ಒಟ್ಟು 2931 ಕಡೆಗಳಲ್ಲಿ , 105 ದಾಸರು , 1810 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣಾಗತ ರಕ್ಷಕ ಕರುಣಾಂಬುಧೆ ಪರಿಪಾಲಿಸುವ ಮೊರೆ ಪಂಕಜಾಕ್ಷ ಪೊರೆವುದು ಲೇಸು ನಿರಾಕರಿಸದೆ ಹರಿ ನಿನ್ನ ಚರಣಕಮಲವನು ಸ್ಮರಿಸುತಲಿರುವೆನು ಪ ನಂದನಂದನ ಮುನಿವೃಂದ ವಂದಿತ ರಾಕೇಂದುವದನ ಗೋ ವಿಂದ ಕೃಷ್ಣಾ ಮಂದರಧರ ಮುಚುಕುಂದವರದ ಸಂ- ಕುಂದರದನ ಶ್ರೀ ಮುಕುಂದ ಶೌರಿ ಬಂಧನ ಮೋಚನ ಆಪದ್ಭಾಂಧವ ಶೌರೇ 1 ವೇಣುಗೋಪಾಲ ಪುರಾಣಪುರುಷ ಸುಮ- ಬಾಣಜನಕ ಸಾಮಗಾನ ಲೋಲ ಮಾಧವ ಚತು- ವಿನುತ ವiಹಾನುಭಾವ ಶ್ರೀನಿ- ವಾಸಾಚ್ಯುತಾಶ್ರೀತ ಕಲ್ಪತರು ಚಕ್ರಪಾಣಿ ಪದ್ಮೋದರ ಘೋರರೂಪ ಭಂಜನ ದೇವಾದಿದೇವ ವಿಷ್ವಕ್ಸೇನ ಜನಾರ್ದನ ಶ್ರೀ ವತ್ಸಲಾಂಛನ 2 ಹರಿಸರ್ವೋತ್ತಮ ಮರುತಾಂತರ್ಗತ ಪರಮಾತ್ಮ ಗರುಡವಾಹನ ಶುಭಕರಚರಿತ ಮುರಸೂದನಾನಂತ ಮುಕ್ತಿದಾಯಕ ಜಗದ್ಭರಿತ ಕೇಶವ ಕೌಸ್ತುಭಾಲಂಕೃತ ವರದ ಅಹೋಬಲ ಗಿರಿವಾಸ ವಸುಧೇಶ ಭಾಸುರ ಕೀರ್ತಿಸಾಂದ್ರ 3
--------------
ಹೆನ್ನೆರಂಗದಾಸರು
ಶರಣಾಗತ ರಕ್ಷಾಮಣಿಯೆ ಶ್ರೀ ಹರಿಯೆ ಪ ಶರಣಾಗತ ಜನ ವರ ರಕ್ಷಾಮಣಿಯೆಂಬ ಬಿರುದಿನಿಂದಲಿ ಮೆರೆವ ಕರುಣಾ ಭರಣ ಕಾಮಿತ ವರಪ್ರದಾಯಕ ಅ.ಪ. ಜನನ ಮರಣ ರಹಿತ ಜಗದ ಜನ್ಮಾದಿ ಕರ್ತ ಜನುಮ ಜನುಮದಲ್ಲಿ ಜಗದ ಜೀವರಿಗೆಲ್ಲಾ ಅನಿಮಿತ್ತ ಬಂಧುವೆಂದು ನಿನ್ನಯ ಪಾದ ವನಜಗಳನು ನಾವಿಂದು ನಂಬಿಹೆವಿನ್ನು ವನಜನಾಭನೇ ನೀ ಬಂದು ಕಾಯಬೇಕೆಂದು ತನುಮನಂಗಳ ನಿನಗೆ ಒಪ್ಪಿಸಿ ಅನುನಯದಿ ಶಿರ ಮಣಿದು ಬೇಡುವೆ ಅನಘ ಅನುಪಮ ಗುಣಗಣಾಂಬುಧಿ ಅನಿಮಿಷೋತ್ತಮ ಅಪ್ರಮೇಯನೆ 1 ಕಾಮಜನಕ ಪೂರ್ಣಕಾಮ ಆಶ್ರಿತ ಜನ ಕಾಮಧೇನುವೆ ಕೋಟಿ ಕಾಮಲಾವಣ್ಯನೆ ಶ್ರೀ ಮನೋಹರ ಗಂಭೀರ ಸುರುಚಿರ ಘನ ಸನ್ನುತ ಮಹಿಮ ಸಾಮಜನರ ಉದ್ಧಾರ ಭಕ್ತ ಮಂದಾರ ಸಾಮಗಾನ ಪ್ರೇಮ ಜಗದಭಿ ರಾಮ ರಾಕ್ಷಸ ಭೀಮ ಮಂಗಳ ನಾಮ ಸುರಮುನಿ ಸ್ತೋಮ ಸನ್ನುತ ಸ್ವಾಮಿದೇವ ಲಲಾಮ ನಮೊ ನಮೊ 2 ಮಾಧವ ಅರ ವಿಂದಲೋಚನ ಪೂರ್ಣಾನಂದ ಸ್ವರೂಪನೆ ಎಂದೆಂದು ನೀನಲ್ಲದೆ ಗತಿ ಎಮಗಿಲ್ಲ ವೆಂದು ನಿನ್ನನು ಬಿಡದೆ ಕರಿಗಿರೀಶನೆ ತಂದೆ ಯೆಮ್ಮಯ ಕುಂದುಗಳ ನೀ ನೊಂದನೆಣಿಸದೆ ಬಂದು ಸಲಹುವು ಇಂದು ಕರುಣಾ ಸಿಂಧು ನತಜನ ಬಂಧು ನರಹರಿ3
--------------
ವರಾವಾಣಿರಾಮರಾಯದಾಸರು
ಶರಣಾಗತ ರಕ್ಷಿಸಿ ಸ್ವಾಮಿ ಪೊರೆವುದು ಎನ್ನನು ಹರಿಯೇ ಶರಣಾಗತನೊಳು ನಿರ್ದಯ ಸರಿಯೇ ಕರುಣಾಕರ ಗುಣನಿಧಿಯೇ ಪ ಅಪರಾಧಗಳನು ಕ್ಷಮಿಸಿ ಸ್ವಾಮಿ ಕಾಪಾಡೋ ಮಾಧವನೇ ಅಪಾರಪರ ಮಹಿಮನೇ ಪುರಾಣ ಪುರುಷೋತ್ತಮನೇ 1 ಸಂಕಟಪರಿಹಾರಕನೇ ನಮ್ಮ ವೆಂಕಟ ವಿಠಲನೆ 2 ಸೃಷ್ಟಿಕರ್ತನು ನೀನೆ ಸ್ವಾಮಿ ಅಷ್ಟೈಶ್ವರ್ಯವೂ ನೀನೆ ಶಿಷ್ಟರ ಪಾಲಿಪ ನೀನೆ ದುಷ್ಟರ ಸಂಹಾರಕನೇ 3 ವೇದ ಪುರಾಣವು ನೀನೆ ಮೇಧಿನಿಗಧಿಪತಿ ನೀನೆ ಮಾಧವ ಮಧುಸೂದನನೇ ಆದಿ ಮೂರುತಿ ನೀನೆ 4 ಹನುಮೇಶ ವಿಠಲನೇ ಸ್ವಾಮಿ ಜನನಿ ಜನಕನು ನೀನೆ ಜ್ಞಾನ ಪ್ರದಾಯಕ ನೀನೆ ಘನ ಮುಕ್ತಿಗೊಡೆಯನು ನೀನೆ 5
--------------
ಹನುಮೇಶವಿಠಲ
ಶರಣಾಗತನಾದೆನು ಶಂಕರ ನಿನ್ನ ಚರಣವ ಮರೆಹೊಕ್ಕೆನು ಪ. ಕರುಣಿಸೈ ಕರಿವದನಜನಕಾ- ವರಕದಂಬಪೂಜ್ಯ ಗಿರಿವರ- ಶರಸದಾನಂದೈಕವಿಗ್ರಹ ದುರಿತಧ್ವಾಂತವಿದೂರ ದಿನಕರ ಅ.ಪ. ಹಸ್ತಿವಾಹನವಂದಿತ ವಿಧುಮಂಡಲ- ಮಸ್ತಕ ಗುಣನಂದಿತ ಸ್ವಸ್ತಿದಾಯಕ ಸಾವiಗಾನಪ್ರ- ಶಸ್ತ ಪಾವನಚರಿತ ಮುನಿಹೃದ- ಯಸ್ಥಧನಪತಿಮಿತ್ರ ಪರತರ- ವಸ್ತು ಗುರುವರ ಶಾಸ್ತಾವೇಶ್ವರ 1 ಮಂದಾಕಿನೀ ಮಕುಟ ಶಿವ ಶಿವ ನಿತ್ಯಾ- ನಂದಮ್ನಾಯ ಕೂಟ ಚಂದ್ರಸೂರ್ಯಾಗ್ನಿತ್ರಿಲೋಚನ ಸಿಂಧುರಾಸುರಮಥನ ಸ್ಥಿರಚರ- ವಂದಿತಾಂಘ್ರಿಸರೋಜ ಉದಿತಾ- ರ್ಕೇಂದುಶತನಿಭ ನಂದಿವಾಹನ 2 ನೀಲಕಂಧರ ಸುಂದರ ಸದ್ಗುಣವರು- ಣಾಲಯ ಪರಮೇಶ್ವರ ಕಾಲ ಕಪಾಲಧರ ಮುನಿ- ಪಾಲ ಪದ್ಮಜವಂದಿತಾಮಲ- ಲೀಲ ಡಮರು ತ್ರಿಶೂಲಪಾಣಿ ವಿ- ಶಾಲಮತಿವರ ಭಾಳಲೋಚನ 3 ಮಾರಸುಂದರ ಸಂಕರ ಶ್ರೀಲಕ್ಷ್ಮೀ- ನಾರಾಯಣಕಿಂಕರ ಮಾರಹರ ಮಹನೀಯ ಶ್ರುತಿಸ್ಮøತಿ- ಸಾರ ವಿಗತಾಮಯ ಮಹೋನ್ನತ ವೀರ ರಾವಣಮದನಿಭಂಜನ ಪುರಹರ 4
--------------
ತುಪಾಕಿ ವೆಂಕಟರಮಣಾಚಾರ್ಯ
ಶರಣಾಗತರಕ್ಷಕ ಬೇಗದಿ ಬಂದು ಮನಮಂದಿರದಿ ನಿಲ್ಲೋ ಪ ಈ ಕರೆಕರೆ ಸಂಸಾರಶರಧಿಯೊಳು ನಿಂದೆ ಹರಿಯೆ ನಿಲ್ಲೊಂದರಘಳಿಗೆಯಾದರೂ ಮನದಿಅ.ಪ ತೋಯಜಾಂಬಕ ನಿನ್ನ ನಾನೆಂದಿಗೆ ಕಾಯದೊಳು ಕಾಂಬೆನೊ ಮಾಯಾರಮಣನೆ ನೀ ಮಾಯವ ಹರಿಸಯ್ಯ ಆಯಾಸಗೊಳಿಸದೆ ಕಾಯುವುದೀಗಲೆ 1 ನಾನಾಯೋನಿಗಳಲ್ಲಿ ನಾ ಬರಲಂಜೆನೋ ಶ್ವಾನಸೂಕರ ಜನ್ಮದಿ ನೀನಿಟ್ಟರಾದರು ಶ್ರೀನಿಧಿಯೆ ನಿನ್ನಯ ಸ್ಮ- ರಣೆ ಒಂದಿದ್ದರೆ ನಾ ಧನ್ಯ ಧನ್ಯನೋ2 ಲೋಕಾಲೋಕೋದ್ಧಾರನೆ ನಿನ್ನಾಜ್ಞೆಯಿಂ ನಾಕೇಶ ಮೊದಲಾದ ಪಿ- ನಾಕಿ ಪ್ರಮುಖರು ಅನೇಕ ಕಾರ್ಯವೆಸಗಿ ಶೋಕಪಡಿಸುವರಯ್ಯ 3 ದುರ್ಗಾಶ್ರೀರಮಣ ಎನ್ನ ಸಂಸೃತಿಯೆಲ್ಲ ದುರ್ಗಮವಾಗಿಹುದೊ ಸ್ವರ್ಗ ಅಪ- ವರ್ಗಪ್ರದನೆ ಎನ್ನಯ ಭವ- ದುರ್ಗಕಡಿದು ಸನ್ಮಾರ್ಗ ಕರುಣಿಸೊ 4 ಸ್ವಾಮಿತೀರ್ಥದಿವಾಸ ಶ್ರೀಜಗದೀಶ ಸ್ವಾಮಿ ಶ್ರೀ ವೆಂಕಟೇಶ ಪಾಮರನಾದೆನ್ನ ತಾಮಸ ಹರಿಸಿ ಹೃತ್ಕಮಲದಲಿ ನಿಲ್ಲೊ ಕಮಲಾಪತಿಯೆ ದೇವ 5
--------------
ಉರಗಾದ್ರಿವಾಸವಿಠಲದಾಸರು
ಶರಣಾಗತಿಯೊಂದೆ ಸಾಧನ ಮಾಧವ ಪ ಶರಣಾಗತಿಯಿಂದ ಹರಿಯ ಪ್ರಸಾದವು ಹರಿಯ ಪ್ರಸಾದವು ಪುರುಷಾರ್ಥಕೆ ಸಾಧನ ಅ.ಪ ಹರಿಯಲಿ ಚಿತ್ತವು ಹರಿಯಲಿ ಭಕುತಿಯು ಹರಿಯುದ್ದೇಶದಿ ಯಜನಾದಿಗಳು ಹರಿಯ ಚರಣದಲಿ ನಮ ನವು ಇದನೇ ಶರಣಾಗಿಯೆಂದರುಹಿದ ನುಡಿ ಕೇಳಿÀದೆ 1 ಸರ್ವೋತ್ತಮ ನೀನೊಬ್ಬನೆ ಎನ್ನುವ ದಿವ್ಯಜ್ಞಾನವ ಪೊಂದುತ ಮನದಲಿ ಸರ್ವಾಧಿಕ ನಿಶ್ಚಲ ಪ್ರೇಮ ಸಹಿತ ಸರ್ವಕರ್ಮ ನಿನ್ನೊಳಗರ್ಪಣೆ ಮಾಡುವೆ 2 ತ್ರಿವಿಧ ಪೂಜೆಗಳಲಿ ರತಿಯು ಹರಿಯ ಪ್ರಸನ್ನತೆಯಲಿ ನಂಬುಕೆಯು ಹರಿದಾಸನು ನಾನೆಂಬುವ ನಂಬಿಕೆ ಶರಣಾಗತಿಯಿದು ಮೋಕ್ಷಫಲಕೆ ಸಾಧನ 3
--------------
ವಿದ್ಯಾಪ್ರಸನ್ನತೀರ್ಥರು
ಶರಣಾಗು ಸಂಪೂರ್ಣ ಶರಣಾಗು ಜಿತಾರ್ಣ ಕರ ನೀಲವರ್ಣ ಪ ಅತಸೀ ಕುಸುಮಗಾತ್ರ ಅರವಿಂದ ನೇತ್ರ ಚಾರು ಚರಿತ್ರ ಧೃತ ಗೋವರ್ಧನ ಗೋತ್ರ ದಿವಿಜೇಂದ್ರ ಸ್ತೋತ್ರ ಶತಯಾಗಸುತಮಿತ್ರ ಸೌಪರ್ಣಯಾತ್ರ 1 ಸ್ಮರಕೋಟಿ ಲಾವಣ್ಯ ಪುರಜಿದ್ವರೇಣ್ಯ ಪುರುಹೂತಾದಿ ಶರಣ್ಯ ಪುರುಷಾಗ್ರಗಣ್ಯ ದುರಿತಾಪಹರೇಣ್ಯ ದಾನ ಸಾದ್ಗುಣ್ಯ ಪರಿಣತ ಲಾವಣ್ಯ ಪರಮಕಾರುಣ್ಯ 2 ಕಮಲರಮ್ಯವಿಲಾಸ ಕೌಸ್ತುಭೋದ್ಭಾಸ ಕಮನೀಯ ಸುವಿಭೂಪ ಕರಪೀತವಾಸ ಅಮಿತೇಂದು ರುಚಿಹಾಸ ಆದಿಶೇಷೋಲ್ಲಾಸ ಸುಮನಸಪುರವಾಸ ಪಾಹಿ ಲಕ್ಷ್ಮೀಶಾ 3
--------------
ಕವಿ ಲಕ್ಷ್ಮೀಶ
ಶರಣಾಗ್ರಣಿ ರಾಮ ಚರಣಾಂಬುಜ ಬಿಡೆ ನಳಿನ ಷಟ್ ಚರಣ ಬಿಡ ಬಲ್ಲದೆ ಪ ಹನುಮನ ಭಜನೆಂಬ ಘನವಾರಿ ಪೂರಿತ ಮನ ಸರೋವರ ಅಯನವಾಗಿಪ್ಪಾ ಜನಕಸುತೆ ಹಂಸಿ ಮನಸಾಪ ಹಾರಿ ದಿನಕರನ್ವಯದಿಂದ ವಿನುತವಾಗಿಪ್ಪ 1 ಅಮರರೋತ್ತಮರೆಂಬ ಭ್ರಮರರಾ ರವಗಳ ಸಮಯೋಚಿತ ಸಾಮಭಿ ಸೇವಿತ ವಿಮಲಾತಮದಿಂದ ಸಾಂದ್ರ ಶಮಲಾತಿ ದೂರ ಪಾದ 2 ಶಿಲೆಯ ಬಾಲೆಯ ಮಾಡಿ ಮಲವಳಿದು ಮುನಿ ಕುಲವಗೆಡಿಸಿ ಸತ್ಕುಲನೆನಿಸಿದೆ ಜಲಧಿಯೊಳಗೆ ಸೇತು ನಿಲಿಸಿ ಸಜ್ಜನರಿಗೆ ನೆಲೆ ವಾಸುದೇವವಿಠಲದೇವ ಪಾದಪದುಮ3
--------------
ವ್ಯಾಸತತ್ವಜ್ಞದಾಸರು
ಶರಣಾರ್ಥಿ ಶಿವಶರಣಾರ್ಥಿ | ಹರಿಹರ ಎಂದು ಶಿವಪದ ಕಂಡವಗೆ ಪ ಗುರುವಿಗೆರಗೆ ನಿಜ ಗುರುತಕೆ ಬಂದಿನ್ನು | ಧರೆಯೊಳು ಪುಣ್ಯ ಜಂಗಮನೆ ವಾಸಿ | ಅರಹುಮರಹು ಮೀರಿ ಸಹಜಾವಸ್ಥಿಗೆ | ಬೆರದಿಹ ಶರಣಗೆ 1 ಎದೆಸೆಜ್ಜೆಯೊಳಗಿಹ ಘನಲಿಂಗ ಪೂಜಿಸಿ | ಮುದದಿಂದ ಭಕ್ತಿಯ ಪಾವುಡದೀ | ಸದ್ಭಾವ ಸೂತ್ರದಿ ಆವಗುಧರಿಸಿಹ | ವಿದಿತ ಲಿಂಗಾಂಗಿಗೆ 2 ಆಶೆಯಸುಟ್ಟು ವಿಭೂತಿಯ ಹಚ್ಚಿದ | ಧ್ಯಾಸದಂಡ ಕೈಲಿ ಪಿಡಿದು | ಲೇಸಾದ ಸುಗುಣ ರುದ್ರಾಕ್ಷಿಯ ತೊಟ್ಟು | ಭಾಸಿಪ ಸಂತಗೆ 3 ಶಾಂತಿಯ ತೊಡರವ ಕಟ್ಟಿ ವಿವೇಕದ | ಮುಂತಾದ ಕಾಷಾಯ ಪೊದ್ದಿಹನಾ | ಸಂತತ ಗುರುಧರ್ಮ ಭಿಕ್ಷೆಯನುಂಡು | ವಿಶ್ರಾಂತಿಯ ಮಠ ಹಿಡಿದ ವಿರಕ್ತಗೆ 4 ಶರಣನೆನುತಾ ಅನ್ಯರ ಶರಣರ ಮಾಡೀ | ಶರಣ ತಾನೆಂಬ ವೃತ್ತಿಯನುಳಿದು | ದ್ಧರಿಸಿದ ಮೂರ್ತಿಗೆ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶರಣು ಕೃಷ್ಣವೇಣಿ ಶರಣು ಪುಣ್ಯಾಭರಣಿ ಶರಣು ಇಹಪರದಾಯಿನೀ ಪ ಸರ್ವವ್ಯಾಪಕನಿರಂಜನನೆನಿಪ ಶ್ರೀವಿಷ್ಣು ಉರ್ವಿಯೊಳು ದ್ರವರೂಪದೀ ಹರ್ವಿತಿಹಸಂದೇಹವಿಲ್ಲದಕೆ ಭಕುತಿಯಲಿ ಅರ್ವವನೆ ಗತಿಯ ಪಡದಾ ಮುದದಿ 1 ಅಚ್ಯುತನು ಕೃಷ್ಣನದಿ ಹರಿವುತಿಹನೆಂದು ಮೆಚ್ಚಿವೇಣಿಯ ನಾಮದಿ ನಿಚ್ಚ ಸತ್ಸಂಗವೆಂದರಿತು ಕೂಡಿದ ಶಿವನು ಸಚ್ಚರಿತನಾಮಮಹಿಮಾನೇಮಾ 2 ನಿನ್ನ ಪೂರೆಲುದಿತ ಪವನದಿ ದುರಿತವೋಡಿದವು ಇನ್ನು ಮಿಂದವನ ಗತಿಯಾ ಬಣ್ಣಿಸುವ ನಾವನೆಲೆ ಜನನೀತಾರಿಸುಯನ್ನ ಮನ್ನಿಸು ಗುರುವಿನಾಸುತನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶರಣು ಗಜಮುಖ ಆಖುವಾಹನ ಶರಣು ಸುರಗಣ ಸೇವಿತ ಶರಣು ಸಕಲಾಭೀಷ್ಟದಾಯಕ ಶರಣು ವಿಘ್ನ ವಿನಾಯಕ 1 ಕುಂಡಲ ಕಾಮಿತಾ ಫಲದಾಯಕ ಅಮಿತ ಸೌಲಭ್ಯ ಪ್ರಬಲ ಶಾಸ್ತ್ರೋದ್ಧಾಮ ವಿದ್ಯಾಶರನಿಧೇ 2 ಪಾಶ ಮೋದಕ ಪರಶುಧರ ಫಣಿಭೂಷ ಪಾರ್ವತಿನಂದನ ವಾಸವಾರ್ಚಿತ ವಿಜಯವಿಠ್ಠಲನ ದಾಸ ಭೋ ಗಣನಾಯಕ 3
--------------
ವಿಜಯದಾಸ
ಶರಣು ಗಜಾನನನೆ ಶರಣು ಲಂಬೋದರನೆ ಶರಣು ಪಾರ್ವತಿ ಪುತ್ರ ಶುಭಗಾತ್ರ ಪ ಆದಿಯಲಿ ನಿನ್ನ ಪಾದಭಜನೆಯ ಮಾಡೆ ಸಾದರದಿ ಸಲಹುವೆ ಮೋದವಿತ್ತು ಮೇದಿನಿಯಲಿ ನಿನ್ನಾರಾಧನೆಯ ಮಾಡದವ ನ- ರಾಧಮನೆನಿಸುವನಿದು ಪುಸಿಯಲ್ಲ 1 ಆಖುವಾಹನನೆ ನೀ ಕಳೆ ವಿಘ್ನಗಳ ಸಾಕು ಲಾಲಿಸೆನ್ನ ಏಕದಂತ ಮಣಿ ಭೂಷಣ ಕಾಕುಜನ ಕುಠಾರ ಲೋಕೈಕ ವೀರ 2 ಸಿತಿಕಂಠ ವರಪುತ್ರ ಪ್ರತಿ ವಾಸರವು ನಾ ನುತಿಸಿ ಬೇಡುವೆ ನಿನ್ನ ಸತಿರಹಿತನೇ ಸಿರಿ ರಂಗೇಶವಿಠಲನ ಅತಿಪ್ರೀತಿಯಿಂದ ಭಜಿಪ ಮತಿಯ ನೀಡೋ 3
--------------
ರಂಗೇಶವಿಠಲದಾಸರು
ಶರಣು ಗಿರಿಯ ತಿಮ್ಮಾ | ಶರಣು ಪುರುಷೋತ್ತಮಾ | ಶರಣು ಮಹಾ ಮಹಿಮ | ಶರಣು ಪರಬೊಮ್ಮಾ | ಪರಿಹರಿಸುವದು ಹಮ್ಮಾ ಪ ವರೇಣ್ಯ | ಭಂಗ | ಹರಿಸಿದ ಶಿರಿ ರಂಗ | ವಿಹಂಗ | ತುರಗ ತುರಗ ವದನ | ಸದನ ಕರ ಮುಗಿವೆನೈಯಾ | ಕರದ ಮಾತಿಗೆ ಜೀಯಾ | ಭರದಿಂದ ಕೊಡು ಮತಿಯಾ 1 ಪಾದದಲಿ ಪೆಣ್ಣಾ | ಮೋದದಲಿ ಪೆತ್ತ ಚಿಣ್ಣಾ | ನಾದ ಬಲು ಪಾವನ್ನಾ | ಭೇದಾರ್ಥ ಜ್ಞಾನ | ಆದರಿಸೆ ಅನುದಿನಾ | ನೀ ದಯದಲಿ ಕೊಡು | ಈ ದೇಹ ನಿನ್ನ ಬೀಡು | ಯಾದುದೆ ಇತ್ತ ನೋಡು 2 ಜಲದೊಳಗಾಡಿದೆ | ಚಲಕೆ ಬೆನ್ನ ನೀಡಿದೆ | ನೆಲ ಬಂದು ನೆಗಹಿದೆ | ಖಳನನ್ನ ಕೆಡಹಿದೆ | ಇಳಿಯ ಮೂರಡಿ ಮಾಡಿದೆ | ಕುಲವ ಕೂಡಲಲಿ ಹಾರ | ಜಾರ ಚೋರ | ಅಳಿದೆ ಮುಪ್ಪುರು ಶೂರಾ | ವಿಜಯವಿಠ್ಠಲ ಪಾರಾ | ಫಲವೀವೆ ಧರಣೀಧರಾ 3
--------------
ವಿಜಯದಾಸ
ಶರಣು ಗುರು ಬ್ರಹ್ಮಣ್ಯ | ಶರಣು ಶಿರಿ ಸುರಮಾನ್ಯಪರಿಹರಿಸು ಭವತಾಪ | ಬಿನ್ನವಿಪೆ ಮುನಿಪ ಪ ಪುರುಷೋತ್ಮ ಕರಜಾತ | ಕಣ್ವತಟದಲಿ ಖ್ಯಾತನರಹರಿಯ ಪದಕಮಲ | ಭಜಕಶೀಲಶರಣ ಜನ ಸುರಕಲ್ಪ | ತರುವೆ ಎನ್ನಯ ಪಾಪಪರಿಹರಿಸೊ ಮುನಿಮೌಳಿ | ನಾನು ಪದಧೂಳಿ 1 ಯೋನಿ ಅನೇಕದಲಿ | ಬಂದಿರುವೆ ನಾಬಳಲಿಮಾನ ನಿಧಿ ನೀಯನ್ನ | ಕಾಯೊ ದಯ ಪೂರ್ಣ |ಜ್ಞಾನಾರ್ಕನೆನಿಸಿರುವ | ಮೌನಿ ತವ ಸದ್ಭಾವಪೂರ್ಣ ಹರಿ ಸುಜ್ಞಾನ | ಪಾಲಿಸೈ ನಿಪುಣ 2 ವಿಕಳ ಮತಿಯನು ಹರಿಸು | ಅಕಳಂಕನೆಂದೆನಿಸುಸುಖತೀರ್ಥ ಮತ ಸುಧೆಯ | ಉಣುವ ಪರಿಯ |ಸುಖದಿಂದ ಕರುಣಿಸುತ | ಸುಖ ಹರಿಯ ನೋಳ್ಪಂಥಪ್ರಕರಣದಲಿರಿಸೆನ್ನ | ಮೌನಿ ಕುಲರನ್ನ 3 ಸುಕೃತ ಒಂದಿರಲಿ | ನಿನ್ನ ದಯವಿರಲಿ 4 ವಿಠ್ಠಲ ಸುಪೂಜಕನೆ | ಕಷ್ಟಗಳ ಕಳೆಯುವನೆಶಿಷ್ಟ ಸಜ್ಜನ ಪಾಲ | ಹರಿಪದ ವಿಲೋಲ ಕೃಷ್ಣ ಗುರು ಗೋವಿಂದ | ವಿಠ್ಠಲನ ಪದದ್ವಂದ್ವಸುಷ್ಠು ಹೃದ್ಗುಹದಲ್ಲಿ | ಕಾಣಿಪುದು ಅಲ್ಲಿ 5
--------------
ಗುರುಗೋವಿಂದವಿಠಲರು
ಶರಣು ಚಿನ್ಮಯರೂಪ ಅತ್ರಿಮುನಿ ಕುಲದೀಪ ಶರಣು ವಿಶ್ವಂಭರನೇ ದತ್ತ ದಿಗಂಬರನೆ ಶರಣು ನೆನುವರ ಸಾರಿ ಸುಳಿದು ಹೊರೆವ ಉದಾರಿ ಶರಣು ದುರಿತಾಪಹಾರಿ ಶರಣು ಸಿಂಹಾದ್ರೀಶ ಯೋಗ ಮಾರ್ಗ ಪ್ರಕಾಶ ಶರಣು ಸರ್ವರ ಗುರುವೆ ಎನಿಸಿ ಲೋಕದಿ ಮೆರೆವೆ ಶರಣು ಮಹಿಪತಿ ನಂದನನ ನೋಡದವೆ ಕುಂದಾ ಸಲಹು ಪದ ದೋರಿ ದ್ವಂದ್ವಾ 1
--------------
ಕಾಖಂಡಕಿ ಶ್ರೀ ಕೃಷ್ಣದಾಸರು