ಒಟ್ಟು 226 ಕಡೆಗಳಲ್ಲಿ , 57 ದಾಸರು , 196 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾ ವೆಂಕಟಶೈಲಾಧಿಪ ಮನ್ಮನಕೆ ತಡಮಾಡುವುದ್ಯಾಕೆ ಶ್ರೀ ವಲ್ಲಭನಾ ನಿನ್ನಂಘ್ರಿ ಕಮಲಕೆ ನಮಿಸುವೆ ಪ್ರತಿ ಕ್ಷಣಕೆ ಪ ನೀ ಒಲಿದೆನ್ನ ದಯಾವಲೋಕನದಿ ಪಾವನಮಾಡಲು ದೇವವರೇಣ್ಯ ಅ.ಪ. ವೈಕುಂಠಾಧೀಶ ವಿಗತಕ್ಲೇಶ ಚಿತ್ಸುಖಮಯವಪುಷ ಭವ ಮದನ ದಿ ವಾಕರ ಪ್ರಮುಖ ದಿವೌಕಸ ವರದ 1 ಮಮಸಮಾಸ್ವಾಮಿ ಮದಂತರ್ಯಾಮಿ ಸರ್ವಾಂತರ್ಯಾಮಿ ಅಮಿತಾತ್ಮ ಅತಿರೋಹಿತ ನಿಷ್ಕಾಮಿ ಸೇವಿತ ಶ್ರೀಭೂಮಿ ಅಮಿತ ಸುಗುಣಪೂರ್ಣ ಅಮಲಮಹಿಮ ಖಳದಮನ ದಯಾಳೊ 2 ನಾಮಾಭಿಧೇಯ ಲೋಕಾಧ್ಯಕ್ಷಾ ಕಮಲಾಯತಾಕ್ಷ ಸೋಮ ಭೂಮ ನಿಸ್ಸೀಮ ಮಹಿಮ ತ್ರಿ ಧಾಮರಾಮ ಘನಶ್ಯಾಮ ಲಲಾಮ 3 ಪವನಂತರಾತ್ಮಾ ನಿರ್ಮಲಾತ್ಮಾ ಪರಮಾತ್ಮ ಜ್ಞಾನಾತ್ಮಾ ಅವಿಕಾರ ಅತಿರೋಹಿತ ಭೂತಾತ್ಮ ಪೂತಾತ್ಮ ಮಹಿತಾತ್ಮ ತ್ರಿವಿಧ ಜೀವರಿಗೆ ವಿವಿಧ ಫಲಂಗಳ ತವಕದಿ ಕೊಟ್ಟವರವರ ಪಾಲಿಸೋ 4 ಸೃಷ್ಟ್ಯಾದಿಕರ್ತ ತ್ರಿಜಗದ್ಭರ್ತ ಲೋಕೈಕ ಸಮರ್ಥ ವೃಷ್ಣೀಶಾ ವೃಂದಾರಕ ರಿಪುಹರ್ತಾ ಮುಕ್ತರ ಪುರುಷಾರ್ಥ ಪರಮೇಷ್ಟಿ ಜನಕ ಶಿ ಷ್ಟೇಷ್ಟ ಹೃಷ್ಟ ಅನಿವಿಷ್ಟ ನಿವಿಷ್ಟ 5 ವೇದಸ್ತೇಯಾರಿ ಮಂದರಧಾರಿ ಭೂವರ ನರಹರಿ ಭೂ ದಾನವ ಬೇಡಿದ ಚಾಪಕುಠಾರಿ ರಾವಣಕುಲವೈರಿ ಯಾದವ ವಂಶ ಮಹೋದಧಿ ಚಂದಿರ ಸಾದಿತ ತ್ರಿಪುರ ಖಳೋದರ ಪಾಹಿ 6 ದಯದಿಂದ ನೋಡೊ ದೀನೋದ್ಧಾರ ಸದ್ಗುಣ ಗಂಭೀರಾ ಪ್ರಿಯ ನೀನೇ ಎನಗೆ ಲೋಕೋದ್ಧಾರ ಸೌಂದರ್ಯಸಾರಾ ಹಯಮುಖ ಲೋಕತ್ರಯ ಪತ್ರಯಾಮಯ ವಯನಗಯ್ಯ ನಾ ಬಯಸುವೆ ನಿನ್ನ7 ಭವ ಭಯಹಾರಿ ಬಿನ್ನೈಸುವೆ ಶೌರಿ ವಿಹಿತಾಹಿತಗಳು ನಿನ್ನನು ಮೀರಿ ಮಾಳ್ಪೆಗೆ ಕಂಸಾರೀ ಮಹಿತ ಶಮಲ ಸದಹಿತ ಲಕುಮಿ ಭೂ ಸಹಿತ ಮನದಿ ಸನ್ನಿಹಿತನಾಗೆಲೋ 8 ದಾತಾ ನೀನಲ್ಲದನ್ಯರರಿಯೇ ಕಂಡವರನು ಕರಿಯೇ ಪ್ರೀತನಾಗೆನ್ನೊಳು ಶ್ರೀ ಹರಿಯೇ ಮೂರ್ಲೋಕದ ದೊರೆಯೇ ಶ್ರೀ ತರುಣಿಯೊಡಗೊಡೀ ತನು ಸದನಕೆ ನೀ ತ್ವ ರಿತದಿ ಜಗನ್ನಾಥ ವಿಠ್ಠಲ 9
--------------
ಜಗನ್ನಾಥದಾಸರು
ಬಾದರಾಯಣ ಮದದಿ ಮರೆತೆನೊ ಸದಯದಿಂ ಮುದ ಪಾಲಿಸೊ ಪ ಬೋಧ ಮೂರುತೆ ಭಕ್ತರಾ ನುಡಿ ಸಾದರದಿ ನೀನಾಲಿಸೋ ಅ.ಪ ವೇದಭಾಗವ ಮಾಡಿ ವೇದವ್ಯಾಸನೆಂದೆನಿಸಿದಿ ಸದಮಲಾಭಾವದಲಿ ನಿನ್ನಯ ಪಾದಕಮಲವ ತೋರಿದಿ 1 ಗಾತ್ರ ಎನ್ನಯ ಖೇದ ಭಾವವನೋಡಿಸೊ ಮೋದತೀರ್ಥ ಹೃದಾಬ್ಜ ಮಂದಿರ ಸಾಧು ಸಂಗವ ಮಾಡಿಸೋ 2 ತರ್ಕಮುಧ್ರಾಧರನೆ ಎನ್ನ ಕುತರ್ಕ ಬುದ್ಧಿಯನೋಡಿಸೋ ಅರ್ಕಸನ್ನಿಭ ಬ್ರಹ್ಮ ಸುತರ್ಕ ಮಾರ್ಗವ ಬೋಧಿಸೋ 3 ಅಭಯಪ್ರದಕರ ಎನ್ನಭವ ಭಯ ತ್ರಿಭುವನೇಶ್ವರ ಓಡಿಸೀ ಇಭವರದ ಮಧ್ವೇಶ ಸಂತತ ಸಭೆಯ ಸಹನೀ ತೋರೆಲೊ4 ಯೋಗ ಪೀಠನೆ ನೀಗಿಸೆನ್ನಯ ಭೋಗಬುದ್ಧಿಯ ಸರ್ವದಾ ಯೋಗಿಕುಲವರ ಬಾಗಿ ನಮಿಸುವೆ ಯೋಗಮಾರ್ಗವ ತೋರಿಸೊ5 ಮಾ ಕಮಲಜ ಭವೇಂದ್ರವಂದಿತ ಮಾಕಳತ್ರ ನಮೋಸ್ತುತೇ ಯಾಕೆ ಎನ್ನಲಿ ನಿರ್ದಯವು ನೀ ಸಾಕಲಾರದ ಪಾಪಿಯೇ 6 ಸನ್ನುತಿಸಿ ನಾ ನಿನ್ನ ಬೇಡುವೆ ಸನ್ನುತಾಂಘ್ರಿಯ ಸೇವೆಯಾ ಸನ್ಮುನೀವರ ಶ್ರೀ ನರಹರೆ ದಾಸದಾಸರ ದಾಸ್ಯವಾ 7
--------------
ಪ್ರದ್ಯುಮ್ನತೀರ್ಥರು
ಬಾರೊ ಶ್ರೀವೆಂಕಟರಮಣ ತವಪಾ- ದಾರಾಧಕರನು ಪೊರೆಯಲು ಕರುಣಾಪೂರ್ಣ ಪ ಬಾರೋ ನಮಿಸುವೆ ಪೂರ್ಣ ಕೃಷ್ಣಾ ತೀರದಲಿ ಮಾಂಡವ್ಯ ಋಷಿಗಳ ಘೋರ ತಪಸಿಗೆ ಒಲಿದು ಗುಡೆಬಲ್ಲೂರು ಮಂದಿರನೆಂದು ಕರೆಸುತ ಅ.ಪ ಎಲ್ಲ ಕಡೆಗೆ ನೆಲೆಸಿರುವ ಸಿರಿ ನಲ್ಲನೊಲಿಸಲು ತಪವನು ಗೈವ ಬಲ್ಲಿದ ಮಾಂಡವ್ಯರಿರವ ಕಂಡು ಗೊಲ್ಲರು ಮಾಡಿದರನು ದಿನ ಶೇವಾ ಪುಲ್ಲನಾಭನು ದರುಶನವ ಮುನಿ ವಲ್ಲಭಗೆ ತೋರಿಸಲು ಬೇಡಿದ ಗೊಲ್ಲರೆನ್ನಯ ಭಕುತರವರಿಂದಲ್ಲಿ ಪೂಜೆಯಗೊಳ್ವದೆಂದನು 1 ಬಾರೊ ಬೇಗನೆ ದ್ವಿಜರಾಜ ಧ್ವಜ ವೇರಿ ಪೊರೆದೆಯೊ ಬಂದು ಕರಿಯೆ ಕರಿ ರಾಜ ತೋರೋ ಚವತರಣ ಸರೋಜಯುಗ್ಮ ಸಾರಿ ಭಜಿಸುವ ಭಕುತರ ಕಲ್ಪ ಭೂಜ ಮಾರಜನಕನೆ ಚಾರುಕನಕ ಕಿ ರೀಟ ಕುಂಡಲಹಾರಪದಕ ಕೇಯೂರ ಸಾಲಂ- ಕಾರ ವಪು ಶೃಂಗಾರದಲಿ ರಥವೇರಿ ಮೆರೆಯುತ 2 ವೇದವೇದ್ಯನೆ ನಿನ್ನ ಪ್ರೇಮಾ ಪಡೆದ ಪಾದ ಮಹಿಮೆಯ ವರ್ಣಿಸಿದ ದೇವ ಶರ್ಮಾ ಬೋಧಾದಿ ಸದ್ಗುಣಧಾಮ ಪಾಹಿ ಮೇದಿನಿ ವಿಬುಧ ಪೂಜಿತ ಪೂರ್ಣಕಾಮ ಮೇದಿನಿಯೊಳು ಶ್ರೀದ ನಿನ್ನಯ ಪಾದಯುಗಳವ ಕಂಡು ಹರುಷದಿ ಪಾದುಕೆಯ ರಚಿಸಿದಗೆ ಒಲಿದ ಅಗಾಧ ಮಹಿಮನೆ ಮೋದಗರೆಯಲು 3 ಒಂದಿನ ನಿಶಿಯೊಳುತ್ಸವದಿ ದಣಿ ದಂದು ಮಲಗಿರಲರ್ಚಕರು ದೇವಾಲಯದಿ ಬಂದು ಚೋರರು ಅತಿಜವದಿ ನಿನಗೆ ಪೊಂದಿಸಿದೊಡವೆ ಗಳನು ಚೌರ್ಯತನದಿ ಮಂದ ಮತಿಗಳು ಒಯ್ಯುತಿರೆ ಖಳ ವೃಂದಕಂಗಳು ಪೋಗೆ ತುತಿಸಲು ಚಂದದಿಂ ಬರೆ ಹೇಮನಾಮವ ಕುಂದದಲೆ ಮಾಡಿಸಿದರಾಕ್ಷಣ 4 ನೀರಜಾಸನ ಮುಖ್ಯ ತ್ರಿದಶ ಗಣದಿಂ- ಪಂಕಜ ಭಕ್ತಪೋಷ ಸೂರಿಜನರ ಸಹವಾಸ ಕೊಡು ಧಾರುಣಿಯೊಳು ಕೃಷ್ಣ ತೀರನಿವಾಸ ಬಾರೊ ನಿನ್ನನು ಶೇರಿದವರW ವಾರಿವಾಹ ಸಮೀರ ಕಾರ್ಪರ ನಾರ ಶಿಂಹಾತ್ಮಕನೆ ಯನ್ನಯ ಭವ ಭಯ ದೂರಮಾಡಲು 5
--------------
ಕಾರ್ಪರ ನರಹರಿದಾಸರು
ಬಿಡೆನು ನಿನ್ನಯ ಪಾದವಾ ಮುಖ್ಯ ಪ್ರಾಣ ಬಿಡೆನು ನಿನ್ನ ಪಾದಾ ಕಡಲ ಹಾರಿದೆನೆಂಬ ಸಡಗರದಿಂದೆನ್ನ ಕಡೆಹಾಯಿಸದೆ ಬೇಗ ಪ. ಹದಿನಾಲ್ಕು ಲೋಕದೊಳು ವ್ಯಾಪಕವಾಗಿ ಮುದದಿಂದ ಹಂಸ ಮಂತ್ರವ ಜಪಿಸುತ ಮಧುವೈರಿಯನು ಒಲಿಸಿ ಕಡೆಗೆ ಅಜ- ಪದವನೈದುವಿ ಸುಖದಿ ವಿಧುಕಳಾಧರ ವಾಸವಾದ್ಯರ ಮುದದಿ ರಕ್ಷಿಸಿ ದೈತ್ಯ ಪುಂಜವ ವಿಬುಧ ಗಣಾರ್ಚಿತ 1 ಮತಿವಂತನಾದಮ್ಯಾಲೆ ತ್ವತ್ಪಾದವೇ ಗತಿಯೆಂದು ನಂಬಿಹೆನು ನೀ- ನಿತ್ತ ಶಕುತಿಯಿಂದ ಪೂಜೆಯನು ಮಾ- ಡುತ ನಿನ್ನ ಪ್ರತಿಮೆಯ ನಮಿಸುವೆನು ವಿತತ ಮಹಿಮನೆ ಪೂರ್ವಭವ ದುಷ್ಕøತಗಳೆನ್ನನು ಪತನಗೊಳಿಪದನತುಳ ನೀ ನೋಡುತ್ತ ಎನ್ನನು ಜತನಮಾಡದೆ ವಿತಥ ಮಾಳ್ಪರೆ 2 ಹಿಂದೆ ತ್ರೇತಾಯುಗದಿ ಈ ಧರಣಿಗೆ ಬಂದು ನೀ ಕಪಿರೂಪದಿ ಅರ- ವಿಂದ ಬಾಂಧವನನು ಸೇರಿದಿ ಇಂದ್ರ ನಂದನನಿಂಗೆ ರಾಜ್ಯವ ಇಂದಿರೇಶನ ದಯದಿ ಕೊಡಿಸಿ ಪು- ರಂದರಗೆ ವರವಿತ್ತ ಬಲದಶ ಕಂಧರನ ಜವದಿಂದ ಗೆಲಿದನೆ 3 ಭೀಮನನೆನಿಸಿ ಕೀಚಕರ ನಿ- ರ್ನಾಮ ಗೊಳಿಸಿ ಜಯಿಸಿ ಕಿಮ್ಮೀರ ಬಕಮಾಗಧರ ಸೀಳಿಸಿ ಸಾಮಗಾಯನ ಲೋಲಕೃಷ್ಣನ ಪ್ರೇಮ ರಸಪೂರ್ಣೈಕ ಪಾತ್ರನಿ- ರಾಮಯನೆ ಧೃತರಾಷ್ಟ್ರತನಯಸ್ತೋಮವನು ತರಿದಮಲರೂಪ 4 ಕಡೆಯಲಿ ಕಲಿಯುಗದಿ ನೀ ಯತಿಯಾಗಿ ಮೃಡನ ತರ್ಕವ ಖಂಡಿಸಿ ಜ್ಞಾನಾ ನಂದಕದಲಿ ಕೃಷ್ಣನ ಸ್ಥಾಪಿಸಿ ಮಾಯಿಗಳನ್ನು ಬಡಿದು ದೂರದಲೋಡಿಸಿ ಪೊಡವಿಗಧಿಪತಿ ಪಾವನಾತ್ಮಕ ಒಡೆಯ ಶೇಷಾಚಲನಿವಾಸನ ಮೆರದನೆ ತಡವ ಮಾಡದಲು 5
--------------
ತುಪಾಕಿ ವೆಂಕಟರಮಣಾಚಾರ್ಯ
ಭಕ್ತರ ಭಾಗ್ಯಕೆ ಯೆಣೆಯಂ ನಾ ಕಾಣೆನೀಜಗದಿ ನಿತ್ಯ ಸ್ತುತ್ಯದ ಮಾರ್ಗವತಿವೈಚಿತ್ರ್ಯವು ಪ ನಿತ್ಯ ಕರ್ಮವನಡಸಿ ಗೀತಾಪಾರಾಯಣ ಮಾಡುತ್ತಿಹ 1 ಸುಂದರ ಶ್ಯಾಮನ ಕಂಡಾನಂದದಿ ಮಹಿಮೆಯ ಕೊಂಡಾಡಿ ಹೃದಯದಿ ನೋಡುವ2 ನಡೆವಾಗ ನುಡಿವಾಗ ಮಡದಿ ಮಕ್ಕಳ ಕೂಡಿ ತಮ್ಮೊಡೆಯನ ನೆನೆಯುವ 3 ಹರಿಕಥೆಯಂ ಕೇಳುವರು ಶರಣರ ಕಂಡು ನಮಿಸುವರು ಪರಿ ಸಿರಿಯರಸನಿರುವನೆಂದರಿತ ಮಹಾತ್ಮರ4 ನಗಧರಲೀಲೆಗೆ ನಗುತ ಹಗರಣಹರ ಎಲ್ಲೆಂದಳುತ ಒಗೆದಾಮೋದದಿ ಕುಣಿದಾಡುತ್ತಿಹ 5 ಹೆಜ್ಜಾಜೀಶನು ಕೃಪೆಯಿಂ ಸಜ್ಜನರಂ ಪಾಲಿಸಿದ ಮಜ್ಜನಗೈಯುವ ಪುಣ್ಯ ಚರಿತ್ರರ 6
--------------
ಶಾಮಶರ್ಮರು
ಭವ ಕಾಮಹರ ನಿನ್ನಂಘ್ರಿ ತಾಮರಸಯುಗಳ ಭಜಿಸುವೆ | ಭಜಿಸಿ ಬಿನ್ನೈಸುವೆ ಶ್ರೀ ಮನೋಹರನ ತೋರಯ್ಯ 1 ಕೃತ್ತಿವಾಸನೆ ಎನ್ನ ಚಿತ್ತದಲಿ ಹರಿಯಪದ ನಿತ್ಯದಲಿ ಭಜಿಪ ಮತಿ ನೀಡೊ | ಮತಿ ನೀಡೊ ಪಾರ್ವತಿ ಚಿತ್ತದೊಲ್ಲಭನೆ ನಮಿಸುವೆ 2 ಸುವರ್ಣಮುಖರಿಯ ತೀರದಲಿ ನೆಲಸಿರುವೆ ಶ್ರೀ ವರಾಹನಂಘ್ರಿ ಭಜಿಸುತ್ತ | ಭಜಿಸುತ್ತ ನೆಲಸಿರುವ ಪಾವನರೂಪ ಸಲಹಯ್ಯ 3 ಕಾಳಸ್ತಿನಿಲಯನೆ ಪೇಳಲಿನ್ನೇನು ನಾ ತಾಳಲಾರೆನು ಈ ಭವಬಂಧ | ಭವಬಂಧ ಬಿಡಿಸುವ ವ್ಯಾಳ ಶಯನನ್ನ ತೋರೈಯ್ಯ 4 ಭಕ್ತರಿಗೊಲಿದು ಅಪಮೃತ್ಯು ಪರಿಹರಿಸಿದೆ ಸತ್ಯ ಸಂಕಲ್ಪ ನಿನ್ನಂಘ್ರಿ | ನಿನ್ನಂಘ್ರಿ ಕಮಲಗಳ ಚಿತ್ತದಲಿ ತೋರಿ ಸಂತೈಸು 5 ಮನಕೆ ಗುರು ನೀನಹುದು ಮನವ ಹರಿಯಲಿ ನೆಲಸೊ ವೈರಿ ಮಮತೆಯಿಂ | ಮಮತೆಯಿಂದಲಿ ನಿತ್ಯ ಮನಶುದ್ಧಿಗೈದು ಕಾಯಯ್ಯ 6 ಶಂಖಚಕ್ರವ ಪಿಡಿದ ಸಂಕರ್ಷಣನ ರೂಪ ನಿತ್ಯ ಭಜಿಸುವೆ | ಭಜಿಸುವೆ ಕೈಲಾಸ ಅಂಕದಲಿ ನೆಲಸಿ ಹರುಷದಿ 7 ನರಸಿಂಹ ರೂಪವನು ಸ್ಮರಿಸುತ್ತ ಮೈಮರೆವೆ ಉರುತರ ಭಾವ ಭಕ್ತಿಯಲಿ | ಭಕ್ತಿಯಲಿ ಭಜಿಪ ನಿನ್ನ ಸ್ಮರಿಸುವರ ಭಯವ ಹರಿಸುವೆ 8 ಶ್ರೀ ರಾಮನಾಮವನು ಪ್ರೇಮದಿಂದುಮೆಗರುಹಿ ಆರಾರು ಅರಿಯದಾನಂದ | ಆನಂದವಿತ್ತೆ ಭವ ತಾರಕವೆಂದು ಕರುಣಾಳೂ 9 ಅಜನ ಭ್ರೂಮಧ್ಯದಲಿ ಜನಿಸಿದೆಯೊ ಜಗದಲ್ಲಿ ಭಂಜನ | ಭಂಜನಗೊಳಿಸಿದೆ ತ್ರಿಜಗದಲಿ ನಿನಗೆ ಸರಿಯುಂಟೆ 10 ಶೇಷ ಪರ್ಯಂಕನಿಗೆ ಹಾಸಿಗೆಯಾಗಲು ತೋಷದಲಿ ತಪವಾಚರಿಸಿದೆ | ಚರಿಸಿ ಸಾಧಿಸಿದೆ ನೀ ಶೇಷ ಪದವಿಯನು ತ್ರಿನೇತ್ರ 11 ಶರಧಿ ಮಥಿಸಲು ಗರಳ ಉದ್ಭವಿಸಿ ಭಯವಾಗೆ | ಭಯವಾಗಿ ಪರಿಹರಿಸಿ ಗರಳವನೆ ಕುಡಿದೆ ಶ್ರೀ ಕಂಠ 12 ಅಸುರರ ವಂಚಿಸಿದ ವಶವಲ್ಲದ ಹೆಣ್ಣು ವಶವಾಗಲೆಂದು ಹಾರೈಸಿ | ಹಾರೈಸಿ ಬಳಲುತಿರೆ ಬಿಸಜಾಕ್ಷ ನಿನ್ನ ಸಲಹಿದ 13 ತಾರಕಾಸುರನಿಂದ ಘೋರಪಡುತಿರೆ ಜಗವು ಮಾರ ಪೂಅಸ್ತ್ರ ಎಸೆಯಲು | ಎಸೆಯಲು ದಹಿಸಿ ಕು- ಮಾರನನು ಪಡೆದೆ ಗಿರಿಜೇಶ 14 ಸ್ತುತಿಪ್ರಿಯ ನಿನ್ನ ನಾ ಸ್ತುತಿಸಲಾಪೆನೆ ಮಂದ ಮತಿ ಎಂದು ನೀನೆ ಸಂತೈಸೊ | ಸಂತೈಸಬೇಕಿನ್ನು ಮತಿಯಿತ್ತು ಹರಿಯ ಪದದಲ್ಲಿ 15 ಶಿರದಲ್ಲಿ ಗಂಗೆ ಚಂದ್ರನ ಮೆರೆಯುವ ಉರಗ ಭೂಷಣನೆ ಕೇಳಿನ್ನು | ಕೇಳಿನ್ನು ಎನ್ನ ಮನ ಮರೆಯದೆ ಹರಿಯ ನೆನೆಯಲಿ 16 ವಿಷ್ಣು ಭಕ್ತರೊಳಗೆ ಶ್ರೇಷ್ಠ ನೀನಹುದಯ್ಯ ಜಿಷ್ಣುವಿಗೆ ಮೆಚ್ಚಿ ಧನುವಿತ್ತೆ | ಧನುವಿತ್ತೆ ಗೋಪಾಲ- ಕೃಷ್ಣವಿಠ್ಠಲನ ತೋರಯ್ಯ 17
--------------
ಅಂಬಾಬಾಯಿ
ಭವ ಶಿತಿಕಂಠ ನಿನ್ನಪದ ತಾಮರಸಯುಗ್ಮಗಳಿಗಾನಮಿಸುವೆ ಪ ಕಾಮಹರ ಕೈಲಾಸ ಹೇಮಗಿರಿಯಾವಾಸ ರಾಮನಾಮನ ಭಜಿಪ ಉಮೆಯರಸ ಶಂಭೋ ಅ ಮೃತ್ಯುಂಜಯ ಮೃಗಾಂಕ ಕೃತ್ತಿವಾಸ ಕೃಪಾಳೊ ವಿತ್ತÀ್ತಪತಿ ಸಖ ವಿನಾಯಕರ ಜನಕ ಭೃತ್ಯವರ್ಗಕೆ ಬಾಹಪಮೃತ್ಯು ಕಳೆದು ಸಂ ಪತ್ತು ಪಾಲಿಸುವುದು ನಿವೃತ್ತಿ ಸಂಗಮಪ 1 ಗೋಪತಿ ಧ್ವಜ ಘೋರ ಪಾಪ ಸಂಹರಣ ಹರಿ ತೋಪಲೋಪಮ ಕಂಠ ಚಾಪಪಾಣೀ ಶ್ರೀ ಪತಿಯ ಶ್ರೀನಾಭಿ ಕೂಪಸಂಭವತನಯ ನೀ ಪಾಲಿಸೆಮ್ಮನು ವಿರೂಪಾಕ್ಷ ಗುರುವೆ 2 ಭಸಿತ ಭೂಷಿತಡಮರು ತಿಸುಳಗೈಯನೆ ಶಂಭೋ ಕಿಸಲಯೋಪಮ ನವಿರ ಶಶಿಭೂಷಣ ಅಸುರಾರಿ ಶ್ರೀ ಜಗನ್ನಾಥ ವಿಠಲನ ಪದ ಬಿಸಜ ಧ್ಯಾನವನೀಯೊ ಹಸನಾಗಿ ಕಾಯೊ 3
--------------
ಜಗನ್ನಾಥದಾಸರು
ಮಂಗಳಾರತಿ ನಮ್ಮ ರಂಗನಾಥನಿಗೆ ಜಂಗಮಾರ್ಚಿತಪಾದ ಕಲುಷವಿಭಂಗರಂಗನಿಗೆ ಪ ಜಾಜಿಯ ಪುಷ್ಪಂಗಳಂ ದಿವ್ಯ ಸ ಭಾಜ ಭಜಂತ್ರಿಗಳಿಂ ಮೂಜಗದೊಯನೆ ಮುಕ್ತಿಕೃಪಾಕರ ಶ್ರೀಜಯವೆನ್ನುತಲಿ 1 ವಾರುಧಿ ಶಯನನಿಗೆ ದಿವ್ಯ ಸು ಚಾರುಸನಯನಗೆ ನಮ್ಮ ನಾರಿಯರೆಲ್ಲರು ನಮಿಸುವ ಲಕ್ಷ್ಮೀ ನಾರಾಯಣನಿಗೆ 2 ರಾಧಾರುಕ್ಮಿಣಿ ಜಯಪತಿಗೆ ಸಂತೆ ಸರಗೂರೊಳಗಿಹ ನಮ್ಮಯ ಶ್ರೀ ಗುರು ತುಳಸೀರಾಮನಿಗೆ 3
--------------
ಚನ್ನಪಟ್ಟಣದ ಅಹೋಬಲದಾಸರು
ಮಣಿಗಣ ಭೂಷಣ ಅಣಿಗಾಣೆನಿಮಗಿನ್ನು ಗಣರಾಯ ಗಣರಾಯ ಪ. ರುದ್ರ ಕುಮಾರನೆ ಸಿದ್ಧಿ ನಿನಾಯಕ ವಿದ್ಯವಪಾಲಿಸೊಬುದ್ಧಿದಾತನೆ ಅ.ಪ. ಆನೆಯ ಮುಖದವನ ಧೇನಿಸಿನಮಿಸುವೆ ಗಣರಾಯ1 ಶ್ರೀನಿವಾಸನ ಪ್ರಿಯ ನೀನಮ್ಮಗೆಲಿಸೆಂದು ಗಣರಾಯ2 ಹಸ್ತಿಯ ಮುಖದವಗೆ ಹಸ್ತವ ಮುಗಿದೆವಸ್ವಸ್ಥ ಮನಸು ಕೊಡು ವಿಸ್ತರ ಉದರನೆ ಗಣರಾಯ3 ಗಂಧ ಅಕ್ಷತೆ ಪುಷ್ಪ ತಂದೆ ದುರ್ವಾಂಕುರ ಚಂದದ ವಸ್ತ್ರಗಳ ಒಂದೊಂದು ಕೈಕೊಳ್ಳೊ ಗಣರಾಯ 4 ರನ್ನ ಮಾಣಿಕ ಬಿಗಿದ ಚಿನ್ನದಾಭರಣವ ನಿನ್ನ ಪೂಜೆಗೆ ತಂದೆ ಚೆನ್ನಾಗಿ ಕೈಕೊಳ್ಳೊ ಗಣರಾಯ 5 ಚಕ್ಕಲಿ ತರುಗುಮಿಕ್ಕಾಗಿ ಲಡ್ಡುಗೆ ಚಿಕ್ಕಗಣಪ ಉಂಡು ಚಕ್ಕನೆ ವರಕೊಡು ಗಣರಾಯ 6 ಚಲ್ವ ರಾಮೇಶನನೆಲೆಕಂಡ ಪುರುಷನೆಇಲಿವಾಹನ ನಮ್ಮ ಸಲುಭದಿ ಗೆಲಿಸಯ್ಯ7
--------------
ಗಲಗಲಿಅವ್ವನವರು
ಮಧ್ವಾಂತರ್ಗತ ವೇದವ್ಯಾಸ ಕಾಯೊ ಶುದ್ಧ ಮೂರುತಿಯೆ ಸರ್ವೇಶ ಪ. ಶ್ರದ್ಧೆಯಿಂದಲಿ ನಿನ್ನ ಭಜಿಸುವ ಭಕ್ತರಿಗೆಬುದ್ಧ್ಯಾದಿಗಳ ಕೊಟ್ಟುದ್ಧರಿಸೊ ದೇವರದೇವಅ.ಪ. ದ್ವಾಪರದಲಿ ಒಬ್ಬ ಮುನಿಪ ತನ್ನಕೋಪದಿಂದಲಿ ಕೊಡಲು ಶಾಪಸ್ಥಾಪಿಸಲು ಜ್ಞಾನ ಲೋಪಅಪಾರ ತತ್ವಸ್ವರೂಪಶ್ರೀಪತಿಯೆ ಕಾಯೆಂದು ಮೊರೆಯಿಡೆಪಾಪ ವಿರಹಿತÀಳಾದ ಯಮುನೆಯದ್ವೀಪದಲಿ ಅಂಬಿಗರ ಹೆಣ್ಣಿನರೂಪಕ್ಕೊಲಿದವಳಲ್ಲಿ ಜನಿಸಿದೆ 1 ಸೂತ್ರ ಪುರಾಣ ರಚಿಸಿವಾದಗಳ ನಿರ್ವಾದ ಮಾಡಿಸಾಧುವಂದಿತ ಬಾದರಾಯಣ 2 ಸುಮತಿಗಳಿಗೆ ನೀ ಬೋಧಿಸಿದೆ ಮಿಕ್ಕಕುಮತಗಳನ್ನು ಛೇದಿಸಿದೆ ಕ್ರಿಮಿಯಿಂದ ರಾಜ್ಯವಾಳಿಸಿದೆ ಜಗತ್‍ಸ್ವಾಮಿ ನೀನೆಂದು ತೋರಿಸಿದೆವಿಮಲರೂಪನೆ ಕಮಲನಾಭನೆರಮೆಯ ಅರಸನೆ ರಮ್ಯ ಚರಿತನೆಮಮತೆಯಲಿ ಕೊಡು ಕಾಮಿತಾರ್ಥವನಮಿಸುವೆನು ಹಯವದನಮೂರುತಿ3
--------------
ವಾದಿರಾಜ
ಮಹಿಮೆ ನೋಡಿರೈ ರಾಯರ ಮಹಿಮೆ ಪಾಡಿರೈ ಪ ಜಲಜನಾಭನೊಲುಮೆ ಪಡೆದು ಇಳೆಯೊಳು ಪ್ರಖ್ಯಾತರಾದ ಅ.ಪ ರಾಘವೇಂದ್ರ ಯತಿಗಳೆಂದು ಬಾಗಿ ನಮಿಸುವವರ ಮನದ ರಾಗ ದ್ವೇಷಾದಿಗಳ ಕಳೆದು ನೀಗಿಸುವರೊ ಭವದ ಬಂಧ 1 ತಾಳ ತಂಬೂರಿಪಿಡಿದು ಭೋಗಶಯನನನ್ನು ಭಜಿಸಿ ಕೂಗಿ ಪಾಡುತಿರಲು ನಲಿದು ಬೇಗ ಪಾಲಿಸುತಲಿ ನಲಿವ2 ದೇಶದೇಶದವರು ಬಹಳ ಕ್ಲೇಶಪಡುತ ಬರಲು ಅವರ ಕ್ಲೇಶಗಳನು ಕಳೆದು ಪರಮ ಉ- ಲ್ಲಾಸ ನೀಡಿ ಪೊರೆಯುವಂಥ 3 ಸೀತಾಪತಿಯ ಪೂಜಿಸುತಲಿ ಖ್ಯಾತರಾದ ಯತಿಗಳನ್ನು ಪ್ರೀತಿಯಿಂದ ಸೇವಿಸುವರ ಪಾತಕಗಳ ಕಳೆದು ಪೊರೆವ 4 ಗಳದಿ ಹೊಳೆವ ತುಳಸಿ ಮಾಲೆ ಹೊಳೆವ ನಗೆಯ ಮುಖದ ಭಾವ ಕಮಲನಾಭ ವಿಠ್ಠಲನೊಲಿಸಿ ಹಲವು ವಿಧದಿ ಪೂಜಿಸುವರು5
--------------
ನಿಡಗುರುಕಿ ಜೀವೂಬಾಯಿ
ಮಹಿಷಿ ಎನಿಸಿಹಳೇ ಪ ವಸುದೇವ ಭಗಿನಿ ಕೈಕೆಯೀ ಉದರದಲಿಅಸುವ ನೀಧರಿಸುತ್ತ ಅವತರಿಸುತಾ |ವಸುಧೆಯೊಳು ಸುಗುಣ ಗಣಯುತೆಯು ನೀನಾಗಿಪೆಸರಾಂತೆ `ಭದ್ರೆ` ಎಂದೆನುತ ಅವನಿಯಲೀ 1 ಪಿತನು ನಳನೆಂಬನಿಗೆ ಪ್ರೀತಿಯಲಿ ನೀ ಪೇಳ್ದೆಹಿತವು ಶ್ರೀ ಹರಿಗೆಂದು ನುತಿಸುವ ಸುಕರ್ಮ |ಅತಿಶಯದೆ ಪೂಜೆಯಿಂದಧಿಕದಲಿ ಶ್ರೀ ಹರಿಯುನುತಿಗೆ ಪ್ರೀತಿಸುವನೆಂದೊರೆದೆ ಭಕುತಿಯಲೀ2 ಹರಿನಾಮ ಸ್ಮರಿಸುತ್ತ ಹರಿ ಚರಣ ನಮಿಸುವರದುರಿತರಾಶಿಗಳಿರದೆ ಪರಿಹಾರವೆನುತಾ |ಒರೆಯುತೀಪರಿ ನಮನ ಭಕ್ತಿಗೇ ಪ್ರಾಶಸ್ತ್ಯಪರಿಪರಿಯ ಪೇಳಿಹಳೆ ನಮಿಪೆ ನಿನ್ನಡಿಗೇ3 ಈ ಪರಿಯ ತಪಗೈದು ದ್ವಾಪರದ ಯುಗದಲ್ಲಿಶ್ರೀ ಪತಿಯ ದರ್ಶನದಿ ತಾಪತ್ರಯ ಕಳೆದೂ |ಆ ಪರಮ ಪುರುಷನ್ನ ಕೈ ಪಿಡಿದ ಮಹ ಭದ್ರೆಕಾಪುರುಷನಾದೆನ್ನ ಪಾಪ ಪರಿಹರಿಸೇ 4 ಭದ್ರಾಣಿ ಪತಿಗಿನ್ನು ಕಾದ್ರವೇಯನು ಮತ್ತೆಆದ್ರಿ ಮಂದಿರ ತಂದ ಅವಿಕಾರಿ ವಿಪಗೇ |ಸಿದ್ಧೈದು ಗುಣದಿಂದ ಹೀನಳೆಂದೆನಿಸುತ್ತಭದ್ರ ಗುರು ಗೋವಿಂದ ವಿಠಲ ಪ್ರಿಯೆ ಪಾಹೀ 5
--------------
ಗುರುಗೋವಿಂದವಿಠಲರು
ಮಾರಮಣಾ ಹರಿ ಗೋವಿಂದಾ ಬಾರೋ ಕೊಂಡಾಡಿ ಪಡೆವೆನಾನಂದ ಪ ನಾರದಾದಿ ಮುನಿ ಬೃಂದಾನಂದ ಬಾರೋ ಭಕ್ತಕುಮುದೇಂದು ಮುಕುಂದಾ ಅ.ಪ ನಾನಾ ಜನುಮಗಳೊಳಗುದಿಸಿದೆವಯ್ಯ ಏನೆಂದು ಪೇಳಲಿ ನಿನಗೆ ಜೀಯ ನೀನೆನಗಿತ್ತಾ ತನುಗಳನಳೆಯಲು ಏನಪೇಳಲೈ ಭೂಮಿಗೆ ನಾಲ್ಮಡಿ ಸಾನುರಾಗದಿ ಜನನಿಯಿತ್ತಾ ಘೃತ ಪಾನಕ್ಷೀರ ವಾರಿಧಿಗಿಮ್ಮಡಿಯೋಳ್ ಬಾ 1 ನೋಡಿ | ಮನಕರಗದೆ ರುಕುಮಿಣಿ ರಮಣಾ ಮೃಡ ವಂದಿತ ಸರಸಿಜ ಚರಣಾ ಪಾಡೀ ಕೊಂಡಾಡುತಿರ ದೇಕೆ ನಿಷ್ಕರುಣಾ ಬೇಡಿದರ್ಗೆ ಕೈನೀಡುತೆ ದಾನವ ಮಾಡಲಿಲ್ಲವದರಿಂದ ದರಿದ್ರತೆ ಪೀಡಿಸವೈ ನಾ [ಮಾಡಿದ] ಪಾತಕವಾರ್ಜಿಸಿ ಜನುಮಂಗಳ ಪಡೆದೆನೊ ಬಾ 2 ಸುನಾಮ ನಮಿಸುವೆ ಸುಗುಣ ವಿರಾಮ ಸನ್ನುತ ವರಮಾಧವ ಕೋಮಲಾಂಗ ಸೋಮಶೇಖರಾಧಿಪ ಸುಮಚರಣವ ನೋಳ್ಪೆನೋ ಬಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಾವಿನಕೆರೆ 6 ಮಾಧವನಿವನೋ ಉಮಾಧವನಿವನೋ ಮಧುಸೂದನನೋ ಗಂಗಾಧರನೋ ಪ ವೇದವನುಲಿದನೋ ನಾದಕೆ ಒಲಿದನೋ ಮೇದಿನಿಗೈದಿ ಮಾಂಗಿರಿಯ ಸೇರಿದನು ಅ.ಪ ಹಿರಿಯ ಕಲ್ಲ ಗುಡಾರದೊಳಿರುವ ಒರಳಲಿ ನಲಿವ ಹರನವೊಲೆಸೆವ ಕರಗಳಿಂದೆಳೆದರೂ ಬಾರನೆಂದೆನುವ ಸ್ಮರಿಸುವ ಮಾನವನೆದುರಲಿ ನಿಲುವ 1 ಎರೆದ ಹಾಲಾದರೂ ಸುರಿದ ನೀರಾದರೂ ದೊರಕದು ಕರಕೆ ತೊಟ್ಟೊಂದಾದರೂ ಹರಕೆ ಹೊತ್ತವರು ನೆರೆನಮಿಸುವರು ಹರುಷದಿ ಕುಣಿದು ಕೊಂಡಾಡುತಿಹರು 2 ಸಾವಿರ ನಾಮನು ದೇವನೀನೊಬ್ಬನು ಭಾವದೊಳಿರುವನು ಕಾವವನು ನೋವ ಬಿಡಿಸುವನು ಪಾವನಚರಣನು ಭಾವುಕಗೊಲಿವನು ಗಿರಿಯ ಮೇಲಿಹನು 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮೂರ್ತಿ ಸತ್ಯ ಸಂಧರ ಕೀರ್ತಿ ಜಗದಲ್ಲಿ ಉದ್ಧರರ ಪ. ಪದ್ಮನಾಭ ಮಾಧವ ಮಾಧವ ಅಕ್ಷೋಭ್ಯರ ಚರಣವವಿದ್ಯುಕ್ತದಿಂದ ಬಲಗೊಂಬೆ ರನ್ನದ 1 ಪಾದ ಪದ್ಮವ ಮೊದಲೆ ಬಲಗೊಂಬೆ ರನ್ನದ 2 ರಘುನಾಥ ರಘುವರ್ಯ ರಘೋತ್ತಮ ತೀರ್ಥರ ವೇದವ್ಯಾಸ ವಿದ್ಯಾಧೀಶರೆ ರನ್ನದ ವೇದವ್ಯಾಸ ವಿದ್ಯಾಧೀಶರ ಚರಣವ ಜಗದ ಗುರುಗಳನು ಬಲಗೊಂಬೆ3 ಉತ್ತಮ ವೇದನಿಧಿ ಸತ್ಯವೃತ ತೀರ್ಥರ ಸತ್ಯನಿಧಿ ಸತ್ಯನಾಥರ ರನ್ನದ ಸತ್ಯನಾಥರ ಚರಣವ ಭಕ್ತಿಂದ ಮೊದಲ ಬಲಗೊಂಬೆ 4 ಸತ್ಯಾಭಿನವ ತೀರ್ಥ ಸತ್ಯಪೂರ್ಣ ತೀರ್ಥರಸತ್ಯವಿಜಯ ಸತ್ಯಪ್ರಿಯರ ರನ್ನದ ಸತ್ಯಪ್ರಿಯರ ಚರಣವ ಅತ್ಯಂತವಾಗಿ ಬಲಗೊಂಬೆ 5 ಸತ್ಯಬೋಧ ಸತ್ಯಸಂಧ ಸತ್ಯವರಚಿತ್ತಶುದ್ಧಿಯಲೆ ಬಲಗೊಂಬೆಚಿತ್ತಶುದ್ಧಿಯಲೆ ಸಭೆಯೊಳುಸತ್ಯವಾಕ್ಯಗಳ ನುಡಿಸಲು ರನ್ನದ6 ಸತ್ಯವರ್ಯರೆಂಬ ಉತ್ತಮ ಗುರುಗಳ ಹಸ್ತಕಮಲದಲೆ ನಮಿಸುವೆ ರನ್ನದ ಹಸ್ತಕಮಲದಲೆ ನಮಿಸುವೆ ಜಗದೊಳುಮೆರೆವ ಸತ್ಯಧರ್ಮರನು ಬಲಗೊಂಬೆ 7 ಪಾದ ಪೊಂದಿದ್ದ ಗುರುಗಳು ವಿದ್ಯುಕ್ತದಿಂದ ಬಲಗೊಂಬೆ ರನ್ನದ ವಿದ್ಯುಕ್ತದಿಂದ ಬಲಗೊಂಬೆ ಅತ್ತಿಗೆಯರ ಗೆದ್ದು ದುಂಧುಭಿಯ ಹೊಯಿಸೇವ ರನ್ನದ 8 ಯತಿ ಮುನಿರಾಯರು ಅತಿ ಭಕ್ತರಾಗಿದ್ದಅತಿಪ್ರಿಯರಾದ ಗುರುಗÀಳು ಅತಿ ಪ್ರಿಯರಾದ ರಾಮೇಶನ ಅತಿ ಭಕ್ತರ ಮೊದಲ ಬಲಗೊಂಬೆ ರನ್ನದ 9
--------------
ಗಲಗಲಿಅವ್ವನವರು