ಒಟ್ಟು 346 ಕಡೆಗಳಲ್ಲಿ , 59 ದಾಸರು , 321 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಮಾರುತನ ರಾಣಿ | ಭಾರ ನಿನ್ನದೇ ವಾಣೀ ಪ ಅನುದಿನ | ಅಕಟನಿಲ್ಲದೆ | ಸಕಲ ಠಾವಿನಲ್ಲಿ ಅರ್ಭಕನಾಗಿ ತಿರುಗಿ ಪಾ | ಪಕೆ ಎರಗಿದೆ ಯಾತಕೆ ಬಾರದವನಾದೆ 1 ಆರನ್ನ ಕಾಣದೆ ನಿನ್ನನು ನಾ | ಸಾರಿದೆ ಮಾಣದೆ | ವಾರ ವಾರಕೆನ್ನ ಉದ್ಧಾರವ ಮಾಳ್ಪುದು | ಕಾರುಣ್ಯದಿಂದಲಿ ಶೃಂಗಾರವಾರಿಧಿ ವೇಗ 2 ನಿತ್ಯ | ಕೃತಿಯನಂದನೆ | ಸತತ ವಿಜಯವಿಠ್ಠಲನ ಪದಾಬ್ಜದಿ | ರತಿ ಆಗುವಂತೆ ಸುಮತಿಯನು ಕರುಣಿಸೇ 3
--------------
ವಿಜಯದಾಸ
ನಿಲಯ ಐಕೂರು ಗ್ರಾಮಾಲಯ | ಸ್ತಂಭೋಧ್ವವ ದೇವ ನಾಮಧೇಯ ಧ್ವಯಭಾರ್ಯ ಸುಮನಸಪ್ರಿಯ ಸದ್ಭಕ್ತಾರ್ತಿವಿದೂರ ವಿಮಲ ಹೃದಯ ಅತ್ಯಂತ ಕರುಣಾಮಯ | ಅಸ್ಮದ್ ಸದ್ಗುರುವರ್ಯ ನಿತ್ಯ ಸನ್ಮಂಗಳ 1 ಸಾರೋದ್ಧಾರ ಸಂಗೀತ ಭಾರತಿಯುತ ವೇದಾರ್ಥ ಸಂಪೂರಿತ | ಸಹ್ಲಾವಂಶಜ ದಾಸವರ್ಯ ವಿರಚಿತ ಶ್ರೀಶೌರಿ ಸುಕಥಾಮೃತ ಸಾರಜ್ಞಂ ಸುಶೀಲೇಂದ್ರತಿರ್ಥರ ಮಮತ ಸಂಪೂರ್ಣ ಸಂಪಾದಿತ ಅಸ್ಮದಗ ಸದ್ಗುರುವರ್ಯ ನಿತ್ಯ ಸನ್ಮಂಗಳ 2 ಅಷ್ಟಪದಲೋಷ್ಟ ಭಾವಸಮತ | ಕರತಧೀರ ಸನ್ಮಾನಿತ ಅಷ್ಟ್ಯೆಕಾಮಲ ಭಕ್ತಿ ಜ್ಞಾನ ಭರಿತ ವೈರಾಗ್ಯ ಸಂಶೋಭಿತ | ಸೃಷ್ಟ್ಯಂತರ್ಗತ ಮೂರ್ತಿ ಸತತ | ಸಂದರ್ಶನಾನಂದಿತ ನಿತ್ಯ ಸನ್ಮಂಗಳ 3 ಶೃಂಗಾರಾಂಗ ಸುನಾಮದ್ವಾದಶಧೃತ ಮುದ್ರಾಕ್ಷತಾಲಾಂಕೃತ ಕಮಲ ಜಪಿತ ಪದ್ಮಾಕ್ಷಮಾಲಾಂದ್ರಿತೆ ಇಂಗಿತಜ್ಞ ಸುಸಾಧು ಸಂಗ ಸಹಿತ ಮುಕ್ತ್ಯಂಗನಾಲಿಂಗಿತ ನಿತ್ಯ ಸನ್ಮಂಗಳ4 ತಾಪತ್ರಯದೂರ ಪಾಪರಹಿತ | ಕೋಪಾದಿಗುಣವರ್ಜಿತ | ಶಾಪಾನುಗ್ರಹಶಕ್ತ ಸುಜನಪ್ರೀತ ಸಂಸಾರ‌ಘನ ಮಾರುತ ಗೂಡಾರ್ಥ ಸಂಬೋಧಿತ ಅಸ್ಮದ್ ಸದ್ಗುರುವರ್ಯ ಈಯೋ ನೀ ನಿತ್ಯಸನ್ಮಂಗಳ 5 ಆಧ್ಯಾತ್ಮ ಸುವಿಚಾರ ಸತತ ಶೃತ್ಯರ್ಥಬಹು ಗರ್ಭಿತ | ಸತ್ಯವಲ್ಲಭ ಸತ್ಯದೇವ ಚರಿತ ವಕ್ತಾರ ಬುಧ ಸಮ್ಮತ | ನಾಡ್ಯಾಂತರ್ಗತ ಸರ್ವತೀರ್ಥ ಸ್ನಾತ | ತನ್ಮೂರ್ತಿ ಪ್ರತ್ಯಕ್ಷತ ನಿತ್ಯ ಸನ್ಮಂಗಳ 6 ಧರ್ಮಾಚಾರ ವಿಚಾರಶೀಲ ನಿರತ | ಷಟ್ಕರ್ಮ ಸಂಭೂಷಿತ | ನಿರ್ಮತ್ಸರ ಮೋಹ ದೇಹ ಮಮತ ಸುಶರ್ಮಕುಲರಾಜಿತ | ಧಮೋದರವಾತಜಾತ ಪೋತ ಜಾತಾರಿಖತಿವರ್ಜಿತ | ಅಸ್ಮಾದ್ ಸದ್ಗುರುವರ್ಯ ಈಯೋ ನಮಗೆ ಸತತ ನೀ ಸನ್ಮಂಗಳ 7
--------------
ಶಾಮಸುಂದರ ವಿಠಲ
ನೀರೇರುಹಾನಯನ | ವಾರನಿಧಿ ನಡುಶಯನತೋರೆನಗೆ ತವ ಚರಣ | ಸುಗುಣ ಗಣ ಪೂರ್ಣ ಪ ಅಮಿತ ಕ್ಲೇಶ ಗೊಳಿಸದಂತೆನೀ ಸಲಹೋ ಎನ್ನ | ಶೇಷಾದ್ರಿ ವಾಸಾ ಪರೇಶಾ1 ಭವ | ಸಂಗದೊಳಗಿರಿಸೀಭಂಗ ಪಡಿಸುವಿ ದೊರೆಯೆ | ಶೃಂಗಾರ ನಿಧಿಯೇ |ಸಂಗ ವಿಷಯದಿ ಹರಿಸಿ ನಿ | ಸ್ಸಂಗನೆಂದೆನಿಸಿಲಿಂಗಾಂಗ ಕಳೆಯೊ ಹರಿ | ರಂಗ ಭವಹಾರಿ2 ಸಾಮಸನ್ನುತ ಚರಣ | ಭೂಮಗುಣಿ ಸುಸ್ತವನಪ್ರೇಮದಲಿ ಗೈವ ಮನ | ನೇಮವೀಯೆಲೊ ವಾಮನ |ಈ ಮಹಾ ಕಲಿಯುಗದಿ | ನಾಮ ನಿಸನ್ನದೆ ಗತಿಯೆಶ್ರೀಮಹೀ ಸೇವಿತನೆ | ರಾಮ ಗುಣಧಾಮ 3 ಭವ | ರೋಗ ವೈದ್ಯನೆ ಎನ್ನರೋಗ ಹರಿಸುವುದರಿದೆ | ಇದು ನಿನ್ನ ಬಿರುದೇ4 ನಿರವದ್ಯ ಆದ್ಯಾಅರುಹಲೇನಿಹುದಿನ್ನು | ಸರ್ವಜ್ಞ ನೀನಿನ್ನು ಒರೆವೆನೆಂಬಪರಾಧ | ಮರೆದು ಪಾಲಿಸು ಶ್ರೀಶ 5
--------------
ಗುರುಗೋವಿಂದವಿಠಲರು
ನೋಡಿದೆ ನಾ ನೋಡಿದೆ ಮಾಡಿದೆ ನಾ ಮಾಡಿದೆ ಪ ಬೆಟ್ಟವ ಕಂಡೆನು ಸೋಪಾನಂಗಳು ನಿಟ್ಟುಸುರಿಕ್ಕದೆ ಏರಿದೆ ಕಟ್ಟ ಕಡಿಯಣ ಗೋಪುರ ಶಿಖರ ದಿಟ್ಟಿಸಿ ಕಣ್ಣಿಲಿ ನೋಡಿದೆ 1 ಈ ಸಮಸ್ತರ ಗುರುವಾದ ಭಾರತಿ ಈಶನ ಪಾದಕ್ಕೆ ಎರಗಿದೆ ಕ್ಲೇಶನ ಕಳೆದು ಎದುರಾಗಿ ಪೊಳೆವ ಶ್ರೀಶನ ಮಹದ್ವಾರ ನೋಡಿದೆ 2 ಬಲವಾಗಿ ಬಂದು ಸ್ವಾಮಿ ಪುಷ್ಕರಣಿ ಒಳಗೆ ವರಹನ ನೋಡಿದೆ ಜಲದಲಿ ಮಿಂದು ವೇಗದಲಿ ತಿರುವೆಂ ಗಳ ದೇವನ ನೋಡ ಸಾಗಿದೆ 3 ಗುಡಿಯ ಪೊಕ್ಕೆನು ಗರುಡಗಂಬದ ಸಡಗರವನು ನಾ ನೋಡಿದೆ ಒಡನೆ ಪ್ರಾಣಾಚಾರದವರು ಪಡೆದ ವರಗಳ ಕೇಳಿದೆ 4 ಮುನ್ನ ಅವಸರ ಮನಿಯೊಳಗೆ ಅನ್ನಪೂರ್ಣಿಯ ನೋಡಿದೆ ಚನ್ನಾಗಿ ಮಂಟಪದೊಳು ಶ್ರೀನಿವಾ ಸನ್ನ ಮೂರುತಿಯ ನೋಡಿದೆ 5 ತೊಟ್ಟಲ ತೀರ್ಥವ ಕೊಂಡು ಪ್ರಸಾದ ಇಟ್ಟು ಮಾರುವದು ನೋಡಿದೆ ಇಷ್ಟ ಭಕ್ತರು ಸಮ್ಮುಖದಲಿ ಮುಟ್ಟಿ ಪಾಡುವದು ನೋಡಿದೆ6 ದ್ವಾರಪಾಲಕರಿಗೆ ಸಾಷ್ಟಾಂಗದಲಿ ನಮ ಸ್ಕಾರವನು ಮಾಡಿದೆ ಭೋರನೆ ಕಟಾಂಜನದ ಫಲ್ಗುಣಿ ಬಂ ಗಾರ ಬಾಗಿಲವ ನೋಡಿದೆ 7 ಇಂದು ರವಿ ಶತಕೋಟಿ ತೇಜದ ವಿಂದ ಯುಗ್ಮವ ಪುಳಕೋತ್ಸಹÀದಿಂದ ಸಂದರುಶನ ನಾ ಮಾಡಿದೆ 8 ಇಟ್ಟಿದ್ದ ಅಂದಿಗೆ ಉಟ್ಟ ಪೀತಾಂಬರ ಕಟ್ಟಿದ್ದ ಧಟ್ಟಿ ವಢ್ಯಾಣ ಝಟಿ ಕಂಕಣಾಕಾರದಾಲಾಯುಧ ಇಟ್ಟ ಕಸ್ತೂರಿಯ ನೋಡಿದೆ 9 ಮಾಸದಾ ಪೂವು ಪೂಸಿದ ಗಂಧ ಭೂಷಣಾ ನಾನಾ ಪರಿವಿಧ ಏಸು ಬಗೆಯಲ್ಲಿಟ್ಟು ಶ್ರೀನಿ ವಾಸನ ಶೃಂಗಾರ ನೋಡಿದೆ 10 ಜಯಜಯ ಜಗದೀಶ ಜಗನ್ನಿವಾಸ ಜಯ ಜಯ ಲಕುಮಿ ಪರಿತೋಷ ಜಯ ಜಯ ವಿನಾಶ ಜಯ ಜಯ ಸರ್ವೇಶ ಜಯವೆಂದು ಸ್ತೋತ್ರವ ಮಾಡಿದೆ11 ಕೇಸಕ್ಕಿ ದಧ್ಯೋದನ ಪರಮಾನ್ನ ದೋಶಿ ಬಿಸಿಬಿಸಿ ಮನೋಹರ ಲೇಸಾಗಿ ಚತುರ್ವಿಧ ಪ್ರಸಾದವನ್ನು ಈಸು ಅವಸರ ನೋಡಿದೆ 12 ಕರ್ಪೂರದಾರತಿ ವಪ್ಪಿನಿಂದಲಿ ತಂದು ತಪ್ಪದಲಿ ಬೆಳಗೋದು ನೋಡಿದೆ ರೆಪ್ಪೆಯವಿ ಹಾಕದೆ ಮನದಣಿಯ ತಿ ಮ್ಮಪ್ಪನ ವಿಗ್ರಹ ನೋಡಿದೆ 13 ಹಿಮಋತು ಪ್ರಥಮ ಮಾಸÀ ದಶಮಿ ಹಿಮಕರ ವಾರದದಿನದಲ್ಲಿ ಕ್ರಮದಿಂದಲಿ ಪೋಗಿ ಬಿಂಬ ಮೂರುತಿಯ ವಿಮಲ ಚಾರಿತ್ರವ ನೋಡಿದೆ 14 ಶತ ಅಪರಾಧವ ಮಾಡಲು ಕಳೆದು ಪತಿ ವಿಜಯವಿಠ್ಠಲ ಪುರಂದರನ ಸಂ ಗತಿಯಲ್ಲಿ ಸತತ ಸಾಕಿದಾ15
--------------
ವಿಜಯದಾಸ
ನೋಡಿದೆ ಶ್ರೀಕೃಷ್ಣನ ನೋಡಿದೆ ಪ. ನೋಡಿದೆ ಒಂಬತ್ತುಗೂಡಿನ ಕಿಟಕಿಯೊಳ್ಕೂಡಿದ ಮಂದಿಯೊಳ್ಗಾಡಿಕಾರನನಿಂದುಅ.ಪ. ನಾರಿಪುರುಷರೊಂದುಗೂಡಿ ಮುಂದೆದಾರಿಯ ಬಿಡದೆ ಹೋರ್ಯಾಡಿ ದೇಹಯಾರದಂತೆÉ ಪುಡಿಪುಡಿ ಮತ್ತೆಶ್ರೀರಮಣನ ಪಾಡಿ ಬೇಡಿ ಆಹಾ ಸುತ್ತಸೇರಿದ ಜನರಿವರ ಮಧ್ಯದಿಚಾರು ಮೌಕ್ತಿಕದ ಮಣಿಹಾರÀ ಶೃಂಗಾರನ್ನ1 ಅಂಗದೊಳಿಹ ದಿವ್ಯಾಭರಣ ಕನ-ಕಂಗಳೊಪ್ಪಿದ ರವಿಕಿರಣ ಮುನಿ-ಪುಂಗವೆ ವಂದಿಪ ಚರಣಕಮ-ಲಂಗಳ ನೆನೆವರ ಕರುಣ ಆಹಾ ಹಿಂಗದೆÉ ಪೊರೆವ ಶ್ರೀರಂಗನುತ್ಸವÀಕೆಂದುಮಂಗಲಾರತಿಯಾಗಿ ಸಂಗಡ ಪೊರಡಲು 2 ಭರದಿಂದ ಪಲ್ಲಕ್ಕಿನೇರಿ ಮಧ್ವಸರೋವರದೆಡೆಯನು ಸಾರಿ ಸುತ್ತಮೆರೆವ ದೀಪದಿಂದೀರಿ (?) ನೋಳ್ಪ ಜ-ನರಿಗೆ ಜಲಕ್ರೀಡೆ ತೋರಿ ಆಹಾಸಿರಿ ಅರಸನು ಹಯವದನನೇರಿ ಮೆರೆವ ಉಡುಪಿಯೊಳ್ಪರಿಯಾಯ ವಿನೋದವನ್ನು 3
--------------
ವಾದಿರಾಜ
ನೋಡಿದೆನೊ ಮನದಣಿಯ ನಳಿನಭವಾದ್ಯರ ಕ್ರೀಡಾಮೃಗವನೆ ಮಾಡಿ ಆಡಿಸುವ ವಿಚಿತ್ರ ಮಹಿಮ ಗೋಪಾಲಗ ಈಡುಗಾಣೆನೊ ಎಲ್ಲೆಲ್ಲಿ ಆವಲ್ಲಿ ಪ ಕಾಲಲಂದಿಗೆ ಗೆಜ್ಜೆ ಸರಪಳಿ ಉಡುದಾರ ಮೇಲು ಕಿರಿಗೆಜ್ಜೆ ಘಂಟೆ ತೋಳು ರಕ್ಷಾಮಣಿ ನಾಗ ಮುರಿಗೆ ಬಂದಿ ಸಾಲು ತಾಯಿತ ಕಟ್ಟಿರೆ ವಜ್ರ ಉಂಗುರದ ಬೆರಳು ಸು ಫಾಲದಲಿಯಿಟ್ಟ ತಿಲಕಾ ಲಾಲಿಸುವ ಬಾಲಕರೂಪದಿಂದಲಿ ಪ್ರಾತಃ ಇಂದು 1 ಮುಂಗೈ ಮುರಾರಿ ಪವಳದ ಬುಲಿಗೆಜ್ಜೆ ಬಂಗಾರ ಕೊರಳಲ್ಲಿ ಹಾ ರಂಗಳನು ಶೋಭಿಸುವ ಮಾಗಾಯಿ ಕರ್ಣದಲಿ ಉರ ಕೌಸ್ತಭ ಕಂಗೊಳಿಪ ಎಣೆನೂಲು ಹುಲಿಯುಗುರು ತಾಳಿಸರ ಹಿಂಗದಲೆ ಪಚ್ಚೆ ಪದಕಾ ಶೃಂಗಾರದರಳೆಲೆ ಶಿರದಿ ಜಾವಳ ಜಡೆ ಇಂದು 2 ಮಕರ ಕಡಗೋಲ ನೇಣನ್ನೆ ಕರದಲಿ ಪಿಡಿದು ಉರ ಪಾಣಿಗಳು ಬೆಣ್ಣೆ ಮೊಸರಿಲಿ ತೋದಿರೆ ಚನ್ನನಾಸಾ ಮಣಿತೂಗೆ ಅದರ ಭಾಗ್ಯ ಬಣ್ಣಿಪಲರಿದು ತಿಳಿದು ಚಿನ್ಮಯ ವಿಜಯವಿಠ್ಠಲ ವಿಶ್ವರೂಪ ಪಾ ಇಂದು 3
--------------
ವಿಜಯದಾಸ
ನೋಡಿದ್ಯ ರಂಗೈಯನ ನೋಡಿದ್ಯ ಪ ನೋಡಿದ್ಯ ಮನವೆ ನೀನಿಂದು ಕೊಂ- ಡಾಡಿದ್ಯ ಎದುರಲ್ಲಿ ನಿಂದು ಆಹ ಮಾ- ತಾಡಿದ್ಯ ವರಗಳ ಬೇಡಿದ್ಯ ನಿನ್ನೊಳು ಕೂಡಿ ನಲಿನಲಿದಾಡುವ ಶ್ರೀ ರೂಪ ಅ.ಪ. ಚರಣತಳದಲ್ಲಿ ಕೆಂಪು- ಶುದ್ದ ಅರವಿಂದ ಧ್ವಜ ವಜ್ರಸೊಂಪು- ಸ್ತುತಿ ಪÀರಿಗೆ ಸುರಂಘ್ರಿಪ ತಂಪು- ನೋಡ- ಲರಸಿ ಕಾಣದೊ ವೇದಗುಂಪು, ಆಹ ಹರಡಿ ಹಿಂಬಳೆ ಸಾಲ್ಬೆರಳೈದರ ಮೇಲೆ ಸುರುಚಿರ ರೇಖೆ ಚಂದ್ರಮನ ಸೋಲಿಪ ನಖ1 ಸರಸ ನೂಪುರ ಗೆಜ್ಜೆ ಪೆಂಡ್ಯ - ಹೊನ್ನ ಸರಪಳಿ ಪಾಡಗ ಕಂಡ್ಯ - ಹಿಂದೆ ಧರೆಗೆ ಮುಟ್ಟಿದ ಜಡೆಗೊಂಡ್ಯ - ಇದು ತರುಣಿ ಎನ್ನದಿರು ಕಂಡ್ಯ - ಆಹ ಬೆರಳಲ್ಲಿ ಇಟ್ಟ ಸುಂದರ ಪಿಲ್ಲಿಮೆಂಟಿಕೆ ಕಿರಿಪಿಲ್ಲಿ ಅಡಿಮೆಟ್ಟು ಮೆರೆವ ಕಾಲುಂಗರ2 ಝಣ ಝಣ ಗೆಜ್ಜೆನಾದ - ವನ್ನು ಎಣಿಸಲಾರದು ನೋಡಿ ವೇದಾ - ನಂತ - ಮೋದ - ಇದು ಅಣುರೇಣು ತೃಣಕಾಷ್ಠ ಭೇದ, ಆಹ ಪ್ರಣತಾರ್ತಿ ಹರವಾದ ಮಿನುಗುವ ಜಾನುದ - ರ್ಪಣ ನಾಚಿಪ ಜಂಘೆ ಎಣೆಗಾಣೆ ಸ್ತ್ರೀರೂಪ 3 ಊರುದ್ವಯಂಗಳು ರಂಭಾ - ಸ್ತಂಭ ಚಾರು ಪೊಕ್ಕುಳ ಸುಳಿಗುಂಭ - ತಂತ್ರಾ - ಸಾರೋಕ್ತದಿ ಪೂಜೆಗೊಂಬ - ವಿ ಸ್ತಾರ ಮಹಿಮೆ ಗುಣತುಂಬ, ಆಹ ನಾರಿ ಲಾವಣ್ಯದ ಪಾರ ಮೀರಿದ ಕಾಂತಿ ಆರಾರ ಮನಸಿಗೆ ತೋರದ ಪೆಣ್ಣಿನ4 ಉದಯರಾಗದ ದಿವ್ಯವಸನ - ಮೇಲೆ ಉದರ ತ್ರಿವಳಿ ಬಂದಿ ಹಸನ - ಕೇಳು ಮುದದಿಂದ ವಡ್ಯಾಣ ಬೆಸನ - ನೋಡು ಯದುಕುಲ ಜಾತ ಮಾನಿಸನ, ಆಹ ಮದಕರಿಯಂದದಿ ವಲಿದೊಲಿದಾಡಲು ಮದನಾರಿ ಮರುಳಾದ ಅದುಭುತ ಚರಿಯನ್ನ 5 ದೋರ್ಯ ಹರಡಿ ಕೈಕಟ್ಟು - ಚೂಡ್ಯ ಈರೈದುಂಗುರವುಳ್ಳ ಬೆಟ್ಟು - ಬಂ - ಗೀರು ಗಂಧವು ಗಂಬೂರ ಕರ್ಪೂರ ಕ- ಸ್ತೂರಿ ಲೇಪನ ಶೃಂಗಾರ ತ್ರಿವಳಿಯ 6 ತಾಯಿತು ಮುತ್ತ ಕಟ್ಟಾಣಿ - ತೋಳ ಮಣಿ - ವಂಕಿ ಕೇಯೂರ ಪಲ್ಲವ ಪಾಣಿ - ಉ ಪಾಯದಲ್ಲಿ ಘಟ್ಟಿ ಕಾಣಿ, ಆಹ ನೋಯದೆ ಸುರರಿಗೆ ಪೀಯೂಷ ವುಣಿಸಿ ದೈ- ತೇಯರ ಮಡುಹಿದ ಮಾಯದ ಕನ್ನಿಕೆ 7 ಸರಿಗೆ ಮುತ್ತಿನ ಚಿಂತಾಕ - ಕುಚ- ಕಂಚುಕ - ತೊಟ್ಟ ಭರದಿ ತೂಗುವ ಪಚ್ಚೆಪದಕ - ಕೆಳಗೆ ಹರಿ ನಡುಕಿಂಕಿಣಿ ಕನಕ, ಆಹ ಹರಳು ಕೆತ್ತಿದ ಚಿತ್ತರ ಮಾಟ ಕಟಿಸೂತ್ರ ಧರೆಗೆ ಶೋಭಿಪ ಸೀರೆ ನೆರೆಯ ವೈಭವವನು 8 ರನ್ನ ಪವಳ ಸರ ಥಳಕು - ಜೋಡು ಕನ್ನಡಿ ಹಾಕಿದ ಮಲಕು - ನೋಡು ಅನ್ನಂತ ಸೂರ್ಯರ ಝಳಕು - ಲೋಕ ಚನ್ನಾಗಿ ತುಂಬಿದ ಬೆಳಕು ಹೇಮ ಸಣ್ಣ ಮುತ್ತಿನ ಮೋ ಹನ್ನ ಏಕಾವಳಿ ಚಿನ್ನದ ಸರಗಳು 9 ಸಿರಿವತ್ಸ ಕೌಸ್ತಭ ಹಾರ-ವೊಪ್ಪೆ ವೈಜಯಂತಿ ಮಂದಾರ - ಮೇಲೆ ತರುಣ ತುಲಸಿ ಜನಿವಾರ - ಇಟ್ಟು ವರಭುಜಕೀರ್ತಿ ಕುಂಜರ, ಆಹ ಕರದಂತೆರಡು ತೋಳು ಎರಡೊಂದಾರು ಸಾ- ವಿರ ರೂಪನಾಗಿ ಶರೀರದೊಳಿಪ್ಪನ 10 ಕೂರ್ಮ ಕದಪು - ಕಣ್ಣಿ- ಗಿಕ್ಕಿದ ಸೊಬಗಿನ ಕಪ್ಪು - ತಲೆ - ಹಿಕ್ಕಿ ಬಾಚಿದ ಕೇಶ ಥಳಪು - ಸರ್ವ ಲಕ್ಕುಮಿ ದೇವಿಯ ಲೆಕ್ಕಿಸದೇ ಮಗನ ಪೊಕ್ಕುಳಿಂದಲಿ ವೆತ್ತ ಅಕ್ಕಜದಬಲೆಯ11 ಸೂಸುವ ದಾಡಿಯ ದಂತ - ಪಙÂ್ತ- ನಾಸ ಮೂಗುತಿಯಿಟ್ಟ ಶಾಂತ - ಸುಖ ಲೇಸು ಹಾಸ ಜಗದಂತ - ರಂಗ ಭಾಸ ಮಿಗಿಲು ಚಂದ್ರಕಾಂತ, ಆಹ ಸುಷುಪ್ತಿಯಲ್ಲಿ ಭೂಶ್ವಾಸ ಬಿಡುವರನ್ನು ಲೇಸಾಗಿ ಸಲಹುವ ದೋಷನಾಶನ ರೂಪ12 ಎಸೆವ ಪಂಜರದೋಲೆ ಕಿವಿಯ-ಹೊನ್ನ ಕುಸುಮ ಕೂಡಿದ ಬಾವಲಿಯ - ತಿದ್ದಿ ಕುಸುರಿಯಿಕ್ಕಿದ ಸರಪಣಿಯ - ಚಿನ್ನ ಸೋಸಲು ಕುಂಕುಮ ರ್ಯಾಕಟೆಯ, ಆಹ ಎಸಳು ಕೇದಿಗೆ ಬಹು ಕುಸುಮವ ಮುಡಿದದ್ದು ವಶವಲ್ಲ ಚೌರಿ ಅರಸಿನ ಪೂಸಿದ ಹೆಣ್ಣ13 ಕಪೋಲ - ಪೊಸ- ಮೌಳಿ ಕೈಯಲ್ಲಿ ಕಡೆÀಗೋಲ - ನೇಣು ಪಾಲಯ ಪಿಡಿದ ಸುಶೀಲ - ಧರೆಯ - ಶೂಲಿಯ ನೆಲೆಸಿದ ಖೂಳನ ಸದೆದು ಹಿ- ಯ್ಯಾಳಿಸಿ ಮೆರೆದ ಗೋಪಾಲನೆಂಬ ಹೆಣ್ಣ14 ರಜತ ಪೀಠ ಪುರಾಧೀಶ - ನಂದ ವ್ರಜದೊಳಾಡಿದ ಸರ್ವೇಶ - ನಮ್ಮ ವಿಜಯವಿಠ್ಠಲ ನಾರಿವೇಷ - ತನ್ನ ನಿಜಭಕ್ತ ಮಧ್ವಮುನೀಶ, ಆಹ ತ್ರಿಜಗ ಮಧ್ಯದಲಿ ನಿಜ ಪದವಿಯನಿತ್ತು ಸುಜನರಿಗೊಲಿದನ್ನ15
--------------
ವಿಜಯದಾಸ
ನೋಡು ನೋಡು ನಾರೀಮಣಿಯೆ ಪ ನೋಡು ನೋಡು ನಿನ್ನಾ ಕಣ್ಮನ ದಣಿಯಾ ಅ.ಪ. ಮುದ್ದು ಸೂಸುವ ಸಲೆ ಮುಗುಳ್ನಗೆ ಮೊಗವಾ ತಿದ್ದಿದ ಕಸ್ತೂರಿ ತಿಲಕದ ಫಣಿಯಾ 1 ಸಾರ ಗಂಭೀರ ಶೃಂಗಾರ ವಿಹಾರಾ ಚಾರು ಸೌಂದರ್ಯವೈಯ್ಯಾರ ಸುಗುಣಿಯಾ 2 ಶ್ರೀದವಿಠ್ಠಲ ಸಾಕ್ಷಾತ್ತ್ರಿಜಗನ್ಮಯಾ ಇಂದ್ರಶರಾ ಜಗನ್ಮೋಹನ ಖಣಿಯಾ 3
--------------
ಶ್ರೀದವಿಠಲರು
ಪತಿ ವಿಠಲ | ರಕ್ಷಿಸೊ ಇವಳಾ ಪ ಪಕ್ಷೀಂದ್ರ ವಹ ಹರಿಯೆ | ಅಕ್ಷಯ್ಯ ಫಲದಾ ಅ.ಪ. ಮೋದ ತೀರ್ಥರ ಪ್ರೀಯಬೋಧಿಸೀ ತತ್ವ ಸಂ | ಧಾನವನೆ ಈಯೋ 1 ಫಣಿ ಶಾಯಿ | ಪ್ರಹ್ಲಾದ ವರದಾ 2 ಭವ ಭಂಗ ಕಳೆಯಲು ಸುಜನಸಂಗವನೆ ಕೊಟ್ಟು ಹರಿ | ಕಾಪಾಡ ಬೇಕೋಸಂಗರದಿ ಮೈದುನನ | ಭಂಗವಿಲ್ಲದೆ ಕಾಯ್ದೆಸಂಗೀತ ಲೋಲ ಸುಖ | ಶೃಂಗಾರ ಮೂರ್ತೇ 3 ಜ್ಞಾನಾನು ಸಂಧಾನ | ಸಾನು ಕೂಲಿಸಿ ಇವಳಪ್ರಾಣ ಪ್ರಾಣನು ನಿನ್ನ | ಧ್ಯಾನ ಮಾಳ್ಪಂತೇಮಾನಸಾದಲಿ ನಿಂತು | ಚೊದನೆಯ ಗೈಯ್ಯುತ್ತಗಾನ ಮಾಡಿಸೊ ದೇವ | ನಿನ್ನ ಮಹಿಮೆಗಳು4 ಪಾವನಾತ್ಮಕ ದೇವ | ಪಾವನ್ನ ತವ ಮಹಿಮೆಆವಾಗಲೂ ತುತಿಪ | ಭಾವವನೆ ಇತ್ತೂ |ಶ್ರೀವರ ಶ್ರೀ ಗುರೂ | ಗೋವಿಂದ ವಿಠ್ಠಲನೆಕಾವುದಿವಳನು ಎಂದು | ಪ್ರಾರ್ಥಿಸುವೆ ನಿನ್ನಾ 5
--------------
ಗುರುಗೋವಿಂದವಿಠಲರು
ಪತಿತಪಾವನ ನಾಮ ಪೂರ್ಣಕಾಮಾ | ಗತಿಯ ಪಾಲಿಸೊ ಎನಗೆ ಗುರುಸಾರ್ವಭೌಮಾ ಪ ಹದಿನಾರು ಸಾವಿರ ಸುದತಿಯರೆಲ್ಲರು | ತ್ರಿದಶವಿರೋಧಿಯ ಸದನದಲ್ಲಿ || ಮದದಿಂದ ಸೆರೆಬಿದ್ದು ಹದುಳ ಕಾಣದೆ | ಸುತ್ತಿಸಿದರು ಮನದೆ ನಾರದನಿಂದ ನಲಿದಾಡಿ1 ಕಾರ್ತಿಕ ಮಾಸದಲಿ ಕಾಂತೆಯ ಒಡಗೂಡಿ | ಕಾರ್ತರಥವನೇರಿ ಕೀರ್ತಿಪುರುಷಾ || ಧೂರ್ತನ ಕೊಂದು ಬಾಲೆಯರಾರ್ತವ ಪರಿಹರಿಸೆ | ತೀರ್ಥಧರಾದಿಗಳು ನರ್ತನದಲಿ ಪೊಗಳೆ 2 ಇಂದುಮುಖಿಯರ ಬಂಧನ ತರಿದವರು | ಅಂದು ಉತ್ಸಾಹದಿಂದ ದ್ವಾರಾವತಿಗೆ || ಮಜ್ಜನ ಮಾಡೆ | ಮಂದಾರ ಮಳೆ ನಭದಿಂದ ಸುರಿಯೆ 3 ದೇವ ಶೃಂಗಾರವಾಗೆ ವೇದಾದಿಗಳು ನಿಂದು | ತಾವೆಲ್ಲ ಮಣಿಭೂಷಣಾವಳಿಯಿಟ್ಟು || ನೋವ ಪೋಗಾಡಿಸಿ ಪಾವನರಾಗಿ ಸುಖ- | ವನಧಿಯೊಳು ಮೀಯುತ್ತ ಕೊಂಡಾಡೆ 4 ನರಕಾಸುರನ ಕೊಂದು ಇರಳು ಈ ಪರಿಯಲ್ಲಿ | ಹರಿಮಾಡಿದ ಚರಿತೆ ತಿಳಿದುದನು- || ಚ್ಚರಿಸಿದವನ ಕುಲ ನರಕದಿಂದುದ್ಧಾರ | ಮೊರೆಹೊಕ್ಕೆ ಇದÀಕೇಳಿ ವಿಜಯವಿಠ್ಠಲರೇಯಾ 5
--------------
ವಿಜಯದಾಸ
ಪತಿವ್ರತೆ ಹ್ಯಾಂಗಿರಬೇಕು ನಿಜವಾಗಿ ಪ ರತಿಪತಿಪಿತನನ್ನು ಪತಿಯಲ್ಲಿ ನೆನೆಯುತ್ತ ಅ.ಪ. ಹೊತ್ತಾರೆ ಏಳಬೇಕು ಪತಿಗೆ ವಂದಿಸಬೇಕು ನಿತ್ಯತುಳಸಿಗೆರಗಿಕೃತ್ಯಮಾಡಲಿಬೇಕು ಅತ್ತೆಮೆಚ್ಚಿಸಬೇಕು ತೊತ್ತಿನಂತಿರಬೇಕು ರತಿಯ ನೀಡುತ ಪತಿಗೆ ಹಿತದಿಂದ ಬಾಳಬೇಕು 1 ಮಿತಮಾತು ಇರಬೇಕು ಸುತರ ಪಾಲಿಸಬೇಕು ಮತಿಮತದಿ ನಡಿಬೇಕು ಅತಿಥಿ ಪೂಜಿಸಬೇಕು ವ್ರತನೇಮ ವಿರಬೇಕು ಗತಿ ಹರಿಯೆ ತಿಳಿಬೇಕು ಮಾತ್ಸರ್ಯಬಿಡಬೇಕು ತೃಪ್ತಿಯಿರಲಿಬೇಕು 2 ನೆರೆಹೊರೆ ಗಂಜಬೇಕು ತಿರುಗೋದು ಬಿಡಬೇಕು ತಿರಿ ತಿಂಡಿ ಬಿಡಬೇಕು ಹರಟೆಗಳ ಬಿಡಬೇಕು ಹರಿಕಥೆ ಕೇಳಬೇಕು ಹರಿದಿನ ಮಾಡಬೇಕು ಹರಿಯ ಪಾಡಲಿಬೇಕು 3 ನೆಟ್ಟಕುಂಕುಮ ಬೇಕು ಕೆಟ್ಟವರ ಬಿಡಬೇಕು ಕಟ್ಟಿ ಆಶೆಯ ಬಿಟ್ಟು ತೃಪ್ತಿಯಿಂದಿರಬೇಕು ಕಷ್ಟಬಂದರು ಬಹು ಗುಟ್ಟಿನಿಂದಿರಬೇಕು ನೆಂಟರೊಡನೆ ಕಠಿಣ ನಿಷ್ಟೂರ ಬಿಡಬೇಕು 4 ಚುಚ್ಚಬಾರದು ಚಾಡಿ ಬಿಚ್ಚಬಾರದು ಗಾಡಿ ಹಚ್ಚಬಾರದು ವಿಷಯ ಕೊಚ್ಚಬಾರದು ಜಂಭ ಹುಚ್ಚಳಂತಿರದ್ಹಾಂಗೆ ಸ್ವಚ್ಚನಡತೆಯು ಬೇಕು 5 ಪಾಪವ ತೊರಿಬೇಕು ಲೇಪನವ ಬಿಡಬೇಕು ಕೋಪವ ಬಿಡಬೇಕು ಕಪಟತ್ವ ಬಿಡಬೇಕು ರೂಪ ಮದವ ಬಿಟ್ಟು ಚಪಲತ್ವ ತೊರಿಬೇಕು ವಿಪರಿತ ಮಡಿಬಿಟ್ಟು ಶ್ರೀ ಪತಿಯ ನೆನಿಬೇಕು 6 ಅಂಗ ಶುದ್ಧಿಯು ಬೇಕು ಶೃಂಗಾರ ರಸಬೇಕು ನಗೆಮೊಗವಿರಬೆಕು ಸವಿಮಾತು ಗುಣಬೇಕು ಭಂಗಾರ ವಿಡಬೇಕು ರಂಗಗೆನ್ನಲಿ ಬೇಕು ಮಂಗಳಾಂಗ ನಮ್ಮ “ಶ್ರಿ ಕೃಷ್ಣವಿಠಲ” ನ್ನ ಹಿಂಗದೆ ನೆನೆಬೇಕು ಅಂಗಿನೀಗಲಿ ಬೇಕು 7
--------------
ಕೃಷ್ಣವಿಠಲದಾಸರು
ಪರ ಬೊಮ್ಮ ಸುಜ್ಞಾನವನರಿಯದ ಮನುಜನ ಪ ಮುಖವ ತೊಳೆದು ನಾಮವನಿಟ್ಟೆನಲ್ಲದೆಸುಖತೀರ್ಥಶಾಸ್ತ್ರವನೋದಿದನೆಸುಖಕೆ ಶೃಂಗಾರಕೆ ಮಾಲೆ ಹಾಕಿದನಲ್ಲದೆಭಕುತಿ ರಸದಲ್ಲಿ ಮುಳುಗಿದೆನೇನಯ್ಯ 1 ಊರು ಮಾತುಗಳಾಡಿ ದಣಿದೆನಲ್ಲದೆನಾರಾಯಣ ಕೃಷ್ಣ ಶರಣೆಂದೆನೆನಾರಿಯ ನುಡಿ ಕೇಳಿ ಮರುಳಾದೆನಲ್ಲದೆಗುರುಹಿರಿಯರ ಮಾತ ಮನ್ನಿಸಿದೆನೇನಯ್ಯ2 ನರೋತ್ತಮರಿಗಧಿಕ ಗಂಧರ್ವರಿಗಧಿಕಸುರೇಂದ್ರಗಧಿಕ ಹರಗಧಿಕವಿರಿಂಚಿಗಧಿಕ ಸಿರಿಗಧಿಕಹರಿ ಸರ್ವೋತ್ತಮನೆಂದು ತಿಳಿದೆನೇನಯ್ಯ3 ಜಗತು ಸತ್ಯವೆಂದು ಪಂಚಭೇದವ ತಿಳಿದುಮಿಗೆ ರಾಗದ್ವೇಷಂಗಳನು ವರ್ಜಿಸಿಭಗವಂತನ ಲೀಲೆ ಶ್ರವಣ ಕಥೆಗಳಿಂದನಿಗಮಗೋಚರನೆಂದು ತಿಳಿದೆನೇನಯ್ಯ 4 ಗಂಗೆಯಲಿ ಮೈ ಬಣ್ಣ ತೊಳೆದೆನಲ್ಲದೆ ಭವಹಿಂಗುವ ಸ್ನಾನವ ಮಾಡಿದೆನೆರಂಗವಿಠಲನ ನಿಜವಾದ ದಾಸರಸಂಗ ಸುಖವೆಂದು ತಿಳಿದೆನೇನಯ್ಯ 5
--------------
ಶ್ರೀಪಾದರಾಜರು
ಪರಮ ಪದವಿಯೆ ಶ್ರೀರಂಗಂಪರವಾಸುದೇವರೆ ಶ್ರೀರಂಗಂ ಪ ವೇದನಾಲ್ಕು ಶೃಂಗಾರವಾದಓಂಕಾರ ವಿಮಾನವೆ ಶ್ರೀರಂಗಂಸಾಧಿಸಿ ಪೂರ್ವಾಚಾರ್ಯರು ನೆಲಸಿಹಆದಿ ವಿಮಾನವೆ ಶ್ರೀರಂಗಂ 1 ಸತ್ಯಲೋಕದಲಿ ಬ್ರಹ್ಮನು ಪೂಜಿಪವಸ್ತು ವಿಮಾನವೆ ಶ್ರೀರಂಗಂಭಕ್ತಿಗೆ ಇಕ್ಷ್ವಾಕುರಾಯಗೊಲಿದು ಬಂದಉತ್ತಮಾಯೋಧ್ಯವೆ ಶ್ರೀರಂಗಂ2 ತ್ರೇತಾಯುಗದಿ ವಿಭೀಷಣನಿಗೆ ರಘುನಾಥನು ಕೃಪೆ ಇತ್ತ ಶ್ರೀರಂಗಂಪ್ರೀತಿಸಿ ದಕ್ಷಿಣಭೂಮಿಯೊಳಗೆ ರಂಗನಾಥ ನೆಲಸಿಹ ಶ್ರೀರಂಗಂ 3 ಮುನ್ನ ಕಾವೇರಿ ಉಭಯ ಮಧ್ಯದೊಳಿನ್ನು ಶೋಭಿಪುದೆ ಶ್ರೀರಂಗಂಸನ್ನುತ ಭಕ್ತರ ಸಲಹುವ ಬಿರುದಿನೊಳಿನ್ನು ತೋರುವುದೆ ಶ್ರೀರಂಗಂ4 ಶೇಷನ ಮೇಲೆ ಪವಳಿಸಿ ಲಂಕಾದೇಶವ ನೋಡುವ ಶ್ರೀರಂಗಂಶ್ರೀಸಿರಿನಾಯಕೀ ರಮಣಕೇಶವರಾಯರ ಮಹಿಮೆಯೆ ಶ್ರೀರಂಗಂ 5
--------------
ಕನಕದಾಸ
ಪರಮ ಸಾಹಸವಂತ ಧೀಮಂತ ಹನುಮಂತ ಪ ಸರಸರನೆ ತಾ ಬೆಳೆದ ತಾ ಮುಗಿಲ ಪರ್ಯಂತ ಅ.ಪ. ಇಳೆಯಿಂದ ನಭವ ಪರಿಯಂತವೇಕಾಕೃತಿಯು ಬೆಳಗುತಿರೆ ನೋಡಲತಿ ಚೋದ್ಯವು ವಿಲಸಿತದ ವಿಂಧ್ಯಗಿರಿಯಂತೆ ಶೋಭಿಸಿತು ಫಲಗುಣಾಗ್ರಜ ನೋಡಿ ಬೆÉರಗಾಗುತಿರಲು 1 ಪಿಂಗಾಕ್ಷಿಗಳು ದಿಕ್ತಟಂಗಳನು ಬೆಳಗುತ್ತ ಕಂಗೊಳಿಸುತಿರ್ದುದಾ ಸಮಯದಿ ಶೃಂಗಾರ ಕಾಂತಿಯಿಂ ತುಂಗವಿಕ್ರಮನ ಉ ತ್ತುಂಗ ದೇಹವು ದಿವ್ಯರಂಗು ಒಡೆದೆಸೆಯೆ 2 ಶರಧಿಶತಯೋಜನ ನೆರೆದಾಂಟಿದಾ ದೇಹ ಅರಿಭಯಂಕರ ದೇಹ ಗುರುತರದ ದೇಹ ಕರಿಗಿರೀಶನ ಚರಣ ಸರಸೀರುಹ ದ್ವಂದ್ವ ಪರಿಚರ್ಯಕ್ಕನುವಾದ ಪರಮದೇಹವಿದೆನಲು 3
--------------
ವರಾವಾಣಿರಾಮರಾಯದಾಸರು
ಪರಮೇಶ್ವರಾ ಕರುಣಾಕರಾ ಗಿರಿಜಾಪ್ರಿಯ ಸೋಮಶೇಖರಾ ಪ ಸಾರ ಶರನಿಧಿ ಗಂಭೀರ ಸ್ಮರಹರಾ ಉದಾರ, ಪಾಹಿಶಂಕರ ಅ.ಪ ಕಮಲಾಕ್ಷ ಮಿತ್ರ ಕಮನೀಯಗಾತ್ರ ಅಮರಾರಿ ವೇತ್ರ ವಿಮಲಾ ತ್ರೀನೇತ್ರಾ ರಮಣೀಯ ಚಾರಿತ್ರ ಹಿಮಶೈಲಜಾಪಾತ್ರ ಅಮರೇಂದ್ರನುತ ಗೋತ್ರ ಶರಣಾತಪತ್ರ 1 ಉರಗ ವಿಭೂಷಣ ಪರಿಜನ ತೋಷಣ ಸುರನದಿ ರಮಣಾ ಭವಭಯ ಭೀಷಣ ದುರಿತ ನಿವಾರಣ ಪರಮ ಕೃಪಾಗುಣ ಪರಶಿವ ಮಾಂಗಿರಿಶೃಂಗಾಭರಣಾ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್