ಒಟ್ಟು 3168 ಕಡೆಗಳಲ್ಲಿ , 123 ದಾಸರು , 2402 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರೆ ಸಖಿ ಪೋಗಿ ರಾಸ ಕ್ರೀಡೆಯಾಡುವ ಪ ಸಾರಸಾಕ್ಷ ಕೃಷ್ಣನು ತಾ ಕೊಳಲನೂದುವ ಅ.ಪ ಜಾರನೆಂದು ಸಣ್ಣಮಾತನಾಡಿದ್ದಾಯಿತು ಚೋರನೆಂದು ಬಹಳ ದೂರು ಮಾಡಿದ್ದಾಯಿತು ಮೂರು ನಿಮಿಷ ಅವನ ಮರೆಯಲಾಗದಾಯಿತು ಬೀರುತಿರುವ ಮೋಹಜಾಲ ಸಡಲದಾಯಿತು 1 ಯಾವನೀತನೆಂದು ಚಿಂತೆ ಮಾಡಿದ್ದಾಯಿತು ಗೋವಳನಿವನಲ್ಲವೆಂದು ನಿರ್ಧರಾಯಿತು ಯಾವನಾದರೇನು ಇವನ ಕ್ಷಣವು ಕಾಣದೆ ಜೀವನ ಕಳೆಯುವುದೆ ದೊಡ್ಡ ಭಾರವಾಯಿತು 2 ಮಂದಹಾಸದಿಂದ ಸಕಲ ಜಗವ ಬೆಳಗುವ ಚಂದ್ರನು ತಾನಿವನ ನೋಡಿ ಬಹಳ ನಾಚುವ ಸಾಂದ್ರವಾಯಿತಂತರಿಕ್ಷ ಮಧುರ ನಾದದಿ ಮಲಯ ಮಾರುತ ತಾ ತಲೆಯನಾಡುವ 3 ನಾದದ ಸುಧೆ ಸಾಗರದಲಿ ತೇಲುವಂತಿದೆ ಮಾಧವ ತಾ ಸುಧೆಯ ರಸವನೆರಚುವಂತಿದೆ ಬಾಧಿಸುತಿಹ ಭವದ ತಾಪವಡಗಿದಂತಿದೆ ಮಾದರಿಫಲ ರಾಸಕ್ರೀಡೆ ತೋರುವಂತಿದೆ 4 ಸಕಲ ಲೋಕನಾಥನೀತನೆಂದು ತಿಳಿಯಿತು ಸಕಲವನರ್ಪಿಸುವುದೊಂದೆ ಮಾರ್ಗ ಉಳಿಯಿತು ಲಕುಮಿ ಮುರುಳಿ ರೂಪದಲ್ಲಿ ಇಹುದು ಹೊಳೆಯಿತು ಭಕುತಿ ಹರಿದು ಎನ್ನ ವiನ ಪ್ರಸನ್ನವಾಯಿತು 5
--------------
ವಿದ್ಯಾಪ್ರಸನ್ನತೀರ್ಥರು
ಬಾರೆಂದು ಹಸೆಗೆ ಕರೆವೆÀನು ಕ್ಷೀರಾಬ್ಧಿಶಯನನೆ ಸಾರಸನಯನನೇ ಪ. ಕ್ಷೀರಾಬ್ಧಿಜಾವರ ಮೇರುಗಂಭೀರನೆ ನೀರಜಭವಪಿತ ಮಾರಹರಾರ್ಚಿತ ಚಾರುನೀರದಗಾತ್ರ ಪರಮ ಪವಿತ್ರ ಅ.ಪ ಧರಣೀಸುರರ ಮೊರೆಗಳನಾಲಿಸಿ ಧರೆಯೊಳಗವತರಿಸಿ ನರರೂಪಧರಿಸಿ ಧರಣಿಪ ದಶರಥತರಳನೆಂದೆನಿಸಿ ಧರೆಯ ಭಾರವನಿಳಿಸಿ ಕರುಣಿಸು ಮನವೆರಸಿ 1 ಅಸುರೆ ತಾಟಕಿಯ ಅಸುವನಳಿದು ದುಷ್ಟ ನಿಶಿಚರರನು ಸದೆದು ಅನುಜನೊಡಗೊಂಡು ಕುಶಿಕನಂದನನ ಕ್ರತುವನು ತಾ ಕಾಯ್ದು ಅಸಮ ಶೂರನೆನಿಸಿ ಅಮರರ ಮನತಣಿಸಿ 2 ಶಿಲೆಯ ಶಾಪವಕಳೆದು ಲಲನೆಯ ಪೂಜೆಗೊಲಿದು ಬಲುಹಿನಿಂದಲೆ ಬಂದು ಹರಧನು ಮುರಿದು ಲಲನೆ ಜಾನಕಿಯ ನಲವಿನಿಂ ಕೈಪಿಡಿದು ಬಲುಗರ್ವಿತ ಭಾರ್ಗವ ಮದಮುರಿದೆ ಸಲಹೆನ್ನ 3 ಈಶವಿನುತ ಶ್ರೀ ಶೇಷಾಚಲ ನಿಲಯನೆ ದಾಸರಮನದೊಳು ವಾಸವಾಗಿಹನೇ ವಾಸವಾದ್ಯಮರ ಪೋಷಕನೆನಿಸಿಹನೆ ಭಾಸುರವದನನೆ ಶ್ರೀಸತೀಸದನನೆ ನೀಂ ನಲಿದು 4
--------------
ನಂಜನಗೂಡು ತಿರುಮಲಾಂಬಾ
ಬಾರೈ ನಿನ್ನ ಮುದ್ದು ಮೊಗವನು ತೋರೈ ಯದುಕುತಿಲಕ ಎಂ-ದೋರಂತೆ ಮುದ್ದಿಸಿ ಯಶೋದೆÉ ಕುಮಾರನ ಬಾಯೆಂದಳೈ ಪ. ಥೈ ಥೈ ಥೈ ಥೈ ಥೈಯಿಥೈಯಿ ಥೈಯಿ ಥೈಯಿ ಥೈಯಿಥೈ ಥೈ ಥೈಯೆಂದು ಕೃಷ್ಣನ ಪಾಡಿದಳೆ1 ಕೃಷ್ಣ ನಿನ್ನ ಮಕ್ಕಳಾಟಿಕೆ ಕಷ್ಟರಿಗೆ ಕಾಲಕೂಟವಾಯಿತುದುಷ್ಟದೈತ್ಯ ಮತ್ತ ಮಾತಂಗಗಳಟ್ಟುವ ಸಿಂಹದ ಮರಿಯೆ 2 ದೀಪ್ತೋಷ್ಣ ಕಿರಣನು ಬರೆ ಕತ್ತಲೆಯತ್ತಲೆ ಪೋಪುದುಮತ್ತಿತ್ತ ಸುತ್ತಮುತ್ತಸುಳಿವುದೆ ಚಿತ್ತಜನ ಪೆತ್ತ ಹರಿಯೆ 3 ಚೆಂದದ ನಿನ್ನ ಚೆಲ್ವ ಸಿರಿಮೊಗದಂದವನು ತನಗಿಲ್ಲವೆಂದುಕಂದಿಕುಂದಿದಳಿಂದಿರೆ ಮರುಳಾಗಿ ಕಂದ ನಿನ್ನ ಹೊಂದಿ ನಿಂದಳೊ 4 ಇಂಥ ಸಿರಿಹಯವದನ ನಿನ್ನಂಥದೇವನು ದಾವನುಪಂಥವೇ ನಿನ್ನಗೂಡೆ ಗುಣಮಣಿತಿಂತಿಣಿಯಂತೆ ನೀನು 5
--------------
ವಾದಿರಾಜ
ಬಾರೈ ಬಾರೈ ಭಾರತಿ ಮನೋಹರ ಮಾರುತಿ ಗುರುವರನೆ ದೇವ ಪ ಪವನದೇವ ಬಾರೋ ಪವಿಸಮಗಾತ್ರ ಬಾರೋ ರವಿಜನ ಭಯ ಹರ | ಪಾವನ್ನ ಮೂರುತಿ 1 ಮಧ್ವಮುನಿಯೆ ಬಾರೋ | ಉದ್ಧರಿಸಲು ಬಾರೋ | ಶುದ್ಧ ಮುಕುತಿದಾತ ದದ್ದಲಪುರವಾಸ 2 ಸಿಂಧು ಬಂಧನ ಬಾರೋ | ಮಂದರೋದ್ಧಾರ ಶಾಮಸುಂದರ ಪ್ರಿಯಸಖ3
--------------
ಶಾಮಸುಂದರ ವಿಠಲ
ಬಾರೈ ಬೇಗ ಶ್ರೀರಾಮ ನಮೊ ಭಾನುಕುಲಾಂಬುಧಿ ಸೋಮ ನಮೊತೊರಿಸು ತವಪದಕಮಲ ನಮೊ ನೀರದಶ್ಯಾಮಲವದನ ನಮೊ ಪ ಅಜಹರಪ್ರಾರ್ಥಿತಮೋದ ನಮೊ ಅಯೋಧ್ಯನಗರವತಾರ ನಮೊಸುಜನಪಾಲ ಕುಜನಾರಿ ನಮೊ ಸನ್ಮುನಿಯಾಶ್ರಮ'ಹರ ನಮೊ1 ಸರಯೂತೀರ ಸಂಚಾರ ನಮೊ ಸತ್ಯಪರಾಕ್ರಮ ಸ್ವಾ'ು ನಮೊಪರಮಪುರುಷ ಪದ್ಮಾಕ್ಷ ನಮೊ ಪತಿತೋದ್ಧರ ಪರಮಾತ್ಮ ನಮೊ 2ಕ್ರೂರತಾಟಕಧ್ವಂಸ ನಮೊ ಮಾರೀಚಾದಿ 'ಚ್ಛೇದ ನಮೊಕಾರ್ಮುಕ'ದ್ಯಧುರೀಣ ನಮೊ ಕೌಶಿಕಮಖಸಂರಕ್ಷ ನಮೊ 3ಗೌತಮಸತಿಯಘಭಂಗ ನಮೊ ಕಾಂತಯಹಲ್ಯಾಸ್ತೌತ್ಯ ನಮೊ ಮಾತಾಪಿತಗುರುವೇ ನಮೊ ಮಮುದ್ಧರಿಸು ಮಹಾತ್ಮ ನಮೊ 4ಕ್ರೂರನು ಕುಟಿಲನು ಕುಮತಿ ನಮೊ ಕಲುಷಾರ್ಚಿತ ದುಷ್ಕರ್ಮಿ ನಮಸಾರರ'ತ ಸಂಸಾರಿ ನಮೊ ಸರ್ವ ದೋಷಪರಿಹಾರ ನಮೊ 5ಕೌಸಲೇಯಕನಕಾಂಬ್ರ ನಮೊ ದಾಶರಥೆ ದನುಜಾರಿ ನಮೊಶ್ರೀಶಚನ್ನಪುರಿಧಾಮ ನಮೊ ದಾಸವೈಷ್ಣವಕುಲಪ್ರೇಮ ನಮೊ 6ರಾಮರಾಮಜಯರಾಮ ನಮೊ ರಾಮತುಲಸಿದಳಧಾಮ ನಮೊರಾಮತುಲಸಿಗುರಸ್ವಾ'ು ನಮೊ ರಂಗಸ್ವಾ'ುದಾಸೇಶ ನಮೊ 7
--------------
ಮಳಿಗೆ ರಂಗಸ್ವಾಮಿದಾಸರು
ಬಾರೊ ಗೋವಿಂದ ಹೃತ್ಸರೋಜಕ್ಕೆ ಪ ಗಾರ ಗುಣಪೂರ್ಣ ಮಾರಜನಕನೆ ಅ.ಪ ಅಂಡಜವಾಹನ ಬ್ರಹ್ಮಾಂಡ ಗುಣಪೂರ್ಣ ತೊಂಡರ ಪಾಲಿಪೊ ಪುಂಡರೀಕಾಕ್ಷನೆ 1 ತುಂಗವಿಕ್ರಮನೆ ಸಂಗೀತಲೋಲನೆ ಮಂಗಳಮಹಿಮನೆ ಗಂಗೆಯ ಪಿತ ಹರಿ 2 ಸಿರಿ ಸಹಿತ ನಿಲಯನೆ ಶೌರಿ ವಾರಿಜದಳ ನಯನ 3 ವಿಜಯ ರಾಮಚಂದ್ರವಿಠಲರಾಯನೆ ಅಜವಂದಿತ ನಿನ್ನ ಭಜನೆಯ ಪಾಲಿಸೊ 4
--------------
ವಿಜಯ ರಾಮಚಂದ್ರವಿಠಲ
ಬಾರೊ ಬೇಗ ನೀರಜಾಕ್ಷದೂರು ಇದು ಯಾತಕೊ ಪ ಮೊಸರು ಮಾರುವ ಗೊಲ್ಲತಿಯರಅಸವಳಿಸಿ ಕೈಯ ಪಿಡಿದುವಶನಾಗು ಎಂದು ಪೇಳಿನಸುನಗುತಲಿದ್ದೆಯಂತೆ 1 ಕುಸುಮಶರನ ಪೆತ್ತವನೆಬಸವನಾದೆ ಊರೊಳಗೆಶಶಿಮುಖೇರ ದೂರು ಬಹುಪಸರಿಸಿತು ಪೇಳಲಾರೆ2 ಕಂದಕೇಳು ಇಂದುಮುಖಿಯರಹೊಂದಿ ಆಡಲೇಕೆ ಈಮಂದಿರದೊಳಾಡಿ ಸಲಹೊತಂದೆ ಉಡುಪಿ ಸಿರಿಕೃಷ್ಣ 3
--------------
ವ್ಯಾಸರಾಯರು
ಬಾರೊ ಮುಂದಿರೊ ಪರನಾರಿಸಹೋದರಮಾರ ನಿನಗಾರ ಮುದ್ದತಾರ ವೀರಹನುಮ ಪ. ಮರಗಳ ಮುರಿದೆ ಕರೆಕರೆದು ನೆರೆದಸುರರಶಿರಂಗಳ ತರಿದೆ ನಿನ್ನ ಸರಿಯಾರೋ ವೀರ ಹನುಮ 1 ಕಂಡೆ ನಿನ್ನ ಬಲವ ಸುಪ್ರಚಂಡ ರಿಪುಕುಲವತುಂಡು ತುಂಡಿಕ್ಕಿ ಮೆರೆದೆ ಬಲುಗಂಡೆ ವೀರ ಹನುಮ 2 ಎನ್ನೊಡೆಯ ಶ್ರೀಹಯವದನಗೆ ರನ್ನದ ಕನ್ನಡಿಯಂತೆ ಪ್ರಸನ್ನ ಮೋಹದ ......ಬಾಳು ಬಾಳು ವೀರ ಹನುಮ 3
--------------
ವಾದಿರಾಜ
ಬಾರೊ ರಂಗ ಕೋಮಲಾಂಗ ದಾರಿಗೆ ತನ್ನಂಗಸಂಗ ನೀಡಲ್ಹೋದ ಎನ್ನ ಕಂಗಳಿಂದ ನೋಡದೆ 1 ಉಂಗುರಗುರುಳ ಚೆಲ್ವೆ ಉದಯಭಾಸ್ಕರನಂತಿದ್ದ ಜಾಂಬವಂತಿಯೇರ್ಹಂಬಲಿಸುತ್ಹೋದನೆ ಸಖಿಯೆ 2 ರಂಗುತುಟಿ ರಜತದಾಭರಣ ಕುಂದಣದಂತಿರುವೋ ಕೋಮಲೆ ಇಂದು ನಾ ಕರೆತಾವೇನಮ್ಮ ಸುಂದರಾಂಗನ 3 ವೇಳ್ಯಮಾಡಿದೆನ್ನರಮಣ ಕಾಳಾದೇವಿ ಮನೆಯಲವಳ ತೋಳ ಪಿಡಿದು ಸೆಳೆಮಂಚದಲ್ಲಿ ಕುಳಿತಿಹನೆ 4 ಏಳು ಏಳೆಂದೆಬ್ಬಿಸುತಲಿ ಈರೇಳು ಲೋಕದೊಡೆಯನ ನಾಳೆ ನಾ ಕರೆತಾವೇನಮ್ಮ ನಾರದಪ್ರಿಯನ 5 ಅಮ್ಮನಾ ಸ್ಮರಿಸಲ್ಲಾ ್ಹ್ಯಗೆ ಪನ್ನಂಗಶಯನ ನೀಲ ರನ್ನಮಂಚದಲ್ಲಿ ಲೆತ್ತವನ್ನಾಡಹೋದ 6 ಅನ್ನವನು ಬಿಟ್ಟು ಭಾಮೆ ತನ್ನ ಪ್ರಾಣ ತೊರೆವೋಳೆಂದು ಮನ್ನಿಸಿ ಕರೆತಾವೇನಮ್ಮ ನಿನ್ನಾಳುವೋನ 7 ಮುದ್ದು ಮುಖವನು ನೋಡುತಿದ್ದನಾಕೆ ಮಂದಿರದಲ್ಲಿ ಮದ್ದು ಮಾಡ್ವೊಲಿಸಿದ್ದಾಳೇನಾ ಭದ್ರಾ ಕೃಷ್ಣಗೆ 8 ಸದ್ಯೋಜಾತನಯ್ಯನಯ್ಯ ಕದ್ರುಕುಮಾರನ ಶಯ್ಯ- ನ್ನ ್ಹದ್ದೇರಿಸಿ ಕರೆತಾವೇನಮ್ಮ ಪದ್ಮನಾಭನ 9 ಅತ್ಯಂತ ಪ್ರೀತಿ ಮೋಹದ ಮಿತ್ರವಂತೆ ಮಂದಿರದಲ್ಲಿ ವತೆÀ್ತಯಿಟ್ಟಂತಾಯಿತಮ್ಮ ವಾಮಾಂಗಿ ಹರಿಯ 10 ಸತ್ಯವಾಗಿ ಕೇಳೇ ಭಾಮೆ ಹೆತ್ತ ತಾಯಿ ತಂದೆಯರಾಣೆ ಹಸ್ತ ಮುಗಿದು ಕರೆತಾವೇನರ್ಕಕೋಟಿತೇಜನ 11 ಪಚ್ಚೆಪದಕ ರತ್ನದಾಭರಣ ಅಚ್ಚಮುತ್ತಿನಂತಿರುವೊಳ್ವೊಯ್ಯಾರಿ ಮೆಚ್ಚು ಮಾಡೊಲಿಸಿದ್ದಾಳೇನೊ ಲಕ್ಷಣಾ ಹರಿಯ 12 ರಕ್ಷಿಸ್ಹರಿ ರಕ್ಷಿಸೆಂದು ಇಕ್ಷು ಬಿಲ್ಲನಯ್ಯನ ಕರೆತಂದು ಈ ಕ್ಷಣದಲ್ಲಿ ಕೂಡಿಸುವೆ ಇಂದಿರಾಪತಿಯ 13 ಚೆಲ್ವೆರುಕ್ಮಿಣಿ ಮಂದಿರದಲ್ಲಿ ಮಲ್ಲಿಗೆ ಮಂಚದಲ್ಲೆಚ್ಚರಿ- ಲ್ಲದ್ಹಾಗೆ ಕುಳಿತಿದ್ದ ಬರುವೋನಿಲ್ಲಿಗಿನ್ನಾ ್ಹ್ಯಗೆ14 ಪಲ್ಲವಪಾದಗಳಿಂದ ನಿಲ್ಲದೆ ಭೀಮೇಶಕೃಷ್ಣ ಇಲ್ಲಿಗೆ ಬಂದಿರುವ ನೋಡೆ ಫುಲ್ಲನಯ್ಯನು 15
--------------
ಹರಪನಹಳ್ಳಿಭೀಮವ್ವ
ಬಾರೊ ಶ್ರೀವೆಂಕಟರಮಣ ತವಪಾ- ದಾರಾಧಕರನು ಪೊರೆಯಲು ಕರುಣಾಪೂರ್ಣ ಪ ಬಾರೋ ನಮಿಸುವೆ ಪೂರ್ಣ ಕೃಷ್ಣಾ ತೀರದಲಿ ಮಾಂಡವ್ಯ ಋಷಿಗಳ ಘೋರ ತಪಸಿಗೆ ಒಲಿದು ಗುಡೆಬಲ್ಲೂರು ಮಂದಿರನೆಂದು ಕರೆಸುತ ಅ.ಪ ಎಲ್ಲ ಕಡೆಗೆ ನೆಲೆಸಿರುವ ಸಿರಿ ನಲ್ಲನೊಲಿಸಲು ತಪವನು ಗೈವ ಬಲ್ಲಿದ ಮಾಂಡವ್ಯರಿರವ ಕಂಡು ಗೊಲ್ಲರು ಮಾಡಿದರನು ದಿನ ಶೇವಾ ಪುಲ್ಲನಾಭನು ದರುಶನವ ಮುನಿ ವಲ್ಲಭಗೆ ತೋರಿಸಲು ಬೇಡಿದ ಗೊಲ್ಲರೆನ್ನಯ ಭಕುತರವರಿಂದಲ್ಲಿ ಪೂಜೆಯಗೊಳ್ವದೆಂದನು 1 ಬಾರೊ ಬೇಗನೆ ದ್ವಿಜರಾಜ ಧ್ವಜ ವೇರಿ ಪೊರೆದೆಯೊ ಬಂದು ಕರಿಯೆ ಕರಿ ರಾಜ ತೋರೋ ಚವತರಣ ಸರೋಜಯುಗ್ಮ ಸಾರಿ ಭಜಿಸುವ ಭಕುತರ ಕಲ್ಪ ಭೂಜ ಮಾರಜನಕನೆ ಚಾರುಕನಕ ಕಿ ರೀಟ ಕುಂಡಲಹಾರಪದಕ ಕೇಯೂರ ಸಾಲಂ- ಕಾರ ವಪು ಶೃಂಗಾರದಲಿ ರಥವೇರಿ ಮೆರೆಯುತ 2 ವೇದವೇದ್ಯನೆ ನಿನ್ನ ಪ್ರೇಮಾ ಪಡೆದ ಪಾದ ಮಹಿಮೆಯ ವರ್ಣಿಸಿದ ದೇವ ಶರ್ಮಾ ಬೋಧಾದಿ ಸದ್ಗುಣಧಾಮ ಪಾಹಿ ಮೇದಿನಿ ವಿಬುಧ ಪೂಜಿತ ಪೂರ್ಣಕಾಮ ಮೇದಿನಿಯೊಳು ಶ್ರೀದ ನಿನ್ನಯ ಪಾದಯುಗಳವ ಕಂಡು ಹರುಷದಿ ಪಾದುಕೆಯ ರಚಿಸಿದಗೆ ಒಲಿದ ಅಗಾಧ ಮಹಿಮನೆ ಮೋದಗರೆಯಲು 3 ಒಂದಿನ ನಿಶಿಯೊಳುತ್ಸವದಿ ದಣಿ ದಂದು ಮಲಗಿರಲರ್ಚಕರು ದೇವಾಲಯದಿ ಬಂದು ಚೋರರು ಅತಿಜವದಿ ನಿನಗೆ ಪೊಂದಿಸಿದೊಡವೆ ಗಳನು ಚೌರ್ಯತನದಿ ಮಂದ ಮತಿಗಳು ಒಯ್ಯುತಿರೆ ಖಳ ವೃಂದಕಂಗಳು ಪೋಗೆ ತುತಿಸಲು ಚಂದದಿಂ ಬರೆ ಹೇಮನಾಮವ ಕುಂದದಲೆ ಮಾಡಿಸಿದರಾಕ್ಷಣ 4 ನೀರಜಾಸನ ಮುಖ್ಯ ತ್ರಿದಶ ಗಣದಿಂ- ಪಂಕಜ ಭಕ್ತಪೋಷ ಸೂರಿಜನರ ಸಹವಾಸ ಕೊಡು ಧಾರುಣಿಯೊಳು ಕೃಷ್ಣ ತೀರನಿವಾಸ ಬಾರೊ ನಿನ್ನನು ಶೇರಿದವರW ವಾರಿವಾಹ ಸಮೀರ ಕಾರ್ಪರ ನಾರ ಶಿಂಹಾತ್ಮಕನೆ ಯನ್ನಯ ಭವ ಭಯ ದೂರಮಾಡಲು 5
--------------
ಕಾರ್ಪರ ನರಹರಿದಾಸರು
ಬಾರೊ ಹನುಮ ಬಾರೊ ಭೀಮ ಬಾರೊ ಮಧ್ವಮುನಿಪ ಪ. ಬಾರೊ ರಾಮಕೃಷ್ಣ ವೇದವ್ಯಾಸರ ಪ್ರಿಯ ಭಕ್ತ ಅ.ಪ. ಅಂಜನೇಯ ಸುತನು ಆಗಿ ಸಂಜೀವನ ಗಿರಿಯ ತಂದೆ ಕಂಜಲೋಚನೆಯ ವಾರ್ತೆ ಮಂಜುಭಾಷಣ ರಾಮನಿಗರುಹಿದೆ 1 ಪಾಪಿ ಕೌರವ ಕುಲವ ಕೊಂದು ದ್ರೌಪದಿಯ ಕಾಯ್ದ ಮಹಿಮ ಶ್ರೀಪತಿ ಶ್ರೀ ಕೃಷ್ಣನ ಭಜಿಸಿದ ಭೂಪ ಭೀಮಸೇನ ಬೇಗ 2 ಭೂಸುರ ಜನ್ಮದಲಿ ಬಂದು ಆಸೆಯಿಂದ ಆಶ್ರಮ ಕೊಂಡು ದೋಷಿ ಅನ್ಯಮತವ ಮುರಿದು ಭೂಸುರರ ಕಾಯ್ದ ಮಧ್ವ 3 ಸಕಲ ಸುಜನರ ಸೇವೆ ಕೊಂಡು ಮುಕುತಿಮಾರ್ಗಪ್ರದ ನೀನಾಗಿ ಭಕುತಿಮಾರ್ಗವ ತೋರಿ ಎನ್ನ ಹೃತ್ಕಮಲ ಮಧ್ಯದಲಿ ನಿಲ್ಲೊ 4 ಗೋಪಾಲಕೃಷ್ಣವಿಠ್ಠಲನ ರೂಪ ನೋಡುವ ಕೃಪೆಯ ಮಾಡೊ ಶ್ರೀಪತಿ ಶ್ರೀ ಶ್ರೀನಿವಾಸಗೆ ನೀ ಪ್ರೀತಿಕರನೆಂದು ನಮಿಪೆ 5
--------------
ಅಂಬಾಬಾಯಿ
ಬಾರೋ ಗುರು ರಾಘವೇಂದ್ರ ಸದ್ಗುಣಸಾಂದ್ರ ಪ ಬಾರೋ ಸದ್ಗುರುವರ ಸಾರಿದ ಸುಜನರ ಘೋರ ದುರಿತವ ತರಿದು ಕರುಣದಿ ಸಾರ ಸೌಖ್ಯವಗರಿದು ಪೊರಿಯಲು ಅ.ಪ ಸೂರಿಜನಾಲಂಕೃತ ಸುರಪುರದಿ ವಿಠ್ಠ ಲಾರ್ಯರಿಂದಲಿ ಪೂಜಿತ ಯದುಗಿರಿಯ ಕ್ಷೇತ್ರಾಗಾರನೆಂದೆನಿಸಿ ನಿರುತ ಭಜಕರನು ಪೊರೆಯುತ ಸೇವೆಯನುಕೊಳ್ಳುತ ತುರಗವನೇರಿ ಮೆರೆಯುತ1 ಭಕ್ತ್ಯಾದಿ ಫಲವೀವಂಥ ಗುರುವರನೆ ನಿಮ್ಮಯ ಸ್ತೋತ್ರ ಪಠಣವ ಮಾಡುತ್ತ ಅನವರತ ಭಜ- ನಾಸಕ್ತ ಜನರ ಕಾಮಿತ ನಾ ಕೊಡುವೆನೆನುತ ಮತ್ತೆ ಎಡಬಲದಲ್ಲಿ ದ್ವಿಜಕೃತ ಛತ್ರಚಾಮರ ವ್ಯಜನ ಸೇವಾ ನೃತ್ಯಗಾಯನ ವೈಭವದಿ ವರ ಹಸ್ತಿವಾಹನ ವೇರಿ ಮೆರೆಯುತ 2 ಇಳಿಸುರರೊಳು ಪ್ರಖ್ಯಾತ ಲಿಂಗೇರಿ ಭೀಮಾ ಹೊಳಿಯ ಸ್ಥಾನಕೆ ಬಂದಂಥ ಯದುಗಿರಿಯ ದ್ವಿಜವರ ಗೊಲಿದರ್ಚನಿಯ ಗೊಂಬಂಥ ಶರ್ವಾದಿವಿನುತ ಚಲುವ ಪ್ರಾಣನಾಥನ ಜಲಜಯುಗ ಸನ್ನಿಧಿ ಯೊಳನುದಿನ ಪೊಳೆವ ವೃಂದಾವನದಿ ಭಕುತರಿ ಗೊಲಿದು ಪೊರೆಯಲು ಕುಳಿತ ಯತಿವರ 3 ನಂದತೀರ್ಥರ ಸುಮತ ಸಿಂಧುವಿಗೆ ಪೂರ್ಣ ಚಂದ್ರರೆಂದೆನಿಸಿ ದಂಥಾ ಕರ್ಮಂದಿವರ್ಯನೆ ದುರಿತ ಘನಮಾರುತ ವಂದೆ ಮನದಲಿ ಬಂದು ನಿಮ್ಮಡಿ ದ್ವಂದ್ವವನು ಶೇವಿಸುವ ಶರಣರ ವೃಂದವನು ಪಾಲಿಸಲು ಸುಂದರಸ್ಯಂದನ- ವೇರುತಲಿ ವಿಭವದಿ 4 ನೀರಜಾಸನ ವರಬಲದಿ ಸಮರಾರೆನುತ ಬಂ- ಗಾರ ಕಶ್ಯಪ ಪೂರ್ವದಿ ಪ್ರಹ್ಲಾದ ರಾಜಕು ಮಾರ ನಿನ್ನೊಳು ವೈರದಿ ಹರಿಯನ್ನು ಜವದಿ ಚಾರು ಕೃಷ್ಣಾ ತೀರಕಾರ್ಪರ ನಾರಸಿಂಹನ ಸ್ತಂಭದಿಂದಲಿ ತೋರಿಸಿದ ಗುರು ಸಾರ್ವಭೌಮನೆ 5
--------------
ಕಾರ್ಪರ ನರಹರಿದಾಸರು
ಬಾರೋ ನಲಿದಾಡೋ ಜಿಹ್ವೆಯಲಿ ಮೂರಧಿಕಾರೊಡೆಯನೆ ಬಾರೋ ನಲಿದಾಡೋ ಜಿಹ್ವೆಯಲಿ ಪ ದಾಸಾ ಬಹು ಮೋಸಕ್ಕೊಳಗಾಗಿಹೆನು ಶ್ರೀಶಾ ಕರಪಿಡಿಯೆನ್ನ ದೋಷ ಮಹದಾಶಾ ವಹಿಸಿರುವೇನು ಘಾಸಿಯಾದೇನು ಮಾಡೋ ಕರುಣಾರ್ಣವದಿ ಈಶಾ ಘನವೇಷಾ ಬಹುತೋಷ ದಾಸನ ಮಾಡಿಕೊ ಎನ್ನ 1 ಕಂದೀ ನಾ ಕುಂದೀ ಗೃಹದೊಳಗೆ ಮಂದಿಯಾ ಶೇರಿದೆ ನೊಂದೇ ಬಹು ಬೆಂದೇ ಮನದೊಳಗೆ ಬಂಧನದೊಳು ಶಿಲ್ಕಿ ಸುಂದರ ಮೂರುತಿ ಸಂದಣಿಯದೆ ನಾ ಹೊಂದಿದೆನಿನಭವ ಭವ ನಾಯಿಂದೂ ದ್ವಂದ್ವಾಪದವಿಡಿದಿದೆ 2 ಘೋರಾ ನಿಸ್ಸಾರ ಭವದೊಳಗೆ ದಾರಿಗಾಣೆನು ಮಾರಾ ಬಹುದೀ ರಾಮನದೊಳಗೆ ಶೇರಿ ಕುಣಿವಾನು ಮಾರಜನಕ ನಿನ್ ಹಾರೈಶನುದಿನ ಶೇರಿ ಭಜಿಸಿ ನಿನ್ನ ನರಸಿಂಹವಿಠ್ಠಲ ಸಾರಿ ನಿನ ಕೋರಿ ಪದಶೇರಿ ಆರಾಧಿಸುವೀಗಳೆ 3
--------------
ನರಸಿಂಹವಿಠಲರು
ಬಾರೋ ನೂತನ ಗೃಹಕೆ ಹರಿಯೆ ಸಿರಿ ಮಾರುತ ಮುಖಸುರರೊಡಗೂಡಿ ಧೊರಿಯೆ ಪ ಯಾರು ಕೇಳದಲಿಹ ಸ್ಥಳವ ನೀನೆ ಪ್ರೇರಿಸಿ ಗೃಹವ ನಿರ್ಮಿಸಿದೆಯೋ ದೇವ ನೂರಾರು ಪರಿರೂಪಾಂತರವ ಪೊಂದಿ ಈ ರೀತಿ ನವಸುಸಂಸ್ಕøತವಾದ ಗೃಹವ 1 ಈರಪ್ಪÀ ಬಡಿಗನೆಂಬುವನು ಮನಿಯ ಚಾರುತನದಲಿಂದ ನಿರ್ಮಿಸಿರುವನು ತೋರುವ ಸಿಂಹಾಸನವನು ಮಧ್ಯಾ ಗಾರದಿನಿನಗಾಗಿ ವಿರಿಚಿಸಿಹನು 2 ಸುತ್ತಲು ನಿರ್ಭಯವಿಹುದು ವಂ - ಭತ್ತು ದ್ವಾರಗಳಿಂದ ಶೋಭಿಸುತಿಹುದು ಹತ್ತಿರೆ ಗುರುಗೃಹ ವಿಹುದು ಮುಂದೆ ಚಿತ್ತಜನಯ್ಯನ ಮಂದಿರ ವಿಹುದು 3 ಉತ್ತಮ ಗೃಹವೆನಿಸುವದು ಇ - ಪ್ತತ್ತುನಾಲಕುವಸ್ತುಗಳಕೂಡಿಹುದು ಸುತ್ತೇಳು ಪ್ರಾಕಾರವಿಹುದು ಸುತ್ತು ಮುತ್ತಲು ದ್ವಿಜಜನಹೊಂದಿ ಕೊಂಡಿಹುದು 4 ಗೃಹವುನಾಲ್ಕು ವಿಧವಿಹುದು ಸೂಕ್ಷ್ಮ ಗೃಹ ನಿನಗಾಗಿಯೆ ನೇಮಿಸಿಯಿಹುದು ಬಹಿರದಿ ಪಾಕಗೃಹ ವಿಹುದು ಅಲ್ಲಿ ಗೃಹಿಣಿಯಿಂ ತ್ರಿವಿಧಾನ್ನ ಪಕ್ವಗೈತಿಹುದು5 ನಡುಮನೆ ದೊಡ್ಡದಾಗಿಹುದು ಅಲ್ಲಿ ಸಡಗರದಲಿ ಬ್ರಹ್ಮವೃಂದ ಕೂಡುವದು ಬಿಡದೆ ಸತ್ಕಥೆನಡೆಯುವದು ಮುಂದೆ ಪಡಸಾಲೆಯಲಿ ಸರ್ವಜನ ಸಭೆಯಹುದು 6 ಶ್ವಸನ ಮಾರ್ಗವಲಂಬಿಸಿರುವೆ ಮನಿಯ ಹಸನ ಮೆಹದೀನಾದಿಯಿಂ ಮಾಡಿಸಿರುವೆ ಹೊಸಸುಣ್ಣವನು ಹಚ್ಚಿಸಿರುವೆ ಏಕಾ ದಶ ಸೇವಕರ ನಿನ್ನ ವಶದೊಳಿರುಸುವೆ 7 ನಾನಾಧನ ನಿನಗರ್ಪಿಸುವೆನು ತನು ಮಾನಿನಿಸಹ ನಿನ್ನಾಧೀನ ಮಾಡುವೆನು ಜ್ಞಾನಭಕ್ತಿಯೆ ಇಚ್ಛಿಸುವೆನು ನಿನ್ನ ಧ್ಯಾನಾನಂದದಿ ಧನ್ಯನೆಂದಿನಿಸುವೆನು8 ಹರಿಯೆ ಲಾಲಿಸು ಎನ್ನ ಸೊಲ್ಲಾ ಮುಂದೀ - ಪರಿಗೃಹದೊರೆವುದು ಸುಲಭವೇನಲ್ಲಾ ¨ರೆ ನಿನ್ನ ಬಿಡೆನೊ ಶ್ರೀ ನಲ್ಲಾ ಎನ್ನ ಮೊರೆಯ ನಾಲಿಸಿ ನೋಡೋ ವರದೇಶವಿಠಲಾ9
--------------
ವರದೇಶವಿಠಲ
ಬಾರೋ ಬಾರೋ ಪ್ರಾಣಕಾಂತ ತೋರೊ ಮುಖವ ನೋಡುವೆ ತೋರಿ ತೋರಿ ನಿನ್ನ ಪದವಾರಿಜವ ನಂಬಿದೆ ಪ ಮಾರ ಎನ್ನ ಘೋರಿಸುತಿರುವನು ಗಾರು ಮಾಡಬೇಡ ಎನ್ನ ಸೇರಿ ಆನಂದ ನೀಡೊ 1 ಕಂತು ಜನಕ ಲಾಲಿಸೊ ಅಂತರಂಗದ ಬಾಧಿಗೆ ನಾ ಚಿಂತೆ ಪಡುತಿರುವೆ 2 ವಾಸುದೇವವಿಠಲ ನಿನ್ನ ದಾಸಿಯಲ್ಲವೆ ನಾನು ಆಶೆಯಿಂದ ಬಂದೆ ಪರಿಹಾಸ ಮಾಡಬೇಡ 3
--------------
ವ್ಯಾಸತತ್ವಜ್ಞದಾಸರು