ಒಟ್ಟು 1628 ಕಡೆಗಳಲ್ಲಿ , 101 ದಾಸರು , 1300 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಮ ಶ್ರೀರಾಮ ಸೀತಾರಾಮ ಶ್ರೀರಾಮರಾಮನೆ ರವಿಕುಲಸೋಮಶ್ರೀರಾಮಪರಾಮ ರಾಮ ರಘುರಾಮನೆ ದಶರಥರಾಮನೆ ಗುಣಗಣಧಾಮನೆ ಶ್ರೀರಘು ಅ.ಪಕೌಸಲ್ಯಾದೇವಿಯ ಕಂದನೆ ರಾಮಕೌಶಿಕಯಜÕವ ಕಾಯ್ದ ಶ್ರೀರಾಮಹಿಂಸಿಸಿದ ತಾಟಕಿಯನು ಕೊಂದರಾಮಧ್ವಂಸಮಾಡಿದೆ ಶಿವಧನು ಮುರಿದುರಾಮಸಂಶಯವಿಲ್ಲದೆ ಸೀತೆಕರವಪಿಡಿದುತನ್ನಂಶದ ಪರಶುರಾಮನಿಗೊಲಿದನೆ ಶ್ರೀ 1ದಶರಥರಾಮ ನೀನರಸನಾಗೆನಲುಅಸುರಾವೇಶದಿ ಕೈಕೆ ವರವ ಯಾಚಿಸಲುಎಸೆವ ಸಿಂಹಾಸನ ತೊರೆದು ಪೊರಮಾಡಲುಶಶಿಮುಖಿಸೀತಾಲಕ್ಷ್ಮಣರ ಕೂಡಿ ಬರಲುಭರತಗೆ ಪಾದುಕೆ ಕೊಡುತಲಿ ಕಳುಹಿಸಿಗುಹನ ಮನ್ನಿಸಿ ವನರಾಜ್ಯದೊಳ್ ಮೆರೆದೆ 2ವನದೊಳುಮಾಯಾಮೃಗವ ಕಂಡು ಸತಿಯುಮನದಿ ಚಿಂತಿಸಿರಾಮ ತೆರಳೆ ರಕ್ಕಸನುವನಜಾಕ್ಷಿ ಸೀತೆಯ ಕಳವಿನಿಂ ತರಲುವನವನಚರಿಸಿ ಪುಡುಕೆ ಕಂಡು ಕಪಿವರನುಶರಧಿಲಂಘಿಸಿ ಸೀತೆಯನು ಕಂಡು ಹನುಮನುಕುರುಹು ಪಡೆದು ಲಂಕೆ ದಹಿಸುತ ಬರಲು 3ಸೇತುಬಂಧನ ಮಾಡಿ ಕಪಿಗಳ ಕೂಡಿನೀತಿ ಪೇಳಿದ ವಿಭೀಷಣಗಭಯ ನೀಡಿಭೂತ ರಾವಣನ ದಶಶಿರವ ಚಂಡಾಡಿಸೀತಾಸಹಿತ ರಾಮ ಪುಷ್ಪಕವನೇರಿಆತುರದಿಂದಿಹ ಭರತನಿಗ್ವಾರ್ತೆಯಪ್ರೀತಿಲಿ ಕಳುಹಿದ ಶ್ರಿ ರಘುರಾಮ 4ಬಂದ ಶ್ರೀರಾಮಚಂದ್ರ ಬಹುಪ್ರೀತಿಯಿಂದಛಂದದಿಂ ಭರತನ ಮನ್ನಿಸಿ ಮುದದಿಂದಕುಂದಣಮಯದ ಸಿಂಹಾಸನ ಚಂದ-ದಿಂದಲೇರುತ ರಾಮ ನಸುನಗೆಯಿಂದಇಂದಿರಾಸೀತಾ ಸಹಿತ ಅಯೋಧ್ಯದಿಬಂದು ಪೊರೆವ ಕಮಲನಾಭ ವಿಠ್ಠಲನು 5
--------------
ನಿಡಗುರುಕಿ ಜೀವೂಬಾಯಿ
ರಾಮಸ್ಮರಣೆಯಿಂದ ಸಕಲ ಪಾಪಹರ ರಾಮ ರಾಮ ಎನ್ನಿರೊವ್ಯೊಮಕೇಶನ ದಿವ್ಯತಾರಕ ಮಂತ್ರವು ಪ.ಶತಕೋಟಿ ರಾಮಾಯಣದ ಬೀಜಾಕ್ಷರ ರಾಮ ರಾಮ ಎನ್ನಿರೊಕ್ಷಿತಿಜೆಯ ಪ್ರಾಣದ್ವಲ್ಲಭ ಶ್ರೀದಶರಥರಾಮ ರಾಮ ಎನ್ನಿರೊ 1ಪಾಮರರೆಲ್ಲರು ಪಂಡಿತರಾದರು ರಾಮ ರಾಮ ಎನ್ನಿರೊಆ ಮೋಕ್ಷ ಕರತಳವಾಹುದು ಕೊಂಡಾಡೆ ರಾಮ ರಾಮ ಎನ್ನಿರೊ 2ಮಖಕೋಟಿಗಧಿಕ ಮಹಾಪುಣ್ಯದಾಯಕ ರಾಮ ರಾಮ ಎನ್ನಿರೊಮುಕ್ತಾಮುಕ್ತಾರ್ಚಿತ ಕರುಣವಾರಿನಿಧಿ ರಾಮ ರಾಮ ಎನ್ನಿರೊ 3ಭಕ್ತವತ್ಸಲ ಭಾಗ್ಯಭೂಷಿತಭವಹರರಾಮ ರಾಮ ಎನ್ನಿರೊನಿಖಿಲ ಭುವನಪತಿ ಬ್ರಹ್ಮಾದಿಸುರವಂದ್ಯ ರಾಮ ರಾಮ ಎನ್ನಿರೊ 4ಅಂಜನೆಜಾತಪೂಜಿತ ಪಾದವಾರಿಜ ರಾಮ ರಾಮ ಎನ್ನಿರೊಕಂಜನೇತ್ರಕಂಜಸಖಅನಂತಪ್ರಭ ರಾಮ ರಾಮ ಎನ್ನಿರೊ5ದಶಶಿರಮರ್ದನ ವಿಭೀಷಣ ವರಪ್ರದ ರಾಮ ರಾಮ ಎನ್ನಿರೊಸುಶರಧಿ ಬಂಧನ ಸುಗ್ರೀವ ಸಂಸೇವ್ಯ ರಾಮ ರಾಮ ಎನ್ನಿರೊ 6ಲಕ್ಷ್ಮಣ ಭರತ ಶತ್ರುಘ್ನಾರಾಧಿತ ರಾಮ ರಾಮ ಎನ್ನಿರೊಋಕ್ಷವರಪ್ರದ ರಘುಕುಲಾಂಬುಧಿಚಂದ್ರ ರಾಮ ರಾಮ ಎನ್ನಿರೊ 7ಜ್ಞಾನಾನಂದ ಬಲಾತ್ಮ ಪರಬ್ರಹ್ಮ ರಾಮ ರಾಮ ಎನ್ನಿರೊಮೌನಿನಿಕರಧ್ಯೇಯಪುಣ್ಯಪುರುಷಗೇಹ ರಾಮ ರಾಮ ಎನ್ನಿರೊ8ಪ್ರಸನ್ನಮೂರುತಿ ಪ್ರಸನ್ನಾನನ ಪರಮಾತ್ಮ ರಾಮ ರಾಮ ಎನ್ನಿರೊಪ್ರಸನ್ನನಿಲಯ ನಿತ್ಯಪ್ರಸನ್ನವೆಂಕಟ ರಾಮ ರಾಮ ರಾಮ ಎನ್ನಿರೊ 9
--------------
ಪ್ರಸನ್ನವೆಂಕಟದಾಸರು
ರಾಯನ ನೋಡಿರೋ - ಮಧ್ವ - ರಾಯನ ಪಾಡಿರೊ ಪಅಂಜನೆಯಲಿ ಹುಟ್ಟಿ ಅಂಬರಕಡರಿದಹರಿಯೋ - ಸಿಂಹದ - ಮರಿಯೋ |ಕಂಜಾಕ್ಷಿಯ ಸುದ್ದಿಗೆ ಶರಧಿಯ ಲಂಘಿಸಿದ-ಪುರ- ಸಂಧಿಸಿದಅಂಜದೆ ವನವನು ಕಿತ್ತಿದ ಪುರವನುಸುಟ್ಟ - ತಾ ಬಲು - ದಿಟ್ಟಾ |ಸಂಜೀವನ ಗಿರಿ ತಂದು ವಾನರರಪೊರೆದಾ - ರಾಮನ - ಬೆರೆದಾ 1ಕುಂತಿ ಕುಮಾರನು ಶೀಮೆಗೆ ಹರುಷದಿಬೆಳೆದ - ಖಳರನು - ತುಳಿದ |ಅಂತ ಕೌರವ - ದುಶ್ಯಾಸನರಾ ಶಿರತರೆದಾ - ಚಲವನು - ಮೆರೆದ |ಸಂತಾಪವ ಪಡಿಸಿದ ಕುಜನಕೆ ಭೀಮ -ನಾದ -ಸನ್ನುತ- ನಾದ |ಕಂತುಜನಕಶ್ರೀ ಕೃಷ್ಣನ ಪಾದದಿಬಿದ್ದ - ಮದಗಜ - ಗೆದ್ದ 2ಮುನಿಕುಲದಲಿ ಉದಿಸಿದ ಗುರುಮಧ್ವ ತಾನಾದ - ಧರೆಯಲಿ - ಮೆರೆದ |ಅನಿಮಿಷರೊಡೆಯ ಶ್ರೀವೇದವ್ಯಾಸರಚರಣ-ಅನುದಿನ- ಸ್ಮರಣ |ಕನಸೊಳು ಕಾಣದ ಅದ್ವೈತಂಗಳಮುರಿದ - ತತ್ತ್ವ - ತೋರಿದ |ಘನಮಹಿಮ ಶ್ರೀಪುರಂದರವಿಠಲನದಾಸ - ಪಡೆದ - ಸನ್ಯಾಸ 3
--------------
ಪುರಂದರದಾಸರು
ರುದ್ರದೇವರು157ಪಾಹಿಮಾಂಪಾಹಿಪಾರ್ವತೀಪತೆಪ.ಪಾಹಿಪಾಹಿಗಂಗಾಹಿಮಕರಧರದೇಹಿಕ ಸುರತರೊ ಮೋಹನಮೂರ್ತೆ 1ದರ್ಪಕಮದಹರ ಅರ್ಪಕಮಂದರಸರ್ಪವಿಭೂಷಣ ಕರ್ಪುರಕಾಯ2ಗುಹಗಣಪತಿಪಿತ ಗಜಮಥನವೃಷವಾಹನಪೂಜಕ ವಾಹಿನಿಪಾಲ3ತ್ರ್ಯಂಬಕ ದುರಿತಕದಂಬ ನಿವಾರಕಸಾಂಬಸದಾಶಿವ ಅಂಬರಕೇಶ4ಕಪಟಿ ಜನಾರ್ದಕ ತಪನನಿಚಯಧುತೆತ್ರಿಪುರಾಂತಕ ಭವವಿಪಿನಕೃಶಾನೊ 5ಪ್ರಮಥಜನಾರ್ಥಿತ ಅಮಿತ ದಯಾನಿಧೆಸುಮತಿ ಕುಲೇಶ್ವರ ಕುಮತಿಖಳಾರೆ 6ಕರುಣಾಕರ ಸುಖಕರಣಭುವನನುತಚರಣಯುಗಳ ಖಳವಾರಣ ಪ್ರಹರಣ 7ಶೂಲಡಮರ ಸುಕಪಾಲಧರ ಶಿರೋಮಾಲಾನ್ವಿತ ಗುಣಜಾಲ ಸುಶೀಲ 8ಭಾಸುರಶುಭಕೈಲಾಸನಿಲಯಭೂತೇಶಪ್ರಸನ್ವೆಂಕಟೇಶ ಭಟೇಶ 9
--------------
ಪ್ರಸನ್ನವೆಂಕಟದಾಸರು
ಲಕ್ಷ್ಮೀದೇವಿನೀನನ್ನ ಹೇಳಬಾರದೇನೆ ತಾಯಿನಿನನ್ನವಾನರವಂದಿತ ಶ್ರೀನಿವಾಸಗೆ ಬುದ್ಧಿ ಪಶ್ರೀನಿಧಿಪರನೆಂದು ನಂಬಿ ಬಂದ ಬಡಪ್ರಾಣಿಯ ಪೊರೆಯಂದು ಜಾನಕಿ ದೇವಿಯೇ 1ಮೊರೆ ಹೊಕ್ಕವರಕರಪಿಡಿವನೆಂಬೊ ಘನಾಬರದು ಉಳಿಸಿಕೊ ಎಂದ್ಹರುಷದಿ ಸಿರಿದೇವಿ 2ಉರಗಶಾಯಿ ಶಿರಿಗೋವಿಂದ ವಿಠಲ ತುರುಗಗ್ರೀವನರಹರಿಗೆ ತ್ವರಿತದಲ್ಲಿ 3
--------------
ಸಿರಿಗೋವಿಂದವಿಠಲ
ವಂದಿಸಿದರ ಕಾವೆ ವರವನೀವೆ ಅಹಿಪವೀಂದ್ರಭವಸುರರಗುರುಮಧ್ವಮುನಿರಾಯಪ.ಒಂದೊಂದುಶ್ರುತಿಸ್ಮøತಿಗೆ ಬಹ್ವಾರ್ಥಗಳ ಪೇಳದೆಒಂದೆರಡು ತತ್ವವಿಸ್ತರವ ಪೇಳಿದೆಒಂದು ಮೂರವತಾರದಲ್ಲಿ ಹರಿಯನೆ ಒಲಿಸಿಒಂದು ನಾಲ್ಕರ ಭೇದ ನಿಜರಿಗರುಹಿದೆಯ 1ಒಂದೈದು ರಿಪುವರ್ಗ ನಿಗ್ರ್ರಹವ ಮಾಡಿಸಿದೆಒಂದಾರು ತ್ರಿಗುಣಿಸಿದ ಮತವ ಮುರಿದೆಒಂದೇಳು ಮದವ ಕಾಲಲಿ ಮೆಟ್ಟಿ ಹರಿಪುರಕೆಒಂದೆಂಟು ಭಕುತಿಪಥ ತೋರ್ದೆ ವೈಷ್ಣವರಿಗೆ 2ಒಂದು ಒಂಬತ್ತು ಹರಿಯವತಾರ ಕಥೆ ರಚಿಸಿಒಂದು ಹತ್ತೇಂದ್ರಿಯದ ಗೆಲವ ಕಳಿಸಿಒಂದು ಹನ್ನೊಂದು ಸ್ತೋತ್ರದಿ ಕೃಷ್ಣನ ಮೆಚ್ಚಿಸಿದೆಒಂದು ಹನ್ನೆರಡು ತತ್ವದಾಗ 3ಒಂದು ಹದಿಮೂರು ಭುವನಗಳಲ್ಲಿ ನೀ ವ್ಯಾಪ್ತಒಂದು ಹದಿನಾಲ್ಕು ದ್ವಿಗುಣಿಸಿದ ಮ್ಯಾಲೇಳೊಂದಿದ ಸದ್ಗ್ರಂಥಗಳ ನಿರ್ಮಿಸಿ ಬುಧರಿಗಿತ್ತೆಒಂದು ಹದಿನೈದು ಗುಣದ ಲಕ್ಷಣಾಂಗ 4ಒಂದು ಹದಿನಾರೆಂಟು ತತ್ವ ಸಿದ್ಧಾಂತದಲಿಒಂದು ಹದಿನೇಳು ಪರ್ವಮೋಹಕ ಬಿಡಿಸಿದೆಒಂದು ಮನದಿಂದ ಶಿರಿ ಪ್ರಸನ್ನವೆಂಕಟ ಕೃಷ್ಣನಒಂದೊಂದು ಗುಣಕೆ ಅನಂತ ವ್ಯಾಖ್ಯಾನ 5
--------------
ಪ್ರಸನ್ನವೆಂಕಟದಾಸರು
ವಂದಿಸಿದರೆ ವಂದ್ಯರು ಪೂಜಿತರು ಮುಕುಂದಗೋವಿಂದ ಶ್ರೀಹರಿಯನ್ನುಎಂದೆಂದು ಕುಂದದಾನಂದವೈದಿಸುವಇಂದಿರೆಯರಸ ಭವಬಂಧಮೋಚಕನ ಪ.ಹತ್ತಶ್ವಮೇಧಾವಭೃಥಸ್ನಾನ ಮಾಡಲುಮತ್ರ್ಯರ್ಗೆ ಪುನರ್ಜನ್ಮಗಳಿಲ್ಲವೊಸತ್ಯಭಾಮಾಧವನಿಗೆ ನಿಷ್ಕಾಮದಿ ನಮಿಸಿಮತ್ತೊಮ್ಮೆ ನಮಿಸೆ ಮುಕ್ತಿಗೆ ಸಾಧನ 1ಕೋಟಿಸಹಸ್ರ ತೀರ್ಥಗಳಲಿ ಮಿಂದುಕೋಟಿಸಹಸ್ರ ವ್ರತಗಳಾಚರಿಸೆಕೋಟಿ ಭಾಂತಕಗೆ ನಮಿಸಿದ ಫಲಕೆ ಸರಿ ಪಾಸಟಿಷೋಡಶಕಳೆಯೊಳೊಂದಲ್ಲ2ಹೇಳೆನೆ ಇಂದಾದರು ನಮಿಸಿ ಶ್ರೀಲೋಲಶಾಙ್ರ್ಗಪಾಣಿಯನಸಾಲು ಜನ್ಮದಘವ ಹಾಳುಮಾಡಿ ಮುಕ್ತಿಓಲಗಕೆ ಕರೆವ ವೈಷ್ಣವ ಜನರ 3ಉರಶಿರದೃಷ್ಟಿಲಿ ಮನವಾಚದಲಿಚರಣಕರಗಳಲಿ ಜಾನುಗಳಲಿಧರೆಯಲಿ ಅಷ್ಟಾಂಗಪ್ರಣಾಮ ಮಾಳ್ಪರ್ಗೆಹರಿದು ಹೋಗೆ ಪಾಪವರ ಮುಕ್ತಿಈವ4ಸರುವಾಂಗವ ಧರೆಗೊಂದಿಸಿ ಭಕುತಿಲಿಹೊರಳಾಡಿ ಭೂಮಿಲಿ ಪರವಶದಿಹರಿಗೆ ನಮಿಸಲು ಮೈಗೊರೆದ ಧೂಳಿಯ ಕಣಾಪರಿಮಿತ ಸಹಸ್ರಾಬ್ದ ಪರಮಾಣ ಪದವಕ್ಕು 5ಸಿರಿಅಜಭವೇಂದ್ರಸುರರುಮಹಾಮುನಿನಿಕರನೃಪಮನುಜೋತ್ತಮರೆಲ್ಲಪರಮಭಕುತಿಲಿ ನಮಿಸೆ ಹರಿವಶನಾಗುವಹರಿಜನಕೆ ಮುಕ್ತಿಪಥಕಿದೆ ಪಾಥೇಯ 6ಅರ್ಚಿತ ಕೃಷ್ಣನ ನೋಡುತಾನಂದಾಶ್ರುಹುಚ್ಚನಂತೆ ನಮಿಸಿ ನಗುತ ಸುರಿಸಿಅಚ್ಯುತಾನಂತ ಸದ್ಗುಣನಿಧಿ ಭಕ್ತಪ್ರಿಯನಿಚ್ಚಪ್ರಸನ್ವೆಂಕಟನೆಂದುಚ್ಚರಿಸಿ7
--------------
ಪ್ರಸನ್ನವೆಂಕಟದಾಸರು
ವನಿತೆ ನೀ ತೋರಿಸೆ ಹನುಮನ ಬೇಗ |ತನು-ಮನ-ಧನವನು ನಿನಗೀವೆನೀಗ ಪಆತುರದಿಂದಲಿ ಉದಧಿಹಾರಿದವನ |ಪ್ರೀತಿಯಲಿ ರಾಮನ ಮುದ್ರೆಯಿತ್ತವನ ||ಘಾತಕರನ್ನು ಮುರಿದಟ್ಟಿದವನ -ಸತಿ|ಸೀತೆಯಪತಿರಘುನಾಥಗರ್ಪಿಸಿದನ1ಪಾಂಡುನಂದನನಿಗೆ ಅನುಜನಾಗಿಹನ |ಪುಂಢರೀಕಾಕ್ಷನ ಚರಣಸೇವಿಪನ ||ಪುಂಡ ಕೌರವ ಶಿರವ ಚೆಂಡನಾಡಿದವನ 2ಎರಡು ಮೂರಾರೊಂದು ಕುಮತ ಖಂಡಿಸಿದನ |ಭರದಿ ಮಧ್ವಮತ ಉದ್ಧರಿಸಿದನ ||ಧರೆಯೊಳಧಿಕ ಶ್ರೀಹರಿಯ ಭಜಕನ |ವರದ ಶ್ರೀಪುರಂದರವಿಠಲರಾಯನ3
--------------
ಪುರಂದರದಾಸರು
ವಾಯು ದೇವರುಮುದದಿ ಪಾಲಿಸೊ ಮುದತೀರಥ ರಾಯಾಸದ್ಬುಧ ಜನ ಗೇಯಾ ಪಪದುಮನಾಭ ಪದ ಪದುಮ ಮುದುಪ ಸದಯಾಸದಮಲಶುಭಕಾಯಾ ಅ.ಪ.ವದಗಿರಾಮ ಕಾರ್ಯದಿ ನೀ ಮನಸಿಟ್ಟಿಲಂಕಾಪುರ ಮೆಟ್ಟಿಹೆದರದೆ ದಿತಿಜರನೆಲ್ಲ ಕೊಂದು ಬಿಟ್ಟೆಪುಚ್ಚದಿಪುರ ಸುಟ್ಟಕದನದಿ ಭೀಮವೃಕೋದರ ಜಗಜಟ್ಟಿಸಂನ್ಯಾಸ ತೊಟ್ಟಿ 1ಸೀತಾಶೋಕವಿನಾಶನ ಮಹಂತಾಮಹಬಲಿ ಹನುಮಂತದಾತಜವಾರಿಜಜಾತನಾಗುವಂತಾಖ್ಯಾತಿಯುಳ್ಳವಂಥಾಕೋತಿರೂಪಿಧರ್ಮಾನುಜಜಯವಂತಯತಿನಾಥನೆ ಶಾಂತಾ 2ಶಿರಿಗೋವಿಂದ ವಿಠಲನ ಪ್ರೀತಿ ಕಂದಾಭೀಮನೆ ಆನಂದಾಗರಿದು ಮುರಿದು ಪರಮತವನೆಆನಂದಾ ಮುನಿ ರೂಪದಲಿಂದ ಶಿರಿರಾಮನಸುತರ ಪ್ರೀಯ ಭರದಿಂದಾಬದರಿಗೆ ನಡೆ ತಂದಾ 3
--------------
ಸಿರಿಗೋವಿಂದವಿಠಲ
ವಾಯುದೇವರು152ಎಣೆಗಾಣೆ ಭುವನದಿ ಶ್ರೀರಾಮಚಂದ್ರನ ಪ್ರಿಯವೀರಹನುಮ ಘನಧೀರ ಪ.ಬ್ರಹ್ಮ ಪಿತೃ ಪಾದಕ್ಕೆರಗಿ ಉಮ್ಮಯದಿ ಕೊಂಡಾಜೆÕಸಮನೆಶರಧಿಗೋಷ್ಪದ ಮಾಡಿ ಹೋಗ್ಯಮ್ಮ ಜಾನಕಿಗೆ ಪರಬೊಮ್ಮನುಂಗುರವಿತ್ತುಹಮ್ಮಿನ ನಿಶಾಚರನಿಗುಮ್ಮಳಿಕೆನಿತ್ತೆ 1ಕ್ರೀಡೆಯಿಂ ದಶಶಿರನನೊಡೆವನಾಯದೆ ಶಿಥಿಲಮಾಡುವನಾಗಿನಾ ಮಾತನಾಡಿ ರಮೆಯಚೂಡಾಮಣಿಯ ತಂದು ನೀಡಿ ರಾಘವಗೆ ಸುಖಮಾಡಿಸಿದೆ ಅಪ್ರತಿಮಾರುತಿ ಅತಿಧೀರ 2ಗರುವಿನ ಖಳನ ವನದತರುವಿಟಪಮೂಲಸಹಮುರಿದು ಕರಚರಣದಿ ತಂದಾನೆರದ ರಿಪುರಕ್ಕಸರ ತರಿ ತರಿದು ಮರಲುಂದಿ ರಭಸದಿಂದಸುರಪುರವನುರುಹಿದೆ 3ಕದನಕರ್ಕಶರಿಪುಗಳೆದೆಯೊದೆದು ಕೋಟಿ ಸಿಂಹದ ರಭಸದಿನಲ್ಲಿ ಬಿಸುಟಿ ಉದಧಿಯಲ್ಲಿಸುದುರ್ಲಭಾದ ನಾಕೌಷಧವ ತಂದು ರಣದಿ ಮಲಗಿದ ವೀರರಸುಗಾಯಿದೆ ಅದ್ಭುತ ಮಹಿಮ 4ಸೀತಾಪತಿಯ ಪ್ರೀತಿಯತ್ಯಾದರದಿ ಪಡೆದು ವಿಷಯಾತೀತನಾಗಿ ವಿಧಾತನಾದೆವಾತಜಾತನೆ ನಿಮ್ಮ ಖ್ಯಾತಿಯ ಹೊಗಳಲಳವೆನಾಥ ಪ್ರಸನ್ನವೆಂಕಟ ದಾತನಿಗೆ ದೂತ 5
--------------
ಪ್ರಸನ್ನವೆಂಕಟದಾಸರು
ವಾವೆಯೆಲ್ಲಿಹುದಯ್ಯ ವೈಕುಂಠಪತಿಗೆ |ದೇವಭಾರ್ಗವನಾಗಿ ಮಾತೆಯ ಶಿರವ ಕಡಿದ ಪಒಬ್ಬ ಮಾವನ ಕೊಂದ, ಒಬ್ಬ ಮಾವನನೆಸೆದ |ಒಬ್ಬ ಮಾವನ ಕೂಡೆ ಕಡಿದಾಡಿದ ||ಒಬ್ಬ ಭಾವನ ಹಿಡಿದು ಹೆಡಗೈಯ ಕಟ್ಟಿದನು |ಒಬ್ಬ ಭಾವಗೆ ಬಂಡಿ ಬೋವನಾದ 1ಕುಂಭಿನಿಗೆ ಪತಿಯಾದ ಕುಂಭಿನಿಗಳಿಯನಾದ |ಕುಂಭಿನೀಪತಿಯ ಸಂಹಾರ ಮಾಡಿದ ||ಅಂಬುಧಿಗೆ ಪಿತನಾದ ಅಂಬುಜೆಗೆ ಪತಿಯಾದ |ಅಂಬುಜಾಸನಗೆ ತಾ ಸ್ವಾಮಿಯಾದ 2ಮೊಮ್ಮನನು ಮಲಗಿಸಿದ ಅವನ ಹೆಮ್ಮಕ್ಕಳನು |ಇಮ್ಮೆಯ್ಯವರಿತು ಸಂಹಾರ ಮಾಡಿದ- ||ರಮ್ಯ ಮೂರುತಿ ಪುರಂದರವಿಠಲ ದೇವೇಶ |ಬೊಮ್ಮಮೂರುತಿಗೆಲ್ಲಿ ಬಂಧು ಬಳಗ 3
--------------
ಪುರಂದರದಾಸರು
ವಿರುಪಾಪುರ ವೇಂಕಟರಮಣನಿತ್ಯxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಸ್ಮರಿಸುವೆ ನಿನ್ನಚರಣನಿನ್ನಯ ಕರುಣಾ ಪಘನ್ನ ಕೀರುತಿಬ್ಯಾಗಬನ್ನಬಡಿಪರೇನೊ ಈಗ1ಅನ್ಯಾಯಕಾರಿ ಕೊನಿಗೆ 2ಆತಿಹ ಬೇಲಿಯು ಕುಲಮೇಯೆನರನಾಥನು ಸರ್ವಾಪಹಾರವು ಗೈಯೆ 3ಆರಿಗೆ ಉಸರಿದೇನು ಕಂ -ಸಾರಿ ಮನದಿ ಭಜಿಸುವೆನು 4ಶಿರಿಗುರುಜಗನ್ನಾಥ ವಿಠಲಮರೆಯದೆ ಪಾಲಿಸೊದಾತಾನಿನಪದದೂತರ ದೂತನೊ ಶಿರಿನಾಥಾ 5
--------------
ಗುರುಜಗನ್ನಾಥದಾಸರು
ವೀರ ಬಂದ ವೀರ ಬಂದಘೋರಹಮ್ಮುಎಂಬ ದಕ್ಷನತೋರ ಶಿರವರಿಯಲೋಸುಗಪಭಯನಿವಾರಣವೆಂಬ ಕಾಸೆಯನೆ ಹೊಯ್ದಜಯಶೇಖರನೆಂಬ ವೀರ ಕಂಕಣಕಟ್ಟಿನಿಯತ ಸಾಹಸವೆಂಬ ರತ್ನ ಮುಕುಟವಿಟ್ಟುಸ್ವಯಂ ಸೋಹಂ ಎಂಬ ಕುಂಡಲವ ತೂಗುತ1ಆಡಲೇನದ ಶುದ್ಧವೆಂಬ ಭಸಿತವಿಟ್ಟುರೂಢಿಯ ಸತ್ಪವೆಂದೆಂಬ ಹಲಗೆಯಾಂತುಇಡಾಪಿಂಗಳವೆಂಬ ಪಾವುಗೆಗಳ ಮೆಟ್ಟಿಗಾಢ ಧೈರ್ಯವೆಂಬ ಖಡುಗ ಝಳಪಿಸುತ2ಒಂದೊಂದೆ ಹೆಜ್ಜೆಯನಂದು ಪಾಲಿಸುತಾಗಹಿಂದೆಡಬಲ ನೋಡದೆ ಮುಂದು ನಿಟ್ಟಿಸಿಛಂದಛಂದದಲಾಗುವಣಿ ಲಗುವಿನಿಂದಬಂದನು ಬಹು ಶೂರಧೀರ ಮಹಾವೀರ3ದಾರಿ ಊರುಗಳನೆ ಧೂಳಿಗೋಂಟೆಯ ಮಾಡಿಆರಾಧರೇನು ಶಿಕ್ಷಿಸುವೆನೆಂದೆನುತಭೇರಿಕರಡಿ ಸಮ್ಮೇಳಗಳೊಡಗೂಡಿಕಾರಣವಹ ಯಜÕಮಂಟಪದೆಡೆಗಾಗಿ4ಸುಷುಮ್ನವೆಂದೆಂಬ ಬಾಗಿಲ ಮುರಿಯುತ ಆಸಮಯದಿ ಬಂದ ಅಸುರರ ಕೊಲ್ಲುತಭೇಸರಿಸುವ ದೊರೆ ದೊರೆಗಳನಿರಿಯುತದ್ವೇಷರೆನಿಪ ಷಡುರಥಿಕರ ಕಟ್ಟುತ5ಅಷ್ಟಸಿದ್ಧಿಗಳೆಂಬ ದಿಕ್ಪಾಲಕರ ನಟ್ಟಿಭ್ರಷ್ಟ ಮೋಹವದೆಂಬ ಯಮನ ಹಲ್ಮುರಿದೆತ್ತಿನಷ್ಟಮನವೆಂಬ ಬೃಗುವಿನ ಮೀಸೆಯ ಕಿತ್ತುಶಿಷ್ಟಶಿಷ್ಟರನು ಎಲ್ಲರ ಕೆಡೆಮೆಟ್ಟಿ6ಹಮ್ಮುತಾನಾಗಿರುತಹಉನ್ಮತ್ತದಕ್ಷನ ಶಿರವನು ತರಿಯುತಲಾಗಗಮ್ಮನೆ ತ್ರಿಕೂಟ ಯಜÕಕುಂಡದೊಳುಸುಮ್ಮನಾಹುತಿಯಿಟ್ಟು ಸುಲಭದಲಿ ನಲಿಯುತ7ಪಾಪರೂಪನಾದ ಜೀವದಕ್ಷನನುಈ ಪರಿಯಲಿ ಕೊಂದು ನಾಟ್ಯವಾಡಲುಭಾಪುರೇ ಎಂದು ಸಾಧು ಪ್ರಮಥರು ಹೊಗಳಲುತಾಪಹರನಾಗಿ ಶಾಂತಿಯ ಹೊಂದುತ8ನಿರುಪಮನಿತ್ಯನಿರಾಳನೆ ತಾನಾಗಿಪರಮೇಶಪರವಸ್ತುಪರತರವೆಯಾಗಿಭರಿತ ಚೇತನ ಪ್ರತ್ಯಗಾತ್ಮನೆ ತಾನಾಗಿನಿರುತ ನಿತ್ಯಾನಂದ ಚಿದಾನಂದಯೋಗಿ9
--------------
ಚಿದಾನಂದ ಅವಧೂತರು
ವೀರೆಯ ನೋಡಿರೋ ಅಸುರರ ಮಾರಿಯ ನೋಡಿರೋಶೂರಾದಿ ಶೂರರ ದಾರಿಯ ಹಚ್ಚಿಸಿಮುರಿದ ಮಹಿಷಾಸುರನ ತರಿದಪರಿಶಿಲೋಮನು ಶಕ್ತಿಯ ಪಡೆದು ನಡೆದು ಕಣ್ಕೆಂಪಿಡಿದುಮಸಗುತಲಿಡಲು ಶಕ್ತಿಯ ದೇವಿಯು ಹಿಡಿದೆ ಹಲ್ಲನು ಕಡಿದೆಕೊಸರಿಯೆ ಇಟ್ಟಳು ಅಸುರನ ಎದೆಗೆ ಹೊಯ್ದು ರಕ್ತದಿ ತೊಯ್ದುಬಸವಳಿಯುತ ರಿಶಿಲೋಮನು ಭೂಮಿಗೆ ಬೀಳೆ ಬಹು ಹುಡಿಯೇಳೆ1ವರರುದಗ್ರನು ಗದೆಯನು ಹೊತ್ತು ಬರಲು ದೇವಿಗೆರಗಲುಶರದಿಂದಲಿ ತಲೆಯುರುಳಿಸಿ ಶಿರ ಬೊಬ್ಬಿರಿದು ಡಿಂಬವು ನಡೆದುಭರದಲಿ ಹೊಯ್ದುದು ಗದೆಯಲಿ, ಶರ ಸೋನೆಯ ಸುರಿದು ಖಡ್ಗವಹಿರಿದು ಪರಮೇಶ್ವರಿ ಭಾಪೆನಲು ನಡೆದು ಬಿತ್ತು ಪ್ರಾಣ ಹೋಗಿತ್ತು2ದಳಪತಿಯಹ ಚಿಕ್ಷುರಗೆ ಸಮನೆ ತ್ರಿಣಯನ ಕಾಣೆನು ಎಣೆಯನಹೊಳಕಿದ ನಾನಾಪರಿಆಯುಧದಿ ಮುಂದೆ ಧಿರುಧಿರು ಎಂದೆಒಳ ಹೊಕ್ಕಿರಿದನು ದೇವಿಯ ಶೂಲದಿ ಎದೆಯ ಶೌರ್ಯ ಶರಧಿಯಬಳಿಯದ ದೇವಿಯು ತಪ್ಪಿಸಿ ಶೂಲದಿ ತಿವಿಯೆ ಕಂಗಳ ಮುಗಿಯೆ3ದುಷ್ಟ ಬಿಡಾಲನು ಶರಗಳ ಸುರಿದನು ಮುಚ್ಚೆ ಸುರರೆದೆ ಬಿಚ್ಚೆಎಷ್ಟನು ಹೇಳಲಿ ಮಾಯದಿ ಮುಸುಕಿ ಇರಿದ ಬಹು ಬೊಬ್ಬಿರಿದಮುಷ್ಟಿಯಲಿ ತಿವಿದನು ದೇವಿಯ ಕೋಪವು ಹೆಚ್ಚಿ ತಾನವುಡುಗಚ್ಚಿಬಿಟ್ಟನು ದೇಹವ ದೇವಿಯು ಶೂಲದಿ ತಿವಿಯೆ ರಿಪುಭವವಳಿಯೆ4ಎಡಬಿಡದಲೆ ರೌದ್ರದಿ ಮಹಿಷಾಸುರನೊತ್ತೆ ದೇವಿಯು ಮತ್ತೆಕಿಡಿಕಾರುತ ಹೊಕ್ಕೊದೆದಳು ಬೀಳಲು ಕವಿದು ಶೂಲದಿ ತಿವಿದುಕಡಿದಳು ಕೊರಳನು ತಲೆಯನು ಮೆಟ್ಟಿ ಓಡಿತು ಭಯ ಹಿಮ್ಮೆಟ್ಟಿಮೃಡಚಿದಾನಂದನು ತಾನಾದ ಬಗಳ ಕರುಣಿ ಭಕ್ತರಭರಣಿ5
--------------
ಚಿದಾನಂದ ಅವಧೂತರು
ವೈದ್ಯ ಬಂದ ನೋಡಿ - ವೆಂಕಟನೆಂಬ |ವೈದ್ಯ ಬಂದ ನೋಡಿ ಪ.ವೈದ್ಯ ಬಂದನು ವೇದವೇದ್ಯ ನೋಡೀಗಲೇಶ್ರೀದೇವಿರಮಣನು ಶ್ರೀನಿವಾಸನೆಂಬ ಅಪಎಷ್ಟು ದಿನದ ರೋಗಗಳೆಂಬುದ ಬಲ್ಲ |ಗಟ್ಟಿಯಾಗಿ ಧಾತುರಸಗಳನು ಬಲ್ಲ ||ಕಷ್ಟ ಬಡಿಸದಲೆನ್ನ ಭವರೋಗ ಬಿಡಿಸುವ |ಶಿಷ್ಟವಾದ ದೇಹ ಕೊಟ್ಟು ಕಾಯುವನಿವ 1ಹೊನ್ನು - ಹಣಂಗಳ ಅನ್ನವ ಅನುಸರಿಸಿ |ತನ್ನ ದಾಸನೆಂಬ ನಿಜವ ನೋಡಿ ||ಚೆನ್ನಾಗಿ ಜಿಹ್ವೆಗೆ ಸ್ವಾದವಾಗಿರುವಂಥ |ತನ್ನ ನಾಮಾಮೃತ ದಿವ್ಯ ಔಷಧವೀವ 2ಈತ ದಿಟ್ಟಿಸಿ ನೋಡೆ ಎಳ್ಳಷ್ಟು ರೋಗವಿಲ್ಲ |ಈ ತನುವಿಗೆಂದೆಂದು ರೋಗಬರಲರಿಯದು ||ಈತ ಅನಂತರೂಪದಿ ಜೀವರಿಗೆ ಮುನ್ನ |ಪ್ರೀತಿಯಿಂದಲಿ ಭವರೋಗ ಬಿಡಿಸುವ 3ಧರ್ಮವೈದ್ಯನಿವ ಜಗಕ್ಕೆಲ್ಲ ಒಬ್ಬನೆ |ಮರ್ಮಬಲ್ಲ ರೋಗಜೀವಂಗಳ ||ನಿರ್ಮಲವಾಗಿಹ ತನ್ನ ನಾಮಸ್ಮರಣೆ |ಒಮ್ಮೆ ಮಾಡಲು ಭವರೋಗ ಬಿಡಿಸುವ 4ಅನ್ಯ ವೈದ್ಯನೇಕೆ ಅನ್ಯ ಔಷಧವೇಕೆ ? |ಅನ್ನ ಮಂತ್ರ - ತಂತ್ರ - ಜಪವೇತಕೆ ? ||ಚೆನ್ನ ಪುರಂದರವಿಠಲನ್ನ ನೆನೆದರೆ |ಮನ್ನಿಸಿ ಸಲಹುವ ವೈದ್ಯ ಶಿರೋಮಣಿ 5
--------------
ಪುರಂದರದಾಸರು