ಒಟ್ಟು 1713 ಕಡೆಗಳಲ್ಲಿ , 107 ದಾಸರು , 1282 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುಲಭವಲ್ಲವೊ ಮಹಾನಂದ ತ -ನ್ನೊಳಗೆ ತಿಳಿಯಬೇಕುಗುರುದಯದಿಂದಪ.ಬೆಕ್ಕನು ಇಲಿ ನುಂಗುವನಕ - ಕಡು -ರಕ್ಕಸಿಯನು ಕಂಡು ಗಿಣಿ ನುಂಗುವನಕ ||ಮಕ್ಕಳ ಭಕ್ಷಿಸುವನಕ - ಮದ -ಸೊಕ್ಕಿದ ಗಜವನು ನರಿ ನುಂಗುವನಕ 1ಇಬ್ಬರೊಡನೆ ಕೊಡುವನಕ - ಮೂರು -ಹಬ್ಬಿದ ಬೆಟ್ಟವ ನೊಣ ನುಂಗುವನಕ ||ಒಬ್ಬರೊಡನೆ ಸೇರುವನಕ - ಕೆಟ್ಟ -ಗುಬ್ಬಿಯ ರಾಜಹಂಸವು ನುಂಗುವನಕ 2ಒಳ ಹೊರಗೊಂದಾಗುವನಕ - ತಾನು -ತಿಳಿದೆನೆಂಬಭಾವ ಬಯಲಾಗುವನಕ ||ಬೆಳಕಿನೊಳಗೆ ಕಾಣುವನಕ ನಮ್ಮ -ಚೆಲುವ ಪುರಂದರವಿಠಲನ ದಯವಾಗುವನಕ 3
--------------
ಪುರಂದರದಾಸರು
ಸುವ್ವಿ ಎಂದು ಪಾಡಿರೆ ಸುಜ್ಞಾನ ದೇವರಭವಹರಿವುದು ಭಯವಿಲ್ಲ ಸುವ್ವಿಪಂಚ ಶಕ್ತಿಗಳೆಂಬಪರಮಮುತ್ತೈದೆಯರುವಂಚನೆಗೆ ದೂರಾಗಿ ವರ್ತಿಸುತ ಸುವ್ವಿವಂಚನೆಗೆ ದೂರಾಗಿ ವರ್ತಿಪಐದೆಯರುಮುಂಚೆ ಬೇಗದಲಿ ಮಡಿಯಾಗಿ ಸುವ್ವಿ1ಕ್ಷೇತ್ರದ ಒರಳಲ್ಲಿ ಕ್ಷರನೆಂಬ ಅಕ್ಕಿಯುಕ್ಷೇತ್ರಜÕನೆಂಬ ಒನಕೆಯ ಸುವ್ವಿಕ್ಷೇತ್ರಜÕನೆಂಬ ಒನಕೆಯ ಪಿಡಿದುಪಾತ್ರನಾಗೆಂದು ಹರಸುತ ಸುವ್ವಿ2ಆರು ಮೂರಾದವನ ಐದು ಎಂಟಾದವನಬೇರೇಳು ನಾಲ್ಕೆರಡು ಬಗೆಯಾದವನ ಸುವ್ವಿಬೇರೇಳು ನಾಲ್ಕೆರಡು ಬಗೆಯಾದನೆಲ್ಲನುವಾರಣದಿ ನೀವೆಲ್ಲ ತಳಿಸಿರೆ ಸುವ್ವಿ3ವಾಸನೆಯ ಮೆರುಗನು ಒಳಿತಾಗಿ ತಳಿಸುತ್ತಸೂಸದಂತೆಲ್ಲವ ಮಗುಚುತ್ತ ಸುವ್ವಿಸೂಸದಂತೆಲ್ಲವ ಮಗಚುತ್ತ ಅಕ್ಕಿಯರಾಶಿಯನು ಮಾಡಿ ಬಿಡಿರವ್ವ ಸುವ್ವಿ4ಪರವಸ್ತುವಾದವನ ಪರಬ್ರಹ್ಮವಾದವನಪರಮಾತ್ಮನೆಂಬ ಪುರುಷನ ಸುವ್ವಿಪರಮಾತ್ಮನೆಂಬ ಪುರುಷ ಚಿದಾನಂದನಪರಮನೈವೇದ್ಯದ ಪಾಕಕ್ಕೆ ಸುವ್ವಿ5
--------------
ಚಿದಾನಂದ ಅವಧೂತರು
ಸುಳ್ಳೇ ತೋರಿದೆ ಜಗವೆಲ್ಲಸುಳ್ಳಾದವರಿಗೆ ಸುಳ್ಳುಸುಳ್ಳೇ ತೋರಿದೆ ಜಗವೆಲ್ಲಪಮೂರು ಮೂರುತಿ ಮೂರು ಶಕ್ತಿಯೆ ಸುಳ್ಳುಮೂರು ಸ್ಥಾನ ಮೂರು ಗುಣಗಳೇ ಸುಳ್ಳುಮೂರು ಮೂಲವೇ ಸುಳ್ಳು ತಾನಿಹುದೇ ಸುಳ್ಳು1ಚಂದ್ರ ಸೂರ್ಯರುಗಳೆಂಬುವರೆ ಸುಳ್ಳುಇಂದ್ರರು ಅಹಮಿಂದ್ರರು ಸುಳ್ಳುಸಾಂದ್ರನಕ್ಷತ್ರವೇ ಇದು ಸುಳ್ಳು ತಾನಿಹುದೆ ಸುಳ್ಳು2ದಿಗ್ಗಜಗಳು ದಿಕ್ಪಾಲಕರೆ ಸುಳ್ಳುವಗ್ಗಿಗರಹ ವಸು ಎಂಬರು ಸುಳ್ಳುಸ್ವರ್ಗವೆಂಬುದು ಅದು ಸುಳ್ಳು3ಬಹುಲೋಕವು ಭುವನಂಗಳು ಸುಳ್ಳುಇಹಪರ ಎಂಬವು ಎರಡಿವು ಸುಳ್ಳುಬಹಿರಂಗವೆಂಬುದಿದು ಸುಳ್ಳು ತಾನಿಹುದೆ ಸುಳ್ಳು4ನಾನಾರೂಪದ ಬಹೂರೂಪವೆ ಸುಳ್ಳುನಾನಾ ವಿನೋದಂಗಳು ಇವು ಸುಳ್ಳುನಾನಾ ಬೆಳಕುಗಳು ಅವು ಸುಳ್ಳು ತಾನಿಹುದೆ ಸುಳ್ಳು5ಬ್ರಹ್ಮಾಂಡವು ತಾನಿಹುದೇ ಸುಳ್ಳುಪಿಂಡಾಂಡವು ತಾ ಮೊದಲಿಗೆ ಸುಳ್ಳುಕಂಡೆನೆಂದೆಂಬುವು ಎಲ್ಲ ಸುಳ್ಳು ತಾನಿಹುದೆ ಸುಳ್ಳು6ಸುಳ್ಳು ಚಿದಾನಂದನೆಂಬುದು ಸುಳ್ಳುಸುಳ್ಳಿನ ಕೀಲನು ಅರಿತರಿಗೆ ಸುಳ್ಳುತಿಳಿಯದವರಿಗೆ ನಿಜಸುಳ್ಳು ತಾನಿಹುದೇ ಸುಳ್ಳು7
--------------
ಚಿದಾನಂದ ಅವಧೂತರು
ಸೂದನ ಗುಣಗಳ ಶೋಧನ ಮಾಡೋದೇ ಪಹರಿಸರ್ವೋತ್ತಮಗುರುಜೀವೋತ್ತಮಪುರಹರಸುರವರ ಪರಿವಾರಾವರಿತು ವಿಧಿಯ ನೀ ಪರಿಪರಿ ಭಜಿಪೋದೆ 1ಸೀಲಜೀವರ ಪ್ರೇಮ ಮೆಲ್ಲುವನೆಂಬುದೆ 2ಮತ್ಸರಿಸದೆ ಪರಮೋತ್ಸನಾಗೋದೆ 3ಮಾತಾಪಿತರುಸತಿಪೋತರು ಸಿರಿಸತಿನಾಥನ ಪದಯುಗದೂತರು ಎಂಬುದೆ 4ವನಜಾಕ್ಷನಗುಣಮನದಲಿ ಎಣಿಸಿದೆದಣಿದರೆ ಮುಕುತಿಯು ತನಗಿಲ್ಲೆಂಬುದೆ 5ದಾಸನಾಗಿ ಭವದಾಸೆಯ ನೀಗೋದೆ 6ನಂದದಿ ಪರರನು ನಿಂದಿಸದಿಪ್ಪೋದೆ 7ಪಾಸನ ಮಾಡುತ ಸೋಸಿಲಿ ಇರುವೋದೆ 8ಮಾಧವದೊರೆಯನು ಖೇದವು ಬರುವುದುಮೋದಕೊಡುವವೋ ಹಾದ್ಯೆಲ್ಲೆಂಬೋದೆ9ಸದಮಲಮೂರುತಿ ಹೃದಯದಿ ಕಾಂಬೋದೆ 10ಅಂಬುಜಭವನಾಂಡದಿ ಶಿರಿಬಿಂಬನೆ ಈಪರಿತುಂಬಿಹನೊಬೊಂಬೆಯ ತೆರ ಕುಣಿಸುವನೆಂಬೋದೆ 11ಶ್ರೀವರ ತಾ ನಮ್ಮ ಕಾವನುಎನುತಭಾವಿಸಿ ಈಪರಿಸೇವೆಯ ಮಾಡೋದೆ12ವಹಿಸಿದ ದಾಸ್ಯದ ವಿಹಿತನು ಎನಿಸೋದೆ 13ನಾಥನೆಂದು ಈ ರೀತಿಲಿ ಇಪ್ಪೋದೆ 14
--------------
ಗುರುಜಗನ್ನಾಥದಾಸರು
ಸೈಸಲಾರೆನೆಗೋಪಿನಿನ್ನ ಮಗನ ಲೂಟಿ |ಏಸೆಂದು ಪೇಳಲಮ್ಮ ||ವಾಸುದೇವನು ಬಂದು ಮೋಸದಿಂದಲಿ ಎನ್ನ |ವಾಸವಸೆಳಕೊಂಡು ಓಡಿ ಪೋದನಮ್ಮಪದೇವರ ಪೆಟ್ಟಿಗೆ ತೆಗೆದು ಸಾಲಿಗ್ರಾಮ |ಸಾವಿರ ನುಂಗುವನೆ ||ಭಾವಜನಯ್ಯಇದೇನೆಂದರೆ ನಿಮ್ಮ |ಕಾಮದೇವರು ನಾನು ಕೇಳಿಕೊ ಎಂಬನೆ 1ಅಗ್ರೋದಕತಂದು ಜಗುಲಿ ಮೇಲಿಟ್ಟರೆ |ವೆಗ್ಗಳದಲಿ ಕುಡಿವ ||ಮಂಗಳ ಮಹಿಮನ ವಿೂಸಲೆಂದರೆ ನಿಮ್ಮ |ಮಂಗಳಮಹಿಮನ ಅಪ್ಪನಾನೆಂಬುವ 2ಅಟ್ಟಡಿಗೆಯನೆಲ್ಲ ಉಚ್ಛಿಷ್ಟವ ಮಾಡಿ |ಅಷ್ಟು ತಾ ಬಳಿದುಂಬನೆ ||ವಿಷ್ಣು ದೇವರ ನೈವೇದ್ಯವೆಂದರೆ ನಿಮ್ಮ |ಇಷ್ಟದೇವರು ತೃಪ್ತನಾದನೆಂತೆಂಬುವ 3ಋತುವಾದ ಬಾಲೆಯರು ಪತಿಯೆಡೆ ಪೋಪಾಗ |ಕೃತಕದಿಂದಡಗಿಹನೆ ||ಮತಿಗೆಟ್ಟ ಪೆಣ್ಣೆ ಸುಂಕವ ಕೊಡು ಎನುತಲಿ |ಪ್ರತಿಯಾಗಿ ಮಾರನ ಸೂರೆಗೊಂಬುವನೆ 4ಅಚ್ಚಪಾಲು-ಮೊಸರುನವನೀತಮಜ್ಜಿಗೆ |ರಚ್ಚೆಮಾಡಿ ಕುಡಿವ ||ಅಚ್ಚ ಪುರಂದರವಿಠಲರಾಯನ |ಇಚ್ಛೆಯಿಂದಲಿ ನಿಮ್ಮ ಮನೆಗೆ ಕರೆದುಕೊಳ್ಳಿ 5
--------------
ಪುರಂದರದಾಸರು
ಸೊಡ್ಡುಡಂಬಕಅವನಿಭಾರಂಗೆ ಸೊಡ್ಡುಸೊಡ್ಡು ಭಕುತಿಹೀನ ಹೆಡ್ಡಂಗೆ ಸೊಡ್ಡು ಪ.ಶುದ್ಧ ಸಾತ್ವಿಕಗುರುಮಧ್ವಮತವ ಬಿಟ್ಟುಬದ್ದಡ್ಡ ದಾರಿಯವಿಡಿದಗೆ ಸೊಡ್ಡುಮದ್ಯಘಟಕೆ ಮನವಿಟ್ಟು ಪೀಯೂಷವನೊದ್ದು ಕಳೆದ ಹೊಲೆ ಮಾನಿಸಗೆ ಸೊಡ್ಡು 1ಜಗದೆರೆಯನ ಜಗದಾಕಾರ ಸಟೆಯೆಂದುಬಗುಳ್ವ ಬಾಯೊಳು ಹೊಡೆ ಮಗುಳೆ ಸೊಡ್ಡುಅಘಹರನಾಳಿಗಾಳಾಗಿ ದೊರೆಯೆ ತಾನೆಂಬಗೆ ನಗೆಗೇಡಿನಾ ಮಾತೆ ಸೊಡ್ಡು 2ಶ್ರುತಿಸ್ಮøತಿಗಳವಡದನಂತಗುಣಗೆ ದುರ್ಮತಿಯಲ್ಲಿ ನಿರ್ಗುಣೆಂದವಗೆ ಸೊಡ್ಡುರತಿಪತಿಪಿತನಲ್ಲದನ್ಯ ಸರ್ವೋತ್ತಮತ್ವಕೆ ನಿರಯದಂಧತಮದ ಸೊಡ್ಡು 3ಹರಿಗೆ ಮನುಭವವಿಧಿಯೆಂದೊಕ್ಕಣಿಪಗೆಚಿರಕ್ಲೇಶ ಭವಯಾತ್ರೆಲಂಜು ಸೊಡ್ಡುಒರೆದೊರೆದಖಿಳಾಗಮಾರ್ಥವ ತಿಳಿದೇನುಹರಿಯೊಪ್ಪದಾ ನರಖರನಿಗೆ ಸೊಡ್ಡು 4ಪರಮಭಾಗವತರಾಚರಣೆಗೆ ಅಸೂಯಕ್ಕವರಗ್ರಂಥಚೋರಗೆ ಶಿರದಿ ಸೊಡ್ಡುಸಿರಿಪತಿ ಪ್ರಸನ್ವೆಂಕಟೇಶನ ಭಟರ ಕಂಡ್ಹರುಷಲ್ಲದವಗೆ ಮೂಗಲಿ ಸುಣ್ಣ ಸೊಡ್ಡು 5
--------------
ಪ್ರಸನ್ನವೆಂಕಟದಾಸರು
ಸ್ತ್ರೀಯ ತ್ಯಜಿಸಲು ಬೇಕು ಶಿವಧ್ಯಾನಕೆಬಯ್ಯಬೇಡಿರಿ ಬುದ್ಧಿ ಎಂದೆನ್ನಿರಯ್ಯಪಮಹಿಳೆಯ ಮೋಹದಲಿ ಮಗನು ತನ್ನವನೆಂಬೆಮಹಿಳೆಯು ತೆರಳೆ ಮಗನಿಗಾರೋಇಹುದು ಪ್ರಪಂಚವೆಲ್ಲ ಎಲ್ಲ ಸತಿಯಿಂದಲಿಮಹಾದೇವ ಚಿಂತನೆಗೆ ಮರೆವೆ ಸ್ತ್ರೀಯಯ್ಯಾ1ಮಗನು ಶಿಶುವಾಗಿರಲು ಮಾನಿನಿಯ ಬಡಿವನುಮಗ ಬಲಿಯೆ ಮುರಿವನು ನಿನ್ನೆಲುಬನುಮಗನು ಯಾರವ ಹೇಳು ಮನೆಯು ಯಾರದು ಹೇಳುನಗುವು ಅಲ್ಲದೆ ನನ್ನದೆಂತೆನಲಿಕಯ್ಯಾ2ಪತ್ನಿಯನು ಬಯ್ಯೆ ಮಗ ಬಡಿವನು ಎಂಬಹೆತ್ತಾಕೆ ಬಯ್ಯೆ ಹೇವಿಲ್ಲದಿಹನುತೊತ್ತಿನ ಮಗನಾಗಿ ನಿನ್ನ ತಳ್ಳುವನುಮಿತ್ರನಾಗಿಹನವನು ತಾಯಿಗಯ್ಯಾ3ಮನೆಯು ಸವತಿಯವಳದು ಮಕ್ಕಳೆಲ್ಲ ಸವತಿಯದುಎನಿತೆನಿತು ಭಾಗ್ಯ ಸೊದೆ ಎಲ್ಲ ಸವತಿಯಳದುಮನಕೆ ಹೇಸಿಗೆ ಹುಟ್ಟಿ ಮಹಾತ್ಮನಾಗಲುತನ್ನ ಹಿಂದೆ ತಿರುಗುವರೆ ತಿಳಿದು ನೋಡಯ್ಯ4ಸಂಗತಿಯ ಮೂಲದಲಿ ಸುತ್ತಿಹುದು ಪ್ರಪಂಚಕಂಗಳೊಳು ಕಸ ಚೆಲ್ಲಿದಂತೆ ಇಹುದುಮಂಗಳ ಚಿದಾನಂದಮುಕ್ತತಾನಾಗುವುದಕೆಅಂಗನೆಯ ಬಿಡಬೇಕು ಚಿಂತೆ ಯಾಕಯ್ಯಾ5
--------------
ಚಿದಾನಂದ ಅವಧೂತರು
ಸ್ನಾನ ಮಾಡಿರಯ್ಯ ಜಾÕನತೀರ್ಥದಲಿನಾನು ನೀನೆಂಬಹಂಕಾರವ ಬಿಟ್ಟು ಪ.ತನ್ನೊಳು ತಾನೆ ತಿಳಿದರೊಂದು ಸ್ನಾನಅನ್ಯಾಯಗಾರಿ ಕಳೆದರೊಂದು ಸ್ನಾನಅನ್ಯಾಯವಾಡದಿದ್ದರೊಂದು ಸ್ನಾನಚೆನ್ನಾಗಿ ಹರಿಯ ನೆನೆದರೊಂದು ಸ್ನಾನ 1ಪರಸತಿಯ ಬಯಸದಿದ್ದರೆ ಒಂದು ಸ್ನಾನಪರನಿಂದೆ ಮಾಡದಿದ್ದರೆ ಒಂದು ಸ್ನಾನಪರದ್ರವ್ಯ ಅಪಹರಿಸದಿರೆ ಒಂದು ಸ್ನಾನಪರತತ್ವತಿಳಿದುಕೊಂಡರೆ ಒಂದು ಸ್ನಾನ2ತಂದೆತಾಯಿಗಳ ಸೇವೆ ಒಂದು ಸ್ನಾನಮುಂದಿನಮಾರ್ಗ ತಿಳಿದರೊಂದು ಸ್ನಾನಬಂಧನವನು ಬಿಡಿಸಿದರೊಂದು ಸ್ನಾನಸಂಧಿಸಿ ತಿಳಿದುಕೊಂಡರೆ ಸೇತು ಸ್ನಾನ 3ಅತ್ತೆ ಮಾವನ ಸೇವೆಯೊಂದು ಸ್ನಾನಭರ್ತನ ಮಾತು ಕೇಳುವುದೊಂದು ಸ್ನಾನಕ್ಷೇತ್ರಪಾತ್ರರ ಸಹವಾಸ ಒಂದು ಸ್ನಾನಪಾರ್ಥಸಾರಥಿ ನಿಮ್ಮ ಧ್ಯಾನವೆ ಧ್ಯಾನ 4ವೇದ ಶಾಸ್ತ್ರಗಳನೋದಿದರೊಂದು ಸ್ನಾನಭೇದಾಭೇದ ತಿಳಿದರೊಂದು ಸ್ನಾನಸಾಧು ಸಜ್ಜನರ ಸಂಗ ಒಂದು ಸ್ನಾನಪುರಂದರವಿಠಲನ ಧ್ಯಾನವೆ ಸ್ನಾನ 5
--------------
ಪುರಂದರದಾಸರು
ಹಣ್ಣು ಕೊಂಬುವ ಬನ್ನಿರಿ ಹರಿದಾಸರುಹಣ್ಣು ಕೊಂಬುವ ಬನ್ನಿರಿ ಪ.ಚೆನ್ನ ಬಾಲಕೃಷ್ಣನೆಂಬಕನ್ನೆಗೊನೆಬಾಳೆಹಣ್ಣು ಅಪಸುತ್ತೇಳು ಲೋಕದಿಸುರರು ಬಿತ್ತಿದ ಹಣ್ಣುಭಕ್ತರ ಬಾಯೊಳು ನೆನೆವ ಹಣ್ಣುಅರ್ತಿಯುಳ್ಳವರೆಲ್ಲ ಕೊಳ್ಳಿ ಬೇಕಾದರೆನಿತ್ಯಮಾಧವನೆಂಬ ಅಚ್ಚಮಾವಿನ ಹಣ್ಣು1ಅಜನ ಪಡೆದ ಹಣ್ಣು ಗಜವ ಕಾಯ್ದ ಹಣ್ಣುನಿಜಮುನಿಗಳಿಗೆ ತೋರಿಸಿದ ಹಣ್ಣುತ್ರಿಜಗವಂದಿತ ಪಾಲ್ಗಡಲೊಡೆಯನೆ ಹಣ್ಣುಸುಜನಭಕ್ತರೆಲ್ಲಕೊಳ್ಳಬನ್ನಿರಿ ಹಣ್ಣು2ತುರವ ಕಾಯ್ದ ಹಣ್ಣು ಉರಗನ ತುಳಿದಾ ಹಣ್ಣುಕರೆದರೆ ಕಂಬದೊಳು ಓಯೆಂಬ ಹಣ್ಣುಮರುಗುವ ಧೃವನಿಗೆ ಪಟ್ಟಗಟ್ಟಿದ ಹಣ್ಣು
--------------
ಪುರಂದರದಾಸರು
ಹರಿನಾಮಕೀರ್ತನೆಅನುದಿನಮಾಳ್ಪಗೆ |ನರಕ ಭಯಗಳುಂಟೆ? ಪಕೇಸರಿಗಂಜದ ಮೃಗವುಂಟೆ?-ದಿ-|ನೇಶನಿಗಂಜದ ತನುವುಂಟೆ? ||ವಾಸದೇವ ವೈಕುಂಠ ಜಗನ್ಮಯ |ಕೇಶವ ಕೃಷ್ಣ ನೀನೆಂದುಚ್ಚರಿಸುವ1ಕುಲಿಶವನೆದುರಿಪ ಗಿರಿಯುಂಟೆ?-ಬಲು |ಪ್ರಳಯ ಬಂದಾಗ ಜೀವಿಪರುಂಟೆ?ಜಲಜನಾಭ ಗೋವಿಂದ ಜನಾರ್ಧನ |ಕಲುಷಹರಣಕರಿರಾಜ ರಕ್ಷಕನೆಂಬ 2ಗರುಡಗೆ ಅಂಜದ ಫಣಿಯುಂಟೆ? -ದ-|ಳ್ಳುರಿಯಲಿ ಬೇಯದ ತೃಣವುಂಟೆ? ||ನರಹರಿನಾರಾಯಣ ಕೃಷ್ಣ ಕೇಶವ |ಪುರಂದರವಿಠಲ ನೀನೆಂದುಚ್ಚರಿಸುವ3
--------------
ಪುರಂದರದಾಸರು
ಹರಿನಾಮವೆ ಜಯ ಮಂಗಳವು |ಶ್ರೀ ಹರಿನಾಮವೆಶುಭಮಂಗಳವು ||ಹರಿನಾಮವ ದಿನ ಸ್ಮರಿಸುವ ಸುಜನರ-ದುರಿತರಾಶಿಗಳೆಲ್ಲ ತರಿಯುವಮಾಧವ1ಉರಗಶಯನವರಪರಮೇಶನಸಖ|ಗರುಡಗಮನಸಿರಿಯರಸನೆಂದೆನಿಸಿದಹರಿ2ನಾರದಮುನಿ ಹರಿನಾರಾಯಣನೆಂದು |ಭಾರಿ ಭಜನೆ ಗೈವ | ಮಾರಜನಕನೆಂಬಹರಿ3ಅಜಾಮಿಳನಂತ್ಯದಿ | ಭುಜಗಶಯನನೆಂದು |ಭಜಿಸಲು ಸಲಹಿದವಿಜಯಸಾರಥಿಯಾದಹರಿ4ಸರಸಿಯೊಳ್ ಮೊರೆಯಿಟ್ಟು | ಮರುಗುವ ಗಜವನು |ಗರುಡನ ಹೆಗಲೇರಿ ಪಿಡಿದು ರಕ್ಷಿಸಿದಂಥ5ಶೇಷಗಿರಿಯ ಮೇಲೆ ವಾಸವಾಗಿರುತಿಹ |ದಾಸ ಜನರ ಪ್ರಿಯ | ದೋಷರಹಿತನೆಂಬ6ವೃಂದಾವನದೊಳಾ | ನಂದದೊಳಾಡುವ |ಸುಂದರಕರಗೋವಿಂದನೆಂದಿನಿಸಿದಹರಿ7
--------------
ಗೋವಿಂದದಾಸ
ಹರಿಯೆ ಎನಗಾರು ಗತಿಯೊ ನೀನಲ್ಲದೆ ಪ.ಹಿಂದಿನಾಪತ್ತು ಮರೆತೆಇಂದುಮಾಯದಿ ಬೆರೆತೆಒಂದುಗೂಡಿದವುಅಘಮುಂದಿನರುಹಿಲ್ಲ1ಹಗಲು ಅಶನದ ಕೃತ್ಯ ಇರುಳು ನಿದ್ರೆಯ ಮಬ್ಬುವಿಗಡಕಾವನ ತಡೆ ತಗಲು ಬಿತ್ತೊ ರಂಗಾ2ಅತ್ತಿತ್ತ ಸುತ್ತುವನಕ ಹೊತ್ತು ಹೋಯಿತು ಯಮನಮುತ್ತಿಗೆ ಬಿದ್ದಾಗ ಮತ್ತಾರಿಲ್ಲೊ ಸ್ವಾಮಿ 3ಅಜ್ಞಾನೆಂಬಹಿ ಕಚ್ಚಿ ಯಜೆÕೀಶ ನಿನ್ನಂಘ್ರಿಸಂಜÕವಿಲ್ಲದೆ ದು:ಖ ಮಗ್ನನಾದೆನಲ್ಲೊ 4ಶ್ರೀ ಪ್ರಸನ್ವೆಂಕಟೇಶ ತಾಪತ್ರಯವಿನಾಶನೀ ಪಾಲಿಸಯ್ಯ ವಿಶ್ವವ್ಯಾಪಕ ಸ್ವಾಮಿ 5
--------------
ಪ್ರಸನ್ನವೆಂಕಟದಾಸರು
ಹರಿಯೆ ನೀನಲ್ಲದಾರ ಕಾಣೆ ಕಾಯ್ವರಮರೆ ಹೊಕ್ಕವರ ಭಯ ಪರಿಹಾರವನು ಮಾಡಿ ಪಶಿವಭಕ್ತಾಗ್ರಣಿ ಬಾಹ್ರ್ಯದ್ರಥ ಗಂಜಾಲೆಮಜಾ ನಿ- |ನ್ನವನಿಂದಳಿಸಿದೆ, ಬಾಣನ ಬಾಗಿಲೂ ||ಭವಕಾಯ್ದಿರಲು ನೀ ತೋಳ್ಗಳನು ಛೇದಿಸುವಾಗ |ಲವಮಾತ್ರ ಪ್ರತಿಕೂಲನಾಗಲಿಲ್ಲ ಶಂಕರನು 1ಹರಿಯೆಂದುದಕೆ ತಾಳದಲೆ ಬಾಧಿಸುತಲಿರೆ |ತರಳನ ಮೊರೆಕೇಳಿಕಂಭದಿಂದ ||ಉರಿಯುಗುಳುತ ಬಂದು ಖಳನುದರವ ಬಗೆದು |ಶರಣ ಪಾಲಕನೆಂಬ ಬಿರುದು ದಕ್ಕಿಸಿಕೊಂಡೆ 2ಸ್ಥಾಣುವಿನವರಬಲದಿಂದಮರರ ಕಾಡೆ |ದಾನವಾನ್ವಯ ಕೊಂದೆ ಭಸ್ಮಾಸು- ||ರನು ಪಾಣಿಯ ತಲೆಯೊಳಿಡುವೆನೆಂಬೊ ಭರದಿ ಬರಲು |ಪ್ರಾಣೇಶ ವಿಠಲ ನೀ ಶಂಕರನನುಳುಹಿದಿ 3
--------------
ಪ್ರಾಣೇಶದಾಸರು
ಹರಿಯೆಗತಿಸಿರಿವಿರಿಂಚಿ ಶಿವರಿಗೆನರ -|ಹರಿಯೆಗತಿಸುರಪತಿ ಸುರರಿಗೆಪರುಕುಮಣಿದೇವಿಯ ಶಿಶುಪಾಲಗೀವೆನೆಂದು |ರುಕುಮ ಸಂಭ್ರಮಿಸಲು ಕೃಷ್ಣ ಬಂದು ||ಸಕಲ ರಾಯರುಗಳು ಸನ್ನದ್ಧರಾಗಿರೆ |ರುಕುಮಿಣಿದೇವಿಯ ವರಿಸಿ ಆಳಿದನಾಗಿ 1ಹಯ್ಯಾಸನೆಂಬವ ವೇದವ ಕದ್ದೊಯ್ಯೆ |ಹಯಗ್ರೀವನಾಗಿ ಹರಿಯವನ |ಕಾಯವ ಖಂಡಿಸಿ ಅಜಗೆ ವೇದವನಿತ್ತು |ಕಾಯ್ದ ಕರುಣಿ ಕಮಲಾಕ್ಷನೆ ದೈವವೆಂದು 2ಭಸುಮಾಸುರನಿಗೊಂದಸಮದ ವರವಿತ್ತು |ತ್ರಿಸೂಲಧರನು ಓಡಿ ಬಳಲುತಿರೆ |ಬಿಸಜಸಂಭವನಯ್ಯ ಭಸುಮಾಸುರನನು |ಭಸುಮವ ಮಾಡಿ ಭಕ್ತನ ಪಾಲಿಸಿದನಾಗಿ 3ಸುರಪನ ರಾಜ್ಯವ ಬಲಿಯಾಕ್ರಮಿಸಲು |ಹರಿಯೆ ದಾನವ ಬೇಡಿ ನೀನವನ ||ಧರೆಯಈರಡಿ ಮಾಡಿ ಪಾತಾಳಕೆ ಮೆಟ್ಟ |ಸುರಪಗೆ ರಾಜ್ಯವನಿತ್ತು ಸಲಹಿದನಾಗಿ 4ಸುರ - ಭೂಸುರರನು ಅಸುರ ಬಾಧಿಸುತಿರೆ |ಹರಿಯವತರಿಸಿ ನೀನಸುರರನು ||ಶಿರಗಳ ಚಂಡಾಡಿ ಸುರರ ಭೂಸುರರನುಪೊರೆಯುತ್ತಲಿಪ್ಪ ನಮ್ಮ ಪುರಂದರವಿಠಲ 5
--------------
ಪುರಂದರದಾಸರು
ಹರಿಯೆನ್ನಿ ಹರಿಯೆನ್ನಿ ಹರಿಯೆನ್ನಿರೈಹರಿಯೆಂದವರಿಗೆಲ್ಲಿದುರಿತದಂದುಗವುಪ.ಹರಿಯೆಂದಜಾಮಿಳಗೆ ನರಕ ತಪ್ಪಿತಾಗಲೆಹರಿಯೆಂದ ಕರಿಗೆ ಕೈವಲ್ಯಾಯಿತುಹರಿಯೆಂದ ತರಳಗೆಉರಗಹಾರಾದವುಹರಿಯೆಂದವಅಕ್ಷಯಸಿರಿಪಡೆದ1ಹರಿಸೇವೆಯನೆ ಮಾಡಿ ವಿರಿಂಚಪದವನುಂಡಹರಿಸೇವೆಯಲಿ ನಿಶಾಚರರಸಾದಹರಿಸೇವೆಯಲಿ ಹರಿವರರ್ಮುಕ್ತರಾದರುಹರಿಸೇವೆಯಲಿ ಮತ್ರ್ಯರು ಸುರರಾದರು 2ಹರಿಪಾದ ಸೋಕಲು ಸ್ಥಿರ ಪಾತಾಳದ ಪಟ್ಟಹರಿಪದ ಸೋಕಿದಅರೆಪೆಣ್ಣಾಗೆಹರಿಪಾದ ಸೋಕಿ ಕಾಳುರಗ ಪಾವನನಾದಹರಿಪಾದ ಸೋಕುವಾತುರವಿಡಿದು ಹರಿಯೆನ್ನಿ 3ಮಂಡೂಕಹಿ ಮುಖದಿ ಕಂಡ ಮಕ್ಷಕವ ತಾನುಂಡೇನೆಂಬುವಪರಿಮೃತ್ಯುವಿನಕುಂಡದಿ ವಿಷಯದಹಿಂಡುವಿಚಾರ್ಯಾಕೆಪುಂಡರೀಕಾಕ್ಷಾಂಘ್ರಿ ಕೊಂಡಾಡಿ ಮನದಿ 4ಯುವತಿ ಮಕ್ಕಳು ಮಂದಿರವನಗಲಿಸುವರುಜವನ ಬಂಟರು ಈ ಕಾಯವ ನೆಚ್ಚದೆಅವಿರಳ ಪ್ರಸನ್ವೆಂಕಟವರದ ರಂಗನಸವಿ ನಾಮಾಮೃತದಾಸ್ವಾದವನುಂಬ ದೃಢದಿ 5
--------------
ಪ್ರಸನ್ನವೆಂಕಟದಾಸರು