ಒಟ್ಟು 112 ಕಡೆಗಳಲ್ಲಿ , 41 ದಾಸರು , 110 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ನೋಡಿ ಧನ್ಯನಾದೆನೊ ಶ್ರೀಕೃಷ್ಣ ದಯದಿಮನ್ನಿಸಯ್ಯ ಮರೆಯ ಹೊಕ್ಕೆನು ಪಅನ್ನಪಾನದಿಂದ ಬೆಳೆದ ತನುವು ಸ್ಥಿರವಿದೆಂದು ನಂಬಿಮುನ್ನ ಮತಿಹೀನನಾಗಿ ನಿನ್ನ ಸ್ಮರಣೆ ಮರೆತೆ ಅ.ಪಮಾಯ ಪಾಶದಲಿ ಸಿಲುಕಿದೆಯನ್ನನಗಲಿ ಅಳಿದ ತಾಯಿತಂದೆಯರಿಗೆ ಮರುಗಿದೇ ಪ್ರಿಯಮಡದಿ ಪರಸ್ತ್ರೀಯರಲಿ ಮೋಹವೆರಸಿಮರುಳನಾದೆಕಾಯಸುಖವನೆಣಿಸಿಸರ್ವೇ ನ್ಯಾಯ ತಪ್ಪಿ ನಡೆದೆ ಕೃಷ್ಣಾ 1ಹಲವು ಜನ್ಮವೆತ್ತಿ ತೊಳಲಿದೇ ತರಳನೆನಿಸಿಹಲವು ಜಾತಿ ಮೊಲೆಯ ಭುಜಿಸಿದೆಹಲವು ದೇಶಗಳನು ಸುತ್ತಿ ಹಲವುಕ್ರೂರಕೃತ್ಯ ಗೈದೆ ತಲೆಯ ಹಿಂದೆಇರುವ ಮೃತ್ಯು ನೆಲೆಯನರಿಯದಿರ್ದೆ ಕೃಷ್ಣಾ 2ಆಶಾಪಾಶಗಳಲಿ ಸರ್ವ ದೋಷ ಮೋಸವೆಣಿಸದಾದೆಲೇಸ ಕಾಣೆ ಮುಂದೆ ಯಮನ ಪಾಶಕರ್ಹನಾದೆ ಕೃಷ್ಣಾ3ಅರಿಗಳಾರು ಮಂದಿ ದೇಹದಿ ನೆಲಸಿರ್ದು ಎನ್ನಮರುಳುಗೊಳಿಸೆ ಇಂದ್ರಿಯ ಸಹಾಯದಿನರವು ಮಾಂಸ ಅಸ್ಥಿಯಿಂದ ವಿರಚಿಸಿದ ದೇಹವಿದನುಪರಿಪರಿಯ ಶೃಂಗರಿಸುತ ಸ್ಮರನ ತೆರದಿ ಮೆರೆದೆ ಕೃಷ್ಣಾ 4ಒಂದು ದಿನವು ಸುಖವ ಕಾಣೆನೂ ಈ ಜೀವನಸಂಬಂಧಿಗಳ್ಯಾರೆಂಬುದನರಿಯೆನೂಬಂಧು ನೀನೇ ಸರ್ವಪ್ರದನು ಮುಂದೆ ಜನುಮವೆತ್ತದಂತೆಬಂದು ಎನ್ನ ಸಲಹೋ ಗೋವಿಂದದಾಸನೊಡೆಯ ಕೃಷ್ಣಾ 5
--------------
ಗೋವಿಂದದಾಸ
ಪಾದಕಂಡು ಪಾವನಾದೆನು ಶ್ರೀಗಿರಿಯ ನಿಲಯನಪಾದಕಂಡು ಪಾವನಾದೆನು ಪಪಾದಕಂಡು ಪಾವನಾದೆನುಮಾಧವನ ಪ್ರಸಾದ ಪಡೆದೆನುಹಾದಿಗಾಣದೆಪರಮದುರ್ಭವಬಾಧೆಯೊಳು ಬಿದ್ದು ತೊಳಲಿ ಬಳಲುತಮೇದಿನಿಯೊಳು ಜನುಮ ತಾಳಿಭೇದಮತದ ಹಾದಿಬಿಟ್ಟು ಅ.ಪನೀಲಬಣ್ಣದೊಪ್ಪುವ ಸುಂದರ ಶುಭಕಾಯಇಂದಿರೆಲೋಲತ್ರಿಜಗಮೋಹನಾಕಾರ ಕೊರಳಪದಕಮಾಲಕೌಸ್ತುಭಮುಕುಟಮಣಿಹಾರ ರತ್ನದುಂಗುರಕಾಲೊಳ್ಹೊಳೆಯುವ ಗೆಜ್ಜೆಸರಪಳಿಶೀಲವೈಷ್ಣವ ನಾಮ ಪಣೆಯಲಿಕಾಳರಕ್ಕಸಕುಲಸಂಹಾರನಪಾಲಸಾಗರಕನ್ನೆವರನಪಾಲಮೂಲೋಕಸಾರ್ವಭೌಮನಮೇಲು ಭೂವೈಕುಂಠದಲ್ಲಿ 1ಉಟ್ಟದುಕೂಲ ಶಲ್ಯ ಜರತಾರ ಕೈಯಲ್ಲಿ ಕಂಕಣಪಟ್ಟ ರತ್ನದ ನಡುವಿಗುಡಿದಾರ ವರ್ಣಿಸುವರಾರುಸೃಷ್ಟಿಯೊಳಗೀತ ಮೀರಿದವತಾರ ಇನಕೋಟಿ ಪ್ರಭಾಕರಬಿಟ್ಟು ವೈಕುಂಠ ಇಹ್ಯಕೆ ಸಾಗಿಬೆಟ್ಟದ ಮೇಲೆ ವಾಸನಾಗಿಕೊಟ್ಟು ವರಗಳ ಮೂರು ಜಗಕೆಶೆಟ್ಟಿಯಂದದಿ ಕಾಸುಕೊಳ್ಳುವದುಷ್ಟಭ್ರಷ್ಟ ಶಿಷ್ಟರೆಲ್ಲರಇಷ್ಟದಾಯಕದಿಟ್ಟ ದೇವನ 2ಒಂದೆ ಮನದಲಿ ಸಕಲ ಸೇವಕರು ಭಯಭಕುತಿಯಿಂದಬಂದು ಹರಕೆಯ ತಂದು ನೀಡುವರು ತುಂಬರನಾರದರೊಂದಿಗಾನದಿಂ ಪಾಡಿ ಪೊಗಳುವರು ಆನಂದ ಕೋರುವರುಹೊಂದಿ ಭಜಿಸುತ ಸಪ್ತಋಷಿಗಣಬಂದು ಇಳಿವರು ಬಿಡದೆಅನುದಿನವಂದ್ಯ ನಿಗಮಾದಿಬಂಧು ಭಜಿಪರಕಂದುಗೊರಳಾದಿ ಬ್ರಹ್ಮಸುರರಿಂಗಂಧಪರಿಮಳಕುಸುಮದ್ರವ್ಯಗಳಿಂದ ಸೇವೆಯ ಗೊಂಬದೇವನ 3ಉದಯಕಾಲದಿ ಬಾಲನವತಾರ ಮಧ್ಯಾಹ್ನಕಾಲದಿಸದಮಲಾಂಗ ಯೌವನಾಕಾರಸುಸಂಧ್ಯಾಕಾಲದಿಮುದುಕನಾಗಿ ಕಾಂಬ ಮನೋಹರ ಬಹುಮಹಿಮಗಾರಪದುಮವದನ ಮದನನಯ್ಯಪದುಮವತಿಯ ಪ್ರಾಣಪ್ರಿಯಒದಗಿಬಂದ ಭಕುತಜನರನುಸುದಯದಿಂದ ಕರೆದು ಪ್ರಸಾದಮುದದಿ ನೀಡುತ ಕೃಪೆಯದೋರಿಸದಮಲಸಂಪದವನೀವನ 4ತೀರದೀತನ ಲೋಕಶೃಂಗಾರ ಏರಿ ನೋಡಲುಪಾರಗಿರಿತುದಿ ಗಾಳಿಗೋಪುರ ಮುಂದೆ ನಡೆಯಲುದಾರಿಯಲಿಕೊಳ್ಳಏಳು ವಿಸ್ತಾರ ಪರಮಪರತರತೋರುವ ಮಹ ಗುಡಿಯು ಗೋಪುರದ್ವಾರ ಚಿನ್ನದ ಕಳಸ ಬಂಗಾರಗಾರುಮಾಡದೆ ದಾಸಜನರನುತಾರತಮ್ಯದಿ ಪೊರೆಯಲೋಸುಗುಸೇರಿಧಾರುಣಿ ವೈಕುಂಠವೆನಿಸಿದಧೀರವೆಂಕಟ ಶ್ರೀಶ ರಾಮನ 5
--------------
ರಾಮದಾಸರು
ಮುಟ್ಟು ಮುಟ್ಟೆನ್ನುತ ಮೂರ್ನಾರು ಹೊರಲೆಮುಟ್ಟಲಿ ಬಂತೆ ಬಿಕನಾಶಿಪಮುಟ್ಟೋ ನೀನೇ ಮಡಿಯೂ ನೀನೇಕೆಟ್ಟಿತು ನಿನಮಡಿ ಮೊದಲೇ ಜಲದಲಿ ನೀ ಮುಳುಗೆಕಡೆಯಲಿ ಆ ಉದಕವನೇ ತರುವೆದೇವರಿಗಿಂದಭಿಷೇಕವ ಮಾಡುತಅಹಂನ ಬಿಡು ನಿನ ಬಿಕನಾಶಿ1ಎಲುಬು ಚರ್ಮದಿ ಮಲಮೂತ್ರದ ಗೂಡಲಿನಲಿಯುತಲಿದ್ದೆ ಬಿಕನಾಶಿನೆಲೆಗೊಂಡಾ ನವ ದ್ವಾರದ ಜಲದೊಳುತೊಳಲುತ ಬಿಕನಾಶಿ2ಹುಟ್ಟುತಸೂತಕಹೊಂದುತಸೂತಕನಟ್ಟ ನಡುವೆ ಬಿಕನಾಶಿಪಟ್ಟಣದಾ ಕಾವೇರಿ ಮುಳುಗಲುಮುಟ್ಟು ತೇಲಿಯಿತೆ ಬಿಕನಾಶಿ3ಉತ್ತಮ ಹತ್ತಿ ಬತ್ತಿರಲಾಂಜನವೃಕ್ಷದಿ ಬೆಳೆವುದೆ ಬಿಕನಾಶಿಉತ್ತಮ ರೋಧನ ಭಾರವ ಕೆಡಿಸಲುಕೆಟ್ಟಿತು ನಿನ ಮಡಿ ಬಿಕನಾಶಿ4ನಾನಾ ಶಾಸ್ತ್ರವನೋದಿ ನಾ ನಿನ್ನ ಮರೆವೆನುಹೀನವ ಬಿಡು ನಿನ್ನ ಬಿಕನಾಶಿನಾನಾ ಶಾಖದಲಿ ಇರಲಾದರೂರ್ವಿಅದುರುಚಿತಿಳಿವುದೆ ಬಿಕನಾಶಿ5ಚರ್ಮವು ತೊಳೆದರೆ ಕರ್ಮವು ಹೋಯಿತೆಕರ್ಮವು ಬಿಡದು ನಿನ್ನ ಬಿಕನಾಶಿಒಮ್ಮೆ ಚಿದಾನಂದ ಪಾದವ ಸ್ಮರಿಸಲುನಿರ್ಮಲವಾದೆಯ ಬಿಕನಾಶಿ6
--------------
ಚಿದಾನಂದ ಅವಧೂತರು
ಶ್ರೀ ಗುರುವಿನ ನೆನದು ಸುಖಿಯಾಗು ಮನವೇ ನೀನುದುರ್ಗುಣ ಪಾಪಹರಿದು ಛೇದಿಸು ಜನನವಪನಾನಾ ಜನ್ಮದಿ ತೊಳಲಿ ನೀ ಬಂದುನರಮನುಷ ಜನ್ಮವ ತಾಳಿ ಮರತ ಕಂಡ್ಯಾ ತನುವಿನಲಿಧ್ಯಾನಿಸುಸದಾಕಾಲದಿ ದುರ್ಜನ ಬುದ್ಧಿಮಾಣಿಸು ಪರಂಜ್ಯೋತಿಯನೆನೆದು ನೆನೆದು ದೃಷ್ಟಿಸಿ ಕಾಣುಗುಣಜÕನ ಕರುಣಪ್ರಾಜÕನ ಜ್ಞಾನ ಸಿದ್ಧನ ಗುರುವ ಸಿದ್ಧನಮಾನಸ ರೂಪನ ಮೂಜಗ ವ್ಯಾಪನದೀನರನಾಥನ ವಾಙ್ಮಯಾತೀತನ1ಸುಜನರ ಸಂಗವ ಮಾಡದೆ ಸಾಯುತಲಿಹೆಕುಜನರ ಸಂಗದಿಂದ ಕರುಣವೆಂಬುದು ಮರೆತೆತ್ಯಜಿಪುದು ನಿನಗೆ ನೀತಿಯೆ ಥೂ ನಿನಗೆ ಬುದ್ಧಿಯೇಭಜಿಸು ಪರಾತ್ಪರವ ನೆನೆದು ದೃಷ್ಟಿಸು ಮನವೇತ್ರಿಜಗವಂದ್ಯನ ತ್ರಿಗುಣಕೆ ಮಾನ್ಯನೆಸುಜನವ್ರಾತನ ಸುಪ್ರಭಾತೀತನಭಜಕರ ಭಾಗ್ಯನ ಬಹುಗುಣ ಯೋಗ್ಯನಸರ್ವಬೇಧಜÕನ ನಯಸರ್ವಜÕನ2ಇರುವೆ ಮೊದಲುಗಜಕಡೆಯಾದ ಎಂಭತ್ತನಾಲ್ಕುತಿರುವಿನ ಲಕ್ಷಜೀವದಿ ಜನಿಸಿ ಜನಿಸಿ ಪುಟ್ಟುವಪರಿಯನೆಲ್ಲವ ಛೇದಿಪ ಉಪಾಯವ ತಿಳಿವಚಿರಕಾಲ ನೆನೆಯೋ ಕಂಡ್ಯಾ ಚಿದಾನಂದಾವಧೂತನಪರಮಪರೇಶನಪಂಡಿತಪುರುಷನ ಶರಣು ಜನಾಂಗನ ಸುಗುಣ ಕೃಪಾಂಗನಕರುಣಾ ಕಟಾಕ್ಷನ ಕಾರಣ ಮೋಕ್ಷನಮರಣ ವಿದೂರನ ಮುನಿಯತಿ ವರನ3
--------------
ಚಿದಾನಂದ ಅವಧೂತರು
ಸಲಹಯ್ಯಸ್ಮರಬೊಮ್ಮ್ಮರಯ್ಯವ್ಯಾಳಶಯ್ಯ ಪಿಡಿಕೈಯನೀಲಮೈಯ ನೀರಜಪ್ರಿಯ ಪ.ಭವಾರಣ್ಯದಿ ಬಲುತೊಳಲಿ ನಾಮಾನವನಾಗಿ ಮದಾಂಧಕನಾಗಿಹೇವಗೆಟ್ಟೆನಯ್ಯ ಹೇಯಬಿಟ್ಟೆನಯ್ಯತವ ಪಾದವ ತೋರೊಮಾಧವ1ಎನ್ನ ಭಕ್ತಿ ಗಹನ ವಿರಕ್ತಿ ನಿಧಾನ ತತ್ವನಿರ್ಣಯದ ಸತ್ವಹೀನ ಹೃದಯ ನಾ ಹಿತವನರಿಯೆ ನಾನೀನೆ ಕರುಣಿಸೊ ನಿಜರೊಳಿರಿಸೊ 2ನೆನೆವರ ನೆನಪಿನ ಚದುರದೀನತಮದಿನಕರರಾಮ ಶುಭಾನನ ಶರಣೆಂಬೆ ನಾ ಪ್ರಸನ್ನವೆಂಕಟೇಶ ಶ್ರೀ ಶ್ರೀನಿವಾಸ 3
--------------
ಪ್ರಸನ್ನವೆಂಕಟದಾಸರು