ಒಟ್ಟು 1737 ಕಡೆಗಳಲ್ಲಿ , 106 ದಾಸರು , 1369 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದೆವಯ್ಯ ಶ್ರೀಕೃಷ್ಣಮೂರ್ತಿ ನಿನ್ನ ಸುಂದರಚರಣಾರವಿಂದ ನೋಡುವುದಕ್ಕೆ ಬಂದೆ ಪಮಂದರೋದ್ಧರ ಅರವಿಂದ ನೇತ್ರಗೆ ನಮ್ಮೊ-ಳಿಂದು ಕೃಪೆಯ ತೋರಿ ಸಲಹೋ ಸಚ್ಚಿದಾನಂದ ಅ.ಪಭಾವಸಂವತ್ಸರ ಪೌಷ ಬಹುಳಮವಾಸೆಮಹಾ ದೃಢದಿ ಸಮುದ್ರವ ಸ್ನಾನಗೈದುಆ ವಡಭಾಂಡೇಶ್ವರದಿಂದ ಬಲರಾಮದೇವರ ಕಂಡು ನಾವೆರಗಿ ಕೈಮುಗಿದೀಗ ಬಂದೆ 1ಮಧ್ವಸರೋವರವೆಂಬ ತೀರ್ಥದಿ ಮಿಂದುಶ್ರದ್ಧೆ ಭಕ್ತಿಯೊಳ್ ನಿನ್ನ ಕಂಡು ಬಲಬಂದುಬದ್ಧಾಂಜಲಿಯ ನೀಡಿ ಸ್ಮರಿಸಿ ವಂದನೆಗೈದುಉದ್ಧರಿಸೆಂದು ವರವ ಬೇಡುವದನೀಗ ಬಂದೆ 2ಅಷ್ಟಾವಧಾನ ಸೇವೆಯೊಳು ನಿನ್ನನುಯತಿಶ್ರೇಷ್ಠರು ಪೂಜಿಸಿ ವರವ ನೀಡಿ ಕೊಟ್ಟಮಂತ್ರಾಕ್ಷತೆ ತೀರ್ಥ ಪ್ರಸಾದವ ಪಡೆದುನಮ್ಮಯ ಭವಕಷ್ಟ ನೀಗುವುದಕ್ಕೆ ಬಂದೆ 3
--------------
ಗೋವಿಂದದಾಸ
ಬರಬೇಕೋ ರಂಗಯ್ಯ ನೀ - ಬರಬೇಕೊ ಪಬರಬೇಕೊ ಬಂದು ಒದಗಬೇಕೊ ಮಮಗುರು |ನರಹರಿ ನಾರಾಯಣ ನೀನಾ ಸಮಯಕೆ ಅ.ಪಕಂಠಕೆ ಪ್ರಾಣ ಬಂದಾಗ - ಎನ್ನ |ನಂಟರಿಷ್ಟರು ಬಂದಳುವಾಗ ||ಗಂಟು ಹುಟ್ಟಿನ ಕಾಲಬಂಟರು ಕವಿದೆನ್ನ |ಗಂಟಲೌಕುವಾಗ ವೈಕುಂಠನಾರಾಯಣ 1ನಾರಿಯು ಪುತ್ರ ಮಿತ್ರರು -ಬಂಧುಗಳು |ಆರೆನ್ನ ಸಂಗಡ ಬಾರರು ||ಆರಿಗಾರಿಲ್ಲ ಯಮನಾರುಭಟಕೆ ಅಸು-|ರಾರಿ ಮೈಮರೆದಾಗ ನೀರೇರುಹನಾಭ 2ಕರಿಪ್ರಹಲ್ಲಾದಾದಿ ಭಕ್ತರ -ಪತಿ|ಕರಿಸಲು ಒದಗಿದೆ ಶ್ರೀಧರ ||ನೆರೆಹೀನನೆನ್ನ ಉದ್ಧರಿಸಿಅಚ್ಯುತನಿನ್ನ |ಚರಣದೊಳಿಂಬಿಡೊ ಪುರಂದರವಿಠಲ 3
--------------
ಪುರಂದರದಾಸರು
ಬಾರಮ್ಮ ಮನೆಗೆ ಸೌಭಾಗ್ಯದ ಮಹಲಕ್ಷ್ಮಿ ಪಬಾರಮ್ಮ ಮನೆಗೆ ಭಕ್ತರು ನಿನ್ನ ಸ್ತುತಿಪರುಮಾರನಯ್ಯನ ಕೂಡಿ ಮನ ಹರುಷದಿ ಬೇಗ ಅ.ಪಶಂಖು ಚಕ್ರ ಗದ ಪದ್ಮವು ಧರಿಸಿದಪಂಕಜಾಕ್ಷನಸಿರಿಪಟ್ಟದರಸಿದೇವಿಕುಂಕುಮಾಂಕಿತೆ ಸರ್ವಾಲಂಕಾರ ಶೋಭಿತೆಬಿಂಕಮಾಡದಲೆ ಬಾ ವೆಂಕಟನರಸಿಯೆ1ಶುಕ್ರವಾರದಿ ನಿನ್ನ ಭಕ್ತಿಲಿ ಸ್ತುತಿಪರಇಷ್ಟ್ಯಾರ್ಥಗಳ ಕೊಟ್ಟುದ್ಧರಿಪಭಾರ್ಗವಿತಾಯೆಭಕ್ತವತ್ಸಲನೊಡಗೂಡುತ ಬಾರಮ್ಮಮಿತ್ರೇರು ಕರೆವರು ಕೃಷ್ಣವೇಣಿಯೆ ನಿನ್ನ 2ಕನ್ನಡಿ ಕದುಪಿನ ಕಡು ಮುದ್ದು ಮಹಾಲಕ್ಷ್ಮಿರನ್ನ ಪವಳ ಹಾರಾಲಂಕೃತ ಶೋಭಿತೆಸ್ವರ್ಣಮಂಟಪದಿ ಕುಳ್ಳಿರು ಬಾರೆಂದೆನುತಲಿಕರ್ನೇರು ಕರೆವರು ಕಮಲಾಕ್ಷನೊಡಗೂಡಿ 3ನಿಗಮವೇದ್ಯಳೆ ನಿನ್ನಅಗಣಿತಗುಣಗಳಪೊಗಳುವ ಸುಜನರಅಘಪರಿಹರಿಸುತ್ತಬಗೆ ಬಗೆ ನಾಮಗಳಿಂದ ಪೂಜೆಯಗೊಂಬಖಗವಾಹನನ ರಾಣಿ ಲಗುಬಗೆಯಿಂದಲಿ 4ತಡಮಾಡದಲೆ ಬಾ ಬಾ ಮುಡಿದ ಹೂವು ಉದರುತ್ತಬಡನಡು ಬಳುಕುತ್ತ ಕೊಡುತ ವರಗಳನ್ನುಬಿಡಿಮಲ್ಲಿಗೆಯ ತಂದು ನಡೆಮುಡಿ ಹಾಸುವರುಕಡಲೊಡೆಯನ ರಾಣಿ ಸಡಗರದಿಂದೊಮ್ಮೆ 5ಕ್ಷೀರವಾರಿಧಿಯ ಕುಮಾರಿಯೆ ಬಾರೆಂದುಸಾರಸಮುಖಿಯರು ಸರಸದಿ ಕರೆವರುಮೂರ್ಲೋಕ ವಿಖ್ಯಾತೆ ಮಾರಮಣನ ಪ್ರೀತೆಚಾರುಮಂಗಳೆ ಸತ್ಯ ಶ್ರೀ ಭೂದುರ್ಗಾಂಬ್ರಣೆ 6ಕಮಲಾಕ್ಷಿ ಕೇಳಮ್ಮ ಶ್ರಮ ಪರಿಹರಿಸೆಂದುನಮಿಸಿ ಬೇಡುವೆ ನಿನ್ನಭ್ರಮರಕುಂತಳೆ ತಾಯೆಕಮಲನಾಭ ವಿಠ್ಠಲನ ಕೂಡಿ ಹರುಷದಿಸುಮನಸರೊಡೆಯನಸತಿಸಾರ್ವಭೌಮಳೆ7
--------------
ನಿಡಗುರುಕಿ ಜೀವೂಬಾಯಿ
ಬಾರಯ್ಯ ಬಾ ಬಾ ಭಕುತರಪ್ರೀಯ ಶ್ರೀನಿವಾಸರಾಯವಾರಿಜಾಲಯಪತೆ ವಾರಿಜನಾಭನೆ ವಾರಿಜಭವಪಿತಸ್ಯಂದನವೇರಿ ಬಾಪ್ಪಾ ರಂಗದೇವೋತ್ತುಂಗಜಗಜನ್ಮಾದಿಕರ್ತೃ ಗೋವಿಂದ ಉದರದಿ ಲೋಕವತಡಮಾಡಬೇಡಯ್ಯ ಹೇ ನಲ್ಲವಾಕುಲಾಲಿಸುಎ-
--------------
ಗೋಪಾಲದಾಸರು
ಬಾರೋ ಗೋಪಾಲ ಬಾಲ ಸುಶೀಲದೇವಕಿ ಬಾಲಕಂಸಾರಿಶ್ರೀಲೋಲಪಗುರುಳು ಕೂದಲು ಹೊಸ ಅರಳೆಲೆಹೊಳಪುಕೊರಳ ಕೌಸ್ತುಭಹಾರ ಸರಗಳ ಝಳಪು 1ಮುದ್ದು ಬಾಲನೆ ಹೊಸ ಬೆಣ್ಣೆಮುದ್ದೆಯ ನೀವೆಸದ್ದು ಮಾಡದೆ ಬಾರೊ ಉದ್ಧವÀಸಖನೆ 2ಕಂಠದೊಳಸಲಿ ವೈಕುಂಠ ಶ್ರೀಪತಿಗೆಸೊಂಟಗೆಜ್ಜೆಯು ಕಿರುಗಂಟಿಗಳೊಲಿಯೆ 3ಭಕ್ತಿಯಿಂದಲಿ ಕರವೆತ್ತಿ ಪ್ರಾರ್ಥಿಸುವೆನುಅಪ್ರಮೇಯನೆ ಪುರುಷೋತ್ತಮ ನಮಿಪೆ 4ಕರುಣದಿಂದಲಿ ಬಾರೊಕಮಲಸಂಭವನಯ್ಯಕಮಲನಾಭ ವಿಠ್ಠಲ ನಮಿಸುವೆ ಸತತ 5
--------------
ನಿಡಗುರುಕಿ ಜೀವೂಬಾಯಿ
ಬಾರೋ ನಮ್ಮ ಮನೆಗೆ ಬೇಗನೆ ಗೋಪಾಲಕೃಷ್ಣಬಾರೋ ಶ್ಯಾಮ ಸುಂದರಾಂಗನೆ ಪಬಾರೊ ಭಾಮೆ ರುಕ್ಮಿಣೀಶ ಬಾರೊಯೋಗಿಹೃದಯವಾಸಬಾರೊ ದ್ವಾರಕಾಪುರೀಶ ಬಾರೊ ಭಕ್ತಜನರ ಪೋಷ ಅ.ಪಅಂದಿಗೆ ಕಾಲ್ಗೆಜ್ಜೆ ಸರಪಣಿ ಪಾಡಗರುಳಿಯುಕೆಂದಾವರೆಯು ಪೋಲ್ವಪಾದದಿನಂದಗೋಪತನಯಗೋಪವೃಂದದೊಳಗೆ ಕುಣಿದು ನಲಿದುಇಂದಿರೇಶ ಶ್ರೀಶನೆ ಬಂದೊಂದುಹೆಜ್ಜೆನಿಡುತ ಮುದದಿ 1ಉಟ್ಟದಟ್ಟಿಯು ಪಟ್ಟೆಚಲ್ಲಣ ಹವಳಕಟ್ಟುಗಟ್ಟಿ ಸರಪಣಿ ಕಿರುಗಂಟೆಯುಕಟ್ಟಿದ ಉಡುದಾರಗೆಜ್ಜೆಶ್ರೇಷ್ಠತನದಿ ಮೆರೆಯುತಿರಲುಪುಟ್ಟಬಾಲರೊಡನೆ ಪುಟ್ಟಪುಟ್ಟ ಹೆಜ್ಜೆನಿಡುತ ನಲಿದು 2ದುಂಡು ಕರಕೆ ಗುಂಡು ಬಿಂದಲಿ ಮುಂಗೈಮುರಿಗೆಉಂಗುರಗಳು ಶೋಭಿಸುತಲಿಬಂದಿ ಬಾಪುರಿಗಳು ತೋಳಬಂದಿ ನಾಗಮುರಿಗಿ ಕರದಿಚಂದ್ರನನ್ನು ಪಿಡಿದು ನಲಿದಸುಂದರಾಂಗ ಚೆಲುವ ಕೃಷ್ಣ 3ಪದಕ ಮುತ್ತಿನ ಸರಗಳ್ಹೊಳೆಯುತವೈಜಯಂತಿಮಾಲೆಸರಿಗೆ ಏಕಾವಳಿಗಳೊಲಿಯುತಪದುಮನಾಭ ನಿನಗೆ ದಿವ್ಯಮುದದಿಕೌಸ್ತುಭಮಾಲೆ ಹೊಳೆಯೆಯದುಕುಲೇಶ ಉಡುಪಿವಾಸಉದದಿ ಶ್ರೀಶಉದ್ಧವಸಖನೆ4ಸೋಮಸೂರ್ಯರ ಕಾಂತಿ ಸೋಲಿಪ ಮುಂಗುರುಳು ಮುಖವುಕಾಮಜನಕ ಕಮಲಲೋಚನಹೇಮಮಣಿ ಕಿರೀಟಕುಂಡಲಪ್ರೇಮತೋರ್ವ ಫಣಿಯ ತಿಲಕಶ್ರೀ ಮಹೀಶ ಶ್ರೀಶನೆ ಶ್ರೀ-ಕಮಲನಾಭ ವಿಠ್ಠಲ ಒಲಿವ 5
--------------
ನಿಡಗುರುಕಿ ಜೀವೂಬಾಯಿ
ಬಾರೋ ಬಾ ಮನೆಗೇ ರಂಗಯ್ಯ ನೀ |ತೋರೋ ಮುಖವೆನಗೆ ಪಘೋರಶರೀರ ಸುಂ |ದರಸೂಕ್ಷ್ಮಾಕಾರನೆ |ಕ್ರೂರ ದಯಾಕರ ಧೀರ ಉದಾರಿಯೆ ಅ.ಪನೀಲಮೇಘ ಶ್ಯಾಮ ನಿರ್ಮಲವನ | ಮಾಲ ಪೂರ್ಣಕಾಮ |ಕಾಲಭಯ ವಿದೂರ | ಫಾಳನೇತ್ರನಮಿತ್ರ|ಪಾಲಾಬ್ಧಿವಾಸ ಶ್ರೀಲೋಲ ಗೋಪಾಲನೇ 1ಶೇಷಶಯನ ದೇವಾ | ಭಕ್ತರಭವ|ದೋಷಹರ ಸಂಜೀವಾ |ನಾಶರಹಿತ ಸರ್ವ | ಆಶವಿನಾಶನ |ಭಾಸುರಾಂಗನೆ ಜಗ | ದೀಶ ಕೇಶವಮೂರ್ತಿ 2ಕಾಲೊಳಂದುಗೆಯೂ | ಪೀತಾಂಬರ |ಶಾಲುಮುದ್ರಿಕೆಯೂ | ತೋಳ ಸರಿಗೆ ಬಳೆ |ವೈಜಯಂತಿಯ ಮಾಲೇ ಮೇಲಾದರತ್ನಕಿರೀಟಕುಂಡಲಧಾರೀ | ಗರುಡನ ಏರಿ 3ಶಂಕೆಯಿಲ್ಲದ ಭಕ್ತರೂ | ನಿನ್ನಯ ಸದೃ-ಶಾಂಕದಿ ಸೇವಿಪರೂ | ಶಂಖಚಕ್ರಗದಾ |ಪದ್ಮವ ಧರಿಸಿದ | ಪಂಕಜನೇತ್ರವೈ- |ಕುಂಠ ವೆಂಕಟಪತೇ 4ಧಾರುಣಿ ಭಾರವನೇ | ಇಳುಹಲವ |ತಾರಗಳೆತ್ತುವನೆ |ಚಾರುಭುಜಾನ್ವಿತ |ಕೌಸ್ತುಭಮಣಿಹಾರ | ವಾರಿಜನಾx
--------------
ಗೋವಿಂದದಾಸ
ಬಾರೋ ವೆಂಕಟಗಿರಿನಾಥ| ದಯ-ದೋರೈ ಭಕುತರ ಪ್ರೀತ ಪ.ಮಾರಪಿತ ಗುಣಹಾರ ಮಂದರ-ಧಾರ ದೈತ್ಯಸಂಹಾರ ಸುಜನೋದ್ಧಾರ ಮಮಹೃದಯಾರವಿಂದಕೆಬಾರೋ ಕೃಪೆದೋರೋ ವೆಂಕಟ ಅ.ಪ.ವೃಷಭಾಸುರನೊಳು ಕಾದಿ ಸಾ-ಹಸವ ಮೆರೆಸಿದ ವಿನೋದಿವಶಗೈದು ದೈತ್ಯನ ಶಿರವ ಕತ್ತ-ರಿಸುತಲಿ ನೀನಿತ್ತೆ ವರವವಸುಧೆಯೊಳಗಿಹ ಸುಜನರನು ಮ-ನ್ನಿಸುತಲಿಷ್ಟವನಿತ್ತು ಕರುಣಾ-ರಸದಿ ಸಲಹುವ ಬಿಸಜನಾಭ ಶ್ರೀ-ವೃಷಭಾಚಲವೊಡೆಯ ವೆಂಕಟ 1ಅಂಜನೆಯೆಂಬಳ ತಪಕೆ ಭಕ್ತ-ಸಂಜೀವನೆಂಬ ಶಪಥಕೆರಂಜಿಪ ಪದವಿತ್ತೆ ಮುದದಿ ಖಿಲ-ಭಂಜನಮೂರ್ತಿ ಕರುಣದಿ|ಮಂಜುಳಾಂಗ ಶ್ರೀರಂಗ ಸುರವರಕಂಜಭವವಿನುತಾದಿ ಮಾಯಾ-ರಂಜಿತಾಂಘ್ರಿ ಸರೋರುಹದ್ವಯಅಂಜನಾಚಲವೊಡೆಯ ವೆಂಕಟ 2ಶೇಷನ ಮೊರೆಯ ತಾಕೇಳಿಬಲುತೋಷವ ಮನಸಿನೊಳ್ತಾಳಿದೋಷರಹಿತನೆಂದೆನಿಸಿ ಕರು-ಣಾಶರಧಿಯ ತಾನೆ ಧರಿಸಿಶ್ರೀಶಹರಿಸರ್ವೇಶ ನತಜನ-ಪೋಷ ದುರ್ಜನನಾಶ ರವಿಶತ-ಭಾಸ ಕೌಸ್ತುಭಭೂಷವರಶ್ರೀ-ಶೇಷಾಚಲವಾಸ ವೆಂಕಟ 3ಮಾಧವವಿಪ್ರ ವಿರಹದಿ ಭ್ರಷ್ಟಹೊಲತಿಗಳನು ಸೇರ್ದ ಮುದದಿಸಾದರದಲಿ ನಿನ್ನ ಬಳಿಗೆ ಬರೆನೀ ದಯಾನಿಧಿ ಕಂಡು ಅವಗೆಶೋಧಿಸುತ ಪಾಪಗಳೆಲ್ಲವಛೇದಿ ಬಿಸುಡುತನಿಂದುವೆಂಕಟ-ಭೂಧರದ ನೆಲೆಯಾದ ನಾದವಿ-ಭೇದಬಿಂದು ಕಲಾದಿಮೂರುತಿ 4ಧನಪತಿಯೊಳು ತಾನು ಸಾಲಕೊಂಡಘನಕೀರ್ತಿಯಿಂದ ಶ್ರೀಲೋಲವನಿತೆ ಪದ್ಮಾವತಿಪ್ರೀತ ಭಕ್ತ-ಜನಸುರಧೇನು ಶ್ರೀನಾಥವನಧಿಶಯನ ಮುರಾರಿಹರಿಚಿ-ಧ್ವನಿನಿಭಾಂಗ ಸುಶೀಲ ಕೋಮಲವನಜನಾಭನೀಯೆನ್ನ ಕೃಪೆಯೊಳ-ಗನುದಿನದಿ ಕಾಯೊ ಕೃಪಾಕರ 5ಛಪ್ಪನ್ನೈವತ್ತಾರು ದೇಶದಿಂದಕಪ್ಪವಗೊಂಬ ಸರ್ವೇಶಅಪ್ಪ ಹೋಳಿಗೆಯನ್ನುಮಾರಿಹಣ-ಒಪ್ಪಿಸಿಕೊಂಬ ಉದಾರಿಸರ್ಪಶಯನ ಕಂದರ್ಪಪಿತ ಭಜಿ-ಸಿರ್ಪವರ ಸಲಹಿರ್ಪ ಕುಜನರದರ್ಪಹರಿಸುತ ಕಪ್ಪಕಾಣಿಕೆಒಪ್ಪಿಗೊಂಬ ತಿಮ್ಮಪ್ಪಶೆಟ್ಟಿಯೆ 6ಚಾರುಚರಣತೀರ್ಥವೀಂಟಿ ನಿನ್ನೊ-ಳ್ಸಾರಿ ಬರುವ ಪುಣ್ಯಕೋಟಿಸೇರಿದೆ ಕೊಡು ಮನೋರಥವ ಲಕ್ಷ್ಮೀ-ನಾರಾಯಣನೆನ್ನೊಳ್ದಯವತೋರುನಿರತಸಮೀರಭವ ವರ-ದಾರವಿಂದದಳಾಕ್ಷ ತಿರುಪತಿವೀರ ವೆಂಕಟರಮಣ ಮದ್ಬಹು-ಭಾರನಿನ್ನದು ಪಾಲಿಸೆನ್ನನು7
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಬಾಲನ ನೋಡಿರೆನಿವಾಳಿಸಿಆಡಿರೆಕಾಲಅಂದುಗೆಕೈ ಕುಣಿಸದೆ ಸವಿಮಾತಾಲಿಪನ ನಮ್ಮಪ್ಪನ ಪ.ಬಾಲಕರನ್ನನ ಉಂಗುರುಗುರುಳಿನ ಸುಳಿಯೊಭೃಂಗಾವಳಿಯೊ ಶ್ರೀಲೋಲನ ವಿಸ್ತರ ಬಾಳವು ಕಳೆಗೇಡಿಯೊಪೊಂಗನ್ನಡಿಯೊಪಾಲ್ಗಡಲ ಪ್ರಭುವಿನೀ ಬಟ್ಟಗಲ್ಲಗಳೊಮರಿಯಾವಿಗಳೊಶೂಲಿಯ ಮುತ್ತಿದ ತಿದ್ದಿದ ಹುಬ್ಬಿನ ಹೊಳವೊನಿಂಬ ಸುದಳವೊ 1ಯದುಕುಲ ತಿಲಕನ ಢಾಳಿಪ ಕಂಗಳ ಠಾವೊತಾವರೆ ಹೂವೊಮದನನಯ್ಯನ ಮೀಟಿದ ಮೂಗಿನ ಕೊನೆಯೊಸಂಪಿಗೆ ನನೆಯೊಸದಮಲ ಲೀಲನ ಸೊಬಗಿನ ನಾಸಾಪುಟವೊಮುತ್ತಿನ ಬಟುವೊವಿಧುವಂಶೇಂದ್ರನ ವೃತ್ತ ಮನೋಹರ ವದನೊಮೋಹದ ಸದನೊ 2ಸುರರುಪಕಾರಿಯ ಎಳೆದುಟಿಯ ಕೆಂಬೊಳವೊಬಿಂಬದ ಫಲವೊಗರುಡಾರೂಢನ ಮೊಳೆವಲ್ಲುಗಳ ಬಿಳುಪೊಕುಂದಕುಟ್ಮಳವೊಕರುಣಾಂಬುಧಿಯ ಕಿವಿ ಶುಕ್ತಿಯೊ ಗದ್ದೊಮುದ್ದಿನ ಮುದ್ದೊಶರಣರ ಪ್ರಿಯನ ತ್ರಿರೇಖೆಯ ಕಂದರವೊ ಸುಂದರದರವೊ 3ದೇವಕಿತನಯನ ಪುಷ್ಟಯುಗಳದೋರ್ದಂಡೊಕಲಭದ ಶುಂಡೊದೇವವರೇಣ್ಯನ ಕರತಳದಂಗುಲಿ ಸರಳೊಕೆಮ್ಮಾಂದಳಿಲೊಭಾವಿಕ ಜನಜೀವನ ಪೀನೋನ್ನತ ಉರವೊವಜ್ರದ ಭರವೊಸೇವಕಪಕ್ಷನ ಉದರದವಲ್ಲಿತ್ರಿವಳಿಯೊ ಅಮರರಹೊಳಿಯೊ 4ಅಜನಯ್ಯನ ಅಚ್ಯುತನ ನಾಭಿಯ ಸುಳಿಯೊಅಮೃತದೊಕ್ಕುಳಿಯೊತ್ರಿಜಗದ ಗರ್ಭ ವಿನೋದಿಗಳರಸನ ಮಣಿಯೊಪಚ್ಚದ ಮಣಿಯೊಸುಜನರ ಮಾನಿಯ ಬಟ್ಟದೊಡೆಯ ಸಂರಂಭೋಎಳೆವಾಳೆಯ ಕಂಭೋಗಜವರದನ ಗೋವಿಂದನ ಜಾನುಗಳ ಪೊಗರ್ವೊಹರಿಮಣಿಯ ಪೊಗರ್ವೊ 5ತ್ರಿಗುಣಾತೀತನಂತನ ಜಂಘಗಳಿಳಿಕ್ಯೊ ಶರಬತ್ತಳಿಕ್ಯೊನಿಗಮಾಗಮ್ಯನ ಚರಣಯುಗಂಗಳ ನಿಜವೊಅರುಣಾಂಬುಜವೊಮೃಗನರರೂಪನ ಅನುಪಮ ನಖಗಣ ಮಣಿಯೊಬಾಲಖಮಣಿಯೊಸುಗಮನ ಪದತಳದಂಕುಶ ಧ್ವಜಾಂಬುರೇಖೆÉ್ಯೂೀವಿದ್ಯುರ್ಲೇಖೆÉ್ಯೂ 6ಆಭರಣಗಳಿಗೆ ಆಭರಣವೆ ಎಳೆಗರುವೆ ಕಲ್ಪತರುವೆಸೌಭಾಗ್ಯದ ಶುಭಖಣಿಯೆ ನಂದಾಗ್ರಣಿಯೆ ಚಿಂತಾಮಣಿಯೆ ನಿನ್ನ ಬಿಗಿದಪ್ಪುವ ಭಾಗ್ಯವಿನ್ನೆಂತೊಉಮ್ಮುಕೊಡು ನಮ್ಮಮ್ಮಶ್ರೀಭೃತ ಪ್ರಸನ್ವೆಂಕಟ ಕೃಷ್ಣ ತಮ್ಮ ಬಾ ಪರಬೊಮ್ಮ 7
--------------
ಪ್ರಸನ್ನವೆಂಕಟದಾಸರು
ಬಿಟ್ಟು ಹೋಗುವರೇನೊ ಕೃಷ್ಣಕೋಮಲೆಯರವೃಷ್ಟಿವÀರ್ಯ ಸಕಲ ಇಷ್ಟದ ಬಾಲೆಯರ ಪ.ಮಿತ್ರೆಯರ ಕೂಡಿ ರಮಣ ಚಿತ್ತದಿ ಚಿಂತಿಸಿರಾತ್ರಿ ಕೊಳಲು ವಿಚಿತ್ರದಿಂದ ಊದಿದಿ 1ಎಲ್ಲ ವಿಷಯ ಬಿಟ್ಟು ನಿಲ್ಲದೆ ಬಂದರುಒಲ್ಲದೆ ಅಡಗಿದಿ ಕಲ್ಲೆದೆ ಅಂದ ಪಾರ್ಥ 2ಇಟ್ಟು ನಿನ್ನಲೆ ಮನ ಬಿಟ್ಟು ವಿಷಯ ಸುಖಗಟ್ಯಾಗಿ ರಾತ್ರಿಲೆ ಬಂದು ಎಷ್ಟು ನಂಬಿದ್ದಾರಲ್ಲೊ 3ಇಂಥ ವಂಚಕನೆಂದು ಕಾಂತೆಯರು ಅರಿಯರುಭ್ರಾಂತಿಯ ಗೈಸಿದಿ ಎಂತು ಅರ್ಜುನ ನುಡಿದ 4ಹಸಿದವಗೊಂದೆÉ ತುತ್ತು ಅಶನವÀ ಕೊಟ್ಟು ಅನ್ನವ್ಯಸನವ ಹಚ್ಚಿದಂತೆ ಕುಸುಮನಾಭ ಮಾಡಿದ 5ಬೆಂದು ಬಿಸಲೆÉೂಳು ಬಹಳ ಬಂದ ಪುರುಷಗೆಉದಕಒಂದು ಗುಟುಕುಕೊಟ್ಟು ಆನಂದವ ಮಾಡಿದೆ 6ಕಂದಗೆ ಸ್ತನ ಕೊಟ್ಟುಬಿಂದು ಬಾಯೊಳಗೆ ಇಟ್ಟುಹಿಂದಕ್ಕೆ ಸರೆಯದಂತೆ ತಂದೆ ರಾಮೇಶ ಮಾಡಿದ 7
--------------
ಗಲಗಲಿಅವ್ವನವರು
ಬಿಡೆನೊ ನಿನ್ನಂಘ್ರಿ ಶ್ರೀನಿವಾಸ ನನ್ನದುಡಿಸಿಕೊಳ್ಳೆಲೊ ಶ್ರೀನಿವಾಸ ನಿನ್ನುಡಿಯ ಜೀತಲ್ಲೊ ಶ್ರೀನಿವಾಸ ನನ್ನನಡೆ ತಪ್ಪು ಕಾಯೊ ಶ್ರೀನಿವಾಸ ಪ.ಬಡಿಯೊ ಬೆನ್ನಲಿ ಶ್ರೀನಿವಾಸ ನನ್ನೊಡಲ ಹೊಯ್ಯದಿರೊ ಶ್ರೀನಿವಾಸ ನಾಬಡವ ಕಾಣೆಲೊ ಶ್ರೀನಿವಾಸ ನಿನ್ನೊಡಲ ಹೊಕ್ಕೆನೊ ಶ್ರೀನಿವಾಸ 1ಪಂಜುವಿಡಿವೆನೊ ಶ್ರೀನಿವಾಸ ನಿನ್ನೆಂಜಲ ಬಳಿದುಂಬೆ ಶ್ರೀನಿವಾಸ ನಾಸಂಜೆ ಉದಯಕೆ ಶ್ರೀನಿವಾಸ ಕಾಳಂಜಿಯ ಪಿಡಿವೆನೊ ಶ್ರೀನಿವಾಸ 2ಸತ್ತಿಗೆ ಚಾಮರ ಶ್ರೀನಿವಾಸ ನಾನೆತ್ತಿಕುಣಿವೆನೊ ಶ್ರೀನಿವಾಸ ನಿನ್ನರತ್ತುನ ಹಾವಿಗೆ ಶ್ರೀನಿವಾಸ ನಾಹೊತ್ತು ನಲಿವೆನೊ ಶ್ರೀನಿವಾಸ 3ಹೇಳಿದಂತಾಲಿಹೆ ಶ್ರೀನಿವಾಸ ನಿನ್ನಾಳಿಗಾಳಾಗಿಹೆ ಶ್ರೀನಿವಾಸ ಅವರೂಳಿಗವ ಮಾಳ್ಪೆ ಶ್ರೀನಿವಾಸ ನನ್ನಪಾಲಿಸೊ ಬಿಡದೆ ಶ್ರೀನಿವಾಸ 4ನಿನ್ನ ನಾಮ ಹೋಳಿಗೆ ಶ್ರೀನಿವಾಸ ಕಳ್ಳಕುನ್ನಿ ನಾನಾಗಿಹೆ ಶ್ರೀನಿವಾಸಕಟ್ಟಿನಿನ್ನವರೊದ್ದರೆ ಶ್ರೀನಿವಾಸ ನನಗಿನ್ನು ಲಜ್ಜ್ಯಾತಕೆ ಶ್ರೀನಿವಾಸ 5ಬೀಸಿ ಕೊಲ್ಲಲವರೆ ಶ್ರೀನಿವಾಸ ಮುದ್ರೆಕಾಸಿ ಚುಚ್ಚಲವರೆ ಶ್ರೀನಿವಾಸ ಮಿಕ್ಕಘಾಸಿಗಂಜೆನಯ್ಯ ಶ್ರೀನಿವಾಸ ಎಂಜಲಾಸೆಯಬಂಟನಾ ಶ್ರೀನಿವಾಸ6ಹೇಸಿ ನಾನಾದರೆ ಶ್ರೀನಿವಾಸಹರಿದಾಸರೊಳು ಪೊಕ್ಕೆ ಶ್ರೀನಿವಾಸಅವರಭಾಸೆಯ ಕೇಳಿಹೆ ಶ್ರೀನಿವಾಸ ಆವಾಶೆಯ ಸೈರಿಸೊ ಶ್ರೀನಿವಾಸ 7ತಿಂಗಳವನಲ್ಲ ಶ್ರೀನಿವಾಸವತ್ಸರಂಗಳವನಲ್ಲೊ ಶ್ರೀನಿವಾಸ ರಾಜಂಗಳ ಸವಡಿಪೆ ಶ್ರೀನಿವಾಸ ಭವಂಗಳ ದಾಟುವೆ ಶ್ರೀನಿವಾಸ 8ನಿನ್ನವ ನಿನ್ನವ ಶ್ರೀನಿವಾಸ ನಾನನ್ಯವನರಿಯೆನೊ ಶ್ರೀನಿವಾಸ ಅಯ್ಯಾಮನ್ನಿಸೊ ತಾಯ್ತಂದೆ ಶ್ರೀನಿವಾಸ ಪ್ರಸನ್ನ ವೆಂಕಟಾದ್ರಿ ಶ್ರೀನಿವಾಸ 9
--------------
ಪ್ರಸನ್ನವೆಂಕಟದಾಸರು
ಭಕ್ತವತ್ಸಲನೆಂಬ ಚಿಹ್ನೆ ನಿನಗೆಯುಕ್ತವಲ್ಲದೆ ಆರಿಗೊಪ್ಪುವುದು ಕೃಷ್ಣ ಪ.ಎಲ್ಲ ಜಗದ ತಂದೆ ನಿನ್ನ ಮಗ ಆ ನಂದನೊಲ್ಲಭೆಯ ಕಂದನಾದಚೆಲ್ಲುವೆ ಅರಸಿ ನಿನ್ನಂಗನೆ ಲಕುಮವ್ವಗೊಲ್ಲತೇರಿಗೆಂತು ಸೋತಿದ್ದೆ ಸ್ವಾಮಿ 1ಮಂದಿ ರಾಜಾಂಡಕೋಟಿಗೆ ಗುರುವರ್ಯ ನೀನುಸಾಂದೀಪನi್ಞ್ಯಳಿಗವ ಮಾಡ್ದೆಮಂದಜಾಸನಆ ವಾಯು ನಿನ್ನ ಓಲೈಸುತಿರೆಕಂದನೆನಿಸಿದೆ ಯಶೋದಾದೇವಿಗೆ ಸ್ವಾಮಿ 2ಮೂರು ಚಾವಡಿ ಪಾರುಪತ್ಯದ ಪ್ರಭುವೆ ನೀನೇರಿದೆ ನರನ ಬಂಡಿಯನುದ್ವಾರಕೆಯ ಅರಸೆ ನೀ ಚೀರಿದರೋಡಿ ಬಂದುಆ ರಮಣಿಯಮಾನಉಳಿಸಿದೆ ಸ್ವಾಮಿ3ಮುಕ್ತದ್ರುಹಿಣರಿಂದಸೇವ್ಯನೀ ಧರ್ಮನಮಖದೊಳೆಂಜಲ ಪತ್ರ ತೆಗೆದೆಪ್ರಕಟಿತನಿತ್ಯಮಹಾತೃಪ್ತ ನೀ ವಿದುರನಕಕುಲತೆಯ ಔತಣಗೊಂಡು ಮುದಿಸಿದೆ ಸ್ವಾಮಿ 4ಹಲವು ಶ್ರ್ರುತಿಗಳಿಗೆ ನೀ ನಿಲುಕದೆ ನೆನೆದವಗೆಸುಲಭದಿ ಪೊರೆವ ಉದಾರಿಬಲದ ಮ್ಯಾಲೊಲಿಯುವ ದೊರೆಯಲ್ಲ ಭಕ್ತರಛಲರಕ್ಷ ಪ್ರಸನ್ನವೆಂಕಟ ಜಗದಧ್ಯಕ್ಷ ಸ್ವಾಮಿ 5
--------------
ಪ್ರಸನ್ನವೆಂಕಟದಾಸರು
ಭಾಗೀರಥಿ ದೇವಿ ನಮೋ ||ಭಾಗೀರಥಿ ದೇವಿ ಭಯ ನಿವಾರಣ ಗಂಗೆ |ಸಾಗರನರ್ಧಂಗೆ ಸುತರಂಗೆ ಪವಾಮನ ವಾಮ ಪಾದಾಂಗುಷ್ಟನಖಸೋಕಿ |ಆ ಮಹ ಬ್ರಹ್ಮಾಂಡ ಸೀಳಾಲೂ | ಭಾಗೀ..... ||ತಾಮರಸಜ ಲೋಕಕ್ಕಿಳಿದು ಮಜ್ಜನವಾಗಿ |ಸ್ವಾಮಿ ಪಾದೋದಕಳೆನಿಸಿದೆ || ಭಾಗೀ... 1ಹರಿಪಾದ ಜಲ ದೊರಕುವದು ದುರ್ಲಭವೆಂದು |ಹರ ಪ್ರಾರ್ಥಿಸಲು ಜಡೆಯೊಳು ನಿಂದೆ | ಭಾಗೀ.... ||ಮೊರೆಯಿಡೆ ದೇವತೆಗಳಿಗೆ ವೊಲಿದು ಬಂದು |ಸುರನದಿಯೆಂದು ಕರೆಸಿಕೊಂಡೇ | ಭಾಗೀ..... 2ಚನ್ನಾಗಿ ಸ್ವರ್ಗದೊಳಗೆ ನಿಂತ ಕಾರಣ |ಸ್ವರ್ನದಿಯೆಂದು ಕರೆಸಿದೆವ್ವ | ಭಾಗೀ.... ||ಉನ್ನತಧೃವಮಂಡಲಕ್ಕೆ ಪೋಗಿ ಮುಟ್ಟಿದೆ |ನಿನ್ನಾಕಾಶ ಗಂಗೆ ಎಂಬೋರೆ | ಭಾಗೀ..... 3ಭಗೀರಥ ಬಹುಕಾಲ ಪ್ರಾರ್ಥಿಸೆ ಕರುಣದಿಂ |ಜಿಗಳಿ ಹೇಮಾದ್ರಿಗೆ ನಡೆತಂದೆ | ಭಾಗೀ.... ||ಸೊಗಸಿಲಿಂ ತ್ರಿಪಥಾಗಿ ದಕ್ಷಿಣದಲಿ ಬಂದು |ಸಗರರಾಯನ ಉದ್ಧರಿಸಿದೇ | ಭಾಗೀ..... 4ತವಕದಿಂದಲ್ಲಿ ಜಹ್ನು ಋಷಿಯಲ್ಲಿ ಜನಿಸಿ ಜಾ |ಹ್ನವಿಯೆಂದು ಸ್ತುತಿಸೋರೆ ಸುರರೆಲ್ಲ | ಭಾಗೀ.... ||ಭುವನದೊಳೆಲ್ಲರು ಪುನೀತರಾಗೋದು ಸಿದ್ಧ |ತವಪಾದಸ್ಮøತಿಮಾತ್ರದಿಂದಲೀ | ಭಾಗೀ...... 5ನಂದಿನಿ ನಳಿನಿ ಸೀತಾ ಮಾಲತೀ ಮಲಹ |ಮಂದರಧರ ಪದಿ ಶ್ರೀಗಂಗೆ | ಭಾಗೀ...... ||ಸುಂದರ ತ್ರಿಪಥ ಭಾಗೀರಥಿ ಭೋಗವತಿ |ವಂದೆಜಾಹ್ನವಿತ್ರಿದಶೇಶ್ವರಿ | ಭಾಗೀ.... 6ವಸುಗಳ ಮಾತು ಲಾಲಿಸಿ ರಾಯನಲಿ ಬಂದು |ಬಸುರಿಂದ ಪಡೆದು ಉದ್ಧರಿಸಿದೆ | ಭಾಗೀ.... |ಅಸಹ್ಯ ಕರ್ಮವ್ಯಾಕೆಂದೆನಲು ಕುಮಾರನ |ಕೊಸರುತ ನಿಜರೂಪವೈದಿದೇ | ಭಾಗೀ.... 7ನಮೊ ನಮೊ ಶುಭಗಾತ್ರೆ ನಮೊ ನಮೋ ಸುಚರಿತ್ರೆ |ನಮೊ ನಮೊ ಶಂತನುವಿನ ಮಿತ್ರೆ | ಭಾಗೀ..... ||ಶಮದಮಾದಿಗಳಿತ್ತುಪೊರೆಅನುದಿನದಲ್ಲಿ |ಅಮರವಿನುತಪಾದಪಂಕಜೆ | ಭಾಗೀ.....8ಕಾಣಲು ಪಾಪಹರವು ಮುಕ್ತಿ ಅಹುದು |ಸ್ನಾನದ ಫಲವು ಬಲ್ಲವರಿಲ್ಲ | ಭಾಗೀ...... ||ಕ್ಷೋಣಿಯ ಮ್ಯಾಲುಳ್ಳ ಸರಿದ್ವರಳೆನಿಸುವೆ |ಪ್ರಾಣೇಶ ವಿಠಲನ್ನ ದಯದಿಂದ | ಭಾಗೀ..... 9
--------------
ಪ್ರಾಣೇಶದಾಸರು
ಭಾರತೀರಮಣ ನಂಬಿದೆ ಪಾದವಾರಿಜಾಕರುಣಾ ವಾರಿಧೆ ಯನ್ನನು |ದೂರ ನೋಡದೆ ನಿನ್ನ ಸಾರೆಗರೆದುಭಯ ನಿವಾರಿಸಿ ಸಲಹೋ ಪನೀಲಲೋಹಿತನ ಪಿತನೇ ಗೋಪಾಲನ ಸುತಾ |ಕಾಳಕೂಟ ಪಾನಿ ವಿಶಾಲಾಂಬಕಾ ಮಾರರಿಂದ ||ವೇಳೆ ವೇಳೆಗಳಲ್ಲಿ ವೋಲಗವ ಕೈಕೊಂಬುವ |ಕಾಳೀವಲ್ಲಭಭೇಶಭಾಸ್ಕರರೋಲು ಸನ್ನಿಭ ||ಈ ಲೌಕಿಕ ನರರಾಲಯ ಕಾಯಿಸದೆ |ವಾಲಯ ಸುಮತಿಯ ಪಾಲಿಪುದೊಲಿದು 1ಜಾನಕೀಪತಿ ಸೇವೆ ಮಾಡಿದೈ ಕಾಣೆನೋಪ್ರತಿ|ಯಾ ನಿನಗಾರಾರಾ ಭುವನದೊಳಗೆ ಗಂಧವಹನೆ ||ಮುದ್ರಿಯ ಕೊಂಡು ಕ್ಷಣದೊಳಗೆ ಜಲಧಿಯನ್ನೆ ಹಾರಿದೆ |ಸೀತೆಗುಂಗುರವನ್ನೆ ತೋರಿದೆ ||ಆ ನಗರವನು ದಹನಗೈಸಿ ಬಹು |ದಾನವರನಳಿದು ದಶಾನನನೊದ್ದೆ 2ಪಾಪದೂರನೆ ವೃಕೋದರ ಶ್ರೀ ದ್ರೌಪದೀಶನೇ |ವಿಪಿನಚರಿಸಿ ಕುರುಪತಿಯ ತರಿದು ||ಕ್ಷಿತಿಪರನ್ನು ಬಿಡಿಸಿದೆಯೈ ಪಾಂಡವರ (ಪರಿ) ಪಾಲಕ |ಕೋಪನಾಶನ ಉದ್ಧರಿಸೆನ್ನ ಚಾಪಭಂಜನ ||ಶ್ರೀಪತಿ ದ್ವಯ ಪದ ಆಪಜ ಭಜಿಸುವ |ನೇ ಪರಮೇಷ್ಠಿಯರೂಪಗುಣಾಢ್ಯ 3ದೇಶಿಕೋತ್ತಮ ಮಾರುತಿ ಇಂದಿರೇಶನ ಪ್ರೇಮ |ಸಂಪಾದಿಸಿಕೊಂಡತಿಶಯ ಭಕುತಿಯಿಂದಲೀ ಸಮೀಚೀನವಾಗಿ ||ತ್ರಿಂಶತಿ ಸಪ್ತ ಸಂಖ್ಯಾ ದರುಶನ ಗ್ರಂಥ ವಿರಚಿಸಿ ದು |ರ್ಭಾಷ್ಯವ ಸಂತರಾ ಸಲಹುವರನಾಭಾಸ ಮಾಡಿದೆ ||ವ್ಯಾಸಭಜಕ ನಿನ್ನ ದಾಸನೆನಿಸಿಕೊಳ್ಳೋ4ಅಂಜನಾಸುತ ಪ್ರಾಣೇಶ ವಿಠಲನೆಂಜಲನೊಯ್ಯುತ |ಭುಂಜಿಸಿದಿಯಲೊನಿರಂಜನಕಪಿ ಪ್ರ- ||ಭಂಜನಕೊಡು ಕೃತಾಂಜಲಿಯಿಂ ಬೇಡುವೆ |ಕಂಜನಾಭನ ಸ್ಮರಣೆ ದಿವಾ ಸಂಜೆಯಲಿಘನ||ಪುಂಜ ಸುಗುಣಮಣಿ ಮಂಜರಿ ಅರ್ಥ ಪ- |ರಂಜಳ ತಿಳಿಸೋ ಧನಂಜಯ ರಕ್ಷ 5
--------------
ಪ್ರಾಣೇಶದಾಸರು
ಭೀಮನ ನೋಡಿರೈ ಕುರುಕುಲಕಾಮಜನಕಹರಿಯದುಕುಲ-ಕುಂತಿಯ ಉದರದಿ ಜನಿಸಿದಅಂಧಕಕರೆಸಲು ಹಸ್ತಿನಪುರಕೆತಂದೆ ಕರೆದು ವನವಾಸಕೆ ಪೋಗೆನೆಮಲ್ಲಬರಲು ನೃಪನಾಜÕದಿಕುರುಕುಲ ಅಧಮನ ಅನುಜರ
--------------
ಗೋಪಾಲದಾಸರು