ಒಟ್ಟು 1939 ಕಡೆಗಳಲ್ಲಿ , 110 ದಾಸರು , 1337 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಧ್ವರಾಯಾ-ಗುರು-ಮಧ್ವರಾಯಾಮಧ್ವರಾಯಾ-ಗುರು-ಮಧ್ವರಾಯಾ ಪರಾಮಾವತಾರದೊಳೊಮ್ಮೆ ಮಧ್ವರಾಯಾಆ ಮಹಾ ಹನುಮನಾದೆ ಮಧ್ವರಾಯಾ ||ವಾಮಮುಷ್ಟಿಲಿ ರಾವಣನ ಗೆಲಿದೆ ಮಧ್ವರಾಯಾ ||ಕಾಮಿತಾರ್ಥಸುರರಿಗಿತ್ತೆ ಮಧ್ವರಾಯಾ1ಕೃಷ್ಣಾವತಾರದೊಳೊಮ್ಮೆ ಮಧ್ವರಾಯಾದುಷ್ಟಕುಲಕೆ ಭೀಮನಾದೆ ಮಧ್ವರಾಯಾ ||ಕುಟ್ಟಿದೆ ಕೌರವರನೆಲ್ಲ ಮಧ್ವರಾಯಾ - ಶ್ರೀ -ಕೃಷ್ಣನ ಪ್ರೀತಿಯ ಪಡೆದೆಯೊ ಮಧ್ವರಾಯಾ 2ಧರೆಯೊಳು ಯತಿಯಾಗಿ ಜನಿಸಿದೆ ಮಧ್ವರಾಯಾಗುರುವ್ಯಾಸರ ಹಿತವ ಪಡೆದೆ ಮಧ್ವರಾಯಾದುರುಳಮಾಯಿಮತವ ಮುರಿದೆ ಮಧ್ವರಾಯಾಪುರಂದರವಿಠಲನ ದಾಸನಾದೆ ಮಧ್ವರಾಯಾ3
--------------
ಪುರಂದರದಾಸರು
ಮನವು ನಿನ್ನಲಿ ನಿಲ್ಲಲಿಅನುದಿನನಿನ್ನ ನೆನೆದುಮನವು ನಿನ್ನಲಿ ನಿಲ್ಲಲಿ ಪ.ದುಃಖ ಸುಖ ಲೆಕ್ಕಿಸದೆ ಮುಖ್ಯ ಫಲ ಮುಂದರಿಸೆಮಿಕ್ಕುತ್ತ ಸೊಕ್ಕಿ ಮೋಹಕ್ಕೆ ಸಿಕ್ಕದೆ 1ನಿನ್ನಗುಣವರ್ಣಿಸುತ ನಿನ್ನವರ ಮನ್ನಿಸುತನಿನ್ನಪಾವನ್ನಲಾವಣ್ಯ ಧ್ಯಾನಿಸೆ2ಸಂತೋಷ ನಿರಂತರವು ಸಂತ ಜನ ಸಹವಾಸವುಶಾಂತತ್ವವಾಂತು ಮಹಾಂತಧೈರ್ಯದಿ 3ಭಕ್ತಿ ಸುವಿರಕ್ತಿ ಜ್ಞಾನ ಮುಕ್ತಿಗೆ ಮುಖ್ಯ ಕಾರಣಚಿತ್ತದೊಳಿತ್ತೆಲ್ಲ ಹೊತ್ತುಹೊತ್ತಿಗೆ4ಪ್ರಿಯ ಶ್ರೀಲಕ್ಷುಮಿನಾರಾಯಣ ಪರಾಯಣನಧೈರ್ಯದಂತರ್ಯ ಗಾಂಭೀರ್ಯ ಭಾವದಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮನವೆಂಬ ಬೇಟೆಗಾರಹತ್ತಿಂದ್ರಿಯ ನಾಯಿಮನ ಬಂತು ಘೋರವಾದಮನಮನಾದಿ ಮೃಗಂಗಳನುಮಹಾಕೊಲೆಯ ಕೊಲ್ಲುತಿಹನುಪಮಹಾಪ್ರಪಂಚ ಬಲೆಯುತಾಪತ್ರಯತೊಡಕುಮಹಾವಿಷಯ ಮೇವು ಮಹಾವಿಷಯಮೇವಿಗೆ ಬಂದು ಮನುಜಮೃಗಗಳು ಕೆಡವುತಿಹವು1ನಯನೇಂದ್ರಿಯಗಳೆಂಬ ನಾಯಿಕಂಡಾಗಲೆ ಹಿಡಿವುದುಪ್ರಾಯ ಒಳ್ಳೆಯ ನಾಯಿನಿಯತವಿಹುದಲ್ಲೆ-ನ್ನದಲೆ ನೆನೆದಾಗಲೇ ಹಿಡಿಯುತಿಹುದು2ಒಂದಕ್ಕದೊಂದು ವೇಗವುಹತ್ತೀಪರಿನಾಯಿಬಂದರೆಂತೊಂದು ಸತ್ವವುಬಂದು ಹಿಡಿಯದಿರೆಮತ್ತೊಂದಾದರೆ ಹಿಡಿದು ಕೆಡವುತಿಹುದು3ಬಾಹ್ಯದ ಅಡವಿಯೊಳಗೆಮೃಗಂಗಳಿಗೆ ಬಹಬಾಧೆ ನಿತ್ಯದೊಳಗೆಬಾಹ್ಯ ವಿಷಯಪೇಕ್ಷೆಯಬಿಟ್ಟರೆ ಬದಿಯ ನಾಯಿಗಳು ಸೇರದಿಹವು4ತನಗೆ ತಿಳಿಯಬೇಕುತಾನುಳಿವುದಕೆ ತನಗೇಯಬೇಕುತನ್ನ ಚಿದಾನಂದನೆಂದು ತನ್ನ ಕಂಡರೆ ಭಯವಿಲ್ಲ5
--------------
ಚಿದಾನಂದ ಅವಧೂತರು
ಮನುಷ್ಯನಾದ ಫಲವೇನುಶ್ರೀನಿವಾಸನ ಕಂಡು ಸುಖಿಯಾಗದನಕ ಪ.ಭಾನುಉದಿಸದ ಮುನ್ನ ಸ್ವಾಮಿ ಪುಷ್ಕರಿಣಿಯಲಿಸ್ನಾನಸಂಧ್ಯಾನಜಪಗಳನೆ ಮಾಡಿಸಾನುರಾಗದಿ ಶ್ರೀವರಹಗೆ ನಮಿಸಿತಾನಖಿಳ ಪುಣ್ಯವನು ಸೂರೆಗೊಳದನಕ 1ಹಸ್ತದಲಿ ವೈಕುಂಠವೆಂದು ತೋರುವ ವಿಮಾನಸ್ಥಾಚ್ಯುತನ ಕರ್ಮಗುಣನಾಮವಸ್ವಸ್ಥಮತಿಯಾಗಿ ಕೊಂಡಾಡಿ ಕುಣಿದಾಡಿ ತಾವಿಸ್ತರದಕೈವಲ್ಯಪಡೆಯದನಕ2ತುಲಸಿ ಬರ್ಹಕೆ ಪೋಲ್ವ ಆ ಮಹಾಪ್ರಸಾದವನುಅಲಸದೆ ಸೇವಿಸಿ ಕೃತಾರ್ಥನಾಗಿಹಲವು ದುರಿತಾರಿ ಪ್ರಸನ್ವೆಂಕಟಗಿರಿಯನಿಲಯನೆ ಗತಿಯೆಂದು ಭಜಿಸದನಕ 3
--------------
ಪ್ರಸನ್ನವೆಂಕಟದಾಸರು
ಮನ್ನಿಸೆನ್ನ ಮಹಾಲಿಂಗದೇವೋತ್ತುಂಗಪುಣ್ಯಶ್ಲೋಕ ನಿನ್ನ ವರ್ಣಿಪೆ ಮುಕ್ಕಣ್ಣ ಪ.ಭಕ್ತಪಾರಿಜಾತ ಶಕ್ತಿದೇವಿಪ್ರೀತಸತ್ಯಧರ್ಮಯೂಥ ಸ್ವಾಮಿಲೋಕನಾಥ 1ವಂದನೀಯ ಕೃಪಾಸಿಂಧು ದಿವ್ಯರೂಪಚಂದ್ರಚೂಡ ಸಾಂದ್ರಾನಂದ ವೈಷ್ಣವೇಂದ್ರ 2ಮಾರವೈರಿ ಲಕ್ಷ್ಮೀನಾರಾಯಣಪ್ರೇಮಿಸಾರತತ್ತ್ವಬೋಧ ಸಾಧುಸುಪ್ರಸೀದ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮರತೆ ಮರತೆ ಬಗಳ ಮಹಾಮಂತ್ರವಸುರತರುವಿಗೆ ತರುವಾದ ಬ್ರಹ್ಮಾಸ್ತ್ರವಪಭುಗುಭುಗಿಸಿ ಭುವನಗಳನ್ನೆಲ್ಲಾ ಪಾಲಿಪ ಮಂತ್ರಧಗಧಗಿಸಿ ಝಗ ಝಗಿಸಿ ನಿಗಿ ನಿಗಿವ ಮಂತ್ರಜಗದೊಡೆಯರಾದವರಿಗೆ ಒಡೆಯಳ ಮಂತ್ರತಗತಗನೆ ಶತಕೋಟಿರವಿಸೂಸುವ ಮಂತ್ರ1ಸರಸಿಜಾಸನ ತಾನೆ ಜಪಿಸುತಿಹ ಮಂತ್ರಹರಿಹರರುಅನವರತಸ್ಮರಿಸುವಾ ಮಂತ್ರಸುರಪ ಇಂದ್ರಾಗ್ನಿಗಳಿಗಭಯ ನೀಡಿಹ ಮಂತ್ರದುರುಳರಿಪು ವನಗಳಿಗೆದಾವಾಗ್ನಿಮಂತ್ರ2ಹರಿಯ ಸಮಭಾಗ್ಯ ಕೋ ಎಂದು ಕೊಡುವ ಮಂತ್ರಹರಗೆ ಸರಿಯಾದ ಸತ್ವವನೀವ ಮಂತ್ರಗುರುಚಿದಾನಂದ ತಾನಾದ ಬಗಳ ಮಹಾ ಮಂತ್ರಪರಬ್ರಹ್ಮ ಸತ್ಯ ಬ್ರಹ್ಮಾಸ್ತ್ರ ಮಂತ್ರ3
--------------
ಚಿದಾನಂದ ಅವಧೂತರು
ಮಹಾದಾದಿದೇವ ನಮೋ ಮಹಾಮಹಿಮನೆ ನಮೋಪ್ರಹಲ್ಲಾದವರದ ಅಹೋಬಲ ನರಸಿಂಹ ಪ.ತರಣಿಗುಬ್ಬಸವಾಗೆ ತಾರಾಪತಿಯು ನಡುಗೆಸುರರು ಕಂಗೆಟ್ಟೋಡೆ ನಭವ ಬಿಟ್ಟು ||ತರುಗಿರಿಗಳಲ್ಲಾಡೆ ಶರಧಿಗಳು ಕುದಿದುಕ್ಕೆಉರಿಯನುಗುಳುತ ಉದ್ಭವಿಸಿದೆಯೊ ನರಸಿಂಹ 1ಸಿಡಿಲಂತೆ ಗರ್ಜಿಸುತೆ ಕುಡಿಯ ನಾಲಗೆ ಚಾಚಿಅಡಿಗಡಿಗೆ ಹುಂಕರಿಸಿ ಕಡುಕೋಪದಿಂದ ||ಮುಡಿವಿಡಿದು ರಕ್ಕಸನ ಕೆಡವಿ ನಖದಿಂದೊತ್ತಿಬಿಡದೊಡಲ ಬಗೆದ ಕಡುಗಲಿ ನಾರಸಿಂಹ 2ಸರಸಿಜೋದ್ಭವ ಹರ ಪುರಂದರಾದಿ ಸಮಸ್ತಸುರರು ಅಂಬರದಿ ಪೂಮಳೆಗರೆಯಲುಸಿರಿಸಹಿತ ಗರುಡಾದ್ರಿಯಲಿ ನಿಂತು ಭಕುತರನುಕರುಣಿಸುವ ಪುರಂದರವಿಠಲ ನಾರಸಿಂಹ 3
--------------
ಪುರಂದರದಾಸರು
ಮಹಾದೇವ ಶಿತಿಕಂಠ ದಾಸ ಕಲ್ಪಮಹೀಜ ಬಿನ್ನವಿಪೆ ನಿರ್ದೋಷ ||ಆಹಾ ||ಕುಹಕಾರಿ ಹರಿಪಾದ ಮಹಿಮೆ ಕೊಂಡಾಡಿಸೊ |ಗಹನವಿಕ್ರಮಭೀಮ ಮಹೀಧರಪ ಜಾಧವ ಪಸ್ಫಟಿಕಾಭ ಶ್ರೀಕಂಠ ದಕ್ಷ ಧ್ವಂಸಿ |ನಿಟಿಲಲೋಚನ ಸುರಪಕ್ಷ ಹೇ || ಧೂ |ರ್ಜಟ ಹೀನ ವಿಷಯಾಖ್ಯ ಕಕ್ಷವಹ್ನಿ|ಕುಟಿಲತ್ವ ಬಿಡಿಸತಿ ದಕ್ಷ ||ಆಹಾ||ಕಠಿಣ ಸಂಸಾರದಿತ್ರುಟಿಮಾತ್ರ ಸುಖ ಕಾಣೆ |ವಟುರೂಪಿ ಭಕುತರ ಕಟಕದೊಳಿರಿಸೆನ್ನ1ಇಳಿರಥ ನಗಶರಸೋಮಮೌಳಿ|ನಳನಂದಿನಿಪ ಸುತ ರಾಮ ನಾಮಾ |ನಲಿದು ಪಾಡುವ ಗುಣಧಾಮ ರೌಪ್ಯಾ |ಬಲಾವಾಸಾನಂಗ ವಿರಾಮಾ ||ಆಹಾ||ಹಲವರಾಶ್ರಯಿಸಿ ನಾ ಬಲು ನೊಂದೆನೋರ್ವರು ಕಾಯ್ವ |ಸುಳಿವು ಕಾಣೆನೋ ಹೇ ಗರಳಕಂಠ ಪೊರೆಯೆನ್ನ 2ಪಂಚ ಸುಸ್ಮಿತ ಯುಕ್ತ ವದನಾ ನಿಷ್ಪ್ರ |ಪಂಚ ಗಜಾಸುರ ಹನನಾ ಏಕಪಂಚಾಸ್ಯ ಜನಕ ಕೇಶವನಾ ಪ್ರೀತಿ |ಮಂಚ ನೀನಾಹೆ ಖಳರನಾ ||ಆಹಾ||ಹಿಂಚಾಗಿ ಅಳಿವಂಥ ಹಂಚಿಕೆಯಲಿವರ|ಮುಂಚೆ ಕರೆದು ಕೊಟ್ಟು ವಂಚಿಪೆ ಅತ್ರಿಜ 3ಅಹಂಕಾರಾಧೀಶ ನಭೇಶತಾತ|ಮಹಾ ಮುನಿ ವಂದ್ಯಾಮರಾಸ್ಯ ಚಂದ್ರ |ದಿನಪತೇಕ್ಷಣನೆ ಅಶೇಷಾಮೋದ|ಬಹುಮೋದಸಕ್ತಾಯನ್ನಾಶಾ ||ಆಹಾ||ದಹಿಸೊಜಠರಪೋಷ ವಹಿಸಿ ಬೆಂಡಾದೆನೊ |ಅಹಿಮಲಾಂಧಕಾಸುರ ಗುಹಹ ಅಶ್ವತ್ಥಾಮ 4ಶಕ್ರಾವರಜ ಶ್ರೀ ಪ್ರಾಣೇಶ ವಿಠ್ಠಲ |ನಕ್ರಾಹನಂಘ್ರಿಯನಿಶದಲ್ಲಿ |ವಕ್ರವಿಲ್ಲದೆ ಸೇವಿಪೀಶ ಹೇ ತ್ರಿ- |ವಿಕ್ರಮಕರವ್ಯೋಮಕೇಶ||ಆಹಾ||ಶುಕ್ರಪೂಜಿತಪಾದಅಕ್ರೂರಯನ್ನೊಳಿ |ದ್ದ ಕ್ರಮವೆಣಿಸದೆ ಸುಕೃತವೊದಗಿಸೊ5
--------------
ಪ್ರಾಣೇಶದಾಸರು
ಮಹಾಪುರುಷನೆತ್ತ ತಾನೆತ್ತಮಹಾಪುರುಷರ ಶ್ರೇಷ್ಠವೇನೆಂದು ಅರಿಯನುಪಕುದುರೆ ತಾನಹೆನೆಂದು ಕತ್ತೆ ಬೀದಿಯೊಳು ನಿಂತುಕುದುರೆ ಕುಣಿತವನು ಕುಣಿದ ತೆರದಿವಿಧವಿಧದ ಓದುವೋದಿ ಮಹಾಪುರುಷನಹೆನೆಂದರೆಸದಮಲಾನಂದರ ಸರಿತಾನು ಬಹನೇ1ಹುಲಿಯು ತಾನಹೆನೆಂದು ಹುರುಡಿರಿಗೆ ನರಿ ಮೈಯ್ಯಬಲವಂತದಿ ಸುಟ್ಟುಕೊಂಡ ತೆರದಿಹಲವು ಶಾಸ್ತ್ರವನೋದಿ ಮಹಾಪುರುಷನಹೆನೆಂದರೆಬಲು ಮಹಾತ್ಮರ ಸರಿತಾನು ಬಹನೇ2ಮಹಾಪುರುಷನೆಂಬಾತ ಮಹಾಸಮಾಧಿಯಲಿ ಮುಳುಗಿಮಹಾ ಚಿದಾನಂದಗುರುತಾನಾಗಿ ಇಹನುಮಹಾಪುರುಷತಾನೆಂದು ಕಾಪುರುಷ ಪೇಳಿದಡೆಮಹಾಪುರುಷ ಸರಿತಾನು ಬಹನೇ3
--------------
ಚಿದಾನಂದ ಅವಧೂತರು
ಮಹಾಮಾಯೆಗೌರಿ ಮಾಹೇಶ್ವರಿಪ.ವiಹಾದೇವಮನೋಹಾರಿ ಶಂಕರಿಮಹಾಪಾಪಧ್ವಂಸಕಾರಿ ಶ್ರೀಕರಿಮಾಂಪಾಹಿಪಾಹಿ ಶೌರಿಸೋದರಿಅ.ಪ.ಕಾಮಕೋಟಿಸುಂದರಿ ಶುಭಕರಿ ಕರಿಕುಂಭಪಯೋಧರಿಕಾಮಿತಪ್ರದೆ ಕಂಬುಕಂಧರಿಹೇಮಾಲಂಕಾರಿ ಹೈಮವತಿ ಕುವರಿ 1ಭಾನುಕೋಟಿಭಾಸ್ಕರಿ ಭವಹರಿ ಭಜಕಾಮೃತಲಹರಿಸ್ಥಾಣುವಲ್ಲಭೆ ದನುಜಸಂಹಾರಿಜ್ಞಾನಾಗೋಚರಿ ಜಗತ್ರಯೇಶ್ವರಿ 2ಪೂರ್ವದೇವಭೀಕರಿ ಭ್ರಾಮರಿ ಪುಳಿನಾಖ್ಯ ಪುರೇಶ್ವರಿಸರ್ವಲಕ್ಷ್ಮೀನಾರಾಯಣೇಶ್ವರಿಸರ್ವಸಹಚರಿ ಶಶಾಂಕಶೇಖರಿ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮಹಾಲಕ್ಷುಮಿಗೆನಿತ್ಯಮಂಗಳಶುಭಮಂಗಳಮಹಾವಿಷ್ಣುವಿನ ರಾಣಿಗೆ ಮಹಾ ಮಂಗಳ ಪ.ಪೂರ್ಣಚಂದ್ರಾರ್ಣವ ಪೂರ್ಣಗುಣಾರ್ಣವಪೂರ್ಣಮನೋರಥದಾಯಕಿಗೆ ಸುಪರ್ಣೇಂದ್ರವಾಹನನರ್ಧಾಂಗಿ ದೇವಿಗೆ ವಿಶ್ವ ನಾಯಕಳಾದ ಜಗನ್ಮಾತೆಗೆ 1ಕರವೀರಪುರದಲ್ಲಿ ನೆರಹಿದ ಭಕ್ತರಕರಕರದಭೀಷ್ಠೆಯ ಕೊಡುವಂದಿಗೆಕರಕಮಲಗಳಲ್ಲಿ ಅಕ್ಷಯಾಮೃತಕುಂಭಧರಿಸಿದ ಜಾಣೆ ಕಲ್ಯಾಣಿಗೆ ನೀಲವೇಣಿಗೆ 2ಶ್ರೀಮದನಂತಾಸನ ವೈಕುಂಠಶ್ರೀ ಮತ್ಯ್ವೇತದ್ವೀಪನಿವಾಸಿನಿಸ್ವಾಮಿ ಪ್ರಸನ್ನವೆಂಕಟನ ಪಟ್ಟದರಾಣಿಕಾಮಿತಾರ್ಥದಾಯಿ ಕಲ್ಯಾಣಿಗೆ 3
--------------
ಪ್ರಸನ್ನವೆಂಕಟದಾಸರು
ಮಹಾಲಕ್ಷ್ಮಿ50ದಯಮಾಡಮ್ಮ ದಯಮಾಡಮ್ಮಹಯವದನನ ಪ್ರಿಯೆ ಪವಿನಯದಿಂದ ಬೇಡುವೆನೆ ಕಮಲನೇತ್ರೆಯೆ ಅ.ಪಶಂಬರಾರಿಪಿತನ ರಾಣಿ ನಂಬಿಸ್ತುತಿಸುವೆಅಂಬುಜನಾಭನ ಧ್ಯಾನಸಂಭ್ರಮಎನಗೀಯೆ1ಗೆಜ್ಜೆಪಾದ ಧ್ವನಿಗಳಿಂದ ಮೂರ್ಜಗ ಮೋಹಿಸುತ್ತಸಜ್ಜನರ ಸೇವೆಗೊಳ್ಳುತ ಜನಾರ್ದನನ ಪ್ರೀತೆ 2ತ್ರಿಗುಣಾಭಿಮಾನಿಯೆ ನಿನ್ನ ಪೊಗಳುವ ಭಕ್ತರಬಗೆ ಬಗೆ ತಾಪತ್ರಯಗಳ ಕಳೆದುಮಿಗೆ ಸೌಖ್ಯವ ನೀಯೆ 3ಪದ್ಮಾಕ್ಷಿಯೆ ಪದ್ಮಸದನೆ ಪದ್ಮಪಾಣಿಯೆಪದ್ಮನಾಭನಗೂಡುತಲಿ ಹೃತ್ಪದ್ಮದಲಿ ಪೊಳೆಯೆ 4ಕನಕಾಭರಣಗಳಿಂದಲಿ ಪೊಳೆಯುವ ಕಮಲನೇತ್ರೆಯೆಕಮಲನಾಭವಿಠ್ಠಲನ ಕೂಡಿಕರುಣದಿ ಬಾರೆತಾಯೆ 5
--------------
ನಿಡಗುರುಕಿ ಜೀವೂಬಾಯಿ
ಮಾಯೆಯ ಮಹಾ ಸರೋವರದೊಳಗೆ ಕಡೆಹಾಯ್ವರೊಬ್ಬರನು ಕಾಣೆಪಹರಿತಾ ಮುಳುಗಿದ ಹರ ತಾ ಮುಳುಗಿದಹಂಸವಾಹನನು ಮುಳುಗಿದನುಸುರಪತಿಮುಳುಗಿದಶಿಖಿತಾ ಮುಳುಗಿದಸುರಾಸುರರು ತಾ ಮುಳುಗಿದರು1ಸೂರ್ಯನು ಸುಧಾಂಶುಮುಳುಗಿದ ನವಗ್ರಹರೆಲ್ಲ ಮುಳುಗಿದರುಶೂರನು ಮುಳುಗಿದ ಶುಂಠನು ಮುಳುಗಿದ ಸ-ಚರಾಚರರೆಲ್ಲ ಮುಳುಗಿದರು2ಭಾಗ್ಯನು ಮುಳುಗಿದ ಬಡವನು ಮುಳುಗಿದಬಹುದರಿದ್ರನೂ ಮುಳುಗಿದನುಯೋಗ್ಯರು ಚಿದಾನಂದ ಭಕ್ತರುತಾವು ಕಂಡು ಮಾತ್ರ ಮುಳಗಲಿಲ್ಲ3
--------------
ಚಿದಾನಂದ ಅವಧೂತರು
ಮೋಕ್ಷೋಪಾಯಕಾನಂದ ಮುನೀಂದ್ರನಶಿಕ್ಷಾ ಮಾರ್ಗಹುದಯ್ಯಲಕ್ಷ್ಷ್ಯಶ:ಲಕ್ಷಣವಾರ್ಹೇಳೇನುಲಕ್ಷದಿ ಗುಣವಿಲ್ಲಯ್ಯ ಪ.ಸುಕೃತತಾನಾದರೆ ಚಿರಕಾಲಕೆ ಒಮ್ಮೆಧಿಕೃತವಾಹುದು ಭವತುಷ್ಟಿಸುಖವೆಂಬುದು ಸ್ವರೂಪಾನಂದಾನುಭವವಿಕಸವಾಗುವ ಜ್ಞಾನದೃಷ್ಟಿ ಆಸುಖವಾಪೇಕ್ಷಿಸಿ ಪ್ರಕೃತವುದಾಸಿಪದಖಿಳ ಮಹಾತ್ಮರಭೀಷ್ಟಿಸಕಳಾನಿಷ್ಟವ ಸಾಗಿಸುವ ಶ್ರೀಸುಖತೀರ್ಥರ ಶುಭಗೋಷ್ಟಿ 1ಕಿವಿಯಲಿ ಸತ್ಶಾಸ್ತ್ತ್ರವಕೇಳಿಧ್ಯಾನಮನನವ ಸಾಧಿಪುದೆ ದೇವಸಾರ್ಥಿಕುವಲಯಪ್ರಿಯಕುಲತಿಲಕನು ಮೆಚ್ಚಿಹನವಭಕುತಿಯಪಥಕೀರ್ತಿಅವಿರಳ ಎದೆಗದ್ದಿಗೆಯೊಳು ಮೆರೆವನಸವಿಗುಣ ನಿರ್ಣಯವಾರ್ತಿವಿವರಿಸಿ ವಾರಂವಾರ ವರದ ಮದ್ಧವ ಜಗದ್ಗುರು ವರಮೂರ್ತಿ 2ಈಶ್ವರ ಸಾಕ್ಷಾತ್ಕಾರದ ಭೇದರಹಸ್ಯ ವಿಚಾರವಂತಯೋಗಿನಶ್ವರಾನಶ್ವರವರಿತ ವೈರಾಗ್ಯದಐಶ್ವರ್ಯಾನ್ವಿತಭೋಗಿಶಾಶ್ವತ ಪ್ರತ್ಯಕ್ಷಾದಿ ತ್ರಿಪ್ರಮಾಣಭಾಷ್ಯಕ ಶ್ರೀಪದಯೋಗಿವಿಶ್ವದೊಡೆಯ ಪ್ರಸನ್ವೆಂಕಟಪತಿ ಪದವಿಶ್ವಾಸಿಕ ಮುನಿಯೋಗಿ 3
--------------
ಪ್ರಸನ್ನವೆಂಕಟದಾಸರು
ಯಾವ ಭಯವು ನಮಗೆ |ಶಂಕರ ದೇವನೊಲಿದು ಕಡೆಗೆ ಪಸಾವಧಾನದಿ ಸರ್ವಭಕ್ತ ಜನರಕಾವ|ದೇವ ದೇವೇಶ ಸರ್ವೇಶ ನೀನೊಲಿದರೆ ಅಪದುರಿತದ ಭಯವೇನಲೇ | ಶಂಕರ ನಿನ್ನ |ಸ್ಮರಿಸಲು ದೂರವಲೇ |ಮರಣದ ಭಯವೆನೆ | ಅಂತಕಾಂತಕ ನೀನು ||ಉರಗನ ಭಯವೆನೆ | ಗರಳಕಂಧರನೂ 1ಚೋರರ ಭಯವೇನೂ | ದಧಿಘೃತ |ಚೋರ ನಿನ್ನಯ ಸಖನೂ ||ನಾರೀ ಚೋರನ ದೇವ | ಧೀರಕೈರಾತನೀ |ಘೋರರಕ್ಕಸರೆನೆ | ತ್ರಿಪುರಸಂಹಾರ2ಮೃಗಪಕ್ಷಿ ಭಯವೆನಲೇ |ಸತಿಸುತಸಖ|ಖಗಮೃಗವೇರ್ದರೆಲೇ |ಜಗದೊಡತಿಯು ಲಕ್ಷ್ಮೀ | ಗಗ್ರಜನೆನಿಸಿಹೆ ||ಭಗಪೀಠನು ಧನ | ಮಾನಾಭಿಮಾನಕೇ 3ವಸನಕ್ಕೆ ಚರ್ಮಾಂಬರನೂ |ಸಂಸಾರವೆಂಬ ವ್ಯಸನಕೆ ದಿಗಂಬರನೂ ||ತೃಷೆಗೆ ಗಂಗಾಧರ | ಅಶನಕ್ಕೆ ಬಿಕ್ಷುಕನೀ |ಅಂಗ ಶೃಂಗಾರಕೆ | ಭಸ್ಮಲೇಪನನೂ 4ಪೊಗಳಲಳವೇ ನಿನ್ನಾ | ಮಹೇಶ್ವರ |ಜಗದಿ ಭಕ್ತರ ಸಂಪನ್ನಾ ||ಭೃಗುಲಾಂಛನಧರ ಗೋವಿಂದದಾಸನ |ಹಗಲಿರುಳೆನ್ನದೆಪೊರೆಯೋ ಮಹಾದೇವ 5
--------------
ಗೋವಿಂದದಾಸ