ಒಟ್ಟು 386 ಕಡೆಗಳಲ್ಲಿ , 74 ದಾಸರು , 277 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನುವೆನ್ನದು ಚೇತನವೆನ್ನದು ಎಂದು ಅನುದಿನ ಪೋಷಣೆಯನು ಮಾಡಿದೆ ಹರಿ ಪ ಚಿನುಮಯ ನಿನ್ನನು ನೆನೆವೆಂನೆಂzರÀಮನ ತನುಮಧ್ಯೆಯರತನು ವಿನೊಳಿರುತಿಹುದು ಅನಘ ನಿನ್ನನು ನೋಡುವೆ ನಾನೆನ್ನಲು ದೃಷ್ಟಿ ಕನಕಾಂಗಿಯರ ಕುಂಭಸ್ತನದ ಮೇಲಿಹುದಯ್ಯ 1 ಚರಣದ ಪೂಜೆಯೊಳಿರುವೆನೆಂದರೆ ಕರವೆರಡು ಕೋಮಲೆಯರ ನರಸುವುವು ಹರಿಕಥಾಶ್ರವನದೊಳಿರದೆ ಈ ಕಿವಿಗಳು ಹರಿಣಾಕ್ಷಿಯರ ಕಂಠ ಸ್ವರಕೆಮೋಹಿಪವಯ್ಯ 2 ದುರಿತದೂರನ ನಾಮಸ್ಮರಿಸದು ನಾಲಿಗೆ ಸರಸಿಜಾಕ್ಷಿಯರೊಳು ಸರಸ್ತೋಕ್ತಿಪಡೆದು ಚರಣ ಶ್ರೀ ತುಳಸಿಯ ನರಿಯದೆ ನಾಸಿಕ ತರುಣಿಯ ಮೈಗಂಪನರಸಿ ಹಿಗ್ಗುವದಯ್ಯ 3 ನಿನ್ನಂಘ್ರಿಗೆರಗದೆ ಕುನ್ನಶರೀರ ವಿದುನ್ನತಸ್ತನವುಳ್ಳ ಕನ್ನೆಯರೋಳ್ ತನ್ನ ಸುರತಸುಖವನ್ನ ಚಿಂತಿಸುವದು ಯನ್ನಾಧೀನದೊಳಿಲ್ಲ ನೀನೇ ಬಲ್ಲಿ 4 ಎರವಿನ ಸಿರಿಯಂತೆ ಕರಣಕಳೇವರ ಬರಿದೆ ನನ್ನದು ಎಂದು ಮೆರೆದೆ ನಾನು ದುರಿತ ಕೃತಕೆನ್ನ ಗುರಿಮಾಡದೆ ಕಾಯೋ ವರದ ವಿಠಲ ಕೃಷ್ಣ 5
--------------
ಸರಗೂರು ವೆಂಕಟವರದಾರ್ಯರು
ತಪ್ಪ ಪಾಲಿಸಿಕೊಳ್ಳೊ ಜೀಯಾ ತಿಮ್ಮಪ್ಪ ವೆಂಕಟಗಿರಿರಾಯ ಪ. ಬಪ್ಪ ತನ್ನಯ ಭಕ್ತ ಜನರ ಬವಣೆಗಳ ನೊಪ್ಪನೆಂಬ ಬಿರುದಿಪ್ಪ ಭಾಸುರಕಾಯ ಅ.ಪ. ಅರವಿಂದ ಸಖನುದಯಿಸಲು ಅಜ ಗರನಂತೆ ಬೀಳುವ ತಪ್ಪು ಗುರು ಹಿರಿಯರ ಜರಿವಂಥ ತಪ್ಪು ನಿನ್ನ ಸ್ಮರಣೆಯ ಮಾಡದ ತಪ್ಪು ನಿತ್ಯ ಕರ್ಮಗಳ ಬಿಡುವ ತಪ್ಪು ಸ್ಥಿರ ಚಿತ್ತದಲಿ ನಿನ್ನ ಚರಣಾರಾಧಿಸದಂಥ 1 ಸಂಧ್ಯಾ ಕೃತ್ಯಗಳ ಕಾಲದಲಿ ಪರ ನಿಂದೆಯ ಮಾಡುವ ತಪ್ಪು ದಿವ್ಯ ಶ್ರೀ ಗಂಧ ಶ್ರೀ ತುಳಸಿ ಪುಷ್ಪಗಳ ತಾನೆ ತಂದಿರಿಸದ ಮಹಾ ತಪ್ಪು ಮಿಂದು ಮಡಿಯೊಳಿದ್ದು ಮರುಳನಾಗಿ ನಿಜ ಮಂದಗಮನೆಯಳ ಮಾತನಾಲಿಸುವಂಥ 2 ಮನ ವಚನಾದಿಗಳಿಂದ ಪರ ವನಿತೇರ ಸ್ಮರಿಸುವ ತಪ್ಪು ಪುಣ್ಯ ದಿನಗಳ ತ್ಯಜಿಸುವ ತಪ್ಪು ಪರ ಧನಾಭಿಲಾಶಿಯ ತಪ್ಪು ಕನಸಿಲಾದರು ನಿನ್ನ ನೆನೆಯದೆ ಸತಿಸುತ ತನುವೆನ್ನದೆಂಬ ಚಿಂತನೆಯಿಂದ ಬಳಲುವ 3 ನೇಮ ವ್ರತಗಳೆಲ್ಲ ಮರತು ಸೌಖ್ಯ ಕಾಮುಕನಾಗಿಹ ತಪ್ಪು ಬಹು ಪಾಮರವೃತ್ತಿಯ ತಪ್ಪು ನಿನ್ನ ದಯ ಶೋಭಿಸದಂಥ ತಪ್ಪು ಆ ಮಹಾ ಮಂತ್ರಗಳ ಜಪಿಸದ ತಪ್ಪು ಕಾಮಿನಿಯರ ಮೋಹಕ್ಕೊಳಗಾಗಿ ಬಳಲುವ 4 ನರಗುರಿಯಾದೆನ್ನ ತಪ್ಪ ನೋಡೆ ಹುರುಳು ಗಾಣುವುದುಂಟೆನಪ್ಪ ಸರ್ವ ಸ್ಥಿರ ಚರಾದಿಗಳೊಳಗಿಪ್ಪ ಲಕ್ಷ್ಮೀ ವರನಿತ್ಯ ಸತ್ಯ ಸಂಕಲ್ಪ ಪರಮ ಪಾವನ ಶ್ರೀಮದುರಗೇಂದ್ರ ಗಿರಿವಾಸ ಕರುಣದಿಂದೆನ್ನನುದ್ಧರಿಸಿ ರಕ್ಷಿಸು ಬೇಗ 5
--------------
ತುಪಾಕಿ ವೆಂಕಟರಮಣಾಚಾರ್ಯ
ತಾ ಕಾಯುತಿದ್ದ ಕೃಷ್ಣನು ಗೋಪಾಲರನೂಗೋಕುಲದಲ್ಲಿ ಗೂಢನೂ ಪುೀಕುಂಭಿನಿಯೊಳಗಿರುತಿಹ ದುಷ್ಟರನೂಕುವ ಬಿಲದಲಿ ಅನುಪಮ ಧೀರಾ ಅ.ಪಅಸಿತ ಪಕ್ಷವು ಬಂದುದೂ ಮಾಸಗಳೊಳುಎಸೆವೇಕಾದಶಿಯೆಂಬುದು ಬರಲು ಅಂದುಬಸವಾಸುರಾನಾ ಬಡಿದು ತಾನಂದು ವ್ರಜದಿ ವಸುಧೇಶ ನಿದ್ದನೊಲಿದು ಅಸುರನು ಅಳಿಯಲು ಆ ವ್ರಜವುಳಿಯಲು ಹಸುಗಳು ಹೆಚ್ಚಲು ಹರಿ ತಾನಲಿಯಲು ವಸಗೆವ್ರಜದೊಳಗೆ ಬಹುಮಸಗೆ ಹೆಸರಾಗೆ 1ದ್ವಾದಶೀ ದಿವಸಾದಲ್ಲಿ ಉದಯಕಾಲವಾದುದು ''ತದಲ್ಲಿ ಶ್ರೀಕೃಷ್ಣನಿಗೆಬೋಧವಾಗಲು ಬೇಗದಲಿ ಬಾಲರು ಸಹಾ ಮಾಧವಾ ಮುದದಿಂದಲಿಕಾದಿರೆ ಗೋವ್ಗಳ ಕಾನನಮಧ್ಯದಿಕಾದಲು ಬಂದಾ ಕೇಶಿಯನುದಯದಿಕಾದಿ ಅಸುವಸಿಗಿದಿ ವೊದ'ದೀ ಈ 'ಧದಿ 2ವೃಂದಾಖ್ಯವಾದವನಾದಿ ಗೋಪಾಲಕರಾ ವೃಂದದಾ ವರಸ್ತೋಮವಾಮದಿ ನಿಂದಿದ್ದನಾಗಾಕಂದರ್ಪಕೋಟಿತೇಜದಿ ಕುಂಭಿನಿಯನ್ನು ಹೊಂದಿಸಿದನು ಹರುಷದಿ ಮಂದರಧಾರನು ಮಂಜುಳ ಮ'ಮನು ನಿಂದಿಹ ನೀರನು ನಿಜಗುಣಧಾಮನು ಅಂದು ಅಜಬಂಧು ತಾನೆಂದೂ ಅಲ್ಲಿನಿಂದು3ಘನ ನೀಲಾಳಕದ ವೃಂದ 'ುಶ್ರಿತವಾದಾಮಣಿಮಯ ಮಕುಟದಿಂದಾ ಮೂಡುವ ಕಾಂತಿಪಣೆಯಲ್ಲಿ ಮೊಳೆಯುವಂದಾ ಕಸ್ತುರಿತಿಲಕ ಗಣನೆಗೆ ಬರುವ ಛಂದಾ ಗುಣಿಸುವರಾರಿದ ಗುಣನಿಧಿಯೊಪ್ಪಿದ ಪ್ರಣತಪ್ರೇಮದ ಪದ ಮುಖ ಪದ್ಮದಗುಣನೂ ಗುರುತರನೂ 'ನಯವನೂ 'ವರಿಪನೂ 4ಸಿಂಗಾರಿಯ ಸೋಲಿಸುವಾ ಸುಭ್ರುವದಿಂದಾಮಂಗಳವಾದ ಮುಖದ ಮನ್ನಿಸುತಿಹಕಂಗಳ ಕೋಡಿವರಿವಾ ಕಟಾಕ್ಷವನ್ನೂ ಸಂಗಿಸಿದ ಸುಸ್ಮಿತವಾ ತೊಂಗುತ ತೋರಲು ತನ್ನಾಸಿಕವೂರಂಗಿಸಿ ರಾಜಿಸೆ ರದನಚ್ಛದವೂಹೊಂಗೆ ುೀರಂಗೆ ನೋಳ್ಪಂಗೆ ಭವ'ಂಗೆ 5ಕುಂಡಲಗಳ ಕಾಂತಿಯೂ ಕರ್ನಾಗಳಲ್ಲಿಮಂಡಿತವಾಗಿ ಮತ್ತೆಯೂ ಮುಕುರದಂಥಾಗಂಡ ಸ್ಥಳಗಳಲ್ಲಿಯೂ ಗೋಚರಿಸುತ ದಿಂಡಾಗಿ ತೋರೆ ದೀಪ್ತಿಯೂ ಪುಂಡರೀಕಾಕ್ಷನು ಪೊಳೆಯುತಲಿದ್ದನು'ಂಡುತ ಖಳರನು ಹೆದರುವ ಜನರನುಕಂಡೂ ಕರಕೊಂಡೂ ಕೈಕೊಂಡೂ ಹುರಿಗೊಂಡೂ6ವೇಣುವ 'ವರಿಸಲು 'ೀರನಾ ಮುದ್ದೂತಾನೊಂದು ತೇಜ ತೋರಾಲು ಅಂಗುಲೀಗಳುಅನುಕೂಲಗಳಾಗಾಲು ಉಂಗುರಗಳೊಳು ಮಾಣಿಕ್ಯಗಳು ಮೂಡಲುಭಾನುವ 'ುೀರಲು ಬಾಹುಗಳೊಪ್ಪಲುಗಾನಗಳಾಗಲು ಗೋವ್ಗಳು ಕೇಳಲುತಾನು ತೋರಿದನು ಜಾಣುವನು ಜಗಧರನೂ 7ಭೋಗಿಯ ಭೋಗದ ಹಾಗೆ ಬಾಹುಗಳಿರೆತೂಗಿ ಜಾನುಗಳ ತಾಗೆ ಕೇಯೂರಗಳರಾಗ ರಂಜಿತಗಳಾಗೆ ಕಂಕಣವಲಯ ಯೋಗದಿಂದಿರೆ 'ೀಗೆಆಗಿನ ಕಾಲದಲಮರಿದ ಶೃಂಗದುೀಗುರು ಕೃಷ್ಣನ ಇಷ್ಟ ಕೊಳಲಿನಯೋಗೀ ಇಹಭಾಗೀ ಗತರಾಗೀ ಗುರಿಯಾಗೀ8ಕಂಬುಕಂಧರದಿಂದಲೂ ಅಲ್ಲಿರುತಿಹತೊಂಬೆ ತಾರಹಾರಗಳು ಲಕ್ಷ್ಮಿಯು ತಾನುಇಂಬೀನುರದಲಿರಲು ಕೌಸ್ತುಭಕಾಂತಿ ತುಂಬಿ ನಾಭಿಯ ತಾಕಲುಅಂಬುಜ ಸಂಭವನಾಲಯ'ರಲುಜೃಂಭಿಸಿ ಮಾಲೆಯು ಜೋಲಿಡುತಿರಲೂನಂಬೀ ಬಹುತುಂಬೀ ುಹವೆಂಬೀ ಜಗದಿಂಬೀ 9ಕಟಿತಟದತಿಶಯವು ಕಾಂಚಿಯಧಾಮಾಸ್ಪುಟವಾಗಿ ಸ್ವರ್ಣವಸ್ತ್ರವು ಊರುಗಳಲ್ಲಿಗೆಘಟಿಸಿರೆ ಗೂಢವಾದವೂ ಜಾನುಗಳಿಂದ ಪಟು ಜಂಘೆ ಪುದುಗಿಹವೂಕಟಕಗಳಿಂದಲು ಕಡುಚೆಲುವೆನ್ನಲುಅಟಸುತಲಡಿಗಳು ಅತಿಮೃದುವೆನ್ನಲುದಿಟನೂ ನರನಟನೂ ಭವತಟನೂ ಪಟುತರನೂ 10ಕಮಲ ಸೋಕಲು ಕಂದುವ ಲಕ್ಷ್ಮೀಯಕರಕಮಲಕೆ ಕಾಂತಿಯನೀವ ಯೋಗಿಯ ಹೃದಯಕಮಲದಿ ಕುಳಿತಿರುವ ುೀ ದಿವ್ಯಪಾದ ಕಮಲವಕಾಣಿಸುವಾಕಮಲೆಯ ಕಾಂತನ ಕಮಲಜ ಜನಕನ ಕಮಲವ ಕಾವನ ಕಾಂತಿಯ 'ುೀರ್ವನಕ್ರಮವೂ ಕಾಮದವೂ ಶ್ರಮ ಶಮವೂ ಶೋಭನವೂ 11ಬಲಿಯ ಬಳಿಗೆ ಬಂಜವು ಭಾಗ್ಯವನಿತ್ತುಸಲ'ದ ಸೌಮ್ಯಗಳಿವು ಬ್ರಹ್ಮನು ಬಂದುತೊಳೆಯಲು ಬಂದು ತೋರುತಿದ್ದವು ಆ ಪಾದಗಳೆ ಇಳೆಯೊಳಗಿರುತಿಹವೂಕಲಿಮಲಹರಗಳು ಕಲಿಗಳ ಕಾವವುತಾಳಿದವು ನಾಗನ ತದ್ವಶವಾಗಲುಸಿಲುಕೀ ಸಿರಿತುಳುಕೀ ಅಘಕಲಕೀ ಅವು ನಿಲುಕೀ 12ಅಂಕುಶವರ'ಂದವು ಧ್ವಜವಜ್ರವಂಕೀತವಾಗಿಯಾಢ್ಯಾವು ಲಕ್ಷ್ಮಿಯ ಕುಚಕುಂಕುಮವನ್ನು ಕದ್ದವು ಭೂ'ುಗೆ ಪಾದ ಪಂಕಜಗಳು ಬಂದಾವುಕಿಂಕರರಭಿಮತ ಕಂಕೆಯನಟ್ಟುತಮಂಕುಗಳೆನಿಸುತ ಮಲೆವರ ಮುರಿಯುತಶಂಕೆ ಸಲೆ ಕೊಂಕೆ ಹೊರೆುಂಕೆ ಸಿರಿಸೋಂಕೆ13ಈ ರೀತಿಯಲಿ ಈಶನು ಇರುತಲಿರೆನಾರದ ಬಂದು ನಿಂದನು ಕಾಣುತ ಕೃಷ್ಣಕಾರುಣ್ಯ ನಿಧಿ ಕೇಳ್ದನು ಕ್ಷೇಮಗಳನು ತೋರುತ ರೂಪವ ತಾನುವಾರಿಜನೇತ್ರನು ವರದವರೇಣ್ಯನು'ುೀರದೆ ಮುನಿಯನು ಮಾತನು ನುಡಿದನುಸಿರೀ ಅನುಸಾರೀ ಬಗೆದೋರೀ ಮುರವೈರೀ 14ಅರಿತನು ಆತನನುವ ಆ ಕಂಸಗಾಗಅರು' ತೋರಿಸಿದರ್ಥವ ಅದು ತನ್ನ ಕಾರ್ಯನೆರವೇರುವತಿಶಯವ ತಾನಾಗಿ ಮುನ್ನ ಪಿರಿದಾಗಿ ಪ್ರೇರಿಸಿರುವಕರುಣಾವನಧಿಯು ಕಾರ್ಯವ ತೋರಿಯುಮುರಹರಮೂರ್ತಿಯು ಮುಂದಿರುವಲ್ಲಿಯುಅರಿತೂ ಅಲ್ಲಿಕುಳಿತೂ ಬರೆಹೊತ್ತೂ ುದಿರಿತ್ತು 15ಕಾಣುತ ಮುನಿಕೃಷ್ಣನ ಮಾನಸದಲ್ಲಿಧ್ಯಾನಿಸಿದನು ದೇವನ ತಾ ಬಂದುದನ್ನುತಾನು ತೋರಿಸಲು ತತ್ತ್ರಾಣ ಬಂದಾಗ ನ'ುಸಿ ಪ್ರಾಣೇಶಗತಿಪ್ರ'ೀಣಾಕೃಷ್ಣಾ ಕಂಸಗೆ ಹೊದ್ದುವ ರೀತಿಗೆಶ್ರೀನಿಧಿಯಾದಗೆ ಸೂಚಿಸಿ ಸ್ವಾ'ುಗೆತಾನು ಅಜಸೂನು ಅರು'ದನು ಅರಿತದನೂ 16ಮಾನುಷಮೂರ್ತಿಯಾಗಿಯೆ ಭೂ'ುಗೆ ಬಂದುಆನತರನು ಆಳಿಯೆ ಅರ್ಥವ ಸಲಿಸಿಧೇನುವಾಗಿಹೆ ಧೊರೆಯೆ ಯೆನ್ನುತ 'ೀಗೆ ಆನತನಾಗುತಲಿಯೆಮಾನಸಪುತ್ರನು ಮಾತನು ನುಡಿದನುಶ್ರೀನಿಧಿ ತಿರುಪತಿ ವೆಂಕಟರಮಣನುತಾನೂ ತಾಳಿದನೂ ಮಾನಸನೂ ಮಾಡ್ದುದನೂ 17
--------------
ತಿಮ್ಮಪ್ಪದಾಸರು
ತಾತ್ವಿಕವಿವೇಚನೆ ಏರಿಸಿ ಏರಿಸಿ ಮಾರುತ ಮ್ವತಧ್ವಜ ಸಾರ ಸುಖಂಗಳ ನಿತ್ಯದಲುಂಬುವ ಯೋಗ್ಯತೆ ಯುಳ್ಳವರೂ ಪ ಈರನ ಮತವೇ ಸಾರವು ಶ್ರುತಿಗಳ ಶೌರಿಯ ಮತವೇ ಈರನ ಮತ ಖರೆ ದೂಡಿರಿ ಸಂದೇಹ ಅ.ಪ ಇಲ್ಲವು ಜಗವಿದು ಭ್ರಾಂತಿಯ ಕಲ್ಪನೆ ಸುಳ್ಳೇ ಎಲ್ಲವು ಬ್ರಹ್ಮನ ಬಿಟ್ಟರೆ ಬ್ರಹ್ಮನೆ ಸತ್ಯವೆನೆ ಅಲ್ಲವು ನುಡಿಯಿದು ಬ್ರಹ್ಮನು ಕಾರಣ ಸುಳ್ಳಾಯಿತು ನುಡಿ ಅಲ್ಲವೆ ಯೋಚಿಸಿ ಕೊಡದು ಈ ಮನವು 1 ಉಂಬುದು ಉಡುವುದು ಕಾಂತೆಯ ಸಂಗವು ನಂಬಲು ಬೇಡಿರಿ ಸುಳ್ಳೇಯೆಂತೆಂನೆ ಸಾಕ್ಷಿಯು ಒಪ್ಪುವುದೇ ನಂಬಲನರ್ಹವೆ ಕಾರ್ಯಸುಕಾರಿಯ ಖರೆ 2 ಒಂದೇ ತೆರವಿಹ ವಸ್ತು ದ್ವಯವಿರೆ ಒಂದನು ಮತ್ತೊಂದೆಂಬುವ ಭ್ರಾಂತಿಯು ಕೊಡುವದೂ ಪೊಂದಿಹ ಹೇಗೆನೆ ಉತ್ತರ ಸಿಕ್ಕದು ಯೋಚಿಸಿ ಕೋವಿದರೆ 3 ಭ್ರಾಂತಿಯ ಪೆಣ್ಣನು ಕೊಡುತ ತಾಸ್ವಾ ತಂತ್ರ ವಿಹೀನನು ಆಗುತ ಮಿಡುಕುವ ದೇವನು ಎನಿಸುವನೆ ಮಂತ್ರಿಸೆ ಬ್ರಹ್ಮನ ನಾನಿಹೆ ನೆಂಬುದ ಭ್ರಾಂತಿಯ ತೊಲಗುತ ಬ್ರಹ್ಮನು ಆಹನೆ ಮನವ ವಿಚಾರಿಸಿರಿ4 ನಾನೇ ಬ್ರಹ್ಮನು ಎಂಬೀ ಜ್ಞಾನವು ತಾನೇ ಬಾರದು ಸಹಜ ವಿದಲವು ಅನುಭವ ವಿರುದ್ಧಾ ತಾನೇ ಬ್ರಹ್ಮನು ಆಗಿರೆ ಭವದೊಳು ನಾನಾ ದುಃಖವ ನುಣ್ಣಲು ಬಂದರೆ ಹುಚ್ಚನೆ ಅವಸರಿಯು5 ಬ್ರಹ್ಮ ದ್ವಯವಿದೆ ಸತ್ಯ ದ್ವಯವಿದೆ ಬ್ರಹ್ಮನು ಆಹುದು ಕೊನೆ ಮಾತೆಂದರೆ ಬ್ರಹ್ಮನು ಶೂನ್ಯನಿಹ ಬ್ರಹ್ಮನು ನಿರ್ಗುಣ ನಂದವಿಹೀನನು ಬ್ರಹ್ಮನ ಗತಿಯೆನೆ ಸರ್ವವಿನಾಶವೆ ಯಾರಿದ ಬಯಸುವರೂ6 ವ್ಯಕ್ತಿತ್ವವು ತಾನಾಶವು ಆಹುದೆ ಮುಕ್ತಿಯು ಯೆಂತೆನೆ ಸರ್ವವಿನಾಶಕೆ ಸಾಧನೆಯೇ ಬತವು ಮುಕ್ತಿಯು ದುಃಖವಿವರ್ಜಿತ ಬರಿಸುಖ ರಿಕ್ತವು ಬರಿಯೆನೆ ಭವವಿದು ವರವೈ ಬೇಡವು ಆ ಮುಕ್ತಿ7 ಸತ್ಯವ ನುಡಿವುದು ವೇದವು ಒಂದೆಡೆ ಮಿಥ್ಯವ ನುಡಿವುದು ಮತ್ತೊಂದೆಡೆಯೆನೆ ಯಾವುದು ಸಿದ್ಧಾಂತ ಮೊತ್ತವ ನೂಕುತ ಕಿಚ್ಚಡಿ ವೇದಕೆ ಮೊತ್ತವ ಕೊಳ್ಳುತ ಒಂದೇ ಅರ್ಥವ ಜೋಡಿಸಿ ಇದು ನೀತಿ8 ಬೌದ್ಧರು ಒಪ್ಪನು ಶ್ರುತಿಗಳ ದೇವನ ವೇದವ ಒಪ್ಪುವ ಮಾಯಾವಾದಿಯ ಬ್ರಹ್ಮನು ಸೊನ್ನೆಯಿಹ ವೈದಿಕ ವೇಷದ ಬೌದ್ಧನ ವಾದವೆ ಶೋಧಿಸಿ ನೋಡಲು ಮತ್ತೇನಿಲ್ಲವು ಚಿಂತಿಸೆ ಸರಿಯಿಷ್ಠೆ9 ತರತಮ ಬಹುವಿಧ ಭೋಗವ ಮುಕ್ತಿಲಿ ಇರುವುದು ಸಿದ್ಧವು ಶೃತಿಗಳ ನಂಬಲು ಜೀವರ ಭಿನ್ನತೆಯು ಸ್ಥಿರವೇ ಆಯಿತು ಇದರಿಂ ಮುಕ್ತಲಿ ಪರಿ ಬಗೆತಾ ವಿದಿತವೆ ಜಗದಲಿ ಭೇದವೆ ಸರ್ವತ್ರ10 ನಾಸ್ತಿಕ ವಾದವ ತಳ್ಳಿರಿ ಆಚೆಗೆ ನಾಸ್ತಿಕ ಬಂದನೆ ತಂದೆಯು ಇಲ್ಲದೆ ಕಾರ್ಯವು ಜಗವಿರಲು ಆತನು ನೊಡಿಹ ಜ್ಞಾನಿಗಳಿಲ್ಲವೆ ಪೊಗಳವೆ ಗೋತತಿಯು11 ಪ್ರಕೃತಿ ವಿಕಾರದ ಜಗವಿದು ವಿದಿತವೆ ವಿಕಲ ವಿಶೇಷದ ಜೀವನು ಹಾಗೆಯೆ ಉಭಯರ ಆಳುವನು ವಿಕಲ ವಿವರ್ಜಿತ ಸಕಲ ಗುಣಾರ್ಣವ ಸಕಲ ನಿಯಾಮಕ ಸರ್ವ ಸಮರ್ಥನು ಇರಲೇ ಬೇಕಷ್ಟೆ12 ನಿತ್ಯವು ಈತ್ರಯ ಸಿದ್ಧವು ಆದರೆ ನಿತ್ಯ ಪರಸ್ಪರ ಸಂಬಂಧ ತ್ರಯ ಜ್ಞಾನವೆ ಪುರುಷಾರ್ಥ ಉತ್ತಮ ನೊಬ್ಬನು ಅಧಮರು ಇಬ್ಬರು ಮತ್ತಿವರಲಿ ಹಾಗಧಮನು ಜೀವನು ಚೇತನ ಪ್ರಕೃತಿ ವರ13 ಸರ್ವ ಸ್ವತಂತನು ಒಬ್ಬನೆ ಇರದಿರೆ ಸರ್ವಾ ಭಾಸವೆ ಜಗವಿದು ಆಹುದು ಪ್ರಭು ದ್ವಯ ಕೂಡುವುದೆ ಸರ್ವಗ ಶಾಶ್ವತ ಪೂರ್ಣಾ ನಂದನು ಸರ್ವ ವಿಚಿತ್ರನು ಮುಕ್ತಿದನಿರದಿರೆ ಪ್ರಭು ಅವನೆಂತಾಹ14 ಶುರುಕೊನೆ ಮಧ್ಯವು ಇದ್ದ ದೇವಗೆ ಬರುವನೆ ಹೊಸ ಹೊಸ ದೇವನು ಪ್ರತಿಪ್ರತಿ ಕಲ್ಪದಿ ಯೋಚಿಸಿರಿ ಇರದಿರೆ ಸಕಲೈಶ್ವರ್ಯವು ಆತಗೆ ತರುವನು ನಂದದ ಸೃಷ್ಠಿಯ ಹೇಗವ ವರಸಮರಿಲ್ಲವಗೆ15 ಸುಳ್ಳಿರೆ ಜಗವಿದು ಪಾಲಿಪ ದೊರೆಯದ ಕಳ್ಳನೆ ಅಲ್ಲವೆ ಅಷ್ಠಕರ್ತುತ್ವವು ಕೂಡುವ ದ್ಹೇಗಿನ್ನು ಎಲ್ಲಾ ಜಗವಿದು ನಿತ್ಯಾ ನಿತ್ಯವು ಎಲ್ಲಾ ಸತ್ಯವೆ ಶ್ರುತಿಗಳ ನುಡಿಗಳು ಭೃತ್ಯರು ಜೀವಗಣ16 ನಿತ್ಯವು ಪ್ರಕೃತಿಯು ಜೀವರು ಈಶನು ಸತ್ಯವು ಇದುಯೆನೆ ಪಂಚಸುಭೇದವು ನಿತ್ಯವೆ ಎಲ್ಲೆಲ್ಲು ನಿತ್ಯ ಸುಖಂಗಳ ಬಯಸುವ ನಮಗವು ಹತ್ತವು ಕಾರಣ ಸರ್ವಸ್ವತಂತ್ರನು ದೇವನೆ ಸತ್ಯವಿದು17 ಚೇತನ ಪ್ರಕೃತಿಯೆ ಲಕ್ಷ್ಮಿಯು ತಿಳಿವುದು ಆತನ ರಾಣಿಯು ನಿತ್ಯಸುಮುಕ್ತಳು ನಿತ್ಯಾವಿಯೋಗಿನಿಯು ಚೇತನ ನಿಚಯದ ಚೇತನ ಹರಿ ಇಹ ಆತನೆ ದೊರೆ ಜಗ ಜಂಗಮ ಸ್ಥಾವರ ಸತ್ತಾದಾಯಕನು 18 ದೋಷ ವಿದೂರ ಅಶೇಷ ಗುಣಾರ್ಣವ ದಾಸ ಪೋಷನಿಜ ಮುಕ್ತಿದ ನಿರದಿರೆ ಭಜಿಸುವದೇಕವನ ಶ್ರೀಶನು ಬಿಡೆ ಜಡ ಚೇತನ ಚೇಷ್ಠೆಯು ನಿಹ ಉಲ್ಲಾಸದಿ ಭಜಿಸುವುದು 19 ಪರಿಮಿತ ಶಕ್ತನು ದೇವನು ಇದ್ದರೆ ಪರಿಮಿತ ಜೀವರ ತೆರವೇ ಆಹನು ಕಾರಣ ನಿಸ್ಸೀಮ ಹರಿಗುಣವಗಣಿತ ಸಿಗ ಸಾಕಲ್ಯದಿ ನಿರುಪಮ ಸುಖಜ್ಞಾನಾತ್ಮಕ ವಿಭುವರ ಅನಾದಿ ಸಿದ್ಧವಿದು 20 ಪ್ರಾಕೃತ ಗುಣಗಣ ವರ್ಜಿತ ದೇವನ ಜ್ಞಾನ ಸುದೃಷ್ಠಿಗೆ ಗೋಚರನು ಸ್ವೀಕೃತ ನಾದರೆ ಜೀವನು ಹರಿಯಿಂ ತಾಕಿಸಿ ದೃಷ್ಠಿಗೆ ತನ್ನನೆ ತೋರುವ ಭಕ್ತರ ಬಾಂಧವನು 21 ತರತಮ ಜ್ಞಾನದಿ ಗುಣ ಉತ್ಕರ್ಷವು ಬರುವುದು ಕಾರಣ ತಿಳಿಯುತ ಹರಿಪರ ಮೋಚ್ಛನು ಹೌದೆನ್ನಿ ಅರಿವುದು ಅತಿಪರಿ ಪಕ್ವದ ಭಕ್ತಿಯ ಮಾಧವ ಮೆಚ್ಚುವನು22 ವೇದಗಳಿಂದಲೆ ದೇವನು ವ್ಯಕ್ತನು ವೇದಗಳಿಂದಲೆ ಧರ್ಮಾಧರ್ಮವಿ ವೇಕವು ಸರಿಯಷÉ್ಠ ವೇದ ನಿಜಾರ್ಥವೆ ಸಚ್ಛಾಸ್ತ್ರಂಗಳು ಮೋದವೆ ದೊರಕದು ಬಿಟ್ಟರೆ ಇವುಗಳ ಸಾದರ ಭಜಿಸುವುದು23 ಬಿಂಬನು ಹರಿ ಪ್ರತಿ ಬಿಂಬನು ಜೀವನು ಬಿಂಬಾಧೀನವು ಪ್ರತಿ ಬಿಂಬನ ಚೇಷ್ಠೆಗಳೆಂತರಿತು ಉಂಬುತ ಮುದದಿಂ ಸುಖದುಃಖಂಗಳ ಬಿಂಬಕ್ರಿಯೆಯೆನುಸಂಧಾನವ ಗುರುವಿಂದರಿತು ಸಮರ್ಪಿಸಿ24 ಮೆಚ್ಚುಲು ಮಾಧವದಾವುದಸಾಧ್ಯವು ಅಚ್ಚುತನೊಲಿಮೆಗೆ ಹೆಚ್ಚಿದುದೇನಿದೆ ಕೊಚ್ಚುತಕಲಿ ಸೊಂಕು ತಚ್ಛಭಿಮಾನ ಫಲೇಚ್ಛೆಯ ತ್ಯಜಿಸುತ ಕಚ್ಛಪ ನೊಲಿಮೆಗೆ ವಿಧಿಯ ನಿಷೇಧವ ಮರೆಯದೆ ಗೈಯುತಲಿ25 ಪರ ಮೋಚ್ಚನು ವರಸಮರಿಲ್ಲವು ಸಿರಿ ವರ ವಿಧಿಪಿತ ಸೃಷ್ಠ್ಯಾದ್ಯಷ್ಠಸು ಕರ್ತನು ವಿಭುವೆಂದು ನಿರುಪಮ ನಿಖಿಳಾಗಮ ಪ್ರತಿ ಪಾದ್ಯನು ಸ್ವರತ ಸ್ವತಂತ್ರನು ಪೂರ್ಣಾನಂದನು ಎನ್ನುತ ಸಾರುತಲಿ26 ಸಾಮನು ಸರ್ವರ ಬಿಂಬನು ಸರ್ವಸು ನಾಮನು ಸರ್ವಾಧಾರನು ಜಡಜಂಗಮ ವಿಲಕ್ಷಣನು ಭೂಮನು ಭಕ್ತ ಪ್ರೇಮಿಯು ಸದ್ಗುಣ ಧಾಮನು ಪೂರ್ಣನು ನಿಜ ಸುಖ ಮುಕ್ತಿದನೆನ್ನುತ ಸಾರುತಲಿ27 ವಿಧಿ ಪರಿಸರ ವಿಪಶಿವ ಪ್ರಮುಖರು ಪರಿವಾರವು ನಿರವದ್ಯನು ಮುಕ್ತಾ ಮುಕ್ತರ ನಾಯಕನು ಉರುಗಾಯನ ಜಗದೊಳ ಹೊರವ್ಯಾಪ್ತನು ಪರಿಮರ ಸ್ವಗತ ಭೇದ ವಿವರ್ಜಿತನೆಂಬುದ ಸಾರುತಲಿ28 ತರತಮ ಪಂಚಸುಭೇದವು ನಿತ್ಯವು ನಿರುತದಲುಂಬುವ ಸಾರವೆ ದುಃಖ ನಿರ್ಲೇಪನು ಅದ್ಭುತನು ಅರಿಯರು ಯಾರೂ ಇವನೇ ವಲಿಯದೆ ಪುರುಷೋತ್ತುಮ ಸಾಕಲ್ಯದವಾಚ್ಯನು ಎಂದು ಡಂಗುರ ಹೊಡೆಯುತ 29 ಗುರುವಿನ ದ್ವಾರವೆ ಹರಿತಾ ವಲಿಯುವ ಗುರುವೆನೆ ಮುಖ್ಯದಿ ಮುಖ್ಯ ಪ್ರಾಣನೆ ಸರಿಸಿರಿ ಯೆಂತೆಂದು ಗುರುಗಳು ಹಿರಿಯರು ಎಲ್ಲಾ ಕ್ರಮದಲಿ ಮಧ್ವರಿಗೊಂದಿಸಿ ಮುದದಿ 30 ಅನುಭವವಿಲ್ಲದ ಜ್ಞಾನವು ವಣವಣ ಸಾಧನೆ ಇದು ಖರೆಯ ಚಿನುಮಯ ನೊಲಿಸಲ್ ಮನೆಧನ ಬೇಡವು ತನುಮನೆ ವಿಷಯಗಳಿಂದಲೆ ಪೂಜಿಪ ಕ್ರಮದಿಂಯಜಿಸುತ 31 ಕಲಿಯುಗವಿದು ವರ ಸುಲಭದಿ ಸಾಧನೆ ವಲಿಯುವ ಬೇಗನೆ ನಾಮ ಸ್ಮರಣೆಗೆ ಭಜಿಸಿರಿ ಹರಿನಾಮ ವಳದಾರಿಯು ಸರಿ ಕ್ರಮದಿಂ ಪಾಡಲು ಮುಳುಗುತ ಭಕ್ತಿಯ ಕಡಲೊಳ್ ನಿಜಹರಿ ದಾಸರು ದೀಕ್ಷೆಯಲಿ32 ಕವಿಗುರು ರಾಜರ ಚರಣದಿ ಬಾಗುತ ಪವನ ಮತಾಂಬುಧಿ ಸೋಮನು ಜಯಮುನಿ ಹೃದಯಗ ವಾಯುವಲಿ ಅವಿರತ ನಲಿಯುವ ಶ್ರೀ ಕೃಷ್ಣವಿಠಲನು ತವಕದಿ ವಲಿಯುವ ಗ್ರಹಿಸಲ್ ಈ ಪದ ಜಯ ಜಯವೆನ್ನುತ33
--------------
ಕೃಷ್ಣವಿಠಲದಾಸರು
ತಾವಲ್ಲಿ ನೆನೆಯಲು ದಶಮತಿ ಗುರುಗಳು ನಾವಿಲ್ಲಿ ಸುಖಿಗಳು ಸುಲಭದಿಂದ ಪ ಪೂರತಿ ಮನದೊಳಗಾಗುವಂತೆ ತಾರಾ ರಮಣನು ತಾ ಮ್ಯಾಲೆ ಉದಿಸಲು ವಾರಿಧಿ ಹರುಷದಿ ಉಕ್ಕುವಂತೆ 1 ತರಣಿ ಕಿರಣ ಪಸರಿಸೆ ಸರೋವರದಲ್ಲಿ ಸರಸಿಜ ವಿಕಸಿತವಾಗುವಂತೆ ವಾರಿದ ಮ್ಯಾಲಿರೆ ತಾ ನೋಡಿ ಮಯೂರ ಮೀರಿ ಹರುಷದಿ ಕುಣಿ ಕುಣಿದಾಡುವಂತೆ2 ವ್ಯಾಸ ದೇವರ ಕೂಡ ಮಾತುಗಳಾಡುವಾಗ ಶುಭ ನಮಗೆ ವಾಸುದೇವವಿಠಲ ಪಾಶದಿಂದಾಡುವಾಗ ವಾಸ ಅಕ್ಷಯವೆನ್ನಿ ಕೃಷ್ಣೆಯಂತೆ 3
--------------
ವ್ಯಾಸತತ್ವಜ್ಞದಾಸರು
ತಾಳರವವನು ತೋರ್ಪೆನು ತಾನೇಳು ವಿಧಗಳಾಗಿ ತಿರುಗುವ ಗತಿಯುಳ್ಳಪಧ್ರುವವೆಂದು ಮಠ್ಯವೆಂದು ಧ್ವನಿಯು ರೂಪಕವೆಂದುತ್ರಿವಡೆ ಜಂಪೆಗಳೆಂದು ತಾವೆರಡುಅವು ಐದು ಗಣನೆಯೊಳಟ್ಟತಾಳವಾರದುಇವರ ಹಾಗೆಕ್ಕ ತಾಳವದೇಳು ಬಗೆಯೆಂಬ 1ಕಾಲ ಮಾರ್ಗವು ಕ್ರಿಯೆ ಕೂಡಿದಂಗಗಳೆಂದುಕೇಳಿ ಗ್ರಹವು ಜಾತಿ ಕಳೆಗಳೆಂದುಆ ಲಯವೆನ್ನುತಲೆತಿ ಪ್ರಸ್ತಾರಕವೆಂದುಈ ಲಲಿತದ ವಸ್ತುುವು ಹತ್ತು ಪರಿಯೆಂಬ 2ಒಂದೊಂದು ಬಹುವಾಗಿಯೊಡೆದು ನಾನಾ ಭೇದದಿಂದ ಗಾನಕೆ ಕೂಡುತಿಷ್ಟವಾಗಿನಿಂದು ನಾದಿಸುತಿವೆ ನಿನ್ನಾಜ್ಞೆ ಯಲಿ ದೇವಇಂದಿದ ತಿರುಪತಿಯೊಡೆಯ ಲಾಲಿಸು ಕೃಷ್ಣ 3ಓಂ ತಮಾಲಶ್ಯಾಮಲಾಕೃತಯೇ ನಮಃ
--------------
ತಿಮ್ಮಪ್ಪದಾಸರು
ದಾಸನಾಗಬೇಕು ರಂಗಸ್ವಾ'ುೀಗುರು ನಿಮ್ಮ ದಾಸನಾಗಬೇಕು ಪದಾಸನಾಗಬೇಕು ಕ್ಲೇಶಪಂಚಕವಳಿದು ಆಸೆಯಲ್ಲಿ ಮನಸೂಸದೆ ಸರ್ವದಾ ಅ.ಪಮನದ ಕಲ್ಮಷ ಕಳೆದು ಮಹಾ ರಾಮಕೋಟಿಗಳ ಮ'ಮೆಗಳನು ತಿಳಿದು ಇನಿತು ಈ ಜಗವೆಲ್ಲ ಶ್ರೀರಾಮಮಯವೆಂದು ಘನವಾದ ಮೋಹದಾ ಗಡಿಯನು ದಾಂಟುತ್ತಾ 1ತನುವು ಅಸ್ಥಿರವೆನ್ನುತಾ ತಿಳಿದು ಈ ದುವ್ರ್ಯಾಧಿಪ್ಲೇಗು ಭಯವಬಿಡುತಾ ಘನವಾದ ರಾಮಕೋಟಿಯಲಿ ನೆಲೆಸುತಾಬಿನಗು ಸಂಸಾರದ ಮಮತೆಯ ಬಿಡುತಾ 2ಆರುಚಕ್ರದಿಮೆರೆವ ಅಖಂಡನಾ ಮೂರುಗುಣವತಿಳಿಪ ಆರುಮೂರದಿನಾರು ತತ್ವಾತೀತನಿಜತೋರಿ ರಾಮಕೃಷ್ಣಾದಾಸನುದ್ಧರಿಸಿದರು 3
--------------
ಮಳಿಗೆ ರಂಗಸ್ವಾಮಿದಾಸರು
ದುಮ್ಮ ದುಮ್ಮೆನ್ನಿ ದುಮ್ಮ ಸಾಲವೆನ್ನಿ ಪ ನರಜನ್ಮ ಫಾಲ್ಗುಣ ಪೌರ್ಣಿಮೆ ಬಂದಿದೆ | ಮರಿಯ ಬ್ಯಾಡಿ ತನು ಧನ ಮನದೀ | ಹರಿದಾಸ ರಾಹವರೆಲ್ಲರು ಹೋಳಿಯ | ಪರಮಾನಂದದ ಲ್ಯಾಡುವ ಬನ್ನಿರಣ್ಣಾ 1 ಜ್ಞಾನಾಗ್ನಿಯ ಪ್ರಜ್ವಲದಿಂದಾ | ಹಮ್ಮೆಂಬ ಕಾಮನ ಹೋಳಿಯದಹಿಸಿ | ಒಮ್ಮನದಿ ನಲಿದಾಡಿರಣ್ಣಾ 2 ಹರಿನಾಮ ಕುಂಕುಮ ಸಾರಿ ಚಲ್ಯಾಡುತ | ಧರಿಸುತ ಹೃದಯ ಶಿರಸದಲಿ | ಕರದಲಿ ವಿಚಾರ ಬೆತ್ತ ಹೊಯ್ದಾಡುತ | ಹರುಷದಿಂದಲಿ ಕುಣಿದಾಡಿರಣ್ಣಾ 3 ಪರಿ ಪರಿ ಸಾಧನ ದೋರಿಸುತಾ | ಕರುಣದಿ ಆಡಿಸುತಿಲ್ಲಿ ನಿಂದಿರಲು | ದುರಿತಭಯಕ ಅಂಜ ಬ್ಯಾಡಿರಣ್ಣಾ 4 ಸಂಚಿತ ಬೂದಿಯ ಚಲ್ಲಿ ಪರಮಾ | ರ್ಥದ ಗಂಗಿಯೊಳು ಮಿಂದು ಶುಚಿಯಾಗಿ | ಪದುಮಾಶ್ರಯದಿಂದ ಗತಿಪಡಿರಣ್ಣಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದುರಿತ ತ್ಯಜಿಸಿರೋ ಪರಮ ಸಾಧ ಐಕೂರು ನರಸಿಂಹಾರ್ಯರ ಪ ಕೃಷ್ಣತೀರದಿ ಮಿಂದು | ಕೃಷ್ಣÀವರನೊಳು ಜಿಷ್ಣು ಸೂತನ ನೋಳ್ಪ | ವಿಷ್ಣು ದಾಸರ 1 ತರುಳತನದಲಿ | ಸದ್ಗುರುವರೇಣ್ಯರ ಚರಣ ಸೇವಿಸಿ ಶಾಸ್ತ್ರವರಿತ ಧೀರರ 2 ಸತತ ನಂಬಿದ ಶಿಷ್ಯತತಿಗೆ ಹರಿಗುಣ ಹಿತದಿ ಸುರಿದ | ಅಪ್ರತಿಮ ಮಹಿಮರ 3 ಪವನ ಶಾಸ್ತ್ರವೇದ | ಕವನವೆನ್ನುತ ವಿವರಿಸುತ್ತಲಿ ತನ್ನವರ ಪೊರೆದರ 4 ಏನು ಬಂದರು ಮನದಿ ಶ್ರೀನಿವಾಸನ ಧ್ಯಾನ ಬಿಡದಿಹ | ಮಹಾನುಭಾವರ 5 ಭಕುತಿ ಜ್ಞಾನವ ತಮ್ಮ ಭಕುತ ವರ್ಗಕೆ ಪ್ರಕಟಗೊಳಿಸಿದ ಇಂಥ | ಮುಕುತಿ ಯೋಗ್ಯರ 6 ಭುವನ ಮೇಲಿಹ ಇವರು ದಿವಿ ಭವಾಂಶರು ರವಿ ನಿಭಾಂಗರು | ಜವನ ಭವಣೆ | ತರಿದರು 7 ಇವರು ಪೇಳುವ ವಚನ ಶ್ರವವಣಗೈಯಲು ಶೌರಿ ಭುವನ ಪಡೆವರು 8 ಕಂತುಪಿತ ಕಥಾ ಸುಧಾ | ಗ್ರಂಥ ಮರ್ಮವ ಆ ದ್ಯಂತ ಬಲ್ಲರು ಪರಮ ಶಾಂತಿ ಶೀಲರು 9 ಮೌನಧ್ಯಾನದ ಜ್ಞಾನ ಖೂನ ತೋರದೆ ಹೀನರಂದದಿ ಹೊರಗೆ ಕಾಣಿಸುವರು 10 ಬಾಲಕೃಷ್ಣನ ದಿವ್ಯಲೀಲೆ ಚರಿತೆಯ ಕಾಲ ಕಳೆಯರು 11 ನಿಂದ್ಯ ವಂದನೆ ಬಂದ ಕುಂದು ಶ್ಲಾಘನೆ ಇಂದಿರೇಶನೆ ತಾನೆ ತಂದ ನೆಂಬರು 12 ಪಾದ ಪೊಂದಿದ ಜನಕೆ | ಮೋದಗರೆವರು ವ್ಯಾಧಿ ಕಳೆದರು ವೇದ ಬೋಧಿಸಿದರು 13 ವಿವಿಧ ವೈಭವ ಮೇಣ್ | ಕುವರ ಭಾಗ್ಯವ ವಿವಿಧ ಭೋಗವ ಶಿಷ್ಯ ನಿವಹಕಿತ್ತರು 14 ನಿತ್ಯ ಪೇಳುತ ಭೃತ್ಯನಿಕರಕೆ ಸಧೃಡ ಚಿತ್ತವಿತ್ತರು 15 ಕಾಮವಾಸನೆ ಸುಟ್ಟು | ನೇಮ ಪೂರ್ವಕ ರಾಮನೊಲಿಮೆಯ | ವಿಶ್ವಪ್ರೇಮವೆಂಬರು 16 ಈ ಸುಮಹಿಮರ | ಸದುಪದೇಶ ಕೊಳ್ಳಲು ಕ್ಲೇಶಬಾರದು | ಯಮನು ಘಾಸೆÉಗೊಳಿಸನು 17 ನಿರಯ ಪಾತ್ರರು 18 ಇನಿತುಪಾಸನೆಗೈವ ಘುನ ಮಹಾತ್ಮರ ಗುಣಗಣಂಗಳ | ತುತಿಸಲೆನಗೆ ಸಾಧ್ಯವೆ 19 ಅರುಣನುದಿಯದಿ | ಇವರ ಚರಣ ಕಮಲವ ಸ್ಮರಣ ಮಾಡಲು | ಹರಿಯ ಕರುಣವಾಹದು 20 ಸಾಮಜವರ ವರದ ಶಾಮಸುಂದರನ ಪ್ರೇಮಪಾತ್ರ ನಿಷ್ಕಾಮ ಪೂರ್ಣರು 21
--------------
ಶಾಮಸುಂದರ ವಿಠಲ
ದುರಿತ ಪೋದವೆನ್ನಿ ಪ ವಾಯುನಂದನನನೆನ್ನಿ | ವರವಜ್ರಕಾಯನೆನ್ನಿ | ರಾಯ ರಾಘವನ ಕಿಂಕರನೆನ್ನಿರೈ | ಛಾಯಾಗ್ರಿಯನ ಕೊಂದು ವನ ಕಿತ್ತಿದನೆನ್ನಿ | ಮಾಯದ ಲಂಕೆಯ ದಹನನೆನ್ನಿರೈ 1 ಪಾಂಡು ಕುಮಾರನೆನ್ನಿ ಪಾಪ ಸಂಹಾರನೆನ್ನಿ | ಉಂಡು ವಿಷವ ತೇಗಿದಾನೆನ್ನಿರೈ | ಲೇಂಡ ಹಿಡಂಬಕನ ಕೊಂದನೆನ್ನಿ | ಚಂಡ ಕುರವಂಶಹತನೆನ್ನಿರೈ 2 ಅಮಿತ ಜೀವಾತ್ಮನೆನ್ನಿ | ಜ್ಞಾನಕೆ ಮೊದಲು ದೇವತಿಯನ್ನಿರೈ | ಕೈವಲ್ಯ ಮಾರ್ಗವೆನ್ನಿ3
--------------
ವಿಜಯದಾಸ
ದೇವ ಗುರುಸ್ತುತಿ ಅಂಗವೇ ಶ್ರೀ ಮಹಾಂಗಿರೀಶ ಲಿಂಗವಾದುದು ಸಂಗ ಸುಖದ ದುರಿತವೆಲ್ಲ ಹಿಂಗಿ ಪೋದುದು ಪ ನಿರ್ಮಲಾತ್ಮ ಗುರುಕಟಾಕ್ಷ ಮರ್ಮಸಿಕ್ಕಿತು ಕರ್ಮ ಹರಿದು ಜ್ಞಾನಜ್ಯೋತಿ ಬೆಳಕು ಮಿಕ್ಕಿತು ಧರ್ಮ ತತ್ವದಮೃತವೆಂಬ ಶರಧಿಯುಕ್ಕಿತು ಪ್ರೇಮದಿಂದ ಪ್ರಕಟವಾದ ಬ್ರಹ್ಮ ದಕ್ಕಿತು 1 ಮಾಯೆಯಿಂದ ಮಮತೆಯೆಲ್ಲ ಸತ್ಯವಾದುದು ನ್ಯಾಯಪಥವ ತಿಳಿಯೆ ಸರ್ವ ಮಿಥ್ಯವಾದುದು ಸಾಯುತೊಡನೆ ಹುಟ್ಟುವುದರ ಭೀತಿಪೋಪುದು ಕಾಯದೊಳಗೆ ದಿವ್ಯಜ್ಯೋತಿ ಪಥ್ಯವಾದುದು 2 ಪರಶಿವಾತ್ಮಲಿಂಗವೆನ್ನ ಮನಕೆ ಸಾರಿತು ತುಂಬಿ ತುಳುಕಿ ಬೀರಿತು ಪರಮಾನಂದರಸದ ಲಹರಿ ಉಕ್ಕಿ ಹರಿಯಿತು 3
--------------
ಭಟಕಳ ಅಪ್ಪಯ್ಯ
ದೇವಾ ನಿನ್ನ ಪಾದವನ್ನು ಯಾವಾಗಲೂ ಸ್ಮರಿಸುವೆನೂ ಭಾವ ಭಕ್ತಿ ಪ್ರೇಮವಿತ್ತು ಕಾವುವೆನ್ನ ಹರಿಯೇ ನೀನು ಪ ದೀನನಾಥನೆಂಬ ಬಿರುದಾ ಮಾನಭಕ್ತರಿಂದ ಪೊರೆದಾ ಹೀನ ದೀನನಾದ ಎನ್ನಾ ಜ್ಞಾನವಿತ್ತು ರಕ್ಷಿಪುದು 1 ಇಂದಿರೇಶ ನಾರಾಯಣಾ ಬೃದದಿಂದಾ ಭಜಿಪೆ ನಿನ್ನಾ ಮಂದಮತಿಯ ಕಳೆದು ನಿಜಾನಂದದೊಳಗಿರಿಸೊ ಯನ್ನಾ 2 ಬೇಡಿಕೊಂಬೆನೀಗ ನಿನ್ನಾ ನೋಡುವುದು ಕೃಪೆಯೊಳೆನ್ನಾ] ಬಿಡಬ್ಯಾಡಾ ಬ್ಯಾರೆನಗೆ ಇಡೊ ಇಡೊ ನಿನ್ನೊಳೆನ್ನಾ 3 ಚಿಂತೆಗಳನ್ನೆಲ್ಲಾ ತೊರಿಸೊ ಸಂತ ಸಂಗದೊಳಿರಿಸೊ ಕಂತುಪಿತನೆ ಗುರುವೆ ಎನ್ನಾ ಶಾಂತಿ ಪದವ ಪಾಲಿಸೊ 4
--------------
ಶಾಂತಿಬಾಯಿ
ದ್ರೋಹಿಯೋ ನಾನಿನಗೆ ದ್ರೋಹಿಯೋ ಪ ಪಾಹಿ ಬ್ರಹ್ಮಜವಂಶ ಪಾಪ ಬ್ರಾಹ್ಮಣ ಪ್ರಿಯ ಅ.ಪ ಸ್ವಪ್ನ ಜಾಗ್ರತೆ ನಿದ್ರೆ ಮೋಕ್ಷಾವಸ್ಥೆಯಲ್ಲಿ ತೈಜಸ ವಿಶ್ವ ಅಪ್ಪತುರೀಯನಾಗಿ ದಾತ ನಿನ್ನನ್ನು ಬಿಟ್ಟು ಬೆಪ್ಪನಂದದಿ ನರರ ಯೆಂಜಲ ಬಯಸುವೆ 1 ಬಿಂಬ ಮೂರ್ತಿಯು ನೀನು ಪ್ರತಿ ಬಿಂಬನಾನಿನಗೆ ತುಂಬಿ ಅಂತರ್ಬಹಿ ಮೆರೆವ ವಿಷ್ಣುವೆ ನಿನ್ನ ನಂಬಿದೆ ದೃಢದಿಂದ ಬರಿದೆ ಹಂಬಲಿಸುವೆ ಬೆಂಬಲನಾಗಿದ್ದು ತುಂಬೊ ನಿನ್ನಯ ಭಕ್ತಿ 2 ಸತಿ ಸುತ ಪಿತರಲ್ಲಿ ತಿಳಿಯದೆ ನಿನ್ನಿರವ ಹಿತರವರು ಬರಿದೆಂಬ ಭ್ರಾಂತಿಯ ನೀಗದೆ ಖತಿಯ ಪಡುವೆನು ಭವದಿ ಕುಮತಿಯನಗೆಮುಂದೆ ಗತಿಯೇನು ಜಗದೀಶ ಮರೆತು ನಿನ್ನನು ದೇವ 3 ಕಸವ ರಸವೆಂದು ಬಯಸುವೆ ವಿಷಯವ ರಸವ ವಿಷವೆಂದು ತೊರೆದು ಜೀವಿಸುತಿರ್ಪೆ ಅಸಮವಿಷಣವಿಷ್ಣು ಆತ್ಮಾಖ್ಯಾತನ ನಿನ್ನ ತುಸಸಹ ನೆನೆಯದೆ ಹುಸಿಯ ದಾಸನಾಗಿ 4 ನನ್ನದಲ್ಲದ ಒಡವೆ ನನ್ನದೆಂದು ತಿಳಿವೆ ನಿನ್ನ ಸ್ವಾಮಿತ್ವವ ಮರದು ಮೆರೆಯುತಿರ್ಪೆ ನನ್ನದೇ ಸ್ವಾತಂತ್ರವೆಂದು ತಿಳಿದು ಭವದಿ ಹುಣ್ಣು ತಿಂದೆನು ದೊರೆಯೆ ಕೊಡದೆ ನಿನ್ನದುನಿನಗೆ 5 ವೇದ ವೋದುವ ನಾನು ನಾನೆನೀನೆಂಬುವೆ ಭೇದವ ತಿಳಿಯದೆ ಭಜಿಸುವೆ ಕುವಿದ್ಯೆ ಬಾದರಾಯಣಗುದರ ಭೇದವ ನುಡಿಯುವೆ ಮಧ್ವಮಂದಿರ ಕೃಷ್ಣ ನೀನಿಲ್ಲ ವೆನ್ನುತ6 ಪೂರ್ಣ ಗುಣದವ ನಿನ್ನ ನಿರ್ಗುಣನೆಂಬುವೆನು ಪೂರ್ಣರಲ್ಲದ ಸುರರ ಸಾಟಿ ನಿನಗೆಂಬುವೆನು ಪೂರ್ಣಬೋಧರ ಕರುಣ ಕೊಡಿಸದ್ದಿದರೆಯಿನ್ನು ಜ್ಞಾನ ಮಾರ್ಗವ ಕಾಣೆ ಸ್ವಾಮಿ ಜಗಜ್ಜನಕ 7 ಜನನ ಮರಣ ರಹಿತ ಜನಿಸುವೆ ನಮ್ಮೊಡನೆ ಕ್ಷಣ ಬಿಟ್ಟಗಲದಲೆಮಗೆ ಉಂಡುಣಿಸುತಿಪ್ಪೆ ಅನಿಮಿತ್ತ ಬಂಧುವೆ ಮರೆತು ನಿಮ್ಮುಪಕಾರ ದನುಜರ ಸೇವಿಸುತ ಹಾಳು ಮಾಡಿದೆ ಬಾಳು 8 ನಿರಯ ಭಾಜನ ನಾದೆ ದೂರವಾಯಿತು ಮುಕುತಿ ದಾರಿಕಾಯುವರ್ಯಾರೊ ಧೀರ ಜಯತೀರ್ಥ ವಾಯು ಅಂತರದಿರ್ಪ ನೀರಜಾಕ್ಷನಮ್ಮ ಶ್ರೀ ಕೃಷ್ಣವಿಠಲನೆ 9
--------------
ಕೃಷ್ಣವಿಠಲದಾಸರು
ದ್ವಂದ್ವಾತೀತನ ಮಾಡೋ ನಿದ್ರ್ವಂದ್ವನೆ ಪ ಸರ್ವಕಾಲದಿ ನೀನೆ ಸರ್ವಸ್ವವೆನ್ನುತ ಉರ್ವಿಯೊಳಾನಿರ್ಪ ಪರಿತೋರು ದೇವಾ 1 ಸರ್ವೇಶ ಕರ್ಮಗಳೆಲ್ಲವ ನಿನಗಿತ್ತು ಗರ್ವವರ್ಜಿತನಾಗಿಹುದನ್ನು ನೀಡೈ 2 ಈಶ ನೀನೆನ್ನೊಳು ವಾಸಿಸುವವನಾಗಿ ಭಾಸಿಪುದನು ತೋರು ಜಾಜೀಶಾಶಾ 3
--------------
ಶಾಮಶರ್ಮರು
ಧರೆಯನಾಳುವನೊಬ್ಬ ದೊರೆ ಜೈಶೀಲನಾ ಹರದಿ ಮಂಜುಳೆಯಿರಲು ಮಕ್ಕಳಿಗಾಗಿ ಮರುಗುತ ಸೊರಗಿರಲು ಈ ಪರಿಯ ನೋಡುತ ಹರನು ಬ್ಯಾಗ ತಾ ತಿಳಿದವರ ಮನ ತಿರುಕನಂದದಿ ಬರಲು ಧಾನ್ಯವ ಕರೆದು ನೀಡಿದರೊಲ್ಲದಾಗಲೆ ತಿರುಗಿ ಪೋದನೆ ಉರಗಭೂಷಣ ಮಂಗಳ ಜಯವೆನ್ನಿ ಮಂಗಳ ಶುಭವೆನ್ನಿ ಮಂಗಳಾಂಗಿಯರು ಬ್ಯಾಗ 1 ನಂದಿವಾಹನನ ಪೂಜಿಸಿ ಫಲಗಳ ಬೇಡೆ ಕಂದನಿಗಾಯುಷ್ಯವು ಐದರಾ ಮ್ಯಾಲ್ ಹ- ನ್ನೊಂದು ವರುಷವೆನಲು ವರ ನೀಡುತಿರಲು ಮಂಜುಳೆಯು ಗರ್ಭವನೆ ಧರಿಸಲು ಬಂಧುಗಳು ಹೂ ಮುಡಿಸಿ ಪರಮಸಂಭ್ರಮದಿ ಸೀ- ಮಂತ ಮಾಡಲು ತುಂಬಿತಾ ನವಮಾಸವಾಗಲೆ 2 ಜಾತವಾಗಲು ನಾಮಕರಣ ಮಾಡುತ ಚಂದ್ರಶೇಖರ- ನೆಂದ್ಹೆಸರಿಡುತ ಜಾವಳ ಜುಟ್ಟು ಪ್ರೀತಿಂದುಪನಯನ ಮಾಡುತ ವಿದ್ಯೆಗಳ ಕಲಿಸುತ ಆತಘದಿನಾರ್ವರುಷ ಬರುತಿರೆ ಪ್ರೀತಿಯಿಂದ್ಹಣಕೊಟ್ಟು ಕಾಶಿಯಾತ್ರೆಗೆನುತಲಿ ಕಳುಹೆ ಬ್ಯಾಗನೆ3 ಒಂದಾಗಿ ಅಳಿಯ ಮಾವಂದಿರು ಬರುತಿರೆ ಕಂಡಿಳಿದರು ತೋಟವ ಗೆಳತಿಯರು ಬಂದು ಹೂವಿಗೆ ಆಟವಾಡುತಲಿ ಕೋಪಿಸೆ ಒಂದಕ್ಕೊಂದು ಮಾತಾಡೆ ರಾಜ ನಂದನೆಯು ತಾ ನೊಂದುಕೊಳ್ಳದೆ ನಂದಿವಾಹನನರಸಿ ದಯವಿರಲೆಂದು ನಡೆದಳು ಮಂದಿರಕೆ 4 ಬಂದ ರಾಜನ ಮಗಳಿಗೆ ನಿಬ್ಬಣವು ಕರೆ- ತಂದರಸುಕುಮಾರನ ಧಾರೆಯನೆರೆದು ಮಂಗಳ ಸೂತ್ರವನು ಬಂಧನವ ಮಾಡಿದ- ರÀಂದದಿಂದಲಿ ಲಾಜಹೋಮವ ಬಂಧುಗಳ ಸಹಿತುಂಡು ಭೌಮವ ಚೆಂದದಿಂದಲಿ ಸುತ್ತಿಸಾಡ್ಯವ ಅಂದಿನಿರುಳಲಾನಂದವಾಗಿರೆ 5 ಸತಿಪತಿಯರು ಭಾಳ ಹಿತದಿಂದ ಮಲಗಿರೆ ಅತಿ ಹಸಿವೆನಗೆನಲು ಲಡ್ಡಿಗೆ ತಂದು ಘೃತ ಬಟ್ಟಲೊಳು ಕೊಡಲು ತಿಂದಿಡಲು ಮುದ್ರಿಕಾ ಸತಿ ಸಹಿತ ಸುಖನಿದ್ರೆಲಿರೆ ಪಾ- ರ್ವತಿಯು ಬಂದಾ ಖದ್ರುದೇವಿಸುತ ಬರುವನೆಂದ್ಹೇಳೆ ಕಳಸವ ಅತಿಬ್ಯಾಗದಿ ತುಂಬಿಟ್ಟಳುರಗವ 6 ಅತ್ತೆ ಕಾಶಿಗೆ ಪೋಗಿ ಅಳಿಯ ಮಾವಂದಿರು ಕ್ವಾಷ್ಟನ ಕರೆದು ತಂದು ಕುಳಿತಿರಲಾಗ್ವಿಚಿತ್ರ- ಭೂಷಿತಳು ಬಂದು ನೋಡುತಲಿ ನಿಂದು ಥಟ್ಟನೆದ್ದು ತಾ ತಿರುಗಿ ಪೋಗೆನ್ನ ಪಟ್ಟದರಸಿವನಲ್ಲವೆನುತಲಿ ಹೆತ್ತಜನಕ ನೀ ಅನ್ನಕ್ಷೇತ್ರವ ಇಟ್ಟು ನಡೆಸೀಗ್ವೀಳ್ಯಗಳ ಕೊಡುವುದು 7 ತಂದು ಭೋಜನಮಾಡುತ ಕುಳಿತಿರಲಾಗ ತಂದು ವೀಳ್ಯವ ಕೊಡುತ ಮುಖ ನೋಡಿ ನಗುತ ಸಂದೇಹಿಲ್ಲದೆ ಎನ್ನಪತಿ ಹೌದೆಂದು ನುಡಿದಳು ಬಂದು ಜನರು ನಿಂದು ಗುರುತೇನೆಂದು ಕೇಳಲು ತಂದು ತೋರಿದುಂ(ದಳುಂ?) ಗುರವ ಜನರಿಗೆ 8 ನಿನ್ನ ಗುರುತು ಏನ್ಹೇಳೆನ್ನಲು ಸಭೆಯೊಳು ಪನ್ನಂಗದ ಕಳಸವನು ತೆಗೆಯಲು ಬಾಯಿ ರನ್ನ ಮುತ್ತಿನ ಸರವು ಆಗಿರಲು ಉರಗವು ಕನ್ನೆಯರು ಹರಸ್ಹಾಕೆ ಕೊರಳಿಗೆ ಮನ್ನಿಸುತ ಮಹಾರಾಜ ಮಗಳನು ಚಿನ್ನದಾಭರಣಗಳು ಉಡುಗೊರೆ ತನ್ನಳಿಯಗುಪಚಾರ ಮಾಡುತ 9 ಸತಿಪತಿಯರು ತಮ್ಮ ಪಿತರ ಅಪ್ಪಣೆಗೊಂಡು ರತುನದಂದಣವೇರಲು ಮಾರ್ಗದಿ ಗೌರೀ- ವ್ರತ ಮಾಡಿ ನಡೆತರಲು ಪಿತಗ್ಹೇಳಿ ಕಳುಹಲು ಸುತನು ಬಂದರಮನೆಗೆ ಭಾಗೀ- ರಥಿಯು ಮಾತುಳ ಮಡದಿ ಸಹಿತ ಹಿತದಿ ಬಂದೆರಗಿದರೆ ಸೊಸೆಮಗ ಅತಿಹರುಷದಿಂದಪ್ಪಿ ಕೇಳುತ 10 ದಾವ ಪುಣ್ಯದ ಫಲದಿಂದ ನಿನ್ನರಸನ ಪ್ರಾಣ ಪಡೆದಿಯೆನಲು ಮಂಗಳಗೌರಿ ದೇವಿ- ದಯವಿರಲೆಂದು ಹೇಳಲು ಶ್ರೀಗೌರಿಕಥೆಯನು ಕಾಮಿತವನದೊಳಗೆ ದ್ರೌಪದಿಗ್ಹೇಳಿದನು ಭೀಮೇಶಕೃಷ್ಣನು ಮಾಡಿದರೆ ಮುತ್ತೈದೆತನಗಳ ಬೇಡಿದಿಷ್ಟಾರ್ಥಗಳ ಕೊಡುವೋಳು ಮಂಗಳ ಜಯವೆನ್ನಿ ಮಂಗಳ ಶುಭವೆನ್ನಿ ಮಂಗಳಾಂಗಿಯರು ಬ್ಯಾಗ 11
--------------
ಹರಪನಹಳ್ಳಿಭೀಮವ್ವ