ಒಟ್ಟು 2406 ಕಡೆಗಳಲ್ಲಿ , 111 ದಾಸರು , 1903 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾಕೆ ಮೈ ಮರೆತಿದ್ದೆ ಹೇಳೋ ಎಲೆ ಮರುಳೆ ಜೋಕÉ ತೀರೀತು ನಿನ್ನ ಬಾಳು ಪ ನಿಟ್ಟೆಲುಗಳಿಂದ ಕೈ ಕಾಲ್ಗಳೆಂಬುವನು ಮಾಡಿ ಚಿಟ್ಟೆಲುಗಳನು ಸಂದಕೂಡಿ ಪಟ್ಟಿನಲ್ಲಿ ತನುಪುರವ ಕಟ್ಟಿದರು ನರದಿಂದ ಪಟ್ಟಣವ ನಿರ್ಮಿತವ ಮಾಡಿ ಅಷ್ಟಪುರ ಕಲ್ಲಲ್ಲಿ ನವಕವಾಟವ ರಚಿಸಿ ದುಷ್ಟದುರ್ಜನರೆಲ್ಲ ಕೂಡಿ ಕಟ್ಟಿದರು ಜೀವನಿಗೆ ಇವರ ಕೂಡಾಡಿ 1 ರಕ್ತಮಾಂಸವು ಚರ್ಮಪೂಡಿ ಮತ್ತೆ ಮಲ ಮೂತ್ರ ಕ್ರಿಮಿ ಕೀಟ ರುಜೆಬಾಧೆಯಲಿ ವಿಸ್ತರದಲಿದಕೆÉ ನಲಿದಾಡಿ ವ್ಯರ್ಥದಲಿ ದಿನವ ನೀಗಾಡಿ ಅಸ್ಥಿರದ ದೇಹವನು ನಚ್ಚಿಭವ ಶರಧಿಯೊಳು ಕುಸ್ತರಿಸಿ ಬಿದ್ದು ಈಜಾಡಿ 2 ಹೊಲಸು ಹೆಬ್ಬಡಿಕೆ ನಾರುವನರಕ ಕೀವು ಕ್ರಿಮಿ ಯಲು ನರಂಗಳು ಮಜ್ಜೆ ಮಾಂಸ ಕೊಳಕು ನಾರುವ ಹಡಿಕೆಗೆಳಸುತಿಹ ನಾಯಂತೆ ಬಲಿದಿಹುದು ನಿನ್ನ ಮೇಲಂಶ ಬಳಲಿ ಬಸವಳಿದೆಲೋನ ಪುಂಸ ಕೊಳೆಯ ಮೇಧ್ಯದ ಪುಂಜ ತನುವಿದನು ನೆರೆನಂಬಿ ಫಲವಿಲ್ಲ ಹರಿಯಧ್ಯಾನಿಸೋ ಪರಮಹಂಸ 3 ಸತಿ ಹೊಂದುವರು ನಿನ್ನ ಕಣ್ಣಾರೆ ಕೇಳ್ವೆ ಕಿವಿಯಿಂದ ಗುರಿಯಾಗಿ ಇಂದಿರೇಶನ ಪೂಜಿಸಲು ನಾಕೈಯಾರೆ4 ಇದರೊಳಗೆ ಬಾಲ್ಯಕೆನೊರ್ಯ ಯೌವ್ವನವೆಂಬ ಉದಯಾಸ್ತಮಾನ ಪರಿಯಂತರವು ಸುದತಿ ಸುತರಲಿ ಮೋಹವಿರಿಸಿ ದಣಿಯದಿರು ಮನವ ನೆರೆನಿಲಿಸಿ ಲಕ್ಷ್ಮೀರಮಣನನು ಹೃದಯದೊಳುಸ್ಮರಿಸಿ 5
--------------
ಕವಿ ಪರಮದೇವದಾಸರು
ಯಾಕೆ ಮೈದೋರೆ ಗುರುರಾಯಾ | ನಮ್ಮ | ಸಾಕಿಸಲಹುವಾ ಮಹಿಪತಿ ಭಕ್ತ ಪ್ರೀಯಾ ಪ ಶರಣರುಪಚಾರ ಭಕುತಿಯ ಮನಿಲಿ ಸಿಲುಕಿದೆಯೋ | ದುರಿತ ಪರಿಹರಿಸಲಿಕ್ಕೆ ತೊಡಗಿದೆಯೋ | ಬೋಧ ಕೇಳಿಸಿದೆಯೋ ಪೂರ್ವ | ಜರ ಮುಕುತಿಗಾಣಿಸಲು ಹೋಗಿ ಆಲಿಸಿದೆಯೊ 1 ಕಂಗೆಡುತಲಿವೇ ನಿಮ್ಮ ಕಾಣದೀ ನಯನಗಳು | ಭಂಗು ಬಡುತಿವೇ ನುಡಿಯ ಕೇಳದೆ ಶ್ರವಣಗಳು | ಅಂಗ ಸಂಗಕ ಸಿರಕರಗಳು ಮರುಗಿ \ ಮುಂಗಾಣ ವೆದೆಗೆಟ್ಟು ಕರಣ ವೃತ್ತಿಗಳು 2 ಮಂದ ಭಾಗ್ಯರಿಗೆ ನಿಧಾನ ಮರಿಯಾದಂತೆ | ಇಂದು ಮಾಡಲಿ ಬ್ಯಾಡಾ ನ್ಯೂ ನಾರಿಸುದುಚಿತವೇ | ನಂದನರ ಸಲಹು ದಯದಿಂದ ಮೋದಲಂತೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಯಾಕೆ ರಂಗ ನಿನಗೆ ಮಾಕಾಂತೆಯೊಳು ಗರ್ವ | ಲೋಕದೊಳು ಅಬಲೆಯೇನೋ ಕೇಳಯ್ಯಾ ನೀನು ಪ ಮೀನಾವತಾರವ ನೀನಂದು ವಿಡಿದರೆ | ಮೀನಾಂಬಕಿ ತಾನಾದಳೋ1 ಬೆಟ್ಟವ ಬೆನ್ನಿಲಿ ಕಷ್ಟದಿ ನೆಗೆದರೆ | ಬಟ್ಟ ಕುಚಗಳ ಹೊತ್ತಳೋ 2 ಧರೆಯ ಭಾರವ ತಾಳಿದರ ನಿನ್ನಾಭಾರವನು | ಧರಿಸಿದಳಂದಗಲದಲೆ 3 ಸಿಂಹಾನನನಾಗಿ ಮಹಿಮೆ ದೋರಿಸಿದರೆ | ಸಿಂಹದಂತೆ ನಡು ನಡುವಾದಳೋ 4 ಬಲಿ ಬಾಗಿಲಕಾಯಿದರೆ ನೆಲೆಸಿಹಳವಳಲ್ಲಿ | ಬಲಿಯಾ ಭಾಗ್ಯ ರೂಪವಾಗಿ5 ಸುರರ ಹೊರಿಯಲಿಕ್ಕೆ ಪರಶವ ಪಿಡಿದರೆ | ಪರಸಗೈಯ್ಯ ತಾನಾದಳೋ 6 ಹರನಾ ಚಾಪವನೆಗೆದರೆ ಅದನೆವೆ ಮುನ್ನೆ | ಕರೆದಲೆ ತ್ಯಾಡಿದಳೊ 7 ಸೆರೆಹರಿದು ಸ್ತ್ರೀಯರಾ ತಂದರೆ ನಾರದರಿಂದ | ಸೆರೆವಿಡಿಸೆ ಕೊಂಡಳೋ 8 ಮುಪ್ಪರ ಹೊಕ್ಕರೆ ನೀವಪ್ಪುತಲಿ ಹನಿನ್ನಾ | ಮುಪ್ಪುರದಲಿ ಮೆರೆದಳೋ 9 ತುರುಗವ ಏರಿಕೊಂಡು ತಿರುಗಲು ನಿನ್ನಾಕೂಡ | ತುರಗಮನಿ ತಾನಾದಳೋ 10 ಕಡೆಯಕಾಲಕ ನೀರೊಳೊಡಗೂಡಿ ಮಲಗಲು | ಒಡನೆ ವಟದೆಲೆ ಯಾದಳೋ11 ಗುರು ಮಹಿಪತಿ ಪ್ರಭು ಚರಿತೆಯಾ ನಿಮ್ಮೀರ್ವರ | ಭರದಿ ಹೇಳಲೆನ್ನಳವೇ 12
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಯಾಕೆÀ ಬಾರ ಸಖಿ ತ್ರಿವಿಕ್ರಮನ್ಯಾಕೆ ಬಾರ ಸಖಿ ಅ-ನೇಕ ಮಹಿಮ ವಿವೇಕನಿಲಯ ಮೂ-ಲೋಕ ಮೋಹನಮೂರ್ತಿ ಮುಕ್ತಶೋಕ ಪ. ಕರ್ಮ ವಿಮೋಚನಮುಂಜÉರಗ ಪಿಡಿದೆಳೆಯೆಸಂಜೆ ಬರಲೆಂದು ಸವಿನುಡಿಯ ನುಡಿವಕುಂಜರನ ಭಯಭೇದಿ ಬಹಳ ವಿನೋದಿ ಸಕಲರಿಗಾದಿ ಸುಗುಣನಿಧಿ 1 ನಿನ್ನಿನಿರುಳು ನಿನ್ನ ನೇಮಿಸದ ಮುನ್ನಮನ್ನಿಸಿ ಮನೆಗೆ ಬಂದಾತಅನ್ಯವರಿಯದ ಅಬಲೆ ನಾನೆಂದೀಗಕಣ್ಣಾರ ತಾ ಕಂಡನಲ್ಲ ಪುಸಿಯಿನ್ನು ಸಲ್ಲ ಸಕಲವು ಬಲ್ಲ ಎನ್ನ ನಲ್ಲ2 ಇಂದಿರೆಯನು ಬಿಟ್ಟು ಇರವ ಎನ್ನೊಳಗಿಟ್ಟುಎಂದೆಂದು ಎತ್ತಿಕೊಂಡಾತಕುಂದದೆ ತಾನಿಂದು ಕೂಡಿದರೆ ಬಂದುತಂದು ಹಯವದನನೊಲಿಸು ಸ್ನೇಹವ ಬಲಿಸು ಮದನನೊಲಿಸು ಎನಗೊಲಿಸು 3
--------------
ವಾದಿರಾಜ
ಯಾಕೆನ್ನ ಎದುರಲಿ ನಿಲ್ಲುವುದಿಲ್ಲೋ ಯಾಕೆನ್ನಯ ಕರೆ ಕೇಳುವುದಿಲ್ಲೋ ಪ ಯಾಕೆನ್ನ ಅರ್ಚನೆಗೊಲಿಯುವುದಿಲ್ಲೋ ಯಾಕೆನ್ನೊಳು ದಯಮಾಡುವುದಿಲ್ಲೋ ಅ.ಪ ತರಳ ಧೃವನ ಮೊರೆ ಕೇಳಿಸಿತಲ್ಲ ಕರಿ ಎತ್ತಿದ ಸುಮ ಕಾಣಿಸಿತಲ್ಲ ಅರಿ ಅನುಜನ ಸೇವೆ ಹಿರಿದಾಯ್ತಲ್ಲಾ ಕರುಣ ಎನ್ನೊಳಗೇಕೆ ಬರದೋ ಕೃಷ್ಣಯ್ಯ 1 ಅಗಣಿತ ಗೋಪಿಯರೆಡೆಯಲಿ ನಲಿದೆ ನಗಧರನಾಗಿ ಗೋಪಾಲರ ಪೊರೆದೆ ಖಗನಿದ್ದೆಡೆಗೇ ಭರದಲಿ ನಡೆದೆ ನಗುಮೊಗದರಸ ಮಾಂಗಿರಿಯ ರಂಗಯ್ಯ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಯಾಕೆನ್ನನಿಲ್ಲಿಗೆ ಎಳೆ ತಂದ್ಯೊ ಹರಿ ತಪ್ಪೇನನೆಸಿಗಿದೆನೊ ಪ. ಜೋಕೆಯಿಂದಲಿ ಎನ್ನ ಕಾಯಬೇಕಲ್ಲದೆ ನೂಕಿದರೆನ್ನನು ಸಾಕುವರ್ಯಾರೊ ದೊರಿ ಅ.ಪ. ಯಾರಿಗೇನೆಸಗಿದೆ ಆರ ನಾ ದೂಷಿಸಿದೆ ಆರ ನಾ ನಿಂದಿಸಿದೆನೊ ಕಾರದಿ ನೋಡಿದೆನೊ ಈ ರೀತಿ ನೊಂದೆನು 1 ವಿಧಿ ಬರಹದೊಳಿನ್ನು ವಿಧಿಪಿತ ನಿನ್ನ ಕಾಣಲಿಲ್ಲ ಮದಗರ್ವ ಬಿಡಿಸೆನ್ನ ಸದಮಲ ಹೃದಯದಿ ಪದ ಪದುಮವ ತೋರಿ ಉದ್ಧರಿಸೆನ್ನನು 2 ಸೃಷ್ಟಿಕರ್ತನೆ ಕೇಳೊ ಕಷ್ಟವಪಡಲಾರೆ ದೃಷ್ಟಿಲಿ ನೋಡಿ ಕಾಯೊ ಎಷ್ಟು ಬೇಡಲೊ ನಾನು ಬೆಟ್ಟದೊಡೆಯ ಹರಿ ವೃಷ್ಣೀಶ ಗೋಪಾಲಕೃಷ್ಣವಿಠ್ಠಲ ದೊರಿ3
--------------
ಅಂಬಾಬಾಯಿ
ಯಾಕೆಲೊ ರಂಗ ನಿನಗಿಂತು ನಟನೆಯ ಮಾತು ಪ ಮಾಕಾಂತ ಕರೆಸಿದರೆ ಬಾರದಿಹ ಪೊಗರುಅ ತಸ್ಕರ ಬುದ್ಧಿ ಕಡೆಗೆ ಇರಿಸಿಬಾಲಕನ ವಂದರಿಸಿ ಬಹುಭಾಗ್ಯವಂತನೆನಿಸಿಎಲ್ಲರೊಳು ಸಲಿಗೆ ನಿಲಿಸಿದಳೊ ನಿಮ್ಮರಸಿ 1 ಕೆಸರ ಚೊಗೆಯಂ ಬಿಡಿಸಿ ಗುಂಜ ಸರವಂ ತೆಗೆಸಿಬಿಸರುಹ ಮಣಿಮಾಲೆ ಕಡೆಗೆ ಇಡಿಸಿಪೊಸ ಪೀತಾಂಬರ ಉಡಿಸಿ ನವರತ್ನವಂ ತೊಡಿಸಿವಸುಧೆಯೊಳು ಮಿಗಿಲಾಗಿ ನಿಲಿಸಿದಳೊ ನಮಿಸಿ 2 ಎನ್ನ ಮಾತನು ಕೇಳು ಮುನಿಸು ಕೃತ್ಯವ ಸೀಳುಇನ್ಯಾಕೆ ಯೋಚನೆ ಫಲವ ಪೇಳುಬಿನ್ನಹವನು ಕೇಳು ನೆರೆಗೂಡಿ ಸುಖಬಾಳುಚೆನ್ನ ಬಾಡದಾದಿಕೇಶವ ದಯಾಳು 3
--------------
ಕನಕದಾಸ
ಯಾತಕೀಪರಿ ಚಿಂತೆ ಮನದೊಳಗೆ ಭ್ರಾಂತೆ ಪ ನಡಿಯ ಕಲಿಸಿದರ್ಯಾರು ನುಡಿಗಲಿಸಿ ನಿನಗೆ ಒಡಲಿಗಿಕ್ಕಿದರ್ಯಾರು ಷಡುರಸದÀ ಅನ್ನವ ಕಡುಮಮತೆಯೊಳು ಶಿಲ್ಪ ಬಿನ್ನಣಪ್ಪುದು 1 ಪಂಡಜಗೊಲಿದುಗತಿಯಿತ್ತರಿಯು ಸಲಹುವನು ಭಕುತರ ತಲೆಯಮೇಲಿಟ್ಟಮೃತ ಕರವನು ಶ್ರೀನಿಲಯನಿರುತಿರೆ2 ಪಿಂತೆ ರಾವಣನಳಿದಾನಂತ ಮಹಿಮಳ ಚಿಂತೆಯನು ತಾ ಕಳಿದಾ ಚಿಂತಿಪರ ಮನದೊಳು ಸಂತಸದಿ ತಾನುಳಿದಾ ಅಂತರಿಯೆನಿವನ ಸಂತ ಜನರಿಗೆ ಅಂತಕನ ಭಯವೆಂತು ಒಪ್ಪುದು ಹರಿಯ ನೆನೆಯಲು ನಿಂತು ಶ್ರೀ ನರಸಿಂಹವಿಠಲನಂತರಂಗದಿ ಜಪಿಸುವಾತ್ಮಗೆ 3
--------------
ನರಸಿಂಹವಿಠಲರು
ಯಾತಕೆ ಮರೆತೆನ್ನ ಯತಿಕುಲ ತಿಲಕನೆ ಪ್ರೀತಿಯ ಬಯಸುತ ಬಂದೆ ಪ ವಾತಸುತಗತಿಪ್ರಿಯ ದೂತನೆ ನಾಥನೀನೆಂತೆಂದು ನಂಬಿದೆ ಖ್ಯಾತಗುರು ಶ್ರೀ ರಾಘವೇಂದ್ರನೆ ಅ.ಪ. ದೇಶದೇಶದಿ ಬರುವ ದಾಸಜನರÀಘ ನಾಶಗೈಸಿ ಪೊರೆವೊ ದಾಶರಥಿ ಕಿಂಕರಾ ಶೇಷಶಯನನ ದೋಷ ಜ್ಞಾನ ವಿಶೇಷದಿಂದಲಿ ನ್ಯಾಸಮಾಡಿದೆ ಭೂಸುರೋತ್ತಮ 1 ಛಲದಿ ಭಕ್ತಿಯ ಮಾಡಿ ಒಲಿಸಿ ಹರಿಯ ಪಾದ ಲಲಿತಕೀರ್ತಿಲಿ ಮೆರೆದೆ ಭಳಿರೆ ಭಳಿರೆ ಗುರುವೇ ಗೊಲ್ಲಕೃಷ್ಣನ ಚೆಲ್ವ ನಾಟ್ಯದಿ ನಿಲ್ಲಿಸಿದ ನಿನಗೆಲ್ಲಿ ಸರಿಯೈ ನಲ್ಲ ಯತಿವರ ಕಾಲಿಗೆರಗುವೆ ಶೀಲಭಕುತಿಯ ಪಾಲಿಸೀಗಲೆ 2 ವ್ಯಾಸಮುನಿಯು ಎನಿಸಿ ಶ್ವಾಸಮತವ ಮೆರೆಸಿ ದೋಷ ಹರಿಸಿ ಧೊರೆಗೆ ದಾಸ ದೀಕ್ಷೆಯ ತೋರ್ದೆ ಈಶದಾಸರ ಭೇದ ವಾದವ ಆಶುಕವಿತದಿ ವಿಶದಪಡಿಸಿದೆ ಶ್ರೀಶಶಯನನಾವೇಶ ಸಂಯುತ ಭೇಶಕಾಂತಿ ವಿಶಾಲಕರುಣಿಯೆ 3 ದಾತ ಈತನೆಂಬ ಖ್ಯಾತಿ ಬಿರುದು ನಿನಗೆ ಪ್ರೀತಿಯಿಲ್ಲವೇ ಗುರುವೇ ಜೋತು ಬಂದೆ ಅಡಿಗೇ ಬೋಧೆಯ ನೀತಿ ಪೇಳಿದೆ ಏತಕೀತಡ ಮಾತಲಾಲಿಸು ದೂತನಿನ್ನವ ಪೂತಕಾಯನೆ4 ಪರಮ ಭಕ್ತರ ವೃಂದ ನಿರುತ ನಮಿಪ ಚೆಂದ ಅರಿಯೆ ವರ್ಣನೆ ಎಂದ ಸುರಿಸು ಭಕ್ತಿಯ ಗಂಧ ಸೂರಿ ಬೀರಿಕರುಣವ ಭಾರತೀಶನ ಸಾರಶಾಸ್ತ್ರದಿ ತೋರು ತತ್ವಾರ್ಥ 5 ಲೋಕ ಹರಕೆ ನೀಡಿ ಸಾಕಿ ಸಲಹೆ ಹೆಜ್ಜೆ ನೂಕಿ ದುರಿತರಾಶಿ ಸಾಕುಹರಿಯ ತೋರಿ ಶ್ರೀಕರಾರ್ಚಿತ ಪಾದಪಲ್ಲವ ಪಾಕನಾಶನ ಏಕ ವೀರನ ನಾಕ ಋಷಿಗತಿಪ್ರಿಯ ಶಿಷ್ಯನೆ 6 ಪಾಹಿ ಜ್ಞಾನದ ಖಣಿಯೆ ಪಾಹಿ ಭಕ್ತರ ನಿಧಿಯೆ ಪಾಹಿ ಮತಿಮತಸ್ಥಂಭ ಪಾಹಿ ಶ್ರೀ ಹರಿಯ ದೂತ ಪಾಹಿಸುಗುಣೋದಾರ ಮಹಿಮನೆ ಪಾಹಿನತಜನ ಭಾರವಹಿಪನೆ ಪಾಹಿಜಯಮುನಿ ವಾಯುವಂತರ ಗೇಹ ಸಿರಿಕೃಷ್ಣವಿಠಲ ಭಜಕ 7
--------------
ಕೃಷ್ಣವಿಠಲದಾಸರು
ಯಾತರ | ಜನುಮಾ | ಶಿರಿನಾಥನ ವಲುಮೆಗೆ ದೂರಾದ ನರನಾ ಪ ಉಂಡುಂಡು ವರಗುತ ಕಂಡಲ್ಲಿ ತಿರುಗುತ | ಭಂಡ ಮಾತುಗಳಾಡಿ ದಿನನೂಕುತಾ | ಮಂಡಲೇಶನ ಭಕ್ತಿ ಮಂಡಿಸಿ ಮನದೊಳು | ಖಂಡ ವಿಷಯದಾಶೆ ಗಂಡಲುವವನಾ 1 ಸ್ನಾನ ಸಂಧ್ಯಾನಿಲ್ಲಾ ಧ್ಯಾನ ಮೌನಗಳಿಲ್ಲಾ | ಭವ ಕಾನನವನು ಸೇರಿ | ಶ್ವಾನ ಸೂಕರನಂತೆ ಬಾಳುತಲಿಹನಾ 2 ಹಿಂದಿನ ಪುಣ್ಯದೀ ಬಂದದೀ ನರದೇಹ | ಮುಂದ್ಯಾವ ಗತಿಯೆಂಬ ಬೆಜ್ಜರದೀ | ತಂದೆ ಮಹಿಪತಿ ನಂದನ ಪ್ರಭು ಗೋ | ವಿಂದ ಮುಕ್ಕುಂದೆಂಬ ನಾಮವ ನೆನಿಯದೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಯಾತರ ಸುಖವಯ್ಯಾ ಇದು ಇನ್ಯಾತರ ಸುಖವಯ್ಯಾ ಪ ಶ್ರೀ ತರುಣೀಶನ ಮರೆತು ಸಂಸಾರದಿ ಬಾಳುವುದೆಂತೆನೆ ಅ.ಪ. ಹಣ ಉಳ್ಳ ಮನುಜಂಗೆ ಗುಣವುಳ್ಳ ಸತಿಯಿಲ್ಲ ಗುಣವುಳ್ಳ ಸತಿಯಿರೆ ಗುಣಡೊಂಕುಪತಿಯು ಅನುಕೂಲವಿರೆಎರಡು ತನಯರೊಬ್ಬರು ಇರರು ಗುಣಿಸಿ ನೋಡಲು ಎಲ್ಲು ನ್ಯೂನತೆ ಸರಿಯೈ 1 ವಿತ್ತವಿದ್ದರೆ ಹಿತರು ಬಂಧು ಬಳಗವೆಲ್ಲ ವಿತ್ತವಿಲ್ಲಾದಿರಲು ನಿಂದಿಸಿ ನಗುತಿಹರು ಬತ್ತಲೆ ಬಂದುದು ಬತ್ತಲೆ ಪೋಪುದು ಮತ್ತೆ ಮಮತೆ ಯಾಕೊ ಮಧ್ಯೆ ಮತ್ತಿದ್ದುದಕೆ 2 ಸಂತೆಯತೆರಸರಿ ಸತಿಸುತ ಪರಿಜನ ನಿಂತು ಪೋಪರು ತಮ್ಮಯ ಋಣತೀರೆ ಅಂತ್ಯವಿಲ್ಲ ಸಂಸಾರದ ಶರಧಿಗೆ ಸಂತಸಪ್ರದವೆಂಬ ಭ್ರಾಂತಿಯ ನೀಗಯ್ಯ 3 ಜನನ ಮರಣವೆಂಬ ದುಃಖವೆ ತಾಕಿರೆ ದಿನದಿನ ಪ್ರತಿದಿನ ರೋಗದ ಕಾಟಗಳು ಗುಣಿಸಿ ನೋಡಲು ಮತ್ತೆ ಮನಕೆ ನೆಮ್ಮದಿ ಇಲ್ಲ ಅನಿಲ ಮಂದಿರ ನೊಲಿಸಿ ಗುಣದೂರನಾಗಯ್ಯ 4 ಕಾಲನೆಡೆಗೆ ಜನ ಬೀಳ್ಪುದು ನೋಡಿಯು ಬಾಳು ಸ್ಥಿರವೆಂದು ಕೇಳಿಲಿ ಮುಳುಗುವುದೇ ಬಾಲ ಯೌವ್ವನ ಮತ್ತೆ ಮುಪ್ಪಿಲಿ ಬೀಳುವ ಸ್ಥೂಲ ಶರೀರವೆ ಗೋಳಿನ ಸೆರೆಮನೆಯೈ5 ಊಟ ತಿಂಡಿಗೆ ಮೇಲ್ನೋಟದ ಕೀಟಗೆ ಕರ್ಮ ಮೂಟೆಯ ಘಳಿಸುವರೇ ಭವ ಕಾಟಕ ದಾಟಲು ಘೋಟಕಾಸ್ಯನ ಪದವಾರಿಜ ಪಿಡಿಯೈಯ್ಯ 6 ಮಂದನಾಗದೆ ಬಹು ಮುಂದಿನ ಗತಿ ನೋಡು ವಂದಿಸಿ ಜಯತೀರ್ಥ ವಾಯ್ವಾಂತರ್ಗತ ಪತಿ ಕೃಷ್ಣವಿಠಲನ ಭಜಿಸಲು ಕುಂದುಗಳಿಲ್ಲದೆ ಶಾಶ್ವತಾನಂದವು ಕೇಳಯ್ಯ 7
--------------
ಕೃಷ್ಣವಿಠಲದಾಸರು
ಯಾದವೇಂದ್ರ ಪರಿಮೋದವ ಸೂಸುತ ಹಾದಿಯ ಹಿಡಿದಾನು ತಾಗುಣ ಸಾಂದ್ರ ಯಾದವೇಂದ್ರ ಪ. ಛತ್ರ ಚಾಮರದವರು ಜತ್ತಾಗಿ ನಡೆದರುಚಿತ್ತಜನೈಯನ ಹತ್ತಿರ ಕೆಲರು1 ಆನೆ ಅಂಬಾರಿಯವರು ಶ್ರೀನಿವಾಸನ ಮುಂದೆ ನಾನಾ ಭೂಷಿತರಾಗಿ ಮಾನದಿ ತೆರಳಿ 2 ರಾಜಪುತ್ರರು ದಿವ್ಯ ವಾಜಿಗಳೇರುತ ಬಾಜಾರದೊಳು ವಿರಾಜಿಸಿ ನಡಿಯೆ3 ಮಂದಗಮನೆಯರ ರಥ ಮುಂದಾಗಿ ನಡೆದವುಇಂದಿರೆ ಅರಸನ ಸಂದಣಿ ನೋಡ 4 ಎಲ್ಲೆಲ್ಲಿ ನೋಡಿದರೆ ಪಲ್ಲಕ್ಕಿ ಸಾಲಾಗಿ ಫುಲ್ಲನಾಭನ ಮುಂದೆ ನಿಲ್ಲಿಸಿ ನಡಿಯೆ5 ನೋಡ ಬಂದವರೆಲ್ಲ ಗಾಡಿ ವಯಲುಗಳೇರಿರೂಢಿಗೊಡೆಯನ ಮುಂದೆ ಓಡಿಸಿ ನಡಿಯೆ 6 ತಂದೆ ರಾಮೇಶನು ಬಂದ ಬೀದಿಯ ಸೊಬಗುಇಂದಿರೆವಶವಲ್ಲ ಚಂದಾಗಿ ರಚಿಸೆ 7
--------------
ಗಲಗಲಿಅವ್ವನವರು
ಯಾರ ಭಯವೇನಿಹುದು ಶ್ರೀವೇಂಕಟೇಶ ನೀನೆ ದಯವಾದ ಮೇಲ್ಯಾರ ಹಂಗೇನು ಪ ಪೊಡವಿಯಾಳುವ ದೊರೆಯು ಒಡವೆವೊಯ್ದರೆಯೇನು ಅಡವಿಯೊಳು ಮೃಗಬಂದು ತಡೆದರೇನು ತೊಡೆಯನೇರುವ ಮಗನ ಅಡವಿಗಟ್ಟಿದರೇನು ನೆಗಳು ಕಾಲ್ಪಿಡಿದರೇನು 1 ವ್ಯಾಳ ಬಹುರೋಷದಲಿ ಕಾಲು ಸುತ್ತಿದರೇನು ಕಾಳ ರಾಕ್ಷಸ ಕೈಯ ಪಿಡಿದರೇನು ಜ್ವಾಲೆ ನಾಲ್ದೆಸೆಯಿಂದ ಮೇಲೆ ಮುಸುಕಿದರೇನು ಹಗೆ ತನಗೆ ವಿಷವಿಕ್ಕಲೇನು 2 ಯಾಗಕೋಸುಗ ಮೃಗವ ಹೋಗಿ ತರುವೆನುಯೆಂದು ರಾಗದೊಳು ಬಲವಂತ ಕರೆಯಲಾಗಿ ಮೃಗ ಬಂದು ಬಾಗಿಲೊಳು ಕಾಲ್ಪಿಡಿಯೆ ಆಗ ಬಿಡಿಸಿದವರಾರು ನಾಗಗಿರಿವಾಸ 3 ಕಡುಗಲಿಯು ದ್ರೌಪದಿಯ ಉಡಿಮಡಿಯ ಸೆಳೆವಂದು ಒಡೆಯ ರಕ್ಷಿಸುಯೆಂದು ನಡುಗುತಿರಲು ಮಡದಿಗಕ್ಷಯವಿತ್ತು ನುಡಿದ ಭಾಷೆಯ ಸಲಿಸಿ ಕೊಡಲಿಲ್ಲವೆ ನೀನು ಒಡೆಯ ಗಿರಿವಾಸ 4 ಕೆಡೆನುಡಿದು ಬಾಲಕನ ಅಡವಿಗಟ್ಟಲು ಪಿತನು ಸಡಗರದ ಮಡದಿಯಳ ಮಾತ ಕೇಳಿ ಒಡೆಯ ನೀನೆಯೆಂದು ಕಡುತಪವನರ್ಚಿಸಲು ಉಡುಗಣಕೆ ಮೇಲಾದ ಪದವ ತೋರಿದೆಲಾ 5 ಮೃಗ ಜಲದ ಹೊಂಡದೊಳಗಾಡುತಿರೆ ಕಂಡು ಕಡು ರೋಷದಲಿ ಕಾಲ್ಪಿಡಿಯಲು ಪುಂಡರಿಕಾಕ್ಷನನು ಭಯಗೊಂಡು ಕರೆದರೆ ತುಂಡಿಸಿದೆ ಚಕ್ರದೊಳು ನೆಗಳ ಗಂಟಲನು 6 ಒಬ್ಬನೆ ಪಥದೊಳಗೆ ಸರ್ಬಬಲನೈದುತಿರೆ ಹೆಬ್ಬಾವು ಆತನನು ಮೈಸುತ್ತಲು ಗರ್ಭದೊಳು ನಡುನಡುಗಿ ಉಬ್ಬಸವ ಬಿಡುತಿರಲು ಎಬ್ಬಿಸಿದರಾರಲ್ಲಿ ನಿರ್ಭಯವ ತೋರಿ 7 ದುರುಳ ದೈತ್ಯನು ತನ್ನ ಕುವರನನು ಕೊಲುವುತಿರೆ ಭರದಿಂದ ಕಂಬದೊಳು ಹೊರಟು ಬಂದು ನರಹರಿಯ ರೂಪದಲಿ ಕರುಳ ಮಾಲೆಯ ಧರಿಸಿ ತರಳನನು ಕಾಯಿದವರಾರು ಶ್ರೀಹರಿಯೆ 8 ಉರಿಯ ಮನೆಯಂದರಿಯದರಸರೈವರ ಹೊಗಲು ಇರಿಸಿರ್ದ ಬಾಗಿಲೊಳು ಉರಿ ಮುಸುಕಲು ಬೆರಸಿರ್ದ ನಿದ್ರೆಯೊಳು ಇರಿಸಿ ಕಾಯಿದವರಾರು ಕರೆಸಿ ದ್ರೌಪದಿಯನ್ನು ಕೊಡಿಸಿದವರಾರು 9 ಚಂದ್ರಹಾಸನು ವಿಷವ ತಿಂದು ಸಾಯಲಿಯೆಂದು ತಂದೆ ಬರೆದಿಹ ಲಿಖಿತ ನಂದನನು ನೋಡಿ ಮಂದಗಮನೆಯ ಕೊಟ್ಟು ಚಂದ್ರಹಾಸನ ನಿಲಿಸಾ ನಂದಳಿದ ಮಾಯವೇನೆಂದು ಹೇಳಯ್ಯ 10 ಕಾಯ ಭಯ ಹೊರತಾಗಿ ಮೀರಿದಾಪತ್ತಿನಲಿ ಕಡೆ ಸೇರಿಸೊ ಭೂರಮಣ ವರಾಹತಿಮ್ಮಪ್ಪ ಚರಣವನು ಕುಲಿಶ ನೀನಾಗು 11
--------------
ವರಹತಿಮ್ಮಪ್ಪ
ಯಾರಂದರೇನು ಫಲವದೆ ನಮ್ಮ ದೃಷ್ಟ ಈ ರೀತಿ ಕಾಡಲು ಬರಿದೆ ಪ ಯಕ್ಷ ಕಿನ್ನರಾದಿವಂದಿತ ಪರಮಾತ್ಮ ಜಲ- ಜಾಕ್ಷ ಕೃಷ್ಣ ಮಾಧವಾಚ್ಯುತ ಪಕ್ಷಿವಾಹನ ಪಾಲಿಸು ಕರಿವರದ ಬೇಗನೆ ನೀನು ಪೇಕ್ಷಿಸದೆ ರಕ್ಷಿಸೆನ್ನ 1 ಇನ ಶಶಿ ಕುಜರಾಹು ಗುರುಬಲ ಇದರ ಮೇಲೆ ಶನಿ ಸೌಮ್ಯ ಕೇತು ಶುಕ್ರ ಗ್ರಹಗಳ ಘನದಿ ಸುಫಲ ಲೇಶಕಾಣದೆ ಬಳಲುವ ವೇಳೆ ಅನಿಮಿಷರೊಡೆಯನ ಮೊರೆ ಹೋಗದೆ 2 ಪರಮ ಪುರುಷ ಪತಿತ ಪಾವನ ಬಿರುದುಳ್ಳ ಹೆನ್ನೆಪುರನಿಲಯ ನರಹರಿ ಚರಣ ಸ್ಮರಣೆ ಹರುಷದಿಂದ ನಿರುತ ಮನದೊಳಾವಾಗ ಪರರ ನಿಂದೆಗೊಳಗಾಗಿ ವೃಥಾ 3
--------------
ಹೆನ್ನೆರಂಗದಾಸರು
ಯಾರಯ್ಯ ನೀನ್ಯಾರಯ್ಯ ಪ ಸೋರುತಿರುವ ಸೌಂದರ್ಯದಿ ಮನವನು ಸೂರೆಯಗೊಂಬ ನೀನ್ಯಾರಯ್ಯ ಅ.ಪ ನಂದನ ಕಂದ ನೀನಾದರೆ ಗೋವ್ಗಳ ಮಂದೆಯ ಬಿಟ್ಟು ಬಂದಿಹುದೇಕೆ ಸಂದೇಹವು ತೋರುತಲಿವೆ ನಿನ್ನನು ಎಂದಾದರು ನಾ ಬಯಸಿದೆನೆ 1 ನೀರಿಗೆ ಬಂದೆನು ನಾನಿಲ್ಲಿ ಯಾರು ಪೇಳಿದರು ಎನ್ನ ಸುದ್ದಿ ಮಾರನ ತಾತ ನೀನಿರಬಹುದು ಯಾರ ಮಾತ ಕೇಳುವಳಲ್ಲ 2 ಬಿಂದಿಗೆ ಭಾರವು ಜಗಿಯುತಿದೆ ಮಂದಸ್ಮಿತವೆನ್ನ ಬಿಗಿಯುತಿದೆ ತಂದೆ ಪ್ರಸನ್ನ ಕೈಮುಗಿಯುವೆನು ಮಂದಿರ ಮಾರ್ಗವು ಸಿಗಲೆನಗೆ 3
--------------
ವಿದ್ಯಾಪ್ರಸನ್ನತೀರ್ಥರು