ಒಟ್ಟು 2199 ಕಡೆಗಳಲ್ಲಿ , 106 ದಾಸರು , 1663 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸತ್ಯ ಸಂಕಲ್ಪ ಸ್ವಾತಂತ್ರ ಸರ್ವೇಶ ಸರ್ವೋತ್ತಮನೆ ಸಾರ್ವಭೌಮಾ ಪ ಭೃತ್ಯರಿಗೆ ಬಂದ ಪರಿಪರಿ ಭಯಗಳನೆ ಕಳೆದುನಿತ್ಯದಲಿ ಕಾಯ್ವ ಸ್ವಾಮೀ ಪ್ರೇಮೀ ಅ.ಪ. ಆವ ಜನುಮದ ಫಲವೊ | ಆವ ಕ್ರಿಯಗಳಿಂದಆವ ಸಾಧನದ ಬಗೆಯೋ ||ಆವುದಿಂದಾವುದಕೆ ಘಟನೆಯನು ಮಾಳ್ಪೆಯೊಆವುದೊ ನಿನ್ನಾಟವೋ ||ಆವ ಪರಿಯಿಂದಲ್ಲಿ ಜೀವಿಗಳ ಸಲಹುವಿಯೊಆವ ನಿನ್ನಾಧೀನವೋ |ದೇವ ದೇವೇಶ ನಿನ್ನ | ಭಾವ ಬಲ್ಲವರಾರೊಭಾವಜನ ಪಿತ ಕೃಪಾಳೊ | ಕೇಳೋ 1 ತೈಜಸ ಪ್ರಾಜ್ಞ ವಿಶ್ವರೂಪಗಳಿಂದಸ್ವಪ್ನ ಕಾಲದಲಿ ನೀನೂ ||ಸುಪರ್ವಾಣ ದೈತ್ಯರ ಸೃಜಿಸಿ ಮನೆಯನು ಮಾಡಿಅಪರಿಮಿತ ಕಾರ್ಯಗಳನೂ |ಸುಫಲ ದುಷ್ಕರ್ಮಗಳ ತೋರಿಸೀ ಜೀವಕ್ಕೆಕ್ಲುಪುತವಾಗಿದ್ದವೆಲ್ಲಾ |ಕೃಪೆಯಿಂದ ತೋರಿ ಬದಾಪತ್ತುಗಳ ಕಳೆವಅಪರಿಮಿತ ಸಾಗರಾ | ಶೂರಾ 2 ಎನ್ನಂಥ ಪಾಪಿಷ್ಠರಿನ್ನಿಲ್ಲ ಧರೆಯೊಳಗೆ ನಿನ್ನಂಥ ಕರುಣಿಯಿಲ್ಲಾ ||ಚೆನ್ನಗುರು ವಿಜಯರಾಯರ ಪೊಂದಿದವನೆಂದೂಮನ್ನಿಸಿ ಸಲಹಬೇಕೋ |ಘನ್ನ ಸಂಸಾರದೊಳು ಬವಣೆ ಬಂದಟ್ಟಿದರುನಿನ್ನ ಸ್ಮøತಿಯೊಂದು ಬರಲೀ |ಸನ್ನುತಾಂಗಿಯ ರಮಣ ವ್ಯಾಸವಿಠಲ ಮಧ್ವಮುನಿಗೊಲಿದೆ ಉಡುಪಿವಾಸಾ | ಶ್ರೀಶಾ 3
--------------
ವ್ಯಾಸವಿಠ್ಠಲರು
ಸತ್ಯಜ್ಞಾನ ತೀರ್ಥರಿತ್ತರಂಕಿತವನ್ನು ಇನ್ನೇನಿನ್ನೇನು ನಿತ್ಯ ಹರಿಯ ಭಜಿಸುವ ಅಧಿಕಾರಿಯಾದೆನಿನ್ನೇನಿನ್ನೇನು 1 ಕಷ್ಟಬಟ್ಟ ದಿವ್ಯ ಶ್ರೇಷ್ಠಮಾರ್ಗವು ಸಿಕ್ಕಿತಿನ್ನೇನಿನ್ನೇನು ಎಷ್ಟು ಪೇಳಲಿ ಎನ್ನಾದೃಷ್ಟವು ತೆರೆಯಿತು ಇನ್ನೇನಿನ್ನೇನು 2 ಹನುಮೇಶವಿಠಲನೆಂಬೊ ನಾಮ ಅಂಕಿತವಿತ್ತರಿನ್ನೇನಿನ್ನೇನು ದಿನವು ದೈವಗಳಿಗೆ ನಮಿಸಿ ಬೇಡ್ವದು ತಪ್ಪಿತಿನ್ನೇನಿನ್ನೇನು 3
--------------
ಹನುಮೇಶವಿಠಲ
ಸತ್ಯಧರ್ಮ ಸದ್ಗುರುವರ ರಕ್ಷಿಸು ಪ ಭೃತ್ಯ ನೀನಾಗೆಂದು ಕೃತ್ಯ ವಿಪರ್ಯಯ ವೆತ್ತಣಿಸದೆ ಕೃತಕೃತ್ಯನ ಮಾಡಿಂದು ಅ.ಪ ಸತ್ಯವರರ ವರ ಕುವರನೆ ನೀನತ್ಯುತ್ತಮ ಸುಖ ಚಿನ್ನ ಯತ್ಯಾಶ್ರಮ ಸದ್ಧರ್ಮಾಚರಣದಿ ನಿತ್ಯಾರ್ಜಿತ ರಾಮ ಭೃತ್ಯಜನಕೆ ಸದ್ಬುದ್ಧಿ ಬೋಧಿಸಿ ಕೃತಕೃತ್ಯರ ಮಾಡುತಲಿ ಸುನಾಮ ಯಥಾರ್ಥಪಡಿಸಿ ಕ್ಷಿತಿಗುತ್ತಮನೆಸಿದ 1 ಭದ್ರಾತೀರನೆ ಇತ್ತು ಸುಭದ್ರಗಳ್ ನಿದ್ರಾರಹಿತರಿಗೆ ಆದ್ರಾಂತಃಕರುಣನೆ ಸೌಹಾರ್ದದಿ ಭದ್ರಾರಮಣನಲಿ ಛಿದ್ರರಹಿತ ಶಿಲೆ ಮಧ್ಯದಿ ಪಡೆದು ಸುಭದ್ರಾಪತಿ ಸಖ ಮುದ್ರಾಧರನೆ 2 ಶ್ರೀ ನರಹರಿ ಪದ ನೀನನುದಿನದಲಿ ಧ್ಯಾನಮಾಡುತ ಬಾಹ್ಯ ಜ್ಞಾನವಿಲ್ಲದೆ ಅನುಮಾನ ವಿಪರ್ಯಯ ಹೀನಗೈಸಿ ಸಾಕ್ಷಿ ಮಾನದಿಂದ ಕೊಟ್ಯಾರ್ಭುದ ರವಿಪ್ರಭೆ ಕಾಣುತ ಪ್ರತಿಮುಖವೋಲ್ ಏನು ಇದಕೆ ಅನುಮಾನವಿಲ್ಲ ಹಂ ಮನಿಯವನೆನ್ನುವೆ ನೀ ಸರಿಲಿಂಗರೂಪಧರ3
--------------
ಪ್ರದ್ಯುಮ್ನತೀರ್ಥರು
ಸತ್ಯಂಬೋಧರ ಸ್ಮರಣೆ ನಿತ್ಯಮಾಡುಅತ್ಯಂತ ಕರುಣಾಳು ಅ'ುತ ಮ'ಮಾವಂತ ಪಸತ್ಯಬೋಧರ ಸ್ಮರಣೆ ನಿತ್ಯದಲಿ ಮಾಡಿದರೆ'ಷ್ಣು ಸರ್ವೋತ್ತಮದ ಜ್ಞಾನ ಪ್ರಾಪ್ತಿಕಷ್ಟಗಳ ಪರಿಹರಿಸಿ ಇಷ್ಟಾರ್ಥಗಳ ಕೊಟ್ಟುಭಕ್ತಿ ವೈರಾಗ್ಯ ಭಾಗ್ಯವನು ಕೊಡುವಾ 1ಸತ್ಯಪ್ರಿಯತೀರ್ಥರ ಕರಕಮಲದಿಂ ಜನಿಸಿಉತ್ತರಾದಿಮಠದ ವೈಭವವ ಬೆಳಿಸಿ'ಷ್ಣು ಸರ್ವೋತ್ತಮತ್ವದ ತತ್ವಜಯಭೇರಿಎತ್ತ ನೋಡಿದರತ್ತ ಸತ್ಯಬೋಧರಕೀರ್ತಿ 2ಪಾಪಿಷ್ಠರಿಂದ ಆಪತ್ತು ಜೀವಕೆಬಂತುಸಂಚಾರ ಕೆಲಕಾಲ ಸಂಕಟಮಯವಾಯ್ತುಶಾಪಾನುಗ್ರಹಶಕ್ತರಾದ ಶ್ರೀಪಾದರುಭೂಪತಿ'ಠ್ಠಲನ ಅಪರೋಕ್ಷ ಪಡೆದವರು 3
--------------
ಭೂಪತಿ ವಿಠಲರು
ಸತ್ಯಭೋಧ ಯತಿಕುಲವರನೆ ನಿತ್ಯ ತುತಿಸಿ ವಂದಿಸುವ ತಾವಕರೊಳು ಎಣಿಸೋ ಪ ಅರ್ಥಿಜನ ಚಿಂತಾಮಣಿ ಸತ್ಕರುಣಿ ಶ್ರೀನಿವಾಸನ ಗುಣ ಸಾನುರಾಗದಲಿ ವ್ಯಾ ಖ್ಯಾನ ಪೇಳುವ ಕಾಲದಿ ಶ್ವಾನರೂಪದಿ ಪವಮಾನ ಜನರು ನೋಡೆ ಕಾಣಿಸಿಕೊಂಡನಂದೊ ತಾ ಬಂದು 1 ಬವರಗೋಸುಗ ಬಂದ ಯವನಾಧಿಪತಿ ನಿಮ್ಮ ಸುವಿಚಿತ್ರ ಮಹಿಮೆ ಕಂಡು ಪ್ರವಿನೀತನಾಗಿ ಕಪ್ಪವೆ ಕೊಟ್ಟು ನಮಿಸಿದ ಕವಿ ಆವಾ ವಿಭವಾ ವರ್ಣಿಸುವಾ 2 ಇವರು ದೇವಾಂಶರೆಂದರುಪುವಗೋಸುಗ ಬಂದು ದಿವಿಜತರಂಗಿಣಿಯು ಶಿವನಂಗಭೂರುಹ ಮೂಲ ಭಾಗದಲಿ ಉ ದ್ಭವಿಸಿ ಕಂಗೊಳಿಸಿದಳು ಕೃಪಾಳು 3 ಸ್ವಾಂತಸ್ಥ ಮುಖ್ಯ ಪ್ರಾಣಾಂತರಾತ್ಮಕ ಭಗ ವಂತನಂಘ್ರಿ ಕಮಲ ಸಂತತ ಸರ್ವತ್ರ ಚಿಂತಿಸುತಿಪ್ಪ ಮ ಹಾಂತರಿಗೇನಚ್ಚರೀ ವಿಚಾರ 4 ಚಾರು ಚರಿತ ಭೂ ಸುರವರ ಸನ್ನುತನೇ ಪರಮ ಪುರುಷ ಜಗನ್ನಾಥ ವಿಠ್ಠಲ ನಿಮ್ಮ ಪರಿಪರಿ ಮಹಿಮೆ ಎಲ್ಲಾ ತಾ ಬಲ್ಲಾ 5
--------------
ಜಗನ್ನಾಥದಾಸರು
ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆನಿತ್ಯ ಜ್ಞಾನಿಯಾದ ಮೇಲೆ ಚಿಂತೆಯಾತಕೆ ಪ ಕಾಲ ಬದುಕಲ್ಯಾತಕೆಮಾನಿನಿಯ ತೊರೆದ ಮೇಲೆ ಭೋಗವ್ಯಾತಕೆ 1 ಮಾತು ಕೇಳದೆ ಮಲೆತು ನಡೆವ ಮಕ್ಕಳ್ಯಾತಕೆಪ್ರೀತಿಯಿಲ್ಲದೆ ಎಡೆಯಲಿಕ್ಕಿದ ಅನ್ನವ್ಯಾತಕೆನೀತಿಯರಿತು ನಡೆಯದಿರುವ ಬಂಟನ್ಯಾತಕೆಸೋತ ಹೆಣ್ಣಿಗೆ ಓತು ನಡೆಯದ ಪುರುಷನ್ಯಾತಕೆ 2 ಸನ್ನೆಯರಿತು ನಡೆಯದಿರುವ ಸತಿಯು ಯಾತಕೆಮನ್ನಣಿಂದ ನಡೆಸದಿರುವ ದೊರೆಯು ಯಾತಕೆಮುನ್ನ ಕೊಟ್ಟು ಪಡೆಯದಿನ್ನು ಬಯಸಲ್ಯಾತಕೆಚೆನ್ನ ಆದಿಕೇಶವನಲ್ಲದ ದೈವವ್ಯಾತಕೆ 3
--------------
ಕನಕದಾಸ
ಸತ್ಯವತಿಸೂನು ವೇದವ್ಯಾಸ ಲಕುಮಿಶಾ | ನಿತ್ಯ ನಿನ್ನ ನೆನೆಸುವ ಭೃತ್ಯರೊಡನೆ ಪೊಂದಿಸು ದೇವ ಪ ವಾಸುಕಿ ಇಲ್ಲಿ ಮದನಾರಿಯ ವಲಿಸಿ | ತನ್ನ ಬದುಕುವಗೋಸುಗ ಉಪಾಯದಲಿ ನಿಂದರೆ | ವೈರಿ ತಾರಕನ್ನ ಸದೆದು | ಇಂದ್ರಾದ್ಯರ ಕೂಡ ಮುದದಿಂದ ಸ್ಥಿರವಾಗಿ ಮೆರೆದ 1 ಷಣ್ಮೊಗನು ಸತತ ತಾನು ಅನ್ನದಾನ ಮಾಡುತ ಹಾ | ವನ್ನನಾಗುದಕ್ಕೆ ಪ್ರಸನ್ನ ಮೋದದಲಿ | ನಿನ್ನ ಪೊಲಿಸಿಲ್ಲಿಗೆ ಬಾಹಾ | ದೆನ್ನ ಭಕುತಿಗೆ ಮೆಚ್ಚಿ | ವಾಸುದೇವ 2 ಕಲಿಯುಗದೊಳಗೆ ವಿಪ್ರಕುಲದಲಿ ಮಾರುತಿ ಎನಿಸಿ | ಬಲು ಮಾಯಿಗಳ ಮೋಹನ ಶಾಸ್ತ್ರವಳಿದು ಬದರಿಯ | ಬಳಿಗೆ ಬಂದು ಶಿಲಾಪ್ರತಿಮೆಗಳನೆ ಪಡೆದು ತಂದು | ಪೊಳೆವಂದದಲಿ ಇಳೆಯೊಳಗೆನಲು 3 ಅಂದಿನಾರಭ್ಯ ಪಾರ್ವತಿನಂದನ ಕುಕ್ಕೆಪುರದಲ್ಲಿ | ನಿಂದು ಸರ್ವರಿಂದ ಪೂಜೆ ಚಂದದಿ ಕೊಳುತಾ | ಮಂದ ಕುಷ್ಟರೋಗಗಳ ಹಿಂದುಮಾಡಿ ಓಡಿಸಿ | ಗೋ ಪಾದ ಧ್ಯಾನದಿಂದ ಲೋಲಾಡುತಲಿರೆ 4 ಮರುತದೇವ ಸಂಪುಟಾಕಾರವಾದ ನೀನದರೊಳು | ಚಾರು ಸಿಲೆ ರೂಪವಾದ ಪಾರಾಶರ ಋಷಿ | ಧಾರುಣಿಗೆ ರಹಸ್ಯವ ತೋರಿಕೊಳುತಲಿ | ಮಾರ ಗೊಲಿದ ವಿಜಯವಿಠ್ಠಲಾ 5
--------------
ವಿಜಯದಾಸ
ಸತ್ಯವರ ಮುನಿಪ ದಿಕ್ಷತಿಗಳಂತೆ ನಿತ್ಯದಲಿ ತೋರ್ಪ ನೋಳ್ಪರಿಗೆ ಸಂಭ್ರಮದಿ ಪ ಸಿಂಧೂರವೇರಿ ದೇವೇಂದ್ರನಂತೊಪ್ಪುವನು ವಂದಿಪ ಜನರಘಾಳಿವನ ಕೃಶಾನು ಮಂದ ಜನರಿಗೆ ದಂಡ ಧರನಂತೆ ತೋರ್ಪಕ ರ್ಮಂದಿಪನು ನರವಾಹನವೇರಿ ನಿಋಋತಿಯೆನಿಪ 1 ಜ್ಞಾನಾದಿ ಗುಣದಿ ರತ್ನಾಕರನೆನಿಪ ಶೈವ ಜೈನಾದಿಮತ ಘನಾಳಿಗೆ ಮಾರುತಾ ದೀನ ಜನರಿಗೆ ಧನದನಾಗಿ ಸಂತೈಪ ವ್ಯಾ ಖ್ಯಾನ ಕಾಲದಿ ಜಗತ್ತೀಶನೆಂದೊರೆವಾ 2 ಶ್ರೀಮದ್ರಮಾಪತಿ ಜಗನ್ನಾಥ ವಿಠಲ ಸ್ವಾಮಿ ಪಾದಾಬ್ಜ ಭಜನಾಸಕ್ತನಿವ ಧೀಮಂತ ಗುರು ಸಾರ್ವಭೌಮ ಭೂ ಸುರನುತ ಮಹಾ ಮಹಿಮ ಪೊಗಳಲೆನ್ನೊಶವೇ ಕರುಣಾ ಸಿಂಧು3
--------------
ಜಗನ್ನಾಥದಾಸರು
ಸತ್ಯಸುಧಾರ್ಣವ ನಿತ್ಯಸ್ವಯಂಭುವ ನುತ್ಯಸ್ವಭಾವಗುಣ ರಮಾಧವ ಪ ಭವ ಭಂಜನ ರಾಘವ ಅತ್ಯಂತ ಸುಖವೀವ ದೇವ ಕೃಪಾರ್ಣವ ಅ.ಪ ಪವನನಂದನನುತ ಭುವನಾರಾಜಿತ ಧೃವ ಪರಿಭಾವಿತ ಮುನಿಸೇವಿತ ಕವಿಹೃದಯಾನತ ದಿವಿಜಾರಾಧಿತ ನವಘನಸುಂದರ ವಿಧಿವಿನುತಾ 1 ರಥಾಂಗ ಶ್ರೀಕರ ತುಂಗ ಕೃಪಾಕರ ಧರಣೀಧರಾ ಮಾಂಗಿರಿ ವರನರಸಿಂಗ ಪರಾತ್ಪರ ಅಂಗಜಜನಕ ಭುಜಂಗ ಶೃಂಗಾರ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸನ್ನುತ ವಿಠಲ | ಭಾರ್ಗವಿಯ ರಮಣಾ ಪ ಯೋಗ ಮಾರ್ಗದಲಿ ಹೃ | ದ್ರೋಗ ಹರಿಸಿವಗೇ ಅ.ಪ. ಮುಗ್ದ ತರಳನು ಇವಗೆ | ದಗ್ಧ ಪಾಪವ ಮಾಡಿಮಧ್ವ ಸಿದ್ಧಾಂತಗಳ | ಪಧತಿಯ ತಿಳಿಸೋ |ಕೃದ್ಧಖಳ ದುರ್ಯೋಗ | ವದ್ದು ಕಳೆದೂರಕ್ಕೆಬುದ್ಧಿ ಜನ ಸಂಯೋಗ | ಬದ್ಧವಾಗಲಿ ಇವಗೇ 1 ನಿತ್ಯ ಮಂಗಳನೇ 2 ಭಾವಿ ಬೊಮ್ಮರು ಹಾಗು | ಭಾವಿ ಮರುತರ ಕರುಣಭಾವುಕಗೆ ಇರುವುದನು | ಭಾವಿತವು ಅವಗೇಭಾವ ಉದ್ರೇಕ ಸ | ದ್ಭಾವ ಭಾವಿತ ನನ್ನನೀವೊಲಿದು ಕಾಯೊ | ಕೃಪಾವಲೋಕನದಿ3 ಹರಿ ನಿನ್ನ ವಾರ್ತೆಯಲಿ | ಇರಲಿ ರತಿ ಇವಗಿನ್ನುಗುರು ಹಿರಿಯರಾ ಸೇವೆ | ಪರಮ ಭಕುತಿಂದಾವಿರಚಿಸುವ ಸೌಭಾಗ್ಯ | ಕರುಣಿಪುದೊ ಶ್ರೀ ಹರಿಯೆಮರುತಾಂತರಾತ್ಮ ತವ | ಸ್ಮರಣೆ ಸುಖ ಕೊಡುತಾ 4 ಭವ | ರೋಗವನೆ ಪರಿಹರಿಸೋನಾಗೇಶ ಶಯ್ಯ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಸಂಪ್ರದಾಯದ ಹಾಡುಗಳು (ಗುರುವಾರದ ಶುಭದಿನದಂದು) ಅಂಗಿರಾವುತನನ್ನು ನೋಡಿರೊ ನಿತ್ಯ ಮಂಗಳ ಮಹಿಮೆಯ ಪಾಡಿರೊ ಪ. ಗುರುವಾಸರ ಬಂದು ಒದಗಲು ನಾನಾ ಪರಿಯ ಪುಷ್ಪಗಳ ತಂದಿರಿಸಲು ದೊರೆಯು ಗೌರಾಂಗಿಯ ಧರಿಸಲು ನೋಡೆ ದುರಿತ ರಾಶಿಗಳ ಪರಿಹರಿಸಲು 1 ಶಂಖ ಚಕ್ರ ಗದಾಬ್ಜ ಗದೆಗಳನು ನಿಃ- ಶಂಕೆಯಿಂದ ಧರಿಸಿರುವನು ಮಂಕು ಮನುಜರಿಗೆ ದೊರಕುವಾ- ತಂಕಗಳೆಲ್ಲ ಪರಿಹರಿಪನಾ 2 ಇಂದಿರೆಯನು ಮೋಹಗೊಳಿಸುವ ಪೂರ್ಣಾ ನಂದ ವೆಂಕಟರಾಜನಿರುತಿಹ ಚಂದವ ನೆನೆವುತ್ತ ಸ್ತುತಿಸುವ ಭವ ಬಂಧಗಳೆಲ್ಲ ಕತ್ತರಿಸುವ 3
--------------
ತುಪಾಕಿ ವೆಂಕಟರಮಣಾಚಾರ್ಯ
ಸಂಪ್ರದಾಯದ ಹಾಡುಗಳು ಆರತಿ ಬೆಳಗಿದೆನೆ ಗುರುವಿಗೆಆರತಿ ಬೆಳಗಿದೆನೆಆರಾರು ಬೆಳಗೇ ಬೆಳಗದಂಥಾಆರತಿ ಬೆಳಗಿದೆನೆ ಪ ಹೃದಯ ತಳಿಗೆಯಲಿ ನಾನೀಗಭಾವದಾರತಿ ಮಾಡಿವಿದವಿದ ಬುದ್ಧಿಯ ಬತ್ತಿಯ ಮಾಡಿನಿರ್ಮಲಾಜ್ಯ ಹೊಯ್ದು 1 ಜ್ಞಾನ ಜ್ಯೋತಿಯನೆ ಮುಟ್ಟಿಸಿಚಿತ್ತದಿಂ ಪಿಡಿದುನಾನೇ ನಾನೇ ನಾನೆಂದಾರತಿ ಬೆಳಗಿದೆನೇ 2 ಬಲುಶಶಿ ಸೂರ್ಯರ ಶತಕೋಟಿಪ್ರಭೆಯನೆ ಮೀರ್ದುಥಳಥಳ ಥಳಥಳ ಹೊಳೆಯುತನಾನೇ ಆರತಿ ಬೆಳಗಿದೆನೆ 3 ಎತ್ತೆತ್ತ ನೋಡೆ ಪ್ರಭೆ ತಾಮೊತ್ತ ಮೊತ್ತವಿದೆ ಕೋಚಿತ್ತದಿಂದಲಿ ಚಿಜ್ಯೋತಿಯ ಪ್ರಭೆನಿತ್ಯದಿ ಬೆಳಗಿದೆನೆ 4 ಅನಂತಾನಂತವ ಮುಚ್ಚಿಹುದುಅನಂತಾನಂತವನುಅನಂತ ಚಿದಾನಂದ ಗುರು ತಾನೆ ಎಂದಾರತಿ ಬೆಳಗಿದನೆ 5
--------------
ಚಿದಾನಂದ ಅವಧೂತರು
ಸರಸಿಜಾಕ್ಷಿಯರೆಲ್ಲ ಹರುಷದಿ ಬೆಳಗಿರೆಕರ್ಮಾಭಿಮಾನಿ ಪುಷ್ಕರನಿಗಾರುತಿಯಾ ಪ ಮಾಡಿದ ಕರ್ಮವ ನೀಡಿ ಹರಿಗೆ ಅಂಗಗೂಡು ತೊಪ್ಪಿಸೋ ನಿನ್ನ ಪಾಡಿ ಪೊಗಳುವೆ 1 ನಿತ್ಯ ಮಾಡುತ ಹರಿಇಚ್ಛಿತ ಕರ್ಮವ ಪಠ್ಯ ಸಾಧಿಸಿದೆ 2 ಏಸು ಜನುಮದಿ ನಾನು ಮೋಸ ಹೋದೆನೊ ಇಂದಿ-ರೇಶಗರ್ಪಿಸೋ ಕೃಪಾಧೀಶ ಮರಿಯದೆ 3
--------------
ಇಂದಿರೇಶರು
ಸರಸ್ವತಿ ದೇಹಿ ಸನ್ಮತಿ ಪ. ವಿಧಿಸತಿ ಸುವ್ರತಿ ಶ್ರೀಮತಿ ಭಾರತಿ ಅ.ಪ. ನಿತ್ಯ ಪೊಗಳುತಿ ಜಗದೀಶ್ವರಿ ಜಲಜಾಯತನೇತ್ರಿ ಭಗವತಿ ಪವಿತ್ರಿ ಸಾವಿತ್ರಿ ಗಾಯತ್ರಿ ಸರಸ್ವತಿ ದೇಹಿ ಸನ್ಮತಿ 1 ಶರ್ವೇಂದ್ರಪೂರ್ವ ಗೀರ್ವಾಣತತಿ ಸರ್ವದಾಚರಿಸುವುದು ತವ ಸ್ತುತಿ ಸದ್ಭಕ್ತಿ ವಿರಕ್ತಿ ತ್ರಿಶಕ್ತಿ ದೇವಕಿ ಸರಸ್ವತಿ ದೇಹಿ ಸನ್ಮತಿ 2 ಲಕ್ಷ್ಮೀನಾರಾಯಣನ ಮೂರುತಿ ಲಕ್ಷಿಸಿ ಮನದೊಳಾನಂದದೊಳಿರುತಿ ಗುಣವತಿ ಸುಗತಿ ಸುಧೃತಿ ವಿಧಾತ್ರಿ ಸರಸ್ವತಿ ದೇಹಿ ಸನ್ಮತಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಸರಸ್ವತಿ-ಭಾರತಿ ನಿತ್ಯ ಕಾವುದೆಮ್ಮನು ಪ ನಿತ್ಯ ಪಾವಿತರನ್ನ ಮಾಡುವಿ ನೋವ ಕೊಡದಲೆ ಕಾಯೇ ಅ.ಪ ಪದ್ಮನಾಭನ ನಾಭಿ ಪದ್ಮಜನ ಸಹ ಹೃ ತ್ಪದ್ಮದೊಳಗೆ ನೆಲಸಿ ಛದ್ಮವ ಕಳೆಯೆ ನಿರುತ 1 ಮಾರಮಣನ ದಿವ್ಯ ಚರಣ ಸರೋಜವ ತೋರಿ ಕರುಣವ ಮಾಡೆ ವಾರಿಜಾಸನನ ರಾಣಿ2 ಲಕುಮೀ ನಾರಾಯಣನ ಸುಕುಮಾರ ಚತುರ್ಮುಖ ನ್ವಾಕಿಗಾಗಿ ಬ್ರಾಹ್ಮೀ ಎನಿಸಿ ಸಾಕುವಿ ಲೋಕವ ಕಾಯೆ 3 ವಾಸುದೇವ ಕಾಲ ಪುರುಷರ್ಗೆ ಗಾಯಿತ್ರಿ ಸಾವಿತ್ರಿಯಾಗಿ ತೋಯಜಾಸನ ವಿಹಾರಿ 4 ಸನ್ನುತ ಜಯಾ ಸಂಕರುಷಣನ್ನ ಪಾದ ಕಿಂಕರನ್ನ ಮಾಡಿ ಎನ್ನ ಸಂಕಟ ಪರಿಹಾರ ಮಾಡೆ 5 ಕೃತಿಪತಿ ಪ್ರದ್ಯುಮ್ನನ ಸುತೆ ನುತಿಪೆನು ಸದಾ ಖ್ಯಾತಿಯನ್ನಿತ್ತನ್ಯಥಾ ಖ್ಯಾತಿಯ ಕಳೆಯೆ ಮಾತೆ 6 ಶಾಂತಿಪತಿ ಅನಿರುದ್ಧನಾಂತುದಿಸಿ ವಿರಂಚಿ ದುರಿತ ತರಿದು ಶಾಂತ ಮನಸನು ಕೊಡೆ7 ವಾಣಿ ವೀಣಾಪಾಣಿಯೇ ಕಾಣಿಸನುದಿನವೆನಗೆ ಮೃಡ ಇಂದ್ರಮುಖ ಗಣರಾರಾಧಿತಳೇ ತಾಯೆ 8 ಹೀನಗುಣವೆಣಿಸದೆ ಜ್ಞಾನ ಭಕ್ತಿ ವೈರಾಗ್ಯವ ಸಾನುರಾಗದಲಿ ಇತ್ತು ಶ್ರೀ ನರಹರಿಯ ತೋರೆ 9
--------------
ಪ್ರದ್ಯುಮ್ನತೀರ್ಥರು