ಒಟ್ಟು 2482 ಕಡೆಗಳಲ್ಲಿ , 115 ದಾಸರು , 1643 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಮಧ್ವ ಚಿತ್ತಮಂದಿರನೆ ನಿನ್ನಯ ಚರಣತಾಮರಸ ನೆರೆ ನಂಬಿದೆ ಪ ಕಾಮ ಕ್ರೋಧಗಳನ್ನು ಕಡಿದು ನಿನ್ನಯ ದಿವ್ಯನಾಮಾಮೃತವನುಣಿಸೋ ಸ್ವಾಮಿ ಅ.ಪ. ಪರ ನಾರಿಯರಮೋರೆ ಬಣ್ಣವನೆ ನೋಡಿಆರು ಇಲ್ಲದ ವೇಳೆ ಕಣ್ಣು ಸನ್ನೆಯಲವಳಕೋರಿದ್ದು ಇತ್ತು ಕೂಡಿವಾರಿಜನಾಭ ನಿನ್ನಾರಾಧನೆಯ ಮರೆದುಧಾರುಣಿಗೆ ಭಾರಾಗಿ ಅಶನ ಶತ್ರುವಾದೆ 1 ಉಪರಾಗ ಮೊದಲಾದ ದಶಮಿ ದ್ವಾದಶಿ ದಿನದಿಉಪೇಕ್ಷೆಯನು ಮಾಡಿ ಜರಿದೆ |ಉಪಕಾರವೆಂದು ನಿಜವೃತ್ತಿ ಪೇಳಿದರೆನಗೆಅಪಕಾರವೆಂದು ತಿಳಿದು |ನಿಪುಣನೆನಿಸುವೆನೆಂದು ಅಜ್ಞಾನಿಗಳ ಮುಂದೆತಪವೃದ್ಧರನ್ನು ಜರಿದೆ |ಸ್ವಪನದೊಳಗಾದರೂ ವೈರಾಗ್ಯ ಬಯಸದಲೆಕಪಟ ಮನುಜರೊಳಗಾಡಿ ನಿನ್ನ ಮರೆದೆನೊ ಸ್ವಾಮಿ 2 ಭೂಸುರರು ಚಂಡಾಲ ಜಾತಿಯನ್ನದೆ ಬಲುಹೇಸಿಕಿಲ್ಲದಲೆ ತಿರಿದೆ | ಆಶಾಪಾಶಕೆ ಸಿಲುಕಿ ಕಂಡಕಂಡಲಿ ತಿಂದುದೋಷರಾಶಿಯನು ತರುವೆ |ಆ ಸತೀ ಸುತರ ಸಲಹುವೆನೆಂದು ಪರಿಪರಿವೇಷವನು ಧರಿಸಿ ಮೆರೆವೆ |ವಾಸುಕೀ ಶಯನ ವಸುದೇವ ತನಯನೆ ನಿನ್ನದಾಸನೆನಿಸದಲೆ ಅಪಹಾಸ ಮಾನವನಾದೆ 3 ಹರಿದಾಸರಲ್ಲಿ ಒಂದರಘಳಿಗೆ ಕುಳಿತರೆಶಿರವ್ಯಾಧಿಯೆಂದ್ಹೇಳುವೆ |ದುರುಳ ದುರ್ವಾರ್ತೆಗಳ ಪೇಳಲು ಹಸಿತೃಷೆಯಮರೆದು ಆಲಿಸಿ ಕೇಳುವೆ |ತರುಣಿ ತರಳರು ಎನ್ನ ಪರಿಪರಿ ಬೈದರೆಪರಮ ಹರುಷವ ತಾಳುವೆ |ಗುರು ಹಿರಿಯರೊಂದುತ್ತರವನಾಡಲು ಕೇಳಿಧರಿಸಲಾರದಲೆ ಮತ್ಸರಿಸುವೆನೊ ಅವರೊಳಗೆ 4 ನಾ ಮಾಡಿದಪರಾಧಗಳನೆಣಿಸಿ ಬರೆವುದಕೆಭೂ ಮಂಡಲವೆ ನೆರೆ ಸಾಲದೊ | ಸೀಮೆಯೊಳಗುಳ್ಳ ದುರ್ಮತಿಯೆಲ್ಲ ಕೂಡಲುಈ ಮತಿಗೆ ಆದು ಪೋಲದೋಹೋಮ ಜಪತಪವು ಇನ್ನೆಷ್ಟು ಮಾಡಲು ಪಾಪಸ್ತೋಮ ಎಂದಿಗು ವಾಲದೊ |ಸಾಮಜ ವರದ ಮೋಹನ್ನ ವಿಠ್ಠಲ ನಿನ್ನ |ನಾಮವೊಂದಲ್ಲದೆ ಪ್ರಾಯಶ್ಚಿತ್ತವ ಕಾಣೆ5
--------------
ಮೋಹನದಾಸರು
ಶ್ರೀರಂಗ ಯಾತ್ರೆಯನು ಮಾಡಿಬಾರೆಂದೆನ್ನ ಈ ರೀತಿಯನುವ ಮಾಡಿದೆಯ ಸ್ವಾಮಿ ಪ ಕಾರುಣ್ಯನಿಧಿಯೆ ವೇಲಾಪುರಾಧೀಶ್ವರನೆ ಆರುಣ್ಯದೊಳು ಕೆಡಹಿದೆಯ ಸ್ವಾಮಿ ಅ.ಪ ದಾರಿಯನು ತೋರಲೈತಂದ ಶ್ರೀವೈಷ್ಣವನು ಸೇರಿಸಿದ ನೀಯಡವಿಯಸ್ವಾಮಿ ಕಾರುಗತ್ತಲೆ ಸುರಿವ ಮಳೆಯ ಸಿಡಿಲಿನ್ನೆಲ್ಲಿ ಸೇರುವೆನು ಈ ಗಿರಿಯೊಳೂ ಸ್ವಾಮಿ 1 ನಾರಿ ಮಕ್ಕಳು ಭೃತ್ಯರೆಲ್ಲಿ ಪೋದರೋ ಯೇನು ಕಾರಣಬಂದೆನಯ್ಯ ಸ್ವಾಮಿ ಭೂರಮಣ ತ್ರಿಭುವನಾಧಾರ ನೀ ನಲ್ಲದಿ ನ್ನಾರು ಕಾವರೆನ್ನನು ಸ್ವಾಮಿ 2 ಘುಡಿಘುಡಿಸುತಲಿವೆ ಪುಲಿ ಕರಡಿ ಸುತ್ತಲು ಭೋ ರಿಡುತಲಿವೆ ಭಕ್ಷಿಸುವಡೇ ಸ್ವಾಮಿ ಬಿಡದೆ ಕರಿಗಳು ಕೂಗಿ ಕಂಗೆಡಿಸುತಲಿವೆ ಇದೇ ಕಡೆಗಾಲವಾಯಿತೆಲ್ಲೋ ಸ್ವಾಮಿ 3 ನಡೆವರೆಡೆಗಾಣೆ ಇಲ್ಲಿರುವುದಾಗ ದಾಗದು ಕಷ್ಟ ಬಡುವುದಕೆ ಗುರಿಯಾದೆನೇ ಸ್ವಾಮಿ ಎಡಬಲಕ್ಕೊಲೆಯೆ ಕಪ್ಪು ಕಲ್ಲು ಮುಳ್ಳುಗಳಿದೆಕೋ ಒಡೆಯ ಕೈವಿಡದೆ ಸಲಹು ಸಲಹೋ ಸ್ವಾಮಿ 4 ಒಂದೆಸಗಲೇಳಡಸಿತೆಂದು ಪೇಳುವ ನುಡಿಗೆ ಸಂದು ಬಸವಳಿದೆನೆಲೋ ಸ್ವಾಮಿ ಇಂದು ಸಂಧ್ಯಾ ಗಾಯತ್ರಿ ಕರ್ಮವುಳಿದುದರ ವಿಂದಾಕ್ಷ ಸುಮ್ಮನಿಹರೇ ಸ್ವಾಮೀ 5 ಎಂದೆಂದು ಮಾತನಾಡುವನಾಥರಕ್ಷಕನೆ ಬಂದುದೀಗೇನು ಸಿರಿಯು ನಿನಗೇ ಬಂಧನವ ಬಿಡಿಸು ದುರ್ಮರಣದಲಿ ಕೊಲ್ಲದಿರು ತಂದೆ ವೈಕುಂಠ ರಮಣಾ ಸ್ವಾಮೀ 6
--------------
ಬೇಲೂರು ವೈಕುಂಠದಾಸರು
ಶ್ರೀರಂಗನಾಥ ಕಾಯೋ ಕಾವೇರಿರಂಗ | ಕಾರುಣ್ಯಪಾಂಗಾ ಪ ಕಾಯೊ ಕಾಯೊ ಕಾವೇರಿ ನಿಲಯನೆ ಕಾಯೊ ವಾಙ್ಮನ ಪೂರ್ವಕದಿ ತವ ತೋಯಜಾಂಘ್ರಿಯ ನಂಬಿದೆನುಭವ ಮಾಯಗೆಲುವ ಉಪಾಯ ತೋರಿ ಅ.ಪ ದೇವಾಧಿದೇವ ನೀನು | ಪ್ರಣತ ಜನರಿಗೆ ದೇವತರು ಮಣಿಧೇನು | ಎಂದರಿತು ನಿಷ್ಟಿಲಿ ಧಾವಿಸಿ ಬಂದೆ ನಾನು | ರಘುವಂಶ ಭಾನು ಕಾವನಯ್ಯ ನೀನೊಲಿದು ಕರುಣದಿ ಪಾವಮಾನಿಯ ಶಾಸ್ತ್ರವರಿತು ಭಾವ ಭಕ್ತಿಲಿ ನಿನ್ನ ಪಾಡುವ ಕೋವಿದರ ಸೇವಕನ ಮಾಡಿ 1 ಪನ್ನಂಗಪತಿಶಯನ | ಶಿರಬಾಗಿ ಪ್ರಾರ್ಥಿಪೆ ಪನ್ನಂಗರಿಪುವಾಹನ | ಎನ್ನಪರಾಧವ ಮನ್ನಿಸೊ ಹಯವದನ | ವೈಕುಂಠ ಸದನ ನಿನ್ನನುಗ್ರಹ ಪೂರ್ಣಪಡೆದು ಜಗನ್ನಾಥದಾಸರ ಸನ್ನಿಧಾನದಿಂ ಬಂದೆ ತಂದೆ 2 ನೇಸರ ಕುಲಜಾತ | ವೇದೋಕ್ತಕ್ರಮದಿಂ ಭೂಸುರ ಕರಪೂಜಿತ | ಕೌಶಿಕನ ಯಜ್ಷವ ಪೋಷಕ ಪವನಪಿತ | ಪಾವನ್ನ ಚರಿತ ವಾಸುದೇವಾನಂತ ಮಹಿಮೆ | ವಿಭೀಷಣಪ್ರಿಯ ದೋಷಕಳೆಯುವ | ಭೇಷಪುಷ್ಕರಣೀಶ ಕೇಶವ ದಾಶರಧಿ ಶ್ರೀ ಶಾಮಸುಂದರ 3
--------------
ಶಾಮಸುಂದರ ವಿಠಲ
ಶ್ರೀರಂಗೇಶವಿಠಲ | ಪೊರೆಯೆನ್ನ ಹೃದಯಾ- ಧಾರನೆ ಮಾಲೋಲ | ಸ್ಮರಕೋಟಿ ಸುಂದರಾ- ಕಾರ ನತಜನಪಾಲ | ಅರಿಮಸ್ತಕ ಶೂಲ ಪ ಆರು ಅರಿಗಳ ಗೆಲಿಸಿಯೆನ್ನಿಂ- ದಾರು ಎರಡನು ಮುರಿಸಿ ನಿನ್ನೊಳು ಆರು ಮೂರನೆಯಿತ್ತು ಸರ್ವದ ಪಾರುಗೈಯ್ಯಬೇಕೆಂಬೆ ದೇವ ಅ.ಪ. ಆನೆಗೊಂದಿ ನಿವಾಸ | ಭಕುತರ ನಿರಂತರ ಮಾನದಿಂ ಪೊರೆವ ಶ್ರೀಶ | ಎಂದೆಂದಿಗು ನಾನಿನ್ನ ದಾಸರ ದಾಸ | ನೆಂದು ಕರುಣಿಸು ನೀನೆನಗೆ ಲೇಸ | ಭಾನುಕೋಟಿ ಪ್ರಕಾಶ ಮಾನ ಅವಮಾನಗಳು ನಿನ್ನಾ- ಧೀನವೆಂದೇ ನಂಬಿಕೊಂಡಿಹ ದೀನನೆನ್ನನು ದೂರ ನೋಡದೆ ಸಾನುರಾಗದಿ ಪೊರೆವುದೈಯ್ಯಾ ನಳಿನಭವ ಅಂಡದೊಳಗೆ ದಾನಿ ನೀನಲ್ಲದನ್ಯರುಂಟೆ ಏನ ಬೇಡೆನು ನಿನ್ನ ಬಳಿಯಲಿ ಜ್ಞಾನ ಭಕುತಿ ವೈರಾಗ್ಯವಲ್ಲದೆ1 ವರಾಹ ಜನ ತಾಪ | ತ್ರಯ ದೂರ ವಾಮನ ಮಾನವೇಂದ್ರರ ಪ್ರತಾಪ | ವಡಗಿಸಿದೆ ಪ್ರಬಲ ದಾನವೇಂದ್ರನ ಶಾಪ | ನೀನೆ ಕಳೆದೆಯೊ ಶ್ರೀಪಾ ವಾನರ ಬಲ ನೆರಹಿಕೊಂಡು ನೀನು ರಾವಣನನ್ನು ಕೊಂದು ಮಾನಿನಿಯ ಪೊರೆದು ಶರಣಗೆ ನಿ ದಾನ ಮಾಡದೆ ಪಟ್ಟಗಟ್ಟಿದೆ ದಾನವಾಂತಕನೆಂಬ ನಾಮವ- ನ್ಯೂನವಿಲ್ಲದೆ ಪರಸತಿಯರಭಿ ಮಾನ ಕಳುಪಿದ ಜಾಣ ಕಲ್ಕಿಯೆ 2 ಸೂರಿಜನ ಪರಿಪಾಲ ಸದ್ಗುಣಗಣನಿಲಯ ಘೋರರಕ್ಕಸಕಾಲ | ವರಶೇಷತಲ್ಪವ ನೇರಿ ನಿರುಪಮ ಬಾಲ | ನಂದದಿ ನಿರುತ ನೀ ತೋರುತಿರುವೆಯೊ ಲೀಲ | ಶ್ರೀ ರಂಗೇಶವಿಠಲ ಮಾರ ಜನಕನೆ ಮಂಗಳಾಂಗನೆ ಕ್ರೂರ ಕುಲವನದಾವ ಅನಲನೆ ಭೂರಿ ಕರುಣವ ಬೀರಿ ಎನ್ನಸು ಭಾರ ನಿನ್ನದು ವಾರಿಜಾಕ್ಷನೆ ಎನ್ನ ಹೃದಯದಿ ಚಾರು ಬಿಂಬವ ಸಾರಿ ಬೇಡುವೆ ಬಾರಿ ಬಾರಿಗೆ ಶರಧಿ ಬಡಬನೆ3
--------------
ರಂಗೇಶವಿಠಲದಾಸರು
ಶ್ರೀರಾಮ ಎನ್ನಿರೊ ಶ್ರೀರಾಮ ಎನ್ನಿರೊ ಪ ದುರಿತ ಪರ್ವತಕೆ ವರವಜ್ರವೆನಿಪುದು ಜಗವರಿಯೆ ಅ.ಪ. ನಿತ್ಯ ಪೊರೆಯುವ ಸತ್ಯ ತಾರಕ ನಾಮಕೆ ಮತ್ತೊಂದು ಸಾರ ಸಹಸ್ರನಾಮಕೆ ಶ್ರೀರಘುನಾಥನ ನಾಮವೆಂತೆಂದು ಸಾರಿ ಮಹೇಶನು ಸುರನರ ವಂದ್ಯನು ಗಿರಿಜೆಗೆ ಪ್ರೇಮದಿ ಪೇಳಿದನು ಮರುತಾತ್ಮಜನು ನಿರುತದಿ ಭಜಿಪನು ಪರಿಪರಿ ಪಾಡಿ ಸುಖಗೂಡಿ 1 ಪತಿತ ಪಾವನ್ನ ಸತತ ಈ ನಾಮ ಗತಿಯಿಲ್ಲದವರಿಗೆ ಗತಿ ಈವ ನಾಮ ಹತವೆ ಮಾಡುತಲಿದ್ದ ಕಿತವನಿಗೊಲಿದು ಕ್ಷಿತಿಯೊಳು ಮುನಿಪತಿ ಎನ್ನಿಸಿತು ಪಥದಿ ಪಾಷಾಣವ ಪೆಣ್ಣನು ಮಾಡಿದ ಅತುಳ ಮಹಿಮನ ಹಿತನಾಮ 2 ಕುಲ ಶೀಲಗಳನ್ನು ಎಂದೂ ಎಣಿಸನೊ ಸುಲಭರೊಳಗೆ ಬಲು ಸುಲಭನು ಇವನು ಕಲುಷದಿ ದೂರನು ಶಬರಿಯ ಫಲವನು ಮೆಲ್ಲುತೆ ಮುಕ್ತಿಯನಿತ್ತಿಹನು ಲಲನೆಯ ಕದ್ದೊಯ್ದ ಖಳನ ತಮ್ಮನಿಗೆ ನೆಲವಿತ್ತ ದಯವಂತ ಶ್ರೀಕಾಂತ 3
--------------
ಲಕ್ಷ್ಮೀನಾರಯಣರಾಯರು
ಶ್ರೀರಾಮ ಜಯರಾಮ ಜಯ ಜಯತು ರಾಮ ಶ್ರೀರಾಮ ಜಯರಾಮ ಜಯ ಜಯತು ರಾಮ ಪ ನಮೋ ರಾಮಚಂದ್ರ ಸದಾಪೂರ್ಣಾನಂದ ನಮೋ ಸುಗುಣ ಸಾಂದ್ರ ಕೌಸಲ್ಯಕಂದ ನಮೋ ರಾಘವೇಂದ್ರ ಸೀತಾ ಕುಮುದ ಚಂದ್ರ ನಮೋ ಅಜಭವೇಂದ್ರಾದ್ಯಖಿಲ ಸುರವಂದ್ಯ 1 ನಿನ್ನ ಉದಯದಿರವಿಯು ಉನ್ನತಿಯನೈದಿಹನು ಘನ್ನತೆಯ ಪೊಂದಿಹರು ಕೌಸಲ್ಯದಶರಥರು ನಿನ್ನ ಅನುಜರು ಜಗದಿ ಪರಮ ಪಾವನ್ನರು ನಿನ್ನರಸಿ ಶ್ರೀಸೀತೆ ತ್ರೈಲೋಕ್ಯ ಮಾತೆ 2 ನಿನ್ನ ಕರುಣದಿ ಹನುಮ ಬ್ರಹ್ಮತ್ವ ವೈದಿದನು ನಿನ್ನ ನಾಮದಿ ವ್ಯಾಧ ವಾಲ್ಮೀಕನಾದ ನಿನ್ನ ಪದರಜ ಸೋಂಕಿ ಶಿಲೆಯಬಲೆಯಾದುದು ನಿನ್ನ ಪ್ರೇರಣೆಯಿಂದ ಪ್ರಣವೆ ಜ್ವಾಲಾಯಿತು 3 ನಿನ್ನ ಪ್ರೇಮದಿ ಶಬರಿ ಮುನ್ನ ಸವಿನೋಡಿ ಫಲ ನಿನ್ನ ಪದಕರ್ಪಿಸಲು ಘನಪದವಿಯಿತ್ತೆ ನಿನ್ನ ಸಖ್ಯವನೆ ಬೆರಸಿದವ ಸುಗ್ರೀವನು ಧನ್ಯವಾಗಿರುತಿಪ್ಪ ನಿಹಪರಂಗಳಲಿ 4 ನಿನ್ನ ದಾಸ್ಯವನೈದಿ ಅನಂತ ಕಪಿವರರು ಉನ್ನತೋನ್ನತ ಯೋಗ್ಯತೆಗಳ ಪಡೆದಿಹರು ನಿನ್ನ ದ್ವೇಷದಿ ರಾವಣಾದಿಗಳು ಮಡಿದರು ನಿನ್ನ ಪೊಂದಿದ ವಿಭೀಷಣ ರಾಜ್ಯಪಡೆದ 5 ಸುರರು ಕೃತ ಪುಟಾಂಜಲಿಯಲ್ಲಿ ಸ್ಥಿತರಾಗಿ ಇರುತಿಹರು ನಿನ್ನಾಜ್ಞದಿ ಇತರ ಮನುಜರ ತೆರದಿ ಪಿತನಾಜ್ಞೆ ಪಾಲಿಸಲು ವ್ರತವನೇ ಕೈಕೊಂಡು ವನಕೈದಿದೆ 6 ಜಾನಕಿಯು ಅವಿಯೋಗಿ ನಿನ್ನ ಬಳಿಯಿರುತಿರಲು ವಾನರರ ಭಲ್ಲೂಕಗಳ ಸೇನೆನೆರಹಿ ಕಾನನವ ಸಂಚರಿಸಿ ಖಳರನ್ನು ಮೋಹಿಸಿದೆ ಶ್ರೀನಿಧಿಯೆ ತವ ಲೀಲೆ ಬಹು ಚೋದ್ಯವು 7 ತಾಮಸರ ಸಂಹರಿಸಿ ಭೂಮಿ ಭಾರವನಿಳಿಸಿ ನೇಮದಿಂ ಕೈಕೊಂಡು ರಾಜ್ಯವನ್ನು ಪ್ರೇಮದಿಂ ಪಾಲಿಸಿದೆ ಪ್ರಜೆಗಳನು ವಿಧವಿಧದಿ ತಾಮರಸಜನ ಪ್ರಾರ್ಥನೆಯ ಮನ್ನಿಸಿ 8 ನಿನ್ನ ರಾಜ್ಯವೆ ಸಕಲ ಸುಖದ ಸಾಮ್ರಾಜ್ಯವು ನಿನ್ನ ಯಾಙ್ಞವೆ ವೇದವಾಣಿಯಿಂದಧಿಕವು ನಿನ್ನನಂತವತಾರಗಳ ಚರಿತೆ ಸೋಜಿಗವು ನಿನ್ನಯವತಾರಕ್ಕು ಮೂಲಕ್ಕಭೇದವು 9 ನಿನ್ನ ಮಹಿಮಾ ಜಲಧಿಯೊಳು ರಮೆಯು ಮುಳುಗಿಹಳು ನಿನ್ನ ಸ್ತುತಿಗೈವ ನಾಲ್ಮೊಗನು ನಾಲ್ಮೊಗದಿಂ ನಿನ್ನ ಧ್ಯಾನದಿ ಸದಾ ಮೋದಿಪನು ಮಾರುತನು ನಿನ್ನನೇ ಪಾಡುವರು ಅಜಪವನ ಪತ್ನಿಯರು 10 ನಿನ್ನ ನಾಮವ ಸವಿದು ಭವನು ನಲಿನಲಿಯುತಿಹ ಖಗರಾಜ ರತಿ ವರ್ಣಿಸುವರು ಚನ್ನೆ ಪಾರ್ವತಿಯು ವಾರುಣಿಯು ಸೌಪರ್ಣಿಯು ಚನ್ನಾಗಿ ಪಾಡುವರು ನಿನ್ನ ಗುಣಗಳನು 11 ಸುರರು ನಾರದಾದಿ ಋಷಿವರರು ವಂದಿಸುತ ಭಕ್ತಿಯಲಿ ನಿನ್ನ ಪದಗಳಿಗೆ ಅಂದದಲಿ ವೀಣಾ ಸುಗಾನ ಸಂಗೀತದಲಿ ಒಂದೊಂದೇ ಮಹಿಮೆಗಳ ಪೊಗಳಿ ಕುಣಿಯುವರು 12 ಸುಖತೀರ್ಥಮುನಿರಾಜ ಗುರುರಾಘವೇಂದ್ರಾರ್ಯ ಅಕಳಂಕ ವgದೇಂದ್ರ ಯತಿಸಾರ್ವಭೌಮರು ಮುಕುತಿದಾಯಕ ನಿನ್ನ ಪದಕಮಲ ಪೂಜಿಸುತ ಪ್ರಖರ ಕಿರಣದಿ ಜಗವ ಬೆಳಗುತ್ತಲಿಹರು 13 ತಾಳತಂಬೂರಿ ಸಮ್ಯಾಳದಿಂದಲಿ ಕೂಡಿ ಕಾಲುಗೆಜ್ಜೆಯ ಕಟ್ಟಿ ಮೇಲು ಸ್ವರದಿಂದ ಮೇಲಾದ ಭಕ್ತಿಯಲಿ ವಾಲ್ಗೈಸುತಿಹರು 14 ನಿನ್ನ ಲೀಲೆಯ ಕಥೆಯು ಮುಕ್ತಿಗೆ ಸತ್ಪಥವು ನಿನ್ನ ನಾಮದ ಮಹಿಮೆ ನಿಗಮಗಮ್ಯ ನಿನ್ನ ಚರಣೋದಕವು ತ್ರಿಜಗಪಾವನ್ನವು ನಿನ್ನ ನೇಮವೇ ಸೃಷ್ಟಿ ಸ್ಥಿತಿಲಯಕೆ ಕಾರಣವು 15 ನಿನ್ನ ನಾಮದಿ ಭರದಿ ಶುಕನು ಕುಣಿದಾಡುತಿಹ ನಿನ್ನ ಧ್ಯಾನದಿ ಯೋಗಿವೃಂದ ಸಂದಿಪು (ದು) ನಿನ್ನ ರೋಷದಿ ಅಜಭವಾದ್ಯರು ತೃಣರು 16 ಮೂರ್ತಿ ಕಣ್ಣಿಗಲ್ಹಾದಕರ ನಿನ್ನಂಘ್ರಿ ಸೇವೆ ಸಾಮ್ರಾಜ್ಯಗಿಂ ಪರತರವು ನಿನ್ನ ನಾಮದ ರುಚಿಯು ಅಮೃತಕಿಂತಧಿಕ 17 ನಿನ್ನ ಧ್ಯಾನವೆ ಸಕಲ ಸಾಧನದ ಸಾರವು ನಿನ್ನ ಗುಣಗಾನವೆ ಶಾಸ್ತ್ರಗಳ ಭೂಷಣವು ನಿನ್ನ ಮಹಿಮಾರಹಿತ ಕಾವ್ಯವಗ್ರಾಹ್ಯವು ನಿನ್ನ ಲೀಲಾ ರಹಿತ ಶಾಸ್ತ್ರವೆ ಕುಶಾಸ್ತ್ರ 18 ನಿನ್ನ ನಾಮಧ್ಯಾನವೇ ದೇಹ ಸಾರ್ಥಕವು ನಿನ್ನ ನಾಮವೆ ವಿವಿಧ ರೋಗನಿರ್ಮೂಲಕವು ನಿನ್ನ ನಾಮವೆ ದುರಿತರಾಶಿಗೆ ಪಾವಕವು ನಿನ್ನ ನಾಮವೆ ಸಕಲಭವಬಂಧ ಮೋಚಕವು 19 ರೇಣು ತೃಣ ಕಾಷ್ಟದಲಿ ನಿನ್ನ ದಯಪರಮೇಷ್ಠಿಯಿಂದಿರುವೆಗಳಲಿ ನಿನ್ನ ಪ್ರೇಮದಿ ನಲಿದ ಮಂದಮತಿ ವಂದ್ಯನು ನಿನ್ನಲ್ಲಿ ಮಮತೆಯಿಲ್ಲದವದೂಷಿತನು 20 ಅಜಭವಗಿರೀಶಾ ಭಜಕÀಜನ ದಾಸಾ ಸುಜನಮನತೋಷಾ ಕುಜನ ಮನಕ್ಲೇಶ ದ್ವಿಜತತಿಯ ಪೋಷ, ರಜನಿಚರನಾಶ ರಜತಪುರಧೀಶ, ಭುಜಗÀಗಿರಿ ವಾಸ 21 ತಂದೆ ತಾಯಿಯು ನೀನೆ, ಬಂಧು ಬಳಗವು ನೀನೆ ಹಿಂದು ಮುಂದು ನೀನೆ, ಎಂದೆಂದು ನೀನೆ ಬಂದಭಯ ಪರಿಹರಿಸಿ ಕುಂದದಲೆ ಕಾಯ್ವಸಂ - ಬಂಧಿಗನÀು ಆಪ್ತ ಗೋವಿಂದ ನೀನೆ 22 ಸೃಜಿಸಿದವನು ನೀನೆ ಪೋಷಿಸಿದವನು ನೀನೆ ನಿಜಗತಿಯ ಜೀವರಿಗೆ ನೀಡುವವÀನು ನೀನೆ ಅಜಪಿತನೆ ನಿನ್ನ ಪದ ಭಜನೆ ಮಾಳ್ಪವರನ್ನು ನಿಜವಾಗಿ ಕಾಪಾಡಿ ಪೊರೆವ ಪ್ರಭುನೀನೆ 23 ಕೊಡುವವನು ನೀನೆ ಕೋಳುವವನು ನೀನೆ ಅಡಿಗಡಿಗೆ ಸುಖದುಃಖ ನೀಡುವವ ನೀನೆ ಕೊಡುವದಾತನು ನೀನೆ ಕೊಟ್ಟದ್ದು ಕೊಂಡರೆ ಹೊಡಕೊಂಡು ಅಳುವದ್ಯಾತಕೆ ಮೂಢಪ್ರಾಣಿ 24 ಈ ಪೊಡವಿಯೊಳು ಮೊದಲು ನಾನು ಬಹು ಕಾಲದಿ ಕೌಪೀನ ಸಹ ಯನ್ನ ಸಂಗಡಿರಲಿಲ್ಲ ಈ ಪೊಡುವಿಯನು ಬಿಟ್ಟು ನಾ ಪೋಪಕಾಲಕ್ಕು ಈ ಪರಿಯೆ ಪೋಪೆನೆಂಬುದು ಸಟಿಯು ಅಲ್ಲ 25 ಗಾಡಿ ವಾಜಿಯು ಮತ್ತೆ ಬೆಡಗಿನ ವಸನಗಳು ಕೇಡುಯಿಲ್ಲದವಾ ಭರಣ ವಸ್ತುಗಳು ನಾಡಿನೊಳು ಬಹುಮನ್ನಣೆಯು ಯೆಂಬರೆಲ್ಲೆನ್ನ ಕೂಡಬರಬಹುದಾದುದೊಂದುಯಿಲ್ಲ 26 ಎಷ್ಟುಗಳಿಸಿದರೆನ್ನ ಹೊಟ್ಟೆಗೊಂದೇ ರೊಟ್ಟಿ ಸೃಷ್ಟಿಪತಿ ನಿನ್ನಂಘ್ರಿ ನಿಷ್ಠೆ ತೊರೆದು ಕಷ್ಟ ನಷ್ಟಗಳನ್ನು ಸಹಿಸಿ ನಿಷ್ಠ್ಠುರನಾಗಿ ದುಷ್ಟತನದಿಂದ ನಾನಿಷ್ಟುಪರಿಗಳಿಸಿ 27 ದಾನಧರ್ಮಗಳಿಲ್ಲ ವÀ್ರತನೇಮಗಳುಯಿಲ್ಲ ಆನಮಿಸಿಕೊಡಲಿಲ್ಲ ಮಾನಿ ವಿಪ್ರರಿಗೆ ಧೇನುಪಾಲನೆ ನಿನ್ನಧ್ಯಾನವನ್ನೇ ಮರೆದು ಶ್ವಾನನÀಂದದಿ ಕಾದು ಕೊಂಡು ಕುಳಿತಿಪ್ಪೆ 28 ವಾರನಾರಿಯರಲ್ಲಿ ವೇಷಧಾರಿಗಳಲ್ಲಿ ಸೊರೆಮಾಡಿದೆ ಕರ್ಣನೆನಿಸ ಬೇಕೆಂದು ಶ್ರೀರಮಾಪತಿ ನಿನ್ನ ಚರಣ ಕಮಲಗಳನ್ನು ಆರಾಧಿಪರಿಗೆ ನಾರುವ್ವಿ ಕೊಡಲಿಲ್ಲ 29 ಸತಿಸುತರು ಹಿತÀದವರು ಹಿತವ ಮೇಲ್ತೋರಿದು - ರ್ಗತಿಗೆನ್ನ ಗುರಿಮಾಡುತಿಪ್ಪರಲ್ಲದಲೇ ಪರ - ಗತಿಗೆ ಸಾಧನ ತೋರ್ಪರಾರು ಯನಗಿಲ್ಲ 30 ಈ ಮಹಾಜ್ವರದಿಂದ ನೊಂದು ನಿನ್ನನು ನೆನೆವೆÉ ನಾಮಹಾಭಕ್ತಿಯಲಿ ನಂಬಿದವನಲ್ಲ ನಾ ಮಾಡಿದ ಪಾಪರಾಶಿಗಳ ಪರಿಹರಿಸಿ ಪ್ರೇಮದಿಂದಲಿ ಪೊರೆಯೋ ಪರಮಕರುಣಿ 31 ರೋಗವನೆ ಹೆಚ್ಚಿಸು ನಿರೋಗಿಯನು ಮಾಡು ಭವ ರೋಗದಿಂದಗತೀ ಕಡೆದಾಂಟಿಸು ಯೋಗಿವರ ನಿನ್ನಿಚ್ಛೆ ಹೇಗೆÀಮಾಡಿದರುಸರಿ ಆಗದೆಳ್ಳಿನಿತು ಸಂಕೋಚವೆನಗೆ 32 ನೀಕೋಟ್ಟಕವಚವಿದು ನೀ ತೆಗೆದು ಹಾಕಲ್ಕೆ ನಾಕೆಟ್ಟುದುದುಯೇನು ಕರುಣಾಳುವೆ ಈ ಕವಚ ಕೆಲಕಾಲ ಬಿಟ್ಟಮಾತ್ರಕೆ ಮುಂದೆ ನೂಕಬೇಡೆನ್ನ ಮನ ಪಾಪಗಳ ಕಡೆಗೆ 33 ತನುಮನವು ನಿನ್ನದು ಧನಧಾನ್ಯ ನಿನ್ನದು ವನಿತೆ ನಿನ್ನವಳು ಮನೆ ಮಾರು ನಿನ್ನದು ದೇವ ಎನಗಾಪ್ತರೆಂಬುವರು ನಿನ್ನದಾಸರು ರಾಮ ಎನದೆಂಬ ವಸ್ತುವೆಲ್ಲವು ನಿನ್ನದು 34 ನಿನ್ನ ನಂಬಿದಯನೆಗೆ ಪಾಪದಂಜಿಕೆಯಿಲ್ಲ ಪುಣ್ಯದಾಶೆಯು ಇಲ್ಲ ಪರಮಪುರುಷ ನಿನ್ನ ಪ್ರೇರಣೆಯಿಂದ ಯನಿ
--------------
ವರದೇಶವಿಠಲ
ಶ್ರೀರಾಮ ರಾಮನ ಭಜಿಸೊ ಮನದಲಿ ಶ್ರೀಕೃಷ್ಣನ ಸ್ಮರಿಸೊ ಪÀರಾಭವಾರೂರ್ವು ಪವಾಸಗಳಿಂದ ಪತಿತಪಾವನ ಶ್ರೀಗೋವಿಂದ ಪ ತಾರಕ ರಘುವೀರಾ ಶರಾದಿಬಂಧಿಸಿ ಸೈನ್ಯವು ನಡೆಸಿ ತ್ವರಾ ಲಂಬಿಣಿ ಬೇಧಿಸಿ ಸರಾಗ ದಿಂ-------ಪುರಾದಿ --------ಸರಾಗೆಲ್ಲರನೊಯ್ದಡಿಕ್ಕಿ ಪುರಾಧಿಪತಿ ಮಹಾ----ರಾವಣನ ಶಿರಾಗಳ್ಹತ್ತನೆ ಛಂಡಿಸಿ ಹರೆದನಾ 1 ಶರಾಣೆಂದು ಬಂದರು ನಗಾನಂದ ಕರುಣಿಸು ಚಂದಾ ಸ್ಥಿರಾ ಲಂಕೆ ಪಟ್ಟ ಹರುಷದಲಿಕೊಟ್ಟ ಯಾರು ಎಂದ್ಹೇಳಿದಿರಾ ವೀರಾಧಿವೀರ ಶೌರ್ಯ ಶೂರ ಪ್ರಚಂಡರು ಧೀರ ಹನುಮದೇವರು ಆರಾಮದಲಿತ್ತ ಆರಾಮಿಯಾರಥನೇರಿ ಶಿಕಾರ ತಂದೆ ಕಾಂತೆ ಜಗನ್ನಾಥ 2 ರಾಮಾಯೆಂದು ಭಯ ಭಕ್ತಿಯಿಂದಾ ಸ್ಥಿರಚಿತ್ತದಿಂದಾ ಸ್ಮರಣೆ ಮಾಡುತ ಶ್ರೀಹರಿಯು----------ತ ನಿರಾಳ ಮನ ಕವಿತ ಇರುತಲಿಪ್ಪವರಿಗೆ ಸಂಪತ್ಕರವು ಧರೆಯೋಳ್ ಹೆನ್ನತೀರವಾಸನ ಧೊರೆ 'ಹೆನ್ನ ವಿಠ್ಠಲ’ ರಾಯನ 3
--------------
ಹೆನ್ನೆರಂಗದಾಸರು
ಶ್ರೀವರ ಶ್ರೀಕರ ಶುಭಕರನೇ ಪಾವನ ಸಂಪದನೇ ವರದನೇ ಪ ಕಾವನು ಈವನು ಜೀವನು ನೀನೆ ದೈವವು ನೀನೆ ನವನಿಧಿಯು ನೀನೆ ಆವನು ಇನ್ನಾರನೂ ಅರಿಯೆನೆ 1 ತಂದೆಯು ತಾಯಿಯು ಮಾವನು ಭಾವನು [ಎಂದಿಗೆ ಇರುವನ ಪ್ರಿಯನು ಸಹಾಯನು ತಂದೆ ಮಾಂಗಿರಿನಿಲಯನೆ ಅಪ್ರಮೇಯನು ಜೀಯನು 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀವರದ ವಿಠಲರ ಹಾಡು ದೋಷರಾಶಿಯ ಕಳೆದು ಪಾಲಿಸುವದು |ಶ್ರೀಶ ಪ್ರಾಣೇಶ ದಾಸಾರ್ಯನೇ ಒಲಿದು ಪ ಭಾರ ನಿನ್ನದುಯೆಂದೆ 1 ದಾಸಕುಲರತ್ನ ಗುರು ಪ್ರಾಣೇಶದಾಸರಲಿ |ವಾಸುದೇವನ ಸ್ಥಿರದಾಸ್ಯ ಪಡೆದು ||ಶ್ರೀಶ ಪ್ರಾಣೇಶ ವಿಠಲನ ಕುಣಿಸಿದ ಧೀರ |ಆಶಪಾಶವ ಬಿಡಿಸು ಎಂದು ನಾ ಬಂದೆ 2 ನಂದ ವತ್ಸರದ ಭಾದ್ರಪದ ಮಾಸದಲ್ಲಿ |ಚಂದ್ರಪಕ್ಷವು ಅಷ್ಟಮಿ ತಿಥಿ ಭೌಮ್ಯದಿನದಿ ||ಮುಂದ ಕಾಲದಿ ನರಹರಿಯ ಧೇನಿಸಿ ನಲಿದು |ಇಂದಿರಾಧವ ವರದ ವಿಠಲನೂರಿಗೆ ನಡೆದೆ 3
--------------
ಶ್ರೀಶಪ್ರಾಣೇಶವಿಠಲರು
ಶ್ರೀವಾಯು ದೇವರು ಅನುದಿನ ಸ್ತುತಿಸುವೆ ದೀನಮನುಜನ ಜನುಮಗಳಳಿಸೋ ಪ ವಾಣಿವಂದಿತ ಪಾದಪದ್ಮನೆ ಕಾಯೋ ಈಗಲೇ ಅ.ಪ. ಜಾನಕೀರಮಣನ ಪ್ರಿಯ ದಾನವಾಂತಕ ಕಾಯ ಮಣಿಮಂತಾದಿಗಳ ಶೂಲ ಘನ ಪರಾಕ್ರಮ ಭೀಮ ಜ್ಞಾನದಾಯಕ ವಪುಷ ಆನಂದ ತೀರ್ಥಪ್ರಖ್ಯಾತ ಮೌನಿಮಾನಸ ಚಂದ್ರ ಅನಿಮಿಶೇಷಗಳಾದಿಗೊಡೆಯ ಭಾನುಕುಲತಿಲಕ ದೂತನೆ ಭಾನುಕೋಟಿತೇಜರೂಪನೆ ಗಣಿಸಲಾಗದ ಸತ್ವಮಂದಿರ ಮೌನಿಗಳ ಕಲಶ ಪ್ರಾಯನೆ ಕನಕವರ್ಣದಶುಭಗಾತ್ರನೆ ಧ್ಯಾನಗೋಚರ ವಿಶ್ವರೂಪನೆ ಮಾನದಿಂದಲಿ ಪಾಲಿಸಯ್ಯ 1 ವಾರಿಧಿ ದಾಟಿದಶೂರ ಭಾರಿವನವ ಕಿತ್ತವೀರ ಜರಾಸಂಧನ ಕೊಂದ ಧೀರ ವೈರಿತಿಮಿರಕೆ ಸೂರ್ಯ ಹರಿಯ ಹರಡಿದ ರಾಯ ಪರಾಶರಾತ್ಮಜಪ್ರಿಯ ಕರಿರಾಜವರದನೆ ಪ್ರಥಮಾಂಗ ಭಾರತಿ ರಮಣಮುಖ್ಯಪ್ರಾಣ ಹರಿಯು ಆಗಿ ಹರಿಯ ಒಲಿಸಿದೆ ವೀರಮಾರುತಿ ದೇವ ದೇವನೆ ಬಗೆದು ಧರಿಸಿ ಮೆರೆದೇ ಎಂದು ಸಾರಿದೆ ತೋರಿಸಿ ಕಾಯೊ ಸೂತ್ರನೆ 2 ಅಕ್ಷಯನ ಕೊಂದು ಮೆರೆದ ಲಕ್ಷ್ಮಣನ ಪ್ರಾಣವನುಳಿದ ರುಕ್ಮಿಣೀ ಪತಿಯ ಕಿಂಕರನಾದ ಲಕ್ಷ್ಯವಿಲ್ಲದೆ ಸೈನ್ಯಗಳಳಿದಾ ಪಕ್ಷವಾಹನನೆ ದೈವವೆಂದ ಮೋಕ್ಷಸಾಧನಗಳ ತೋರಿನಿಂದ ವೈರಿ ಅನಿಲ ರಕ್ಷಿಸು ರಕ್ಷಿಸು ತತ್ವೇಶರೊಡೆಯ ಲಕ್ಷ್ಮಿಮಾತೆಯಕಂಡುವಂದಿಸಿ ಲಂಕೆ ಸುಟ್ಟು ಸೊಕ್ಕೂ ಮುರಿದೆ ಅಕ್ಷನಾಟವ ಸೋತುನಟಿಸಿ ಕಾಂತೆಗಭಯವ ನೀಡಿ ಪೊರೆದೆ ಅಕ್ಷರೇಡ್ಯನ ಕರುಣದಿಂದಲಿ ಸೂತ್ರಭಾಷ್ಯವ ರಚಿಸಿ ಮೆರೆದೇ ಇಕ್ಷುಚಾಪನ ಪಿತನ ತೋರಿಸೋ ದಕ್ಷಿಣಾಕ್ಷಿಗವತ್ಸರೂಪಿಯೆ 3 ವಿಷಉಂಡುಪೊರೆದ ರೋಮರೋಮಕೆ ಕೋಟಿ ಲಿಂಗಗಳುದುರಿಸಿ ಬಂದ ಧಾಮಸಕಲ ಗುಣಕೆಂದೆನಿಕೊಂಡ ಅನಾದಿ ಅಪರೋಕ್ಷದೇವ ರಾಮಭಕ್ತಾಗ್ರೇಸರನೆನಿಸಿದ ತಾಮಸಾಂತಕ ವಿಜಯರಥಧ್ವಜ ಭಾಮೆಯರೂಪವ ತಾಳಿಮೆರೆದ ಭೀಮವಿಕ್ರಮ ಸಪ್ತಶಿವಧರ ಸಾಮಗಾಯನ ಲೋಲ ಕೃಷ್ಣನ ಪ್ರಿಯದಾಸ ಮೋದಮುನಿಯೆ ಎನಿಸಿಮೆರೆಯುವೆ 4 ವಾನರರೂಪಿಲಿ ಬಂದ ಜಾನಕಿ ಗುಂಗುರಕೊಟ್ಟು ನಿಂದ ರಾಜಸೂಯವ ಮಾಡಿನಿಂದ ಹರಿಯು ಎಂದ ವನಜನಾಭನಮುಖ್ಯ ಪ್ರತಿಬಿಂಬ ಕ್ಷಣದಿ ಸಂಜೀವನವ ತಂದೆ ವಾನರರ ಪ್ರಾಣ ಉಳಿಸಿದೆ ದ್ರೋಣಸುತನ ಅಸ್ತ್ರನಿಲಿಸಿದೆ ಸಾಮ ದೂರ ಖ್ಯಾತನಾಮನೆ ವಾಯು ಅಂತರ ವಿಶ್ವ ಚರಣ ನಂಬಿದೇ 5
--------------
ಕೃಷ್ಣವಿಠಲದಾಸರು
ಶ್ರೀಹರಿ ಕೀರ್ತನೆ ಅಗಲದಿರೋ ಮನ ಮಂದೀರದಿಂದ ಲೆನ್ನ ಎಂದೆಂದಿಗೂ ಕೃಷ್ಣ ಪ ಅಗಲದಿರೋ ಬ್ರಹ್ಮಾದಿ ವಂದಿತ ಪರಿ ಪೂರ್ಣ ಏಕನೆ ವಿಶ್ವ ಸಗುಣ ನಿರ್ಗುಣ ನಿರಜ ನಿಸ್ಸೀಮ ಅ.ಪ. ಕಷ್ಟವಿಲ್ಲದೆ ಸಕಲ- ಚೇಷ್ಟೆಯ ನಡಿಸುವೆ ಕೊಟ್ಟು ದೇಹಾದಿಗಳ- ಬಿಟ್ಟೇ ಜೀವರ ಭವದಿ ಗಿಟ್ಟೀಸೆ ತಮ್ಮ ತಮ್ಮ- ಪಟ್ಟಾ ಮುಕ್ತಿಯ ಬೇಗ ಒಟ್ಟಿನಿಂದಲಿ ಜೀವ ಜಗವಂದಿಷ್ಟು ಚಲಿಸದು ಬಿಟ್ಟು ನಿನ್ನನು ಗುಟ್ಟು ತಿಳಿಯದೆ ಭವದಿ ಕಂ- ಗೆಟ್ಟು ಬಳಲಿದೆ ಭಕ್ತಬಾಂಧವ ನಷ್ಟಕಷ್ಟಗಳಿಲ್ಲದಾ ಸಂತುಷಷ್ಟ ನೀಡುವ ಪ್ರಭುವೆ ಕರುಣಾ- ದೃಷ್ಟಿ ಬೀರುತ ಭಕ್ತಿ ಭಾಗ್ಯವ ಪುಷ್ಟಿಗೈಸುತಲೆನಗೆ ಸಂತತ 1 ಶ್ರೀಶಾನೊಬ್ಬನೆ ಸರ್ವ ತಂತ್ರ ಸ್ವತಂತ್ರನು ನಾಶರಹಿತನಿಗೆಲ್ಲಾ ದಾಸರೆ ಸರಿಸತತಾ ವಾಸುದೇವನು ಜೀವ ಜಗದಿಂ ವಿಲಕ್ಷಣನು ಈಸುಜ್ಞಾನವನೀಯೋ ಜನ್ಮಜನ್ಮಾಂತರಕು ದೋಷದೂರ ವಿಶೇಷ ಮಹಿಮ ಪೂರ್ಣ ವಿಶ್ವಗ ಶಶ್ವದೇಕ ವಿ- ಲಾಸ ಮಿಷಣಾಭರಣ ಭೂಷಿತ ಸಾಮಸರ್ವಾಧಾರ ನಿರುಪಮ ಓಸು ಶಬ್ದಗಳಿಂದ ವಾಚ್ಯನೆ- ನಾಶಗೈಸುತ ಕರ್ಮತ್ರಯಗಳ ಹೃದಯಗುಹೆಯಲಿ 2 ನಿತ್ಯನಿಗಮಾತೀತ-ನೀನೆ ಸತ್ಯರ ಸತ್ಯ ನಿತ್ಯತೃಪ್ತನು ಸ್ವರತ-ಮುಕ್ತೇಶ ಚಿನ್ಮಯನೂ ನಿತ್ಯಜೀವಗೆ ನೀನಿರ್ನಿಮಿತ್ತ ಬಂಧು ಸತತ ನಿತ್ಯಸ್ತೋತ್ರವನು ನುಡಿಸು-ಮೃತ್ಯೋಮೃತ್ಯುವೆ ದೇವಾ ಧಾಮ ವಿಶ್ವೋ ತ್ಪತ್ತಿ ಸ್ಥಿತಿಲಯ ಕರ್ತ ಪರಿಪರಿ ಜೀವ ಸತ್ತಾದಿ ಭಾಸಕ ನಾಥ ಮುಕ್ತಾಮುಕ್ತ ವಂದಿತ - ಭೂತಿ ಭೂರಿದನಾಂತಾತ್ಮ ಖ್ಯಾತ ಸರ್ವೋತ್ತಮ ಪರತ:ಪರಾಕ್ಷರ ವಿಷ್ಣುಸರ್ವಜ್ಞ 3 ಅಂಬುಜಾಕ್ಷನು ನೀನೇ-ಉಂಬುವೆ ಸರ್ವಸಾರ ತುಂಬಿರುವೆ ಒಳಹೊರಗೆ-ಬೆಂಬಲನು ಜಗಕೆಲ್ಲ ಬಿಂಬ ನೀ ಚಲಿಸೆ ಪ್ರತಿ ಬಿಂಬಾ ನಾ ಚಲಿಸುವೆ ನಂಬಿದೆ ಸಲಹಯ್ಯ-ಕಂಬುಚಕ್ರಾಂಕಿತನೆ ಕುಂಭಿಣೀಪತಿ ಕೃಷ್ಣಕೈಬಿಡೆ ಗೊಂಬೆ ಸರಿನಾಲ್ಲವೇನೈ ಡಿಂಬದೊಳಗಿನ ವೈರಿವೃಂದವು ಹಂಬಲಿಸಲೆಡೆಗೊಡವುಭವ ದೊಂಬಿ ಅಡಗಿಸು ದಕ್ಷಣಾಕ್ಷಿಗ-ಸ್ಥಂಭರೂಪಿಯೆ ಶರಣುಶರಣು ಎನಿಸೈ ನೀಡಿ ವಿಜ್ಞಾನ 4 ಮಂದರೋದ್ಧರ ಗೋವಿಂದ ನಿನ್ನಯ ಮಹಿಮೆ ಇಂದಿರೆಗಾಗದು ಸಾಕಲ್ಯ ತಿಳಿಯೆಸಿದ್ಧವಿದೂ ಛಂದಾ ಛ್ಚಾದಿತ ಗಾತ್ರ-ಬಂಧ ಮೋಕ್ಷಪ್ರದನೆ ಎಂದು ಕಾಂಬೆನೋ ನಿನ್ನ-ಮಂದನಾನಿಹೆ ಜಗದೀ ಸದ್ಮ ಪೂರ್ಣಾನಂದ ನಿನ್ನಯ ನಾಮ ವೃಂದದಿ ಬಂಧಿಸಿಹೆ ಜಗವೆಲ್ಲ ವಿಷ್ಣುವೆ-ಛಂದಬೃಹತೀಪತಿಯೆ ನೀನೈ ನಾಡಿ ಮೆರೆಯುವ ಇಂದಿರಾಪತಿ ಕೃಷ್ಣವಿಠಲನೆ-ನಿಂದು ತೋರುತ ನಿನ್ನ ರೂಪವ 5
--------------
ಕೃಷ್ಣವಿಠಲದಾಸರು
ಶ್ರೀಹರಿ ಸಂಕೀರ್ತನೆ ಪತಿತ ಪಾವನ ಗೋವಿಂದ ನಮ್ಮ ಪದುಮದಳಾಕ್ಷ ಸದಾನಂದ ಪ ಸತಿಪತಿ ನುತ ಸಾರ್ವಭೌಮ ಸು ವೃತಾ ಚರಣ ಘನ ರಾಜಿತ ಸುಂದರ ಅ.ಪ ಧೀರನಮೋ ಸುವಿಚಾರ ನಮೋ ಯದುವೀರ ನಮೋ ರಜದೂರ ನಮೊ ಮಾರನಮೋ ಗಂಭೀರ ನಮೊ ಭವಹಾರ ನಮೋ ದಧಿ ಚೋರ ನಮೊ 1 ಜನನ ಮರಣ ಜರ ರಹಿತ ನಮೋ ಪಾವನ ಪದ ಪಂಕೇರುಹ ನಯನ ನಮೋ ಮನ ವಚನಕೆ ಸಿಗದ ನಿಮಿಷ ಪತಿ ನಿನ್ನನೆ ಬೇಡುವೆ ಪೊರೆಯೆನುತ ಕರಮುಗಿದು 2 ಶೌರಿ ಶುಭ ನಾಮ ಭಕ್ತ ಜನ ಹಿತಕಾರಿ ಸುತ್ರಾಮ ಅನುಜ ನಿ ಸ್ಸೀಮ ಮಹಿಮ ಶಿರಿಧಾಮ ಅನಘ ನಮೊ 3 ಅನ್ಯನೆ ನಾ ನಿನ್ನಗೆ ದೇವ ಸಾಮಾನ್ಯನೆ ಅಭಿಮನ್ಯುನ ಮಾವಾ ಇನ್ನೆನೆನ್ನದೆ ನಿನ್ನಿಂ ಲಭಿಸಿದ ನುಣ್ಣುವ ಯನ್ನನು ಮನ್ನಿಸದಿರುವರೆ 4 ಹಿರಿಯರ ದಯವಿರುವುದು ಸರೆ ನೀ ಪೊರೆವಿ ಬಿಡದೆ ಯಂಬೋದು ಖರೆ ಸ್ವರಸ್ವರ ಘಸಿದಾಲ್ಪರಿದ ಮೇಲೆ ಸುಧೆ ಗರಿವರ ತೆರ ಚರಿಪುದು ಧರವೆ 5 ದಾಸರ ಪೊರೆಯಲು ದಾಶರಥೇ ಅಮಿತ ಮತೆ ಶ್ರೀಶಾನಿಮಿತ್ಯ ಬಂಧುಯೆನಿಸಿ ಉದಾಸಿಸೆ ಆಗಮ ರಾಶಿಗೆ ಶೋಭವೆ 6 ಘಾಸಿಗೊಳಿಸುವರೆ ಸೈಸೈಸೈ ನೀ ನೀಶನಾದದಕೆ ಫಲವೇನೈ ಪೋಷಕ ನೀನೆಂದಾಸಿಸಿದವರನು ನೀ ಸಲಹದೆ ಬರೆ ಸೋಸಿಲಿ ಮೆರೆವರೆ 7 ಧೃವನ ಪೊರೆದ ಬಲುವೇನಾಯ್ತೈ ಉದ್ಧವಗೆ ವಲಿದ ದಯ ಏಲ್ಹೊಯತೈ ಬವರದೊಳಗೆ ಪಾಂಡವರ ಕಾಯ್ದ ಮತಿ ಸವಿಯುತೆ ಪವನಪಸವಿದ ಸತತ ಸುಖ 8 ಘನ್ನ ಕರುಣಿ ನೀ ನಹುದೇನೊ ಆಪನ್ನ ರಾಪ್ತ ನೀ ನಿಜವೇನೋ ಸೊನ್ನೊಡಲಾಂಡಗ ನೀನಾದರೆ ಗತ ಮನ್ಯುನಾಗಿ ಜವ ನಿನ್ನನೆ ತೋರಿಸು 9 ತಂದಿನ ಪಾಲಿಸಿ ಮಗನನ್ನು ಬೇಕೆಂದು ಕೊಂದ ಕೃಷ್ಣನೆ ನೀನು ತಂದು ತೋರೊತವ ಸುಂದರ ಪದಯುಗ10 ಕಂದುಗೊರಳನುತ ಪೊರೆಯೆಂದು ಬಲು ವಂದಿಸಿದರು ತ್ವರ ನೀ ಬಂದು ಕಂದನ ಕರದ್ಯಾಕೆಂದು ಕೇಳ್ದದಕೆ ನೊಂದು ಬಿಡಿ ನುಡಿ ಗಳೆಂದೆನು ಕ್ಷಮಿಸೈ 11 ಬಲು ಮಂದಿನ ಸಲಹಿದಿ ನೀನು ಅವರೊಳಗೆ ಓರ್ವನಾನಲ್ಲೇನೊ ನೆಲೆಗಾಣದೆ ತವ ಜಲಜ ಪಾದ ಹಂಬಲಿಸುವರರ್ಥವ ಸಲಿಸದೆ ಬಿಡುವರೆ 12 ಬೇಡಿಕೊಂಬುವದೊಂದೆ ಬಲ್ಲೆ ಅದುಕೂಡಾ ತಿಳಿದು ನೋಡಲು ಸುಳ್ಳೆ ಬೇಡಿ ಬೇಡಿಸುವಿ ಮಾಡಿ ಮಾಡಿಸುವಿ ರೂಢಿಪತಿ ನೀನಾಡಿದ ನಾಡುವೆ 13 ನಾಗಶಯನ ನೀ ಬದುಕಿರಲು ಎನಗಾಗ ಬೇಕೆ ಕಲಬಾಧೆಗಳು ಸಾಗರಾಂಬರಪ ಸುತನಿಗೆ ಪುರ ಜನ ಬಾಗದೆ ಅಣಕಿಸಿಧಾಂಗಲ್ಲವೆ ಇದು 14 ಕರೆದರೆ ಬರುವೆನು ನಿನ್ನಡಿಗೆ ಧಿ ಕ್ಕರಿಸಲು ಮರುಗುವೆ ಮನದಾಗೆ ನಿರ್ವಿಣ್ಯನು ಪರತಂತ್ರನು ನಾನಿ ನ್ನೆರಳಲ್ಲವೆ ಮದ್ಗುರುವರ ವರದಾ 15 ಕಲ್ಲಿನ ರೂಪದಿ ಪೂಜಿಯನು ಗೊಳ್ಳುವ ಬಗೆ ನಾನೊಲ್ಲೆ ನಿನ್ನ ಶಿರಿ ನಲ್ಲೆ ಸಹಿತ ಬಂದು ನಿಲ್ಲೊ ಅರ್ಚಿಸುವೆ 16 ಕಣ್ಣಲಿ ತವದರ್ಶನ ಅಮೃತ ಭವ ತ್ರಾತಾ ಘನ ಕರುಣಿ ಬಾರೆನೆ ಬರುವೆನು ಎಂದೆನ್ನುವ ಬುಧ ನುಡಿ ನನ್ನಿಯೆನ್ನುವೆನು 17 ಭಿಡೆಯ ಬಾರದೆ ಬಲು ಘನ್ನಾ ನಾನುಡಿಯು ವಡ್ಡಿ ಬೇಡಿದರನ್ನ ಕೊಡಗೈಯವನಿಗೆ ಲೋಭವು ಎಲ್ಲಂದಡರಿತು ನುಡಿ ನುಡಿ ಕಡಲಜಳೊಡೆಯನೆ18 ನ್ಯಾಯಕೆ ಅಧಿಪ ನೀನೆ ಜೀಯಾ ಅನ್ಯಾಯಕೆ ಪೇಳುವರಾರೈಯ್ಯ ಮಾಯವೆಂಬೊ ಘನ ಘಾಯವುಎನ್ನನು ನೋಯಿಸುತಿದೆ ಜವಮಾಯಿ ಸುಭೀಷಿಜನೆ 19 ವರುಣಗೆ ವಾರಿಯು ನೀನಯ್ಯ ದಿನ ಕರನಿಗೆ ಮಿತ್ರನು ನೀನಯ್ಯ ಸುರಪಗೆ ಇಂದ್ರನು ಉರಗಕೆ ಶೇಷನು ಸರ್ವವು ನೀನೆಂದರಿತೆನು ಕರುಣಿಸು 20 ಹನುಮಗೆ ಪ್ರಾಣ ಮೂರೊಂದು ಆನನನಿಗೆ ವೇಧನು ನೀನಂದು ಮನಸಿಗೆ ನೀ ಮನ ಜೀವಕೆ ಜೀವನ ಎನುತ ಅರಿದು ನಮೊ ಎನ್ನುವೆ ಕರಮುಗಿದು 21 ಮೂಗಣ್ಣಗೆ ರುದ್ರನು ನೀನೆಧರೆ ಆಗಸ ಸಾಗರ ಧಾರಕನೆ ಶ್ರೀ ಗುರು ರಘುಪತಿ ರಾಗ ಪಾತ್ರ ಭವ ನೀಗದೆ ಬಿಡುವರೆ 22 ಪದುಮನಾಭ ನಿನ್ನನು ಕುರಿತು ನಾ ನೊದರುವ ನುಡಿಗಳು ಚಿತ್ರವತು ವಿಧಿಪತ್ರವನಾಂತು ನಿನ್ನ ಪಾದ ವದಗಿಸದಲೆ ಬರೆ ಪದವೆನಿಸಿದವೆ 23 ಸ್ತವನಕೆ ವಲಿಯದೆ ಇರೆ ನಮನ ಗೈಯುವೆ ಇಕೊ ನೋಡೆ ದಾಸ್ಯತನಾ ಅವನಿಪ ಸರ್ವಕೆ ವಲಿಯದೆ ಇರೆ ಬೈಯುವೆ ಬಡಿಯುವೆ ಸಿಕ್ಕರೆ ಸೆರೆ ಪಿಡಿಯುವೆ 24 ಚೋರನೆ ನೀ ನಡಗಿದೆಯಾಕೆ ಸ್ಮøತಿ ದೂರನೆ ಎನ್ನನು ಮರಿವದೇಕೆ ಆರು ನಿನಗೆ ವೈಯಾರವು ಈ ಪರಿ ಕಾರುಣ್ಯದಿ ಕಲಿಸಿದರೋ ಕರಿವರದಾ 25 ಮರೆದಿಯ ನೀ ಕನಿಕರ ಬಡುವ ಸ್ಥಿತಿ ನೀ ಜರದರೆ ನಮಗಿನ್ನೇನು ಗತಿ ಪರಿಪರಿ ವರಲು ವರಲಿ ದಯಮಾಡದೆ ಇರವದು ನಿನ್ನಗೆ ಮರಿಯಾದಿಯೆ ಹರಿ 26 ರೂಪ ತೋರಲೆನ್ನುವಿಯಾ ಆಹದೆ ಪೇಳಲೊ ಹೇ ವಿಗತಾಗಭಯ ಪಾಪಬಾರದೆ ಈ ಪರಿಯನ್ನನು ನೀ ಪಿಡಿಸೆ ಗತತಾಪ ಶ್ರೀಪ ಹರಿ 27 ಸುರತನು ಸಾಕದೆ ಬಿಟ್ಟವಗೆ ತನ್ನ ಸತಿಯಳ ಖತಿಯೊಳಗಿಟ್ಟವಗೆ ಕ್ಷಿತಿಯರು ಏನೆನ್ನುವರು ಮನದೊಳಗೆ ಪತಿ ಯೋಚಿಸಿ ಹಿತಗೈಯನ್ನೊಳು 28 ಶಿರಿಗೋವಿಂದ ವಿಠಲ ಪಾಹಿ ಗುರುವರ ರಘುಪತಿನುತ ಪದ ಪಾಹಿ ಬರೆ ಮಾತಲ್ಲವೊ ತ್ವರ ತವ ಪಾದ ಸಿರಿ ಸುರರಾಣೆ 29
--------------
ಅಸ್ಕಿಹಾಳ ಗೋವಿಂದ
ಶ್ರೀಹರಿ ಸ್ತವನ ಅರ್ಜುನಗಾನಂದಾ ಮಾಡಿದ ಗೋವಿಂದಾ ಪ ರಥದಿ ಮಂಡಿಸಿ ಚತುರತನದಲಿಂದಾ ಚತುರ ಹಸ್ತದಿಂ ವಾಜಿಯಂ ಪಿಡಿದು ರಥಕನ ಬೆನ್ಹಿಂದಿಟ್ಟುಕೊಂಡು ಸಾ- ರಥಿಯು ತಾನೆ ಅಶ್ವವ ನಡಿಸುತಲಿ ರತಿಪತಿಪಿತನತಿಚಮತ್ಕಾರದಿಂ ಪೃಥಿವಿಯ ಮೇಲೆ ನರನಟನ ತೋರುತಲಿ ಪತಿತ ಪಾವನನು ಫಲ್ಗುಣ ಸಖನು ನುತಿಸಿದವರ ನೆರೆ ಪಾಲಿಸುತಿಹನು ಅತುಳ ಶಂಖದಿಂ ಭೌಂ ಭೌಂ ಎನಿಸುತ ರಥದ ಗಾಲಿ ಛಿಟ್ ಛಿಟ್ ಛಿಟಿಲೆನುತ ಕುದುರೆ ಖುರಪುಟಧ್ವನಿ ಫಳ್ ಫಳ್ ಫಳ್ಳೆ ಗೋವಿಂದನು ರಭಸದಿ ಭಕ್ತನೂಳಿಗಾ1 ಮಂದಜಭವ ಮುಖ್ಯಾಮರ ವೃಂದವು ನಂದತನುಜನಾರಂದಲೀಲೆಯಂ ಛಂದದಿ ನೋಡುತ ನಭೋಮಾರ್ಗದೊಳ್ ಬಂದು ಕುಸುಮಗಳ ವೃಷ್ಟಿಯ ಸುರಿದು ಸಿಂಧುಶಯನ ನಾಮಾಮೃತ ಸುರಿದು ಬೃಂದಾರಕ ನಿಕರವು ಕೈಯೆತ್ತಿ ಇಂದುಕಲಾಧಿಪ ಪ್ರಾರ್ಥನೆ ಸೈ ಸೈ ಎಂದು ದೇವದುಂದುಭಿ ಧೋಂ ಧೋಂ ಕಂಸಾ- ಳದರವ ಖಿಣಿಖಿಣಿ ಖಿಣಿ ಭೇರಿ ನಾದ ಖಡ್ ಖಡ್ ಖಡಲ್ ಭಾರಿ ತಾ- ಹತಜಂತರಿಧೂಂ ನರ್ತನಗೈವುತ ತೆರಳುತ 2 ಮಂಗಳ ರವದಿಂ ಜಯಜಯ ಎನಿಸುತ ಮಂಗಳಾಂಗಿ ರುಕ್ಮಿಣಿ ವಲ್ಲಭನು ರಂಗಿನಿಂದ ರಥವಿಳಿದು ಗೆಳೆಯನ ಮುಂಗೈಯನೆ ಪಿಡಿದು ಅಂಗಜನಯ್ಯ ರಂಗುಮಣಿಯ ಉಂಗುರದಿ ಒಪ್ಪುತಲಿ ಭಂಗಾರಕೆ ಮಿಗಿಲೆನಿಪ ದುಕೂಲದಿ ಶೃಂಗರದಲ್ಲಿ ಉತ್ತುಂಗ ಪರಾಕ್ರಮ ಅಂಗಳದೋಳ್ ನಲಿದಾಡುತ ರಂಗನು ತಿಂಗಳ ಕುಲದೀಪನ್ನ ನೋಡುತಲಿ ರಂಗ ಕದರುಂಡಲಗೀಶನ ಒಡೆಯನು ತಾ 3
--------------
ಕದರುಂಡಲಗೀಶರು
ಶ್ರೀಹರಿಯು ದಾಸರಿಗೆ ಒಲಿದ ಸ್ತೋತ್ರ ನೀನಾಗಿ ನೀಎನಗೆ ಒಲಿಯೋ ಸರ್ವೇಶ ಪ ದೀನ ವತ್ಸಲ ವೇಧಪಿತ ಶ್ರೀದ ಶ್ರೀಶ ಅ.ಪ ಕರಿಯಂತೆ ನಿನ್ನರಿತು ಕರೆಯಲರಿಯೆನು ನಾನು | ನಾರಿಯಂತೆ ಸವಿದು ಕೊಡಲರಿಯೆ ಪಣ್ಣು || ತರುಗಳಂತೆ ತಪಸ್ಸು ಸಂಸ್ಮರಣೆ ನಾನರಿಯೆ ಕರುಣಾಭ್ಧಿ ನೀನೇ ಪೊರೆ ಎನ್ನ ಶ್ರೀಹರಿಯೆ 1 ಹೇಮ ಕಾಮಿನಿ ಭೂಮಿ ಸಾಧನಕ್ಕೊದಗಬೇಕು | ಮಮ ಅಹಂಕಾರ ದುಷ್ಟದಿ ರತಿ ಸಾಕು || ಭೂಮನಿನಗೆ ಪ್ರಿಯ ಸೇವೆಯಾಗಲಿ ಸರ್ವ | ಕಾಯ ಕ್ರಿಯೆಗಳು ದೇವ ದೇವ 2 ಎನ್ನ ಸರ್ವಾಭೀಷ್ಟಗಳು ಸಿಧ್ಧಿ ಆಗುವವು | ನಿನ್ನ ಔದಾರ್ಯ ಕೃಪೆಯಿಂದ ಎಂದೆಂದೂ || ನಿನ್ನಧೀನವು ನಾನುರಕ್ಷಕನು ನೀ ಶ್ರೀಶ || ಎನ್ನುವದೊಂದೇ ಬಲ್ಲೆ ಪ್ರಸನ್ನ ಶ್ರೀನಿವಾಸ 3
--------------
ಪ್ರಸನ್ನ ಶ್ರೀನಿವಾಸದಾಸರು
ಶ್ಲೋ||ಶª-Àುದಮ ಸಹಿತೇನಸ್ವಾನುಭಾವೇನ ನಿತ್ಯಂಸಮಮತಿಮನುಯವ್ಯಣ ಸರ್ವದಾ ಸೇವಕಾನಾಂಯಮ ನಿಯಮ ಪರಾಣಾಮೇಕ ತತ್ಪಾದರಾಣಾಮಮಿತನಿಜ ಮಹಿಮ್ನಾ ದೇಶಿಕೇಂದ್ರೊ ವಿಭಾತಿಯೇನು ವಿಚಿತ್ರ ಪೇಳೆ ಯೇ ಮತಿಯೆ ನಿದಾನವನೆನ್ನೊಡನೆಮಾನಸ ವೃತ್ತಿಯಾತ್ಮನ ಕೂಡಿಬರಲೊಂದು ಗಾನ ತೋರುವುದಿದೇನೆ ಪಎಲ್ಲವನುಳಿದೀಗಲೂ ಬಗೆಗೊಂಡು ಮುದದಿಂದ ಬಂದು ನಿಂದುಸಲ್ಲಲಿತಾನಂದ ಪದವ ನೋಡುವೆನೆಂದು ಸವರಿಸಿ ಬರಲು ಮುಂದುಇಲ್ಲ ಮತ್ತೊಂದಾತ್ಮನಿಂದಧಿಕವೆಂದು ನಿಲ್ಲದೆ ಧ್ಯಾನಿಸಲುಝಲ್ಲನೆ ಜಲಧಿಯ ಮೊರವಿನಂದದಿ ತೋರಲಲ್ಲಿ ನಾ ಬೆರಗಾದೆನು 1ಅಂಜದೆ ಚಿಂತಿಸಲು ಮುರಜ ಭೇರಿ ಮಂಜುಳ ವೀಣೆಗಳಸಿಂಜಿತಗಳು ಮೇಘನಾದ ಮುಂತಾದವು ಸಂಜನಿಸಿದವೊಳಗೆರಂಜನೆುಂದವನು ಕೇಳುತ ಹೃತ್ಕಂಜದೊಳ್ಬೋಧೆಯೆಂಬಅಂಜನವಚ್ಚಲು ಬಿಂದು ಪೊಳೆುತು ನಿರಂಜನ ರೂಪಿನಲಿ 2ಮತ್ತೆ ಮುಂದೆ ನೋಡಲು ಬಿಂದುವೆಂಬುತ್ತಮ ಹಿಮಕರನಕತ್ತಲೆಗವಿದುದು ಅದ ನೋಡುತ ಮನ ತತ್ತರಿಸಿತು ನಿಲ್ಲದೆಚಿತ್ತವನಲುಗದೆ ಗುರುಪಾದವ ಧೃತಿವೆತ್ತು ಚಿಂತಿಸುತಿರಲುಕತ್ತಲೆ ಪರಿದು ಕಳಾ ವಿಶೇಷ ನೋಡಲೆತ್ತಲೆತ್ತಲು ತುಂಬಿತು 3ಛಂದದಿತೇಜವನು ನೋಡುತಲದರಿಂದಲಧಿಕ ಸುಖವೂಮುಂದೆ ಪುಟ್ಟಲದರನುಭವದಲಿ ಹಿಗ್ಗಿ ನಿಂದು ಜುಂಮುದಟ್ಟಲುಎಂದೆಂದು ಕಾಣದ ಸುಖದೊಳು ಮನ ಬಳಿಸಂದು ಲಯವನೈದಲುಒಂದಲ್ಲದೆರಡಿಲ್ಲದ ನಿಜ ನಿತ್ಯಾನಂದವೆ ನಾನಾದೆನೂ 4ತಾಪತ್ರಯಗಳಡಗಿ ಕರ್ಮಕಲಾಪವಿಲ್ಲದೆ ಪೋದುದುಗೋಪಾಲಾರ್ಯರ ಕೃಪೆುಂದ ಭವಬಂಧವೀ ಪರಿ ಬಯಲಾದುದುವ್ಯಾಪಾರವೆಲ್ಲವನಿತ್ಯವಾದವು ನಿರ್ಲೇಪತೆಯೆನಗಾದುದುದೀಪಿತ ವಿಜ್ಞಾನ ರತ್ನವೆಂದೆನಿಸುವ ದೀಪ ಸುಸ್ಥಿರವಾುತೂ 5
--------------
ಗೋಪಾಲಾರ್ಯರು