ಒಟ್ಟು 1545 ಕಡೆಗಳಲ್ಲಿ , 98 ದಾಸರು , 1201 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನಾಗಮವ ಹೀಗಾಯಿತೊ ದೇವ ಇನ್ನು ನೀ ಎನ್ನನು ಸಲಹುವ ಬಗೆಯಂತೊ ಪ ಸಕ್ಕರಿ ತಾಯೆಂದು ಸಂತಿಗೆ ಕಳುಹಲು ತಕ್ಕಡಿ ಲಶುನವ ತಂದ ತರಳನಂತೆ 1 ಪರಮ ನಿರ್ಮಲವಾದ ತುಲಸಿ ತಾಯೆನೆ ದುಷ್ಟ ತುರುಚಿಯನೆ ತಂದ ತರಳನಂತೆ 2 ಮಸಿಯ ಒರೆಸಿಕೊಂಡು ಬಾಯೆನ್ನೆ ಶಿಶು ತಾನೆ ಕೆಸರು ಪೂಸಿಕೊಂಡು ಬಂದ ತರಳನಂತೆ3 ಕಳುಹಿದಾ ಪಿರಿಯರು ಹಳಿಯಲಿ ಚಿಂತಿಲ್ಲ ಗೆಳೆಯಾರು ನಗುವ ಚಿಂತೆಯೆ ಘನವೆಲೊ ದೇವ4 ಆಪುತ ಪ್ರಿಯ ಬಂಧು ವ್ಯಾಪಕ ನೀನೆಂದು ಜ್ಞಾಪಕಗೊಳಿಸಿದೆ ವಾಸುದೇವವಿಠಲ 5
--------------
ವ್ಯಾಸತತ್ವಜ್ಞದಾಸರು
ಎಮ್ಮಳವೇ ಪೊಗಳಲಮ್ಮಮ್ಮಾ ಬೊಮ್ಮನರಿಯ ನಿಮ್ಮ ಮಹಿಮಾ ಪ ಭೂತಳದೊಳರವು ಸಕಲ ಉಂಟೆಂದು ಖ್ಯಾತಿಯಿಂದ ನಾನಾತೆರದಿ ಸ್ತುತಿಸೆ ಮಾತಿಗೆ ವಿಗತ ಕಗತ ವಾಗೆ ಶೃತಿಗಳು ನೇತಿ ನೇತಿ ತಿರುಗಿದ ಬಳಿಕಾ 1 ಕುಸುಮನಾಭೇನನ ಸಾಮೀಪೆಂಬಾ ತವಕದಿ ಅಸಮ ತೆರದಿ ಪೊಗಳಲು ಚರಿತಾ ದ್ವಿಸಹಸ್ರ ಜಿವ್ಹಕ ಮೀರಿ ಪೊಗಳುತ ಅತಿ ಕುಶಿದು ತಲೆವಾಗಿ ತಾ ನಾಚಿದ ಬಳಿಕ2 ತರಣಿ ಕೋಟಿತೇಜ ಸ್ವರೂಪ ಜ್ಯೋತಿಯ ಅನ ವರತ ಹೃದಯ ಮಂದಿರದೊಳಿರಿಸಿ ಮೆರವುತ ನಿನಗತಿ ಬ್ರಯರಾದಾ ಭಕುತರಾ ಸ್ಮರಣೆ ಯೋಗ್ಯವಲ್ಲದೆ ಮಹಿಪತಿಸುತ ಪ್ರಿಯಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎಲೆ ಸಖಿಯೆ ಪೋಗು ವಿಠಲನ ಬಳಿಗೆಬೇಗವನ ತಾರೆ ಎನ್ನ ಮನೆಗೆಪ. ಚಂದ್ರ ಉದಿಸುತಲಿ ಬಂದ ರಂಜಿಸುತರ-ವಿಂದಬಾಣ ನಡೆತಂದಮಂದಮಾರುತ ಮುಂದೆ ನಿಂದ ಅವ ಕುಸುಮ-ಗಂಧದಿಂದಲೆನ್ನ ಕೊಂದ1 ಕೀರ ನುಡಿಯುತಿದೆ ಧೀರ ಕೋಕಿಲಿಯಸ್ವರ ಕರ್ಣಕಠೋರಮಾರ ಬೇಗ ಹರಿಬಾರದಿರೆ ಕೆಳದಿಕ್ರೂರ ಎನ್ನ ಕೊಲ್ಲದಿರ 2 ಜೀಯ ಸುಜನರ ಸಹಾಯ ನಿಗಮಕುಲಗೇಯ ನಿರ್ಧೂತ ಹೇಯಪ್ರಿಯ ಹಯವದನರಾಯ ಸಖಿ ಎನ್ನಕಾಯಲಿನ್ನೇನು ಉಪಾಯ 3
--------------
ವಾದಿರಾಜ
ಎಲ್ಲ ಲೀಲೆ ಇದೆಲ್ಲ ಲೀಲೆಎಲ್ಲ ಲೀಲೆ ರಂಗಗೆಲ್ಲ ಲೀಲೆ ಪ. ಪುಟ್ಟಿಸುವುದು ಮನವಿಟ್ಟು ಕಾವುದುದುಷ್ಟರ ಶಿಕ್ಷೆ ಅಲ್ಲಿ ವಿಶಿಷ್ಟರ ರಕ್ಷೆ1 ನೀರೊಳುಲ್ಲಾಸ ಮತ್ತಾರಣ್ಯವಾಸಹಾರುವರಾಟ ತನ್ನ ನಾರಿಯ ಬೇಟ 2 ಗೊಲ್ಲರಾಕೃತಿ ಬತ್ತಲೆಯ ಸ್ಥಿತಿಬಲ್ಲಿದ ದೈವ ಕಲಿಯ ಗೆಲ್ಲುವ ಭಾಗ 3 ವರನಿಪ್ಪುದು ಕರೆದರೆ ಬಪ್ಪುದುಧರೆಯಜಮ ಪರಿಪರಿಯ ಕರ್ಮ4 ಹೆಂಗಳಕೂಟ ಅಪಾಂಗದ ನೋಟ ಹಾಸ್ಯದಂಗದಿಂದೂಟ ರಣರಂಗದಿಂದೋಟ 5 ಅಂಬಿನ ವೇಧ ನಿನ ತುಂಬಿದ ಕ್ರೋಧ ತ್ರಿ-ಯಂಬಕ ಪೂಜೆ ತ್ರಿವಿಡಂಬನವೋಜೆ6 ಕರ್ತುಮಾಕರ್ತು ಮತ್ತನ್ಯಥಾಕರ್ತು ಎಂಬಶಕ್ತಿದೇವಗೆ ಬಲುಯುಕ್ತಿ ಇವಗೆ7 ನಾವೆಕರ್ತವ್ಯಂ ಸುಪ್ರವೆ ವಕ್ತವ್ಯಂಏಸು ಮಹಿಮೆಗೆ ಕೃತಕೃತ್ಯ ನಮಗೆ 8 ಪ್ರಿಯಮೋದನ ದೈತ್ಯೇಯಭೇದನಹಯವದನ ನಿನ್ನರ್ಥಿ ಕಾಯಿದನ9
--------------
ವಾದಿರಾಜ
ಎಲ್ಲನು ನಿನಗೆ ಕೂಡಿತಯ್ಯ ಹರಿ ಪುಲ್ಲನಾಭ ದಯ ಮಾಡಯ್ಯ ಪ ಖುಲ್ಲನು ನಾಬಲು ಎಲ್ಲಿಯುಸಲ್ಲದೆ ತಲ್ಲಣಿಸುತ ನಿನ್ನ ಬಲವಂದೆ ದೇವ ದೇವ ಅ.ಪ ಧೃಢಗುಣ ಎನ್ನೊಳಿಲ್ಲಯ್ಯ ಬಲು ನುಡಿ ಹೀನ ನಾಕಡು ಪಾಪ್ಯಯ್ಯ ನಡೆ ನುಡಿ ಇಲ್ಲದೆ ಕಡುನೊಂದೀಗ ನಿಮ್ಮ ನ್ಹುಡುಕುತ ತಿರುಗುವೆ ಜಡಜಾಕ್ಷನೆ ಪೊರೆ 1 ಪರರದ್ರವ್ಯವಪಹರಿಸಿದೆನೊ ನಾ ಪರಮನೀಚನಾಗಿ ಚರಿಸಿದೆನೊ ಅಗಣಿತ ದುರಿತವನುನಾ ಜರೆಯದೆ ಪರಿಪರಿ ಮಾಡಿದೆನೊ ಮರೆವೆಲಿ ಮಾಡಿದ ಪರಮ ಎನ್ನತಪ್ಪು ಕರುಣಾಕರನೆ ನೀಕರುಣದಿ ಕ್ಷಮಿಸಯ್ಯ 2 ಶರಣಾಗತ ವತ್ಸಲನೆಂದು ನಿನ್ನ ಮರೆಯಹೊಕ್ಕೆನೆಯ್ಯ ದಯಾಸಿಂಧು ಮೊರೆಕೇಳು ಭಕ್ತರ ಪ್ರಿಯಬಂಧು ಎನ್ನ ದುರಿತದಿ ಕಡೆ ಹಾಯ್ಸಯ್ ಇಂದು ಶಿರಬಾಗಿ ನಿಮಗೆ ಸೆರೆಗೊಡ್ಡಿ ಬೇಡುವೆ ಕರಪಿಡಿ ಬಿಡಬೇಡ ಸಿರಿವರ ಶ್ರೀರಾಮ 3
--------------
ರಾಮದಾಸರು
ಎಲ್ಲಿ ಶ್ರೀ ಗುರುವಿನ ದಯದೊಲವಿಹುದು | ದುರಿತ ಭಯ ಮುಟ್ಟ ಲರಿಯದು 1 ದಿವಸಾಧಿಪನಾ ಮಂಡಲವನು ಸಾರಿಹಗ | ಜವದಿ ಕತ್ತಲೆಯು ಮುಸುಕುವದೇನವಗ 2 ಸಕಲ ಗಜಗಳು ಮುದದಲಿ ಒಂದಾಗಿ | ಶಕ್ತಿ ಸಿಂಹನ ಮುಂದೆ ನಿಲ್ಲುವವೇ ಪೋಗಿ 3 ಪ್ರತ್ಯಕ್ಷದಲಿ ಅನಳನಿಹು ಸ್ಥಳದಲಿ | ಮತ್ತೆದೋರುದೇ ಮುಖ ಹಿಮವು ಇದಿರಲಿ 4 ಕಂದನ ಪ್ರಿಯ ಮಹಿಪತಿಯ | ಸ್ಮರಿಸದೇ | ಅಂಧಕನಂತೆ ಬಾಳುತಿಹಾವರಿಗಲ್ಲದೇ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎಲ್ಲಿಗೆ ಗಮನವಿದು ದುರ್ಗಾಂಬಿಕೆ ಎಲ್ಲಿಗೆ ಗಮನವಿದು ಪ. ಗಮನ ಹರವಲ್ಲಭೆ ನೀ ದಯ- ದಲ್ಲಿ ಬಾಲಕನೊಳು ಮೆಲ್ಲನಿಂದರುಹವ್ವಅ.ಪ. ಚಂಡಿಕೆ ಮಹಮ್ಮಾಯೆ ದೇವಿ ಪ್ರ- ಚಂಡ ಲೋಕತಾಯೆ ಖಂಡಪರಶುಪ್ರಿಯೆ ಅಖಿಲ ಭೂ- ಮಂಡಲಕಧಿಪತಿಯೆ ದಂಡಿಗೆ ಮೇಲೇರಿಕೊಂಡು ದುಷ್ಟರ ಶಿರ- ಚೆಂಡಾಡಿ ಶರಣರ ಕೊಂಡಾಡಿ ಪೊರೆವುತ1 ನಿಲ್ಲು ನಿಲ್ಲು ಜನನಿ ಬಾಲಕ- ನಲ್ಲವೆ ಹೇ ಕರುಣಿ ಪುಲ್ಲನಯನೆ ತ್ರಿಗುಣಿ ದಯವಿನಿ- ತಿಲ್ಲವೆ ನಾರಾಯಣಿ ಮಲ್ಲಿಗೆಗಂಧಿ ಪಥವೆಲ್ಲಿಯು ಕಾಣದೆ ಸಲ್ಲಲಿತಾಂಘ್ರಿಯ ನಿಲ್ಲದೆ ಬೇಡುವೆ 2 ದಾರಿ ಯಾವುದಮ್ಮ ಮುಕ್ತಿಯ ದಾರಿ ತೋರಿಸಮ್ಮ ಸೇರಿದೆ ನಾ ನಿಮ್ಮ ಭವಾಬ್ಧಿಯ ಪಾರುಗಾಣಿಸಮ್ಮ ಚಾರುನಿಗಮ ಶಿರಭೋರೆನಿಪ ವಿಚಾರ- ಸಾರವಿತ್ತು ದಯಪಾಲಿಸು ಶುಭವರ3 ಕಷ್ಟದುರಿತ ಭಯವ ತಾ ಬಡಿ- ದಟ್ಟಿ ಭಕ್ತಕುಲದ ಶ್ರೇಷ್ಠತನದಿ ಪೊರೆವ ತನ್ನ ಇಚ್ಛೆಯ ಕೈಗೊಳುವ ಲಕ್ಷ್ಮೀನಾರಾಯಣದಿಟ್ಟಭಗಿನಿ ಶಿವೆ ಕಟ್ಟಿಲಪುರದೊಳು ಗುಟ್ಟಿನಿಂ ನೆಲಸಿಹೆ4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಎಲ್ಲಿಗೆ ಗಮನವಿದು ದುರ್ಗಾಂಬಿಕೆ ಎಲ್ಲಿಗೆ ಗಮನವಿದುಪ. ಗಮನ ಹರವಲ್ಲಭೆ ನೀ ದಯ- ದಲ್ಲಿ ಬಾಲಕನೊಳು ಮೆಲ್ಲನಿಂದರುಹವ್ವಅ.ಪ. ಚಂಡಿಕೆ ಮಹಮ್ಮಾಯೆ ದೇವಿ ಪ್ರ- ಚಂಡ ಲೋಕತಾಯೆ ಖಂಡಪರಶುಪ್ರಿಯೆ ಅಖಿಲ ಭೂ- ಮಂಡಲಕಧಿಪತಿಯೆ ದಂಡಿಗೆ ಮೇಲೇರಿಕೊಂಡು ದುಷ್ಟರ ಶಿರ- ಚೆಂಡಾಡಿ ಶರಣರ ಕೊಂಡಾಡಿ ಪೊರೆವುತ 1 ನಿಲ್ಲು ನಿಲ್ಲು ಜನನಿ ಬಾಲಕ- ನಲ್ಲವೆ ಹೇ ಕರುಣಿ ಪುಲ್ಲನಯನೆ ತ್ರಿಗುಣಿ ದಯವಿನಿ- ತಿಲ್ಲವೆ ನಾರಾಯಣಿ ಮಲ್ಲಿಗೆಗಂಧಿ ಪಥವೆಲ್ಲಿಯು ಕಾಣದೆ ಸಲ್ಲಲಿತಾಂಘ್ರಿಯ ನಿಲ್ಲದೆ ಬೇಡುವೆ 2 ದಾರಿ ಯಾವುದಮ್ಮ ಮುಕ್ತಿಯ ದಾರಿ ತೋರಿಸಮ್ಮ ಸೇರಿದೆ ನಾ ನಿಮ್ಮ ಭವಾಬ್ಧಿಯ ಪಾರುಗಾಣಿಸಮ್ಮ ಚಾರುನಿಗಮ ಶಿರಭೋರೆನಿಪ ವಿಚಾರ- ಸಾರವಿತ್ತು ದಯಪಾಲಿಸು ಶುಭವರ 3 ಕಷ್ಟದುರಿತ ಭಯವ ತಾ ಬಡಿ- ದಟ್ಟಿ ಭಕ್ತಕುಲದ ಶ್ರೇಷ್ಠತನದಿ ಪೊರೆವ ತನ್ನ ಇಚ್ಛೆಯ ಕೈಗೊಳುವ ಲಕ್ಷ್ಮೀನಾರಾಯಣದಿಟ್ಟಭಗಿನಿ ಶಿವೆ ಕಟ್ಟಿಲಪುರದೊಳು ಗುಟ್ಟಿನಿಂ ನೆಲಸಿಹೆ4
--------------
ತುಪಾಕಿ ವೆಂಕಟರಮಣಾಚಾರ್ಯ
ಎಷ್ಟು ಸಾಹಸವಂತ ನೀನೆ ಬಲವಂತದಿಟ್ಟಮೂರುತಿ ಭಳಭಳಿರೆ ಹನುಮಂತ ಪ. ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆಗಳಕುಟ್ಟಿ ಚೆಂಡಾಡಿದ ದಿಟ್ಟ ನೀನಹುದೊ ಅ.ಪ. ರಾಮರಪ್ಪಣೆಯಿಂದ ಶರಧಿಯ ದಾಟಿಆ ಮಹಾ ಲಂಕೆಯ ಕಂಡೆ ಕಿರೀಟಸ್ವಾಮಿಕಾರ್ಯವನು ಪ್ರೇಮದಿ ನಡೆಸಿದಿಈ ಮಹಿಯೊಳು ನಿನಗಾರೈ ಸಾಟಿ1 ದೂರದಿಂದಸುರನ ಪುರವ[ನ್ನು] ನೋಡಿಭರದಿ ಶ್ರೀರಾಮರ ಸ್ಮರಣೆಯನು ಮಾಡಿಹಾರಿದೆ ಹರುಷದಿ ಸಂಹರಿಸಿ ಲಂಕಿಣಿಯನುವಾರಿಜಮುಖಿಯನು ಕಂಡು ಮಾತಾಡಿ 2 ರಾಮರ ಕ್ಷೇಮವ ರಮಣಿಗೆ ಪೇಳಿತಾಮಸ ಮಾಡದೆ ಮುದ್ರೆನೊಪ್ಪಿಸಿಪ್ರೇಮದಿಂ ಜಾನಕಿ ಕುರುಹನು ಕೊಡಲಾಗಆ ಮಹಾ ವನದೊಳು ಫಲವನು ಬೇಡಿ 3 ಕಣ್ಣ್ಣಿಗೆ ಪ್ರಿಯವಾದ ಹಣ್ಣ[ನು] ಕೊಯ್ದುಹಣ್ಣಿನ ನೆವದಲಿ ಅಸುರರ ಹೊಯ್ದುಪಣ್ಣಪಣ್ಣನೆ ಹಾರಿ ನೆಗೆನೆಗೆದಾಡುತಬಣ್ಣಿಸಿ ಅಸುರರ ಬಲವನು ಮುರಿದು4 ಶೃಂಗಾರವನದೊಳಗಿದ್ದ ರಾಕ್ಷಸರಅಂಗವನಳಿಸಿದೆ ಅತಿರಣಶೂರನುಂಗಿ ಅಸ್ತ್ರಗಳ ಅಕ್ಷಯಕುವರನಭಂಗಿಸಿ ಬಿಸುಟಿಯೊ ಬಂದ ರಕ್ಕಸರ 5 ದೂರ ಪೇಳಿದರೆಲ್ಲ ರಾವಣನೊಡನೆಚೀರುತ್ತ ಕರೆಸಿದ ಇಂದ್ರಜಿತುವನೆಚೋರಕಪಿಯನು ನೀ ಹಿಡಿತಹುದೆನ್ನುತಶೂರರ ಕಳುಹಿದ ನಿಜಸುತನೊಡನೆ 6 ಪಿಡಿದನು ಇಂದ್ರಜಿತು ಕಡುಕೋಪದಿಂದಹೆಡೆಮುರಿ ಕಟ್ಟಿದ ಬ್ರಹ್ಮಾಸ್ತ್ರದಿಂದಗುಡುಗುಡುಗುಟ್ಟುತ ಕಿಡಿಕಿಡಿಯಾಗುತನಡೆದನು ಲಂಕೆಯ ಒಡೆಯನಿದ್ದೆಡೆಗೆ 7 ಕಂಡನು ರಾವಣನುದ್ದಂಡ ಕಪಿಯನುಮಂಡೆಯ ತೂಗುತ್ತ ಮಾತಾಡಿಸಿದನುಭಂಡುಮಾಡದೆ ಬಿಡೆನೋಡು ಕಪಿಯೆನೆಗಂಡುಗಲಿಯು ದುರಿದುರಿಸಿ ನೋಡಿದನು 8 ಬಂಟ ಬಂದಿಹೆನೊಹಲವು ಮಾತ್ಯಾಕೊ ಹನುಮನು ನಾನೆ 9 ಖುಲ್ಲ ರಕ್ಕಸನೆತೊಡೆವೆನೊ ನಿನ್ನ ಪಣೆಯ ಅಕ್ಷರವ 10 ನಿನ್ನಂಥ ದೂತರು ರಾಮನ ಬಳಿಯೊಳುಇನ್ನೆಷ್ಟು ಮಂದಿ ಉಂಟು ಹೇಳೊ ನೀ ತ್ವರಿಯಾನನ್ನಂಥ ದೂತರು ನಿನ್ನಂಥ ಪ್ರೇತರುಇನ್ನೂರು ಮುನ್ನೂರು ಕೋಟಿ ಕೇಳರಿಯಾ11 ಕಡುಕೋಪದಿಂದಲಿ ಖೂಳರಾವಣನು ಸುಡಿರೆಂದ ಬಾಲವ ಸುತ್ತಿ ವಸನವನುಒಡೆಯನ ಮಾತಿಗೆ ತಡೆಬಡೆಯಿಲ್ಲದೆಒಡನೆಮುತ್ತಿದರು ಗಡಿಮನೆಯವರು 12 ತÀಂದರು ವಸನವ ತಂಡತÀಂಡದಲಿಒಂದೊಂದು ಮೂಟೆ ಎಂಬತ್ತು ಕೋಟಿಯಲಿಚಂದದಿ ಹರಳಿನ ತೈಲದೊಳದ್ದಿಸೆನಿಂದ ಹನುಮನು ಬಾಲವ ಬೆಳೆಸುತ 13 ಶಾಲು ಸಕಲಾತ್ಯಾಯಿತು ಸಾಲದೆಯಿರಲುಬಾಲೆರ ವಸ್ತ್ರವ ಸೆಳೆದುತಾರೆನಲುಬಾಲವ ನಿಲ್ಲಿಸೆ ಬೆಂಕಿಯನಿಡುತಲಿಕಾಲಮೃತ್ಯುವ ಕೆಣಕಿದರಲ್ಲಿ14 ಕುಣಿಕುಣಿದಾಡುತ ಕೂಗಿ ಬೊಬ್ಬಿಡುತಇಣಿಕಿನೋಡುತ ಅಸುರರನಣಕಿಸುತಝಣಝಣಝಣರೆನೆ ಬಾಲದಗಂಟೆಯುಮನದಿ ಶ್ರೀರಾಮರ ಪಾದವ ನೆನೆಯುತ 15 ಮಂಗಳಂ ಶ್ರೀರಾಮಚಂದ್ರ ಮೂರುತಿಗೆಮಂಗಳಂ ಸೀತಾದೇವಿ ಚರಣಂಗಳಿಗೆಮಂಗಳವೆನುತ ಲಂಕೆಯ ಸುಟ್ಟುಲಂಘಿಸಿ ಅಸುರನ ಗಡ್ಡಕೆ ಹಿಡಿದ 16 ಹತ್ತಿತು ಅಸುರನ ಗಡ್ಡಮೀಸೆಗಳುಸುತ್ತಿತು ಹೊಗೆ ಬ್ರಹ್ಮಾಂಡಕೋಟಿಯೊಳುಚಿತ್ತದಿ ರಾಮರು ಕೋಪಿಸುವರು ಎಂದುಚಿತ್ರದಿ ನಡೆದನು ಅರಸನಿದ್ದೆಡೆಗೆ 17 ಸೀತೆಯಕ್ಷೇಮವ ರಾಮರಿಗ್ಹೇಳಿಪ್ರೀತಿಯಿಂ ಕೊಟ್ಟಕುರುಹ ಕರದಲ್ಲಿಸೇತುವೆ ಕಟ್ಟಿ ಚತುರಂಗ ಬಲಸಹಮುತ್ತಿತು ಲಂಕೆಯ ಸೂರೆಗೈಯುತಲಿ 18 ವೆಗ್ಗಳವಾಯಿತು ರಾಮರ ದಂಡುಮುತ್ತಿತು ಲಂಕೆಯ ಕೋಟೆಯ ಕಂಡುಹೆಗ್ಗದ ಕಾಯ್ವರ ನುಗ್ಗುಮಾಡುತಿರೆಝಗ್ಗನೆ ಪೇಳ್ದರು ರಾವಣಗಂದು 19 ರಾವಣಮೊದಲಾದ ರಾಕ್ಷಸರ ಕೊಂದುಭಾವಶುದ್ಧದಲಿ ವಿಭೀಷಣ ಬಾಳೆಂದುದೇವಿ ಸೀತೆಯನೊಡಗೊಂಡಯೋಧ್ಯದಿದೇವ ಶ್ರೀರಾಮರು ರಾಜ್ಯವಾಳಿದರು 20 ಶಂಖದೈತ್ಯನ ಕೊಂದೆ ಶರಣು ಶರಣಯ್ಯಶಂಖಗಿರಿಯಲಿ ನಿಂದೆ ಹನಮಂತರಾಯಪಂಕಜಾಕ್ಷ ಹಯವದನನ ಕಟಾಕ್ಷದಿಬಿಂಕದಿ ಪಡೆದೆಯೊ ಅಜನಪದವಿಯ21
--------------
ವಾದಿರಾಜ
ಏಕೆ ನಡುಗಿದೆ ತಾಯೆ ಭೂಮಿ ನಡುರಾತ್ರಿಯೊಳು - ಜಗ ಪ ದೇಕ ಪೊಡವಿಗೊಡೆಯನ ರಾಣಿ ಪರಮ ಕಲ್ಯಾಣಿ ಅ ಗುರು ಹಿರಿಯರನು ಕಂಡು ಮುರುಕಿಸುವ ಮೋರೆಯಲಿಅರೆಮತಿಯ ಕೊಂಕು ಮಾತುಗಳನಾಡಿಚರಣಕೆರಗದ ಮನುಜರಿರಬಾರದೆಂದೆನುತಮರಮುರಿದು ಒರಗಿ ಸಾಯಲಿ ಎಂದು ನಡುಗಿದೆಯ1 ಉತ್ತಮರ ಹೊಟ್ಟೆಯಲಿ ಬಗಳೊ ಶ್ವಾನವು ಹುಟ್ಟಿಹೆತ್ತವರ ನಿರ್ಬಂಧಕೊಳಗು ಮಾಡಿಅತ್ತೆ ಮಾವರ ಕೀರ್ತಿಯ ಕೊಂಡಾಡುವಧಮರಹೊತ್ತು ಇರಲಾರೆನೆನುತ ಮತ್ತೆ ನಡುಗಿದೆಯ2 ಕಳ್ಳತನವನು ಕಲಿತು ಕಾಲೋಚಿತವ ಕೇಳ್ದುಸುಳ್ಳು ಮಾತುಗಳಾಡಿ ಒಡಲ ಪೊರೆದುಕೊಳ್ಳಿ ದೆವ್ವಗಳಂತೆ ಅಲೆದಾಡುತಿರುವಂಥಸುಳ್ಳು ಮನುಜರ ಹೊರಲಾರೆನೆಂದು ನಡುಗಿದೆಯ 3 ಕಲಿಯುಗದಿ ಮುರಹರನ ಸ್ಮರಣೆಯನು ಮಾಡದೆಯೆಸಲೆ ಭಕ್ತಿಯಿಂ ವೇದಶಾಸ್ತ್ರವನೋದದೆಲಲನೆಯರ ಮೇಲೆ ಕಣ್ಣಿಡುವ ಹೊಲೆಯರನು ನಾ-ನೊಲಿದು ಹೊರಲಾರೆನೆಂದು ನಡುಗಿದೆಯ 4 ಧರೆಯೊಳಗೆ ಕರ್ಮಿಗಳು ಹೆಚ್ಚಿ ಕವಿತ್ವವ ಕಲಿತುನರಕುರಿಗಳೆಲ್ಲರು ನಡೆಗೆಟ್ಟರೆಂದುಗುರುವೆ ಕೇಳಯ್ಯ ಕನಕ ಪ್ರಿಯ ತಿರುಪತಿಯಗಿರಿಯಾದಿಕೇಶವನೆ ಒಲಿದು ನಿಲ್ಲಿಸಿದ 5
--------------
ಕನಕದಾಸ
ಏನು ಮಹಿಮರೊ ನಮ್ಮ ಶ್ರೀ ಗುರುಗಳು ಶ್ರೀನಿಧಿಗೆ ಪರಮ ಪ್ರಿಯರೆನಿಸಿ ಮೆರೆಯುವರು ಪ. ಶಾಂತತ್ವವೆಂತೆಂಬ ಕವಚವನೆ ತೊಟ್ಟಿಹರು ದಾಂತತ್ವದಾ ನಡುಕಟ್ಟು ಕಟ್ಟಿಹರು ಸಂತೋಷ ಸುಖದಲಿ ಅಂತರಂಗದಿ ಹರಿಯ ಚಿಂತನೆಯ ಮಾಡುತಲಿ ಮುಕ್ತಿಪೊಂದಿಹರು 1 ವೈರಾಗ್ಯವೆಂತೆಂಬ ಆಯುಧವ ಧರಿಸಿಹರು ಸೇರಿದವರನು ಪೊರೆವ ಕಂಕಣವ ಕಟ್ಟಿ ನಾರಸಿಂಹನ ನಾಮ ಕರ್ಣಭೂಷಣ ಧರಿಸಿ ನಾರಾಯಣನ ಗುಣದ ಹಾರ ಧರಿಸಿಹರು 2 ಪರರಿಗುಪಕಾರವನೆಸಗುವ ಭುಜದ ಕೀರುತಿಯು ವರತತ್ವ ಅರುಹುವ ವನಮಾಲಿಕೆಯು ಸಿರಿ ಭಕ್ತಿಗುಣಗಳೆಂತೆಂಬೊ ವಸನಗಳು ಧರಿಸಿರುವ ಮಹಿಮರ ಸರಿಗಾಣೆ ಜಗದಿ 3 ಕುಂದದೆ ಭಕ್ತರನು ಪೊರೆಯುವ ಭಾರದ ಅಂದದಾ ಮುಕುಟ ಶಿರದಲ್ಲಿ ಧರಿಸಿ ತಂದೆ ಮುದ್ದುಮೋಹನದಾಸರೆಂದೆನಿಸುತ ಮಂದಜ್ಞ ಮನ ಪಾಪ ಪಾದುಕೆಯ ಮೆಟ್ಟಿಹರು 4 ಎಷ್ಟು ಹೇಳಲು ಸಾಧ್ಯ ಶ್ರೇಷ್ಠ ಗುರುಗಳ ಚರಿತೆ ಪಟ್ಟವಾಳ್ವರು ಜ್ಞಾನ ಸಾಮ್ರಾಜ್ಯವ ಕೆಟ್ಟ ಭವರೋಗವನು ಸುಟ್ಟು ಭಸ್ಮವ ಮಾಡಿ ಶ್ರೇಷ್ಠ ಗೋಪಾಲಕೃಷ್ಣವಿಠ್ಠಲನ ತೋರ್ವರು5
--------------
ಅಂಬಾಬಾಯಿ
ಏನುಕೌತುಕವೊ ಮ'ಪತಿರಾಯರದು ಘನಮ'ಮೆ ತಿಳಿಯದುಮೋಹಶಾಸ್ತ್ರಗಳ ರಚಿಸಲು ಬೇಕೆಂದು ಹರಿಯಾಜ್ಞೆಯನರಿದುಈ ಮ'ಯೊಳವತರಿಸಿ ಬಂದನೆಂದು ರುದ್ರಾಂಶನೆ ಅಹುದುಪದ್ಯ ಪದ್ಯಗಳಲಿ ಅತಿಗೂಢ ಅರ್ಥ 'ಹುದು ಮೂಢರಿಗೆ ತಿಳಿಯದದು 5ಮ ಎನ್ನಲು ಮನ ಪ್ರಸನ್ನವಾಗುವದು ಮ'ಮೆಯ ತಿಳಿಯುವದು' ಎನ್ನಲು 'ಡಿಸುವದು 'ತದಹಾದಿ ಸುಜನರ ಕೈವಾರಿಪ ಎನ್ನಲು ಪರಿಪರಿಯ ಕಷ್ಟದೂರಾ ಪರಮಾದರಕೆದ್ವಾರಾತಿ ಎನ್ನಲು ತಿಳಿಯಾಗುವದೈ ಬುದ್ಧಿ ಸರ್ವಾಂಗಶುದ್ಧಿ 6ಮ'ಪತಿರಾಯರು ತಪವಗೈದಸ್ಥಾನಾ ಅಲ್ಲಿಯ ವೃಂದಾವನಾಮೂರುಕ್ಷೇತ್ರ ಶಾಲಿಗ್ರಾಮದ ಸವನಾ ಮ'ಮೆಯು ಪರಿಪೂರ್ಣಾತೀರ್ಥ ಭಾ'ಯೊಳು ಸುರನದಿ ಅವತರಣಾ ಮ'ಪತಿ ಸುತಕೃಷ್ಣಾಕರುಣಾನಿಧಿ ಭೂಪತಿ'ಠ್ಠಲ ಪ್ರಿಯನಾ ಸಂತತ 'ಡಿಚರಣಾ7
--------------
ಭೂಪತಿ ವಿಠಲರು
ಏನೆಂದು ಬಣ್ಣಿಸಲಿ ಗುರುರಾಯನಾ | ತಾ ನೆನೆದವರ ಧನ್ಯಗೈಸುವನಾ ಮಹಿಮೆ ಪ ಧರಿಯೊಳಜ್ಞಾನ ತಮಹರಣ ಭಾಸ್ಕರ ನೆನಿಪ | ಕರ ಕಮಲದಲಿ ಜನಿಸೀ | ವರಮೂಲ ಮಂತ್ರವನೆ ಗುರು ಮಹಿಪತಿಯಂಬಾ | ನಿರುತ ಖ್ಯಾತಿಯ ನಾಮ ಧರಿಸಿ ಬಂದನ ಮಹಿಮೆ1 ಘನಸಾರ ವಿದ್ಯದಾಕಾರವೋ | ಶುದ್ಧಜ್ಞಾನ ಕಲ್ಪ ದ್ರುಮವಿನಾ | ಮುದ್ದು ಫಲವೋಯನಲು ಸಿದ್ಧ ಸಾಧಕರ ನಡು | ಗದ್ದುಗೆಯೊಳೆಸೆವ ಗುಣ ನದ್ವೀತಿಯನ ಮಹಿಮೆ 2 ಸ್ವಸ್ಥ ಮನದಿಂದ ಭಕುತಿ ಸ್ತವನ ಮಾಡಲಿಕೆ | ಮಸ್ತಕದ ಮ್ಯಾಲಭಯ ಹಸ್ತನೀಡೀ | ಅಸ್ತಿ ಭಾತಿ ಪ್ರಿಯಂ ವಸ್ತು ವಿದೇಶ ಸಕಲ ಹೃದ | ಯಸ್ಥನೆಂದನು ಭವವ ವಿಸ್ತರಿಸುವನ ಮಹಿಮೆ 3 ಆರಿಗಳವಡದಿಹ ನೈರಾಸ್ಯ ವೃತ್ತಿಯಾ | ತಾರದಲಿ ನಡೆದು ಮುನಿ ವೈರಾಗ್ಯದಾ | ಸಿರಿ ಸಂಪದವ ತೋರಿದನು ನೋಡಲಿಕೆ | ಸಾರ ಸಾಂಖ್ಯವು ಯೋಗ ದಾರಿ ಬಲ್ಲನ ಮಹಿಮೆ4 ಹೊಂದಿದ್ದವರ ಚಿದಾನಂದ ಸುಖಸಾಗರದಿ | ನಿಂದು ಲೋಲ್ಯಾಡಿಸಿದ ನಂದಿಗಿಂದು | ತಂದೆ ಮಹಿಪತಿ ತನ್ನ ದ್ವಂದ್ವಪಾದುಕೆಗಳನು | ನಂದನ ಸಿರದಲ್ಲಿಟ್ಟು ಛಂದ ನೋಡುವನ ಮಹಿಮೆ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನೆಂದು ಬಣ್ಣಿಸುವೆನೊ ನಾನು | ಶ್ರೀನಾಥ ಪ್ರಿಯಳಾದ ಶ್ರೀ ತುಳಸಿ ಮಹಿಮೆಯನು ಪ ಅಮೃತ ಕಲಶ ಬರೆಕಂಡು ಅತಿ | ಜಲಜಾಂಬಕನ ಪ್ರೇಮಾಂಜಲ ಉದರಲು | ಇಳಯೊಳದಿರಿಂದುದಿಸಿ ಬೆಳೆದು ನಿಂದಿರೆ ನೋಡಿ | ಒಲಿದು ಕೋಮಲ ಮುಗುಳು ತಳೆದ ಶ್ರೀಹರಿ ತಾನು 1 ಹರಿಯು ಧರಿಸಿದ ಕಂಡು ಸುರರೆಲ್ಲ ವಂದಿಸುತ | ಶಿರದಲಾಂತರು ಪರಮ ಹರುಷದಿಂದ | ಸಿರಿಸರಸ್ವತಿ ಗಿರಜೆ ನಿರುತ ನಿನ್ನಯ ವ್ರತದಿ | ಧರೆಯೊಳಗೆ ತಮ್ಮ ತಮ್ಮ ಅರಸರೊಲಿಸಿದರೆಂದು 2 ದುರಿತ ಕುಲ ಓಡುವವು ತನುವ ನೀ ಡಾಡಿ ಜಲನೀಡಿ ಕೊಂಡಾಡಿ ನಿಂದು | ಕೂಡೆ ಮೃತ್ತಿಕೆ ಫಣಿಗೆ ತೀಡಿದರೆ ಭಕುತಿಯಲಿ | ಬೇಡಿದಿಷ್ಟಾರ್ಥ ಕೈಗೂಡಬಹುದಿಳೆಯೊಳಗೆ 3 ತುಲಸಿ ಭಕುತಿಲ್ಲದವ ಕಲಿವಂಶದನುಜನವ | ತುಲಸಿ ಧರಿಸಿದ ತನುವು ಸಲೆಮುಕ್ತಿ ಮಂಟಪವು | ತುಲಸಿ ಬೆಳೆಹದಿ ಮನೆಯು ಬಲಿದ ಪುಣ್ಯದ ಖಣಿಯು | ತುಲಸಿ ಇಲ್ಲದ ಗೇಹ ಕಲುಷಾಲಯ 4 ಮೂಲದಲಿ ಬ್ರಹ್ಮ ತಾ ನೀಲಕಂಠನು ನಡುವೆ | ಮೇಲುತುದಿಯಲಿ ವಿಷ್ಣು ಲೋಲಾಡುವಾ | ಸಾಲಕೊಂಬೆಗಳಲಿ ವಿಶಾಲದೇವತೆಗಳಿಹರು | ತಾಳಿ ಪ್ರೇಮವನು ಮಹೀಪತಿ ನಂದನಾಜ್ಞೆಯಲಿ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನೆಂದ್ಹೇಳಲಿ ತಂಗಿ _ ಏನೆಂದ್ಹೇಳಲಿ ತಂಗಿ _ ಏನೆಂದ್ಹೇಳಲಿ ರಂಗನ ಮಹಿಮೆಯ ಏನೆಂದ್ಹೇಳಲಿ ಪ ಘನ್ನಸಿರಿವಿಧಿ ಧ್ಯಾನಕೆ ನಿಲುಕದ ಅಗಣಿತ ಮಹಿಮೆಯ ಅ ಎಲ್ಲವ ಬಲ್ಲನು ಎಲ್ಲವ ಮಾಡುವ ಎಲ್ಲರ ಒಡೆಯನು ಇಲ್ಲದ ಸ್ಥಳವಿಲ್ಲ ಬಲ್ಲವರಿಲ್ಲವೆ ಫುಲ್ಲನಾಭನ ನಲ್ಲನು ಲಕ್ಷ್ಮಿಗೆ ಗೊಲ್ಲನು ಆದನೆ 1 ಅಂಗನೆ ಲಕ್ಷ್ಮಿಯ ಸೊಗಸಿಗೆ ನಿಲುಕದ ಅಂಗನೆ ಇಲ್ಲದೆ ಮಗನನು ಪಡೆದವ ಹಿಂಗದ ತಾನೆ ಅಂಗನೆ ಯಾದವ ರಂಗನ ಗೋಕುಲ ಹೆಂಗಳ ಕೂಡಿದನೆ2 ತಂದೆಯ ಕೊಂದನು ಕಂದನ ಸಲಹಿದ ಕಂದನ ಕೊಂದನು ತಂದೆಯ ಸಲಹಿದ ಬಂಧುಗಳೆನ್ನದೆ ಕೊಂದನು ವಂಶವ ತಂದೆಯು ಇಲ್ಲದೆ ಕಂದನು ಆಗುವನೇ 3 ದಾನವ ನೀಡಿದ ದಾನಿಯ ತುಳಿದನು ಮಾನವ ತೆಗೆದಾ ಹೀನನ ಸಲಹಿದ ದೀನರ ಸಲಹುವ ದಾನವರಳಿವನು ಜ್ಞಾನಿಗಮ್ಯನು ಮಾನಸ ಹಂಸನ 4 ಹಸಿವೆಯ ಅರಿಯದ ಅಸಮದೇವನು ಸೊಸಿಯು ನೀಡಿದ ಶಾಖವ ತಿಂದನೆ ಪಶುಪತಿ ಋಷಿಯನು ವಶವಾಗಿ ಮಾಡಿದ ಮಾಸದಮಹಿಮನು 5 ನಾಲ್ಮೊಗನಯ್ಯನು ಸುಳ್ಳನು ಹೇಳುತ ಕಳ್ಳನು ಆದನು ಗೊಲ್ಲರ ಭಕ್ತರಿಗೆ ಮೆಲ್ಲನೆ ಕುರುಕುಲ ಎಲ್ಲವ ಸವರಿದ ಬಲ್ಲಿದ ಕೃಷ್ಣಗÉ ಇಲ್ಲವೆ ಸಮರಧಿಕ 6 ಜಗವನು ಮಾಡುವ ಜಗವನು ಪಾಲಿಪ ಜಗವನು ಅಳಿಸುವ ಮಗುವಾಗಿ ಬಂದನೆ ಜಗಜೀವ ಭಿನ್ನನು ಜಗದೊಳು ವ್ಯಾಪ್ತನು ನಗುತಲಿ ಬಾಯಲಿ ಜಗವನು ತೋರಿದನೆ7 ಯಾಗವ ನಡೆಸಿದ ಯಾಗವ ಕೆಡಿಸಿದ ಯೋಗವ ಚರಿಸುತ ಯೋಗವ ಬೋಧಿಪನೆ ಬಾಗುವ ಭಕ್ತರ ನೀಗುವ ಕಲುಷವ ಆಗಮವಂದಿತ ಸಾಗರಶಯನನೆ8 ಹತ್ತವತಾರವ ನೆತ್ತಿದ ಮಹಿಮನು ಉತ್ತಮ ಭಕುತರ ತೆತ್ತಿಗನಾದನೆ ಬತ್ತಲೆ ಶಿಶುವಾಗಿ ಬಿತ್ತಿದ ಮೋಹವ ಬೆಸ್ತರಕುವರಿಗೆ ಆತ್ಮಜನಾದವನೆ9 ಚಕ್ರವಪಿಡಿದವ ನಕ್ರನ ತರಿದವ ಶಕ್ರನಕಾಯ್ದವ ವಕ್ರೆಯ ಕೂಡಿದನೆ ರಕ್ಕಸಯವನನ ಠಕ್ಕಿಲಿ ಅಳಿಸುತ ಭಕ್ತನಪೊರೆದಾ ಯುಕ್ತಗಳೊಡೆಯನೆ 10 ನಾರೆಂದೊದರಿದ ಉರುತರ ಪಾಪಿಯ ಭರದಿಂಪೊರೆಯೊ ಕರುಣಾಸಾಗರನೆ ನರಹರಿದೇವನು ಪರಿಪರಿರೂಪನು ಪರಿಪರಿಲೀಲೆಗೆ ಮೇರೆಯೆ ಇಲ್ಲಾವೇ 11 ವಾರಿಯಲಾಡುವ ಭಾರವ ಹೊರುವಾ ಕೋರೆಯ ತೀಡುವ ಘೋರವ ತೋರುವನೇ ವೀರರತರಿಯುವ ಕ್ರೂರರಸವರುವ ಜಾರನು ಆಗುವ ವೈರಿಗಳ್ವಂಚಿಪ ಏರುವ ತೇಜಿಯನೆ 12 ಅದ್ಬುತ ರೂಪವ ಕದನದಿ ತೋರಿದ ಬದರಿಯನಿಲಯಗೆ ತುದಿಮೊದಲಿಲ್ಲಾವೆ ಉದರದಿ ಮಗುವನು ಮುದದಿಂಸಲಹಿದ ಮುದಮುನಿ ಪ್ರಿಯನು ಹೃದಯದಿ ವಾಸಿಪನೆ 13 ವಿಷವನು ಕುಡಿದಾ ವೃಷಭವಾಹನ ಅಸುರನ ಭಯದಿಂ ಘಾಸಿಲಿ ಓಡುತಿರೇ ಮೋಸದಿ ಯುವತಿಯ ವೇಷವ ಧರಿಸುತ ಪಶುಪತಿ ಸಲಹಿದನೇ 14 ಭರದಿಂ ರಥವೆತ್ತಿ ನರನಂ ಕಾಯ್ದನು ಧರಣಿಯ ಒತ್ತುತ ಕುರುಪನ ಕೆಡಹಿದನೇ ಮರೆಸುತ ರವಿಯನು ಪೊರೆದನು ಚೇಲನ ಸುರವರಪೋಷಕ ಸಿರಿಪತಿ ಚದುರನ 15 ಗಂಗೆಯಪಡೆದ ಮಂಗಳ ಮಹಿಮನು ಹಿಂಗದೆ ಗೋಪರ ಸಂಗಡ ಆಡಿದನೇ ತಿಂಗಳ ಬೆಳಕಲಿ ಶೃಂಗರ ಸೊಬಗನು ಹೆಂಗಳ ಕೂಡುತ ಸಂಗೀತ ಪಾಡಿದನೆ 16 ಕಾಳಿಯ ಫಣೆಯಲಿ ಕಾಳಿಂದೀಶನು ತಾಳಕೆ ಕುಣಿಯುತ ಕೊಳಲನ್ನೂದಿದನೆ ಘೂಳಿಗಳಳಿಯುತ ನೀಲಳತಂದವ ಊಳಿಗ ಮಾಡಿದನೇ 17 ನಾರಿಯು ಮೊರೆಯಿಡೆ ಸೀರೆಯನೀಡಿದ ವಾರಿಜಾಕ್ಷನು ಸೀರೆಯ ಚೋರನೆ ನೀರೊಳು ಮುಳುಗಿದ ಪೋರರಿಗೆಲ್ಲ ತೋರಿದ ಜಗವನು ಸೂರಿಗಳೊಡೆಯನೆ 18 ಗರುಡನ ಏರುವ ಧರಣಿಯ ರಮಣನು ಏರುತಹುಡುಗರ ತುರುಗಳ ಕಾಯ್ದನೆ ಮಾರನಪಡೆದ ಮುರಹರಕೃಷ್ಣನು ಗಿರಿಯನು ಎತ್ತುತ ಹರುಷವ ಬೀರಿದನೇ 19 ಶೃತಿಗಳು ಪೊಗಳುವ ವ್ಯಾಪ್ತನ ನಿತ್ಯನ ಪಾತಕ ಹೋಗುವುದೇ ಅಂತಕ ಗತಿ ಮತಿ ಪ್ರೇರಕ ದಾತನು ಎಂತೆನೆ ಪ್ರೀತಿಲಿ ಸಲಹುವನೆ 20 ಮಜ್ಜಿಗೆ ಕಡೆಯುವ ರಜ್ಜುವಿನಿಂದಲಿ ಮೂರ್ಜಗನಯ್ಯನು ಕಟ್ಟಿಸಿಕೊಂಡಾನೆ ಲಜ್ಜೆಯ ಬಿಡುತಲಿ ಗೆಜ್ಜೆಯ ಕಟ್ಟುತ ಘರ್ಜಿಸಿ ಪಾಡಲು ಹೆಜ್ಜೆಯ ತೋರುವನೆ 21 ದಾಸರ ಪೋಷಿಪ ಶೇಷಗಿರೀಶನ ವಿಶೇಷವೆ ಬಣ್ಣಿಸೆ ಶೇಷಗೆ ಆಗದೆ ದೋಷವು ಇಲ್ಲದ ವಾಸುದೇವನೆ ತೋಷವ ನೀಡುವ ಸಾಸಿರ ನಾಮಕನೆ22 ಜಯಮುನಿ ಅಂತರ ವಾಯುವಿನಲ್ಲಿಹ ಜಯಕೃಷ್ಣವಿಠಲನು ಜೀಯನೆ ಜಗಕೆಲ್ಲ ನಯಭಯದಿಂದಲಿ ಹಯಮುಖನೊಲಿಸಲು ಭಯವನು ಹರಿಸುತ ನ್ಯಾಯದಿ ಪಾಲಿಪನೇ 23
--------------
ಕೃಷ್ಣವಿಠಲದಾಸರು