ಒಟ್ಟು 879 ಕಡೆಗಳಲ್ಲಿ , 93 ದಾಸರು , 729 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಪುಣ್ಯವ ಮಾಡಿದೆನೋ ಮುನ್ನೆ | ಧನ್ಯಗೈಸಿದ ಗುರು ಮಹೀಪತಿ ತಾನು ಪ ವಿಜಯಗ್ಹೇಳಿದ ಹರಿ ಗೀತೆಯಲಿ | ಸುಜನ ಸಂತರೊಳು ದುರ್ಲಭನೆನಲಿ 1 ಎನ್ನಯ ಸಿರದಲಿ ಅಭಯಕರವಿಟ್ಟು | ಚೆನ್ನಾಗಿ ಹೇಳಿದ ಸುಜ್ಞಾನ ಗುಟ್ಟು 2 ಕಣ್ಣುದೆರೆಸಿ ಭಕ್ತಿ ಮಾರ್ಗದಲಿ | ಸಣ್ಣವನೆಂದು ಚಿದ್ಭನದೋರಿಸಲಿ 3 ಇನ್ನೊಬ್ಬರಾಶೆ ಏತಕೆ ಎನಗಿನ್ನು | ಎನ್ನ ಹಂಬಲಿಸಿದಾಶೆಯ ಕಾಮಧೇನು 4 ತಂದೆ ತಾಯಿ ಗುರು ಬಂಧು ಬಳಗಾಗಿ | ಕಂದಗೊಲಿದ ನಿಂದು ತನ್ನಯ ಹೊಣೆಯಾಗಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನು ಪುಣ್ಯವ ಮಾಡಿದೆನೋ ಮುನ್ನೆ | ಧನ್ಯಗೈಸಿದ ಗುರು ಮಹೀಪತಿ ತಾನು ಪ ವಿಜಯಗ್ಹೇಳಿದ ಹರಿ ಗೀತೆಯಲಿ | ಸುಜನ ಸಂತರೊಳು ದುರ್ಲಭನೆನಲಿ 1 ಎನ್ನಯ ಸಿರದಲಿ ಅಭಯಕರವಿಟ್ಟು | ಚೆನ್ನಾಗಿ ಹೇಳಿದ ಸುಜ್ಞಾನ ಗುಟ್ಟು 2 ಕಣ್ಣುದೆರೆಸಿ ಭಕ್ತಿ ಮಾರ್ಗದಲಿ | ಸಣ್ಣವನೆಂದು ಚಿದ್ಭನದೋರಿಸಲಿ 3 ಇನ್ನೊಬ್ಬರಾಶೆ ಏತಕೆ ಎನಗಿನ್ನು | ಎನ್ನ ಹಂಬಲಿಸಿದಾಶೆಯ ಕಾಮಧೇನು 4 ತಂದೆ ತಾಯಿ ಗುರು ಬಂಧು ಬಳಗಾಗಿ | ಕಂದಗೊಲಿದ ನಿಂದು ತನ್ನಯ ಹೊಣೆಯಾಗಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನು ಪುಣ್ಯವ ಮಾಡಿದೆನೋ ಮುನ್ನೆ | ಧನ್ಯಗೈಸಿದ ಗುರು ಮಹೀಪತಿ ತಾನು ಪ ವಿಜಯಗ್ಹೇಳಿದ ಹರಿ ಗೀತೆಯಲಿ | ಸುಜನ ಸಂತರೊಳು ದುರ್ಲಭನೆನಲಿ 1 ಎನ್ನಯ ಸಿರದಲಿ ಅಭಯಕರವಿಟ್ಟು | ಚೆನ್ನಾಗಿ ಹೇಳಿದ ಸುಜ್ಞಾನ ಗುಟ್ಟು 2 ಕಣ್ಣುದೆರೆಸಿ ಭಕ್ತಿ ಮಾರ್ಗದಲಿ | ಸಣ್ಣವನೆಂದು ಚಿದ್ಭನದೋರಿಸಲಿ 3 ಇನ್ನೊಬ್ಬರಾಶೆ ಏತಕೆ ಎನಗಿನ್ನು | ಎನ್ನ ಹಂಬಲಿಸಿದಾಶೆಯ ಕಾಮಧೇನು 4 ತಂದೆ ತಾಯಿ ಗುರು ಬಂಧು ಬಳಗಾಗಿ | ಕಂದಗೊಲಿದ ನಿಂದು ತನ್ನಯ ಹೊಣೆಯಾಗಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನು ಪುಣ್ಯವ ಮಾಡಿದೆನೋ ಮುನ್ನೆ | ಧನ್ಯಗೈಸಿದ ಗುರು ಮಹೀಪತಿ ತಾನು ಪ ವಿಜಯಗ್ಹೇಳಿದ ಹರಿ ಗೀತೆಯಲಿ | ಸುಜನ ಸಂತರೊಳು ದುರ್ಲಭನೆನಲಿ 1 ಎನ್ನಯ ಸಿರದಲಿ ಅಭಯಕರವಿಟ್ಟು | ಚೆನ್ನಾಗಿ ಹೇಳಿದ ಸುಜ್ಞಾನ ಗುಟ್ಟು 2 ಕಣ್ಣುದೆರೆಸಿ ಭಕ್ತಿ ಮಾರ್ಗದಲಿ | ಸಣ್ಣವನೆಂದು ಚಿದ್ಭನದೋರಿಸಲಿ 3 ಇನ್ನೊಬ್ಬರಾಶೆ ಏತಕೆ ಎನಗಿನ್ನು | ಎನ್ನ ಹಂಬಲಿಸಿದಾಶೆಯ ಕಾಮಧೇನು 4 ತಂದೆ ತಾಯಿ ಗುರು ಬಂಧು ಬಳಗಾಗಿ | ಕಂದಗೊಲಿದ ನಿಂದು ತನ್ನಯ ಹೊಣೆಯಾಗಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನು ಪುಣ್ಯವ ಮಾಡಿದೆನೋ ಮುನ್ನೆ | ಧನ್ಯಗೈಸಿದ ಗುರು ಮಹೀಪತಿ ತಾನು ಪ ವಿಜಯಗ್ಹೇಳಿದ ಹರಿ ಗೀತೆಯಲಿ | ಸುಜನ ಸಂತರೊಳು ದುರ್ಲಭನೆನಲಿ 1 ಎನ್ನಯ ಸಿರದಲಿ ಅಭಯಕರವಿಟ್ಟು | ಚೆನ್ನಾಗಿ ಹೇಳಿದ ಸುಜ್ಞಾನ ಗುಟ್ಟು 2 ಕಣ್ಣುದೆರೆಸಿ ಭಕ್ತಿ ಮಾರ್ಗದಲಿ | ಸಣ್ಣವನೆಂದು ಚಿದ್ಭನದೋರಿಸಲಿ 3 ಇನ್ನೊಬ್ಬರಾಶೆ ಏತಕೆ ಎನಗಿನ್ನು | ಎನ್ನ ಹಂಬಲಿಸಿದಾಶೆಯ ಕಾಮಧೇನು 4 ತಂದೆ ತಾಯಿ ಗುರು ಬಂಧು ಬಳಗಾಗಿ | ಕಂದಗೊಲಿದ ನಿಂದು ತನ್ನಯ ಹೊಣೆಯಾಗಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನು ಪುಣ್ಯವ ಮಾಡಿದೆನೋ ಮುನ್ನೆ | ಧನ್ಯಗೈಸಿದ ಗುರು ಮಹೀಪತಿ ತಾನು ಪ ವಿಜಯಗ್ಹೇಳಿದ ಹರಿ ಗೀತೆಯಲಿ | ಸುಜನ ಸಂತರೊಳು ದುರ್ಲಭನೆನಲಿ 1 ಎನ್ನಯ ಸಿರದಲಿ ಅಭಯಕರವಿಟ್ಟು | ಚೆನ್ನಾಗಿ ಹೇಳಿದ ಸುಜ್ಞಾನ ಗುಟ್ಟು 2 ಕಣ್ಣುದೆರೆಸಿ ಭಕ್ತಿ ಮಾರ್ಗದಲಿ | ಸಣ್ಣವನೆಂದು ಚಿದ್ಭನದೋರಿಸಲಿ 3 ಇನ್ನೊಬ್ಬರಾಶೆ ಏತಕೆ ಎನಗಿನ್ನು | ಎನ್ನ ಹಂಬಲಿಸಿದಾಶೆಯ ಕಾಮಧೇನು 4 ತಂದೆ ತಾಯಿ ಗುರು ಬಂಧು ಬಳಗಾಗಿ | ಕಂದಗೊಲಿದ ನಿಂದು ತನ್ನಯ ಹೊಣೆಯಾಗಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನು ಪುಣ್ಯವ ಮಾಡಿದೆನೋ ಮುನ್ನೆ | ಧನ್ಯಗೈಸಿದ ಗುರು ಮಹೀಪತಿ ತಾನು ಪ ವಿಜಯಗ್ಹೇಳಿದ ಹರಿ ಗೀತೆಯಲಿ | ಸುಜನ ಸಂತರೊಳು ದುರ್ಲಭನೆನಲಿ 1 ಎನ್ನಯ ಸಿರದಲಿ ಅಭಯಕರವಿಟ್ಟು | ಚೆನ್ನಾಗಿ ಹೇಳಿದ ಸುಜ್ಞಾನ ಗುಟ್ಟು 2 ಕಣ್ಣುದೆರೆಸಿ ಭಕ್ತಿ ಮಾರ್ಗದಲಿ | ಸಣ್ಣವನೆಂದು ಚಿದ್ಭನದೋರಿಸಲಿ 3 ಇನ್ನೊಬ್ಬರಾಶೆ ಏತಕೆ ಎನಗಿನ್ನು | ಎನ್ನ ಹಂಬಲಿಸಿದಾಶೆಯ ಕಾಮಧೇನು 4 ತಂದೆ ತಾಯಿ ಗುರು ಬಂಧು ಬಳಗಾಗಿ |ಕಂದಗೊಲಿದ ನಿಂದು ತನ್ನಯ ಹೊಣೆಯಾಗಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನು ಪೇಳಲಮ್ಮಯ್ಯಾ ರಂಗನ ಕ್ರೀಡಾ ಏನು ದಂಡಿಸಲಮ್ಮಯ್ಯಾ ಶ್ರೀ ಕೃಷ್ಣನ್ನ ಪ ಪಿಡಿದು ನಿಂದಾ ದುರುಳ ದೈತ್ಯನ್ನೆಳದೊಡಲವೆ ಸೀಳಿದಾ ಬಲಿಯಲ್ದೈನ್ಯದಿ ದಾನಬೇಡಿ ತಾಯ ಶಿರವ ಕಡಿದು ತೋರಿದಾ ಕಲೆವೆಣ್ಣೈದ್ಮೊಲೆಯುಂಡು ಕಳದ್ವಟ್ಟೆ ಹಯವೇರಿದಾ 1 ಕಾನನದಾ ವರಹನಾದಾ ಆಗಲು ಪಂಚಾನನ ರೂಪನಾದಾ ಸೂನು ಪರಶುರಾಮನಾಗಿ ಜಾನಕಿವರನಾಗಿ ರಾವಣನಾಗಿ ಮಾನಬಿಟ್ಟು ವಾಜಿಯನೇರ್ದಾ 2 ನಿಗಮ ತೋರ್ದಾ ಬೆನ್ನಲಿ ಬೆಟ್ಟವಿರಿಸಿ ಸುರರಾ ಪೊರೆದಾ ಧರಾಲಲನೆಯನೆತ್ತಿ ತಂದಾ ದೈತ್ಯನ ಶೀಳಿ ತರಳನಳಲನು ಕಳೆದಾ ಸುರತಟಿನಿಯಂಗುಟದಿ ಜನಿಸೆ ಧರೆಯ ಪಾವನಗೊಳಿಸೆ ನರಲೋಕವುದ್ಧಾರ ಜನಕ ಸಿರಿಪಾವನ ನರಸಿಂಹವಿಠಲನ 3
--------------
ನರಸಿಂಹವಿಠಲರು
ಏನು ಸುಖವಯ್ಯ ಪ ಇನ್ನೇನು ಪರಗತಿಯಹುದು ಮುಂದೆಅ.ಪ ನಾನಾವಿಧ ದುಃಖಗಳಲಿ ಜ್ಞಾನಶೂನ್ಯನಾಗುತ ವಿಷ- ಯಾನುಭವದಿ ವ್ಯಥೆ ಪಡುವವಗೆ 1 ಮಾಳಿಗೆ ಮೇಲೋಡಾಟವು ನಾಳೆಬಹುದು ಕಷ್ಟವು ಎಂ- ಕೇಳದೆ ಗರ್ವಿಸಿ ಮೆರೆವವಗೆ 2 ಭದ್ರವು ತನಗೆಂದು ತಿಳಿದು ಕ್ಷುದ್ರ ಮಾರ್ಗದಲಿ ತಿರುಗಿದ ದ- ರಿದ್ರದಿ ಹಂಬಲಿಸುವವಗೆ 3 ಮಡದಿ ಮಕ್ಕಳೆಂತೆಂಬುವ ತೊಡರೊಳು ಬಾಯ್ಬಿಡುತಿರುವವಗೆ 4 ಹರಿಕೊಟ್ಟ ಮಹಾಭಾಗ್ಯದಿ ಪರಮತೃಪ್ತನಾಗಿರದಲೆ ಗುರುರಾಮವಿಠಲನ ಮರೆದು ಇರುಳು ಹಗಲು ಚಪಲ ಪಡುವಗೆ 5
--------------
ಗುರುರಾಮವಿಠಲ
ಏನೆಂದು ಕೊಂಡಾಡಿ ಸುತ್ತಿಸೆಲೊ ನಿನ್ನಾ ಪ ದಾನವಾಂತಕ ಕೃಷ್ಣ ಆನಂದ ಗುಣ ಪೂರ್ಣ ಅ.ಪ. ಮತ್ಸರೂಪಿಯೆ ನಿನ್ನ ಉತ್ಸಹದಿ ಕರೆಯಲಾಕುತ್ಸಿತನ ಸೊಲ್ಲ ನೀನೆತ್ತ ಕೇಳುವಿಯೋ |ಮತ್ಸ್ಯಕೇತನ ಜನಕ | ಮತ್ಸರವ ಕಳೆಯಯ್ಯಸಚ್ಚಿದಾನಂದಾತ್ಮ | ಚಿತ್ಸುಖಪದನೇ 1 ಕೂರ್ಮರೂಪಿಯೆಂದು | ಪೇರ್ಮೆಯಲಿ ಕರೆಯಲಾಭರ್ಮ ಗರ್ಭನ ಪಿತನೆ | ಗಿರಿಯ ಧರಿಸಿರುವೇ |ನಿರ್ಮಲಾತ್ಮಕನೆ ಯೆನಗೆ | ನಿರ್ಮಮತೆ ನೀಡಯ್ಯಾ ಊರ್ಮಿಳಾಪತಿ ಭ್ರಾತೃ | ಪರಮ ಮಂಗಳನೇ 2 ವರಹ ರೂಪಿಯೆ ನಿನ್ನ | ಕರೆಯುವುದು ಹೇಗಯ್ಯಾ ಕೋರೆ ದಾಡಿಯ ಮೇಲೆ | ಧರೆಯೆ ಧರಿಸಿರುವೇ | ವಾರೆ ನೋಟದಿ ಯೆನ್ನ | ಪರಿಕಿಸೀ ಪೊರೆಯಯ್ಯಾಧೀರ ಭೂವರಹ ವರ | ಧರಣಿ ಪರಿಪಾಲಾ 3 ನಾರಸಿಂಹನೆ ನಾನು | ಕರೆಯಲಾಪನೆ ನಿನ್ನಘೋರರೂಪವ ನೋಡಿ | ದೂರ ಸಾರುವರೋವಾರಿಜಾಕ್ಷಿಯು ಬಂದು | ಘೋರ ಪ್ರಹ್ಲಾದನ್ನಚಾರು ತವ ಚರಣದಲಿ | ಇರಿಸಬೇಕಾಯ್ತು 4 ದಧಿ | ವಾಮನನೆ ಬಾರೆಂದುಸಾಮಸನ್ಮುತ ನಿನ್ನ | ನಾಮಗಳ ನೆನೆಯೆಲಾ |ಭೂಮಿ ಬೇಡುವ ನೆವದಿ | ಬಲಿಯ ಭೂಮಿಗೆ ತುಳಿದೆಸೀಮೆ ಮೀರಿದ ಮಹಿಮ | ಮರ್ಮವಿನ್ನೆಷ್ಟೋ | 5 ಪರಶುರಾಮನೆ ನಿನ್ನ | ಕರೆಯಲಾರೆನು ನಾನುದುರುಳ ಕ್ಷತ್ರಿಯರ | ಶಿರಗಳನೆ ತರಿದೂ |ಭಾರಿ ಪರಶುವಿನಿಂದ | ವರಮಾತೆ ಶಿರ ತರಿದಿಸರಿ ಕಾಣೋ ಇದು ನಿನಗೆ | ಪರಮ ಪಾವನ್ನಾ 6 ರಾಮ ರೂಪಿಯೆ ನಿನ್ನ | ಆ ಮಹಾ ಮಹಿಮೆಗಳಸೀಮೆಗಾಣಳು ಲಕುಮಿ | ಪಾಮರನಿಗಳವೇ |ಆ ಮರಾ ಈ ಮರಾನೆಂದ ಆ | ಪಾಮರನ ಪೊರೆದುಆ ಮಹಾತ್ಮನ ಗೈದ | ಪರಿಯೆನ್ನ ಮಾಡೋ 7 ಕೃಷ್ಣ ಕೃಷ್ಣಾ ಎಂದು ಕರೆಯುವೆನೆ ನಾ ನಿನ್ನಕಷ್ಟದೊಳು ಸಿಲುಕಿರುವೆ | ಗಿರಿಯನ್ನೆ ಪೊತ್ತು |ವೃಷ್ಟಿಕುಲ ಸಂಪನ್ನ | ಕೃಷ್ಣ ಮೂರುತಿ ನೀನುಇಷ್ಟ ಭಕುತರ ಮನೋ | ಭೀಷ್ಟ ಸಲಿಸುವಿಯಾ 8 ಬುದ್ಧ ದೇವನೆ ಎನಗೆ ಸ | ದ್ಭುದ್ಧಿ ಕೊಡು ಎಂದುಬುದ್ಧಿ ಪೂರ್ವಕವಾಗಿ ನಿನ್ನ ಕರೆಯಲಾ |ಬುದ್ಧಿಯಿಂದಲಿ ನೀ | ಭೋಧಿಸಿದೆ ದುಶ್ಯಾಸ್ತ್ರಬೌದ್ಧ ನಿನ್ನನು ಪೊದ್ದು | ಬುಧರ ಪಾಡೇನೊ 9 ಕಲ್ಕಿ ಕಲ್ಕೀ ಎಂದೇ ಕರೆಯಲಾಪೆನೆ ದೇವಾಶುಲ್ಕ ಮೇಲಾಗಿಹುದು ಕಲಿಯುಗದೊಳು |ಉಲ್ಕ ಮುಖ ಮೊದಲಾದ | ಕಲ್ಕಿರಾಜರು ನಿನ್ನಕಲ್ಕ್ಯಾತ್ಮ ಸತ್ಯ ತವ | ವ್ರತವ ಮಾಳ್ಪರು ಬಿಡದೆ 10 ಸರ್ವರೂಪಾತ್ಮಕನೆ | ಸರ್ವ ವ್ಯಾಪಕ ಸ್ವಾಮಿಸರ್ವಜಿತು ಸರ್ವಾತ್ಮ ಸರ್ವೇಶನೇ |ಶರ್ವಾರಿ ವಂದ್ಯ ಗುರು | ಗೋವಿಂದ ವಿಠಲನೇಗುರು ಹೃದಂಬರದಲ್ಲಿ | ತೋರಿ ಪೊರೆಯನ್ನ 11
--------------
ಗುರುಗೋವಿಂದವಿಠಲರು
ಏನೆಂದು ನುಡಿವೆ ನಿನ್ನವರಂತೆ ಕೇಡು ಬುದ್ಧಿ ಎನ್ನೊಳಗಿಲ್ಲ - ಗುಣಹೀನರಲ್ಲದ ಈ ನರರ ಪಾಲಿಪ ಬುದ್ಧಿ ನಿನ್ನೊಳಗಿಲ್ಲ ಪ ತರಳ ಪ್ರಹ್ಲಾದನಂದದಿ ನಿನ್ನ ರೂಪನು ಕೆಡಿಸಲಿಲ್ಲನರನಂತೆ ಬಂಡಿಬೋವನ ಮಾಡಿ ನಿನ್ನ ದುಡಿಸಲಿಲ್ಲಪರಾಶರನಂತೆ ನದಿಯೊಳಿದ್ದ ಹೆಣ್ಣ ಕೂಡಲಿಲ್ಲಗರುಡನಂದದಿ ನಿನ್ನ ಪೊತ್ತು ತಿರುಗಲಿಲ್ಲ 1 ಅನುದಿನ ಚರಿಸಲಿಲ್ಲಬಿನಗು ಬೇಡತಿಯಂತೆ ಸವಿದುಂಡ ಹಣ್ಣ ತಿನಿಸಲಿಲ್ಲಇನಕುಲ ಕಪಿಯಂತೆ ವಂಚಿಸಿ ವಾಲಿಯ ಕೊಲಿಸಲಿಲ್ಲಘನ ಪಾತಕದಜಮಿಳನಂತೆ ನಾರಗ ಎನ್ನಲಿಲ್ಲ2 ಕದನದೊಳು ವಿಭೀಷಣನಂತೆ ಅಣ್ಣನ ಕೊಲಿಸಲಿಲ್ಲವಿದುರನ ತೆರನಂತೆ ಸದನವ ಮುರಿದು ನಿನ್ನ ಬೆರೆಯಲಿಲ್ಲಮದಗಜದಂತೆ ಮಕರಿಗೆ ಸಿಲ್ಕಿ ಒರಲಲಿಲ್ಲಗದರಿ ಶಿಶುಪಾಲನಂದದಿ ನಿನ್ನನುಪೇಕ್ಷಿಸಿ ಜರೆಯಲಿಲ್ಲ3 ಬುವಿಯೊಳು ಬಲಿಯಂತೆ ದಾನವ ನೀಡಲಿಲ್ಲಭವನಂತೆ ಶ್ಮಶಾನದಿ ಮನೆಮಾಡಿ ಸ್ಮರಿಸಲಿಲ್ಲತವ ಪುಂಡರೀಕನಂತೆ ಹಲಗೆಯಿಟ್ಟಿಗೆ ಮೇಲೆ ನಿಲಿಸಲಿಲ್ಲಭುವನದೊಡೆಯ ನೆಲೆಯಾದಿಕೇಶವನ ಮರೆಯಲಿಲ್ಲ4
--------------
ಕನಕದಾಸ
ಏನೆಂದು ಬಣ್ಣಿಸುವೆನೊ ನಾನು | ಶ್ರೀನಾಥ ಪ್ರಿಯಳಾದ ಶ್ರೀ ತುಳಸಿ ಮಹಿಮೆಯನು ಪ ಅಮೃತ ಕಲಶ ಬರೆಕಂಡು ಅತಿ | ಜಲಜಾಂಬಕನ ಪ್ರೇಮಾಂಜಲ ಉದರಲು | ಇಳಯೊಳದಿರಿಂದುದಿಸಿ ಬೆಳೆದು ನಿಂದಿರೆ ನೋಡಿ | ಒಲಿದು ಕೋಮಲ ಮುಗುಳು ತಳೆದ ಶ್ರೀಹರಿ ತಾನು 1 ಹರಿಯು ಧರಿಸಿದ ಕಂಡು ಸುರರೆಲ್ಲ ವಂದಿಸುತ | ಶಿರದಲಾಂತರು ಪರಮ ಹರುಷದಿಂದ | ಸಿರಿಸರಸ್ವತಿ ಗಿರಜೆ ನಿರುತ ನಿನ್ನಯ ವ್ರತದಿ | ಧರೆಯೊಳಗೆ ತಮ್ಮ ತಮ್ಮ ಅರಸರೊಲಿಸಿದರೆಂದು 2 ದುರಿತ ಕುಲ ಓಡುವವು ತನುವ ನೀ ಡಾಡಿ ಜಲನೀಡಿ ಕೊಂಡಾಡಿ ನಿಂದು | ಕೂಡೆ ಮೃತ್ತಿಕೆ ಫಣಿಗೆ ತೀಡಿದರೆ ಭಕುತಿಯಲಿ | ಬೇಡಿದಿಷ್ಟಾರ್ಥ ಕೈಗೂಡಬಹುದಿಳೆಯೊಳಗೆ 3 ತುಲಸಿ ಭಕುತಿಲ್ಲದವ ಕಲಿವಂಶದನುಜನವ | ತುಲಸಿ ಧರಿಸಿದ ತನುವು ಸಲೆಮುಕ್ತಿ ಮಂಟಪವು | ತುಲಸಿ ಬೆಳೆಹದಿ ಮನೆಯು ಬಲಿದ ಪುಣ್ಯದ ಖಣಿಯು | ತುಲಸಿ ಇಲ್ಲದ ಗೇಹ ಕಲುಷಾಲಯ 4 ಮೂಲದಲಿ ಬ್ರಹ್ಮ ತಾ ನೀಲಕಂಠನು ನಡುವೆ | ಮೇಲುತುದಿಯಲಿ ವಿಷ್ಣು ಲೋಲಾಡುವಾ | ಸಾಲಕೊಂಬೆಗಳಲಿ ವಿಶಾಲದೇವತೆಗಳಿಹರು | ತಾಳಿ ಪ್ರೇಮವನು ಮಹೀಪತಿ ನಂದನಾಜ್ಞೆಯಲಿ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನೆಂದು ಸ್ತುತಿಸಲಿ ದೇವ ರಂಗಯ್ಯ ನಿನ್ನ ಜಾಣ- ತನವ ನೀನೆ ಬಲ್ಲೆ ಶ್ರೀ ರಂಗಯ್ಯ ಪ. ಮತ್ಸ್ಯನಾಗಿ ಶ್ರುತಿಯ ತಂದೆ ರಂಗಯ್ಯ ನೀನು ಕುತ್ಸಿತ ತಮನ ಕೊಂದೆ ರಂಗಯ್ಯ ಸ್ವಚ್ಛ ಕೂರುಮನಾದೆ ರಂಗಯ್ಯ ಭಕ್ತ ರಿಚ್ಛೆಯ ಪಾಲಿಸಿದೆ ಶ್ರೀ ರಂಗಯ್ಯ1 ಆದಿವರಾಹ ನೀನಾದೆ ರಂಗಯ್ಯ ನೀನು ಪೋದ ಮೇದಿನಿಯ ತಂದೆ ರಂಗಯ್ಯ ಭೇದಿಸಿ ಕಂಬದಿ ಬಂದೆ ರಂಗಯ್ಯ ಪ್ರ- ಹ್ಲಾದನ ಕಾಯ್ದೆ ಶ್ರೀ ರಂಗಯ್ಯ 2 ಬಲಿಯನ್ನು ವಂಚಿಸಿದಂಥ ರಂಗಯ್ಯ ನೀನು ನೆಲವ ಓರಡಿ ಮಾಡ್ದೆ ರಂಗಯ್ಯ ಬಲವಂತ ಭಾರ್ಗವನಾದೆ ರಂಗಯ್ಯ ನೀನು ಛಲದಿ ಕ್ಷತ್ರಿಯರ ಗೆದ್ದೆ ರಂಗಯ್ಯ 3 ಜಲಧಿಯನು ಕಟ್ಟಿದೆ ರಂಗಯ್ಯ ಹತ್ತು- ತಲೆಯವನ ಕುಟ್ಟಿದೆ ರಂಗಯ್ಯ ಮಲೆತ ಮಾವನ ಕೊಂದೆ ರಂಗಯ್ಯ ಯದು- ಕುಲವನುದ್ಧರಿಸಿದೆ ಶ್ರೀ ರಂಗಯ್ಯ 4 ಸತಿಯರ ಮೋಹಿಸಿದೆ ನೀನು ರಂಗಯ್ಯ ಬಲು ಚತುರ ಬೌದ್ಧನಾದೆ ರಂಗಯ್ಯ ಖತಿಯಿಂದ ಹಯವೇರಿದೆ ರಂಗಯ್ಯ ದು- ರ್ಮತಿಯ ಕಲಿಯ ಕೊಂದೆ ಶ್ರೀ ರಂಗಯ್ಯ 5 ತ್ರಿಭುವನದೊಳಧಿಕÀ ರಂಗಯ್ಯ ನೀನು ವಿಭೀಷಣನಿಗೆ ಪ್ರಸನ್ನ ರಂಗಯ್ಯ ನೀ- ನಭಯವಿತ್ತೆನ್ನ ಕಾಯೊ ಶ್ರೀ ರಂಗಯ್ಯ 6 ವಾದಿರಾಜಗೊಲಿದೆ ರಂಗಯ್ಯ ನೀನು ಮೋದಿ ಹಯವದನನಾದೆ ರಂಗಯ್ಯ ಸಾಧಿಸಿ ಖಳರ ಕೊಂದೆ ರಂಗಯ್ಯ ವಿ- ನೋದÀದಿ ವೇದವ ತಂದೆ ಶ್ರೀ ರಂಗಯ್ಯ 7
--------------
ವಾದಿರಾಜ
ಏನೆಂದೆ ಏನೆಂದೆ ಪ ನಾನೇನೆಂದೆನೆ ಗಾನಲೋಲಗವ ಮಾನದ ಮಾತಿಂಥ ಜೀನನ ಕಾಣೆನೆಂದೆ ಅ.ಪ ಕಾಲು ಇಲ್ಲದ ಹೆಳವನೆಂದೆ ತಲೆಯ ಕಾಣದ ಕುರೂಪಿಯೆಂದೆ ಚೆಲುವಿಕಿಲ್ಲದ ಕಾಡು ಹೀನಮೃಗವೆಂದೆ ಬಲಿಯ ಬಾಗಿಲ ಕಾಯ್ವ ಕೂಲಿಕಾರನೆಂದೆ1 ನಾಲಗೆ ಚಾಚಿ ರಕ್ತ ಕುಡಿದನೆಂದೆ ತಿಳಿದು ಜನನಿತಲೆ ಕಡಿದವನೆಂದೆ ಲಲನೆಯೊಡನೆ ವನವಾಸಕೆ ಪೋಗಿ ಬಳಲಿ ಬಳಲಿ ಬಾಯಾರಿದನೆಂದೆ 2 ಗೊಲ್ಲರ ಕುಲದಲಿ ಹುಟ್ಟಿದನೆಂದೆ ಗುಳ್ಳೆ ಗುಳ್ಳೆ ಬೆಣ್ಣೆ ಕದ್ದವನೆಂದೆ ಗೊಲ್ಲರ ಅಕಳ ಕಾಯುವ ಚರನೆಂದೆ ಫುಲ್ಲನಲನೆಯರ ವಸ್ತ್ರಗಳ್ಳನೆಂದೆ 3 ಬತ್ತಲೆ ಕುಣಿಕುಣಿದಾಡಿದನೆಂದೆ ಸತ್ಯಭ್ರಷ್ಟ ಮಹಕಲಿಯು ಈತನೆಂದೆ ಮತ್ತೆ ವೈಕುಂಠದಿ ಒದೆಸಿಕೊಂಡು ಇವ ವಿತ್ತದಾಸೆಗೆ ಮತ್ರ್ಯಲೋಕಕಿಳಿದವನೆಂದೆ 4 ಕುದುರೆ ನಡೆಸಿ ಒಬ್ಬನುಳಿಸಿದನೆಂದೆ ಕದನದ್ವೊಂಚಿಸಿ ಒಬ್ಬನಳಿದವನೆಂದೆ ಕುದುರೆ ಕಟ್ಟಿದ ವೀರ ತಾಮ್ರಧ್ವಜಗೆ ಸೋತು ಮುದುಕನಾಗಿ ಭಿಕ್ಷದಶ್ವ ತಂದವನೆಂದೆ 5 ಸೋದರಮಾವನ ಕೊಂದವನೆಂದೆ ಸೋದರಳಿಯರ ಜೀವ ಹೊಡೆಸಿದನೆಂದೆ ಭೇದದಿಂದ ಸಾಧು ಹನುಮನ ಸೋಲಿಸಿ ಸಾಧಿಸ್ವರೂಪಕ್ಕೆ ಪತಾಕೆನಿಸಿದನೆಂದೆ 6 ಜಾರ ಸಿರಿ ಸೊರೆಗೊಂಡವನೆಂದೆ ಮೀರಿದಂಥ ಮಹಮಾಯದ ಹೆಣ್ಣೆಂದೆ ಈರೇಳುಲೋಕದ ಕಪಟನಾಟಕನೆಂದೆ 7 ಮೊಚ್ಚೆಗಾರ ಕೈಯೊಳುಂಡವನೆಂದೆ ಉಚ್ಚಿಷ್ಟನಾಗಿ ಬಹಿಷ್ಕಾರ್ಹೊಂದಿದನೆಂದೆ ವೆಚ್ಚಮಾಡಿ ಮತ್ತು ಕುಲದಿ ಬಿದ್ದವನೆಂದೆ ನಿಶ್ಚಲ ಭಕ್ತರಿಗ್ಹುಚ್ಚ್ಹಿಡಿಸಿದನೆಂದೆ 8 ಪುಲ್ಲನಯನ ಸಿರಿರಾಮನ ಮುಂದೆ ಅಲ್ಲದ ಮಾತುಗಳ್ನಾನೇನೆಂದೆ ಬಲ್ಲಿದ ಹದಿನಾಲ್ಕು ಲೋಕ ಪೊತ್ತವನೆಂದೆ ಉಲ್ಲಾಸದಿ ನಿಮ್ಮ ಬಿರುದು ಸಾರುತ ಬಂದೆ 9
--------------
ರಾಮದಾಸರು
ಏಳಯ್ಯ ಶ್ರೀ ಲಕ್ಷ್ಮೀರಮಣ ಸುರನÀುತ ಚರಣ ಏಳು ಶ್ರೀ ನೀಲಕಂಠನ ಮಿತ್ರ ಸುಚರಿತ್ರ ಏಳು ಶ್ರೀ ಭಾಗೀರಥೀ ಪಿತನೆ ಮತಿಯುತನೆ ಏಳು ಶ್ರೀ ಕೃಷ್ಣರಾಯ ಸ್ವಾಮಿ ಏಳಯ್ಯ ಬೆಳಗಾಯಿತು ಪ ನಸುಗೆಂಪಾಗಿ ತಾರಕಿಗಳಡುಗುತಿದೆ ಬೊಂಪು ಹರಿದೋಡುತಿದೆಕೋ ಸೊಂಪಡಗುತಿದೆ ಕುಮುದ ಕಮಲವರಳುತಿದೆ ನಾಗ ಸಂಪಿಗೆಯ ಬನದಿ ಸ್ವರ ಗೈಯುತಿದೆ ಮರಿದುಂಬಿ ಸಂಪತ್ತು ಬಡವಗೆ ಬರುವಂತೆ ರವಿ ಬಿಂಬ ಸೊಂಪಿ ನಿಂದೆಸೆಯುತಿದೆಕೋ ||ಸ್ವಾಮಿ|| 1 ಹಲವುಮೃಗ ಜಾತಿಗಳು ಹಳುವನಡ ಹಾಯುತಿವೆ ಫಲ ಪುಷ್ಪಚಯವು ಪಲ್ಲವಿಸಿ ಪಸರಿಸುತಲಿವೆ ಗಿಳಿ ವಿಂಡು ನಲಿಯುತಿದೆ ನವಿಲು ಜೇಂಕರಿಸುತಿವೆ ಹೊಲ ಮನೆಗಳೆಲ್ಲ ಹಸನಾಗಿ ಕಾಣಿಸುತಲಿವೆ ಸುಳಿಗಾಳಿ ಸುಳಿಯುತಿದೆ ಜಲಜಾಕ್ಷನುಪ್ಪವಡಿಸಾ ||ಸ್ವಾಮಿ|| 2 ಹಕ್ಕಿಗಳು ಹಾರುತಿದೆ ಕುಕ್ಕುಟವು ಕೂಗುತಿದೆ ನಕ್ಷತ್ರ ಪತಿಯ ಪ್ರಭೆ ಮಾಸುತಿದೆ ಸುರಭಿ ಬಲು ರಕ್ಕಸಾಂತರನೆವಳು ಮನೆಮನೆ ಬಿಡದೆ ಅಮ್ಮಿಯನು ಹುಡುಕುತಿವೆ ಚೊಕ್ಕ ಬೆಳಗಾಯಿತಿದೆ ಕೋ ||ಕೃಷ್ಣ || 3 ಪತಿವ್ರತೆಯರೆದ್ದು ಪುರುಷನ ಚರಣಕ್ಕೆರಗಿ ಚಮ ತ್ಕøತಿಯಿಂದ ಮುಖ ಮಜ್ಜನವಮಾಡಿ ಪಣೆಗಿಟ್ಟು ದಧಿ ಮಥಕನುವಾಗಿ ಕುಳಿತು ಅತಿಶಯ ದೊಳಗೆಲ್ಲ ಮನೆವಾರ್ತೆಯನು ಮುಗಿಸಿ ನಿಜ ಮತ ವಿಡದು ಭಕ್ತಿಯಲಿ ಗಿಂಡಿಲುದಕವ ತುಂಬಿ ನೀನು ಉಪ್ಪವಡಿಸ 4 ಮದ್ದು ಮಂತ್ರವು ಸಿದ್ದಿಸುವ ಕಳವಿನೊಳಗಿರ್ದ ಚೋರರಿ ಗೆದೆಯ ಧೈರ್ಯಗುಂದುವ ಸಮಯ ಉದ್ಯೋಗವಂತರಿಗೆ ಎಚ್ಚರಿಕೆ ಸಮಯ ದರಿದ್ರರಿಗೆ ನಿದ್ದೆ ಸಮಯ ಬುದ್ದಿಯುತರಾದ ಬುಧಬಾಲರಿಗರ್ಥಗ್ರಂಥ ದ್ಯಾನ ಶಾಸ್ತ್ರ ಪುರಾಣಗಳ ಬಹುವಿದ್ಯೆ ಪಠಿಸುವ ಮುದ್ದು ಗೋಪಾಲಕೃಷ್ಣ 5 ವ್ಯಾಸ ವಾಲ್ಮೀಕಿ ಶುಕನಾರದನು ಶೌನಕ ಪರಾಶರ ವಶಿಷ್ಟ ವೈಶಂಪಾಯ ಕಣ್ವ ವಿಶ್ವಾಮಿತ್ರ ಗೌತಮ ಭರದ್ವಾಜ ಸನಕ ದೂರ್ವಾಸ ಕೌಶಿಕ ಕಪಿಲರು ಕೌಶ್ಯಪ ದಧೀಚಿ ಭಾರ್ಗವರಗಸ್ತ್ಯ ಋಷಿ ಈ ಸಮಸ್ತಾದಿ ಹರಿಯೇ || ಸ್ವಾಮಿ || 6 ಜಾಂಬವ ವಿಭೀಷಣಾಶ್ವತ್ಥಾಮ ಹನುಮಂತ ಜಂಭಾರಿಸುತ ಧನಂಜಯ ಬಲಿಷ್ಠಹಲಾದರೆಂಬಸದ್ಭಕ್ತರುಗಳು ಅಂಬುಜೋದ್ಭವ ಮುಖ್ಯರಮರ ಗಂಧರ್ವಾದಿ ತುಂಬುರ ಭುಜಂಗ ಭೂಸುರರೆಲ್ಲರೊಂದಾಗಿ ಬಿಡದ ಹಂಬಲಿಸುತೈದಾರೆ ಹರಿಯೆ || ಸ್ವಾಮಿ || 7 ಗಂಗೆ ಗೋದಾವರಿಯ ಭೀಮರತಿವರದೆ ವರ ತುಂಗ ಭದ್ರೆಯು ಯಮುನೆ ಕಾವೇರಿ ಸಿಂಧು ಅಂಗನೆಯರೆಲ್ಲರೂ ಕೂಡಿ ರಂಗು ಮಾಣಿಕದ ಆಭರಣಗಳಲಂಕರಿಸಿ ಹಿಂಗದೆಲ್ಲರು ನೆರೆದು ಹರಿ ನಿಮ್ಮ ಬಾಗಿಲೋಳು ಮಂಗಳಭಿಷೇಕಕೆಂದು ಸ್ವಾಮಿ 8 ಕರುಗಳನು ಕಾಯ್ದ ಕಾರುಣ್ಯ ಮೂರುತಿ ಏಳು ವರ ಪಾಂಡುರಂಗ ವಿಠಲ ಹರಿಸುತನ ಹಯವರೂಥವ ಹರಿಸಿದವನೆ ಏಳು ಹರಿಸುತನ ಸುತನ ಸುತನ ಕಾಯ್ದವನೆ ಏಳು ಹರಿಸುತನ ಕೋಣೆ ಲಕ್ಷ್ಮೀರಮಣನೆ ಏಳು ಶ್ರೀ ಹರಿಯೆ ನೀನು ಉಪ್ಪವಡಿಸಾ ||ಕೃಷ್ಣ || 9
--------------
ಕವಿ ಪರಮದೇವದಾಸರು