ಒಟ್ಟು 15585 ಕಡೆಗಳಲ್ಲಿ , 137 ದಾಸರು , 6785 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕದನ ಕಠೋರಿ ಬಂದುಕಾಲುಕೆದರ ಬ್ಯಾಡ ಮದನನ ಮಾತಿಗೆ ಇದುರೇನ ಎಲ್ಲ ನೀ ನೋಡ ಪ. ಓಡಿ ಬಂದವಳೆಂದು ಆಡಿದೆ ನೀ ಎನಗೆತಿರುಗಿ ಆಡಿದಲ್ಲೆ ಏನೂ ಹುರುಳಿಲ್ಲ ಎಲೆ ನೋಡೆತಿರುಗಿ ಆಡಿದಲ್ಲೆ ಏನೂ ಹುರುಳಿಲ್ಲ ಸುಭದ್ರ ನೋಡಿಕೋನಿನ ಮನದಲ್ಲೆ ಎಲ್ಲ ನೋಡೆ1 ಅಣ್ಣನ ವಂಚಿಸಿ ಓಡಿ ಬಂದವಳೆಂದುಎನ್ನನೆ ನುಡಿದೆ ಸುಭದ್ರಾ ಎಲೆ ನೋಡೆಎನ್ನನೆ ನುಡಿದೆ ಸುಭದ್ರಾನಿನ್ನಂತೆ ಸನ್ಯಾಸಿಯೊಡನೆ ಬರಲಿಲ್ಲ ಎಲ್ಲಿ ನೋಡೆ2 ಅತ್ತೆಯ ಮಗಳೆಂದು ಹತ್ತೆಂಟು ತಾಳಿದೆ ಒಂದುತ್ತರ ನಿನಗೆ ಕೊಡತೇನ ಎಲೆ ನೋಡೆಒಂದುತ್ತರ ನಿನಗೆ ಕೊಡತೇನ ಸುಭದ್ರಾಚಿತ್ತಕ್ಕೆ ಹೋಗಿ ನಡುವಂತೆ ಎಲೆ ನೋಡೆ 3 ಒಂದು ನುಡಿದು ಹನ್ನೊಂದು ನುಡಿಸಿಕೊಂಡೆಕುಂದದಂಥsÀವಳೆ ನಿನ್ನ ಬಣ್ಣ ಎಲೆ ನೋಡೆಕುಂದದಂಥsÀವಳೆ ನಿನ್ನ ಬಣ್ಣ ಸುಭದ್ರಾಬಂದದಾರಿ ಹಿಡಿದು ತಿರುಗಿ ಹೋಗೆ 4 ಬಾಳುವರ ಮನೆ ಮುಂದೆ ಕೋಳಿ ಕೂಗಿದಂತೆವೀಳ್ಯವ ಕೊಟ್ಟು ಯಾತರಿಂದ ಎಲೆನೋಡೆವೀಳ್ಯವ ಕೊಟ್ಟು ಯಾತರಿಂದ ಹೊಡೆಸಿಕೊಂಡಿನಿಲ್ಲದೆ ಹೋಗೆ ಮನೆತನಕ ಎಲೆ ನೋಡೆ 5 ಕುದುರೆಯ ಸಂಗಡ ಕುರಿ ಹುಲ್ಲು ಮೆಯ್ದರೆಕುದುರೆ ಹಿಂಗಾಲಿಲೆ ಒದೆಯದೆ ಎಲೆ ನೋಡೆಕುದುರೆ ಹಿಂಗಾಲಿಲೆ ಒದೆಯದೆ ಸುಭದ್ರಾಸುದತೆ ರುಕ್ಮಿಣಿಗೆ ಸರಿಯೇನೆ ನೋಡೆ6 ಆನೆಯ ಸಂಗಡ ಆಡು ಹುಲ್ಲು ಮೆಯ್ದೆರೆ ಆನೆ ಹಿಂಗಾಲಿಲೆ ಒದೆಯದೆ ಎಲೆ ನೋಡೆಆನೆ ಹಿಂಗಾಲಿಲೆ ಒದೆಯದೆ ಸುಭದ್ರಾನೀ ರಾಮೇಶನ ಮಡದಿಯ ಸರಿಯೇನೆ ಎಲೆ ನೋಡೆ 7
--------------
ಗಲಗಲಿಅವ್ವನವರು
ಕಂದನಿಗೆ ಕಾಲಿಲ್ಲವಮ್ಮ, ಪುಟ್ಟಿ-ಪ ದಂದಿಂದ ಈ ಅಂಬೆಗಾಲು ಬಿಡದಮ್ಮ ಅ.ಪ ಮಳೆ ಹೊಳೆ ಕತ್ತಲೊಳು ತರಳ ಮಗ ಬೆದರಿದನೊಕಳೆಯುಳ್ಳ ಮುಖಕೀಗ ಗ್ರಹ ಸೋಕಿತೋಎಳೆಯ ಬೆಳದಿಂಗಳೋಳೆತ್ತಣ ದೃಷ್ಟಿ ತಾಕಿತೊಲಲನೆ ಮೀಸಲ ಹಾಲು ಮೆರೆದೆರೆದ ಪರಿಯೊ 1 ಬೆಣ್ಣೆಯನು ಮೆಲ್ಲುತ ಬೆದರಿ ಬಾಯಾರಿದನೊಉಣ್ಣೆ ಪೂತನಿ ಮೊಲೆಯ ವಿಷ ಸೋಂಕಿತೋಅಣ್ಣ ಪಾಪಿಯ ಭಯಕೆ ಅಂಜಿ ಕಾಲಿಟ್ಟನೊಹೆಣ್ಣು ದೈತೇಯರ ಕಾಲಲಿ ಬಂದ ಸರಕೊ 2 ಧುರವಿಜಯ ಶ್ರೀಕೃಷ್ಣರಾಯಗೆ ನಿಮ್ಮಹರದೇರಂದವ ತೋರಬಂದ ಪರಿಯೋಧರೆಗಧಿಕ ವಿದ್ಯನಗರವಳಿತೆಂದು ಉದಯಗಿರಿಯಿಂದ ಬಂದ ಮುದ್ದು ಬಾಲಕೃಷ್ಣಗೆ 3
--------------
ವ್ಯಾಸರಾಯರು
ಕಂದನೆಂದೆನಿಸಿದ ಕೌಸಲ್ಯದೇವಿಗೆ ರಾಮ ಎನಬಾರದೆ ಇಂದಿರಾಪತಿ ರಾಮಚಂದ್ರಗೆ ಶ್ರೀರಘುರಾಮ ಎನಬಾರದೆ 1 ಶಿಶುವಾಗಿ ಅವತಾರ ಮಾಡಿದ ದಶರಥನಲಿ ರಾಮ ಎನಬಾರದೆ ಋಷಿಯಜ್ಞ ಸಲಹಿ ರಕ್ಕಸರನೆ ಕೊಂದ ಶ್ರೀರಾಮ ಎನಬಾರದೆ 2 ಸಾತ್ವಿಕ ದೈವವೆ ತಾಟಕಾಂತಕ ಶ್ರೀರಾಮ ಎನಬಾರದೆ 3 ಪಾದನಖವು ಸೋಕಿ ಪಾದನಾಶನವಾಗೆ ರಾಮ ಎನಬಾರದೆ ಶ್ರೀಪತಿ ಕರುಣದಿ ಶಿಲೆಯು ಸ್ತ್ರೀಯಾಗಲು ರಾಮ ಎನಬಾರದೆ 4 ಸಕಲ ಸದ್ಗುಣ ಪೋಗಿ ಮಿಥಿಲಾ ಪಟ್ಟಣದಿ ರಾಮ ಎನಬಾರದೆ ತ್ರಿಪುರ ಸಂಹಾರ ತ್ರಿನೇತ್ರನ ಧನುವೆತ್ತಿ ರಾಮ ಎನಬಾರದೆ 5 ಚೆಲ್ವೆ ಜಾನಕಿ ಮಲ್ಲಿಗೆಯ ವನಮಾಲೆಯು ರಾಮ ಎನಬಾರದೆ ವಲ್ಲಭಗ್ಹಾಕಲು ಫುಲ್ಲಲೋಚನೆ ಸೀತಾರಾಮ ಎನಬಾರದೆ 6 ಮಂಗಳ ಮಹಿಮೆ ಸೀತಾಂಗನೆ ಕೊರಳಿಗೆ ರಾಮ ಎನಬಾರದೆ ಮಾಂಗಲ್ಯ ಬಂಧನ ಮಾಡಿದ ಮಹಾತ್ಮನು ರಾಮ ಎನಬಾರದೆ 7 ಜಗದೇಕ ಸುಂದರಿ ಜಾನಕಿಯನೆ ಗೆದ್ದ ರಾಮ ಎನಬಾರದೆ ಜಗದೀಶ ಜನಕಗೆ ಜಾಮಾತನೆನಿಸಿದೆ ರಾಮ ಎನಬಾರದೆ 8 ಮುದ್ದು ಜಾನಕಿ ಕೂಡಿ ಅಯೋಧ್ಯಕೆ ಬರುತಿರೆ ರಾಮ ಎನಬಾರದೆ ಮಧ್ಯ ಮಾರ್ಗದಿ ಬಂದಿದ್ದನು ಭಾರ್ಗವ ರಾಮ ಎನಬಾರದೆ 9 ತನ್ನ ತಾನೇ ಗೆದ್ದು ಧನ್ಯನೆಂದೆನಿಸಿದಿ ರಾಮ ಎನಬಾರದೆ ಬ್ರಹ್ಮ ಶಂಕರರಿಂದಿನ್ನು ಉತ್ತಮನಾದ ರಾಮ ಎನಬಾರದೆ 10 ಪಟ್ಟಗಟ್ಟಲು ಪರಮೋತ್ಸವ ಕಾಲಕ್ಕೆ ರಾಮ ಎನಬಾರದೆ ದುಷ್ಟ ಕೈಕೆಯ ನಿಷ್ಠೂರ್ವೊಚನವ ಕೇಳಿದ ರಾಮ ಎನಬಾರದೆ 11 ಆ ಲಕ್ಷುಮಿಯ ಮಾತಲಕ್ಷ್ಯವ ಮಾಡದೆ ರಾಮ ಎನಬಾರದೆ ಲಕ್ಷ್ಮಣ ಲಕ್ಷ್ಮಿ ಕೂಡ್ವನವಾಸ ತಿರುಗಿದ ರಾಮ ಎನಬಾರದೆ 12 ಸತಿ ಆದೇನೆಂದಸುರೆಯ ರಾಮ ಎನಬಾರದೆ ನಾಶÀರಹಿತ ಕಿವಿ ನಾಸಿಕನಳಿಸಿದ ಶ್ರೀ ರಾಮ ಎನಬಾರದೆ 13 ದಂಡಕಾರಣ್ಯದಿ ಕಂಡು ಮಾರೀಚನ್ನ ರಾಮ ಎನಬಾರದೆ ಹಿಂದ್ಹೋಗೆ ರಾಘವ ಬಂದ ರಾವಣನಲ್ಲೆ ರಾಮ ಎನಬಾರದೆ 14 ಘಾತಕ ರಾವಣ ಜಗನ್ಮಾತೆನೊಯ್ಯಲು ರಾಮ ಎನಬಾರದೆ ಸೋತು ಜಟಾಯು ಯುದ್ಧವ ಮಾಡಿ ತಾ ಬೀಳಲು ರಾಮ ಎನಬಾರದೆ 15 ಒಲಿದು ಸುಗ್ರೀವಗೆ ವಾಲಿ ವಧೆಯ ಮಾಡಿ ರಾಮ ಎನಬಾರದೆ ವಾನರಗಳ ಕೂಡಿ ವಾರಿಧಿಕಟ್ಟಿದ ಶ್ರೀರಾಮ ಎನಬಾರದೆ16 ಲೋಕ ಮಾತೆಯ ಲಂಕಾನಾಥ ತಾ ಒಯ್ದಾಗ ರಾಮ ಎನಬಾರದೆ ಸೀತಾಕೃತಿಯನಿಟ್ಟಶೋಕ ವನದೊಳು ರಾಮ ಎನಬಾರದೆ 17 ಮಂಡೋದರಿಯ ಗಂಡನ್ನ ದಶಶಿರಗಳ ರಾಮ ಎನಬಾರದೆ ಚೆಂಡನಾಡಿದ ಕೋದಂಡ ಪಾಣಿಯ ಶ್ರೀರಾಮ ಎನಬಾರದೆ 18 ಪ್ರೀತಿಂದ್ವಿಭೀಷಣಗೆ ಪಟ್ಟವಗಟ್ಟಿ ರಾಮ ಎನಬಾರದೆ ಸಿಂಧು ದಾಟಿದ ರಾಮ ಎನಬಾರದೆ 19 ಆದಿ ಲಕ್ಷುಮಿ ಕೂಡಿ ಹೋದನಯೋಧ್ಯಕೆ ರಾಮ ಎನಬಾರದೆ ಶ್ರೀದೇವಿ ಸಹಿತ ಪಟ್ಟಣ ಹೊಕ್ಕ ಪಟ್ಟಾಭಿರಾಮ ಎನಬಾರದೆ20 ಭರತ ಸುಮಿತ್ರ ಕೌಸಲ್ಯಗೆ ಸುಖವಿಟ್ಟ ರಾಮ ಎನಬಾರದೆ ಮುಕ್ತಿದಾಯಕ ಮುಂದೆ ಬಿಡದೆ ಕಾಪಾಡುವ ರಾಮ ಎನಬಾರದೆ21 ಪತ್ನಿ ವಾರ್ತೆಯ ತಂದ ಪವನಸುತಗೆ ಒಲಿದ ರಾಮ ಎನಬಾರದೆ ಸತ್ಯ ಲೋಕದ ಆಧಿಪತ್ಯವ ಕೊಟ್ಟ ಶ್ರೀ ರಾಮ ಎನಬಾರದೆ22 ರಾಮ ರಾಮನು ಎಂದು ಕÀರೆಯೆ ಭಕ್ತಿಯ ನೋಡಿ ರಾಮ ಎನಬಾರದೆ ಪ್ರೇಮದಿ ತನ್ನ ನಿಜಧಾಮವ ಕೊಡುವೋನು ರಾಮ ಎನಬಾರದೆ 23 ಅರಸಾಗಯೋಧ್ಯವನಾಳಿ ಯದುಕುಲದಲಿ ರಾಮ ಎನಬಾರದೆ ಹರುಷದಿ ಭೀಮೇಶ ಕೃಷ್ಣನಾಗ್ಯುದಿಸಿದ ರಾಮ ಎನಬಾರದೆ 24
--------------
ಹರಪನಹಳ್ಳಿಭೀಮವ್ವ
ಕದರ ಉಂಡಲಿಗಿಯ ಹನುಮಾ | ಕಾಯೊಉದಧಿ ಶಯನಗೆ ಬಲು ಪ್ರೇಮಾ ಪ ಸದಮಲಾಂತಃಕರಣದೊಳು ತವ | ಪದವನಜ ದ್ವಯ ಸೇವಿಸೂವರಮುದದಿ ಪಾಲಿಪ ಗುರು ದಯಾಕರ | ವದಗಿ ಭಾಸಿಸೊಮ ಮಹೃದಾಗರ ಅ.ಪ. ಪ್ರಥಮಾಂಗ ಹರಿಗೆ ನೀನೆನಿಸೀ | ಜೀವ ತತಿಯೊಳಂತರ ಬಾಹ್ಯ ನೆಲಸೀ |ತತುವ ಮಾನಿಗಳ್ಕಾರ್ಯ ನಡೆಸೀ | ಹರಿಗೆ ಪೃಥಕ್ಪøಥಕ್ಕವುಗಳರ್ಪಿಸೀ |ವಿತತ ಹರಿ ಸತ್ಪಾತ್ರನೆನಿಸುತ | ಯತನ ಜ್ಞಾನೇಚ್ಛಾದಿ ನಡೆಸುತಸತತ ವಿಶ್ವವ ಪಾಲಿಸುವ ಶ್ರೀ | ಪತಿಯ ಪದಕರ್ಪಿಸುತಲಿರುವ 1 ಶರಧಿ ದಾಟುವ ಲಂಕಾಪುರವ | ಸೇರಿವರ ಮಾತೆಗಿತ್ತೆ ಉಂಗುರವಾ |ಪುರದೊಳಗಶೋಕ ವನವಾ | ಕಿತ್ತುತರಿಯಲಕ್ಷನು ತೆತ್ತ ದೇಹವಉರು ಪರಾಕ್ರಮಿ ಇಂದ್ರ ಜಿತುವಿನ ವರಸುಅಸ್ತ್ರಕೆ ತಾನೆ ಸಿಲುಕುತಪರಿಪರಿಯಲಸುರನನು ಹಿಂಸಿಸಿ | ಉರಿಸಿ ಲಂಕೆಯ ಹರಿಗೆ ಎರಗಿz À 2 ಹದಿನೆಂಟು ಕ್ಷೋಹಿಣಿ ಬಲವಾ | ನೆರಸಿಸದೆದು ಹಾಕಿದ್ಯೊ ದೈತ್ಯಕುಲವಾ |ಮುದದಿ ದ್ರೌಪದಿಗಿತ್ತ ವರವಾ | ಸಲಿಸಿವಧಿಸಿದ್ಯೋ ದುರಳರ ಕುಲವಾ |ಮಧುಮಥನ ನರಹರಿಯ ಸ್ಮರಿಸುತ | ಅದುಭುತವು ಎಂದೆನಿಪ ಕಾರ್ಯವವಿಧಿಸಿ ಭೂಭಾರವನೆ ಕಳೆಯುತ | ಮುದದೊಳಚ್ಯುತಗಿತ್ತೆ ಭೀಮ 3 ವೇದ ವಾದಿ ಜನ ಕೊರಗೀ | ಹರಿಪಾದದ್ವಯವು ವನಜಕೆರಗೀ |ಮೋದದಿ ಸ್ತುತಿಸೈವ ಮರುಗೀ | ಕಳುಹೆ ವೇದಗಳುದ್ಧಾರಕ್ಕಾಗೀ |ಬೋಧಿಸುತ ಬುಧ ಸ್ತೋಮಗಳಿಗಾ | ವೇದಗಳ ಸಾರಾರ್ಥವೆಲ್ಲವವಾದಿಗಳ ಜೈಸುತಲಿ ಪೂರ್ಣ | ಭೋದಯತಿ ಪಾಲಿಸುವುದೆಮ್ಮ 4 ಪಂಕ ಕರ್ಮ ಸ್ವಾಂತ ದೊಳಗನವರತ ಕಾಣುವ 5
--------------
ಗುರುಗೋವಿಂದವಿಠಲರು
ಕದರಿ ನರಹರಿ ವಿಠಲ | ಮುದದಿ ಪೊರೆ ಇವಳಾ ಪ ಬೆದರಿ ಬೆಂಡಾಗಿ ತವ | ಪದಕೆ ಬಿದ್ದಿಹಳಾ ಅ.ಪ. ಬನ್ನ ಬವಣೆಗಳೇ ?ಇನ್ನು ಪೇಕ್ಷಿಸದೆ ಕಾ | ರುಣ್ಯ ವೀಕ್ಷಣ ತೋರೊಪನ್ನಂಗಶಯ್ಯ ಹರಿ | ಮನುಜ ಮೃಗವೇಷಾ 1 ಸ್ವಾಪದಲಿ ನೀ ತೋರ್ದ | ಆಸನಿಯ ಅಂಕಿತವ ಪ್ರಾಪಿಸಿಹೆ ಇವಳಿಗೆ | ಶ್ರೀಪತಿಯೆ ಕೇಳೋ |ನೀ ಪಾಲಿಸುತ್ತಿವಳ | ತಾಪತ್ರಯಗಳ ಕಳೆಯೆಹೇ ಪಯೋಜ ಭವನುತ | ಪಾಪಾತಿದೂರಾ 2 ಪಾದ | ಪದ್ಮಗಳ ಭಜಿಪಾಮುಗ್ದೆಯನು ಪೊರೆಯೆಂದು | ಮಧ್ವಾಂತರಾತ್ಮಕನೆಬುದ್ಧಿ ಪೂರ್ವಕ ಬೇಡ್ವೆ | ಶ್ರದ್ಧೆ ಪತಿಸುತನೇ 3 ಐಹಿಕಾಮುಷ್ಮಿಕದ | ಬಹು ಪರಿಯ ಸುಖ ಸೌಖ್ಯಶ್ರೀಹರಿಯೆ ಕರುಣಿಸುತ | ಕಾಪಾಡೊ ಇವಳಾಸ್ನೇಹ ಸತ್ಸಂಗದಲಿ | ಪಾಲಿಸುತ ನೀನಾಗಿಮೋಹ ಮಮತೆಯ ಕಳೆದು | ಸಾಧನವ ಗೈಸೋ 4 ತರಳ ಪ್ರಹ್ಲಾದನನ | ಪೊರೆಯಲಿಲ್ಲವೆ ಹರಿಯೆವರ ಧ್ರುವನನ ಪಾಂಚಾಲಿ | ಅಜಮಿಳರ ಪೊರೆದೆಮರುತಾಂತರಾತ್ಮ ಗುರು | ಗೋವಿಂದ ವಿಠ್ಠಲನೆಪೊರೆಯ ಬೇಕಿವಳ ಬಹು | ಕಾರುಣ್ಯದಲಿ ಹರಿಯೇ 5
--------------
ಗುರುಗೋವಿಂದವಿಠಲರು
ಕದರುಂಡಲಗಿ ಹನುಮಂತದೇವರು ಇಂಥಾ ಕೀರ್ತಿಯ ಮೂರ್ತಿನ್ನಾರೇ ನೋಡಮ್ಮಯ್ಯ ಪ ಸಂತತ ಸೀತಾಪತಿಯ ಧ್ಯಾನರೊಳು ಕಂತುವಿನಸ್ತ್ರವ ಖಂಡಿಸಿದೊಡೆಯಾ ಅ.ಪ. ಸೂರಿ ಸುಲಿಗೆ ನೋಡಮ್ಮಯ್ಯ ನೋಡಮ್ಮಯ್ಯ ಭೂಸುರರಾಯರು ಸೀಮೆಯ ಸುತ್ತಲು ಗಾಸಿಯ ಮಾಡದೆ ಗ್ರಾಮವ ಕಾಯ್ದ 1 ತಾರಣ ನಾಮ ಸಂವತ್ಸರ ಶುದ್ಧ ವೈಶಾಖದಿ ನೋಡಮ್ಮಯ್ಯ ಧರೆಯೊಳು ಕಲಹ ವಿಪರೀತವದರೊಳು ರಣಮಂಡಲ ನೋಡಮ್ಮಯ್ಯ ಊರೆಲ್ಲ ಮೊರೆಯಿಡೆ ಈಕ್ಷಿಸಿ ಮಹಿಮೆಯ ತೋರುವ ಅಭಯ ಪ್ರಸಾದವ ಕೊಡುವಾ 2 ಜಯ ನಮೋ ಎನೆ ನೋಡಮ್ಮಯ್ಯ ಅಕಲಂಕ ಶೇಷಾನೃಪ ಶ್ರೀ ರಾಮರ ಸೇವಕಮಣಿ ನೋಡಮ್ಮಯ್ಯ ಲೋಕದಧಿಕ ಗುರು ಕದರುಂಡಲೀಶಾ ಬೇಕೆಂದು ನಿಂತಾ ಶ್ರೀ ಹನುಮಂತ 3
--------------
ಕದರುಂಡಲಗೀಶರು
ಕದವ ತೆಗೆಯೆ ಸುಂದರಿವಯ್ಯಾರಿ ಮುತ್ತಿನ ಪ ಕಡಲ ಶಯನನೆ ಮಡದಿ ಹರುಷದಿ ಸಡಗರದಿ ಮುಂದಡಿ ಇಡುತ ನಿನ್ನ ಒಡೆಯ ಬಂದಿಹನೆಂದು ಹರುಷದಿ ಬೆಡಗು ಮಾಡದೆ ಬಿಡಿಯ ಮುತ್ತಿನ 1 ಯಾರು ನಿನ್ನಯ ಪೆಸರ ಏನೆಂದು ತಿಳಿಯದೆ ಹೇಗೆ ತೆಗೆಯಲಿ ಕದವಾ ಘೋರ ರಾತ್ರಿಯ ವೇಳೆಯಲಿ ಬಂ- ದೀಗ ಬಾಗಿಲ ಬಡಿಯ ನಿಂದಿರೆ ನಾರಿಯರು ಏನೆಂದು ಕೇಳ್ಪರು ದ್ವಾರ ಬಿಡುಬಿಡುತಲಿ ಸಾಗು ಮುಂದಕೆ2 ತೆಗೆಯಲೊಲ್ಲೆನು ಕದವ ಸಮರಾತ್ರಿ ವೇಳದಿ ರುಕ್ಮನ ಅನುಜೆ ಕೇಳೆ ಪೃಥ್ವಿಯೊಳು ಎನ್ನನು ಚಕ್ರಿ ಎನ್ನುತ ಪೇಳ್ವರೆ ಅರ್ಥಿವಚನಗಳನ್ನು ಕೇಳುತ ಸತ್ವರದಿ ನೀ ಬಂದು ಮುಂದಕೆ ಮುತ್ತಿನ ಕದತೆಗೆದು ಬೇಗನೆ ರತ್ನ ಪೀಠದಿ ಕುಳ್ಳಿರಿಸೆ ಹೊಸ ಮುತ್ತಿನರಗಿಣಿ ಸತ್ಯವಾಣಿಯೆ3 ಕೇಳಿ ಹರ್ಷಿತನಾದೆನು ನಿನ್ನಯ ಮಾತ ಕೇಳಿ ನಗುವರು ಜನರು ಹೇಳಿ ಕೇಳುವರಿಲ್ಲ ನಿನ್ನ ಮನಸಾರ ಮಾತುಗಳಾಡಲೇತಕೆ ಕು- ಲಾಲ ಭವನವಿದಲ್ಲ ಸುಮ್ಮನೆ ಹೇಳ ಕೇಳದೆ ಹೊರಡು ಮುಂದಕೆ 4 ಹೀಗೆ ನುಡಿಯುವದೇತಕೆ ಈಗೆನ್ನ ಮಾತಿಗೆ ಬೇಗದಿ ತೆಗೆ ಕದವ ನಾಗವೇಣಿಯೆ ನಗುತ ಪೇಳುವೆ ಬೇಗದಲಿ ಇನ್ನೊಂದು ನಾಮವ ಈಗ ಧರಣಿಧರನು ಬಂದಿಹೆ ಸಾಗರನ ಸುತೆ ಸರ್ಪವೇಣಿಯೆ 5 ಧರಣೀಧರ ನೀನಾದರೆ ಈ ಧರೆಯನೆಲ್ಲವ ಸಿರದ ಮೇಲಿರಿಸುವೆಯ ಸರ್ವ ಜನರಿಗೆ ಭಯವ ಪಡಿಸುವ ಉರಗರಾಜ ನೀನೆಂದು ತಿಳಿದೆನು ಇರುತ ಸರ್ಪಗಳೊಳಗೆ ನೀ ಬಲು ಹರುಷದಿಂದಲಿ ಸಾಗುಮುಂದಕೆ6 ಹರಿಣಾಕ್ಷಿ ಕೇಳೆ ನೀನು ಎನ್ನನು ಜನರು ಹರಿಯೆಂದು ಕರಿಯುವರು ಕರೆ ಕರೆಯ ಮಾಡದಲೆ ಬೇಗನೆ ವರ ಕನಕ ಕದ ತೆಗೆದು ಸುಮ್ಮನೆ ಇರಿಸು ಸುಖ ಸಾಮ್ರಾಜ್ಯ ಪೀಠವ ಹರುಷದಿಂ ಕುಳಿತೆಲ್ಲ ಪೇಳುವೆ 7 ಕೋತಿ ನೀನಹುದಾದರೆ ಮಾತುಗಳ್ಯಾಕೆ ಜಾತಿ ಕಪಿಗಳ ಕೂಡುತ ಪ್ರೀತಿಯಿಂದಲಿ ಮನಕೆ ಬಂದೆಡೆ ನೀತೆರಳುತಲಿ ಪೋಗು ಮುಂದಕೆ ಕೋತಿಗಳ ಗುಂಪಿದಲ್ಲ ತಿಳಿಮಹ- ರೂಪವತಿಯರಿರುವ ಸ್ಥಳವಿದು 8 ಪ್ರೀತಿಸತಿಯೆ ನೀ ಕೇಳೆ ನಿನ್ನೊಳು ಬಹು ಪ್ರೀತಿಯಿಂದಲಿ ಬಂದೆನು ಶ್ರೀಶನ ನುಡಿಕೇಳಿ ರುಕ್ಮಿಣಿ ಆತುರದಿ ಬಾಗಿಲನೆ ತೆಗೆಯುತ ನಾಥ ಕಮಲನಾಭ ವಿಠ್ಠಲನಿಗೆ ತಾನಮಿಸಿ ವಂದಿಸುತ ಭಕುತಿಯಲಿ ಬಾಗಿಲು ತೆಗೆದಳಾಗ ಭಕುತಿಯಲಿ ಶ್ರೀಶಗೆ ಬಾಗಿಲು ತೆಗೆದಳಾಗ9
--------------
ನಿಡಗುರುಕಿ ಜೀವೂಬಾಯಿ
ಕದವನಿಕ್ಕಿದ ಕಾರಣೇನೆ ಮುದದಿ ಕೇಳೆ ಮೋಹನಾಂಗಿ ಸದನಕ್ಕಾಗಿ ಬಂದೆ ನಾನು ಸರಸವ್ಯಾತಕೆ ಸುಂದರಾಗಿ ಪ ಇಂದು ನಾನು ಬಂದೆ ದ್ರೌಪದಿ ಬಂದು ಬಾಗಿಲನ್ಹಾಕುವೋದು ಚೆಂದವೇನೆ ಚಂದ್ರಮುಖಿಯೆ ಬಂದು ಬಾಗಿಲು ತೆಗೆಯೆ ನೀನು 1 ಅಂಧಕಾರ ರಾತ್ರಿಯಲಿ ಬಂದವರ್ಯಾರೆಂದು ಅರಿಯೆ ನಿಂದು ಗುರುತೇನೆಂದು ಪೇಳಲು ಬಂದು ಬಾಗಿಲು ತೆಗೆವೆ ನಾನು 2 ಕಂಡರಿಯೆ ಎನ್ನ ಪರಾಕ್ರಮ ಖಾಂಡವವನವ ದಹಿಸಿದೆನೆ ಗಾಂಡೀವಾರ್ಜುನರಾಯ ನಾನು 3 ಗಾಂಡೀವಾರ್ಜುನರಾಯನಾದರೆ ದುಂಡು ಬಳೆ ಕಂಕಣಗಳಿಟ್ಟು ಗೊಂಡ್ಯ ರಾಗಟೆ ಹೆರಳಲ್ಹಾಕಿ ನೀ ಷÀಂಡರೂಪವ ಧರಿಸ್ಹೋಗೊ 4 ಕ್ಷೀರಸಾಗರದಲ್ಲೆ ತಾ ಮಂ- ದರ ಪೊತ್ತಮೃತವನೆ ತಂದ ಧೀರ ಕೂರ್ಮಗೆ ಮೈದುನಾದಂಥ ಶೂರ ಫಲ್ಗುಣರಾಯ ನಾನೆ 5 ಫಲ್ಗುಣರಾಯನಾದರೇನೊ ಸದ್ಗುಣ ಸಂಪನ್ನ ಬಿರುದು ಭದ್ರದೇವಿಯ ಕದ್ದು ತರುವಾಗ ಬುದ್ಧಿ ದಾರಲ್ಲಿಟ್ಟೆದ್ದಿರ್ಹೇಳೊ 6 ಪರಮೇಶ್ವರನ ಒಲಿಸಿಕೊಂಡು ಪಾಶುಪತಾಸ್ತ್ರ ಪಡೆದೆ ನಾನು ಪರಮ ಆಪ್ತ ವರಾಹನ ಕರುಣಕ್ಕೆ ಪಾತ್ರನಾದಂಥ ಪಾರ್ಥರಾಯನೆ 7 ಪಾಶುಪತಾಸ್ತ್ರ ಪಡೆದರೇನು ದೇಶ- ದೇಶ್ಯಾತ್ರೆತೀರ್ಥ ಚರಿಸಿ ಆಸೆ ಬಿಡದೆ ಸನ್ಯಾಸಿಯಾದಂಥ ಮೋಸಗಾರನೆ ಮನೆಗೆ ಪೋಗು 8 ಕೋಟಿ ದೈತ್ಯರ ಕೊಂದೆ ಎನ್ನಸರಿ- ಸಾಟಿಯಾರೀ ಲೋಕದೊಳಗೆ ಆ- ರ್ಭಟದವತಾರ ನಾರಸಿಂಹನೆ ನೀಟಾದಭಕ್ತ ಕಿರೀಟಿಯಲ್ಲವೆ 9 ಕೋಟಿ ದೈತ್ಯರ ಕೊಂದು ಜೂಜಿ- ನಾಟ ಸೋತ್ವನ ತೋಟ ತಿರುಗಿ ಪಾಟುಬಟ್ಟು ವಿರಾಟನಲ್ಲೆ ನಾ(ನ?)ಟರಾಟಕೆ ನಿಂತಿರ್ಯಾಕೊ 10 ಮಾತಿಗೆ ಮಾತಾಡೋರೇನೆ ಅ- ಭೂತಳವ ಬೇಡಿದ್ವಾಮನಗೆ ದೂತ ನಾ ಶ್ವೇತೂವಾಹನನೆ 11 ಶ್ವೇತೂವಾಹನ ನಿಮ್ಮ ಸತಿಗೆ ನಾಥರಿದ್ದೂ ಅನಾಥಳಂತೆ ಅ- ಜ್ಞಾತದಲ್ಲಿ ಸುದೇಷ್ಣೆ ಸೇವೆಗೆ ದೂತಿಯಾದ ಪ್ರಖ್ಯಾತಿ ದಾರದೊ 12 ಹೆತ್ತತಾಯಿ ಶಿರವನಳಿದ ಕ್ಷತ್ರೇ- ರಂತಕ ಭಾರ್ಗವಗೆ ನಿತ್ಯದಲಿ ನಿಜಸೇವಕ ಭೀ- ಭತ್ಸುರಾಯ ನಾನಲ್ಲವೇನೆ 13 ಧೀರ ಭೀಭತ್ಸುರಾಯ ನಿನ್ನ ನಾರಿಯ ಸಭೆಗೆಳೆದು ತಂದು ಸೀರೆ ಸೆಳೆವಾಗ ಶೂರರಾದರೆ ದಾರದಾರಂತೆ ನೋಡಿರ್ಯಾಕೊ 14 ಕಾಮ ಮೋಹಗಳಿಂದ ನಿನ್ನಲ್ಲೆ ಪ್ರೇಮದಿ ನಾ ಬಂದೆನೀಗ ರಾಮರಾಜÉ್ಞಗೆ ನಿಜ ಸೇವಕ- ನಾದ ವಿಜಯರಾಯ ನಾನೆ 15 ವಿಜಯರಾಯ ನೀನ್ಹೌದೊ ತೇಜಿದಿ- ಗ್ವಿಜಯಕೆನುತದರ್ಹಿಂದೆ ಪೋಗಿ ಮಗನ ಕೈಯಿಂದ ವಧೆಯು ನೀತವೆ ಮೊದಲೆ ಪರಾಜಿತನಾದಿರ್ಯಾಕೊ 16 ಶ್ರೇಷ್ಠರೊಳು ಮಹಾಶ್ರೇಷ್ಠ ನಾನೆ ಅಸ್ತ್ರವಿದ್ಯದಲ್ಲಧಿಕನೆಂದು ಕೃಷ್ಣಮೂರುತಿ ಒಲಿಸಿಕೊಂಡಂಥ ಕೃಷ್ಣೆ ನಲ್ಲನೆ ಕೃಷ್ಣೆ ಕೇಳೆ 17 ಸಾರಥಿ ಆದ್ದರಿಂದ ಹಸ್ತಿನಾವತಿ ಪಟ್ಟಣಾಳ್ವುದು ಇಷ್ಟು ದಾರ ದಯದಿಂದ್ಹೇಳೊ 18 ಅಂಗನಾಮಣಿ ನಿನ್ನ ಅಂಗ- ಸಂಗ ಬಯಸಿ ನಾ ಬಂದೆನೀಗ ಅಂಗದ್ವಸ್ತ್ರವಬಿಟ್ಟ ಬೌದ್ಧಗೆ ಸಖನು ನಾ ಸವ್ಯಸಾಚಿ ಅಲ್ಲವೆ 19 ಭುಜ ಪರಾಕ್ರಮಿ ಸವ್ಯಸಾಚಿ ನಿನ್ನೆರಡು ಕೈದಡ್ಡಿನ್ಯಾತಕೇಳೊ ದ್ವಿಜರ ಸುತರ ತಂದುಕೊಡದೆ ಮೊದಲೆ ಮಾಡಿದ ಪ್ರತಿಜ್ಞವೇನೊ 20 ಅಂಜೋನಲ್ಲ ನಾನರಿಗಳಿಗೆ ಕಲಿ- ಭಂಜನ ಕಲ್ಕ್ಯಾವತಾರಗೆ ಕಂಜಚರಣಕ್ಕೆ ವಂದಿಸುವೆ ಧ- ನಂಜಯ ನಾನಲ್ಲವೇನೆ 21 ಸೈಯೊ ನೀ ಧನಂಜಯರೇಯ ಸುರಪತಿಗೆ ಪತ್ರವನೆ ಬರೆದು ಶರದ ಪಂಜರ ಕಟ್ಟಿ ನೀ ಕುಂ- ಜರವನಿಳಿಸಿದ ಕಾರಣೇನೊ 22 ನಿನ್ನ ಸರಿ ಮಾತಾಡುವೋರ ಧನ್ಯರ ನಾ ಕಾಣೆನೆಲ್ಲು ಳನ್ನು ಕೇಳಿದಿನ್ಯಾಕೆ ತಡೆವೆ 23 ದಶ ನಾಮಗಳ ಕೇಳಿ ದ್ರೌಪದಿ <ಈಔಓಖಿ ಜಿಚಿ
--------------
ಹರಪನಹಳ್ಳಿಭೀಮವ್ವ
ಕನಕದಾಸರು ಕನಕಾ ನಿನ್ನ ಕೆಣಕಿ ನಾನು ತಿಣಕಲಾರೆನೊ ಕ್ಷಣಕು ಕ್ಷಣಕು ತಿಣಿಕಿ ತಿಣಿಕಿ ದಣಕೊಲಾರೆನೊಅಡಿಗಡಿಗೊಗೆದ ಮುಂಡಿಗೆಯನು ಒಡಿಯಲಾರೆನೊಒಡೆಯಲು ದುಡುಕಿ ದುಡುಕಿ ದಣಿವನು ತಡಕೊಲಾರೆನೊ 1 ಒಡೆಯ ದೇವನೆಂದಟ್ಟಿದ ಕುನಕವ ಮುಟ್ಟಿಲಾರೆನೋ ಮಡಿಯ ದೇವರೆಂದೊದಗಿಸಿದುರಗನ ಬಳಿಯ ಸಾರೆನೋ ಪಾತ್ರೆಯ ಒಳ ಮೈಯ್ಯ ಮಾತ್ರ ತೊಳೆದುದು ತಿಳಿಯಲಾರೆನೋಗೋತ್ರವ ಕೇಳಿ ಸುಸೂತ್ರದೊಳುತ್ತರ ಪಡೆಯಲಾರೆನೋ 2 ಅದಕೊ ಇದಕೊ ಯಾವುದಕೊ ನಾ ಕೆದಕಲಾರೆನೊಗದುಗಿನ ವೀರನಾರಾಣನ ಮರೆಯಲಾರೆನೊ 3
--------------
ವೀರನಾರಾಯಣ
ಕನಸಿನÀ ಜೀವನ ಕಳವಳವೇತಕೆ ಪ ಕ್ಷಣಿಕದ ಭಾಗ್ಯಕೆ ಪರದಾಟವೇತಕೆ ಅ.ಪ ಮರೆತು ದುರ್ದಿಶೆಯನು ಅರೆಗಣ್ಣಿನಲಿ ದೊರೆಯು ನಾನೆ ಎಂದು ಹರುಷದ ಮಾನಸ ತೆರೆಯಲಿ ಭಾಗ್ಯವ ಅನುಭವಿಸುತಲಿರೆ ಹರಕು ಮನೆಯೇ ನಿನ್ನರಮನೆಯಾಗಿದೆ 1 ಇಲ್ಲವೆಂದೇತಕೆ ಹಲ್ಲನು ಕಡಿಯುವಿ ಬಲ್ಲ ಮಾನವನಿಗೆ ಹಲ್ಲೇ ಆಯುಧ ಮುಳ್ಳಿನ ಹಾಸಿಗೆ ಮಲಗಲು ಸೌಖ್ಯವೆ ತಳ್ಳಿ ನಿಲ್ಲುವಗೆ ಇಲ್ಲೇ ವೈಕುಂಠ 2 ರಕ್ತದ ಕೋಡಿಯು ಹರಿಯುತಲಿರುವುದು ಮೃತ್ಯದೇವತೆ ಸದಾ ಕುಣಿಯುತಲಿರುವಳು ಮತ್ರ್ಯರ ಭಾಗ್ಯವು ಹತ್ತೇ ನಿಮಿಷವು ಇದ್ದರೇನು ಸುಖ ಇಲ್ಲದೇನು ಭಯ 3 ಮನದಲಿ ರಾಜ್ಯವ ಕಟ್ಟಬೇಕಣ್ಣ ಅನುಭವದರಮನೆ ಶೃಂಗರಿಸಣ್ಣ ಪ್ರಣತ ಪ್ರಸನ್ನನ ಆಲಯ ಮುಟ್ಟಲು ಅಣುಬಾಂಬ್ಗಳಿಗೂ ಶಕುತಿಯಿಲ್ಲಣ್ಣ4
--------------
ವಿದ್ಯಾಪ್ರಸನ್ನತೀರ್ಥರು
ಕನಸು ಕಂಡೆನು ನಾನು ಸಂತೋಷದಿ| ಕನಸು ಕಂಡೆನು ನಾನು ಅರನಿಮಿಷದೊಳು ಹರಿಯ ಮನಸಿನಲಿ ಸ್ಮರಿಸಿ ಮಹಾರೂಪವನು ಕೂಡ ಪ ವೆಂಕಟರಮಣನ ಯಾತ್ರೆಗೆ ಹೋದ್ಹಾಗೆ ಶಂಕೆ ಇಲ್ಲದೆ ಪರಶಿಜನಕ ಕಂಡ್ಹಾಗೆ ಬಿಂಕದಿಂದಲಿ ದೇವಸ್ಥಾನ ಪವಳಿಯ ಸುತ್ತ ಅಂಕುರಾರ್ಪಣ ಧ್ವಜಸ್ತಂಭದಲಿ ನಿಂತ್ಹಾಗೆ 1 ಅಡಗಿ ಶಾಲೆಯ ಅನ್ನಪೂರ್ಣೆಯನ್ನು ಕಂಡ್ಹಾಗೆ ದೃಢದಿ ಶ್ರೀನಿವಾಸ ದೇವರ ನೋಡಿದ್ಹಾಗೆ ಕಡು ಹರುಷದಲಿ ತೊಟ್ಲ ತೀರ್ಥ ಸೇವಿಸದ್ಹಾಗೆ ಸಡಗರದ ಮಧ್ಯರಂಗದಲಿ ನಿಂತ್ಹಾಗೆ 2 ಶಿರzಲ್ಲಿ ಕಿರೀಟ ಲಲಾಟ ತಿಲಕ ವಿಟ್ಟ್ಹಾಗೆ ಕೊರಳೊಳ್ ಮುತ್ತೀನಹಾರ ಪದಕ ತೋರಿದ ಹಾಗೆ ಕರದಲ್ಲಿ ಶಂಖಚಕ್ರ ಧರಿಸಿ ಕೊಂಡಿರುವ ಹಾಗೆ ಉರದಲ್ಲಿ ಶಿರಿಲಕುಮಿ ವಾಸವಿದ್ಹಾಗೆ 3 ಹೊನ್ನ ಹೊಸ್ತಿಲ ದಾಟಿ ವಳಗ್ಹೋಗಿ ನಿಂತ್ಹಾಗೆ ಚಿನ್ಮಯನ ರೂಪವನು ಚಿಂತಿಸಿದ ಹಾಗೆ ಅನ್ನ ಪ್ರಸಾದಾತಿ ರಸದÉೂೀಶಿ ಕೊಟ್ಹಾಗೆ ಪನ್ನ ಗಾದ್ರಿ ವಾಸನ ಕಣ್ಣಿಂದ ನೋಡಿದ್ಹಾಗೆ 4 ನಡುವಿನಲಿ ಒಡ್ಯಾಣ ಪೀತಾಂಬರವನುಟ್ಹಾಗೆ ಯಡಬಲದಿ ಜಯು ವಿಜಯ ನಿಂತಿರೋಹಾಗೆ ಪೊಡವಿಯೊಳ್ 'ಹೆನ್ನೆವಿಠ್ಠಲ’ ವೆಂಕಟೇಶನ್ನ ಕಡು ಹರುಷದಲಿ ಕಂಡು ಕೈಮುಗಿದು ನಿಂತ್ಹಾಗೆ 5
--------------
ಹೆನ್ನೆರಂಗದಾಸರು
ಕನ್ನಡಿಯ ಪೋಲುವೊ ಚೆನ್ನ ಕೆನ್ನೆಯ ತೋರು ಪ. ಚನ್ನ ಚೆಲುವೆ ಬಣ್ಣದರಿಶಿಣವ ಪೂಸುವೆನು ರನ್ನದ ಲಲಾಟಕೆ ಚನ್ನ ಕುಂಕುಮ ತಿಲಕ ಚಿನ್ನದಾ ಬೊಂಬೆ ಪದ್ಮಾವತಿ ನಿನಗೆ ತಿದ್ದುವೆನೆ ಚನ್ನಕೇಶವರಾಯ ನಿನ್ನ ಚೆಲುವಿಕೆಗೆ ಮೆಚ್ಚಿ ಬಂದಿಹೆನೆ 1 ಅರವಿಂದದಳನಯನೆ ಅಡವಿಯಲಿ ಯನ ಮೇಲೆ ಅರಸಿ ನೀ ಕಲ್ಲುಗಳ ಬೀಸಿದಾ ಕರಕೆ ಗಂಧ ಸರಸದಲಿ ಹಚ್ಚುವೆನೆ ಸರಸಿಜಾಕ್ಷಿಯೆ ಕೊರಳ ಹರುಷದಲಿ ತೋರೀಗ ನಿನ್ನ ಸರಸಿಜಾಕ್ಷಗೆ ಅರಸಿ ಪದ್ಮಿನಿಯೆ 2 ಸರ್ಪವೇಣಿಯೆ ನಿನಗೆ ಕಂದರ್ಪಪಿತ ಮಲ್ಲಿಕಾ ಪುಷ್ಪ ದಂಡೆಯನು ಮುಡಿಸುವೆನು ಕಮಲನಯನೆ ಸರ್ಪಶಯನನು ನಿನಗೆ ಅರ್ಪಿಸುವೆ ಸುತಾಂಬೂಲ ದರ್ಪವನು ಬಿಟ್ಟು ಕೈಕೊಳ್ಳೆ ವೀಳ್ಯವ ಅರಸಿ ಸರ್ವರಿಗೆ ಅಪ್ಪ ಶ್ರೀ ಶ್ರೀನಿವಾಸಾನೆಂದು ತಿಳಿಯೆ ದೇವಿ 3
--------------
ಸರಸ್ವತಿ ಬಾಯಿ
ಕನ್ಯಾರೂಪವ ತಾಳಿದ ಚನ್ನಿಗ ಕೃಷ್ಣರಾಯನಾ ಪ ದಾನವರ ಮರಳು ಮಾಡಿ ಮಾಣದೆ ಸುಧೆಯನೆರೆದು ಆ ನಿರ್ಜರರ ಪಾಲಿಸಿದ ಶ್ರೀ ನಾರಾಯಣಿ ವೇಷವಾ 1 ಆರಾರು ಸಾವಿರ ಸಕಲ ಶರೀರದ ಎಡಕೆ ಇಪ್ಪ ಸಾರಸುಂದರವಾಗಿದ್ದ ನಾರಿ ರೂಪಗಳು ಇದೊ 2 ಭೂತಳದೊಳಗೆ ಜನಕೆ ಮಾತೆಯಾಗಿ ಕಾವುತಿಪ್ಪ ಜಾತರಹಿತ ವಿಜಯವಿಠ್ಠಲ ಶ್ರೀ ತರಣಿಯಾಳಿದ ಪೆಣ್ಣಿನ 3
--------------
ವಿಜಯದಾಸ
ಕನ್ಯೆ ಕುವರಿ ಕರುಣಿಸೆಮ್ಮನೂ | ಕಮಲನಯನೆಅನ್ಯ ದೇವತೆಯನ್ನ ಭಜಿಸೆನೇ ಪ ಮನ್ಯು ಮಿಕ್ಕ ದೋಷ ಹರಿಸಿ | ನಿನ್ನ ಪತಿಯ ಚರಣ ಕಮಲವನ್ನೆ ಭಜಪ ಮತಿಯ ಕೊಟ್ಟು | ಘನ್ನ ಪದಕೆ ದಾರಿ ತೋರೆ ಅ.ಪ. ಇಂಬು ಡಿಂಬ ಪೋಗದವರವ ಪಡಿಯೆ 1 ಖುಲ್ಲ ಕಂಸ ತನ್ನ ಭಗಿನಿಯ | ಒಯ್ದ ಬೇಗನಲ್ಲನೊಡನೆ ಗೈದ ಖೈದಿಯ |ಅಲ್ಲಿ ಉದಿಸೆ ಚೆಲ್ವ ಕೃಷ್ಣ | ನಲ್ಲೇ ನೀನು ದುರ್ಗೆ ಎನಿಸೆವಲ್ಲದವರ ಬಿಡದೆ ನೀನು | ಕೊಲ್ವೆನೆಂದು ಹಾರಿ ಪೋದೆ 2 ಶರಧಿ | ನಿಂತೆ ಅಲ್ಲಿ ಕನ್ಯೆಯಾಗಿ 3 ಮದುವೆ ನಿನಗೆ ಮಾಳ್ಪ ಮನದೊಳೂ ವರುಣ ಬೇಡೆರುದ್ರ ಅಜರು ಬಂದು ನಿಲ್ಲಲೂ ||ಒದಗಿ ಕಲಿಯ ಯುಗವು ಆಗ | ವಿಧಿಯು ಹರರು ತಾವು ಬೇಗಸುಧಿಯ ಇಂದ್ರ ಪುರದಿ ನಿಲ್ಲೆ | ಮುದದಿ ನಿಂತೆ ಶರಧಿಯಲ್ಲೇ4 ಇಂದಿರೆ ತವ ಮಾತಿನಂತೆ ಬಂಧ ಹರಿಸಿ ಮುಕ್ತಿ ಸುಖವ | ಛಂದದಿಂದ ಕೊಟ್ಟು ಕಾಯ್ವ 5
--------------
ಗುರುಗೋವಿಂದವಿಠಲರು
ಕಪ್ಪುಗೊರಳ ಬಿಂಬ ಅಪ್ಪ ಸಲಹೋ ಪ ಕ್ಷಿಪ್ರ ಕೃಪೆ ಪುಟ್ಟಿಸೈ ಅಪ್ರತಿಮ ದಯವನಧಿ ಅ.ಪ. ದಿವಿಜ ದಾನವ ಗಣವ ತೃಣ ಮಾಡಿ ಆಳುವ ಪವನಾಂಶ ಪಾವನ್ನ ಜ್ಞಾನ ಶರಧಿ ನವವಿಧಾ ಹರಿಭಕ್ತಿ ರಸಸಿಂಧು ವೈರಾಗ್ಯ ಸೌಭಾಗ್ಯನಿಧಿ ಮನದಿ ನೆಲೆಯಾಗಿ ನಿಲ್ಲಯ್ಯ 1 ಶೌರಿ ಮೂರ್ತಿಯನು ನಿತ್ಯೋತ್ಸವದಿ ಹೃದಯ ಕಮಲದಲ್ಲಿ ಭೃತ್ಯ ಮಸ್ತಕ ಮಣಿಯೆ ಚಿತ್ತದಲಿ ಕೂತೆನ್ನ ಹರಿಯ ತೋರಿಸು ಸ್ವಾಮಿ 2 ಸಾರತಮ ಹರಿಯೆಂದು ಜಗಕೆ ತೋರಿದ ಗುರುವೆ ಭಾರ ನಿನ್ನದೊ ಸ್ವಾಮಿ ಕಾಯೊ ಎನ್ನ ಮಾರಪಿತ ಜಯೇಶವಿಠಲನ ಪೂರ್ಣೊಲಿಮೆ ವಾರಿಧಿ ವಿಹಾರ ತವ ಎಡಬಿಡದೆ ಇರಿಸೆನ್ನ 3
--------------
ಜಯೇಶವಿಠಲ