ಒಟ್ಟು 4691 ಕಡೆಗಳಲ್ಲಿ , 124 ದಾಸರು , 3091 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀ ಕೃಪೆ ಮಾಡೋ ಹರಿಯೇ ಲೋಕವಿನುತ ಸಿರಿಯೇ ಪ ಶ್ರೀಕರ ಭಾಸ್ವರಾ ಭಕ್ತಸುಧಾಕರ ಶೋಕಹರಣಾ ನೀ ಶೂರಾ ಅ.ಪ ನಡು ನೀರೋಳೆನ್ನ ಕೈಯ ಬಿಡಬೇಡ ಮಾರನಯ್ಯ ಅಡಿಗೆರಗುವೆನಯ್ಯ ಕೊಡು ನಿನ್ನ ನಾಮಾವಳಿಯ ದೃಢದೆ ಭಜಿಪೆನಯ್ಯ ಮೃಡನುತಾನೇ ಗೋವಿಂದಯ್ಯ 1 ಕಳೆದ ದುರಿತಾವೃತ ಉಳಿದುದು ವೋವರಾ ಅಳಿವ ಕಾಲವಿದಿನ್ನು ಬಳಲಿಸೋಲುವೆ[ನಯ್ಯ] ಘಳಿಲನೆ ನಿನ್ನ ನಾಮಾವಳಿಯ ಸ್ಮರಣೆಯ 2 ಅನ್ಯರ ಭಜಿಸೆನು ಅನ್ಯರ ನುತಿಸೆನು ಅನ್ಯರಿಗೆರಗೆನು ಅನ್ಯರ [ಪೂಜಿ]ಸೆನು [ಅ ನನ್ಯ ಶರಣನೆ ಮನ್ನಿಸೊ ಶರಣುಬಂದಿಹೆನು] 3 ಕಾವಧೀರನು ಇನ್ನು ಅವನೇ ಶ್ರೀಹರಿ ಸೇವಕರಿಗೆ ನಾನು ಸೇವಕನೆನ್ನುತಾ ಭಾವಿಸೋ ದೇವದೇವಾ ಮಾವಿನಾಕೆರೆರಂಗ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೀ ಕೈಯ ಬಿಟ್ಟರಿನ್ಯಾತಕೆನಗೀ ಸುಖ ಗೋಕುಲಗಣನಾಯಕ ಪ ಲೋಕೈಕ ನಾಥನೆಂದಾ ರೈಉಸುರಿದ ಮುನಿಯ ಯಾಕೀ ಪರಿಯೊಳೆನ್ನ ಕಾಕುಮಾಡುವೆರಂಗಾ ನೂಕಿ ನಿಮ್ಮಾಶ್ರಯವ ಮಾಡೈ ಎಂದಿಹ ವ್ಯಾಕುಲಾಂತ ಪರಾತ್ಮ ಸತ್ಯ ಸ ಲೊಕ ಸರ್ವಸಯೇಕ ಭೀಮಾ 1 ಸಮಾಜದೀ ಭೀತಿಯಿಂದ ಮಿತ ದು:ಖವನುಂಡೆ ಸುಮನ ಸತ್ಯ ಸಮಾಜ ಭೌಮನೆ ಅಮರಗುಣ ಕಟಕಾಮಣಿಯೆ ಸ ದ್ವಿಮಲ ಚರಿತ ವಿಶಾಲ ಭೂಪಾ2 ಕಿಂತುಭವದ್ಧರ್ಶನೇನಆಹಂಬೆಲ್ಲ ಕಥಯಾಮಿಕಾಲಾಂತಕೋ ಚಕ್ರಸುಧಾರ ತ್ವರಿತದಿ ಕಂತು ಜನಕನೆ ಪಾಲಿಸೆನ್ನು ಪಂಥವೇತಕೊ ಪರಮಜೀಯಾ 3 ಭ್ರಷ್ಟಸಂಗವ ಬಿಡಿಸಿ ಪಾಲಿಸೊ ವಿ ಶಿಷ್ಟಾದ್ವೈತನೆ ಕೃಷ್ಣನಾಮನೆ ಸೃಷ್ಟಿ ಶ್ರೀಗುರು[ತುಳಸಿ]ಕುಲ ಶ್ರೀರಾಮಾ 4
--------------
ಚನ್ನಪಟ್ಟಣದ ಅಹೋಬಲದಾಸರು
ನೀ ತಂದೆ ನಾಕಂದನಯ್ಯ ರಂಗಯ್ಯ ಪ ಪಾತಕಿಯು ನಾನೆಂದೆ ಘಾತಕನು ನಾನೆಂದೆ ನೀತಿಗಳ ಕಲಿಸೆಂದೆನೈ ತಂದೆ ನಿನ್ನ ಹಿಂದೆ ಅ.ಪ ತಂದೆ ನೀ ಕರೆತಂದೆ ಎಂದು ನಂಬುತೆ ಬಂದೆ ತಂದೆ ನೀ ಕೈಬಿಟ್ಟು ಹಿಂದೆ ನಿಂದೆ ನಿಂದೆಯಲಿ ನಾನೊಂದೆ ಬಂದೆ ಭವದಲ್ಲಿ ಮಂದರೋದ್ಧಾರ ಗೋಪಾಲ ತಾಪವತಂದೆ 1 ಹಿಂದೆ ಜನ್ಮಂಗಳಲಿ ಬೆಂದು ಬಳಲಿದೆನಯ್ಯ ಇಂದು ನರಜನ್ಮದಲಿ ಬಂದೆನಯ್ಯ ಬಂಧು ಬಳಗವಕಾಣೆ ಕಂದು ಕುಂದಿದೆನಯ್ಯ ಇಂದೀವರಾಕ್ಷ ಸಾನಂದ ಭೈರವೀಪ್ರಿಯಾ2 ಮುಂದಿನಾ ಪಥವಾವುದೆಂದರಿಯೆ ಮದನಾಂಗ ಮಂದಮತಿಯನು ನೀಗಿಸೆಂದೆನುವೆ ರಂಗ ಬಂದ ಸುಖದು:ಖಗಳನೊಂದೆಣಿಸು ನೀಲಾಂಗ ಕರವ ಪಿಡಿ ಮೋಹನಾಂಗ 3 ಎಂದು ತವಪಾದಾರವಿಂದವನು ಸೇರಿಸುವೆ ಅಂದು ಜನ್ಮವು ಸಫಲವೆಂದು ನಂಬಿರುವೆ ಮುಂದೆ ಜನ್ಮಗಳಿಲ್ಲ ಎಂದು ನಾನಂಬಿರುವೆ ಸಂದೇಹವೇತಕೆ ನಿನ್ನ ಸೂತ್ರದೋಲ್ ಮೆರೆದೆ 4 ಮಂದಾಕಿನೀಜನಕ ನಂದಗೋಪನ ಕಂದ ಇಂದೀವರಾಕ್ಷ ಮುಚುಕುಂದವರದಾ ಎಂದೆಂದು ವಂದನೆಯ ಮಾಳ್ಪುದೆನಗಾನಂದ ಇಂದದನು ಕರುಣಿಸೈ ಮಾಂಗಿರಿಯ ಗೋವಿಂದ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೀ ಪಾಲಿಸೋ ಗುರುರಾಯ ಎನ್ನ ಕಾಪಾಡೀಗ ಮಹರಾಯ ಪ ಭೂಪತಿ ನೀ ಎನ್ನ ಆಪದ್ಭಾಂಧವ ಪತಿ ಪರಿ ಮಾಡದೆ ಅ.ಪ ಪಾಪಿಗಳೊಳಗೆ ಹಿರಿಯನು ನಾ ನಿಷ್ಪಾಪಿಗಳರಸೆ ಗುರುರಾಯ ಅಪಾರ - ಜನುಮದಿ ಬಂದಿಹ ತಾಪತ್ರಯವ ಕಳಿ ಮಹರಾಯಾ 1 ನೀಚರ ಒಳಗೆ ನೀಚನೊ ಪಾಪ - ಮೋಚನೆ ಮಾಡೋ ಗುರುರಾಯ ಯೊಚನೆ ಇಲ್ಲದೆ ಅನ್ಯರ ಅನುದಿನ ಯಾಚಿಸಿ ಕೆಟ್ಟೆನೊ ಮಹರಾಯಾ 2 ದೀನರ ಒಳಗೆ ದೀನನು ನಾನೈ ದಾನಿಗಳರಸೇ ಗುರುರಾಯ ಜ್ಞಾನವು ಇಲ್ಲದೆ ನಾನು ನನ್ನದೆಂದು ಹೀನ ಮತ್ಯಾದೆನೊ ಗುರುರಾಯ 3 ಅನ್ನವು ಇಲ್ಲದೆ ಅನ್ಯರ ಮನೆಯಲಿ ಕುನ್ನಿಯಾದೆನೋ ಗುರುರಾಯ ನಿನ್ನನೆ ನಂಬಿ ಅನ್ಯರ ಬೇಡೊದು ಘನ್ನತಿ ನಿನಗೆ ಮಹರಾಯಾ 4 ದಾತನೆ ನಿನ್ನಾ ಪೋತನು ನಾನೀ - ರೀತಿಯ ಮಾಳ್ಪರೆ ಗುರುರಾಯ ನೀತ ಗುರು ಜಗನ್ನಾಥ ವಿಠಲ ಪದ ದೂತನು ನೀನೆ ಮಹರಾಯಾ 5
--------------
ಗುರುಜಗನ್ನಾಥದಾಸರು
ನೀ ಮನಒಲಿಯುತೆ ಬಾರಮ್ಮ ಪ ನಲಿನಲಿದಾಡುತ | ಒಲುಮೆಯದೋರುತ | ನಲವಿನಿಂದ ಸ | ಜ್ಜನರಿಗೊಲಿವಳೇ ಅ.ಪ ಖಳಕುಲವಳಿಸುತಲಿ | ಶರಣರಿಗೊಲಿಯುತ ಹರುಷದಲಿ || ಇಳೆಯೊಳು ಮೆರೆಯುವ | ನಂದಿನಿ ನದಿಯೊಳು | ನೆಲೆಯಾಗಿರುತಿಹ | ಜಲದುರ್ಗಾಂಬಿಕೆ1 ಕರುಣವ ಬೀರುತಲಿ | ತವ ಪದ | ಶರಣರ ಪೊರೆಯುತಲಿ || ಪರಿಪರಿವಿಧದಲಿ | ಧರಣಿಯ ಭಾರವ | ಪರಿಹರಿಸಿದ ಶ್ರೀ | ಪರಮೇಶ್ವರಿಯೆ2 ಅಂಬುಜದಳನಯನೆ | ನಿನ್ನನು | ನಂಬಿದೆ ಗುಣಸದನೆ || ಶಂಭುಮನೋಹರೆ | ಶಾಂಭವಿ ಶಂಕರಿ | ನಂಬಿದ ಭಕುತರಿ | ಗಿಂಬು ಗೊಡಲು ನೀ 3 ದೇಶ ದೇಶದೆಲ್ಲ | ನಿನ್ನಾ | ಶ್ರೈಸುವ ಜನಕೆಲ್ಲ || ತೋಷವ ಪಡಿಸುತ | ಆಸೆಯ ನೀವೆ | ನ್ನಾಸೆಯ ಸಲ್ಲಿಸು | ಕಟಿಲಪುರೇಶ್ವರಿ4
--------------
ವೆಂಕಟ್‍ರಾವ್
ನೀ ಮನದೊಳು ಜಪಿಸೆಲೊ ಮನುಜ ಪ ಸಾರದ ಪದವಿಯ ಸೇರಿರುತಿರುವರೆ ಅ.ಪ ಸಂಚರಿಸದೆ ನಿಶ್ಚಿಂತೆಯೊಳಿರುವರೆ 1 ಪೃಥಿವಿಯ ಭೋಗವಸ್ಥಿರವೆನುತ 2 ನಿಲ್ಲಿಸಿ ಭಾವಿಸಲಲ್ಲಿರುತಿಹನು 3 ಹೊಂದುತೆಲ್ಲ ಗೋವಿಂದನಿಚ್ಛೆಯೊಳು 4 ನಿರತಾನಂದದೊಳಿರು ನೀ ನಿಜದೊಳು 5
--------------
ಸದಾನಂದರು
ನೀ ಸುಮಂಲಿ ವರಗುಣಶೀಲೆ ನೀ ಸುಮಂಗಲಿ ಪ ಸತತ ಮಾತಾ ಪಿತರ ವಚನ ಹಿತದಿ ನೀನು ಆಲಿಸುತ | ಪತಿಯು ಪರದೈವವೆಂದು ನೇಮದಿ ತಿಳಿದು ನೀ ಮಾಡುವುದು ವ್ರತ 1 ನಿರುತ ಗೋವು ಭೂಸುರರ ಸೇವಾ ಹರುಷದಲಿ ಶ್ರೀ ಗೌರಿ ಪೂಜಾ ತರುಣಿ ಗೈದು ಜಗದಿ ನೀನು ಪಾದ ಸುಕುಮಾರ ಪಿತನಪಾದ ಭಜಿಸೆ 2 ಕೋಮಲಾಂಗಿ ಸೋಮವದನೆ ಆ ಮಹಾತ್ಮ ಶೀಲೆ ರಾಧಾ ಭಾಮೆ ತಾರಾಸೀತೆಯಂತೆ ಶಿರಿಶಾಮಸುಂದರ ದಯ ಪಡೆಯೆ ನೀ 3
--------------
ಶಾಮಸುಂದರ ವಿಠಲ
ನೀಚಕೃತ್ಯದ ಮನಸೇ ನಿನಗೆ ತುಸು ನಾಚಿಕಿಲ್ಲಲೆ ಹೊಲಸೆ ಪ ಪ್ರಾಚೀನಹಿರಿಯರ ಯೋಚಿಸಿನೋಡದೆ ನೀಚತನದ ಆಲೋಚನೆಯೊಳು ಬಿದ್ದು ಅ.ಪ ಕುಂತಿಸುತನ ರಥವ ನಡೆಸಿದನು ಅ ತ್ಯಂತ ಕೃಪೆಯಿಂದ ಹರಿಯು ಕಂತುಜನಕ ಭಕ್ತ ಚಿಂತಾಯಕನೆಂದು ಅಂತರಂಗದಿ ಭಜಿಸಿ ಸಂತಸ ಪಡುವಲ್ಲಿ 1 ಅಂಬರೀಷನೆಂಬುವ ನೃಪಗೆ ಮುನಿ ಡೊಂಬೆಯಿಂಬ (?) ಶಾಪಿಸಲು ಅಂಬುಜಾಸನ ಬಂದು ಬೆಂಬಲಿಸಿ ನೃಪನನ್ನು ಇಂಬಿಟ್ಟು ಪೊರೆದದ್ದು ನಂಬಿ ಭಜಿಸವಲ್ಲಿ 2 ಭೂಮಿಪ ಬಲಿಚಕ್ರನ ಬಾಗಿಲ ಕಾಯ್ದ ಪ್ರೇಮದಿಂ ರಮೆಯರಸನು ಪ್ರೇಮದಿಂ ಭಕುತರ ಕಾಮಿತವೀಯಲು ಕಾಮಧೇನೀತನೆಂದು ನೇಮದಿಂದರವಲ್ಲಿ 3 ಗೌತಮ ಮುನಿಸತಿಯು ಪಾಷಾಣವಾಗಿ ಕ್ಷಿತಿಮೇಲೆ ಎರಗಿರಲು ಕ್ಷಿತಿಜಾತೆಪತಿ ತಾನು ಅತಿಹಿತದ ಕೃಪೆಯಿಂದ ಪತಿತಗೈದವನೆಂದು ಸ್ತುತಿಸಿ ಒಲಿಸವಲ್ಲಿ 4 ಹನುಮಂತನೊಡೆಯನಾದ ಜನಕಜೆಪತಿ ವನಜಾಕ್ಷ ಶ್ರೀರಾಮನ ಘನತರಮಹಿಮೆಯ ಅನುದಿನಕೊಂಡಾಡು ಘನಮುಕ್ತಿ ಸಾಮ್ರಾಜ್ಯ ಕನಿಕರದಿಂ ಕೊಡುವ 5
--------------
ರಾಮದಾಸರು
ನೀಚಮನಸೆ ನೀ ಯೋಚಿಸಿ ಕೆಡಬೇಡ ಬರಿದೆ ಪ ಸಾರವಿಲ್ಲದ ನಿಸ್ಸಾರ ಸಂಸಾರವೆಂಬುದು ಮಾಯಾಬಜಾರ ತೋರಿ ಅಡಗುತಿಹ್ಯದು ನಿಮಿಷ ನೀರಮೇಲಿನ ಗುರುಳೆತೆರದಿ ಪರಿ ಸ್ಥಿರವಲ್ಲದನರಿದು ನೋಡೋ 1 ಕಾರಣಲ್ಲದ ಕಾಯವಿದು ಮೂರುದಿನದಸುಖವ ಬಯಸಿ ಮೀರಿಸಿ ಗುರುಹಿರಿಯರ್ವಚನ ಪಾರಮಾರ್ಥವಿಚಾರ ಮರೆಸಿ ಸೂರೆಗೈದು ಸ್ವರ್ಗಭೋಗ ಘೋರನರಕಕೆಳಸುತಿಹ್ಯದು 2 ಆಶಾಬದ್ಧನಾಗಿ ಭವಪಾಶದೊಳಗೆ ಸಿಲುಕಬೇಡೆಲೊ ವಾಸನಳಿದು ಐಹಿಕಸುಖದ ಕ್ಲೇಶನೀಗಿ ಸುಶೀಲನಾಗಿ ಬೇಸರಿಲ್ಲದೆ ಶ್ರೀಶಜಗದೀಶ ಶ್ರೀರಾಮನಂಘ್ರಿ ಭಜಿಸು 3
--------------
ರಾಮದಾಸರು
ನೀತಿಯೇನಿದು ಕಾಂತೆ ಮಾತಿನೊಳ್ ಬಿರುಸೆನಿತೆ ಘಾತಿಸುವುದಿದೊಳ್ಳಿತೇ ಪ್ರಾಣದಾತೆ ಈಕಾಲದಬಲೆಯರ ಕಾಕಲಾಪಕೆ ಸೋತು ಸಾಕಾರನೊಳಗಿಂತು ಕೇಣಮಾಂತು ನೀನೆರೆವೆÉ ವಸ್ತುಗಳ ನಾನಿತ್ತೆನಾದರೆ ಕಾನನದ ವಾಸವು ಎನಗೆ ನಿಜವು ಇದನರಿತು ನೀನೆನ್ನ ಪದುಳದಿಂ ಸುಖಿಯಪ್ಪ ಹದನನರಿಯದೆ ಬರಿದೆ ಜರಿದೆ ಮುಗುದೆ ಪ್ರೇಮ ಗೌರವ ಭಕ್ತಿ ಭಾವ ಶುದ್ಧಿ ನೇಮನಿರತಿಶಯ ಸುಸ್ನೇಹದಿಂದ ಕೋಮಲತೆಯಯಾಂತೆಸೆವ ಬಗೆಯ ತಾಳ್ದು ಭಾಮೆಯೆನ್ನಿಸು ಶೇಷಗಿರೀಶಗೊಲಿದು
--------------
ನಂಜನಗೂಡು ತಿರುಮಲಾಂಬಾ
ನೀನಲ್ಲದಲೆ ಇನ್ನು ನಾನಾರ ಕೂಗಲೊ ಮಾನನಿಧಿ ಗೋಪಾಲ ಶ್ರೀನಿಧಿಯೇ ಪ. ಶ್ರೀನಿವಾಸನೆ ಎನ್ನ ನಾನಾ ಪರಿಯ ಕಷ್ಟ ನೀನೆ ಬಿಡಿಸಿ ಸಲಹೊ ಮಾನಾಭಿಮಾನದೊಡೆಯ ಅ.ಪ. ಕಡುಕೋಪದಿಂ ಖಳನು ಹುಡುಗನ ಬಾಧಿಸೆ ದೃಢ ಭಕ್ತಿಯಿಂದ ನಿನ್ನಡಿಯ ಭಜಿಸೆ ಕೆಡಹಿ ಅಸುರನ ಕೊಂದು ಒಡನೆ ಭಕ್ತನ ಕಾಯ್ದೆ 1 ತೊಡೆಯನೇರಲು ಬರೆ ಜಡಿದು ನೂಕಲು ತಾಯಿ ಒಡನೆ ಮನದಿ ನೊಂದು ಪೊಡಮಡುತ ಅಡವಿ ಅಡವಿ ತಿರುಗಿ ದೃಢದಿ ಭಜಿಸೆ ಧ್ರುವ ಒಡನೆ ಓಡಿ ಬಂದು ದೃಢಪಟ್ಟ ಕೊಡಲಿಲ್ಲೆ 2 ಕರಿ ಕರೆಯೆ ತಡೆಯದೆ ಸಲಹಿದ ಪೊಡವೀಶ ನೀನಲ್ಲೆ ಕಡುಕರುಣಿ ಬಡವಗೆ ಸಿರಿಯಿತ್ತೆ ಮಡದಿಗಕ್ಷಯವಿತ್ತೆ ಕಡುದ್ರೋಹಿಗಳ ಕೊಲಿಸಿ ಒಡನೆ ಐವರ ಕಾಯ್ದೆ3 ಚಿನುಮಯ ಗುಣಪೂರ್ಣ ಅಣು ಮಹತ್ ಅಂತರಾತ್ಮ ಎಣಿಸಲಾಹೊದೆ ನಿನ್ನ ಘನ ಮಹಿಮೆ ಮನಸಿಜಪಿತ ಸರ್ವ ಮನನಿಯಾಮಕ ಹರಿ ಮನದಲ್ಲಿ ನೀ ನಿಲ್ಲೊ 4 ಶ್ರೀಪದ್ಮಭವನುತ ನಾ ಪಾಮರಾಳಿಹೆ ಗೋಪಾಲಕೃಷ್ಣವಿಠಲ ಶ್ರೀಪತಿಯೆ ನೀ ಪಾರು ಮಾಡದೆ ಕಾಪಾಡುವವರ್ಯಾರೊ ತಾಪ ಬಿಡಿಸಿ ಸಲಹೋ5
--------------
ಅಂಬಾಬಾಯಿ
ನೀನಲ್ಲದಿನ್ನಾರು ಸಲಹುವರೊ ಎನ್ನ ಪ ನಾನು ನನ್ನದು ಎಂಬ ದುರಭಿಮಾನಿಯನ್ನಅ.ಪ. ಶ್ರೀಮದಾಚಾರ್ಯರ ಪುಸ್ತಕ ಭಂಡಾರವನು ಪ್ರೇಮದಿಂ ಧರಿಸುತ ವೃಷಭನಾಗಿರ್ದು ಚರಿಸಿ ಕಾಮಪಿತನೊಲಿಮೆಯಿಂ ಮರಳಿ ಜನಿಸಿ ಗುರುಗಳ ಆ ಮಹಾಭಾಷ್ಯವರುಹಿದ ಜಯತೀರ್ಥ ಗುರುವೆ 1 ಬಾಲತನದಲಿ ಸಕಲ ಲೀಲೆಗಳ ತೊರೆದು ಕಾಲುಂಗುಟಾಗ್ರದಿ ನಿಂದು ತಪವಗೈದು ಶ್ರೀಲೋಲನ ಮೆಚ್ಚಿದಂಥ ಧೀರ ದೈವ ಭೂ- ಪಾಲನಂಶದ ಶ್ರೀಪಾದರಾಜ ಗುರುವೆ2 ಪಿತನ ಮತ ಧಿಕ್ಕರಿಸಿ ಶ್ರೀಪತಿಯೆ ಪರನೆಂಬ ಮತಿಪÉೂಂದಿ ಶಿಶುತನದಲಿ ನರಹರಿಯ ಒಲಿಸಿ ಅತಿಹಿತನಾದ ಪ್ರಹ್ಲಾದದೇವನಂಶದಿಂ ಕ್ಷಿತಿಯೊಳುದ್ಭವಿಸಿದ ವ್ಯಾಸರಾಜ ಗುರುವೆ 3 ಈ ಧರೆಯೊಳೆಸೆಯುತಿಹ ಉಡುಪಿಯೊಳು ನೆಲಸಿರ್ಪ ಯಾದವ ತೀರ್ಥಾಯ ಪದ ಸರಸಿರುಹ ಭೃಂಗ ಮೋದ ತೀರ್ಥಾರ್ಯರ ಪದಕರುಹನಾದಂಥ ಸೋದೆಯೊಳ್ರಾಜಿಸುವ ವಾದಿರಾಜ ಗುರುವೇ 4 ಕಂತುಜನಕನಿಗತ್ಯಂತ ಪ್ರಿಯನಾದ ಮತಿ ವಂತನಾ ವ್ಯಾಸಮುನಿಯೆ ನೀನಾಗಿ ಬಂದು ಸಂತಸದಲಿ ಸಾಧು ಜನರಿಷ್ಟ ಪೂರೈಸುತ ಮಂತ್ರಾಲಯದಿ ಮೆರೆವ ರಾಘವೇಂದ್ರ ಗುರುವೆ 5 ಜಲಜಭವನೂರುಭವನಂಶದಲಿ ಜನಿಸಿ ಕಲಿಯುಗದಿ ಹರಿನಾಮವೆ ಗತಿಯೆಂದು ಸಾರಿ ಹಲವು ಪದ ಸುಳಾದಿಗಳ ರಚಿಸಿ ಸಜ್ಜನರ ಕಲುಷಗಳ ಕಳೆದ ಪುರಂದರದಾಸರಾಯ 6 ಸಕಲ ಋಷಿಗಳ ಸಂಶಯವ ಪರಿಹರಿಸಿ ವೇದ ಉಕುತಿಗಳಿಂದ ಹರಿಯೆ ಪರನೆಂದು ಸ್ಥಾಪಿಸಿ ಭಕುತಿ ವೈರಾಗ್ಯನಿಧಿ ಭೃಗುಮುನಿಯೆಂದೆನಿಸಿದ ಮುಕುತಿಪಥ ತೋರಿಸಿದ ವಿಜಯದಾಸರಾಯ 7 ಸೂತ್ರ ಪುರಾಣಗಳ ರಚಿಸೆ ದಾಸತ್ವವಹಿಸಿ ಸಕಲ ಗ್ರಂಥಗಳ ಬರೆದು ಶ್ರಿಶಗರ್ಪಿಸುತ ಲೇಸು ಜಗಕೆಗೈದಂಥ ಗ ಣೇಶಾವತಾರಿ ಗೋಪಾಲದಾಸರಾಯ 8 ಸಿರಿ ರಂಗೇಶವಿಠಲನ ಕಾಂಬ ತೃಷೆಯಲಿ ಹರಿಗೆ ಹರಿಕಥಾಮೃತಸಾರ ಪಾನಗೈಯಲಿತ್ತ ನರಹರಿಯ ಕೃಪಾಪಾತ್ರ ಸಹ್ಲಾದನಂಶದ ಗುರುವರ ಶ್ರೀ ಜಗನ್ನಾಥದಾಸರಾಯ 9
--------------
ರಂಗೇಶವಿಠಲದಾಸರು
ನೀನುಪೇಕ್ಷೆಯ ಮಾಡೆ ಬೇರೆ ಗತಿಯಾರೆನಗೆನಿಗಮಗೋಚರ ಮುಕುಂದ ಪ ಗಾನರಸಲೋಲ ಆಗಮಶೀಲ ಭಕ್ತಪರಿಪಾಲಸನ್ನುತ ಗೋಪಾಲ ಬಾಲ ಅ ಸಿರಿನಲ್ಲ 1 ದಿವಿಜ ಮುನಿವಂದ್ಯ ಅಭಿಮಾನಿ ಎನ್ನನೂ ಸಲಹದೆ - ಬರಿದೆ 2 ಈಶಣತ್ರಯದ ಬಯಲಾಸೆಯಲಿ ಭ್ರಮೆಗೊಂಡುಬೇಸರದಿ ಮನದಿ ನೊಂದುಹೇಸಿಗೆಯ ಸಂಸಾರ ಮಾಯಕ್ಕೆ ಸಿಲುಕಿ ನಾಘಾಸಿ ಪಡಲಾರೆನಿಂದುವಾಸುದೇವನೆ ನಿನ್ನ ಪೊಂದಿ ಬದುಕುವೆನೆಂದುಆಸೆ ಪಡುತಿಹೆನು ಇಂದುದಾಸನೆಂದೆನಿಸಿ ಡಂಗುರ ಹೊಯ್ಸಿ ಬಡದಾದಿಕೇಶವನೆ ಕರುಣಿಸಯ್ಯಾ ಬಂದು3
--------------
ಕನಕದಾಸ
ನೀನೆ ಕರುಣಿ ದೀನಪಾಲ ದಾನವಾಂತಕನಾಥಬಂಧು ಪ ಕಾಸಾರಕಿಳಿದು ಕರಿಯ ಕಾಯ್ದಿ ಹೇಸದೆ ತರುಣಿ ಮೊರೆಯ ಕೇಳ್ದಿ ಬೇಸರಿಲ್ಲದೆ ದಾಸಜನರ ಆಸೆ ಪೂರೈಸಿ ಪೊರೆದಿ ಪ್ರಭು 1 ಬಾಲಗೈದ ತಪಕೆ ಒಲಿದಿ ಮೇಲುಪದವಿ ಕರುಣಿಸಿದಿ ಕಾಲಗೆ ಕಾಲನಾಗಿ ಮೆರೆವ ಖೂಳರಕ್ಕಸನುದರ ಸೀಳ್ದಿ 2 ನಿಗಮ ತಂದಿ ಭಾರಬೆನ್ನಲಿ ಪೊತ್ತು ನಿಂದಿ ಹಾರೈಸಿ ಕರೆವ ಭಕುತ ಜನಕಾ ಧಾರ ಮಮಪ್ರಾಣೇಶ ಶ್ರೀರಾಮ 3
--------------
ರಾಮದಾಸರು
ನೀನೆ ಗತಿ ಮುಕುತೆನೆಗೆ ಅನಂತ ಜನುಮಗಳಲಿ ಪ ಆನೇನರಿಯೆ ಗರುಡಗಮನ ಸಿರಿಕೃಷ್ಣ ರಾಯಾ ಅ.ಪ ಅನ್ಯವಾರ್ತೆ ಅನ್ಯಸಂಗ ಅನ್ಯಜನರಾರಾಧನೆಅನ್ಯಸತಿ ಅನ್ಯಕರ್ಮ ಮೊದಲು ಸಕಲತನ್ನು ಮನ್ನ(=ತನುಮನ) ವಾಕ್ಯಗಳಿಂದ ಜರಿದೆ ನಿನ್ನವರೊಳುಎನ್ನ ಕೂಡಿಸೊ ನಿನ್ನ ಚರಣ ಭಕುತಿಯಲಿ ಶ್ರೀಶ 1 ಅಂದು ವೇದೋದ್ಭವಳ ಮೊರೆಯನು ಕೇಳಿ ಕಾಯ್ದಂತೆಮಂದ ಗಜೇಂದ್ರನಿಗೊಲಿದು ರಕ್ಷಿಸಿದ ಪರಿಯಂತೆತಂದೆತಾಯಿ ಬಂಧುಬಳಗ ಎಂದೆಂದು ನೀನೇ ದಯಾ-ಸಿಂಧು ನಿನ್ನ ದಾಸರ ದಾಸನೆಂದೆನಿಸೆನ್ನ2 ಪಾದ ಜಂಘೆ ಜಾನೂರುಕಟಿಘನ್ನ ಬಾಹು ಉದರವಕ್ಷ ಭುಜ ಕುಂತಳದಿಚನ್ನ ಕಿರೀಟ ಸರ್ವಾಲಂಕಾರದಿಂ ಶೋಭಿಸುವನಿನ್ನ ಮೂರ್ತಿಯನ್ನೆ ತೋರೊ ಭಕ್ತವತ್ಸಲ ಸಿರಿಕೃಷ್ಣ3
--------------
ವ್ಯಾಸರಾಯರು