ಒಟ್ಟು 2371 ಕಡೆಗಳಲ್ಲಿ , 107 ದಾಸರು , 1698 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶೇಷ ಪರ್ಯಂಕ ಶಯನ ವಿಷಯದಭಿ ಲಾಷೆ ಪರಿಹರಿಸಿ ಕಾಯೋ ಪ ರೆನದೆ ಮನೆಮನೆ ತಿರುಗಿದೆ ಅನಿಮಿಷೋತ್ತಂಸ ನಿನ್ನ ಪಾದವೊಂ ದಿನ ಭಜಿಸಿದವನಲ್ಲವೋ 1 ಹರಿ ಗುರುಗಳನು ನಿಂದಿಪ ನೀಚರನು ಸರಿಸಿ ಅವರನು ಸ್ತುತಿಸಿದೆ ಪೊರೆಯಲೋಸುಗ ಉದರವ - ಜನರಿಂದ ಹರಿದಾಸನೆನಿಸಿಕೊಂಡೆ 2 ಭಗವಂತ ನಿನ್ನ ಗುಣವ ವರ್ಣಿಸದೆ ಭಗವತಿಯರವಯವಗಳಾ ಸೊಗಸಿನಿಂದಲಿ ವರ್ಣಿಸಿ ಎನ್ನ ನಾ ಲಗೆ ಎರಡು ಮಾಡಿಕೊಂಡೆ 3 ಸರ್ವಪ್ರಕಾರದಲ್ಲಿ ಹಗಲಿರುಳು ದುರ್ವಿಷಯಕೊಳಗಾದೆನೋ ಶರ್ವಾದಿ ವಂದ್ಯ ಚರಣಾ ನೀನೊಲಿ ದುರ್ವಿಯೊಳು ಸಲಹ ಬೇಕು 4 ಉಪರಾಗ ಪರ್ವಗಳಲಿ ಸ್ನಾನ ಜಪ ತಪ ಅನುಷ್ಠಾನ ಜರಿದು ನೃಪರ ಮಂದಿರವ ಕಾಯ್ದು ಧನವ ತಂ ದುಪ ಜೀವಿಸಿದೆನೊ ಜೀಯಾ 5 ವೇದ ಶಾಸ್ತ್ರಾರ್ಥಗಳನು ತಿಳಿದು ಸ ನ್ಮೋದ ಬಡದಲೆ ಕುಶಾಸ್ತ್ರ ಓದಿ ಪಂಡಿತನೆನಿಸಿದೆ ಕೀರ್ತಿ ಸಂ ಪಾದಿಸಿದೆ ವ್ಯರ್ಥ ಬಾಳಿದೇ 6 ವೈರಾಗ್ಯ ಪುಟ್ಟಲಿಲ್ಲ ಘೋರ ಸಂ ಸಾರದೊಳು ಮಗ್ನನಾದೆ ಸೂರಿಗಳ ಮಧ್ಯದಲ್ಲಿ ಬುಧನಂತೆ ತೋರುವೆನು ನೋಳ್ಪ ಜನಕೆ 7 ನಾ ಮಾಡ್ದ ಪಾಪರಾಶಿ ಎಣಿಸಲ್ಕೆ ತಾಮರಸಭವಗಸದಳ ಸ್ವಾಮಿ ಎನಗೇನು ಗತಿಯೋ ಭಾರವಾದೆ ಈ ಮಹಿಗೆ ಪ್ರತಿದಿನದಲೀ 8 ಭೂತ ಸಂಬಂಧದಿಂದ ಬಹುವಿಧದ ಪಾತಕವೆ ಸಮನಿಸಿದವೋ ದಾತೃನೀ ಕಡೆ ಗೈದಿಸೋ ಭವದಿ ಜಗ ನ್ನಾಥ ವಿಠ್ಠಲ ಕೃಪಾಳೋ 9
--------------
ಜಗನ್ನಾಥದಾಸರು
ಶೇಷ ವಂದ್ಯ ಶಿರಿನಾರಾಯಣ ವಿಠಲ ದಾಸನೆನಿಸೋ ಇವನಾ ಪ ದೋಷ ದೂರ ಸುವಿಶೇಷ ಮಹಿಮ ಬ್ರಹ್ಮೇಶ ವಂದ್ಯ ಚರಣ ಅ.ಪ. ಸಾಧಕ ಜೀವ ಸಮೂಹವ ಸೃಜಿಸುತ್ತಸಾಧನ ಬಗೆ ಬಗೆ ನಿರ್ಮಿಸುತಾ |ಭೋದಕ ವೇದ ವಿಭಾಗವ ಗೈದಾ ಅ-ಗಾಧ ಮಹಿಮ ಪೊರೆಯೊ 1 ಕಾರುಣ್ಯಾಂಬುಧಿ ತಾರತಮ್ಯ ಜ್ಞಾನಮೂರೆರಡಿಹ ಭೇದವನೆ ತಿಳಿಸೊಸಾರಾಸಾರದಿ ಸಾರತಮನು ನೀನೆಂ-ದಾರಧಿಪ ಮತಿ ತಿಳಿಸೋ 2 | ಸೇವ್ಯಸೇವಕ ಭಾವ ತಿಳಿಸುತನಿವ್ರ್ಯಲೀಕ ನೆನಿಸೊ |ಪೂಜ್ಯ ಪೂಜಕನೆ ಮಾಳ್ಪುದೆಲ್ಲ ತವಭವ್ಯ ಪೂಜೆ ಎನಿಸೋ 3 ಗುರ್ವನುಗ್ರಹವೆ ಬಲವೆಂದೆನಿಸುತಸರ್ವಕಾರ್ಯ ನಡೆಸೊ |ದುರ್ವಿಭಾವ್ಯ ಸರ್ವೋತ್ತಮ ಹರಿಸರ್ವೇಷ್ಟ ಪ್ರದ ನೆನಿಸೊ 4 ತಂದೆ ತಾಯಿಯೋಳ್ಬಂಧು ಮಿತ್ರರಲಿಸಂದುಗೊಂದು ತವವ್ಯಾಪ್ತಿ |ಛಂದದರಹಿ ಪೊರೆನಂದಕಂದ ಗುರು ಗೋವಿಂದ ವಿಠಲ 5
--------------
ಗುರುಗೋವಿಂದವಿಠಲರು
ಶೌರಿ ಬಾರೋ ಭಕ್ತರ ದೊರೆ ಬಾರೋ ಬಾಬಾ ಮನೆಗೆ ಪ ಚಾರುತರ ನವರತುನದ ಶೃಂ- ಗಾರ ರಥದೊಳು ಕುಳಿತು ಬೇಗನೇ ಭೇರಿ ವಾದ್ಯಗಳೆಲ್ಲ ಮೊಳಗಲು ನಾರಿ ರುಕ್ಮಿಣಿ ಭಾಮೆ ಸಹಿತಅ.ಪ ಸುರರು ಅಸರರು ಕೂಡಿ ಶರಧಿಯ ಮಥಿಸಲು ಭರದಿ ಪುಟ್ಟಲು ಸುಧೆಯು ಪರಮ ಹರುಷದಿಂದ ದೊರಕಿತಮೃತವೆಂದು ಅಸುರರೆಲ್ಲರು ಬರಲು ಬೆರಗಾಗಿ ಸುರರೆಲ್ಲ ಉಪಾಯವನರಿಯದೆ ಗಗನ ನೋಡುತಿರಲು ತ್ವರದಿ ಶ್ರೀಹರಿ ಅವರ ನೋಡುತ ಪರಿಪರಿಯ ಆಭರಣ ಪೀತಾಂ- ಬರಗಳಿಂದಲಂಕರಿಸಿ ಸುಂದರ ತರುಣಿ ರೂಪವ ಭರದಿತಾಳಿದೆ 1 ಹರಿಯ ಸ್ತ್ರೀರೂಪವ ಪರಶಿವ ಸ್ಮರಿಸುತ ಮರಳಿ ನೋಡಲಪೇಕ್ಷಿಸೆ ಪರಿ ಪ್ರಾರ್ಥಿಸೆ ಪರಮಾತ್ಮ ನುಡಿದನು ಇದುತರವಲ್ಲೆನುತ ಉರಗ ಭೂಷಣನ ಪ್ರಾರ್ಥನೆ ಸಲಿಸುವೆನೆಂದು ತರುಣಿಯಾದನು ಹರಿಯು ಪರಮಸೂಕ್ಷ್ಮದ ವಸನ ವಡ್ಡ್ಯಾ- ಣಗಳಲಂಕರಿಸುತ್ತ ವನದೊಳು ಚರಿಸುತಿರೆ ಹರ ಬೆರಗಾಗಿ ಹಿಂದೋ- ಡುತಲಿ ಬರೆ ಮರೆಯಾದ ದೇವನೆ 2 ಹಿಂದೆ ದೈತ್ಯನು ಬಹುಚಂದದಿ ತಪಗೈದು ಕಂದುಗೊರಳನ ಮೆಚ್ಚಿಸೇ ಬಂದನಾಗಲೇ ಶಂಭು ಇಂದುವರ ಬೇಡೆನಲು ವಂದಿಸಿ ಬೇಡಿದ ವರವ ತಾನು ಅಂದು ವರಗಳ ಕೊಟ್ಟು ಹಿಂದಿರುಗಲು ಶಿವನು ಹಿಂದೆ ಬೆನ್ನಟ್ಟಿದ ರಕ್ಕಸನೂ ಹಿಂದÀುರಗದಲೆ ಓಡುತಲೆ ಶ್ರೀ ತಂದೆ ಕಮಲನಾಭ ವಿಠ್ಠಲ ನೆಂದು ಮೊರೆಯಿಡೆ ಕೇಳಿ ತ್ವರದಲಿಬಂದು ರಕ್ಷಿಸಿ ಕಾಯ್ದ ಶ್ರೀಹರಿ 3
--------------
ನಿಡಗುರುಕಿ ಜೀವೂಬಾಯಿ
ಶೌರಿ ಬಾರೋ ಶ್ರೀಹರಿ ಪ ಬಾರೋ ಬಾರೋ ಕರುಣಾನಿಧಿ ನಿನ್ನನು ಬಾರಿ ಬಾರಿಗೆ ಸಿರಬಾಗಿ ನಮಿಸುವೆನು ಅ.ಪ ಮಾರನಯ್ಯನೆ ಮಂಗಳರೂಪ ತೋರೊ ಬೇಗನೆ ಸಾರಸಾಕ್ಷ ಸನ್ಮಂಗಳ ಮಹಿಮನೆ ತೋರೋ ನಿನ್ನ ಮಹಾ ಮೀನರೂಪವನು 1 ಸುಂದರಾನನ ಚಂದಿರವದನ ಮಂದಹಾಸನೆ ದುರಿತ ಕಳೆವಂದದಿ ಬೆನ್ನಿಲಿ ಮಂದರವೆತ್ತಿದ2 ಆದಿದೈತ್ಯನು ಭೂದೇವಿಯಪಹಾರ ಗೈದನು ಆ ದಿತಿಜರ ಸಂಹಾರ ಮಾಡಲು ನೆಲ ವರಾಹ ಬೇಗ 3 ಕಂದನಾಡಿದ ಆ ನುಡಿ ಕೇಳಿಯಾನಂದ ತಾಳಿದ ಮಂದರೋದ್ಧರ ಮುಚುಕುಂದ ವರದ ಸುರ- ಗಂಗೆಯ ಪಿತ ನರಸಿಂಗರೂಪದಿ 4 ಬಾಲರೂಪದಿ ಬೇಡಿದ ದಾನ ಭೂಮಿ ಮಾತ್ರದಿ ಬೇಡಿದುದನೆ ಕೊಟ್ಟಾಮಹೀಪಾಲನ ದೂಡಿ ಪಾತಾಳಕ್ಕೆ ಬಾಗಿಲ ಕಾಯ್ದೆ 5 ಶೂರ ರಾಜರ ಸಂಹಾರ ಮಾಡಿ ತೋರಿ ಶೌರ್ಯವ ಸಾಗರಶಯನಗೆ ತೋರಿ ಪರಾಕ್ರಮ ಶೂಲಿಯ ಧನುವಿತ್ತೆ ರೇಣುಕಾತ್ಮಜ 6 ವಾನರಾಧಿಪ ಹಗಲಿರುಳು ಭಕ್ತಿಮಾಡಿ ಧ್ಯಾನಿಪ ಶ್ರೀ ಮಾನಿನಿಯಳ ಕೈಪಿಡಿಯುತ ಅಯೋಧ್ಯದಿ ಮೆರೆದ ಶ್ರೀರಾಮ ಚಂದಿರನೆ 7 ಪಾಂಡುನಂದನ ಮಾಡಿದ ನಿನ್ನ ಬಂಡಿ ಬೋವನ ಸಂದೇಹಿಸದಲೆ ಅಂದು ಅವರ ಮನೆ ಎಂಜಲ ಬಳಿದ ಮುಕುಂದನೆ ಬೇಗದಿ 8 ಮಂಗಳಾತ್ಮಕ ತ್ರಿಪುರರ ಮದ ಭಂಗನಾಶಕ ಮಂಗಳಮಹಿಮ ವಿಹಂಗವಾಹನ ಸುರ ಸಂಗೀತಲೋಲ ಕೃಪಾಂಗ ದಯಾನಿಧೆ 9 ತೇಜಿಯನೇರುತ ಸುಜನರು ಮಾಳ್ಪಪೂಜೆಗೊಳ್ಳುತ ರಾಜೀವಾಕ್ಷ ರಕ್ಕಸ ಸಂಹಾರಕ ಅ- ಪಾರ ಮಹಿಮ ರಥವೇರುತ ತವಕದಿ 10 ಕಂಜಲೋಚನ ಕಮಲಾಯತಾಕ್ಷ ಮಂಜುಭೂಷಣ ಕಂಜದಳಾಂಬಕ ಕಮಲನಾಭ ವಿಠ್ಠಲಝಗಝಗಿಸುವ ಮದ್ಹøದಯ ಮಂಟಪಕೇ 11
--------------
ನಿಡಗುರುಕಿ ಜೀವೂಬಾಯಿ
ಶ್ಯಾಮಸುಂದರ ಶ್ರೀಮಾಧವ ಕಾಮಿಸುವಳಾ ಕಾಮಿನಿಯು ಪ. ಭಾಮಾಮಣಿಯು ನಿನ್ನನೀಕ್ಷಿಸದೆ ಯಾಮಯಾಮಕೆ ತಾಮಸಗೊಂಬಳು ಅ.ಪ. ಚಂದನಾದಿ ಸೌಗಂಧಕುಸುಮ ವಿಷ- ದಂದವೆಣಿಸುವಳು ಚಂದ್ರಮುಖಿ ಮಂದಾನಿಲ ಮಕರಂದ ಪಾನರಸ- ವೊಂದನೊಲ್ಲಳ ಪ್ರಿಯಸಖಿ ನಂದನ ಕಂದನೆ ವಂದನೆ ವಲ್ಲಭಗೈವಳು 1 ಹಾರ ಹೀರ ಬಂಗಾರ ಭೂಷಣವ ಭಾರವೆಂದು ಶೃಂಗರಿಸಳು ಕೀರಕೀಕಿ ಪಿಕ ಚೀರುಸ್ವನ ಶರ- ಧಾರೆಯೆಂದು ತಾ ಸೈರಿಸಳು ಕಾರುಣ್ಯವಾರಿಧೆ ಬಾರದೆ ಬಾಯಾರಿರುವಳು 2 ಮೀನಧ್ವಜನುರುಬಾಣದುರುಬೆಗೆ ಕ್ಷೀಣವಾಗಿಹಳು ಮೀನಾಕ್ಷಿ ಭಾನುತೇಜ ಲಕ್ಷ್ಮೀನಾರಾಯಣ ಧ್ಯಾನಿಸುವಳು ನಿನ್ನ ಪ್ರಾಣಸಖಿ ಮಾನಾಭಿಮಾನಾಧೀನವನಿನ್ನೊಳಗಿಟ್ಟಿಹಳು 3
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರವಣಾನಂದ ವಿಠಲ | ಭುವನ ಪಾವನನೇ ಪ ಪವಿತರಗೈ ಇವಳ | ತವಗುಣ ಗಾನದೀ ಅ.ಪ. ಸುಪ್ತಿಯಲಿ ಗುರುದತ್ತ | ಉತ್ತುಮಾಂಕಿತ ಕೇಳಿಇತ್ತಿಹೆನೊ ಉಪದೇಶ | ಭಕ್ತವತ್ಸಲನೇಎತ್ತಿ ಭವದಿಂದವಳಾ | ಉತ್ತರಿಸ ಬೇಕಯ್ಯಚಿತ್ತಜಾಪಿತ ಸರ್ವ | ಕರ್ತೃಕಾರಕನೇ 1 ಪತಿಸುತರು ಹಿತರಲ್ಲಿ | ವ್ಯಾಪ್ತ ನಿನ್ನನು ತಿಳಿದುಹಿತದಿಂದ ಸೇವಿಸುತ | ಮತಿಯ ಕರುಣಿಸುತಾ | ಗತಿ ಗೋತ್ರ ನೀನಾಗಿ | ಮತಿ ಮತಾಂವರರಂಘ್ರಿಶತ ಪತ್ರ ಪೂಜಿಸುವ | ಪಥದಲ್ಲಿ ಇರಿಸೋ 2 ಹರಿಗುರೂ ಸದ್ಭಕ್ತಿ | ನಿರುತ ವೃದ್ಧಿಸುತಿವಳಪರಿಪರಿಯ ಸತ್ಕಾಮ | ಪರಿಪೂರ್ಣಗೊಳಿಸೀನೆರೆಯವರಿಗಾಶ್ಚರ್ಯ | ತೆರೆದಂತೆ ನೀ ಮಾಡಿಮೆರೆಸೊ ಈ ಭುವದಲ್ಲಿ | ಪರಮ ಕೃಪೆ ಸಾಂದ್ರ 3 ವೇಣುಗೋಪನೆ ನಿನ್ನ | ಗಾನಕಲೆ ವೃದ್ಧಿಸುತಸಾನುರಾಗದಿ ಕಾಯೊ | ಜ್ಞಾನಿ ಜನ ವಂದ್ಯಾ |ಮಾನಾಭಿ ಮಾನಗಳು | ನಿನ್ನದೆಂದೆನಿವಮತಿನೀನಾಗಿ ಕರುಣಿಪುದು | ಮಾನನಿಧಿ ದೇವಾ 4 ಪರಿ ಪಾಲಿಸಿವಳಾ 5
--------------
ಗುರುಗೋವಿಂದವಿಠಲರು
ಶ್ರೀ ಕರಾರ್ಚಿತ ಪರಮಪುರುಷ ಶೋಕವರ್ಜಿತ ಪ ಸಾಕುವರ್ಯಾರೊ ಮಾಕಳತ್ರಹರಿ ಅ.ಪ. ರಜತಪೀಠ ಪುರದೊರೆಯೆ ನಿನ್ನ ಭಜನೆಗೈವರ ಬಲ್ಲುದು ಗಜರಾಜವರದ 1 ಮೋದಮುನಿಮನಾನಂದ ನೀ ಯಶೋದೆ ನಂದನ ಆದಿಮೂರÀುತಿಯನಾದಿಯಾದೆನ್ನ ವೇಧೆಕಳೆಯೊ ನಿನ್ನ ಪಾದವ ನಂಬಿದೆ 2 ಕಂಗಳಿಂದ ನಾ ನಿನ ನೋಡಿ ವಿಹಂಗವಾಹನ ಶ್ರೀ ರಂಗೇಶವಿಠಲ 3
--------------
ರಂಗೇಶವಿಠಲದಾಸರು
ಶ್ರೀ ಗಣೇಶಸ್ತುತಿ ಹಾಡುಗಳು ಬಲ್ಲಡಿವನ ಭಜಿಸಿ ನೆನೆಸಿದೆಲ್ಲ ಪಡೆಯಿರೋ ಪ ನಿತ್ಯ ರುದ್ರದಿಂದ ಜಳಕಗೈದು ಮಡಿಯ ನಡಿಸಿರೋ 1 ಹೊಟ್ಟೆ ತುಂಬ ತುಷ್ಟಿಗೈಸಿ ವಿಘ್ನರಾಜಗೆ 2 ಕರವ ಮುಗಿದು ಡೊಳ್ಳಿನ ಗಣಪನವರಿಗೀವ ನಿಷ್ಟ ಸಿದ್ದಿಯ 3
--------------
ಕವಿ ಪರಮದೇವದಾಸರು
ಶ್ರೀ ಗುರು ಜಗನ್ನಾಥಾರ್ಯ ಕರುಣಿಸಯ್ಯ ಮೊರೆಹೊಕ್ಕೆ ತ್ವತ್ವದಕೆÉ ಮರಿಯದಲೆ ಪಿಡಿ ಕೈಯ್ಯ ಪ ಪ್ರಹ್ಲಾದನನುಗ್ರವು ಎಲ್ಲ ಕಾಲದಲಿ ನಿ ನ್ನಲ್ಲಿ ಸಂಪೂರ್ಣವಾಗಿರುವದೆಂಬ ಸೊಲ್ಲು ಲಾಲಿಸಿ ನಿನ್ನ ಪಲ್ಲಾವಾಂಘ್ರಿಗೆ ನಮಿಪೆ ಬಲ್ಲಿದನೆ ಹರಿಧ್ಯಾನದಲ್ಲಿ ನಿಲ್ಲಿಸು ಮನವ 1 ಜನಕಾಗ್ರಜಾತಾರ್ಯ | ನರನಿಸಿ ಜನಿಸುತ ಮಂತ್ರಮುನಿ ನಿಲಯ ಮುನಿವರ್ಯ ಶ್ರೀ ರಾಯರ ಗುಣಸ್ತವನ ವಿರಚಿಸುತ ಪ್ರಣತರಿಗೆ ಪಠಿಸುತ್ತ ಮನದಿಚ್ಛೆ ಪಡೆವುದರೆ ಅನುಕೂಲಿಸಿದ ಜ್ಞಾನಿ 2 ಶ್ರೀಶಾಮಸುಂದರನ ದಾಸವರ್ಯರ ಉಪ ದೇಶವನು ಕೊಂಡು ಉಪಾಸನೆಯನು ಲೇಸಾಗಿ ಬಿಡದೆ ಪ್ರತಿವಾಸರದಿ ಗೈದಂಥ ಭೂಸುರಾಗ್ರಣಿಯಾದ ಪ್ರತಿವಾಸರದಿ ಗೈದಂಥ ಭೂಸುರಾಗ್ರಣಿಯಾದ ಕೋಸಿಗೆ ವಾಸ 3
--------------
ಶಾಮಸುಂದರ ವಿಠಲ
ಶ್ರೀ ಗುರು ರಾಜರ ಸೇವಿಸಿರೋ---- ದಂಡ ಕಮಂಡಲ ಪಿಡಿದಿ ನಿಂದಿಹ ಹಸ್ತ ಭೂ ಮಂಡಲವೆಲ್ಲಾ ತಿರುಗಿ ಬಂದಿಹ ಹಸ್ತ ಬಿಡದೆ ಭಕುತರಾ ಸಲಹುವ ಹಸ್ತ ಪತಿ ಶ್ರೀ ರಘು ರಾಮರ ಸೇವಿಪ ಹಸ್ತಾ ಮತ್ತೆ ಭೂಸುರರಿಗೆಲ್ಲಾ ಅಭಯವೀಯುವ ಹಸ್ತ ಮುಕ್ತಿಮಾರ್ಗಕೆ ದಾರಿ ತೋರುತಿಹ ಹಸ್ತ ಚಿತ್ತಜನಯ್ಯನ ನೆನೆದು ಮನದಲ್ಲಿ ನಲಿಯುವ ಹಸ್ತಾ ಭೂತ ಪ್ರೇತಗಳನೆಲ್ಲ ಓಡಿಸುತಿಹ ಹಸ್ತ ಸಕಲವ್ಯಾಧಿಗಳ ಹರಿಸಿರಕ್ಷಿಪ ಹಸ್ತ ಸುವ ಜನರ ಉದ್ಧಾರ ಗೈಯುವ ಹಸ್ತ ಸರುವದಾ ಶಿರಿಪತಿಯ ಕೊಂಡಾಡುವ ಹಸ್ತಾ ಕನಸಿಲಿ ಬಂದು ಕಣ್ಣಪೊರೆ ತೆಗೆದಿಹ ಹಸ್ತ ಮುದದಲಿ ಮಗಿವಿಗೆ ಮಾತ ಕಲಿಸಿದ ಹಸ್ತ ಜೀವ ಕಳೆ ತುಂಬಿದ ಹಸ್ತ ಪರಮ ಪಾವನವಾದ ಶ್ರೀಗುರುರಾಜರ ಹಸ್ತಾ ಜಗವೆಲ್ಲ ನೋಡೆ ಪ್ರಖ್ಯಾತಿ ಪಡೆದಿಹ ಹಸ್ತ ನಗುತ ಮಂತ್ರಾಲಯದೊಳು ಬಂದು ನಿಂದಿಹ ಹಸ್ತ ಅಗಣಿತಮಹಿಮೆ ತೋರಿ ಮೆರೆಯುತಿಹಾ ಹಸ್ತ ಸರಿಗಾಣೆ ಧರೆಯೊಳು ಶ್ರೀರಾಘವೇಂದ್ರರ ದಿವ್ಯ ಹಸ್ತಾ.
--------------
ರಾಧಾಬಾಯಿ
ಶ್ರೀ ಗುರುಕರುಣವು ಸೋಜಿಗವು ಕೌತುಕವು ಧ್ರುವ ಗುರುಹಸ್ತ ಪರುಷಸದೃಶ ನಿದರುಶÀದೋರುತಿಹ್ಯ ಅಗಣಿತ ತೇಜೋಮಯ ಪ್ರಕಾಶ ಇದು ಅನಿಮಿಷ ನೇತ್ರಲಿ ನೋಡುವದು ನೋಡುವದು ಘನ ಮಹಿಮೆಯೊಳು ಬೆರದಾಡುವದು ಬೆರದಾಡುವದು ತನ್ನೊಳು ತಾ ನಲಿದಾಡುವದು ನಲಿದಾಡುವದು ಅನುಭವ ಸುಖ ಸೂರ್ಯಾಡಿ ಸದ್ಗತಿ ಮುಕ್ತಿಯನೆ ಪಡೆವದು ಶ್ರೀಗುರುದಾಸರು 1 ಗುರುವುಪದೇಶ ಜ್ಞಾನಪ್ರಕಾಶ ಅತಿಸಂತೋಷ ಛೇದಿಸುವುದು ಭವಪಾಶ ಇದು ನಿದ್ರಸ್ಯ ಕರ್ನಲಿ ಕೇಳ್ವದು ನಿದ್ರಸ್ಯ ಕರ್ನಲಿ ಕೇಳ್ವದು ಲಯ ಲೀಲೆಯೊಳು ಆಲಿಸುವದು ಆಲಿಸುವದು ಪರಿಪರಿ ಶ್ರುತಿಗ್ಹೇಳೆನಿಸುವದು ಹೇಳೆನಿಸುವದು ಪತಿತಜೀವನ ಪಾವನಗೈಸುವದು ಸದ್ಗುರು ಮಹಿಮೆಯ ತಿಳಿಯದು ತಿಳಿಯದೀ ಶ್ರೀಗುರು ದಾಸರು 2 ಗುರು ನಿಜಬೋಧ ಬಲು ಅಗಾಧ ಪರಮ ಆಹ್ಲಾದ ತಿಳಿದವ ಜನ್ಮಕ ವಿರಹಿತವಾದ ಇದು ಅತಿಸೂಕ್ಷ್ಮಗತಿ ಭೇದಿಸುವದು ಭೇದಿಸುವದು ಗುರುಪಾದವೆಗತಿ ನಿಶ್ಚೈಸುವದು ನಿಶ್ಚೈಸುವದು ಸಮ್ಯಕಙÁ್ಞನವು ಸಾಧಿಸಿ ಆತ್ಮದಿ ಜೀವನ್ಮುಕ್ತನಾಗುವದು ಸದ್ಗುರು ಪಾದವು ಸಾಧಿಸಿ ಸಾಧಿಸಿ ಶ್ರೀಗುರುದಾಸರು 3 ಗುರುಕೃಪೆಜ್ಞಾನನ ಅಳಿವುದಙÁ್ಞನ ತಿಳಿವದು ಯಾತನ ಕಳೆವದು ಜನ್ಮ ಜರಾಮರಣ ಇದು ಪೂರ್ವ ಕಲ್ಪನೆಯು ಕಲ್ಪನೆಯು ಆತ್ಮಙÁ್ಞನದ ವರ್ತನೆಯು ವರ್ತನೆಯು ಸಾಯಸವಳಿದು ಯತ್ನವು ಪ್ರಯತ್ನವು ಶ್ರೀಗುರು ಭಕ್ತಿಯು ಮಾಡಿರಯ್ಯ ಮಾಡಿರಯ್ಯ ಸದ್ಗುರುದಾಸರು4 ಗುರುಙÁ್ಞನ ದೀಕ್ಷಾ ಕರುಣಾ ಕಟಾಕ್ಷ ಸದ್ಗತಿಮೋಕ್ಷ ತೋರುತಿಹ್ಯ ಗುರುತಾನೆ ಪ್ರತ್ಯಕ್ಷ ಇದು ಭಾಸ್ಕರ ಗುರು ಕೃಪಾದೃಷ್ಟಿಯು ಅಮೃತದ ದೃಷ್ಟಿಯು ಜೀವನ ಸಂತುಷ್ಟಿಯು ಮುರಿಯಿತು ಮಹಿಪತಿ ಹುಟ್ಟುವ ಹೊಂದುವ ಬಟ್ಟೆಯು ತ್ರಾಹಿ ತ್ರಾಹಿ ಗುರುನಾಥ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ರೀ ಗೋಪಾಲದಾಸರು ಕಾಪಾಡು ಕಾಪಾಡು | ಗೋಪಾಲರಾಯಾ ಪ ತಾಪತ್ರಯಗಳ ಕಳೆದು | ಶ್ರೀ ಪತಿಯ ತೋರಿಅ.ಪ. ಕಾಮಮದ ಮಾತ್ಸರ್ಯ ಸೀಮೆ ಮೀರುತ ಚರ್ಯಕಾಮಿಸುತ ಮನ್ಮನದ ಸೀಮೆಯೊಳು ನೆಲೆಸೀ |ನೇಮ ನಿಷ್ಠೆಗಳಳಿದು ಭೂಮಗುಣಿ ಸುಸ್ತವನಕಾಮನಕೆ ಪ್ರತಿ ಬಂಧ ಸ್ತೋಮದಂತಿಹುದೊ 1 ಕರ್ಮ ಕೆಸರ ಕಳೆಯುತಲೀ 2 ಭಕ್ತಿಸಾಕಾರಿ ಹರಿ | ಭಕ್ತಿ ಗುರು ಭಕ್ತಿಗಳವ್ಯಕ್ತಗೈವುದು ಮನದಿ ತ್ಯಕ್ತದೋಷಾದಿ |ಗುಪ್ತ ಮಹಿಮಾ ಗುರು ಗೋವಿಂದ ವಿಠ್ಠಲನವ್ಯಕ್ತ ಕಾಣುವ ಹದನ ಬಿತ್ತರಿಸೊ ಕರುಣಾ 3
--------------
ಗುರುಗೋವಿಂದವಿಠಲರು
ಶ್ರೀ ಗೋವಿಂದ ವಿಠಲನೆ | ಕಾಪಾಡ ಬೇಕಿವಳಾ ಪ ಹೇ ಗರುಡ ಧ್ವಜನೆ ಹರಿ | ನಿನ್ನ ಮೊರೆ ಹೊಕ್ಕವಳಾ ಅ.ಪ. ಪರಿ ಆಪನ್ನ ಪರಿಪಾಲಾ 1 ಲೌಕಿಕದ ಮಮತೆಗಳ | ನೀ ಕಡಿದು ಕಾಪಾಡೊಏಕಮೇವನ ದೇವ | ಪ್ರಾಕ್ಕು ಕರ್ಮವ ಕಳೆದುಭಕುತಿ ಜ್ಞಾನವನಿತ್ತು | ಕಾಪಾಡೊ ಹರಿಯೇಯುಕುತಿಯಲಿ ನಿನ್ನಂಥ | ದೇವರನ ಕಾಣಿಸಯ್ಯ 2 ಪಾಂಚ ಭೌತಿಕ ದೇಹ | ಅಸ್ಥಿರತೆ ತಿಳಿಸುತ್ತಪಂಚಾತ್ಮ ನಿನ ಧ್ಯಾನ | ಮಗ್ನಳೆಂದೆನಿಸೊ |ಸಂಚಿತಾಗಾಮಿಗಳ | ನಾಶ ಗೈಸುತಲಿತ್ತಕೊಂಚಮಾಡೊ ಪ್ರಾರಬ್ಧ | ಗುರು ಗೋವಿಂದ ವಿಠಲ 3
--------------
ಗುರುಗೋವಿಂದವಿಠಲರು
ಶ್ರೀ ಗ್ರಂಥಮಾಲಿಕ ಮಧ್ವಸ್ತೋತ್ರ ಜಯ ಮಧ್ವ ಮುನಿರಾಯ ನಿನ್ನ ಚಾರು ತೋಯಜಾಂಘ್ರಿಯಲಿ ನಾ ಶರಣು ಅಹ ಮಾಯೇಶನಿಗೆ ಪ್ರಿಯ ಮುಖ್ಯಪ್ರಾಣನೇ ಎನ್ನ ಕರ್ಮ ದೋಷ ಮನ್ನಿಸಿ ಕಾಯೋ ಪ ಭಾವಿ ವಿರಂಚಿ ಮಹೋಜ ಜಯಾ - ದೇವಿ ಸಂಕರ್ಷಣ ತನೂಜ ಸೂತ್ರ ಸಂವಿದ್ ಬಲಾದಿ ಸುಭ್ರಾಜ ಶ್ರಧ್ಧಾ - ದೇವಿ ಹೃದಬ್ಜವಿರಾಜ ಅಹ ಇನಶಶಿ ಋಷಿಕುಲ ತಿಲಕ ಶ್ರೀವರನಂಘ್ರಿ ವನರುಹ ನಿಷ್ಠ ಹನುಮಭೀಮ ಮಧ್ವ 1 ಜಯತು ಶ್ರೀಹರಿ ರಾಮಚಂದ್ರ ಭಕ್ತ ಜಯದ ಮೋದದ ಅರ್ತಿಹಂತ ಕೃಷ್ಣ ಜಯತು ಕಾರುಣ್ಯ ಸಮುದ್ರ ಭಕ್ತ ಜಯದ ಕ್ಷೇಮದ ಜ್ಞಾನ ಸುಖದ ಅಹ ರಾಮವಚನ ಕಾರ್ಯರತ ಹನುಮಗೆ ನಮೋ ನಮೋ ಕುರುಕುಲ ಹರ ಭೀಮ ಕೃಷ್ಣೇಷ್ಟಗೆ 2 ಜಯತು ಶ್ರೀಹರಿ ವೇದವ್ಯಾಸ ಭಕ್ತ ಜಯದ ಹೃತ್ತಿಮಿರ ನಿರಾಸ ಮಾಳ್ಪ ಸೂರ್ಯ ಸ್ವಕಾಂತಿ ಪ್ರಕಾಶ ಮಧ್ವ - ರಾಯಗೆ ನಿಜಗುರು ಶ್ರೀಶ ಅಹ ವೈದಿಕಶಾಸ್ತ್ರದಿಂದಲೇ ವೇದ್ಯ ಶ್ರೀಶನ ಹಿತದಿ ನಮಗೆ ತೋರ್ಪಾನಂದ ಮುನಿಗೆ ನಮೋ 3 ಅಸುರರು ಪುಟ್ಟಿ ಭೂಮಿಯಲಿ ಸಾಧು ಭೂಸುರರೆಂದು ತೋರುತಲಿ ವೇದ ಶಾಸ್ತ್ರಕ್ಕೆ ಅಪಾರ್ಥ ಪೇಳಿ ಮೋಹ ವಶವಾಗೆ ಸುಜನರಲ್ಲಿ ಅಹ ಶ್ರೀಶನಾಜೆÉ್ಞ ಯತಾಳಿ ಮಧ್ವಾಭಿದಾನದಿ ಮೋಸ ದುರ್ಮತ ಧ್ವಾಂತ ಭಾಸ್ಕರನುದಿಸಿದಿ 4 ಮಧ್ಯಗೇಹರ ಮನೆಯಲ್ಲಿ ಮುಖ್ಯ ವಾಯುವೇ ಶಿಶುರೂಪ ತಾಳಿ ಬಲ ಸಂನ್ಯಾಸ ಸುಪ್ರಮೋದದಲಿ ಅಹ ಮಧ್ಯಗೇಹರ ಪುರುಷೋತ್ತಮತೀರ್ಥರ ಭಾಗ್ಯಕ್ಕೆ ಎಣೆವುಂಟೇ ಮೂರ್ಲೋಕದೊಳಗೆ 5 ಪುರುಷೋತ್ತಮಾಚ್ಚ್ಯುತಪ್ರೇಕ್ಷ ತೀರ್ಥ ಗುರುಗಳ ಸೇವಿಸಿ ಮೋಕ್ಷ ಮೋದ ಉರುಗುಣಸಿಂಧು ನಿರ್ದೋಷನಾದ ಶಿರಿವರನು ಕಮಲಾಕ್ಷ ಅಹ ಭಾರಿ ಪ್ರಸಾದವ ದಯದಿ ಬೀರಲ್ಲೇವೆ ದೊರೆಯುವದೆಂದು ಬೋಧಿಸಿದೆಯೋ ಮಧ್ವ 6 ಶ್ರೀಶ ವೇದವ್ಯಾಸನಲ್ಲಿ ಗೀತಾ ಭಾಷ್ಯ ಸಮರ್ಪಿಸಿ ಅಲ್ಯಿಲ್ಲಿ ಉಪ - ದೇಶಕೊಂಡು ಮತ್ತಿಲ್ಲಿ ಬಂದು ವ್ಯಾಸನಭಿಪ್ರಾಯದಲ್ಲಿ ಅಹ ಸರಿಯಾದ ತತ್ವಬೋಧಕ ಗ್ರಂಥಗಳ ಮಾಡಿ ಬೀರಿದ ಅಧಿಕಾರಿಗಳಿಗೆ ನೀ ದಯದಿ ಮೂಲಗ್ರಂಥಗಳು ಮೂವತ್ತು ಏಳು 7 ಳಾಳುಕ ಪ್ರಿಯತಮವಾದ್ದು ಭಕ್ತಿ ಪರ - ಕೈವಲ್ಯ ತೋರುವುದು ಅಹ ಪುನರಪಿ ಬದರಿಗೆ ಪೋಗಿ ಶ್ರೀಶನ ಕಂಡು ಧನ್ಯ ಮನದಿ ಬಂದು ಶಾಸ್ತ್ರ ಬೋಧಿಸಿದಿ 8 ಸೂತ್ರ ಭಾಷ್ಯಗೀತಾ ತಾತ್ಪರ್ಯ ಸೂತ್ರಾಣುಭಾಷ್ಯ ವಿಷ್ಣು ತತ್ವನಿರ್ಣಯಾ ಋಗ್ಭಾಷ್ಯ ತತ್ವೋ - ಭಾಗವತ ತಾತ್ಪರ್ಯ ಅಹ ನಿರ್ಣಯ ಶ್ರೀಮಹಾಭಾರತ ತಾತ್ಪರ್ಯ ಕರ್ಮ ನಿರ್ಣಯ 9 ಸನ್ನ್ಯಾಯ ವಿವರಣ ತಂತ್ರಸಾರ ಅನುವ್ಯಾಖ್ಯಾನವು ಸದಾಚಾರ ಸ್ಮøತಿ ಅನುತ್ತಮ ದ್ವಾದಶಸ್ತೋತ್ರ ಯತಿ ಪ್ರಣವ ಕಲ್ಪದಿ ಪ್ರಣವಸಾರ ಅಹ ಉಪನಿಷದ್ಭ್ಬಾಷ್ಯವು ಹತ್ತು ಉತ್ಕøಷ್ಟವು ಷಟ್ಟ್ರಶ್ನಕಾಠಕ ಬೃºದಾರಣ್ಯಾಖ್ಯ 10 ಮನನ ಮಾಡಲು ಐತರೇಯ ಪುನಃ ಶ್ರವಣ ಮಾಡಲು ತೈತಿರೀಯ ಸಂ - ಚಿಂತಿಸಲು ಈಶಾವಾಸ್ಯ ಬಹು ಘನವಿದ್ಯಾಯುತವು ಛಾಂದೋಗ್ಯ ಅಹ ಅರ್ಥವಣಮಾಂಡೂಕ್ಯ ತಲವ ಕಾರೋಕ್ತವು ಸತತ ಸಂಸ್ಮರಣೀಯ ಜ್ಞಾನದಾಯಕವು11 ಕೃಷ್ಣಾಮೃತ ಮಹಾರ್ಣದಿ ಬಾಲ ಕೃಷ್ಣ ಜಯಂತಿ ನಿರ್ಣಯದಿ ಭಕ್ತಿ ಜ್ಞಾನ ಸಾಧನವ ಬೋಧಿಸಿ ನರ - ಸಿಂಹನ ನಖಸ್ತುತಿ ಮುದದಿ ಅಹ ಪಠಿಸೆ ಭದ್ರದ ಕಥಾಲಕ್ಷಣದಲಿ ವಾದ ಮಾಡುವ ಬಗೆ ತೋರ್ದಿಯೈನೃಹರಿಯ ನಮಿಸಿ 12 ಅವಿದ್ಯಾ ಆವೃತವು ಬ್ರಹ್ಮ ಅದ್ಯಸ್ಥ ಜಗತೆಂಬ ಮತವ ತರಿದು ಮಾಯಾವಾದ ಖಂಡನವ ಮಾಡಿ ನ್ಯಾಯ ಪ್ರಮಾಣ ಲಕ್ಷಣವ ಅಹ ನುಡಿದು ಪ್ರಪಂಚ ಮಿಥ್ಯಾತ್ವಾನುಮಾನ ಖಂ - ಡನವ ಉಪಾಧಿಖಂಡನ ಸಹಗೈದಿ 13 ಪಂಚಭೇದ ಸತ್ಯ ಹರಿಯೇ ಸರ್ವೋತ್ತಮ ಸುಹೃದ ಶಿರಿ ವರನೇ ಸ್ವತಂತ್ರ ಪ್ರಮೋದ ಸ್ವಾಮಿ ಸೃಷ್ಟಾ ಪಾತಾ ಅತ್ತಾತ್ರಾಹ ಅಹ ತತ್ವ ವಿವೇಕವು ತತ್ವ ಸಂಖ್ಯಾನವು ನಿತ್ಯ ಸುಪಠನೀಯ ಹರಿ ಸರ್ವೋತ್ಕøಷ್ಟ 14 ನೀನಿಂತು ನುಡಿಸಿದೀ ನುಡಿಯು ನಿನ್ನ ಸನ್ನಿಧಾನದಿ ಸಮರ್ಪಣೆಯು ನಾನು ಏನೂ ಓದದ ಮಂದಮತಿಯು ನೀನು ಪೂರ್ಣಪ್ರಜ್ಞನು ಜೀವೋತ್ತಮನು ಅಹ ಎನ್ನ ಕೊರತೆಗಳ ನೀಗಿಸಿ ಹೃಸ್ಥಶ್ರೀ 'ಪ್ರಸನ್ನ ಶ್ರೀನಿವಾಸ' ನ್ನೊ ಲಿಸೋ ಎನಗೆ ಜೀಯ 15
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಚಂದ್ರಿಕಾಚಾರ್ಯ ಗುರುವೇ ಪ ಯಾಚಿಪೆ ನಿನ್ನ ಶ್ರೀ ಚರಣ ಸೇವೆ ಅ.ಪ ಜಲಧಿ ಚಂದ್ರ ಯತೀಂದ್ರ ಭೂಪೂರ್ವ ಪ್ರಹ್ಲಾದ ಸಜ್ಜನಾಹ್ಲಾದ ಗೋಪಾಲಕೃಷ್ಣ ಚರಣಾಂಬುರುಹ ಲೋಲ ಶ್ರೀಪಾದರಾಜಪ್ರಿಯ ಬಾಲಸುಶೀಲ 1 ಸಮೀರನ ರಾಶಿಯನು ರಚಿಸಿ ಸನ್ಮಾನ್ಯರೆನಿಸಿ ದಾಸಕೂಟಕೆ ನೆಲೆಯಿತÀ್ತು ಪುರಂದರ ದಾಸರನು ಕರುಣಿಸಿದೆ ಧೀರ ಉದಾರ 2 ಕುಹುಯೋಗ ಪರಿಹಾರಗೈದ ಮಹಾಯೋಗಿವರ ಕುಹಕ ವರ್ಜಿತ ಚಿತ್ತ ಶೋಭಿತ ಸುಖಾಂತ ಪಾದ ಧ್ಯಾನಿಪರ ಸಹವಾಸವೆನಗಿತ್ತು ಸಲಹುವುದು ಸತತ 3
--------------
ವರಾವಾಣಿರಾಮರಾಯದಾಸರು