ಒಟ್ಟು 2406 ಕಡೆಗಳಲ್ಲಿ , 111 ದಾಸರು , 1903 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೂರು ತುಂಡಾದ ಹನುಮನ ನೋಡಿರÉ ಪ. ಮಾರುತಿಯ ಮರ್ಮವಿದರಿಂದರಿಯರೆ ಅ.ಪ. ಮೊದಲ ಕಟ್ಟೆಯ ದಡದಿ ಮೊದಲಿದ್ದ ಹನುಮನ ವಿಧಿವಶದಿ ಖಳರು ಕಿತ್ತೊಗೆಯೆ ಮದದಿ ಮೊದಲು ಕಟ್ಟೆಯು ನಿಲದೆ ಒಡೆದು ಪರಿಯಲು ತುಂಗೆ ಅದರೊಳಡಗಿದ್ದ ಕೆಲಕಾಲವೀ ರಾಯ 1 ದೇವರಿಲ್ಲದ ಭವನ ಕಂಡು ನಿಂದು ತಾವೆ ಸ್ಥಾಪಿಸುವೆವೆಂಬನಿತರೊಳು ಸ್ವಪ್ನದಲಿ ಪಾವಮಾನಿಯು ತನ್ನ ಇರುವು ತೋರಿದನೊ 2 ಬರುತ ಕಟ್ಟೆಯ ದಿಡಗಿನಲ್ಲಿ ನಿಂದು ಕರೆವಡೆ ಬರಲು ಮೂರು ತುಂಡು ಹನುಮರಾಯ ತರುತ ಸ್ಥಾಪಿಸಿ ಬಂಧಿಸಲು ದ್ವಾರವಾರದಲಿ ಕರನ್ಯೂನ ಸಾಕಾರ ಸರಿಯಾದನೀತ 3 ಮೂರು ಯುಗದಲಿ ತಾನು ಮೂರು ರೂಪವ ತಾಳಿ ಮೂರು ಮೂರ್ತಿಯ ಭಜಿಸಿ ಮೂರು ಆಶ್ರಮದಿ ದುರುಳ ಮತಗಳ ಮುರಿದು ಮೂರುದಶ ಏಳು ಗ್ರಂಥಗಳ ಸ್ಥಾಪಿಸಿದ 4 ಮೂರು ಗುಣಬದ್ಧ ಮೂರು ದೇಹದಿ ನೆಲಸಿ ಮೂರು ವಿಧ ಜಪದಿಂದ ಮೂರ್ಗತಿಯನೀವ ಮೂರು ಸ್ಥಾನದಿ ಮೂರು ಕೋಟಿರೂಪವ ಧರಿಸಿ ಮೂರು ಲೋಕದಿ ಮೆರೆವ ಮಾರುತಿಯ ಚರ್ಯ 5 ಮೂರು ನಾಡಿಯ ಮಧ್ಯೆ ಮೂರೈದುದಲ್ಲಿ ತೋರುವೊ ಹರಿರೂಪ ತೋರಿಸುವನು ಮೂರು ಅವಸ್ಥೆಗಳ ವಿೂರಿದ ಜಾಗ್ರತನು ಮೂರು ಕಾಲದಿ ಜೀವರನು ಕಾಯುವನ 6 ಮೂರು ಮಾರ್ಗಗಳಿಂದ ಮಾರುತಿಯ ತೋರುವೊ ದಾರಿಯಿಂದಲಿ ಹರಿಯ ಸಾರಿ ಭಜಿಸೆ ಸೇರಿಸುವ ಗೋಪಾಲಕೃಷ್ಣವಿಠ್ಠಲನ ಪುರವ ತಾರಿಸುವ ಭವವನಧಿ ಮೊದಲಗಟ್ಟೇಶ7
--------------
ಅಂಬಾಬಾಯಿ
ಮೂರುತಿ ಪುಟ್ಟ ಮೂರುತಿ ಪ. ಸಾರುತಿ ಹರಿಗುಣ ಬೀರುತಿ ತ್ರಿಜಗದಿ ಅ.ಪ. ತ್ರೇತೆಯ ಯುಗದಲಿ ಜನಿಸಿ | ರಾಮ ದೂತಕಾರ್ಯಕೆ ಮನವಿರಿಸಿ ಪ್ರೀತಿಯೊಳ್ ರವಿಜನ ಉಳಿಸಿ | ಬಹು ಖ್ಯಾತಿಯ ವಾಲಿಯನಲ್ಲೇ ಅಳಿಸಿ ವಾತವೇಗದಿ ವನಧಿಯ ದಾಟಿ ಉಂಗುರ ಸೀತೆಗಿತ್ತು ಲಂಕೆ ವೀತಿಹೋತ್ರನಿಗಿತ್ತ 1 ದ್ವಾರಕಿನಿಲಯನ ಒಲಿಸಿ | ಬಲು ಧೀರ ಭೀಮಸೇನನೆನಿಸಿ ಸೋಮಕುಲದಲಿ ಜನಿಸಿ | ಬಲು ಕಾಮಿ ಕೀಚಕನನ್ನು ವರೆಸಿ ಕಾಮಿನಿಗೋಸುಗ ಕಾಮುಕ ಕುರುಕುಲ ಧೂಮವೆಬ್ಬಿಸಿದ ನಿಸ್ಸೀಮ ಸುಗುಣಧಾಮ 2 ಪುಟ್ಟಯತಿಯ ರೂಪತಾಳಿ | ಬಲು ಗಟ್ಟಿ ಗೋಪೀ ಗೆಡ್ಡೆ ಸೀಳಿ ಪುಟ್ಟ ಕೃಷ್ಣನ ಕಂಡು ತೋಳಿ | ನಿಂದ ನಿಷ್ಟೆಯೊಳ್ ನೆತ್ತಿಯೊಳ್ ತಾಳಿ ಕುಟ್ಟಿ ಕುಮತಗಳ ವೈಷ್ಣವಾಗ್ರಣಿಯಾದ 3 ಸಾಕಾಯಿತೇ ಸ್ವಾಮಿಕಾರ್ಯ | ಇಲ್ಲಿ ಬೇಕಾಯಿತೇ ಮೌನಚರ್ಯಾ ಆ ಕಾಲದ ಎಲ್ಲ ಶೌರ್ಯ ಉಡುಗಿ ಏಕಾಂತದಲಿ ಹರಿಚರ್ಯಾ ವಾಕು ಉಚ್ಚರಿಸದೆ ಈ ಕುಧರಜೆ ತೀರ ಏಕಾಂತವಾಸನೆ 4 ಅಪಾರಮಹಿಮನೆ ಹಂಪೆ | ಯಲ್ಲಿ ಪರಿ ಇರುವುದು ತಂಪೆ ಪತಿ ಪದಕಂಜ ಕಂಪೆ | ಇಲ್ಲಿ ನೀ ಪಾರಣೆಯೆ ಮಾಳ್ಪ ಸೊಂಪೆ ಗೋಪಾಲಕೃಷ್ಣವಿಠ್ಠಲದಾಸ ನಿನ್ನಲ್ಲಿ ಸ್ಥಾಪಿಸಿದರೆ ವ್ಯಾಸರೀಪರಿ ಯಂತ್ರದಿ 5
--------------
ಅಂಬಾಬಾಯಿ
ಮೂರುತಿಯ ತೋರೋ ಮಾರುತಿ ಧಾರುಣಿಯೊಳ್ ನೀನೇ ಗತಿಪ ಅಂಜನಾ ಸುಕುಮಾರ ಕಂಜಾಕ್ಷ ಕಿಂಕರ ಸಂಜೀವ ಗಿರಿಧರ ಅಂಜಿಕೆಯ ಕಳೆವ ಧೀರ 1 ಎರೆಡು ದಳದವರ ಕರೆದು ಕೌರವನುರ ಇರಿದು ಕರುಳಸರ ವರಸತಿಗಿತ್ತ ಧೀರ 2 ಕಾಕು ಮಾಯ್ಗಳ ಮತ ನೂಕಿ ಬಿಸಾಡುತ ಶ್ರೀಕಾಂತ ಸನ್ಮತ ಕೈಗೊಂಡು ನಿಲಿಸಿದಂಥ 3
--------------
ಲಕ್ಷ್ಮೀನಾರಯಣರಾಯರು
ಮೃತ್ಯುಂಜಯನೇ ಶರಣು ಶಂಕರನೆ ಶರಣು ಶರಣು ಪ ವಾಸವೇ ಕೈಲಾಸ ವಸನವೇ ದಿಕ್ಕುಗಳು ಪೂಸಿಹುದು ಸರ್ವಾಂಗವೆಲ್ಲ ಭಸ್ಮ ನೇಸರಿನ ತೇಜ ಶಶಿಜೂಟ ಗಂಗಾಧರನ ಪಾಸಟಿಯು ನಿನಗೊಬ್ಬರಿಲ್ಲ ಗೌರೀಶ 1 ಪಂಚ ವಿಂಶತಿ ತತ್ವದೂರ ವಿಶ್ವಾಧಾರ ಪಂಚ ಶರಹರ ವಿರಂಚ್ಯಾದಿ ಸಂಸ್ತುತಾ ನಿತ್ಯ ಪ್ರ ಪಂಚ ಮಯನಾದ ಗಿರಿಜೇಶ ವಿಶ್ವೇಶ 2 ಪರಮ ಪುರುಷ ಪರೇಶ ಪರಮ ಗುಣಗಣ ನಿಲಯ ಶರಣ ಜನ ಸುರಧೇನು ವಿಶ್ವವಂದ್ಯಾ ಭವ ಪೂಜ್ಯಸೂರ್ಯ ಕೋಟಿಪ್ರಕಾಶ ಉರಗ ಭೂಷಣ ವೃಷಭಾರೂಢ ಗೌರೀಶ 3 ಭೂತಪತಿ ಭುವನೇಶ ಪ್ರೇತ ನಿಲಯ ನಿವಾಸ ನೂತನದ ಗಜಚರ್ಮ ನಿನಗೆ ವಿಖ್ಯಾತ ಗೀತ ನೃತ್ಯ ವಿಲಾಸ ಮಾತುಳಾಧ್ವರನಾಶ ಭಾತಿ ಕಂಠದಿ ವಿಷವು ಗೌರೀಶ 4 ಧರೆಯೊಳಧಿಕತರ ವರದ ಮೂಲನಿವಾಸ ಕರಿವದನ ನಂದೀಶ ಶಕ್ತಿ ಉಮೆ ಸಹಿತ ಭರದಿಂದ ನೆಲಸಿ ಸೊಪ್ಪಿನ ಸುಬ್ಬಗೆವರವಿತ್ತೆ ದುರಿತವನು ಪರಿಹರಿಸೋ ಶಂಭುಲಿಂಗೇಶ 5
--------------
ಕವಿ ಪರಮದೇವದಾಸರು
ಮೆಚ್ಚಿದೆ ಯಾಕಮ್ಮ ಲಕ್ಕುಮಿದೇವಿ ಸಚ್ಚಿದಾನಂದಾತ್ಮ ಹರಿಯೆಂದರಿಯದಲೆ ಪ ರಕ್ಕಸಾಂತಕ ಹರಿಗೆ ಸೊಗಸಿನ ತಕ್ಕ ವಾಹನವಿಲ್ಲದಿದ್ದೊಡೆ ಹಕ್ಕಿಯ ಹೆಗಲೇರಿ ತಿರುಗುವ ಚಿಕ್ಕ ಬುದ್ಧಿಯ ಚಲುವ ಕೃಷ್ಣಗೆಅ.ಪ ನೀರೊಳು ಮುಳುಗಿ ಭಾರವಪೊತ್ತು ಧರಣಿಯ ಕೋರೆದಾಡೆಲಿ ತಂದ ಕ್ರೂರ ರೂಪನಿಗೆ ಮೂರಡಿ ಭೂಮಿಯ ಬೇಡಿ ಕ್ಷಿತಿಪರ ಕೊಂದು ನಾರು ವಸ್ತ್ರಗಳುಟ್ಟು ಸೀರೆ ಕದ್ದವಗೆ ಶೂರತನದಲಿ ತ್ರಿಪುರರಗೆದ್ದು ವಿ- ಹಾರ ಮಾಡ್ಡ ಏರ್ದ ಕುದುರೆಯ ಮಾರಪಿತ ಮಧುಸೂಧನನ ವ್ಯಾ- ಪಾರ ತಿಳಿಯದೆ ವಾರಿಜಾಕ್ಷಿ 1 ಹಾಸಿಕಿಲ್ಲದೆ ಹಾವಿನ ಮೇಲೆ ಮಲಗುವ ಹೇಸಿಕಿಲ್ಲದೆ ಎಂಜಲ್ಹಣ್ಣನೆ ಮೆಲುವ ದೋಷಕಂಜದೆ ಮಾವನ ಕೊಂದು ಮಧುರೆಲಿ ದಾಸಿ ಕುಬ್ಜೆಯ ಡೊಂಕು ತಿದ್ದಿ ಪರಿಮಳ ಪೂಸಿ ಸೋಸಿನಿಂದಲಿ ಕರಡಿ ಮಗಳನು ಯೋಚಿಸದೆ ಕೈಪಿಡಿದು ಸೌಳ- ಸಾಸಿರದ ಸತಿಯರನು ಕೂಡಿದ ವಾಸುದೇವನ ಮೋಸವರಿಯದೆ 2 ಮೋಸದಿಂದಲಿ ಬಂದು ಶಿಶುವನೆತ್ತಿದ ದೈತ್ಯ ದಾಸಿಯ ಕೊಂದ ಉದಾಸೀನದಿಂದ ಗ್ರಾಸಕಿಲ್ಲದೆ ಗೋಪೇರ ಮನೆಗಳ ಪೊಕ್ಕು ಮೀಸಲು ಬೆಣ್ಣೆ ಪಾಲ್ಮೊಸರನೆ ಸವಿದು ರಾಸಕ್ರೀಡೆಯ ವನಿತೆಯರ ಮನ ದಾಸೆ ಪೂರೈಸಿ ರಾತ್ರಿ ವೇಳದಿ ವಾಸುದೇವನು ಓರ್ವ ಸತಿಯೊಳು ಕ್ಲೇಶಪಡಿಸದೆ ಮೋಸವರಿಯದೆ3 ಅಖಿಳ ಮಹಿಮನೆನೆ ಊಳಿಗ ಮಾಡಬಹುದೆ ಚಂಡನಾಡುವ ನೆವದಿಂದ ಕಾಳಿಂಗನ ಮಂಡೆಯ ತುಳಿದು ನಾಟ್ಯವನಾಡಬಹುದೆ ಗಂಡುಗಲಿ ಅರ್ಜುನನು ರಥಕೆ ಬಂಡಿಬೋವನ ಮಾಡಬಹುದೆ ಪುಂಡಲೀಕನು ಇಟ್ಟೆಗೆಯ ಮೇ- ಲ್ಪಾಂಡುರಂಗ ನಿಲಿಸಬಹುದೆ4 ಕಮಲಾಕ್ಷ ಯಾಗಶಾಲೆಗೆ ಗೋಪರನು ಕಳುಹಿ ರಮೆಯರಸಗೆ ಬಹಳ್ಹಸಿವೆನುತಿರಲು ಕಮಲಾಕ್ಷನ ನುಡಿ ಗಮನಿಸದೆ ರುಷಿವರರಿಗೆ ಕಮಲ ಮುಖಿಯರೆಲ್ಲ ಪರಮ ಸಂಭ್ರಮದಿಂದ ಕಮಲನೇತ್ರಗೆ ವಿವಿಧ ಭಕ್ಷಗ- ಘೃತ ಪರಮಾನ್ನಗಳನು ಕಮಲನಾಭ ವಿಠ್ಠಲಗೆ ಅರ್ಪಿಸಿ ಶ್ರಮವ ಕಳೆದೈದಿದರು ಮುಕ್ತಿಯ 5 ಯಾಕೆ ಮೆಚ್ಚಿದೆಯಮ್ಮ ಲೋಕ ಸುಂದರಿಯೆಶ್ರೀ ಕಮಲಜಪಿತ ಲೋಕ ಮೋಹಕನ
--------------
ನಿಡಗುರುಕಿ ಜೀವೂಬಾಯಿ
ಮೇಲು ಕೋಟೆ ತಿರುನಾರಾಯಣ ಚರಣಂ ಶರಣಂ ಸುರ ಮುನಿ ವಲಯಂ ಯದುಗಿರಿನಿಲಯಂ ಪ ಗುರುರಾಮಾನುಜ ಹೃದಯಭರಣಂ ಸ್ಮರವರ ಸುಂದರಮನಿಶಂ ಸದಯಂ ಅ.ಪ ಯತಿರಾಮಾನುಜ ಶೆಲ್ವಕುಮಾರಂ ಪತಿತಪಾವನ ಮಾಯುತ ಮಣಿಹಾರಂ ಸತತಾನಂದದ ಪುಣ್ಯಶರೀರಂ ಶತಪತ್ರಾಯುತ ನೇತ್ರಮುದಾರಂ 1 ವಿರಾಜಿತ ಮಸ್ತಕಮಮಲಂ ಪರಮ ವೈಭವೋತ್ಸವ ರಾರಾಜಿತ ಪುರುಷೋತ್ತಮ ಕೇಶವ ಮಾಲೋಲಂ 2 ಪರಮ ಪುಣ್ಯತೀರ್ಥಾಕರ ಶೋಭಿತ ನರಹರಿ ಗಿರಿಸಂಭೂಷಿತ ಧಾಮಂ ನಿರುತ ದಯಾಕರ ಮಾಂಗಿರಿಪತಿ ಭೂ ಮಾಧವ ಜಗದಭಿರಾಮಂ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮೊದಲಕಲ್ಲು ಶೇಷದಾಸ ಸ್ತುತಿ ನೇತ್ರಗಳ ಸಾಫಲ್ಯಮಾಳ್ವ ಸುಗಾತ್ರರನು ಕಂಡೆ ಪ ಪಾತ್ರರಾದವರು ದಾಸರ ಕೀರ್ತಿಸಲು ಪಾಪಗಳು ನಿಲ್ಲವೊ ಅ.ಪ. ವೇದ ಶಾಸ್ತ್ರಗಳ ಪೇಳುತ ಮೋದದಿಂದಿಹರುವಾದ ಮಾಡುವರಲ್ಲಿ ಶಮದಮಾದಿ ಗುಣದವರುಮೋದ ತೀರ್ಥರ ಮತಾನುಸಾರವಬೋಧಿಸುತ ಪರಮಾನುಗ್ರಹ ಮಾಳ್ವರ 1 ವಾಸುದೇವನ ದಾಸರೊಳಗ್ರೇಸರರು ಇವರುಶ್ರೀಶನ ಶುಭಗುಣ ಕರ್ಮಂಗಳು ಚಿಂತಿಸುತಲಿಹರುಭೂಸುರಾಂಶರಲ್ಲಿದಾವ ಸುರೇಶರೋಶೇಷದಾಸರಾಗಿ ಇಹರು 2 ತಂದೆ ಶ್ರೀ ನರಸಿಂಹನ ಪದದ್ವಂದ್ವ ಭಜಿಸುವರುಬಂದ ಸಜ್ಜನವೃಂದ ಜನಕಾನಂದಗೈಸುವರುಇಂದಿರೇಶನ ಒಂದೆ ಮನದಿ ಆ-ನಂದಬಾಷ್ಪಗಳಿಂದ ಧೇನಿಪರು 3
--------------
ಇಂದಿರೇಶರು
ಮೋಸಹೋದೆವೈ ಸಖಿ _ ವಾಸುದೇವನ ತಿಳಿಯದೆ ಪ ಮೋಸಹೋದೆವೈ ಸಖಿ _ ಮೂಸಿತು ಮನವಮ್ಮ ದೋಷದೂರ ಜಗದೀಶನ ಈ ಲೋಕಶಿಶುವೆಂದರಿಯುತ ಅ.ಪ. ಪುಟ್ಟಿದ ಶಿಶು ಮೊಲೆ ಕೊಟ್ಟವಳಳಿದನೆ ಸುಟ್ಟಾನು ದೈತ್ಯರ ಗೋಷ್ಠಿಗಳೆಲ್ಲವ ಬೆಟ್ಟವನೆತ್ತುತ ವೃಷ್ಟಿಯ ತಡೆದನೆ ಮೆಟ್ಟುತ ಕಾಳಿಯ ತುಷ್ಟಿಯ ನೀಡಿದನೆ ಇಷ್ಟಾದರುನಾವು ತಿಳಿಯದೇ ಸೃಷ್ಟಿಗೊಡೆಯ ಬಹು ದುಷ್ಟನು ಎಂದೇವೆ ಪಟ್ಟೆ ಪೀತಾಂಚರ ಕದ್ದವನೆಂದೇವೇ ಇಟ್ಟನು ಕಣ್ಣನು ನಮ್ಮಲೆಂದೇವೇ ಜೇಷ್ಠ ಶ್ರೇಷ್ಠ ಪರಾತ್ಪರ ಹರಿ ಸಂ- ತುಷ್ಟ ಗುಣಾರ್ಣವ ನಿರುಪಮ ಸುಖಿ ಜಗ- ಚೇಷ್ಟೆಯ ನಡೆಸುವ ಶಿಷ್ಯರ ಧೂರೆ ಪರ- ಮೇಷ್ಠಿಯ ಪಿತ ನೆಂದರಿಯದೆ ಕೃಷ್ಣನಾ 1 ಮೆಲ್ಲನೆ ಬಾಯಲಿ ಲೋಕವ ನೆಲ್ಲವ ತಾಯಿಗೆ ತೋರಿದನೆ ಬಲ್ಲಿದನಿವ ತಾ ಬೆಂಕಿ ಜ್ವಾಲೆಯನುಂಗುತ ತಾಪೊರೆದನೆ ಗೊಲ್ಲರಪತಿ ಮುಳುಗಲು ಪಾತಾಳದಿ ತಂದನೆ ತಂದೆಯನು ಬಾಲರ ಗುಂಪಿಗೆ ಲೋಕಗಳೆಲ್ಲವ ನೀರೋಳು ತೋರಿದನೆ ಮೆದ್ದನು ಎಂದೇವೇ ನಿಲ್ಲದೆ ನಿಶಿಯೊಳು ನಮ್ಮನು ಕೆಡಿಸಿದನೆಂದೇವೆ ಸುಳ್ಳನು ಹೇಳುವ ಜಾಣ ಗೋಪಾಲನು ಎಂದೇವೇ ಸಲ್ಲದ ನುಡಿಗಳ ನಾಡುತ ಕಾಲವ ಕಳೆದೇವೇ ಎಲ್ಲರ ಹೃದಯದಿ ಮತ್ತೆ ಬ್ರಹ್ಮಾಂಡದಿ ಒಳಹೊರ- ನೆಲ್ಲಿಯು ತುಂಬಿಹಏಕನು ಬಲ್ಲನು ಎಲ್ಲವ ಎಲ್ಲವ ಮಾಡುತ ಮಾಡಿಸಿ ಪೊರೆವನು ದೋಷಗಳಿಲ್ಲದ ಸ್ವರತ ರಮಾಧವ ಕೃಷ್ಣನು ಎನ್ನದೇ 2 ತಿಂಗಳ ಬೆಳಕಲಿ ರಂಗನು ಬಂದಾನೇ ಅಂಗಜತಾಪವ ಹರಿಸುವೆನೆಂದಾನೆ ಕಂಗಳಿಗ್ಹಬ್ಬವ ನೀಡುತ ಪೊರೆದಾನೇ ಹಿಂಗದೆ ತನುಮನ ಎಲ್ಲವ ಸೆಳೆದಾನೇ ಮಂಗಳಕಾಯನು ನೀಡಲು ನಮಗಾ ಲಿಂಗನ ಸುಖವನು ಬಹುಮುಡಿ ಆದಾನೇ ಅಂಗವ ಮರೆಸುತ ಮಹದಾನಂದ ತ- ರಂಗದಿ ಒಯ್ಯುತ ಚೆಲುವನು ಕೂಡಿದನೇ ಅಂಗನೆ ಬುದ್ಧಿಲಿ ಇವನನು ತಿಳಿಯದೇ ರಾಗ ವಿಹೀನನ ನಮ್ಮೊಡನಾಡಿಯು ಎಂದೇವೇ ಸಾಗುತ ಬಂದಿಹ ನಮ್ಮಯ ರೂಪಕೆ ಎಂದೇವೇ ನಮ್ಮನು ಕೂಡುತ ಭೋಗವ ಪಡೆಯುವನೆಂದೇವೇ ಗಾಗ್ರ್ಯರು ಮುಂಚೆಯೆ ಪೇಳಿದ ನುಡಿಗಳ ಮರೆತೇವೇ ಭೋಗಿಶಯನ ಜಗದೇಕವೀರ ಸಕಲಾಗಮ ವಂದಿತ ಸಾಗಿಸೆ ದಿತಿಜರ ಕೃಷ್ಣನು ಬಂದಿಹ ದೇವಕಿ ಜಠರದಿ ಬಾಗುತ ಜಯಮುನಿ ವಾಯ್ವಂತರ್ಗತ ಶ್ರೀ ಕೃಷ್ಣವಿಠಲನು ಭಾಗವತgಶ್ರಯ ಪೂರ್ಣಾನಂದನ ಲೀಲೆಯ ತಿಳಿಯದೇ 3
--------------
ಕೃಷ್ಣವಿಠಲದಾಸರು
ಯತಿರಾಜಂ ಭಜರೇ ಮಾನಸಪತಿತೋದ್ಧಾರಕ ಯದುಗಿರಿ ನಿಲಯ ಪಶ್ರೀಮದ ದಾಶರಥೀನುತ ಚರಣಂಯಾಮುನಾ ಮುನಿ ಸಂಭಾವಿತ ಕರುಣಂಶ್ರೀಮದನಂತಂ ಕರುಣಾಭರಣಂರಾಮಾಯಣ ಮೂಲತತ್ವ ವಿಸ್ತರಣಂ 1 ಸಕಲವೇದ ಶಾಸ್ತ್ರಾಗಮ ನಿಪುಣಂವಕುಳಾಭರಣ ಪಾದಾಂಬುಜ ಭರಣಂಮುಕುಳಿತ ವೈಷ್ಣವ ತತ್ವೋದ್ಧರಣಂ[ವಿಕಸಿತ ವಿಶಿಷ್ಟಾದ್ವೈತ ವಿಶೇಷಂ] 2 ವ್ಯಾಸ ತತ್ವಸಾರಾಬ್ಧಿ ವಿಸ್ತರಣಂವಾಸುದೇವಕೃತ ಗೀತೋದ್ಧರಣಂವಾಸವನುತ ಮಾಂಗಿರಿಹರಿ ಚರಣಂದಾಸದಾಸೀಜನ ಪಾತಕಹರಣಂ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಯತಿರಾಜ ಯತಿರಾಜ ಕ್ಷಿತಿದೇವ ತತಿನುತ ರಾಘವೇಂದ್ರ ಆದಿಯುಗದಿ ಪ್ರಹ್ಲಾದ ಸುನಾಮದಿ ಮೋಹದಿ ಭಜಿಸುತ ಮಾಧವನೊಲಿಸಿದ 1 ಘನ ವಿರಾಗ್ರಣಿ ಜನಪತಿ ಬಾಹ್ಲೀಕ ನೆನಿಸಿ ದ್ವಾಪರದಿ ಜನಿಸಿದ ಗುಣನಿಧಿ 2 ವಾಸವನಾಯಕ ದಾಸಾರ್ಯರಿಗುಪ ದೇಶಗೈದ ಗುರುವ್ಯಾಸ ಪೋಷಿಸೈ 3 ಕ್ಷೋಣಿಯೊಳಗೆ ಕುಂಭಕೋಣ ಸುಕ್ಷೇತ್ರದಿ ವೀಣೆ ವೆಂಕಟಾಭಿಧಾನದಿ ಜನಿಸಿದ 4 ದೀನ ಜನಾಮರಧೇನು ಸುಧೀಂದ್ರರ ಪಾಣಿಪದ್ಮಭವ ಮಾಣದೆ ಕಾಯೋ 5 ತುಂಗಭದ್ರ ಸುತರಂಗಿಣಿ ತೀರದಿ ಕಂಗೊಳಿಸುವ ಶತಪಿಂಗಳ ತೇಜ6 ಜಲಧಿ ಶಶಾಂಕ 7 ಬಾಲನ ಬಿನ್ನಪ ಲಾಲಿಸಿ ಪ್ರೇಮದಿ ಪಾಲಿಪುದೈ ಮಂತ್ರಾಲಯ ನಿಲಯ8 ಪರಿಮಳ ಗ್ರಂಥವ ವಿರಚಿಸಿ ದುರ್ಮತ ಮುರಿದು ಸಜ್ಜನರಿಗೊರೆದ ಮಹಾತ್ಮ 9 ಪರಿಪರಿಭವದೊಳು ಪರಿತಪಿಸುವೆನೈ ಪರಮ ಕರುಣದಲಿ ಪರಿಕಿಸಿ ಪೊರೆಯೊ 10 ಕಾಮಿತದಾಯಕ ಭೂಮಿಜೆನಾಯಕ ಶಾಮಸುಂದರನ ಪ್ರೇಮದ ಸೇವಕ 11
--------------
ಶಾಮಸುಂದರ ವಿಠಲ
ಯತಿರಾಜಾ - ಪಾಲಿಸೊ ಎನ್ನ - ಯತಿರಾಜಾ ಪ ಯತಿರಾಜಾ ಪಾಲಿಸೊ ಎನ್ನ - ಅಹಂಮತಿಯ ಕಳೆದು ಗುರುವರೇಣ್ಯ | ಆಹ ಸತತದಿ ಹರಿ ಧ್ಯಾನ | ರತನನ ಮಾಡಿ ಸದ್ ಗತಿಯ ಸೇರುವಂಥ | ಪಥದಲ್ಲಿರಿಸೊ ರಾಜಅ.ಪ. ವೀಣಾ ವೆಂಕಟ ನಾಮಾಭಿಧ | ಕುಂಭಕೋಣ ಪುರದೊಳು ಮೆರೆದಾ | ಓವಿಜ್ಞಾನಿ ಸುಧೀಂದ್ರರೊಲಿಸಿದಾ | ಬಹುಮಾನವಾಗಿ ಶಾಲು ಪಡೆದಾ | ಆಹಏನು ಇದಾಶ್ಚರ್ಯ | ಮಾನ ಉಳಿವದೆಂತುನಾನೊಂದು ಕಾಣೆ | ನೆನುತಾವಸನ ಮುಂದಿಟ್ಟ 1 ಅಂದಿನಂದಿನ ಪಾಠಕ್ಕೆಲ್ಲ | ಟೀಕೆಛಂದಾಗಿ ಬರೆದಿರುವಲ್ಲ | ನಮ್ಮಹಿಂದಿನ ಸಂಶಯವೆಲ್ಲ | ನೀಗಿಮುಂದೆ ಜರುಗಿತು ಪಾಠವೆಲ್ಲ | ಆಹಎಂದು ನಮ್ಮ ವಸನ | ಕಂದ ನಿನ್ನಯ ಮೇಲೆಹೊಂದಿಸಿ ಮುದದಿಂದ | ಬಂದೆವೆಂದರ ಶಿಷ್ಯ 2 ಗುರುವು ಪಟ್ಟರು ಬಲು ಮೋದಾ | ಸುಧಾಪರಿಮಳಾರ್ಯರೆಂಬ ಬಿರುದಾ | ಪೊಂದಿಇರಲು ಕಾಲಾಂತರದಿಂದಾ | ಪಡೆದೆವರ ಯತ್ಯಾಶ್ರಮವವರಿಂದಾ | ಆಹಮೆರೆಸಿದೆ ರಾಮರ | ವರ ವೈಭವದಿಂದದುರುಳ ಮಾಯ್ಗಳಮತ | ತರಿದಿಟ್ಟೆ ವಾದದಿ 3 ಬೇಗೆಯಿಂದಳುತಿದ್ದ ಶಿಶುವಿಗೆ | ಚೈಲಆಗಸದೊಳು ನೀನು ನಿಲಿಸಿದೆ | ಹಾಂಗೆಮಾರ್ಗದಿ ಪ್ರಸವಿಸದವಳೀಗೆ | ನೀರನುಗಮಿಸುತ ನೀನು ಪೊರೆದೇ | ಆಹನಿಗಮಾಲಯ ವಾಸ | ರಾಘವೇಂದ್ರ ಗುರುವೆಬಗೆ ಬಗೆ ಗ್ರಂಥವ | ಮಿಗಿಲಾಗಿ ರಚಿಸೀದೆ 4 ಪಂಗು ಬಧಿರ ಮೂಕ ಜನರು | ನಿಮ್ಮಹಿಂಗದೆ ಬಂದು ಸೇವಿಪರು | ಬಂದಭಂಗಗಳೆಲ್ಲ ನೀಗುವರು | ಯತಿಪುಂಗನೆ ನಿನಗೆ ಸರಿಯಾರು | ಆಹಗಂಗಾ ಜನಕ ರೂ | ಪರಿಗಳು ನಾಲ್ಕರಿಂಅಂಗಲಾಚಿಪ ಜ | ನಂಗಳ ಪೊರೆಯುವ 5 ಅಘ ಪತಿ ಗೋ | ವಿಂದನ ಮಂದಿರಬಂದು ಸೇರುವುದಕ್ಕೆ | ಅಂದ ಸೋಪಾನವು 6 ವರಹಸುತೆ ತೀರ ವಾಸಾ | ಭಕ್ತಸುರತರುವೆ ನಿನ್ನ ದಾಸಾ | ನಾಗಿಇರಿಸೊ ಭೂ ತಳಾಧೀಶ | ಬೇಡ್ವೆವರ ಒಂದ ನಾನಿನ್ನ ಅನಿಶ | ಆಹಗುರುಗೋವಿಂದ ವಿಠಲನ | ಚರಣಾರವಿಂದವನಿರುತ ಭಜಿಸುವಂಥ ವರಮತಿ ಕೊಟ್ಟನ್ನ7
--------------
ಗುರುಗೋವಿಂದವಿಠಲರು
ಯದುರ್ಯಾರು ನಿಲ್ಲುವರೋ ಹನುಮರಾಯಾ ನಿನಗೆದುರ್ಯಾರು ನಿಲ್ಲುವರಯ್ಯಾ ಈ ಜಗತ್ರಯದಿ ಪ ಮದನ ಶರಾರ್ಬತ [?] ಕದನ ಕರ್ಕಶ ಧೀರಮಣಿಯೇ ಅ.ಪ. ಜನನಿಯ ಜಠರದಿ ಜನಿಸಿದಾಗಲೆ ದಿವಮಂಡಲಕೆ ಹಾರಿದೆ ಮಾಡಿ ದುರಂಧರನೆನಿಸಿದೆ 1 ದುರುಳ ದುಶ್ಶಾಸನನ ರಕುತವ ಹೀರಿ ಕರುಳು ಬಗೆವಾಗ ಮಾರಿ ತಗ್ಗಿಸಿ ಕೆಲಸಾರಿದರಲ್ಲದೆ 2 ಅದ್ವೈತ ಮತವ ಗೆದ್ದು ಮದ್ಗುರು ಮುನಿಮೌನಿರಾಮಾ 3
--------------
ಮಹಾನಿಥಿವಿಠಲ
ಯಾಕಿಂತುಪೇಕ್ಷಿಸುವಿ ಪರಮ ಕರು- ಣಾಕರ ಶಿಕ್ಷಿಸುವಿ ಪ. ಹಿಂದಿನಾಪತ್ತುಗಳ ಸಮಯದಿ ನೀ ಬಂದೆನ್ನ ಕಾಯ್ದುದಿಲ್ಲವೆ ತಂದೆ ನೀನೆಂದು ನಂಬಿದ ಮೇಲೆನ್ನ ನೀನು ಇಂದಿಂತುಪೇಕ್ಷಿಪುದೆ 1 ಭವರೋಗಹಾರಿ ನಿನ್ನ ಭಕ್ತನಿಗಿಂಥ ಭವಣೆಯು ನಿಲುವುದುಂಟೆ ಕವಿ ಸನಕಾದ್ಯರಂತೆ ದೈಹಿಕ ದು:ಖ ಸಹಿಸಲು ಶಕ್ತಿಯುಂಟೆ 2 ಸೈರಿಸಲಾರೆ ಇನ್ನು ವೇದನೆಯಾ ಶೌರೀ ನೀ ದಯದೋರಿನ್ನು ಬರಗರಸಮಂಡನ ಕೃಪಾಕಟಾಕ್ಷ ದೋರೊ ಸುರಾರಿಖಂಡನ 3
--------------
ತುಪಾಕಿ ವೆಂಕಟರಮಣಾಚಾರ್ಯ
ಯಾಕೆ ನೀನಿಲ್ಲಿ ಪವಡಿಸಿದೆ ಹರಿಯೆ - ಜಗ ಪ ದೇಕ ವಿಖ್ಯಾತ ಪಶ್ಚಿಮ ರಂಗಧಾಮ ಅ ತಮನೊಡನೆ ಹೋರಿ ಬೆಟ್ಟವನು ಬೆನ್ನಲಿ ಪೊತ್ತುರಮಣಿ ಭೂಮಿಯನು ತಂದಾಯಾಸವೂಅಮರವೈರಿಯ ಕರುಳ ಕಿತ್ತ ಕಡು ಧಾವತಿಯೊಕ್ಷಮೆಯನಳೆದೀ ಪಾದಕಮಲ ನೊಂದವೊ 1 ಪೊಡವಿಪಾಲಕರ ವಂಶವನು ವಪನ ಮಾಡಿಕೊಡಲಿಯನು ಬಿಸುಟು ಮಲಗಿದ ಭಾವವೊಮಡದಿಯನು ಕದ್ದೊಯ್ದವನ ಶಿರವನೆ ತರಿದುಒಡಲಿನಾಯಾಸದಲಿ ಪವಡಿಸಿದ ಪರಿಯೋ 2 ವಾಲಿ ಮೊದಲಾದ ಎದುರಾಂತ ವೀರರ ಕೊಂದುಕಾಳಿಯ ಹೆಡೆಯ ತುಳಿತುಳಿದು ಮೈಯಲಸಿತೊಲೀಲೆಗೋಸುಗ ಬಂದು ನಿರ್ವಾಣದಲಿ ನಿಂದುಆ ಲಜ್ಜೆಗಾಗಿ ತಲೆ ಬಾಗಿ ಮಲಗಿದೆಯೊ 3 ನಾಲ್ಕು ಯುಗದಾಧಾರಿ ಕಡೆಗೆ ತುರಗವನೇರಿಸಾಕಾಗಿ ದಣಿದು ನೀನಿಲ್ಲಿ ಮಲಗಿದೆಯೊಸಾಕಾರಿಯಾಗಿ ಗೌತಮ ಮುನೀಶ್ವರನಿಗೆಬೇಕೆಂದು ನೀ ಕೊಟ್ಟ ವರಕೆ ಮಲಗಿದೆಯೊ 4 ಕಾಲ ನೀನಿಲ್ಲಿ ಮಲಗಿದ್ದರೂನಿನ್ನನೆಬ್ಬಿಸುವವರನೊಬ್ಬರನು ಕಾಣೆಉನ್ನಂತ ಕಾಗಿನೆಲೆಯಾದಿಕೇಶವರಾಯಚೆನ್ನ ಶ್ರೀರಂಗಪಟ್ಟಣದ ರಂಗಧಾಮ 5
--------------
ಕನಕದಾಸ
ಯಾಕೆ ಬಾರನಕ್ಕಯ್ಯ ಎನ್ನಯ ಪ್ರಾಣನಾಥನ ಕರೆತಾರೆ ಸೈರಿಸಲಾರೆ ಪ. ಸೋಗೆಗಂಗಳ ಸನ್ನೆ ಮಾಡಿ ಪೊಳೆದು ಪೋದ ಮೇಘದ ಮಿಂಚಿನಂತೆ ಮಂದರೋದ್ಧಾರ ಬಾಗಿದ ಮುಖವೆತ್ತಿ ಎನ್ನ ನೋಡದೆ ಪೋದ ಹ್ಯಾಂಗ ಮಾಡಲಿ ಸಖಿಯೆ ಹೇಳಲಿ ಪ್ರಿಯೆ 1 ಕರವೊಡ್ಡಿ ಬೇಡಿಕೊಂಡರೆ ಒಲ್ಲದೆ ಪೋದ ಕರೆದರೆ ಪಿತನಾಜ್ಞೆ ತೋರುತಾನೆ ನಿರುತದಿ ಏಕಪತ್ನಿಯ ವ್ರತನೆನುತ ಸರಿಬಂದ ಸತಿಯರ ಒಡನಾಡುತೈದಾನೆ ಗರುವತನವ ಬಿಡನೆ ಗೋವ ಕಾಯ್ವವನೆ 2 ಸುಮ್ಮನೆ ಲಜ್ಜೆಭಂಗವ ಮಾಡಿ ಪೋದನೆ ಒಮ್ಮೆ ಮನೆಗೆ ಬಾರನೆ ವಾಜಿವಾಹನನೆ ತಮ್ಮ ಧ್ಯಾನದೊಳೆನ್ನ ಮನಸು ನಿಲ್ಲಿಸಿ ಪರ- ಬೊಮ್ಮ ಮೂರುತಿ ಹೆಳವನಕಟ್ಟೆರಂಗನ ಘಮ್ಮನೆ ಕರೆದುತಾರೆ ಸೈರಿಸಲಾರೆ 3
--------------
ಹೆಳವನಕಟ್ಟೆ ಗಿರಿಯಮ್ಮ