ಒಟ್ಟು 3141 ಕಡೆಗಳಲ್ಲಿ , 118 ದಾಸರು , 2209 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಲಂ ಮುಚಕುಂದ ವರದ ಹರಿಗೆಮಂಗಲಂ ಪ್ರಲ್ಹಾದ ವರದ ನರಹರಿಗೆ ಪಮಂಗಲಂ ಮಾಧವಗೆ ವಂಗಲಂ ಶ್ರೀಧರಗೆಮಂಗಲಂ ಗಿರಿಧರ ಕಾವೇರಿರಂಗನಿಗೆಮಂಗಲಂ ಶ್ರೀಪಾಂಡುರಂಗನಿಗೆ ಭವಭಂಗಸಂಗೀತ ಪ್ರಿಯನಾದ ಪಾಂಡುರಂಗನಿಗೆ 1ಮಂಗಲಂ ಅಕ್ರೂರವರದ ಶ್ರೀಕೃಷ್ಣನಿಗೆಮಂಗಲಂ ಪುಂದಲೀಕ ವರದ 'ಠ್ಠಲಗೆಮಂಗಲಂ ದ್ರುವರಾಜ ವರದನಾರಾಯಣಗೆಮಂಗಲಂ ಮಧ್ವಮುನಿಗೊಲಿದ ವ್ಯಾಸರಿಗೆ 2ಪುರಂದರ'ಠ್ಠಲಗೆ ಸಿರಿ'ಜಿಯ'ಠ್ಠಲಗೆಗೋಪಾಲ'ಠ್ಠಲ ಮೋಹನ'ಠಲಗೆಜಗನ್ನಾಥ'ಠಲಗೆ ಪ್ರಾಣೇಶ'ಠ್ಠಲಗೆಶ್ರೀಪತಿ'ಠ್ಠಲ ಭೂಪತಿ'ಠ್ಠಲಗೆ 3
--------------
ಭೂಪತಿ ವಿಠಲರು
ಮಂಗಲವಾ ಪಾಡುವೆನಾ ಮಂಗಲಾಂಗ ಗುರುದೇವಗೆ ಸಂಗರಹಿತ ಸಂಪೂರ್ಣಗೆ ಕಂಗೊಳಿಸುವ ಪರಮಾತ್ಮಗೆ ಪ ಬೋಧಿಸುತಲಿ ಪ್ರೇಮದಿಂದ ಸಾಧನೆ ಸಾಧ್ಯಗಳ ಮರ್ಮ ಛೇದಿಸುತಲಿ ಭವಜಾಲವ ಮೋದವೀವ ಘನ ಮಹಿಮಗೆ 1 ಬಲು ಶಾಸ್ತ್ರದ ತೊಡಕಿಲ್ಲದೆ ಸುಲಭದಿಂದ ಬೋಧಿಸುವಾ ತಿಳಿ ಆತ್ಮನೇ ನೀನೆನ್ನುತ ಘನ ಶಾಂತಿಯ ನೀಡಿದವಗೆ 2 ನಾರಾಯಣ ಗುರುದೇವನ ಪರಮ ಪ್ರೀತಿ ಪಾತ್ರನೀತ ಧರೆಯೊಳಗವತರಿಸಿದ ಶ್ರೀ ಗುರುಶಂಕರದೇವನಿಗೆ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಮಂಗಲಾರತಿಯ ಪಾಡಿರೇ | ರಂಗನಾಥರುಕ್ಮಿಣೀಗೆ ಪ ಸಿಂಧು ಸುತೆಗೇ | ಸೀತಾರಾಮಚಂದ್ರಗೇ | ಉಪೇಂದ್ರಗೇ ಅ.ಪ ಮತ್ಸ್ಯ ಕೂರ್ಮವರಹಾವತಾರಗೇ ಕರುಳ ಮಾಲೆಧರಿಸಿದಾ ಲಕ್ಷ್ಮಿನಾರಸಿಂಹಗೇ 1 ಬಲಿಯ ದಾನವನ್ನೇ ಬೇಡಿ ಮಾತೆ ಶಿರವನಳಿದವಗೇ ಜಗವತೋರ್ದವಗೇ 2 ಬೆತ್ತಲಾಗಿ ನಿಂತಿದ್ದ ಉತ್ತಮ ಬೌದ್ಧ ಕಲ್ಕಿಗೇ ಸೃಷ್ಟಿಗೊಡೆಯ ಬಳ್ಳಾರಿ ಲಕ್ಷ್ಮೀನಾರಸಿಂಹವಿಠಲಗೇ 3
--------------
ಓರಬಾಯಿ ಲಕ್ಷ್ಮೀದೇವಮ್ಮ
ಮಂಗಳ ಮಂಗಳಾರತಿ| ಬೆಳಗುವೆನೀಗ| ಶೃಂಗರಿಸುತ ಸುಮ| ಸಂದೋಹದಿ ಪ ಮಂಗಲವನು ಹಾಡಿ| ಇಂಗಿತವನು ಬೇಡಿ| ಮಂಗಳಾತ್ಮಕಿ ದೇವಿಯ ಪಾದಕೆ ಅ.ಪ ಅಜಭವ ಸುರನರ| ತ್ರಿಜಗಪೂಜಿತ ಪಾದ| ಭಜಿಸುತ ಮನದೊಳು| ಮೊದಲೊಂದಿಸಿ|| ಪಾದ ಪೂಜೆಯ ಮಾಡಿ| ನಿಜಭಕ್ತಿಯಿಂದಲಿ| ಜಯ ಜಯವೆನ್ನುತ 1 ಮಂದರಧರ ನಿನ್ನ| ದ್ವಂದ್ವಪಾದಗಳನ್ನ| ಚಂದದಿ ಪೂಜಿಸಿ| ಭಜಿಸುತಲಿ|| ಕಂದರ್ಪನಯ್ಯನೆ| ಸಿಂಧುಶಯನನೆ| ಇಂದಿರೇಶನಿಗಾ| ನಂದದಿಂದಲಿ 2 ಮತ್ಸ್ಯವ ತಾರಿಗೆ| ಕೂರ್ಮಗೆ ವರಾಹಗೆ| ನರಹರಿ ರೂಪಗೆ| ವಾಮನಗೆ|| ಯಾದವಕುಲದೀಪ| ಮುರಲಿ ಕೃಷ್ಣಗೆ3 ಕಲ್ಕಿಸ್ವರೂಪದಿ| ಮೆರೆವವಗೆ|| ದಶವಿಧರೂಪದಿ| ಧರೆಯನು ಪೊರೆದ| ವಿಜಯವಿಠಲ ನಮ್ಮ| ಗುರುವೆಂಕಟೇಶಗೆ 4
--------------
ವೆಂಕಟ್‍ರಾವ್
ಮಂಗಳಂ ಜಯ ಮಂಗಳಂ ಮಂಗಳಂ ಬೆಟ್ಟದೊಡೆಯ ಹರಿಗೆ ಜಯ ಪ. ಮಂಗಳಂ ಕೊಳಲನೂದುವ ದೊರೆಗೆ ಮಂಗಳಂ ಶ್ರೀ ಶ್ರೀನಿವಾಸ ವೆಂಕಟನಿಗೆ ಮಂಗಳಂ ಶೇಷಾಚಲ ಹರಿಗೆ ಅ.ಪ. ವೈಕುಂಠದಲಿ ಬಂದವಗೆ ಆ ಕೋಲಗಿರಿಯಲಿ ನಿಂದವಗೆ ತಾ ಕಾಸುಕಾಸಿಗೆ ಬಡ್ಡಿಯ ಕೊಳುತಲಿ ಬೇಕಾದ ವರಗಳ ಕೊಡುವನಿಗೆ 1 ಬುತ್ತಿ ಪೊಂಗಲುಗಳ ಮಾರುವಗೆ ಮತ್ತೆ ದರ್ಶನ ಕೊಡದೆ ಒದೆಸುವಗೆ ನಿತ್ಯ ಸ್ವಾಮಿಪುಷ್ಕರಣಿ ತೀರದಿ ನಿಂತು ಭೃತ್ಯವರ್ಗಗಳನು ಪೊರೆವವಗೆ 2 ಶಂಖ ಚಕ್ರ ವರ ಹಸ್ತನಿಗೆ ಶಂಕೆಯಿಲ್ಲದೆ ಅಭಯ ಕೊಡುವನಿಗೆ ಶಂಕರಮಿತ್ರಗೆ ಪರಮಪವಿತ್ರಗೆ ಸಂಕೋಲೆ ಹನುಮಗ್ಹಾಕಿಸಿದವಗೆ 3 ವೃಂದಾವನದಲಿ ಮೆರೆದವಗೆ ಮಂದಗಮನೆಯರ ಮೋಹಿಪಗೆ ಚಂದದ ಪೊಂಗೊಳಲೂದಿ ಗೋಪಿಯರ ಕಾಯ್ದ ಗೋಪಿ ಕಂದನಿಗೆ 4 ನಾಗರಾಜನ ಗಿರಿ ನಿಲಯನಿಗೆ ಯೋಗಿಗಳಿಗೆ ನಿಲುಕದ ಹರಿಗೆ ಸಾಗರನಿಲಯ ಗೋಪಾಲಕೃಷ್ಣವಿಠ್ಠಲ ಭೋಗಿಶಯನ ಲಕ್ಷ್ಮೀಪತಿಗೆ 5
--------------
ಅಂಬಾಬಾಯಿ
ಮಂಗಳಂ ಜಯ ಮಂಗಳಂ ಶುಭಮಂಗಳೆನ್ನಿರೇ ಹಿಂಗದಂತರಂಗಲಿಪ್ಪಾ ನಂಗನಯ್ಯಗೆ ಪ ಹೆಣ್ಣ ಮಾಡಿತಮನ್ನ ವಿಕ್ರಮ ಹೆಣ್ಣವೆನಿಸಿ ಹೆಣ್ಣಿಗೊಲಿದು ಹೆಣ್ಣು ತೊ ಡಿಯೊಳಿನ್ನು ತಾಳಿ ಹೆಣ್ಣ ಮಡ ದಂಗೆ ಹೆಣ್ಣಿನಳಿದು ಹೆಣ್ಣೆ ನೆಬ್ಬಿಸಿ ಹೆಣ್ಣ ಹಲವರೊಡನೆ ಆಡಿದ ಹೆಣ್ಣ ವೃತಗೆಡಿಸಿ ಕುದುರೆ ಯಾರೋಹಣ ಗೈದಂಗೆ 1 ನಿಗಮ ತಂದು ನಗವನೆತ್ತಿ ಜಗವನುಳಹಿ ಮಗುವಿಗೊಲಿದು ತುಂಬಿ ಮಿಗಿಲ ಭೂಸುರಗಳ ಹೊರದಂಗೆ ಬಿಗಡಗೊಲಿಸಿದ ಸಗಟನೊತ್ತಿ ವಿಗಡ ಕಲ್ಕಿಗೆ 2 ಮತ್ಸ್ಯರೂಪದಿ ಕಚ್ಚಪಾಗಿ ಸ್ವಚ್ಛಕೋಡದಿ ಬೆಚ್ಚ ನರಹರಿ ಅಚ್ಚ ವಾಮನ ನಿಚ್ಛ ಕೊಡಲಿಯ ಮಚ್ಚು ಜನ ಕಂಗೆ ಇಚ್ಛ ನಡೆಸಿದ ಮೆಚ್ಚಿ ಗೋಕುಲ ಹುಚ್ಚು ಮಾಡಿದ ಬಾಲನೆನಿಸಿ ಸಚ್ಚರಿತ ಕಲಿನಾಶ ಮಹಿಪತಿ ನಂದ ನೊಡಿಯಂಗೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಂಗಳಂ ಮಂಗಳಂ | ಜಯ | ಮಂಗಳಶ್ರೀ ಶ್ರೀನಿವಾಸನರ್ಧಾಂಗಿ ಪ ಭೃಗುಕಾಲಿಲೊದಿಯಲು | ಅಗಲಿ ಬಂದಳು ಎಂಬೋ ||ಬಗೆ ತೋರಿ ಮೋಹಿಸಿ ಇಗಡ ಜನರ ನಾ || ಮಂಗಳಂ 1 ಪರಮ ಧಾರ್ಮಿಕನಾದ | ವರನಾರಾಯಣ ಋಷಿ ಗೊರವಿತ್ತು ನಡೆತಂದೆ | ಮೆರೆವ ಸನ್ನತಿಗೆ || ಮಂಗಳಂ2 ಕೋಲಾಸುರನ ಕೊಂದು | ಪಾಲಿಸಿ ಪುರವನ್ನು |ಶೀಲೆ ಚಂದ್ರಾದೇವಿ ಆಳಿದಗೊಲಿದೆ || ಮಂಗಳಂ 3 ಪಾತಕ ಕಳದೆ || ಮಂಗಳಂ 4 ಗುರುಪ್ರಾಣೇಶ ವಿಠಲಾ | ಇರುವ ನೀನಿದ್ದಲ್ಲಿಎರವಿಲ್ಲೀ ಮಾತಿಗೆ ಸುರರ ಸಮ್ಮತವೂ || ಮಂಗಳಂ 5
--------------
ಗುರುಪ್ರಾಣೇಶವಿಠಲರು
ಮಂಗಳಂ ಶ್ರೀಕೃಷ್ಣವೇಣಿಗೆ ಜಯ ಮಂಗಳಂ ಜಗದುದ್ಧಾರಳಿಗೆ ಪ ರಂಗನ ಪಾದದಿ ಗಂಗೆ ಉದ್ಧವಿಸಲು ಅಂಗದಿಂದಾಗಲೆ ತಾನುದಿಸಿ ಬಂದು ಗಂಗಾಧರನ ದೇಹದಿ ಬಂದು ವೇಣಿಯ ಸಂಗಮವಾಗಿ ಬಂದ ದೇವಿಗೆ ಅ.ಪ ಮುನ್ನೂರು ಅರವತ್ತು ನದಿಗಳೆಲ್ಲ ಕೂಡಿ ಕನ್ಯಾರಾಶಿಗೆ ಗುರು ಬಂದಿರಲು ವಾಸವ ಮಾಡಲು ಅವರ ಪಾಪವ ಕಳೆದ ಶ್ರೀ ಕೃಷ್ಣವೇಣಿಗೆ 1 ಇಂದ್ರನ ಪಾಪವ ನದಿಗಳಿಗೆ ಬಿಡಲು ನಿಂದಿತರಾಗಿ ದುಃಖಿಸುತ ಪೋಗಿ ಬಂದ ಕೃಷ್ಣವೇಣಿಗೆ ಗಂಗಾದೇವಿಗೆ 2 ವೇಣುಶೂರ್ಪಗಳಲ್ಲಿ ನಾನಾ ಫಲಗಳ ಇಟ್ಟು ನೇಮದಿಂ ಬಾಗಿನಂಗಳ ಕೊಡಲು ಮಾನಿನಿಯರೆಲ್ಲ ಮೌನದಿಂ ಕೊಡಲು ಮಾಂಗಲ್ಯವಿತ್ತು ಸಲುಹುವ ದೇವಿಗೆ 3 ಕೃಷ್ಣತೀರದಲ್ಲಿದ್ದ ವೃಕ್ಷದೇವತೆಗಳು ಋಷಿಗಳು ಪಾಷಾಣವಾಗಿರಲು ನಕ್ರ ಮೊದಲಾದ ಜಂತುಗಳೆಲ್ಲ ಯಕ್ಷರು ವಾಲೂಕ ಹರಿದ ಧೂಲಿಯಾಗಿಹರು 4 ಇಂದ್ರದಂಡಕ ದಂತ್ರಿಪಾಲ ಸೋಮಕ ಧರ್ಮ ನಂದನ ನಳ ಹರಿಶ್ಚಂದ್ರರೆಲ್ಲ ಬಂದು ಸ್ನಾನವ ಮಾಡೆ ಅವರ ಪಾಪಗಳ ಆ ನಂದದಿಂ ಕಳೆದ ಕೃಷ್ಣವೇಣಿಗೆ 5 ಮಲಾಪಹಾರಿ ಭೀಮೆ ತುಂಗಭದ್ರೆಯು ಮೊ [ಒಲವಿ]ಂದ ಸ್ನಾನಪಾನವ ಮಾಡಿದವರಿಗೆ [ಲೋಲ] ಶ್ರೀನಿವಾಸನ ಪಾದತೋರ್ಪ ಕೃಷ್ಣವೇಣಿಗೆ 6
--------------
ಯದುಗಿರಿಯಮ್ಮ
ಮಂಗಳಂ ಶ್ರೀರಂಗಗ ಮಂಗಳಂ ಇಂಗಿತ ಭಕ್ತರ ಅಂಗಸಂಗಾದವಗ ಪ ಸಿರಿತಳಕ ಮಂಗಳ ಕಾಲಿಯ ವರದನಾ ವರನಖಮಂಗಳ ಗಂಗೆ ಪಡಿದನಾ ಚರಣ ಕಮಂಗಳ ಅಹಿಲ್ಯ ಉದ್ಧಾರಗ ನೆರೆಜಂಘಗೆ ಮಂಗಳೆ ಶೊದಾನಂದನಾ 1 ತೊಡೆಗಳಿಗೆ ಮಂಗಳ ಗರುಡ ವಾಹನನಾ ನಡುವಿಗೆ ಮಂಗಳ ಧೃವ ಗೊಲಿದನ ಒಡಲ ಕಮಂಗಳ ಜಗವಳ ಕೊಂಬನಾ ಧೃಡ ನಾಭಿಗೆ ಮಂಗಳ ಬ್ರಹ್ಮ ಪಿತನಾ 2 ಉರ ಸಕ ಮಂಗಳ ಉಪಮನ್ಯು ಪ್ರೀಯನಾ ಸಿರಿವಕ್ಷಕ ಮಂಗಳ ಭೃಗು ರಕ್ಷನಾ ಕರಗಳಿಗೆ ಮಂಗಳ ಕರಿರಾಜ ವರದನಾ ಕೊರಳಿಗೆ ಮಂಗಳ ತುಳಸಿ ಧರನಾ 3 ಇದು ಶೃತಿಗೆ ಮಂಗಳ ಹನುಮನೇ ಕಾಂತನಾ ವದನಕ ಮಂಗಳ ವಿದುರ ಗೊಲಿದನಾ ಅದೇ ಫ್ರಾಣಕೆ ಮಂಗಳ ಪ್ರಲ್ಹಾದ ವತ್ಸಲನಾ ಮದನ ಮೋಹನನಾ 4 ಸಿರಸಕ ಮಂಗಳ ಫಣಿರಾಜಶಯನನಾ ದೊರೆತನಕ ಮಂಗಳ ಶ್ರೀ ಭೂರಮಣನಾ ಗುರುತನಕ ಮಂಗಳ ಉದ್ಬವತಾರಕನಾ ಕರುಣಿಗೆ ಮಂಗಳಾರ್ಜುನ ಬೋಧನಾ 5 ಪ್ರಭುಗೆ ಮಂಗಳ ಬಲಿ ವಿಭೀಷಣರ ಸ್ಥಾಪನಾ ಅಭಯಕ ಮಂಗಳಾಜಮೀಳ ಪಾಲನಾ ಅಭಿಮಾನಿಗೆ ಮಂಗಳಾ ಪಾಂಚಾಲಿಕಾಯಿದನಾ ಪ್ರಭೆಗೆ ಮಂಗಳಾ ರವಿ ಸೋಮಾತ್ಮಕನಾ 6 ಸಿರಿನಾಮಕ ಮಂಗಳ ನಾರದ ಪ್ರೀಯನಾ ಕ ಮಂಗಲ ಶಿವ ವಂದ್ಯನಾ ಗುರುವರ ಮಹಿಪತಿ ನಂದನಸಾರಥಿ ಬಿರದಿಗೆ ಮಂಗಳಾಂಬರೀಷ ನೊಡಿಯನಾ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಂಗಳಂ ಸುಗುಣಾಭಿರಾಮಗೆ ಮಂಗಳಂ ಶ್ರೀರಾಮಗೆ ಪ ಮಂಗಳಂ ಲೋಕಾಭಿರಾಮಗೆ ಮಂಗಳಂ ಗುಣಧಾಮಗೆ ಅ.ಪ. ದಶರಥನ ಸುತನಾಗಿ ಮುನಿವರ ಕುಶಿಕಯಜ್ಞವ ಪಾಲಿಸಿ ಶಶಿಮುಖಿಯ ಸೀತೆಯನು ಒಲಿಸಿದ ದಿಶಿಸುಭಾಸುರ ನಾಮಗೆ 1 ತಂದೆಯಾಜÉ್ಞಯ ಪೊಂದುತಾಗಲೆ ಬಂದು ವನದಲಿ ನೆಲಸಿದ ಛಂದದಿಂದಲಿ ಕಂದಭರತನಿಗಂದು ಪಾದುಕೆ ಇತ್ತಗೆ 2 ದಂಡಕಾವನದಲ್ಲಿ ನೆಲಸುತ ಖಂಡಿಸುತ ರಾಕ್ಷಸರನು ಭಂಡರಾವಣ ಹರಿಸೆ ಸೀತೆಯ ಚಂಡ ಹನುಮನ ಕಂಡಗೆ 3 ವೀರ ವಾಲಿಯ ಕೊಂದು ರಾಜ್ಯವ ಸೂರ್ಯಸುತನಿಗೆ ಪಾಲಿಸಿ ವಾರಿಜಾಕ್ಷಿಯ ಪುಡುಕಲೋಸುಗ ವೀರರನು ಕಳುಹಿಸಿದಗೆ 4 ಮಾರುತಾತ್ಮಜನಿಂದ ಸೀತಾ ನೀರಜಾಕ್ಷಿಯ ವಾರ್ತೆಯಂ ಸಾರಿ ಮದನು ಪೊಂದಿ ದಯದಿಂ ವೀರ ಕಪಿವರಗೊಲಿದಗೆ 5 ಧೀರರಾವಣನನ್ನು ಕೊಂದು ನಾರಿ ಸೀತೆಯನೊಲಿಸುತ ಸಾರಿ ಸಾಕೇತವನು ಮುದದಿಂ ವೀರ ಪಟ್ಟವನಾಳ್ದಗೆ 6 ಜಾನಕೀ ಲಕ್ಷ್ಮೀ ಸಮೇತಗೆ ಮೌನಿವರಗಣ ಸೇವ್ಯಗೆ ಮಾನವಾಂಬುಧಿ ಪೂರ್ಣ ಚಂದ್ರಗೆ ಧೇನುಪುರ ಶ್ರೀರಾಮಗೆ 7
--------------
ಬೇಟೆರಾಯ ದೀಕ್ಷಿತರು
ಮಂಗಳನಾದ ಕೇಳುವತನಕ ಮನಸು ನಿಲ್ಲುವುದೇಸಂಗಹರನು ಆಗದತನಕ ಸಾಕ್ಷಿಯಾಗುವುದೇ ಪ ಭಾಮಿನಿಯನ್ನು ತ್ಯೆಜಿಸದತನಕ ಭಕ್ತನಾಗಲಹುದೇಕಾಮವನ್ನು ಕಡಿಯದತನಕ ಕರುಣಿಯಾಗಲಹುದೆ 1 ಪರ ತಾನಾಗುವುದೇನೀನು ನಾನೆಂಬುದ ನೀಗದತನಕ ನಿಜವದು ತಾನಹುದೇ 2 ಹಮ್ಮು ಕೋಶ ಕಳೆಯುವತನಕ ಹಂಸನಾಗಬಹುದೇಬ್ರಹ್ಮ ಚಿದಾನಂದನಾಗದತನಕ ಭ್ರಮೆ ತಾ ತೊಲಗುವುದೇ 3
--------------
ಚಿದಾನಂದ ಅವಧೂತರು
ಮಂಗಳವೆನ್ನಿ ಮುದವೆನ್ನಿ ಶೋಭಾನೆ ಪ ಸಿರಿ ಲತಾಂಗಿ ಹುತ್ಕುಮಲಾಲಯ ಕು ಹಸೆಯ ಜಗಲಿಗೇ 1 ಇಂದಿರೆ ಸಹೋದರೆ ಸುನಿಭಾನನೆ ಶ್ರುತಿಗೀತೆ ಮಂಗಳ ದೇವಿ ಹಸೆಗೇಳು 2 ಅತುಲಮಹಿಮ ಅಜರಾಮರಣನೆ ಪತಿತ ಪಾವನ್ನ ಹಸೆಗೇಳೋ 3 ಉದ್ಯದ್ರವಿ ಸನ್ನಿಭೆ ಆಗಮ ವೇದ್ಯಳೆ ವಿನತಾತ್ಮಜ ಧ್ವಜರಿ ನಪ್ರಿಯೆ ಹಸೆಗೇಳು 4 ಸಾರಥಿ ವ್ರಾತೋತ್ತಮ ವ್ರಜಭವ ನಾರೇರ ದಾಮೋದರ ಜಗನ್ನಾಥ ವಿಠ್ಠಲ ಹಸೆಗೇಳೋ 5
--------------
ಜಗನ್ನಾಥದಾಸರು
ಮಗಳೆ ಜಾನಕಿ ನಿನ್ನ ಸುಗುಣಸನ್ಮೋಹನ್ನ ಖಗಕುಲರನ್ನ ಮನೋರಮಣ ಮನೋರಮಣ ಕಾಂತ ಶ್ರೀರಾಮನ ಅಗಲದಿರು ಕಾಣೆ ಮರಿಯಾನೆ ಶೋಭಾನೆ 1 ಪತಿಯೇಳ್ವ ಮೊದಲು ಜಾಗ್ರತೆಯಾಗಿ ಯೆದ್ದು ಗೃಹ- ಕೃತ್ಯಕೆಲ್ಲಕ್ಕನುಸರಿಸಿ ಅನುಸರಿಸಿ ನಡೆ ನೀ ಮಗಳೆ ಹಿತವಾಗಿ ಬಾಳು ಪತಿಯೊಳು ಶೋಭಾನೆ 2 ಗಂಡನ ಮಾತಿಗೆ ದುರ್ಚಂಡಿಸದಿರು ಮಗಳೆ ಗಂಡನುಣ್ಣದ ಮೊದಲು ನೀ ಮೊದಲು ನೀನುಣ್ಣದಿರು ಪುಂಡರೀಕಾಕ್ಷಿ ಪುಣ್ಯರಾಶಿ ಶೋಭಾನೆ 3 ಮುಗುಳು ನಗೆಯ ಬೀರು ಜಗಳವ ಮಾಡದಿರು ಜಗದೊಳು ಕೀರ್ತಿಯುತಳಾಗು ಯುತಳಾಗು ಬಂಧುಗಳಲಿ ನೀ ಹಗೆಯ ಮಾಡದಿರು ಕೃಪೆದೋರು ಶೋಭಾನೆ 4 ಪಾದ ಹೊದ್ದಿ ಸೇವೆಯ ಮಾಡು ಸುದ್ಧ ಭಾವದೊಳು ನಡೆ ಮಗಳೆ ನಡೆ ಮಗಳೆ ನಿತ್ಯಸುಮಂಗಲೆ ಮುದ್ದಾಗು ಬಂಧು ಬಳಗಕ್ಕೆ ಶೋಭಾನೆ 5 ಅತ್ತೆಯ ಮಾತಿಗೆ ಪ್ರತ್ಯುತ್ತರ ಕೊಡದಿರು ಪ್ರತ್ಯೊಬ್ಬಳೆ ಸ್ಥಳದಿ ನಿಲದಿರು ನಿಲದಿರು ನೀರಜಗಂಧಿ ಸತ್ಯ ವಚನವನೆ ಸವಿಮಾಡು ಶೋಭಾನೆ 6 ಮೈದುನರನ್ನು ತನ್ನ ಮಕ್ಕಳೆಂಬಂತೆ ನೋಡು ಸಾಧುಭಾವದದಲಿ ನಡೆ ಮಗಳೆ ನಡೆ ಮಗಳೆ ಪಂಕ್ತಿಯಲಿ ಭೇದ ಮಾಡದಿರು ಕೃಪೆದೋರು ಶೋಭಾನೆ 7 ಕಂಡರೆ ಶಿಷ್ಟರ ದಂಡ ನಮಸ್ಕರಿಸು ಹಿಂಡು ದಾಸಿಯರ ದಣಿಸದಿರು ದಣಿಸದಿರು ಉತ್ತಮಳೆಂದು ಭೂ- ಮಂಡಲದಿ ಕೀರ್ತಿಪಡು ಪೂರ್ತಿ ಶೋಭಾನೆ8 ಚಂಡಿತನವ ನಿನ್ನ ಗಂಡನೊಳ್ಮಾಡದಿರು ಗಂಡಸರ ಮುಂದೆ ಸುಳಿಯದಿರು ಸುಳಿಯದಿರು ಸಂತತ ಸೌಖ್ಯ- ಗೊಂಡು ಬಾಳಮ್ಮ ಸೀತಾಭಾಮಾ ಶೋಭಾನೆ 9 ಕ್ಷಮೆಯಲ್ಲಿ ಧಾತ್ರಿಯುಂಬ ಕ್ರಮದಲ್ಲಿ ಮಾತೆ ಸುರತ ಸಮಯದಿ ವೇಶ್ಯಾ ತರುಣಿಯಳ ತರುಣಿಯಳ ತೆರದಿ ರಾಮನ ಸತಿಯಂ- ತೆ ಮಾಡವ್ವ ಸುಖಂ ಜೀವಾ ಶೋಭಾನೆ 10 ಲಕ್ಷ್ಮೀನಾರಾಯಣರಂತೆ ಸೀತಾರಾಮರು ನೀವು ಕುಕ್ಷಿ ಈರೇಳು ಜಗವನ್ನು ಜಗವನ್ನು ನಮ್ಮನ್ನು ಸರ್ವರ ರಕ್ಷಣ್ಯ ಮಾಡಿ ಸುಖಿಯಾಗಿ ಶೋಭಾನೆ 11
--------------
ತುಪಾಕಿ ವೆಂಕಟರಮಣಾಚಾರ್ಯ
ಮಗುವು ಕಾಣಯ್ಯ ಮಾಯದ ಮಗುವು ಕಾಣಯ್ಯ ಸುಗುಣಾ ವಾದಿರಾಜರೆ ಮೂಜಗವಾನುದರದೊಳಿಟ್ಟ ಪ ಏಕಾರ್ಣವಾಗಿ ಸಕಲ ಲೋಕವಾಕಾರವಳಿಯಲೂ ಏಕಮೇವಾದ್ವಿತೀಯವೆಂಬಾಗಮಕೆ ಸಮವಾಗೀ ಶ್ರೀಕರಾಂಬುಜದಿಂ ಪಾದಾಂಗುಲಿಯ ಪಿಡಿದು ಬಾಯೊಳಿಟ್ಟು ಶ್ರೀಕಾಂತ ವಟದೆಲೆಯ ಮೇಲ್ಮಲಗಿ ಬ್ರಹ್ಮನ ಪಡೆದಾ 1 ಮಾಯಾಪೂತನೀಯ ಕೊಂದು ಕಾಯವ ಕೆಡಹಿ ಶಕಟನನು ಸಾಯಬಡಿದು ವತ್ಸನ ಧೇನುಕನ ವೃಷಭನ ನೊಯ್ಯನೊದ್ದು ಯಮಳಾರ್ಜುನರಿಗೆ ಸಾಯುಜ್ಯವನಿತ್ತು ತನ್ನ ತಾಯಿಗೆ ತಾ ಮಣ್ಣುಮೆದ್ದು ಬಾಯಿ ಬಿಚ್ಚಿ ತೋರಿಸಿದಾ 2 ಕಡಹದಾ ಮರವನೇರಿ ಸಂಗಡಿಗರೊಂದಿಗೆ ಕಾಳಂದಿಯ ಮಡುವಲಿ ಧುಮುಕಿ ಕಲಕಿ ಜಲವಾ ಆ ಕಾಳಿಂಗನಾ ಪೆಡೆಯ ತುಳಿದು ಜಡಿಯಲವನಾ ಮಡದಿಯರು ಬೇಡಿಕೊಳ್ಳೆ ಕಡಲಿಗಟ್ಟಿ ಬಂದು ಎನ್ನ ತೊಡೆಯ ಮೇಲೆ ಮಂಡಿಸಿದ 3 ಬಳ್ಳಿಗಟ್ಟದುಡಿಯಲ್ಲಿ ಗುಲ್ಲಿಯ ಚೀಲಾವ ಸಿಕ್ಕಿಸಿ ಕಲ್ಲಿಗಟ್ಟ್ಯೊಗರ ಕಂಬಳಿಯ ಕೋಲು ತುದಿಯೊಳು ನಿಲ್ಲಿಸಿ ಹೆಗಲೊಳು ಕೊಂಬು ಕೊಳಲನು ಪಿಡಿದೂದುತ್ತ ಗೊಲ್ಲರೊಡಗೂಡಿ ಆಡುತೆಲ್ಲ ಗೋವುಗಳ ಕಾಯ್ದಾ 4 ಶ್ರುತಿತತಿಗಗೋಚರನು ಚುತಿದೂರನಾದಿಮೂರ್ತಿ ಚತುರ್ಮುಖಾದಿಶೇಷ ದೇವಾರಾಧ್ಯ ದೇವನು ಪತಿ ವೈಕುಂಠಕೇಶವನು ಯತಿಯೆ ನೀ ನೋಡಲು ಶರಣಾಗತನ ತೊಡೆಯೊಳು 5
--------------
ಬೇಲೂರು ವೈಕುಂಠದಾಸರು
ಮಗುವು ಕಾಣಿರಯ್ಯ | ಮಾಯದ | ಮಗುವು ಕಾಣಿರಯ್ಯ ಪ ಸುಗುಣ ವಾದಿರಾಜರೆ ಮೂಜಗವನು ತನ್ನುದರದೊಳಿಟ್ಟಅ ಮಾಯಾ ಪೂತನಿಯ ಕೊಂದು ಕಾಯವ ಕೆಡಹಿ ಶಕಟನ್ನಸಾಯಬಡಿದು ಧೇನುಕನ ವೃಷಭಾಸುರನನೋಯ ನೋಡದ್ಯಮಳಾರ್ಜುನಂಗೆ ಸಾಯುಜ್ಯವನೆ ಇತ್ತು ತನ್ನತಾಯಿಗೆ ತಾ ಮಣ್ಣ ಮೆದ್ದು ಬಾಯ ಬಿಟ್ಟು ತೋರಿಸಿದ1 ಏಕವರ್ಣವಾಗಿಯೆ ಸಕಲಲೋಕವು ಆಕಾರವಳಿಯೆಏಕಮೇವಾದ್ವಿತೀಯನೆಂಬಾಗಮಕೆ ಸರಿಯಾಗಿಶ್ರೀಕರಾಂಬುಜದಿಂ ಪಾದಾಂಗುಲಿಯಂ ಪಿಡಿದು ಬಾಯೊಳಿಟ್ಟುಶ್ರೀಕಾಂತ ವಟಪತ್ರದ ಮೇಲೊರಗಿ ಬ್ರಹ್ಮನ ಪಡೆದ2 ಕಡಹದ ಮರನೇರಿ ಸಂಗಡಿಗರೊಡನೆ ಕಾಳಿಂದಿಯಮಡುವ ಧುಮುಕಿ ಧುಮುಕಿ ಕಲಕಿ ಆ ಕಾಳಿಂಗನಪೆಡೆಯ ತುಳಿದು ಜಡಿಯಲವನ ಮಡದಿಯರು ಬೇಡಿಕೊಳ್ಳೆಕಡಲಿಗಟ್ಟಿ ಬಂದು ತಾಯ ತೊಡೆಯ ಮೇಲೆ ಮಲಗಿದಂಥ 3 ಕಲ್ಲಿಗಟ್ಟಿ ಗೂಡೆಯಲಿ ಗೋಲಿಯ ಚೀಲವನಿಕ್ಕಿಹಿಲ್ಲಿ ಕಟ್ಟೋಗರ ಕಡಕಲಕ್ಕಳೆಯಾ ತುದಿಯಲಿನಿಲ್ಲಿಸಿ ಪೆಗಲೊಳು ಕೊಂಬು ಕೋಲನೆ ಪಿಡಿದುಗೊಲ್ಲರೊಡಗೂಡಿ ನಮ್ಮೆಲ್ಲರ ಗೋವುಗಳ ಕಾಯ್ದ 4 ಪತಿ ವೈಕುಂಠ ಕೇಶವನುಯತಿಯೆ ನೀ ನೋಡಯ್ಯ ಶರಣಾಗತನ ತೊಡೆಯಿಂ ಮಾಯವಾದ 5
--------------
ಕನಕದಾಸ