬಂದು ಬ್ಯಾಗಸುತ್ತಿ ಬೀಳುವುದು ದೀಪದೊಳಗೆ7 ಹೆಚ್ಚಿನ ಮಾತಿಷ್ಟು ಇವಗ್ಯಾಕೆ ಹಿಡಿತಂದುಕಿಚ್ಚು ಹಚ್ಚಿರೊ ಬಾಲಕೆ ಎಂದ ಆಗಪೊಚ್ಚಸೀರೆಗಳ ಸುತ್ತಿದರು ತ್ವರಿತಅಚ್ಚ ಎಣ್ಣೆಯಲಿ ತೋಯಿಸಿದರು ಬಾಲಹೆಚ್ಚಿಸಲು ಕಂಡು ಬೆದರಿದರುಕಿಚ್ಚು ಹಚ್ಚಲು ರಕ್ಕಸರ ಗಡ್ಡಮೀಸೆ ಸಹಎಚ್ಚರಿಸಿ ಸುಟ್ಟ ಲಂಕಾಪುರವ8 ಮುಖ್ಯಪ್ರಾಣ ವರದ ಮೆರದ 9
--------------
ವಾದಿರಾಜ
ಹನುಮಂತ - ಹನುಮಂತ ಪ ಗುಣನಿಧಿ ಹರಿಪದ | ವನಜ ಸದಾರ್ಚಕ ಅ.ಪ. ಅಂಜನಿ ಕುವರ ಧ | ನಂಜಯ ರಕ್ಷಕಭಂಜಿಸಿ ದೈತ್ಯ ಪ್ರ | ಭಂಜನಾಖ್ಯ 1 ಬಕ ಮುಖ ಹನ ಕೀ | ಚಕ ಧ್ವಂಸಕವಿಕಳರ ಗೈದರಿ | ದುಷ್ಕುಲ ನಾಶಕ 2 ಮತ್ತ ಮಾಯಿಗಜ | ಕುತ್ತಿದ ಕೇಸರಿವತ್ತಿ ಪೇಳ್ದೆ ಹರಿ | ಉತ್ಕರ್ಷಗಳನು 3 ಇನಜನ ಪಾಲಕ | ಇನಜ ಗರ್ವ ಹರಮಣಿಮನ ಮತ | ವನ ಅನಲ ದಾವಾಖ್ಯ 4 ಉರಗ ವಿಪ ಗುರುಗುರು ಗೋವಿಂದ | ವಿಠಲನ ಸೇವಕ5
--------------
ಗುರುಗೋವಿಂದವಿಠಲರು
ಹನುಮಂತ ನಿನ್ನನು ನಂಬಿದೆ ಪ ಯನು ಜಾನಕೀಗಿತ್ತನೆ ಲೋಕವೀರ ಅ.ಪ ಹಿತದಿವನವ ಕೀಳುತ ರಾವಣಿಯಸ್ತ್ರ ಹತಮಾಡಿ ಸುರರಿನ್ನುತಿಗೊಂಡೆ ವೀರ 1 ತೃಣಿ ಕರಿಸಿ ರಾವಣನಂ ಕೋಪದಿ ಅನಲಂಗೆ ತತ್‍ಪಟ್ಟಣ ಯನುಗೈಸಿ ಮಣಿಯ ವನಜಾಕ್ಷಿಗಿತ್ತೆ2 ವಜ್ರ ಕಾಯ ಮೌನಿ ಗೇಯ ಪ್ರಿಯದೂತನೆ ಅಣುಪ್ರಸ್ಥಪುರಿನಿಲಯ 3
--------------
ಗುರುರಾಮವಿಠಲ