ಒಟ್ಟು 14471 ಕಡೆಗಳಲ್ಲಿ , 133 ದಾಸರು , 7276 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆಯಾ - ಮನವೇ - ನೀನಿಂದು - ಕಂಡೆಯಾ ಪ ಕಂಡೆಯ ಮನವೆ ನೀನಿಂದು - ತನ್ನತೊಂಡರ ಸಲಹುವ ಬಂಧು - ಆಹಮಂಡೆಯ ಬೋಳಿಸಿ | ಪುಂಡರೀಕಾಕ್ಷನೆಹಿಂಡು ದೈವಂಗಳ | ಗಂಡನೆಂದೇಳ್ವರ ಅ.ಪ. ಪಾದ ಸೊಬಗು - ವೇಗತೆರಳುತ್ತಿದ್ದರದು ಮೆಲ್ಲಗು - ನಖವರರತ್ನ ಕೆಂಪಿನ ಬೆಡಗು - ಊರುಕರಿಯ ಸೊಂಡಿಲಿನಂತೆ ಬೆಳಗು _ ಆಹ ಪರಿಶುದ್ದ ಕಟಿಯಲ್ಲಿ | ಸುರಚಿರಾಂಬರನುಟ್ಟುವರಕಂಠ ಫಣೆಯುದರ | ತ್ರಿವಳಿಯಂ ಮೆರೆವರ 1 ಮೃದುರೋಮ ಶಾಲು ಪ್ರಾವರಣ - ನೋಡಲದು ಭಾಸ ಉದಯಾರ್ಕ ವರಣ - ಪೋಲ್ವದದು ಮೇರು ಗಿರಿಯಂತೆ - ವರ್ಣ ನೋಡುಎದೆಯ ವಿಸ್ತರಾ ಭರಣ - ಆಹಸದಮಲುನ್ನತಾಂಸ | ಉರುಟು ನೀಳದ ತೋಳುಪದುಮ ರಾಗದ ಭಾಸ | ಧ್ವಜರೇಖೆ ಹಸ್ತವ 2 ಮೋದ ಪೋಲ್ವ - ಮತ್ತೆಮಂದ ದೂರನು ಅತಿ ಚೆಲ್ವಾ - ಆಹಕುಂದಾಭ ರದನವು | ಸುಂದರಾರುಣ ಓಷ್ಠಮಂದಜೇಕ್ಷಣ ನೋಟ | ದಿಂದ ಬೀರುವ ಮುದ 3 ಕಿವಿಗಳಲೊಪ್ಪುವ ತುಳಸೀ - ಮೂರುಭುವನ ಭೂತಿ ಭ್ರೂವಿಲಾಸಿ - ಮತ್ತೆಅವನೆ ಅಭೂತಿದನೆನಿಸೀ - ಚೆಲ್ವದವಡೆಯಿಂದೊಪ್ಪುವ ಶಿರಸಿ - ಆಹಅವಯವ ಲಕ್ಷಣ | ಪ್ರತಿ ಪ್ರತಿ ಜನ್ಮದಿವಿವರವೀತೆರವೆಂದು | ವಿಭುದರು ತಿಳಿದರು 4 ಈ ವಿಶ್ವವೆಲ್ಲವೂ ಸತ್ಯ - ಮತ್ತೆಸಾರ್ವ ಭೇದವು ತಾರತಮ್ಯ - ವಿಧಿಪೂರ್ವಕಲ್ವೊರೆಯುತ್ತ ದಿವ್ಯ - ತತ್ವಸಾರ್ವವ ಪೇಳುತ್ತ ಭವ್ಯ - ಆಹಕಾವ ಕೊಲ್ಲುವ ಗುರು ಗೋವಿಂದ ವಿಠಲನೆಸರ್ವೋತ್ತುಮಾನೆಂದು | ಈ ವಿಧ ಮೆರೆವರ 5
--------------
ಗುರುಗೋವಿಂದವಿಠಲರು
ಕಡೆಯಿಲ್ಲದೀ ಭವಾಂಬುಧಿಯ ದಾಂಟುವೊಡೆ ಜಗ ದೊಡೆಯ ಶ್ರೀಕೃಷ್ಣನೊಬ್ಬನ ನಂಬು ಮರುಳೆ ಪ ನೆಲೆಯಾದುದಿಲ್ಲ ತಾಯುದರ ಬಾಲತ್ವವಿದು ನೆಲೆಯಾದುದಿಲ್ಲ ಜವ್ವನವೆಂಬುದೂ ನೆಲೆಯಾದುದಿಲ್ಲ ಜರೆಯು ಚಕ್ಷುರಾಜಿಗಳು ಒಡಲು ನಿನಗೆ ಮರುಳೆ 1 ಹುಟ್ಟಿದನಳಿದನೇಕೆ ಜೀವ ನಿಜ ಜನನಿಯಲಿ ಹೊಟ್ಟೆಯಲಿ ಹೊತ್ತು ಹೆತ್ತುದಕೈಸಲೆ ಕೊಟ್ಟುಕೊಂಡುದಕೆ ಪಡೆದಿತ್ತು ಸುತರೆಂದೆನಿಸಿ ನೆಟ್ಟನೈದುವರು ನಿನಗೇನಹರು ಮರುಳೆ 2 ನೀನಳಿದ ಬಳಿದ ಸತಿಸುತರಿಗೇನ್ಹೇಳುವೆ ಏನಹರು ನಿನಗವರು ಮೃತವಾದ ಬಳಿಕಾ ದೀನನಹೆ ಬಯಲಮಮತೆಗಳೆಂದು ತಿಳಿದುಕೊ ನೀನೆತ್ತಲವರೆತ್ತಲಿಹರವರು ಮರುಳೆ 3 ಮಗನಾವ ತಂದೆಯಾವನು ಜೀವ ಜೀವರಿಗೆ ಮಗನು ತಂದೆಯು ಕರ್ಮವಾಸನೆಗಳಾ ಬಗೆಯಿಂದಲೀಶ್ವರನು ಜೀವಕೋಟಿಗಳ ಸೃಜಿಸೆ ಜಗದೊಳಾಡುವರು ನಿನಗೇನಹರು ಮರುಳೆ 4 ಅತಿಭಕ್ತನೆಂದು ವೈಕುಂಠ ವೇಲಾಪುರದ ಪತಿ ಅರ್ಜುನಗೆ ನಿರೂಪಿಸಿದರ್ಥವ ಮತಿಗೆಟ್ಟು ಬಿಟ್ಟು ನಾನಾ ದೈವದಡಿಗಳಿಗಾ ನತನಾಗಿ ಸಂಸಾರಿಯ[ಹೆ] ಇದೇಕೆ ಮರುಳೆ 5
--------------
ಬೇಲೂರು ವೈಕುಂಠದಾಸರು
ಕಡೆವ ಬನ್ನಿ ಸಡಗರದಿಂದ ಘುಡಘುಡಿಸಿ ದೃಢವೆಂಬುದು ಕಡುಕಂಬನೆ ಮಾಡಿ ನಡನಡಿಸಿ ನುಡಿ ನಿಜ ವಡನೆ ಪಡಗವ ತಂದು ಜಡದಿಡಸಿ ಜಡದಿಡಸಿ ನವನೀತ ಗಡಬಡಿಸಿ ಗಡಬಡಿಸಿ 1 ಮೀಸಲಮನ ಕೆನೆ ಮೊಸರನೆ ಮಾಡಿ ಶೋಧಿಸಿ ಶೋಧಿಸಿ ವಾಸನೆ ಮೊಸರ ಕರುಣಿಕುಸಕಿರಿದು ಮರ್ದಿನಿ ಮರ್ದಿನಿ ಮೋಸಹೋಗದೆ ದುರಾಶದ ಕಿಲ್ಮಿಷ ಝಾಡಿಸಿ ಝಾಡಿಸಿ ಧ್ಯಾನ ಬಲಿದು ಸುವಾಸನೆಕಳಲ ಕಡೆವದಾರಂಭಿಸಿ 2 ನಾಮದಿವ್ಯಮಂತ್ರÀವ ಕಟ್ಟಿ ವಿಷಮ ಬಿಡಿಸಿ ವಿಷಮಬಿಡಿಸಿ ನೇಮದಿಂದ ಸುಪ್ರೇಮದರವಿಗಿ ಘಮಗುಡಿಸಿ ಘಮಗುಡಿಸಿ ಶಮೆದಮೆವೆಂಬ್ಹಗ್ಗನೆ ಸಮವಿಡಿದು ಧಿಮಿಗುಡಿಸಿ ಧಿಮಿಗುಡಿಸಿ ಶ್ರಮಜನ್ಮದಹರುವ ಕ್ರಮಗೊಂಡಾಹಂಬಿಡಿಸಿ 3 ನಾವು ನೀವೆಂಬ ಹೊಲೆಗುಡತಿಯನ್ಯರೆ ಬಿಡಿಸಿನ್ಯರೆಬಿಡಿಸಿ ಸಾವಧಾನದಲಿ ಅನುಭವಾಮೃತ ನಿಜಕುಡಿಸಿ ನಿಜಕುಡಿಸಿ ನವನೀತ ಝಲ್ಲಿಸಿ ಝಲ್ಲಿಸಿ ಸವಿಸವಿಗೊಂಡು ಸುವಿದ್ಯಸಾರಾಯವ ಅನುಭವಿಸಿ 4 ಕಡವು ಕುಶಲಿ ಒಬ್ಬಳೇ ಬಲುನಿಜಙÁ್ಞನಶಕ್ತಿ ಶಕ್ತಿ ಒಡಗೂಡಲು ನಿಜಬಾಹುದು ಕೈಗೂಡಿ ಸದ್ಗತಿ ಸದ್ಗತಿ ಪಡಕೊಂಡರು ಇದರಿಂದಲಿ ಮುನಿಜನ ವಿಶ್ರಾಂತಿ ವಿಶ್ರಾಂತಿ ಕೊಂಡಾಡಿದ ಅನುಭವಸ್ತುತಿ ಮೂಢಮಹಿಪತಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಂಡೆವು ಗುರುದಿವ್ಯ ಶ್ರೀ ಸುಚರಣ ಮಂಡಲದೊಳಾಯಿತು ಸುಭೂಷಣ ಧ್ರುವ ಇದೆ ನಿಜ ಪುಣ್ಯ ಪೂರ್ವಾರ್ಜಿತ ಇದರಿಟ್ಟು ಬಂತೆನಗಾಯಿತು ಒದಗಿ ಕೈಗೂಡಿತು ತ್ವರಿತ ಹೃದಯಲೆನ್ನಾಯಿತು ಉದಿತ 1 ಕಣ್ಣಾರೆ ಕಂಡೆವು ನಿಜ ಧನ ಜನುಮವೆನ್ನಾಯಿತು ಪಾವನ ಎನ್ನೊಳು ದೋರಿತಾನಂದ ಘನ ಧನ್ಯ ಧನ್ಯವಾಯಿತು ಜೀವನ 2 ಲೇಸು ಲೇಸಾಯಿತಯ್ಯ ನೋಡಿ ಭಾವಿಸಿದ ಸದ್ಗುರು ದಯಮಾಡಿ ವಾಸನೆ ಪೂರಿಸಿತು ಇಲ್ಲೆ ನೋಡಿ ದಾಸಮಹಿಪತಿ ನಿಜಗೂಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಂಡೆವೆ ಕೌತುಕಕಪಟದ ಬಾಲೆಯ ಕಂಡೆವೆ ಕೌತುಕವ ಪರಹೆಂಡಿರು ಸಹಿತಾಗಿಗಂಡನ ಬೆರೆಯೋದು ಪ. ಪಟ್ಟದರಸಿಗೆ ಸಿಟ್ಟು ತುಂಬಿಸಿ ಭಾಳ ಕುಟ್ಟಿ ಮೈದುನರ ಸವರಿಸಿಕುಟ್ಟಿ ಮೈದುನರ ಸವರಿಸಿ ದ್ರೌಪತಿಇಂಥವಳು ಹುಟ್ಟಬೇಕಿನ್ನು ಜಗದೊಳು 1 ಗಂಡನ ಬಳಗವ ಚಂಡನಾಡಿಸಿ ಬಿಟ್ಟೆಪುಂಡಗಾರ್ತಿಯೆ ಜಗದೊಳುಪುಂಡಗಾರ್ತಿಯೆ ಜಗದೊಳು ನಿನಕೀರ್ತಿ ಕೊಂಡಾಡುತಾರೆ ದ್ರೌಪದಿ2 ನೂರು ಮಂದಿಯ ಕೊಂದು ಊರು ಕೇರಿಯಪಡೆದುಯಾರ್ಯಾರನ್ನೆಲ್ಲ ಅಡವಿಗೆ ದ್ರೌಪದಿಯಾರ್ಯಾರನ್ನೆಲ್ಲ ಅಡವಿಗೆ ಅಟ್ಟಿದೆಮಹಾರಾಯಳೆ ನಿನಗೆ ಭಯ ಉಂಟೆ3 ಜಾಣಿಯೆಂಬೊ ನುಡಿಯಿಂದ ವಾಣಿ ಜನಿಸಿಸುಶ್ರೇಣಿ ತಾತನ್ನು ದ್ರೌಪತಿಸುಶ್ರೇಣಿ ತಾತನ್ನು ಮದುವ್ಯಾದಿ ಇದಕಿನ್ನುಜಾಣಿಯರು ನಗರೆ ಜಗದೊಳು4 ಎಂತೆಂಥ ಪತಿಗಳ ಎಂತೆಂತು ಮಾಡಿದೆಕೊಂಚರೆ ಭೀತಿ ನಿನಗಿಲ್ಲಕೊಂಚರೆ ಭೀತಿ ನಿನಗಿಲ್ಲ ಧರ್ಮನ ಶಾಂತ ಗುಣದಿಂದ ಉಳಿದಿದಿ ದ್ರೌಪತಿ5 ಒಂದೊಂದು ನಿನ್ನ ಗುಣವು ಚಂದಾಗಿ ವರ್ಣಿಸಲುಎಂದಿಗೆ ವಶವ ಎಲೆನಾರಿಎಂದಿಗೆ ವಶವ ಎಲೆನಾರಿ ಐವರಿಗೆ ಕುಂದು ಬಂದೀತು ಬಿಡುಕಂಡೆ ದ್ರೌಪತಿ 6 ಇಷ್ಟಮಿತ್ರರೊಳು ಉಟ್ಟ ಸೀರೆಯಸೆಳೆದುಒಟ್ಟಿದನಾಗ ಸಭೆಯೊಳು ಒಟ್ಟಿದನಾಗ ಸಭೆಯೊಳು ರಮಿಯರಸು ಧಿಟ್ಟಿ ನಿನಮಾನ ಉಳಿಸಿದ ದ್ರೌಪತಿ7
--------------
ಗಲಗಲಿಅವ್ವನವರು
ಕಣ್ಣಾರೆ ಕಂಡೆವಯ್ಯಾ ಕಣ್ಣಾರೆ ನಾ ಧ್ರುವ ಕಣ್ಣಾರೆ ಕಂಡೆ ಹರಿಯ ಎನ್ನ ಪ್ರಾಣಧೊರಿಯ ಧನ್ಯಗೈಸಿದ ಪರಿಯ ಏನೆಂದ್ಹೇಳಲಯ್ಯ 1 ಸ್ವಾನುಭವದ ಖೂನ ಜನಕ್ಹೇಳಲೇನು 2 ಆಡೇನಂದರ ಅಮಾತು ನಾಡಿಗೇನು ತಿಳದೀತು ಪಡೆದವಗೆ ದೋರಿತು ಬಿಡದ್ಹಾಂಗಾದೀತು 3 ಗುರುಕರುಣ ಕಟಾಕ್ಷ ಗುರುತಾಗ್ಯದ್ಯನ್ನಪೇಕ್ಷಾ ಇರುಳ್ಹಗಲೆ ದೋರುವದಧ್ಯಕ್ಷ 4 ಎನಗದೆ ಬ್ರಹ್ಮಾನಂದ ಭಾನುಕೋಟಿ ತೇಜನಿಂದ ದೀನಮಹಿಪತಿ ಬಂದ ಅನುಭವ ಆನಂದ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಣ್ಣಿಲಿ ನೋಡಿದೆನೆ ಕಾಮಿನಿಮಣಿ ಪ ಕಣ್ಣಿಲಿ ನೋಡಿದೆ ಘನ್ನ ಪುಸ್ತಕ ನವವರ್ಣಭಾಷಿತ ಹರಿವನ್ನಿತೆ ಸೌಭಾಗ್ಯ ಅ.ಪ. ಹೇಮ ಸರಿಗಿ ಕಠ್ಠಾಣಿಯ 1 ಅಕ್ಷರವೆಂಬುವ ನಕ್ಷತ್ರಮಾಲೆಯುವಕ್ಷದೊಳರ್ಥಿಲಿ ಅಂಬುಜಾಕ್ಷಿಯೇ ಲಕ್ಷ್ಮೀ 2 ವಿಷಯನಳಿದು ಕೃಷ್ಣನೊಶಳಾಗುತ ಲಕ್ಷ್ಮೀವಿಭಸಾರ್ಚನ ಮುಖ ಬಿಸುಜಾಕ್ಷಿ ತೋರ್ವಳು 3 ಗೋಪಿ ಶಿಶುವ ಪೂಜಿಪಳು 4 ಶ್ರೀಶನ ಗುಣಗಳ ಭಾಷಿಸಿ ವದನದಿಪೋಷಜನಕೆ ಇಂದಿರೇಶನ ತೋರ್ಪಳು 5
--------------
ಇಂದಿರೇಶರು
ಕಣ್ಮನಕೆ ಆನಂದ ಇಂದಿನದಿ ಕೇಳೀ |ಮನ್ಮನೋರಥ ಮುಂದೆ | ಪೋಗಿ ಸೇರಿಹುದು ಪ ಮಧ್ವ ಸರಸಿಯ ತಟದಿ | ಮಧ್ವಮುನಿ ಸದ್ವಂದ್ಯಮಧ್ವೇಶ ಶಿರಿ ಕೃಷ್ಣ | ನರ್ಚಿಸುತ ನಿತ್ಯಮಧ್ವಮತ ಸಾಮ್ರಾಜ್ಯ | ಪೀಠದಲಿ ಭೂಷಿತರುವಿಶ್ವೇಶ ತೀರ್ಥರಿಗೆ | ವಂದಿಪೆನು ಸತತ 1 ಮಧ್ವ ಸಿದ್ಧಾಂತಗಳ | ಉತ್ಕರ್ಷ ಭೋದಿಸುತವಿದ್ವಜ್ಜನಾರಾಧ್ಯ | ಪಾಠಶಾಲಾವರ್ಧಂತಿ ಹತ್ತಾರು | ನಾಲ್ಕೊರ್ಷ ಉತ್ಸವದಿಅದ್ಯಕ್ಷ ವಿಶ್ವೇಶ | ತೀರ್ಥರನುಗ್ರಹಿಸೇ 2 ಅನಂತೇಶ ಸನ್ನಿಧಿಲಿ | ಅನುಮಾನ ತೀರ್ಥರಿಂದಾನಂತ ಸತ್ ಜ್ಞಾನ | ರಶ್ಮಿ ಸೂಸುತಲೀ |ಜ್ಞಾನ ಕಾರ್ಯವು ಗುರು | ಗೋವಿಂದ ವಿಠಲನಪ್ರೀಣನಕೆ ಜರುಗಿಹುದ | ನೋಡವನೆ ಧನ್ಯ 3
--------------
ಗುರುಗೋವಿಂದವಿಠಲರು
ಕಂತು ಜನಕ ಶ್ರೀಕಾಂತನ ಸ್ತುತಿಸಲ ನಂತನಿಗಸದಳವೈ ಪ ದಂತಿಚರ್ಮಧರಾಧ್ಯರು ಈತನ ಅಂತುಗಾಣದಲೆ ಚಿಂತಿಪರೈ ಅ.ಪ ಮಾವನ ಮಥಿನಿದ ಮಾವನಿಗೊಲಿದ ಮಹರಾಯನವನು | ಮಾವನ ಮಗನ ಮೋಹದ ಮಗಳಿಗೆ ಮಾವನೆನಿಸಿದವನು ಮಾವನ ತಮ್ಮಗೆ ತನ್ನಯ ಭಕುತನ ಮಹಿಮೆ ತೋರಿಸಿದನು || ಪರಿ ಪರಿ ಪೊರೆದನು ಉ ಮಾವಲ್ಲಭನುತ ನಗಧರನಿವನು 1 ಸತಿಯ ಪಿತನ ಪೆತ್ತನ ಮಾತೆಗೆ ಪತಿಯಾದವ ನಿವನು | ಸತಿಯಳ ಪಿಡಿದೊಯ್ದಾತನ ಭ್ರಾತನ ಸುತನ ಪಾಲಿಸಿದನು ಸತಿಯ ಪಡೆದವಳ ಸುತನ ಮರ್ದಿಸಿ ಸತಿಯರ ಕೂಡಿದನು | ಸತಿಗೆ ಕೊಟ್ಟ ವರ ಹಿತದಿ ನೀಡಲು ಸತಿಯನ್ನಗಲಿದ ಶತಕ್ರತು ವಂದ್ಯನು 2 ಕಾಲುರಹಿತ ಕೈಕಾಲು ಮುದುರುವ ಕೋಲರೂಪಿ ಇವನು ಕಾಲನಂತೆ ಘನ ಕೋಪಿಯಾಗಿ ನದಿ ಕಾಲಲಿ ಪಡೆದವನು ಕಾಲಕ್ಷತ್ರಿಯರ ತಾ ಬಾಲೆಯ ಸಲಹಿದನು ಕಾಳಿವೈರಿ ಶ್ರೀ ಶಾಮಸುಂದರ ನಖ ಸಖ ಕಲಿ ಭಂಜನನು 3
--------------
ಶಾಮಸುಂದರ ವಿಠಲ
ಕಂತುಜನಕ ನರಪಂತವೇನಿದು ಪ ಮಂದರೋದ್ಧರ ವಂದಿಸುವೇ ಧೀರ ಸುಂದರಾಂಗ ಗೋವಿಂದ ಪಾಲಿಸಯ್ಯ1 ಮಾರಸುಂದರ ಘೋರ ದುರಿತದೂರ ಸಾರನುಗುಣಪೂರ ಪೂಜಿಪೆ ಕೇಶವ 2 ಈ ಜಗದೊಳು ರಾಜಿಸುತ್ತಿರುವ ಜಾಜೀಶ್ವರ ದೇವ ಮಾಜದೆನ್ನ ಪೊರೆ 3
--------------
ಶಾಮಶರ್ಮರು
ಕಂತುಜನಕನ ನೆನೆಯಲೆ ಬರಿದೆ ಮನ ಚಿಂತಿಸಿ ಫಲವಿಲ್ಲಲೇ ಪ ಕುಂತಿಸುತರಪಾಲ ಸಂತಜನರ ಪ್ರೀಯ ಚಿಂತೆಯಳಿದು ನಿಶ್ಚಿಂತೆ ಪಾಲಿಸುವಂಥ ಅ.ಪ ಕೀಳುಯೋಚನೆ ಅಳಿಯೆಲೆ ವೈಕುಂಠನ ಶೀಲತನದಿ ಭಜಿಸೆಲೆ ಮೂಲಮಂತ್ರವ ಕೇಳೋ ನೀಲವರ್ಣನ ಜಪ ಕಾಲನ ಬಾಧೆಯ ಗೆಲಿಸಿ ಪಾಲಿಸುವಂಥ 1 ಕರಿಧ್ರುವರೆಂಬುವರೊ ಹರಿಹರಿಯೆಂದು ಸ್ಥಿರಮುಕ್ತಿ ಪಡೆದಿಹ್ಯರೊ ಹರಿಯೆಂದು ಪ್ರಹ್ಲಾದ ಪರಮಕಂಟಕ ಗೆದ್ದ ಹರಿಯೆಂದು ವಿಭೀಷಣ ಸ್ಥಿರಪಟ್ಟ ಪಡೆದನು 2 ವಾಸನಾದೇಹವಿದು ಶಾಶ್ವತವಲ್ಲ ನಾಶನಹೊಂದುವುದು ಬೇಸರಿಲ್ಲದೆ ಪಠಿಸೀಶ ಶ್ರೀರಾಮನ ಧ್ಯಾಸÀವ ಮರೆಯದಿರು ಹೇಸಿಭವವ ಗೆಲಿಪ 3
--------------
ರಾಮದಾಸರು
ಕಂತುಪಿತ ಕರುಣಾಕರ ನಿನ್ನ ಚಿಂತೆಯೊಳಗಿರಿಸಿ ಸಲಹಯ್ಯಾ ಜನಾರ್ದನಾ ಪ ಉಣ್ಣದುರಿಯುವಮನವ ನಿನ್ನಡಿದಳಿರನೆಳಲ ತಣ್ಣಸದಲಿರಿಸಿ ಸಲಹಯ್ಯ ಜನಾರ್ದನಾ 1 ವಿಪ್ರ ವಧೆಯಿಂದಲಾದಡಂ ವಿರಚಿಸಿದ ಲಾವಿಕವೆಂದದನೆ ಬಯಸಿ ಬಯಸೀ ದೇವ ಮನಕನವರತ ನಿನ್ನ ಪದ ತೀರ್ಥದಾ ಜೀವನವನಿತ್ತು ಸಲಹಯ್ಯಾ 2 ಭೂಮಿಯದು ಬುಧದಾನ ಸುರದಾನವಾದಡಂ ಆ ಮಹಿಯ ತನ್ನತ್ತ ಸೆಳೆವೆನೆಂದೂ ಕಾಮಿಸುವ ಮನಕೆ ನಿನ್ನಮಲಪಾದಾಂಬುಜವ ಸೀಮೆಯೊಳಗಿರಿಸು ವೈಕುಂಠ ಜನಾರ್ದನಾ 3
--------------
ಬೇಲೂರು ವೈಕುಂಠದಾಸರು
ಕಂತುಪಿತನೆ ನಿನ್ನ ಎಂತು ವರ್ಣಿಪೆ ಲಕ್ಷ್ಮೀ -ಕಾಂತ ಪಾಲಿಸೆನ್ನನು ನಿರಂತರದಲಿ ಪ ಕುಂತಿಪುತ್ರಗೆ ನೀನತ್ಯಂತ ಸಾರಥಿತ್ವವ ಮಾಡಿನಿಂತು ದುರ್ಯೋಧನನ ಶಿರವ ಅಂತಕನಿಗೊಪ್ಪಸಿದ ಧೀರ ಅ.ಪ ಸುಂದರವದನ ನಿನ್ನ ಕಂದ ಭಜಿಸಲು ಮುದದಿಂದ ಕಂಬದೊಳ್ಬಂದೆ ಮಂದರೋದ್ಧರಸಿಂಧುಶಾಯಿ ರಕ್ಕಸನ ಕೊಂದು ಕರುಳ ಮಾಲೆಯನ್ನುಚೆಂದದಿಂ ಕಂಧರದೊಳ್ಧರಿಸಿದಾನಂದಮೂರ್ತಿ ಇಂದಿರೇಶ1 ಕದಂಬ ಪೂಜಿತಾಂಘ್ರಿಯುಗಳನಂಬಿದ ಭಕ್ತರ ಕಾಯ್ವ ಅಂಬುಜನೇತ್ರಅಂಬರೀಷ ದ್ವಾದಶಿ ವ್ರತವ ಸಂಭ್ರಮದಿ ಮಾಡುತಿರೆಡೊಂಬಿಯಿಂ ದೂರ್ವಾಸ ಶಪಿಸೆ ಬೆಂಬಿಡದೆ ಚಕ್ರದಿ ಸಲಹಿದ2 ಗಂಗೆಯ ಜನಕ ನಿನ್ನ ಅಂಗನೆ ದ್ರೌಪದಿದೇವಿಭಂಗಬಿಡಿಸೆಂದು ಕೂಗೆ ಮಂಗಳಾಂಗನೆಸಾಂಗದಿಂದ ವಸ್ತ್ರಂಗಳ ಹಿಂಗದೆ ಪಾಲಿಸಿದಂಥರಂಗವಿಠಲ ಪಾಲಿಸೀಗ ತುಂಗ ವಿಕ್ರಮ ಎನ್ನ ಮಾತ 3
--------------
ಶ್ರೀಪಾದರಾಜರು
ಕತ್ತಲೆಗಂಜುವುದೇನುಮೈದುನ ನಿನ್ನ ಬತ್ತಲೆ ಮಾಡಿದನ ಚಿತ್ತ ಸ್ವಸ್ಥ್ಯವಾದ ಚಪಲಾಕ್ಷಿ ನೀ ಇಂಥಕತ್ತಲೆಗಂಜುವುದೇನ ಪ. ಪುನುಗಿನ ಪರಿಮಳ ಬಿನುಗು ಬೆಕ್ಕಿಗೆ ಉಂಟೆನಿನ್ನ ಮನದಿ ಪಾಂಡವರು ಸರಿಯೆಂದು ದ್ರೌಪತಿನಿನ್ನ ಮನದಿ ಪಾಂಡವರು ಸರಿಯೆಂದು ಕೈ ಹಿಡಿದಿಜನರೆಲ್ಲ ನಗರೆ ಜಗದೊಳು ದ್ರೌಪತಿ1 ಗಿಳಿಯಂಥ ಕಳೆಯ ಹೊಳೆಯ ಬಲ್ಲುದೆ ಗುಬ್ಬಿತಿಳಿದು ನಿನ್ನ ಗರವು ಬಿಡು ಕಂಡ್ಯಾ ದ್ರೌಪತಿತಿಳಿದು ನಿನ್ನ ಗರವು ಬಿಡು ಕಂಡ್ಯಾ ಐವರೂ ಹಳಿದುಕೈ ಹೊಯಿದು ನಗರೇನ ದ್ರೌಪತಿ2 ಆತುರವಾಗಿದ್ದ ಕೀಚಕನಿಗೆಮಾತು ಕೊಟ್ಟವನ ಮಡುಹಿದಿಮಾತು ಕೊಟ್ಟವನ ಮಡುಹಿದ ನಿನ್ನಂಥಫಾತಕಳುಂಟೆ ಜಗದೊಳು ದ್ರೌಪತಿ3 ಮಾಯಗಾರುತಿ ಪತಿಯ ದಾಯದಾಟಕೆ ಹಚ್ಚಿಕಾಯದ ಕಾಂತಿ ಅಡಗಿಸಿಕಾಯದ ಕಾಂತಿ ಅಡಗಿಸಿ ಮೆರೆಸಿದಿಯಾವ ಕಚ್ಚೆತನ ಪರಿಯಲೆ ದ್ರೌಪತಿ4 ಸೃಷ್ಟಿಕರ್ತನೆಂಬೊ ಧಿಟ್ಟ ಗಂಡನ ಒಯ್ದುಅಟ್ಟು ಹಾಕುವನ ಪರಿಯಲಿಅಟ್ಟು ಹಾಕುವನ ಪರಿಯಲಿ ಕೈಯೊಳುಹುಟ್ಟು ಕೊಟ್ಟವನ ಮೆರೆಸೀದಿ ದ್ರೌಪತಿ 5 ಕಳೆಯ ಸುರಿಯುವ ಮುದ್ದು ಎಳೆಯ ಚನ್ನಿಗಪತಿಗೆಬಳೆಯನೆ ಇಡಿಸಿ ಜನರೊಳುಬಳೆಯನೆ ಇಡಿಸಿ ಜನರೊಳು ರೂಪವ ತಿಳಿಯದಂತವನ ತಿರುಗಿಸಿ ದ್ರೌಪತಿ 6 ರಾಜಪುತ್ರನ ಒಯ್ದುತೇಜಿ ಕೆಲಸಕೆ ಇಟ್ಟಿಸೋಜಿಗವಲ್ಲ ಜನರೊಳು ಸೋಜಿಗವಲ್ಲ ಜನರೊಳು ರೂಪವಮಾಂಜುಕೊಂಡವನ ಮೆರೆಸಿದಿ ದ್ರೌಪತಿ7 ಘನ ಗಂಭೀರನ ಒಯ್ದು ದನದ ಕೆಲಸಕೆ ಇಟ್ಟಿಜನರೆಲ್ಲ ನಗರೆ ಜಗದೊಳುಜನರೆಲ್ಲ ನಗರೆ ಜಗದೊಳು ದ್ರೌಪತಿಮನಬುದ್ಧಿ ಎಂದು ಬರಬೇಕು8 ಅತಿ ಅಂತಃಕರಣಿ ಹಿತದ ಅಗ್ರಜನ ಒಯ್ದುರಥಿಕನ ಮಾಡಿ ಮೆರೆಸಿದಿ ದ್ರೌಪತಿರಥಿಕನ ಮಾಡಿ ಮೆರೆಸಿದಿ ರಾಮೇಶನ ಪತಿಗಳಭಿಮಾನ ಇರಲುಂಟೆ ದ್ರೌಪತಿ9
--------------
ಗಲಗಲಿಅವ್ವನವರು
ಕಥನಕಾವ್ಯಗಳು ಶ್ರೀ ವೆಂಕಟೇಶ ಪಾರಿಜಾತ ಅಧ್ಯಾಯ ಒಂದು ಶ್ರೀಪತಿರ್ಭೃಗುಣಾ ಸರ್ವಲೋಕೋತ್ಕøಷ್ಟ ಇತೀ ಪಿತ: ಗೋಕ್ಷೀರ ಸಿಕ್ತ ಸರ್ವಾಂಗೋ ವಲ್ಮೀಕಸ್ಥ: ಶುಭಂ ದಿಶೇತ | ಶ್ರೀಸಹಿತ ಶ್ರೀವೆಂಕಟೇಶಗೆ ಸಾಸಿನಾರತಿ ಮಾಡಿ ಬೇಡುವೆ ಭಾಷೆ ಭಾಷೆಗೆ ಎನಗೆ ಬುದ್ಧಿವಿಕಾಸ ಕೊಡುಯಂದು ಕರಮುಗಿದು ಬೇಡುವೆ ದಾಶರಥಿ ನಿಜದಾಸ ಕಲ್ಲೊಳ್ಳೀಶಗೊಂದಿಸುವೆ 1 ಸಂತತಿಗೆ ನತಿಸುವೆ ಐಜಿ ವೆಂಕಟರಾಮವರ್ಯರ ಪೂಜೆಯಲ್ಲಿರುವೆ ಜಗತಿಯಲಿ ಜನಿಸಿ ಅವರಾ ಪೂಜಿತಾಖ್ಯವು ವಹಿಸಿದವರನು ಪೂಜಿಸುವೆ ಬಿಡದೆ2 ಪೊಂದಿ ಆ ಗುರು ಪುತ್ರರಾಗಿರುವ ವಿಷ್ಣುತೀರ್ಥರನು ನಮಿಪೆ ಮತ್ತೆ ಸ್ವೋತ್ತಮರಾಗಿ ಇರುವ ಗುರುಗಳಿಗೊಂದಿಸುತ ಸ ರ್ವೋತ್ತಮಾನಂತಾದ್ರಿ ರಮಣನ ಮಹಿಮೆ ಪೇಳುವೆನು3 ವಚನ ಬುದ್ಧಿ ಪೂರ್ವಕ್ಹಿಂ ಸಂಪೂರ್ಣ ಸರ್ವ ದೇವೋತ್ತಮನು ಇರುವನ್ಯಾರೆಂದು ತಿಳಿ ಸರ್ವಲೋಕದಲಿ ಕೇಳಿ ಪೂರ್ವದಲ್ಲಿ ಪೋದ ಪೂರ್ವಿಕನÀ ಮನೆಯಲ್ಲಿ ಗರ್ವ ಅವನಲ್ಲಿ ಕಂಡು ಇರುವ ನಡೆದನಲ್ಲಿ 1 ನೋಡಿದನು ಆಗಲ್ಲಿ ಪ್ರೌಢೆ ಪಾರ್ವತಿಯು ಮಾತಾಡಿದಳು ನಾಚುತಲಿ ಬೇಡಬಿಡು ಪ್ರಾಣೇಶ ನೋಡು ಭೃಗು ಮುನಿಬಂದ ಬೇಡಿಕೊಂಬುವೆನೊ ಗಾಢನೆ ಕಣ್ಕೆಂಪು ಮಾಡಿ ಮುನಿಯಿದ್ದಲ್ಲಿ ಓಡಿಬಂದನು ಪೂಜೆಯ ಬೇಡ ಈ ಲೋಕದಲಿ ನೋಡಿ ಲಿಂಗವ ಪೂಜೆ ಮಾಡಲಿ ಜನರು 2 ಪರಿ ಶಾಪ ಮೆಟ್ಟಿದನು ವೈಕುಂಠ ಥಟ್ಟನೆ ಮತ್ತಲ್ಲಿ ದಿಟ್ಟ ದೇವನ ಕಂಡ ಪಟ್ಟದರಸಿಯಕೂಡಿ ಧಿಟ್ಟಾಗಿ ಮಲಗಿರಲು ಸಿಟ್ಟಿಲÉೂದ್ದನು ಒಳ್ಳೆ ಪೆಟ್ಟು ಅವನೆದಿಗೆ ಮುಟ್ಟಿ ಮುನಿ ಪಾದವನು ತುಷ್ಟನಾಗಿ 3 ಧ್ವನಿ ಮೇಲಿಷ್ಟು ಸಿಟ್ಟು ಕಾರಣ ಪೇಳಿಷ್ಟು ತಪ್ಪಿತು ಕ್ಷಮಿಸಿಷ್ಟು 1 ಎಳ್ಳುಕಾಳಷ್ಟು ನೊಂದು ಕೊಂಡಿದ್ದಾವು ಎಷ್ಟೋ 2 ಧರೆಯೊಳಗೆ ದ್ವಿಜರಿಗೆ ಸರಿಯಾರು ಇಲ್ಲೆಂದು ಬರುವುದು ಭಯ ಬಹಳಷ್ಟು ವರದಾನಂತಾ ದ್ರೀಶನ ಪರಮ ಭಕ್ತರಿಗೆ ಬರಬಾರದೆಂದಿಗೂ ಸಿಟ್ಟು 3 ವಚನ ಇಂದಿರಾಪತಿಯು ಹೀಗೆಂದು ಮುನಿಪಾದಂಗಳÀÀÀ ಚಂದದಿಂದಲಿ ಒತ್ತಿತ್ವರದಿಂದ ಉಷ್ಣೋದಕವನು ತಂದು ತೊಳೆಯುತ ಇಂದು ಪಾವಿತನಾದೆನೆಂದು ಹರುಷದಲ್ಲಿ ಮುಂದೆ ಭೃಗುಮುನಿಯು ಮುಕುಂದನ ಸರ್ವರಿಂದಧಿಕ ಸತ್ಯತಿಳಿರೆಂದ ಮುನಿಗಳೆಲ್ಲ ಮುಂದೆ ವೈಕುಂಠದಲಿ ಇಂದಿರಾದೇವಿ ಗೋವಿಂದನಾಟವ ಕಂಡಂದಳೀ ಪರಿಯು1 ರಾಗ:ಮೋಹನ ಕಲ್ಯಾಣಿ ಆದಿತಾಳ ಹರಿಯೆ ಪೋಗುವೆ ನಾನು ಮುನ್ನಿರುತಿರು ಒಬ್ಬನೇ ನೀನು ತಿರುಕನಾಗಿ ಇರುತಿರುವ ಭೂಸುರನು ಭರದೊಳೊದ್ದ ನಿನ್ಹಿರಿಯತನವೇನು ಪ ನಿನ್ನ ಶ್ರೀವತ್ಸವಿದು ಬಹು ಮಾನ್ಯವು ಎಂದೆನಿಸುವುದು ಮಾನ್ಯ ವಾಗಿಹುದು 1 ಬಡವ ಬ್ರಾಹ್ಮಣರಿಂದ ನೀ ಕಡೆಗೆ ಕೂಡಿರು ಚಂದಾ ಮಡದಿಯ ಹಂಬಲ ಬಿಡುದೂರದಿಂದ ತಡಮಾಡದೆ ನಾ ನಡದೆ ಗೋವಿಂದಾ 2 ಇನ್ನೆನ್ನ ಗೊಡವ್ಯಾಕೊ ಬಿಡು ನಿನ್ನ ಸಂಗತಿ ಸಾಕು 3 ಎನ್ನ ವೈರಿಗಳ ಮನ್ನಿಸುವ್ಯಾಕೋ ನನ್ನಿಚ್ಛೆಯಲಿ ನಾ ಇನ್ನಿರಬೇಕೊ 4 ಹಿಂದಕೆ ಕುಂಭೋದ್ಭವನು ಎನ್ನ ತಂದೆಯ ನುಂಗಿದ ತಾನು ಅಂದಿಗೆ ಎನಗಾನಂದವು ಏನು 5 ಮತ್ತೆನ್ನ ಸೊಸೆಗವರು ಬಹು ಭಕ್ತಿಯಲಿ ಪೂಜಿಸುವರು ವೈರಿಯವರ್ಹೊರತು ಇನ್ಯಾರು 6 ಹುಡುಗ ಬುದ್ಧಿಯು ಎಂದು ನಾ ಕಡೆಗೆ ಬಲ್ಲೆನು ನಿಂದು ಮಡುವ ಧುಮುಕಿ ಕಲ್ಪಡೆಯ ಪೊತ್ತಿಹುದು ಪಿಡಿದು ಭೂಮಿಯ ಕಂಭ ಒಡೆದು ಬಂದಿಹುದು 7 ಬಡವ ಬ್ರಾಹ್ಮಣನಾದಿ ಚಪಗೊಡಲಿಯ ಕೈಯಲಿ ಪಿಡಿದಿ ಮಡದಿಯ ಕಳಕೊಂಡು ತುಡುಗ ನೀನಾದಿ ಹಿಡಿದು ಬತ್ತಲೆ ಖೊಟ್ಟಿ ಕಡವನೇರಿದಿ 8 ಎಷ್ಟು ಪೇಳಲೆ ನಿನಗೆ ನೀನೆಷ್ಟು ಮಾಡಿದಿ ಹೀಗೆ ಅಷ್ಟು ಮನಸಿನೊಳಗಿಟ್ಟುನೂ ಆಗ ಕಟ್ಟಕಡಿಗೆ ಬಲು ಸಿಟ್ಟು ಬಂತೆನಗೆ 9 ಎಲ್ಲರಿಗುತ್ತಮ ನೀನು ಎಂದಿಲ್ಲಿದ್ದೆ ಮೋಹಿಸಿನಾನು ಬಲ್ಲಿದನಂತಾದ್ರಿಯೊಳಿರು ನೀನೆ 10 ರಾಗ:ಸಾರಂಗ ಆದಿತಾಳ ಪರಿ ಕಲಹ ಮಾಡಿ ತ್ವರಿತದಿಂದ ನಡೆದಳು ಕರವೀರಪುರಕೆ ಪ ಪರಮಾತ್ಮನು ತಾ ಮುಂದೀಪರಿ ಚಿಂತಿಸುತಿಹನು ಸಿರಿಯಿಲ್ಲದ ವೈಕುಂಠ ಸರಿಬಾರದು ಎನಗೆ1 ದೀನನಾದೆನು ಹಾ ನಾನು ಕಾಣುವೆನೆಂದು ಪ್ರಾಣ ನಿಲ್ಲದು ಪಟ್ಟದ ರಾಣಿಯ ಬಿಟ್ಟು 2 ಇನ್ಹ್ಯಾಂಗೆ ಇರಲಿ ಇನ್ನಾಕೆಯ ಹೊರತು ಕಣ್ಣಿಗೆ ವೈಕುಂಠಾರಣ್ಯ ತೋರುವುದು ಇನ್ನೆಲ್ಹೋಗಲಿ ಎಂದು ಬಂದ ತನ್ನಿಂದ ತಾನು3 ಶ್ರೀ ವೈಕುಂಠಕಿಂತ ಶ್ರೀ ವೆಂಕಟಗಿರಿಯು ಅಧಿಕವೆಂದು ಭಾವಿಸೀ ಪರಿಯು ಆವತ್ತಿಗೆ ಬೇಗಲ್ಲೇ ತಾ ವಾಸಕೆ ನಡೆದ ದೇವ ತಿಂತ್ರಿಣೆಯೆಂಬೋ ಆ ವೃಕ್ಷವಕಂಡ 4 ಅಡಗಿದ ಮೆಲ್ಲನೆ ಪೋಗಿ ಅಲ್ಲ್ಯಾದೇಶದಲೊಬ್ಬ ಜೋಳಾಖ್ಯನು ಎಲ್ಲರಿಂದಲಿ ತನ್ನ ಪುರದಲ್ಲೆ ಇರುವಾ5 ಶಿವನ ಕರುವಿನ ಮಾಡಿ ತಾನಾಕಳಾಗಿ ಅವನ ತಾಯಿಯು ಲಕ್ಷ್ಮೀ ಅವನ ಮಾರಿದಳು ಕೊಂಡ 6 ನಿತ್ಯ ವರಸಾಧು ಗುಣದಿಂದ ಸರಸಾಗಿ ಕೂಡಿ ಚರಿಸಿ ಬರುವುದು ವೇಂಕಟಗಿರಿಗ್ಹೋಗಿ ನಿತ್ಯ7 ಬಂದ ಕಾರಣವೇನು ಎಂದು ಸ್ಮರಿಸುತಲಿ ಇಂದಿರೇಶಗೆ ಭಕ್ತಿಯಿಂದ ಕ್ಷೀರವನು ಚಂದಾಗಿ ಕರೆವುದು ಬಂದು ಹುತ್ತಿನಲಿ 8 ಹಿಂಡದು ತನ್ನ ಕರುವಿನ ಪರಿ ರಾಜನ ಹೆಂಡತಿಯ ಆಗ ಚಂಡ ಕೋಪದಿ ಗೋಪನ ಕಂಡಂದಳು ಹೀಗೆ 9 ವಚನ ನೀ ಏನು ಮಾಡುವಿನಿತ್ಯ ಕುಡಿವುದೋ ವತ್ಸ ಏನುಮಾಡು ಪ್ರಾಣಕೊಂಬುವೇನು ತಾನು ಗಾಭರಿಗೊಂಡು ಧ್ಯಾನಿಸುತ ಆ ರಾಜ ಮಾನಿನಿಗೆ ನುಡಿದ ಬಹು ದೀನನಾಗಿ 1 ರಾಗ:ದಂತಿ ಆದಿತಾಳ ಅರಿಯೆ ತುರುಗಳ ಕಾಯ್ಕೊಂಡು ಬರುವೆ ನಾ ಇದಹೊರ್ತು ಪ ಕಟ್ಟುವರ್ಯಾರೊ ಅರಿಯೆ ಬರಿದೆ ನೀ ಎನ್ನ ಮೇಲೆ ಹರಿಹಾಯುವದ್ಯಾಕೆ ಅರಿಯೆ 1 ಪಾಲಾಗುವುದೊ ಅರಿಯೆ ಸರಸಾಗಿ ತಿಳಿನೀನು ನೆರೆಯೊರೆಯವರನಾ ಅರಿಯೆ 2
--------------
ಅನಂತಾದ್ರೀಶ - ಕಥನಕಾವ್ಯಗಳು