ಒಟ್ಟು 607 ಕಡೆಗಳಲ್ಲಿ , 76 ದಾಸರು , 448 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಂಗಳೊಡೆಯರು ತಂಗಳೊಡೆಯರೇ ನಿಮ್ಮ | ಮಹಿಮೆಗೇನೆಂಬೆಅಂಗವನೆ ಮರೆಮಾಚಿ | ಮಂಗಳವಕೊಂಡಾ ಪ. ನಾಮ ನಿರ್ದೇಶ ಜನ | ಸ್ತೋಮಕಾಕರವೆಂದುನಾಮವನೆ ತೊರೆಯುತ್ತ | ಗೂಢಭಾವದಲೀ |ಭೀಮ ತೀರದಿ ನಿಂದು | ತಪವ ಗೈಯ್ಯುತಲಿರುವೆಸೀಮೆ ಮೀರಿದ ಮಹಿಮ | ದಯೆದೋರೊ ಎನಗೆ 1 ಬೋಧ | ಮೋದದಿಂ ತಿಳಿಸುತ್ತಸಾಧನವ ಗೈಸೆನಗೆ | ಹೇದಯಾ ಪೂರ್ಣ 2 ವೈರಾಗ್ಯ ಹರಿ ಭಕುತಿ | ವೀರಮೂರುತಿ ಎನಿಸಿಮಾರನ್ನ ನೀ ಗೆಲಿದು | ಮೋಕ್ಷಕಾಮೀಸಾರತಮನೂ ಗುರೂ | ಗೋವಿಂದ ವಿಠಲೆಂದುಬಾರಿಬಾರಿಗೆ ಸ್ಮರಿಸಿ ಆನಂದ ಗೊಳ್ವಾ 3
--------------
ಗುರುಗೋವಿಂದವಿಠಲರು
ತಂದೆ ನೀನೆಂದು ನಾ ಬಂದೆ ರಕ್ಷಿಸೆಂದೆ ಪ ಮುಂದೆನ್ನ ಸಲಹುವ ಭಾರವು ನಿಂದೆ ಅ.ಪ. ಮಾತು ಮಾತಿಗೆ ನಾ ನಿನ್ನ ನೆನೆವೆ ಸ್ಮರಿಸುತಿರುವೆ ಜ್ಞಾತಿ ಬಾಂಧವರ ಮತ್ಸರ ಮರೆವೆ ಮಾತಾಪಿತರುಗಳ ಸೇವೆಗೈವೆ ಈ ತನು ನಿನ್ನ ಚರಣಕರ್ಪಿಸಿರುವೆ 1 ಸಾಧನವೇನೆಂಬುದ ನಾನರಿಯೆ ಕೇಳೊ ದೊರೆಯೆ ಮಾಧವ ನಿನ ನಾಮವೆಂದಿಗೂ ಮರೆಯೆ ವೇದಬಾಹಿರರೊಡನಾಡಿ ಮೆರೆಯೆ ಕಾದುಕೋಯೆನ್ನನೆಂಬೆನು ಶ್ರೀಹರಿಯೆ 2 ನಾ ನಿನ್ನ ಕಾಡಿ ಬೇಡುವುದಿಲ್ಲ ದೂರುವನಲ್ಲ ಜ್ಞಾನ ಮಾತುರವಿತ್ತು ಕಾಯಬೇಕಲ್ಲ ನೀ ನನ್ನ ಸಲಹೊ ಲಕ್ಷ್ಮೀ ನಲ್ಲ ಶ್ರೀನಿವಾಸ ರಂಗೇಶವಿಠಲ 3
--------------
ರಂಗೇಶವಿಠಲದಾಸರು
ತಂದೆತಾಯಿ ನೀನೆ ಬಾ ಬೇಗನೆ ಪ ಮಂದರೋದ್ಧಾರ ಮನ್ಮಥ ಜನಕ ಆ- ಮಾಧವ ವಾಸುದೇವ ಗೋವಿಂದ ಮಧುಸೂಧನ ದಾಶರಥೇ ಸಂಕರ್ಷಣ ತ್ರಿವಿಕ್ರಮ ಹೃಷಿಕೇಶ ನಾರಸಿಂಹ ಪರಬ್ರಹ್ಮ 1 ಪದ್ಮನಾಭಾಚ್ಯುತ ದಾಮೋದರ ಜ- ಪ್ರದ್ಯುಮ್ನಧೋಕ್ಷಜ ನಾರಾಯಣ ಅನಿ- ರುದ್ಧ ವಿಷ್ಣು ಭೂಧರ ಉಪೇಂದ್ರ 2 ಅರಿತು ಚತುರ್ವಿಂಶತಿ ನಾಮವ ಶರಣರದುರಿತವ ಪರಿಹರಿಸುವನಮ್ಮ ಗುರುರಾಮವಿಠಲನೆ ನಿನ್ನನೆ ನಾಂ 3
--------------
ಗುರುರಾಮವಿಠಲ
ತಾಮರಸ ನೆರೆನಂಬಿದೆ ಪೊರೆಯೆನ್ನನು ಪ ಜನನ ಮರಣವಿದೂರ ನೀನಾಜನಪತಿಯ ತನುಜಾತನೆ ಅನಿಮಿಷೇಶರಿಗೊಡೆಯನೆನಿಸಿದೆ 1 ಶ್ರೀರಮಣಿಯನಾದಿಕಾಲದಿ ನಾರಿಯನಿಪಳು ನಿನ್ನಗೆ ಮಾರಹರಶರಮುರಿದು ಹರುಷದಿ ವಾರಿಜಾಕ್ಷೆಯ ವರಿಸಿದೆ 2 ಮೂಜಗತ್ಪತಿಯಂದಿಗೆಂದಿಗು ರಾಜ್ಯತೊಲಗಿದನೆನಿಸಿದೆ ಈ ಜಗದೊಳಿಹ ಅಜ್ಞ್ಞಜನರಿಗೆ ಸೋಜಿಗವ ನೀತೋರಿದೆ 3 ಶ್ರೀಲಕುಮಿ ಪತೆ ನಿನ್ನ ಮಹಿಮಾ ಜಾಲದಿವಿಜರು ತಿಳಿಯರು ನೀಲಮೇಘಶ್ಯಾಮ ಶಿಲೆಬಾಲೆ ಮಾಡಿದು ಚೋದ್ಯವೆ 4 ಮುತ್ತುರತ್ನ ಕಿರೀಟ ಶಿರದಲಿ ಇತ್ತಿಹ್ಯರ್ಕಶತÀಪ್ರಭಾ ನೆತ್ತಿಯಲಿ ಜಡೆಧರಿಸಿ ವಲ್ಕಲ ಪೊತ್ತು ತಿರುಗುವುದುಚಿತವೇ 5 ಕುಜಭವ ಭವರರ್ಪಿಸಿದ ಎಡೆ ಭುಂಜಿಪುದು ನೀವಿರÀಲವೋ ಅಂಜಿಕಿಲ್ಲದೆ ಭಿಲ್ಲಹೆಂಗಳೆಯಂಜಲವ ನೀ ಮೆದ್ದಿಯಾ 6 ಮಂಗಳಾಂಘ್ರಿಯ ಭಜಿಪಯೋಗಿ ಜನಂಗಳಿಗೆ ನೀನಿಲುಕದೆ ಮಂಗಗಳಿಗೆ ನೀನೊಲಿದಿಯಾ 7 ಹಾಟಕಾಂಬರ ತಾಟಕಾರಿ ವಿರಾಟ ಮೂರುತಿ ಎನ್ನಯ ಕೋಟಲೆಯ ಕಡುತಾಪದಿಂಕಡೆದಾಟಿಸೆನ್ನನು ಜವದಲಿ 8 ಭಾರವಿಲ್ಲದೆ ಅಖಿಲಜಗಸಂಹಾರ ಮಾಡುವಿಯನುದಿನ ಕ್ರೂರರಾವಣ ಮುಖ್ಯದನುಜರಹೀರಿ ಬಿಸುಟಿದು ಜೋದ್ಯವೆ 9 ಶಾಂತಿಯ ಪೆÇಂದಿದ ಹರನ ಪೂಜಿಯಗೈದಿಯಾ 10 ವಾರಿಜಾಭವ ಮುಖ್ಯದಿವಿಜರು ಪಾರುಗಾಣದೆ ಮಹಿಮನೆ ಸಾರಿ ಭಜಿಸುವ ಭಕ್ತರಿಗೆ ಕೈವಾರಿಯಂದದಿ ತೋರುವಿ 11 ತಾಮಸರ ಸಂಗದಲಿ ನೊಂದೆನು ಕಾಮಕ್ರೋಧದಿ ಬೆಂದೆನು ಈ ಮಹಿಗೆ ನಾಭಾರವಾದೆನು ಪ್ರೇಮದಿಂದಲಿ ಪಾಲಿಸು 12 ನಿನ್ನಧ್ಯಾನವ ತೊರೆದು ನಾಬಲು ಅನ್ಯವಿಷಯದಿ ರಮಿಸಿದೆ ಎನ್ನ ದೋಷಗಳೆಣಿಸದಲೆ ಕಾರುಣ್ಯಸಾಗರ ಕರುಣಿಸು 13 ಹೀನ ವಿಷಯಾಪೇಕ್ಷೆ ಬಿಡಿಸಜ್ಞಾನತಿಮಿರವ ನೋಡಿಸು ಮೌನಿ ಮಧ್ವಾರ್ಯರ ಮತದ ವಿಜ್ಞಾನ ತತ್ವವ ಬೋಧಿಸು 14 ಸಾಮಗಾನವಿಲೋಲ ರಘುಜನೆ ನೇಮದಿಂದಲಿನೀಯನ್ನ ನಾಮವನೆ ಪಾಲಿಪುದು ಸಚಿದ್ಧಾಮ ವರದೇಶ ವಿಠಲನೆ15
--------------
ವರದೇಶವಿಠಲ
ತಾಯೆ ಲಕ್ಷುಮಿ ದೇವಿಯೇ | ನೀನೇ ಗತಿತಾಯೆ ಲಕ್ಷುಮಿ ದೇವಿಯೇ ಪ ಕಾಯ ಮಮತೆಯ ಕಳೆದು ಬೇಗನೆ | ತೋಯಜಾಕ್ಷನ ತೋರಿ ಪೊರೆಯುವದಾಯ ನಿನ್ನದು ತಾಯೆ ಶ್ರೀಹರಿ | ಪ್ರೀಯೆ ನಿನ್ನನು ನಮಿಸಿ ಬೇಡುವೆ ಅ.ಪ. ಗೋಪಿ ನಂದನೆ ಹೇ ದುರ್ಗೇ | ಕಠೋರೆ ಉಗ್ರೆತಾಪತ್ರಯಗಳ ವಿನಾಶೇ | ಮೋಕ್ಷ ಪ್ರದಾತೇ ||ಶ್ರೀಪತಿಯ ಪಾದಾಬ್ಜ ಮಧುಪೆ | ಪಾಪಹರ ತವ ಪತಿಯ ನಾಮವಪ್ರಾಪಿಸುತ ದಿನದಿನದಿ ಯನ್ನನು | ಕೈ ಪಿಡಿದು ಕಾಪಾಡು ದೇವಿ 1 ಭವ ವಂದಿತೇ | ತ್ರಿಜಗನ್ಮಾತೆಹರಿಗೆ ಸಮಾಸಮವ್ಯಾಪ್ತೆ | ಹರಿಯಂಕ ಸಂಸ್ಥೇ ||ಅರಿದರಾಂಕುಶ ಪರಶು ಶಕ್ತಿ | ಧರಿಸಿ ಮೆರೆಯುವ ಹರಿಯ ರಾಣಿಯೆವಾರೆ ನೋಟದಿ ಬ್ರಹ್ಮ ಭವರಿಗೆ | ವರ ಸುಪದವಿಗಳಿತ್ತು ಪೊರೆವಳೆ 2 ಭವ ಚಾರು ಚರಣವ ತೋರು ಎನಗೆ 3
--------------
ಗುರುಗೋವಿಂದವಿಠಲರು
ತಾರಕವಿದು ಹರಿಕಥಾಮೃತಸಾರ ಜನಕೆ ಪ ಘೋರತರ ಅಸಾರ ಸಂಸಾರವೆಂಬ ವನಧಿಗೆ ನವ ಅ.ಪ. ಶ್ವಾನಸೂಕರಾದಿ ನೀಚಯೋನಿಗಳಲಿ ಬಂದು ನೊಂದು ವೈನತೇಯ ವಾಹನನ ಸನ್ನಿಧಾನ ಬೇಕು ಎಂಬುವರಿಗೆ 1 ಪ್ರಿಯವಸ್ತುಗಳೊಳಗೆ ಪಾಂಡುವೇಯ ಸಖನೆ ಎಮಗೆ ಬ್ರಹ್ಮ ಸುರರು ತಂದೆ ತಾಯಿ ಎಂದರಿತವರಿಗೆ 2 ಜ್ಞೇಯ ಜ್ಞಾನ ಜ್ಞಾತೃ ಬಾದರಾಯಣಾಖ್ಯ ಹರಿಯ ವಚನ ಕರ್ಮ ಶ್ರೀ ಯರಸ ನೀವನರಗೆ 3 ಶ್ರೀ ಮುಕುಂದ ಸರ್ವ ಮಮಸ್ವಾಮಿ ಅಂತರಾತ್ಮ ಪರಂ ಧಾಮ ದೀನಬಂಧು ಪುಣ್ಯ ನಾಮವೆಂದರಿತವರಿಗೆ 4 ಭೂತಭವ್ಯ ಭವತ್ಪ್ರಭು ಅನಾಥಜನರಬಂಧು ಜಗ ನ್ನಾಥ ವಿಠ್ಠಲ ಪಾಹಿಯೆಂದು ಮಾತುಮಾತಿಗೆಂಬುವರಿಗೆ 5
--------------
ಜಗನ್ನಾಥದಾಸರು
ತಿರುಪತಿಯ ಶ್ರೀ ವೆಂಕಟೇಶ ಕಮಲ ಪ ಹೇಮಮುಖದೀ ನದಿಯ ಕಂಡೇ ಗೋಮಿನೀ ಪದ್ಮಾವತಿ ಕಂಡೆಭೂಮಿಸುರರ ಮೇಳವ ಕಂಡೆ ಆ ಮಹಾ ಗಾಳಿಗೋಪುರ ಕಂಡೆ 1 ಸ್ವಾಮಿ ಪುಷ್ಕರಿಣೀಯ ಕಂಡೆ ಭೂಮಿ ವರಹಾ ದೇವರ ಕಂಡೆರಾಮದೂತನ ಪಾದವ ಕಂಡೆ ಸ್ವಾಮಿಯ ಮಹಾದ್ವಾರವ ಕಂಡೆ 2 ಹರಿಯು ಅಡಗಿದ ಹುತ್ತನು ಕಂಡೆ ಹರಿಯಧ್ವಜದ ಸ್ತಂಭವ ಕಂಡೆಪರಿಪರಿ ವೈಭವವನು ಕಂಡೆ ಪರಮಪುರುಷನಾ ಮೂರ್ತಿಯ ಕಂಡೆ 3 ಹರಿಹರಿ ಎನ್ನುವರನು ಕಂಡೆ ಹರಿದು ಒಳ ಪೋಗುವರನು ಕಂಡೆಹರಿಣಾಂಜನದ ತಾಡನ ಕಂಡೆ ಮಣಿಮಯಿಮುಕುಟವನು ಕಂಡೆ 4 ಹಣೆಯಲ್ಲಿಯ ನಾಮವ ಕಂಡೆ ಅನುಪಮಾದಂಗವನೂ ಕಂಡೆಕೊರಳ ಸರಗೀ ಸರಗಳ ಕಂಡೆ ಹರಳು ರತ್ನದಾಭರಣಗಳನು ಕಂಡೆ 5 ಉರದಿ ಶ್ರೀ ಭೂದೇವಿಯರ ಕಂಡೆ ಕರದಿ ಶುಭಶಂಖ ಚಕ್ರಗಳ ಕಂಡೆಗುರು ಶ್ರೀವಾದಿರಾಜರ್ಪಿಸಿದ ವರ ಶಾಲಿಗ್ರಾಮ ಹಾರವ ಕಂಡೆ 6 ಉದಗಿ ಪೀತಾಂಬರವ ಕಂಡೆ ನಡುವಿನೊಡ್ಯಾಣವನು ಕಂಡೆಜಡಿದ ಮಣಿಗಣ ಭೂಷಣನ ಕಂಡೆ ಜಡಜನಾಭನ ಮೂರ್ತಿಯ ಕಂಡೆ 7 ಅಂದದೀ ಕಾಲ್ಗಡಗವ ಕಂಡೆ ಸುಂದರ ಪಾದಗಳ ಕಂಡೆಮಂದಹಾಸ ಮುಖಾಬ್ಜ ಕಂಡೆ ಇಂದಿರೆಯ ರಮಣನ ಕಂಡೆ 8 ಆಗಮ ಶೃತಿ ಘೋಷವ ಕಂಡೆ ಭಾಗವತರಾ ಮೇಳವ ಕಂಡೆಬಾಗಿಲಾ ಬಲ ಹಸ್ತವ ಕಂಡೆ ಭಾಗೀರಥಿಯಾ ಪಿತನವ ಕಂಡೆ 9 ಚಿನ್ನದ ಕೂಪವನೂ ಕಂಡೆ ಅನ್ನಪೂರ್ಣಾದೇವಿಯ ಕಂಡೆರನ್ನದ ಹರಿವಾಣವ ಕಂಡೆ ಉಂಬುವ ವೈಭವವನು ಕಂಡೆ 10 ಕಪ್ಪದ ಕಣಜವನೂ ಕಂಡೆ ತಪ್ಪದೇಹಾರುವವರನು ಕಂಡೆಇಪ್ಪತ್ತು ದುಡ್ಡಿಗೆ ತೀರ್ಥ ಒಪ್ಪಿಲೇಮಾರುದನುರನು ಕಂಡೆ 11 ಸಾಸಿರ ನಾಮಗಳ ಒಡೆಯಾ ವಾಸುದೇವಾಚ್ಯುತನ ಕಂಡೆಕಾಸಿಗೆ ಕೈಚಾಚುವಂಥ ಕೇಸಕ್ಕ ತಿಮ್ಮಪ್ಪನ ಕಂಡೆ 12 ಆವ ಜನುಮದ ಸುಕೃತವೋ ಎನಗೆ ಭೂವೈಕುಂಠವನ್ನೇ ಕಂಡೆಶ್ರೀವಿಧಿಭವಾದಿ ವಂದ್ಯ ಐಹೊಳಿ ವೆಂಕಟೇಶನ ಕಂಡೆ 13 ಶುಭ ಮಂಗಲಂ ಸಿರಿಗೆಜಯ ಪುದವೀ ಪದ ಕೇಳಿ ಪೇಳಿದರೆ ಒಲಿದು ಫಲವೀವ ಕುಲಸ್ವಾಮಿ ಅವರೀಗೆ 14
--------------
ಐಹೊಳೆ ವೆಂಕಟೇಶ
ತಿಳಿದು ಕೊಳ್ಳಿರಿ ಜಾಣರೆಲ್ಲಾ ಅಹಂ ಅಳಿದು ನಿಂತಿರುವಂತ ಸತ್ಯಾತ್ಮ ಬಲ್ಲಾ ಪ ಆದ್ಯಂತ ವಿಸ್ತಾರಮೆಲ್ಲಾ ಇದನು ಕೇ ಳೀದರ್ಜುನÀಗೇಳಿದ ಕಳ್ಳಗೊಲ್ಲ ಅ.ಪ ಎಂಟಾರುಗಳ ನೀನು ಕಂಡೂ ಅಲ್ಲಿ ಟಂಟಣಿಸುವದೇನನುಭವದಿ ನೀನುಂಡೂ ತುಂಟರೈವರಕಡೆಗೊಂಡು ಜ್ಞಾನ ಮಂಟಪದೊಳಗೆ ಆಡುವ ಬಾರೊ ಚೆಂಡೂ 1 ನಾರದಾದಿಗಳೆಲ್ಲ ಬಂದೂ ಆಹ ಮೀರಿದ ಶ್ರೀರಂಗಧಾಮನೊಳು ನಿಂದೂ ಸಾರಿದರು ನಿಜನಾಮವೆಂದೂ ಇದನು ಯಾರಾದರು ಭಜಿಸಿ ಗೋಪ್ಯದೊಳಗೆಂದು 2 ಪರದೊಳಗೆ ನೀ ಬೆರೆದಾಡೊ ಸತ್ಯ ಶರಣರಿಗೊಲಿವ ಹರಿಯಹುದಿದು ನೋಡೋ ನರಹರಿ ಭಜನೆಯ ಮಾಡು ನನ್ನ ಗುರುವೆ ತುಲಸಿ ನಿನ್ನೊಳಿಹುದೈನೆ ನೋಡೋ 3
--------------
ಚನ್ನಪಟ್ಟಣದ ಅಹೋಬಲದಾಸರು
ತೀರ್ಥ ಪಿಡಿದವರೆಲ್ಲ ತಿರುನಾಮಧಾರಿಗಳೆ - ಜನ್ಮ ಪ ಸಾರ್ಥಕವಿಲ್ಲದವರೆಲ್ಲ ಭಾಗವತರೆ ಅ ಮೂಗ್ಹಿಡಿದು ನೀರೊಳಗೆ ಮುಳುಗಿ ಜಪತಪ ಮಾಡಿನಿಗಮಾಗಮ ಪುರಾಣಗಳನೋದಿ ತಿಳಿದುಬಾಗಿ ಪರಸ್ತ್ರೀಯರನು ಬಯಸಿ ಕಣ್ಣಿಡುವಂಥಯೋಗ ಭ್ರಷ್ಟರೆಲ್ಲ ದೇವ ಬ್ರಾಹ್ಮಣರೆ ? 1 ಪಟ್ಟೆ ನಾಮವ ಬಳಿದು ಪಾತ್ರೆ ಕೈಯಲಿ ಹಿಡಿದು ಗುಟ್ಟಿನಲಿ ಜಪಿಸುವ ಗುರುತರಿಯದೆಕೆಟ್ಟ ಕೂಗನು ಕೂಗಿ ಹೊಟ್ಟೆಯನು ಹೊರೆವಂಥಪೊಟ್ಟೆಗುಡುಮಗಳೆಲ್ಲ ಪರಮ ವೈಷ್ಣವರೆ ? 2 ಲಿಂಗಾಂಗದೊಳಗಿರುವ ಚಿನ್ಮಯವ ತಿಳಿಯದೆಅಂಗಲಿಂಗದ ನೆಲೆಯ ಗುರುತರಿಯದೆಜಂಗಮ ಸ್ಥಾವರದ ಹೊಲಬನರಿಯದ ಇಂಥಭಂಗಿಮುಕ್ಕಗಳೆಲ್ಲ ನಿಜ ಲಿಂಗವಂತರೆ ? 3 ಅಲ್ಲಾ ಖುದಾ ಎಂಬ ಅರ್ಥವನು ತಿಳಿಯದೆಮುಲ್ಲ ಶಾಸ್ತ್ರದ ನೆಲೆಯ ಮುನ್ನರಿಯದೆಪೊಳ್ಳು ಕೂಗನು ಕೂಗಿ ಬಗುಳಿ ಬಾಯಾರುವಂಥಕಳ್ಳ ಸುಳ್ಳರಿಗೆಲ್ಲ ವೀರ ಸ್ವರ್ಗವುಂಟೆ ?4 ವೇಷ ಭಾಷೆಯ ಕಲಿತು ಗೋಸಾಯಿ ಉಡೆದೊಟ್ಟುಆಸೆಯನು ತೊರೆಯದೆಯೆ ತಪಕೆ ಕುಳಿತುವಾಸನೆಯ ಗುರುತಿನಾ ಹೊಲಬನರಿಯದ ಇಂಥವೇಷಧಾರಿಗಳೆಲ್ಲ ಸಂನ್ಯಾಸಿಗಳೆ ? 5 ಆರು ಚಕ್ರದ ನೆಲೆಯ ಅಷ್ಟಾಂಗ ಯೋಗದಲಿಮೂರು ಮೂರ್ತಿಯ ಮೂರು ಕಡೆಯೊಳಿರಿಸಿಮಾರ ಪಿತನಹ ಕಾಗಿನೆಲೆಯಾದಿ ಕೇಶವನಸಾರಿ ಭಜಿಸಿದವರಿಗೆ ಕೊರೆವ ಕೊರತೆಯುಂಟೆ ? 6
--------------
ಕನಕದಾಸ
ತೆರಳಿದರೋ ತಂದೆ ಮುದ್ದು ಮೋಹನರೂಮರಳಿ ಬಾರವ ಪುರಿ ನರಹರಿ ಪೂರಕೇ ಪ ತರಳತನಾರಭ್ಯ ದ್ವಾದಶ ವತ್ಸರಪರಿಸರಾಗಮ ಪಠಿಸಿ ನಿಪುಣನೆನಿಸೀ |ಇರಲು ಬಂದರು ಮುದ್ದು ಮೋಹನ್ನದಾಸರುಕರಿಗಿರಿ ನರಹರಿ ರಥವ ಉತ್ಸವಕೇ 1 ಕರಿಗಿರಿ ಸನಿಯದ ನರಸಿಪುರದೊಳಿದ್ದವರಸುಬ್ಬರಾಯಾಖ್ಯ ಭರದಿಂದ ಬರುತಾ |ಗುರು ಮುದ್ದು ಮೋಹನರ ಪದಪಾಂಸು ಶಿರದಲ್ಲಿಧರಿಸಿ ಬಿನ್ನವಿಸಿದರುಪದೇಶ ಕೊಂಡಿರೆಂದೂ 2 ಪರಿಕಿಸಲೋಸುಗ ಅರುಣ ಉದಯ ಮುನ್ನಕರಿಗಿರಿ ಪುರಬಿಟ್ಟು ತೆರಳಲು ಅವರೂ |ಭರದಿ ಅಡ್ಡೈಸುತ ಗುರುಪಾದದಲಿ ಬಿದ್ದುವರ ಉಪದೇಶವ ಕೈಗೊಂಡ ಧೀರಾ 3 ಶುಭ ಅಂಕಿತವಾ |ತಂದೆ ಮುದ್ದು ಮೋಹನ್ನ ವಿಠ್ಠಲನೆಂದುಛಂದೋಗಮ್ಯನೆ ದಿವ್ಯ ನಾಮವನಿತ್ತರು 4 ದಾಸ ದೀಕ್ಷೆಯ ಪೊತ್ತು ದಾಸ ಕೂಟವ ನೆರಸಿಶೇಷಗಿರೀಶನೆ ಸರ್ವೇಶನೆನುತಾಎಸೆವ ಅಂಕಿತ ಮಂತ್ರ ಉಪದೇಶಗೈಯ್ಯುತ್ತದಾಸರ ಕ್ಲೇಶವ ಹರಿಸೀದ ಗುರುವೇ 5 ವರಚೈತ್ರ ಪಂಚಮಿ ವರುಷವು ವಿಕ್ರಮಶರಣರ ಪೊರೆಯಲು ಕರಿಗಿರಿಯಲ್ಲೀ |ಗುರು ಮುಖ್ಯ ಪ್ರಾಣ ಪ್ರತೀಕವ ನಿಲಿಸುತಆರು ಮೂರನೆ ದಿನ ಹರಿಯ ಸೇರುವೆ ನೆನುತಾ 6 ನರಲೀಲೆ ಕೊನೆಗೈದು ಪರಮ ಪುರುಷಹರಿಶಿರಿಯರಸಗೆ ಪ್ರೀತೆ ಪಾತ್ರನೆನಿಪಾನೂ |ವರ ಗುರು ಗೋವಿಂದ ವಿಠಲನ ಚರಣವಸ್ಮರಿಸಿ ಹಿಗ್ಗುತ ಪೊರಟ ನೀರಿಕ್ಷಿಸುತಾ7
--------------
ಗುರುಗೋವಿಂದವಿಠಲರು
ತೊಳೆಯಲಿ ಬೇಕಿದನು ಮನುಜಪ ಭವಕೂಪದಿ ಬಿದ್ದು ತೊಳಲಿ ಬಳಲಿ ಬಳಲಿ ಮಲಿನವಾಗಿಹ ಮನ ಹರಿಧ್ಯಾನ ಜಲದಲಿ ಅ.ಪ ಕಾಮಕ್ರೋಧದಿಂದ ಜನಿಸಿದ ಲೋಭಮೋಹ ಲೋಭದಿಂದ ಮದಮತ್ಸರ ಷಡ್ವಿಧ ತಾಪಗಳಿಂದ ಹದಗೆಟ್ಟಿರೆ ಮನ ಮುದದಿ ಹರಿಧ್ಯಾನದಿ 1 ದುರ್ಜನ ಸಂಗದೊಳು ಸೇರುತ ಮನ ವರ್ಜಿಸಿ ಹರಿ ಚರಿತ ಅರ್ಜುನ ಸಖ ಸರ್ವೇಶನ ನಾಮವು ಲಜ್ಜೆಯಿಲ್ಲದೆ ಸ್ಮರಿಸುತ ನಲಿಯಲು ಮನ 2 ಜನನ ಮರಣ ಕ್ಲೇಶದಿ ದು:ಖದಿ ಮನ ಮರಳಿ ಮರಳಿ ಪಾಪದಿ ಎಣಿಕೆ ಇಲ್ಲದ ದೋಷದೊಳಗೆ ಮುಸುಕಿದ ಮನ ನಿತ್ಯ 3 ಇಂದಿರೇಶನ ಧ್ಯಾನವ ಮಾಡಲು ಮನ ವೃಂದವ ಕೂಡಿ ಮಂದೋರದ್ಧರ ಗೋ_ ವಿಂದನೆನ್ನಲು ಮನ 4 ನಿಚ್ಚ ಭಕುತಿಯಿಂದ ಶ್ರೀ ಹರಿಪಾದ ಅರ್ಜಿಸಿಮುದದಿಂದ ರುಕ್ಮಿಣಿಯರಸನ ಸತ್ಯಸಂಕಲ್ಪನ ಮೆಚ್ಚಿಸಿ ಮುಕುತಿಯ ನೈದಲು ಈಮನ 5 ಮಧ್ವಮತದಿ ಜನಿಸಿ ನಿರಂತರ ಮಧ್ವರಾಯರ ಭಜಿಸಿ ಸದ್ವೈಷ್ಣವರ ಸಂಗದೊಳಾಡುತ ಲಜ್ಜೆತೊರೆದು ಕಾಲಗೆಜ್ಜೆ ಕಟ್ಟಲುಮನ6 ಕಂಬು ಚಕ್ರಧಾರಿ ಶ್ರೀ ಶೌರಿ ನಂಬುವರಾಧಾರಿ ಶಂಬರಾರಿಪಿತ ನಂಬಿದೆ ನಿನ ಪಾದ ಶಂಭುವಂದಿತ ಪಾಲಿಸಿಂದು ಸ್ಮರಿಸಲು ಮನ 7 ತೊಳೆದು ತೊಳೆದು ವಿಷಯ ವಾಸನೆಯನ್ನು ಹಲವು ವಿಧದಿ ತೊಳೆದು ಕಲುಷದೂರನ ನಾಮ ಸ್ಮರಣೆಯ ಮಾಡಲು ಮರುತ ಮತದ ಸಂಗ ದೊರೆವುದು ತವಕದಿ8 ಕಳವಳಿಸದೆ ಮನವು ನಿಶ್ಚಲದಲಿ ಥಳ ಥಳ ಥಳ ಹೊಳೆಯೆ ಕಮಲನಾಭ ವಿಠ್ಠಲವಲಿದು ಪಾಲಿಸುವನುಹಲವು ಬಗೆಯಲಿ ಹಂಬಲಿಸದೆ ಮನ 9
--------------
ನಿಡಗುರುಕಿ ಜೀವೂಬಾಯಿ
ತ್ವರಿತದಿ ಬಾರೆ ಸಖಿ ಸುನೇತ್ರೆ | ಹರುಷದಿ ಪೀಠಕೆ ಮಂಗಳಗೀತೆ ಪ ಮಿನುಗುವ ನಯನಾ ಕನಕಾಭರಣಾ | ಮಣಿಮುತ್ತಿನ ವನಮಾಲೆಯು ಧರಿಸುತ 1 ರತ್ನದಹಾರ ದಿವ್ಯಾಂಬರದಿ | ಮಿತ್ರಿ ನೀಶೋಭಿಸುತ ಪೀಠಕೆ ಮುದದಿ 2 ಕೋಮಲೆ ಬಾಲೆ ಸುಶೀಲೆ ಶಾಮಸುಂದರನ ನಾಮವ ಪಾಡುತ 3
--------------
ಶಾಮಸುಂದರ ವಿಠಲ
ದಂಡಿಸಬೇಡೈ ದಯೆದೋರೈ ಕರದಂಡದಳಾಂಬಕನೆಪ. ಕಂಡೀಶವಿನುತ ಬ್ರಹ್ಮಾಂಡಪಾಲ ಮಾ- ರ್ತಾಂಡಮಂಡಲಗ ಶುಂಡಾಲವರದಅ.ಪ. ಕ್ಷೇಮದಿ ಶ್ರೀಹರಿನಾಮವ ವರ್ಣಿಸೆ ನೇಮಾನುಷ್ಠಾನದೊಳಿರಲು ನಾ ಮಾಡಿದ ನಾನಾವಿಧ ಪಾಪವ ತಾಮಸಗೊಳಿಸುವ ಕಾಮಕ್ರೋಧಗಳಿಂ1 ಶಿಷ್ಟಾಚಾರದೊಳಿಷ್ಟನಾಗಿ ಪರ ಮೇಷ್ಠಿಜನಕ ಜಯ ಜಯವೆನಲು ಭ್ರಷ್ಟಾಲೋಚನೆ ಪುಟ್ಟಿಸಿ ಪಾಪದ ಬಟ್ಟಿಯ ಹೊದ್ದಿಪ ದುಷ್ಟಸಂಗದಿಂ2 ನಾರಾಯಣ ನರಹರಿಯೆನ್ನುವ ವ್ಯಾ- ಪಾರವ ನಾ ಮಾಡುತ್ತಿರಲು ಆರೋಹಣಾವರೋಹಣ ನಾದವಿ- ಕಾರಗೊಳಿಪ ಶಾರೀರಪ್ರಕೃತಿಯಿಂ 3 ಆರ್ಕಾರಣ ರಿಪುಗಳಿಗೈ ಸರ್ವ ದೇ- ವರ್ಕಳ ಮಸ್ತಕಮಣಿ ನೀನೈ ತರ್ಕಾಗಮ್ಯ ಲಕ್ಷ್ಮೀನಾರಾಯಣ ಅರ್ಕಾಮಿತಪ್ರಭ ಕಾರ್ಕಳಪುರವರ4
--------------
ತುಪಾಕಿ ವೆಂಕಟರಮಣಾಚಾರ್ಯ
ದತ್ತಾತ್ರೇಯನ್ನಮೋ ದತ್ತಾತ್ರೇಯಾ ಅತ್ರಿ ವರದಾಯಕನೇ ದತ್ತಾತ್ರೇಯಾ ಪ ಭಕುತಿ ಮಾಡಲು ಮೆಚ್ಚಿ ಅನಸೂಯಾ ಕರದೊಳಗ ಸುಕುಮಾರ ವೇಷದವತಾರ ತಾಳಿ ಪಥ ದೋರಲಿಕೆ ಅಕಳಂಕ ಯೋಗ ರೂಪವ ಭರಿಸಿದೆ 1 ಉದಯದೊಳು ವಾರ್ಣಾಸಿಸುರನದಿಯಲಿ ಸ್ನಾನ ವದಗಿ ಕೊಲ್ಹಾಪುರಕ ಮಧ್ಯಾಹ್ನದೀ ವಿದಿತ ಭಿಕ್ಷವನುಂಡು ಪೋಗಿ ಸಂಜೆಗೆ ಮಾಹು ನಿತ್ಯ ವಿಧಿಯಲಿ ಚರಿಸುವೇ2 ದತ್ತಹರಿ ಸಾಕ್ಷಾತ ಉನ್ಮದೋನಂದದಾಯಕ ದತ್ತವರ ಮುನಿ ದಿಗಂಬರ ಬಾಲಕಾ ನಿತ್ಯ ಪ್ರಕಾಶಮಯ ಜ್ಞಾನಸಾಗರನೆಂಬರ ದುರಿತ ಭಯವಾರಿಸುವೆ3 ಆವನಾಗಲಿ ಮರೆದು ನಿಮ್ಮ ನಾಮವ ನೆನೆವ ಠಾವಿನಲಿಸುಳಿವ ಪ್ರತ್ಯಕ್ಷದಿಂದಾ ಭಾವದಿಂದಲಿ ಸ್ಮರಿಸಿದವಗ ಇಹಪರ ಸುಖವ ನೀವ ಕರುಣಾಳು ದೀನೋದ್ಧಾರಕಾ 4 ಇಪ್ಪತ್ತು ನಾಲ್ಕು ಗುರುಗಳ ಕ್ರಮವ ದೋರಿಭವ ಮುಪ್ಪು ಬಿಡಿಸಿದೆ ಯದುರಾಯಗಂದು ಒಪ್ಪಿನಿಂದಲಿ ಗುರು ಮಹಿಪತಿ ಪ್ರಭುಯನಿಸಿ ತಪ್ಪ ನೋಡದೆ ನಂದ ನುದ್ಧರಿಸಿದೆಲೆ ದೇವಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದಯದಿ ಎಮ್ಮನು ಸಲಹ ಬೇಕಯ್ಯ | ಮಳಖೇಡ ನಿಲಯ ದಯದಿ ಎಮ್ಮನು ಸಲಹ ಬೇಕಯ್ಯ ಪ ದಯದಿ ಎಮ್ಮನು ಸಲಹ ಬೇಕೈ | ವಿಯದಧಿಪ ಸದ್ದಂಶ ಸಂಭವ ಭಯ ವಿದೂರನ ತೋರು ಎನುತಲಿ | ಜಯ ಮುನೀಂದ್ರನೆ ಬೇಡ್ವೆ ನಿನ್ನನು ಅ.ಪ. `ಇಂದ್ರಸ್ಯನು ವೀರ್ಯಾಣ’ ಎಂದೆನುತ | ಇತ್ಯಾದಿಋಕ್ಕುಗಳಿಂದ ಬಹುತೆರೆ ನೀನು ಪ್ರತಿಪಾದ್ಯ ||ಅಂದು ಮೇಘದ ಜಲವು ಬೀಳದೆ | ಬಂಧಗೈದಹಿನಾಮ ದೈತ್ಯನಕೊಂದು ಉದ್ಧರಿಸಿರುವ ಪರಿಯಲಿ | ಮುಂದೆ ದುರ್ವಾದಿಗಳ ಖಂಡಿಪೆ 1 ವಾಲಿಯಂದದಿ ದೃಷ್ಟಿಮಾತ್ರದಲಿ | ಶತೃಗತಬಲಲೀಲೆಯಿಂದಪಹರಿಪೆ ನಿಮಿಷದಲಿ ||ಕಾಲ ತ್ರೇತೆಯಲಂದು ದುಷ್ಟರ | ವಾಲಿರೂಪದಿ ವಾರಿಸಿದ ಪರಿಕಾಲ ದ್ವಾಪರದಲ್ಲಿ ಪ್ರಾರ್ಥನೆ | ಲೀಲೆ ರೂಪಿಯು ಕೃಷ್ಣಸೇವಕ 2 ದೃಷ್ಟಿ ಮಾತ್ರದಿ ಕರ್ಣಗತ ಬಲವ | ಅಪಹರಿಸಿ ನೀನುಕ್ಲಿಷ್ಟ ಯುದ್ಧದಿ ಗಳಿಸಿ ನೀ ಜಯವ ||ಶ್ರೇಷ್ಠ ಕರ್ಣನ ಅಸುವ ಕೊಳ್ಳುತ | ಸುಷ್ಠು ಅರಿಬಲ ನಾಶಮಾಡುತಭ್ರಷ್ಟ ಕೌರವನೀಗೆ ದುಃಖದ | ಕೃಷ್ಣಗರ್ಪಿಸಿ ಕೈಯ್ಯ ಮುಗಿದೆಯೊ 3 ಕಾಲ ಕಲಿಯುಗದಲ್ಲಿ ಬಲ ಭೀಮ | ಮಧ್ವಾಭಿಧಾನದಿಮೂಲ ಮೂವತ್ತೇಳು ಸೂನಾಮ ||ಭಾಳ ಗ್ರಂಥಗಳನ್ನೆರಚಿಸೀ | ಕಾಲಟಿಜಕೃತಮಾಯಿ ಮತವನುಲೀಲೆಯಿಂದಲಿ ಖಂಡಿಸುತ್ತ | ಪಾಲಿಸುತ್ತಿರೆ ಸುಜನರನ್ನು 4 `ವೃಷಾಯ ಮಾಣೆಂಬ` ಋಕ್ಕಿನಲಿ ದೇವ ಇಂದ್ರಗೆವೃಷಭದಾಕೃತಿ ಪೇಳಿಹುದು ಅಲ್ಲಿ ||ವೃಷಭ ನೀನಾಗಂತೆ ಕಲಿಯಲಿ | ಎಸೆವ ಶ್ರೀ ಮನ್ಮಧ್ವ ಗ್ರಂಥದಹಸಿಬೆ ಚೀಲವ ಹೊತ್ತು ತಿರುಗುತ | ಅಸುಪತಿಯ ಸೇವಿಸಿದ ಮಹಿಮ5 ಅಗಸ್ತ್ಯ ಮುನಿ ಸಕಲ ತೀರ್ಥಗಳ | ಸಂಗ್ರಹಿಸಿ ಕರದಿಸಾಗಿ ಗಿರ್ಯಾನಂತ ಕಮಂಡೂಲ ||ವೇಗ ಕೆಳಗಿಟ್ಟಾಚಮನ ಅಲ್ಪ | ಕಾಗಿ ಸ್ವಲ್ಪವುದೂರ ಪೋಗಲುಕಾಗೆ ರೂಪದಿ ಬಂದು ಇಂದ್ರನು | ವೇಗ ಉರುಳಿಸೆ ಜಲವು ಹರಿಯಿತು 6 ದೆವರಾಜನು ಕಾಣಿಸಿ ಕೊಳಲು | ಮುನಿಯು ಆಕ್ಷಣದೇವ ಕಾರ್ಯದ ಭಾವ ತಿಳಿಯಲು ||ಓವಿ ತತ್ಕಾಗಿಣಿಯ ನಾಮದಿ | ಭೂವಲಯದೊಳ್ಬಾತಿಸಲಿ ಎನೆತೀವರಾಶೀರ್ವಾದ ದಿಂದಲಿ | ಪಾವನವು ತತ್ ಕ್ಷೇತ್ರ ವಾಯಿತು 7 ಪಾಂಡು ಮಧ್ಯಮನಾದ ಅರ್ಜುನನು | ಇಲ್ಯುದಿಸಿ ಪೊತ್ತಧೋಂಡು ರಘುನಾಥ ಪೆಸರನ್ನು || ಗೊಂಡು ನಾಯಕ ತನವ ಅಶ್ವಕೆ | ಅಂಡಲೆದು ಬರುತಿಲ್ಲಿ ಬಿಸಿಲಲಿ ಉಂಡು ಉಂಬುದ ಜಲವ ಪಶುಪರಿ | ಕಂಡು ಮುನಿ ಅಕ್ಷೋಭ್ಯ ಬೆಸಸಿದ 8 ಸ್ವಪ್ನ ಸೂಚಿಸಿದಂತೆ ಮುನಿಶ್ರೇಷ್ಠ | ನೀರ್ಗುಡಿದವ ನರೆ ಬಪ್ಪುವನು ತಮ ಪೀಠಕೆನ್ನುತ್ತ || ಸ್ವಲ್ಪ ಹಾಸ್ಯದಿ ಪಶುವು ಪೂರ್ವದಿ | ಒಪ್ಪುವೆಯಾ ನೀನೆನ್ನ ಸಾದಿಗೆ ನೆಪ್ಪು ಬಂದುದು ವೃಷಭ ಜನ್ಮದಿ | ಕೃಪ್ಪೆಗೈದಿಹ ಮಧ್ವರನುಗ್ರಹ 9 ಸಾದಿ ಭೂಪನು ಕಳುಹಿ ತನ್ನ ಸೈನ್ಯ | ಅಕ್ಷೋಭ್ಯ ಮುನಿಪರ ಪಾದಕೆರಗುತ ಆಶ್ರಮವು ತುರ್ಯ ||ಮೋದದಿಂದ್ಯಾಚಿಸಲು ಮುನಿವರ | ಆದಿಯಿಂದಲಿ ಬಂದ ಪೀಠಕೆಸಾದರದಿ ಪಟ್ಟಾಭಿಷಕ್ತನ ಗೈದು ಆಶೀರ್ವಾದ ಮಾಡಿದ 10 ಸುತನು ತುರ್ಯಾಶ್ರಮವ ಪೊತ್ತುದನ | ಕೇಳುತ್ತ ತಂದೆಅತುಳ ಕೋಪದಿ ನಿಂದಿಸಿದ ಮುನಿವರನ |ಸುತನ ಗೃಹ ಕೆಳತಂದು ಪತ್ನಿಯ | ಜೊತೆಯಲಿಡೆ ಏಕಾಂತ ಗೃಹದಲಿಅತುಳ ಸರ್ಪಾ ಕೃತಿಯ ಕಾಣುತ | ಭೀತಿಯಲಿ ಚೀರಿದಳು ಕನ್ಯೆಯು11 ಸೋಜಿಗದ ತನಯನ್ನ ಕೊಳ್ಳುತ್ತ | ಮುನಿವರರ ಬಳಿಗೆ ಯೋಜಿಸೀದನು ಕ್ಷಮೆಯ ಬೇಡುತ್ತ ||ಆರ್ಜವದ ಮುನಿ ಕ್ಷಮಿಸಿ ತಂದೆಯ | ಮಾಜದಲೆ ತಮ್ಮ ಶಿಷ್ಯಭೂಪಗೆಯೋಜಿಸಿದರನ್ವರ್ಥನಾಮವ | ಶ್ರೀ ಜಯಾಭಿಧ ತೀರ್ಥರೆನ್ನುತ 12 ಪರ ಕರಿ ಹರ್ಯಕ್ಷರಾದಿರಿ 13 ಮಧ್ವಭಾಷ್ಯಕೆ ಟೀಕೆ ರಚಿಸುತ್ತ | ಯರಗೋಳ ಗುಹೆಯಲಿಶುದ್ಧ ಭಾವದಿ ಇರಲು ಮದಮತ್ತ ||ವಿದ್ಯ ಅರಣ್ಯಭಿಧ ನೋಡೀ | ಮಧ್ವಕೃತ ಸನ್ಮಾನ ಲಕ್ಷಣಬುದ್ಧಿಗೇ ನಿಲುಕದಲೆ ಟೀಕೆಯ | ಪದ್ಧತಿಯ ಕಂಢರ್ಷಪಟ್ಟನು 14 ಮಾಧ್ವಭಾಷ್ಯವ ನೇರಿಸಿ ಗಜವ | ತಟ್ಟೀಕೆ ಅಂತೆಯೆಅದ್ಧುರೀಯಲಿ ಗೈದು ಉತ್ಸವವ ||ವಿದ್ಯವನ ಮುನಿಪೋತ್ತುಮನು ಬಹು | ಶುದ್ಧಭಾವದಿ ಗೈದು ಸಂತಸಬುದ್ಧಿಯಲಿ ಪರಿವಾರ ಸಹಿತದಿ | ಸದ್ದುಯಿಲ್ಲದೆ ಪೋದನಂದಿನ 15 ಹತ್ತೆರಡು ಮತ್ತೊಂದು ಕುಭಾಷ್ಯ | ವಿಸ್ತರದಿ ಖಂಡಿಸೆಕೃತ್ಯವೂ ಮಧ್ವಕೃತವನುವ್ಯಾಖ್ಯಾ ||ಮತ್ತಿದಕೆ ಸೂಧಾಖ್ಯ ಟೀಕವ | ವಿಸ್ತøತವು ನಿಮ್ಮಿಂದ ಜಯಮುನಿಮೊತ್ತದಿಂಧ್ಹತ್ತೆಂಟು ಗ್ರಂಥಕೆ | ಕೃತ್ಯವಾಯಿತು ನಿಮ್ಮ ಟೀಕೆಯು16 ಪಾದ ಪಾದ ತೋರ್ವುದು ||
--------------
ಗುರುಗೋವಿಂದವಿಠಲರು