ಒಟ್ಟು 150 ಕಡೆಗಳಲ್ಲಿ , 49 ದಾಸರು , 148 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರೋಜಲೋಚನಸುರಾರಿ ಮಥನ ಮುರಾರಿ ಮಾರಮಣ ಪುರಾರಿಮಿತ್ರಾ ನಿರೀಕ್ಷಿಸೆನ್ನ ನಿರಾಕರಿಸದಿರಿನ್ನು ಪ. ಬಲೀಂದ್ರಗೊಲಿದೆ ಬಾಗಿಲೋಳ್ನಿಂದೆ ಗೊಲ್ಲನು ನೀನಾದೆ ಬಲೀಂದ್ರ ಪೂಜಾಬಲದಿ ಜಗಮಂ ಕಳೆಯೇರಿಸಿ ಮೆರೆದೆ 1 ತಳಿರ್ದೋರಣಂಗಳ್ ಎಲೆಬಾಳೆಲೆಗಳ್ ನಳನಳಿಸುವ ಬಗೆಯೊಳ್ ಬೆಳಗುವ ದೀಪಾವಳಿಯಿಂ ಜಗಮಂ ತೊಳಗುವದೆಲ್ಲೆಡೆಯೊಳ್ 2 ಚಿತ್ತಜಪಿತ ಬಾ ಉತ್ಸವಪ್ರಿಯ ಬಾ ಸತ್ಯವಿಕ್ರಮ ನೀ ಬಾ ಬಾ ನಿತ್ಯ ತೃಪ್ತನೆ ಬಾರೈ 3 ಮದಮತ್ಸರಗಳ ಸದೆವಡೆದೇಗಳು ಸದಯನೆ ನೀ ಎಮ್ಮೊಳು ಸದನವ ಮಾಡೈ ಹೃದಯ ಪೀಠದ ಅಧಿಪತಿ ನೀನಹುದೈ 4 ಮಾಯಾಪಾಶದಿ ಗಾಯಗೊಂಡೆವು ಜೀಯ ಪಾಲಿಪುದೈ ಧೈೀಯಮಾರ್ಗದೆ ನಡೆಯಿಸು ನೀ ನಿರಪಾಯದೆ ಸತತಂ5 ಕೈಪಿಡಿದೆಮ್ಮಂ ಕಾಪಿಡು ನಲವಿಂ ತಾಪತ್ರಯ ಹರ ನೀಂ ಭೂಪಶೇಷಾದ್ರೀಶನೆ ನೋಡೈ ಶ್ರೀಪಾದದಾಸರನು 6
--------------
ನಂಜನಗೂಡು ತಿರುಮಲಾಂಬಾ
ಸಿರಿನರಸಿಂಹನೆ ಕರಿಗಿರಿ ನಿಲಯನೆ ಶಿರಬಾಗಿ ನಮಿಸುವೆ ಭಕ್ತಿಯಲಿ ಪ ಕರುಣಾಸಾಗರ ನಿನ್ನ ಚರಣ ಕಮಲದಲಿ ಸ್ಥಿರ ಸ್ಮರಣೆಯ ಕೊಟ್ಟು ಸಲಹೆನ್ನನು ಅ.ಪ. ನೆಲೆಗೆ ನಿಲ್ಲದು ಮನ ಹಲವಕ್ಕೆ ಹರಿವುದು ಸುಲಲಿತವಲ್ಲವು ಸಾಧನವು ನಳಿನನಾಭನೆ ಎನ್ನ ಕುಲದೈವ ನಾರಸಿಂಹ ಒಲಿದು ನೀನಾಗಿಯೆ ಸಲಹುವುದು 1 ಅತ್ತಿತ್ತ ಓಡುವ ಚಿತ್ತವ ನಿಲಿಸುವ ಶಕ್ತಿಯು ಎನಗಿಲ್ಲ ಲವಲೇಶವು | ಚಿತ್ತಜಪಿತ ಎನ್ನ ಚಿತ್ತದೊಳಗೆ ನಿಂತು ಭಕ್ತಿಯ ಕರುಣಿಸೋ ತವ ಪಾದದಿ 2 ನೆಲದ ಮೇಲಲೆವಾಗಯಲರುಣಿ ಗಮನವು ಹಲವು ರೀತಿಯಲಿ ವಕ್ರವಲೆ ಘಳಿಲನೆ ತನ್ನಯ ಬಿಲದೊಳು ಪೋಪಾಗ ಸಲೆ ನೇರವಲ್ಲವೆ ಸಿರಿವರನೇ 3 ವನ ವಿಷಯಗಳಲದಲಿ ಬರಲಾರವು ಘನಭಕ್ತಿರಸದಿಂದ ತೊಳೆದು ನಿರ್ಮಲಗೈದು ಮನವ ನೀ ಮಡಿ ಮಾಡು ಘನಮಹಿಮ 4 ಕಳೆಗಳೆ ಬೆಳೆದಿವೆ ಮನಕ್ಷೇತ್ರದೊಳಗೆಲ್ಲಾ ಫಲ ಸಸ್ಯಗಳಲ್ಲಿ ಸ್ಥಳವಿಲ್ಲವು | ಕಳೆಗಳ ಕಳೆದು ಉತ್ತಮ ಫಲ ಕೊಡುವಂಥ ಬೆಳೆಯ ನೀನು ಬೆಳಸಯ್ಯಾ ಕರಿಗಿರೀಶ 5
--------------
ವರಾವಾಣಿರಾಮರಾಯದಾಸರು
ಸಿರಿವರಾ | ಬಾ ಸುಂದರಾ || ಸುರಭೀಶ ಸುರನುತ | ಸಿರಿವತ್ಸಭೂಷಿತ ಪ ದಂಡಾವತಿಯವರ | ದಂಡೇಯೋಳ್ ನೆಲಸಿದ | ಪುಂಡರೀಕಾಕ್ಷ ಕೋ | ದಂಡಪಾಣಿ ಹರೇ ಬಾ ಸುಂದರಾ 1 ನಂದಗೋಪನ ಕಂದ | ನಂದಭದ್ರೆಯರಿಂದ | ನಿಂದು ಕ್ಷೀರದಿ ಮಿಂದು | ಸಿಂಧುಶಯನ ಹರೇ ಬಾ ಸುಂದರಾ 2 ಮಂಗಳ ಮಹಿಮ ಶ್ರೀ | ರಂಗನಾಥನೆ ಪೊರೆ | ಅಂಗಜಪಿತ ಯದು | ಪುಂಗವ ಶ್ರೀಶಕೇಶವ ಬಾ ಸುಂದರಾ 3
--------------
ಶ್ರೀಶ ಕೇಶವದಾಸರು
ಸೀತಾ ಕಲ್ಯಾಣ ಪಾಕ ಶೇಷಾದ್ರಿ ಬ್ರಹ್ಮಕೆ ಶರಣು ಲೋಕನಾಯಕ ಹೆಳವನಕಟ್ಟೆ ವೆಂಕಟ ನೀ ಕರುಣಿಸಿ ಸಲಹುವುದೆನಗೆ ಜಯ ಜಯ ಪ. ಮದುವೆಯ ನಾಲ್ಕು ದಿವಸದಲ್ಲಿ ಮದುವಣಿಗನು ರಾಮ ಜಾನಕಿಗೆ ಪದನ ಹೇಳುವೆ ಸುಜನರು ಕೇಳಿ ಜಯ ಜಯ 1 ಚಿತ್ತಜಪಿತ ಶ್ರೀರಾಮರಿಗೆ ಅರ್ತಿಯಿಂದರಿಷಿಣೆಣ್ಣೆಯ ಮಾಡ್ವ ಮಿತ್ರೆ ಕೌಸಲ್ಯದೇವಿ ಕೇರಿ ಕೇರಿಯ ಗುಂಟ ಮುತ್ತೈದೇರನು ಕರೆಸಿದಳು ಜಯ ಜಯ 2 ಪೀತಾಂಬರದುಡುಗೆಯನುಟ್ಟು ಜ್ಯೋತಿಯಂದದಿ ಥಳಥಳಿಸುತಲಿ ಜಾತಿಮಾಣಿಕದಾಭರಣವಿಟ್ಟು ರಾಮರ ಮಾತೆಯರೆಲ್ಲ ಶೃಂಗಾರವಾಗಿ ಜಯ ಜಯ 3 ಚೀಣ ಚೀಣಾಂಬರಗಳನುಟ್ಟು ವೇಣಿ ಕಸ್ತೂರಿಯ ಪಣೆಗಿಟ್ಟು ಜಾಣೆಯರೆಲ್ಲ ಶೃಂಗಾರವಾಗಿ ಮಲ್ಲಿಗೆ ಬಾಣನ ಪಟ್ಟದಾನೆಗಳಂತೆ ಜಯ ಜಯ 4 ಪೊಂಬಣ್ಣದ ಹಳದಿಯ ಕಲೆಸಿ ತುಂಬಿದ ಹರಿವಾಣದೊಳಗೆ ಅಂಬುಜನಾಭಗೆ ಅರಿಷಿಣೆಣ್ಣೆಯ ಮಾಡ್ವ ಸಂಭ್ರಮಕೆ ನಡೆತಂದರಾಗ ಜಯ ಜಯ 5 ಗರುಡನ್ವಲ್ಲಭ ಸೌಂದರದೇವಿ ವರುಣನ್ವಲ್ಲಭೆ ಕಾಳಕದೇವಿ ಹರನ್ವಲ್ಲಭೆ ಪಾಪ[ನಾ] ಶಿಗಂಗೆ ಸಹಿತಲಿ ಅರಿಷಿಣೆಣ್ಣೆಯ ಮಾಡಬಂದರಾಗ ಜಯ ಜಯ 6 ಬ್ರಹ್ಮವಲ್ಲಭೆ ಶಾರದಾದೇವಿ ವಾ- ಯುರಮಣಿ ಅಂಜನಾದೇವಿ ಹರುಷದಿ ಕೌಸಲ್ಯೆ ಕೈಕೆಸೌಮಿತ್ರೆಯರು ಅರಿಷಿಣೆಣ್ಣೆಯ ಮಾಡಬಂದರಾಗ ಜಯ ಜಯ7 ಅಲ್ಲಲ್ಲಿ ನಡೆವ ನಾಟಕಶಾಲೆ ಬಿಲ್ಲಾಳು ಬೆತ್ತ ಕಾಟನವರು ಸೊಲ್ಲುಸೊಲ್ಲಿಗೆ ಹಿಡಿಹೊನ್ನನು ತ್ಯಾಗವ ಚೆಲ್ಲುತ ದಶರಥ ನಡೆದನಾಗ ಜಯ ಜಯ 8 ಹೊಡೆವ ತಂಬಟೆ ಭೇರಿ ನಿಸ್ಸಾಳೆ ಬಿಡದೆ ಚೀರುವ ಹೆಗ್ಗಾಳೆಗಳು ಸಿಡಿಲು ಗರ್ಜಿಸುವಂತೆ ಪಂಚಮವಾದ್ಯದಿ ನಡೆದರು ಜನಕರಾಯನ ಮನೆಗೆ ಜಯ ಜಯ 9 ಕುಸುಮಬಾಣನ ಮಾರ್ಬಲದಂತೆ ಹಸುರು ಪಚ್ಚೆಯ ಪಲ್ಲಕ್ಕಿಗಳು ಮುಸುಕಿದ ಪರಿಮಳದೊಳಪ[ಸಾ]ತಕೆ ದಶರಥ ಬಂದನೆಂದರೆ ಜನರು ಜಯ ಜಯ 10 ಭರದಿಂದಲೆದ್ದು ಜನಕರಾಯ ತರಿಸಿ ನಿವಾಳಿಗಳನು ಹಾಕಿ ಹರುಷದಿ ಕೈಲಾಗವ ಕೊಟ್ಟಯೋಧ್ಯದ ಅರಸ[ನ] ಮನ್ನಿಸಿ ಒಡಗೊಂಡನಾಗ ಜಯ ಜಯ11 ಬೇಗದಿ ಗದ್ದುಗೆಯನು ಹಾಸಿ ಬೀಗನ ಉಪಚರಿಸಿದ ಜನಕ ಭಾಗೀರಥಿ ಪಾರ್ವತಿ ಗಂಗೆ ಸಹಿತಲಿ ನಾಗಭೂಷಣನು ಕುಳಿತನಾಗ ಜಯ ಜಯ 12 ಸುತ್ತಣ ರಾಯರಾಯರಿಗೆಲ್ಲ ರತ್ನಗಂಬಳಿಗಳ ಹರಹಿದರು ಅರ್ತಿಯಿಂದಲಿ ಸುರರೆಲ್ಲರು ಕುಳಿತರು ವಿಸ್ತರಿಸಿದ ಮಂಟಪದೊಳಗೆ ಜಯ ಜಯ 13 ಮಣಿಮಂಟಪದೊಳು ಹಸೆಹಾಸಿ ಕನಕ ಮಣಿಯ ತಂದಿಳುಹಿದರು ದಿನಕರಕುಲರಾಮ ಹಸೆಗೇಳೆನುತಲಿ ಗುಣಾವಳಿಗ[ಳ] ಕೊಂಡಾಡಿದರು ಜಯ ಜಯ 14 ಪೊಕ್ಕಳೊಳಜನ ಪೆತ್ತವನೇಳು ಅಕ್ರೂರಜನ ಪೆತ್ತವನೇಳು ಮುಕ್ಕಣ್ಣನ ರಿಪುಬಲವ ಸಂಹರಿಸಿದ ಭಕ್ತವತ್ಸಲ ಹಸೆಗೇಳೆಂದರು ಜಯ ಜಯ 15 ದಶರಥರಾಜನಂದನನೇಳು ಅಸುರಸಂಹಾರ ಕಾರಣನೇಳು ವಸುಧೆಗೊಡೆಯ ರಾಮ ಹಸೆಗೇಳೆನುತಲಿ ಋಷಿಗಳೆಲ್ಲರು ಶ್ರುತಿಗರೆದರಾಗ ಜಯ ಜಯ 16 ಋಷಿವಾಲ್ಮೀಕಿ[ಯ]ರೆಲ್ಲರು ಕೂಡಿ ಕುಶಲದ ಬಾಸಿಂಗವ ಪಿಡಿದು ಅಸುರಾರಿಯ ಮಸ್ತಕಕಳವಡಿಸೋರು ವಸುದೇವನಾಗೆಂದು ಹರಸುತಲಿ ಜಯ ಜಯ 17 ತಂಡತಂಡದ ರತ್ನ ಅಡಸಿದಾಗ ಮಣಿ ಬಿಗಿದಿದಾಗ ತೊಂಡಿಲ ಮುತ್ತೈದೇರಳವಡಿಸೋರು ಕೋ- ದಂಡ ಪಾಣಿಸತಿಜಾನಕಿಗೆ ಜಯ ಜಯ 18 ಬೆರಳಿಗೆ ಮುದ್ರೆ ಉಂಗುರವಿಟ್ಟು ಕೊರಳಿಗೆ ಏಕಾವಳಿಯನೆ ಹಾಕೋರು ತರಳಾಕ್ಷಿಯರಾ ಜಾನಕಿಗೆ ಜಯ ಜಯ 19 ಬೊಂಬೆಯ ತೊಂಡಿಲ ಮುಡಿದಿರ್ದು ಕುಂಭಿಣಿಸುತೆ ಕುಳ್ಳಿರಲಾಗಿ ಅಂಬುಜಾಂಬಕ ರಘುರಾಮನ ಹರುಷದಿ ರಂಭೆಯಿದ್ದೆಡೆಗೆ ಬಂದನೆ ನಗುತ [ಜಯ ಜಯ]20 ಬಂದನೆ ಭಾಗ್ಯಲಕ್ಷ್ಮೀರಮಣ ಬಂದನೆ ಭಕ್ತವತ್ಸಲ ಸ್ವಾಮಿ ಬಂದನೆ ಜಾನಕಿಯಡೆ ರಾಮನು ತಾ ಬಂದನೆ ಮಣಿಮಂಟಪದೆಸೆಗೆ [ಜಯ ಜಯ] 21 ಧೂರ್ಜಟಿ ಜಪಿಸುವ ನಾಮವಿಗ್ರಹ ಬಂದ ವಜ್ರಮಾಣಿಕದ್ಹಸೆಯಿದ್ದೆಡೆಗೆ ಜಯ ಜಯ 22 ಕೌಸಲ್ಯಸುತ ಕುಮಾರ ಬಂದ ಹಂಸವಾಹನಪಿತ ರಾಮ ಬಂದ ಕಂಸಾರಿ ದುಃಖವಿ [ನಾಶ] ರವಿಕುಲ ವಂಶೋದ್ಧಾರಕ ಬಂದನಾಗ [ಜಯ ಜಯ] 23 ಭಕ್ತವತ್ಸಲ ರಾಘವ ಬಂದ ಮುಕ್ತಿದಾಯಕ ಶ್ರೀರಾಮ ಬಂದ ಅರ್ಕನು ಶತಕೋಟಿತೇಜನು ಜಗಕತಿ- ಶಕ್ತ ತಾ ಬಂದನೆಂದವೆ ಕಹಳೆ ಜಯ ಜಯ 24 ಸಿಂಧುಬಂಧನ ರಾಘವ ಬಂದ ಪು- ರಂದರವರದ ಶ್ರೀರಾಮ ಬಂದ ಇಂದುವದನೆಪತಿ ರಾಮ ಬಂದನು ರಾಮ- ಚಂದ್ರ ತಾ ಬಂದನೆಂದವೆ ಕಹಳೆ ಜಯ ಜಯ 25 ಯಜ್ಞಶಿಕ್ಷಾಮಿತ್ರ ರಾಮ ಬಂದ ಸುಗ್ರೀವರಕ್ಷಕಾರಣ ಬಂದ ಲಕ್ಷ್ಮ- ಣಾಗ್ರಜ ಬಂದನೆಂದವೆ ಕಹಳೆ ಜಯ ಜಯ 26 ಯಂತ್ರವಾಹಕ ರಾಘವ ಬಂದ ಮಂತ್ರಮೂರುತಿ ರಾಮ ಬಂದ ಕಾಂತೆ ಶ್ರೀ ಜಾನಕಿರಮಣ ಬಂದನು ರಾಮ ತಂತ್ರಿ ತಾ ಬಂದನೆಂದವೆ ಕಹಳೆ ಜಯ ಜಯ 27 ದೂಷಕಹರಣ ಶ್ರೀರಾಮ ಬಂದ ವಿ- ಭೀಷಣವರದ ರಾಘವ ಬಂದ ಭಾಷೆ ಪಾಲಿಪ ರಾಮಚಂದ್ರ ಬಂದನು ಜಗ- ದೀಶ ತಾ ಬಂದನೆಂದವೆ ಕಹಳೆ ಜಯ ಜಯ 28 ತಾಟಕಪ್ರಾಣಾಪಹಾರ ಬಂದ ಜಟÁಯುಮುಕ್ತಿಕಾರಣ ಬಂದ [ತಾಟಂಕ] ಧರ ನಾರಾಯಣ ರವಿಕುಲ ಕೋಟಿ ತಾ ಬಂದನೆಂದವೆ ಕಹಳೆ ಜಯ ಜಯ 29 ವೀರ ವಿಕ್ರಮ ರಾಘವ ಬಂದ ಮಾರೀಚಮರ್ದನ ರಾಮ ಬಂದ ನಾರಿ ಶ್ರೀ ಜಾನಕಿರಮಣ ಬಂದನು ಹರಿ ರಾಮ ತಾ ಬಂದನೆಂದವೆ ಕಹಳೆ ಜಯ ಜಯ 30 ದೇವಕುಮಾರ ರಾಘವ ಬಂದ ದೇವರ ದೇವನು ರಾಮ ಬಂದ ಭಾವೆ ಶ್ರೀ ಜಾನಕಿರಮಣ ಬಂದನು ರಾಮಚಂದ್ರ ತಾ ಬಂದನೆಂದವೆ ಕಹಳೆ ಜಯ ಜಯ 31 ನಿರುಪಮಚರಿತ ರಾಘವ ಬಂದ ದುರಿತದಲ್ಲಣ ರಾಮದೇವ ಬಂದ ಭರತಶತ್ರುಘ್ನರ ಸಹೋದರಯೋಧ್ಯದ ಸುರಪತಿ ಬಂದನೆಂದವೆ ಕಹಳೆ ಜಯ ಜಯ 32 ಹೇಮಖಚಿತ ರತ್ನ ಪೀಠದಲಿ ಭೂಮಿಜೆ ಸಹಿತ ಕುಳಿತ ರಾಮ ವಾಮ ಭಾಗದಿ ಒಪ್ಪಿರ್ದಳು ಜಾನಕಿ ಆ ಮಹಾಸಭೆಯನು ಬೆಳಗುತಲಿ ಜಯ ಜಯ 33 ಕುಂದಣ ರತ್ನದಡ್ಡಿಕೆಯೊಳಗೆ ಹೊಂದಿಸಿ ನವರತ್ನ ಇರುವಂತೆ ಇಂದುವದನೆ ಜಾನಕಿ ಹರುಷದಿ ರಾಮ ಚಂದ್ರನ ಮಧ್ಯದೊಳೊಪ್ಪಿದಳು ಜಯ ಜಯ 34 ಹೇಮದ್ಹರಿವಾಣದೊಳಗ್ನಿಯನು ಕಾಮಿನಿಯರು ತಂದಿಳುಹಿದರು ರಾಮ ಮನ್ನಿಸಿ ಉಡುಗೊರೆಯಿತ್ತು ಅವರಿಗೆ ಹೇಮಾರ್ಚನೆಗಳ ತೊಡಗಿದನು ಜಯ ಜಯ 35 ಲಾಜತೊಂಡಿ[ತಂಡು?]ಲ ಆಹುತಿಗೊಟ್ಟು ಪೂಜಿಸಿದನೆ ವಿಘ್ನೇಶ್ವರನ ರಾಜವದನೆಯ ಒಡಗೊಂಡು ರಾಘವ ಪೂಜಿಸಿದನೆ ಋಷಿಮುನಿವರರ ಜಯ ಜಯ 36 ಇಂದ್ರಾದಿ ಮುನಿಗಳು ಕೈಹೊಡೆದು ಚಂದ್ರ ಸೂರ್ಯರು ಉಘೇಉಘೇಯೆನಲು ಮಂದಾರ ಮಲ್ಲಿಗೆ ಮಳೆಗಳ ಕರೆದರು ಅಂದದಿ ಸುರಜನರೆಲ್ಲರಾಗ ಜಯ ಜಯ 37 ಅರಳುವ ಕೆಂದಾವರೆ ಕುಸುಮ ಪರಿಮಳ ಸುರಮ್ಯ ಕಣ್ಗೆಸೆಯೆ ಎರಗುವ ಮರಿದುಂಬಿಗಳಂತೆ ರಾಘವ ಕರಗಳ ಪಿಡಿದೆÀತ್ತಿದ ಸತಿಯ [ಜಯ ಜಯ] 38 ಇಳೆಯ ಜಗಂಗಳನುದರದಲಿ ಅಳವಡಿಸಿದ ಮಹಾತ್ಮಕನು ಇಳೆಯ ಮಗಳನು ಎತ್ತಲಾರದೆ ರಾಮ ಬಳಲಿದನೆಂದು ನಕ್ಕರು ಜನರು ಜಯ ಜಯ 39 ಪರಾಕು ಸ್ವಾಮಿ ಪರಾಕು ದೇವ ಪಾದ ಎಚ್ಚರಿಕೆ ಸೀತಾಪತಿ ರಾಮನೆ<
--------------
ಹೆಳವನಕಟ್ಟೆ ಗಿರಿಯಮ್ಮ
ಸುಮ್ಮನ್ಯಾತಕೆ ಕಾಲಕಳೆಯುವಿಯೋ ಹೇ ಸುಮ್ಮನ್ಯಾತಕೆ ಕಾಲಕಳಯುವಿ ಪ ಬ್ರಹ್ಮನಯ್ಯನ ವಿಮಲ ಚರಣ ಒಮ್ಮನದಿಂ ಪೊಗಳುತನುದಿನ ನಿರ್ಮಲಪದವಿ ಸಂಪಾದಿಸದೆ ನೀ ಅ.ಪ ಮತ್ತು ನಿನ್ನಗೆ ಹತ್ತಿ ಬರುವುದೆ ನಿತ್ಯ ವೆನಿಪತ್ಯಧಿಕ ಸಮಯವು ಸತ್ಯ ಸರ್ವೋತ್ತಮನ ಪಾದವ ನಿತ್ಯ ಪಾಡುತ ಸಾರ್ಥಕ್ಹೊಂದದೆ 1 ಮೃತ್ಯುಬಾಧೆಯ ಗೆಲಿಸಿ ನಿನ್ನ ಪ ವಿತ್ರನೆನಿಪ ಮಹ ಮೃತ್ಯುಲೋಕದಿ ಉತ್ಪತ್ತಿಯಾಗಿ ರಿಕ್ತಹಸ್ತದ್ಹೋಗ್ವತಿ ಚಿತ್ತಜಪಿತನ್ನರ್ತು ಭಜಿಸದೆ 2 ಭಕ್ತಜನರು ಕೈಯೆತ್ತಿ ಪೇಳಿದ ಸತ್ಯದೋಕ್ತಗಳ್ನಿತ್ಯವೆಂದು ಭಕ್ತವತ್ಸಲ ಸಿರಿಯರಾಮನ ಚಿತ್ತದರಿತು ಮುಕ್ತಿ ಪಡೆಯದೆ 3
--------------
ರಾಮದಾಸರು
ಸುಲಲಿತ ಮಧುಕರ ಕೊಳಲನೂದುವುದನು ಕಲಿಸಿದರಾರೇ ನಳಿನಮುಖೀ ರಾಧೇ ಪ ಬಲಿಸಂಹಾರನು ಲೋಕದ ನಾರಿಯ ರಲಸದೆ ಗಾನವ ಕಲಿಸಿದನೇನೇ ಅ.ಪ ಕರು ತುರುಗಳ ಬಳಿ ಸರಸವನಾಡುತ ಮುರಳಿಯನೂದುವ ಸರಸಿಜನಾಭ ಕರೆಕರೆದು ನಿನ್ನ ಬೆರಳಿಗುಂಗುರವಿಟ್ಟು ಸ್ವರಗಳ ಬೋಧಿಸಿ ನಲಿನಲಿದಿಹನೇನೇ 1 ಬೃಂದಾವನದಲಿ ನಂದಕುಮಾರನ ವಂದಿಸೆ ನಾರದ ಬಂದುಹಾಡಿದನೇ ಅಂದದ ಕಲಿಕೆಯ ತುಂಬುರ ನಿನಗಾ ನಂದದಿ ಗಾನವ ಕಲಿಸಿದನೇನೆ 2 ಅಂಗಜಪಿತನಿಗೆ ಮಂಗಳಗಾನವ ಅಂಗನೆ ಶಾರದೆ ಪಾಡಿದಳೇನೇ ಮಾಂಗಿರಿರಂಗ ಮಾತಂಗವರದನಂತ ರಂಗದರಾಣಿ ನೀ ಕಲಿಯೆಂದನೇನೇ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸೃಷ್ಟಿಗೀಶ ನಿನಗಿಷ್ಟು ದಯಬಾರದ್ಯಕೊ ಎಷ್ಟು ಬೇಡಲು ಎನ್ನ ಮೊರೆ ಕೇಳದಿರುವಿ ಪ ಕರಿರಾಜನ ಪೊರೆದೆಲೋ ನರಗೆ ಸಾರಥಿಯಾದಿ ತರುಣಿಯನುದ್ಧರಿಸಿ ಪರಿಶುದ್ಧಗೈದಿ ಪರಮಕುರುಣಿಯು ನೀನು ದುರಿತಕಾರ್ಯದಿಂ ನಾನು ನರಕಿಯಾಗ್ವುದನರಿತು ಅರಿಯದಂತಿರುವಿ 1 ಖುಲ್ಲದಾನವರೊದೆದು ಎಲ್ಲ ದೇವತೇರಿಗೆ ನೀ ನುಲ್ಲಾಸವನು ಕೊಟ್ಟು ಪುಲ್ಲನಾಭ ಹರಿಯೆ ಕ್ಷುಲ್ಲಕರ ಸಂಗದಿಂ ನಾ ಸಲ್ಲದಂತಾಗುವೆ ಕ ಣ್ಣಲ್ಲಿ ಕಂಡು ನೀ ಕಂಡಿಲ್ಲದಂತಿರುವಿ 2 ಮುನಿಶಾಪದಿಂ ನೃಪನ ಕನಿಕರದಿ ಕಾಯ್ದಿ ನಿಂ ತನುದಿನದಿ ಬಾಗಿಲವ ಘನವಾಗಿ ಕಾಯ್ದಿ ಶುನಕನಂದದಿ ನಾನು ದಿನದಿನಕೆ ಮತ್ತಿಷ್ಟು ಘನಪಾಪಿಯಾಗ್ವುದನು ಮನಕೆ ತರದಿರುವಿ 3 ವನವಾಸಗೈದಯ್ಯಾ ವಾನರನ ಸಲಹಿದಿ ದನುಜನನು ಸಂಹರಿಸಿ ದನುಜನನುಜಂಗೆ ಮಾಣದ ಪಟ್ಟವನು ಮೆಚ್ಚಿ ನೀ ಕೊಟ್ಟೆಯ್ಯಾ ಎನಗ್ಯಾಕೀದುರ್ಬವಣೆ ದೂರಮಾಡದಿರುವಿ 4 ಇನಿತೆಲ್ಲ ಯೋಚಿಸಲು ಘನ ಕುರಣಾನಿಧಿ ನೀನು ನಿನಗವರೆ ದಾಸರೆ ನಾನಲ್ಲವೇನು ಮನಸಿಜಪಿತ ನಿನ್ನ ವನರುಹಂಘ್ರಿಯ ನಂಬಿ ಮಣಿದು ಬೇಡುವೆ ಕಾಯೊ ತಂದೆ ಶ್ರೀರಾಮ 5
--------------
ರಾಮದಾಸರು
ಹನುಮಂತ ಬಲವಂತ ಅತಿ ಗುಣವಂತಾ | ಇನ ಶಶಿ ಶಿಖಿನೇತ್ರ ರೂಪ ಚರಿತ್ರ | ವನಚರ ಪುಂಗವ ಸನಕ ಸನಂದನ | ವಿನುತ ಹರಿಚರಣನನುದಿನ ಜಪಿತಾ ಪ ಗಜ ಕಂಠೀರಾ | ರಾಯ ಕಪಿಗೆ ಹರಿಯಾ | ತೋರಿದ ಸಿರಿಯಾ | ಶ್ರೀಯರಸನ ನಾಮ ಸವಿದ ನಿಸ್ಸೀಮ | ಪ್ರಿಯ್ಯಾದಿಕೊಂಡು ಗುರುತು ಸಾಗರನರಿತು | ಮಾಯಾಛಾಯಾ ಗ್ರೀಯಾ ನೋಯ | ಸಾಯಬಡದ ಸೀತೆಯ ಮುಂದೆ ನಿಂದು | ಕೊಂಡ ಸ | ಮಾಯದ ಲಂಕಿಯ ನ್ಯಾಯವುರಹಿದ ಧೇಯಾಂಜನೇಯಾ 1 ವರ ಕುಂತಿನಂದನಾ ಕಲಿಯ ಭಂಜನಾ | ಉರಗ ಭಂಜನಾ | ಉರಿತಾಪ ಪರಿಹಾರ | ಕರುಣ ಸಾಗರಾ | ದುರುಳ ಕೀಚಕರ ಹಿಡಂಬಕಾಂತಕ | ಕೌರವಾ ಪಾರಾವಾರಾ ಉರಹಿದ ಬಲುಧೀರ ಶರ ಗದಾಧಾರಾ | ಗುರುವರ ಸುತದಿನ | ಕರಜನುವರದೊಳು | ಪರಿ ಪರಿಹರಿಸಿದೆ ಸಮರಾ 2 ಆನಂದತೀರ್ಥನಾಗಿ ಅತಿ ಹರುಷಯೋಗಿ ಕಾನನ ಪರಮತಾ ದಹಿಸಿದ ಖ್ಯಾತಾ | ಭಾನುಕುಲ ಸಾಂದ್ರಾ ಎನಿಸುವ ಚಂದ್ರಾ | ಧ್ಯಾನಾಮೃತ ಪಾನಾ | ಮುಕ್ತಿ ಸೋಪಾನಾ | ಜ್ಞಾನಾಹೀನಾ ದೀನಾ ಜನಾ | ಮಾನಿಸಫಲದಾನಾ ನಿರತ ನಿಧಾನಾ | ಶ್ರೀನಿಧಿ ವಿಜಯವಿಠ್ಠಲ | ಶ್ರೀನಿವಾಸನ ಮಾನಸ ಪೂಜಿಪೆ ಗಾನನ ಮುನಿಗಳ ಆನನಮಣಿ ಪವಮಾನಸೂನು 3
--------------
ವಿಜಯದಾಸ
ಹಯ ಮುಖ ಪದಾಬ್ಜ ಮಧುಪಾ | ದುರ್ಭವಭಯವ ತಾರಿಸು ಮುನಿಪಾ ಪ ವ್ರಯವಾಯಿತು ಮಮ | ಆಯುವು ಎಲ್ಲವುಪ್ರಿಯ ನೀನಲ್ಲವೆ | ಭಯ ಪರಿಹರಿಸೈ ಅ.ಪ. ರಜತ ಪುರಿಲಿ ನಿಂದೂ | ವಿಧಿಸಿದಿಅಜಪಿತ ಭಜನೆಯ ನಂದೂ |ಋಜಗಣದಲಿ ಬಹು | ರಾಜಿಪ ಗುರುವೇಅಜನ ಸುಪದವಿಗೆ | ನಿಜದಿ ಬರುವ ಯತಿ 1 ಸೋದೆ ಪುರದಿ ವಾಸಾ | ಭಕ್ತರ$ಗಾಧ ದೋಷ ನಾಶಾ ||ವಾದಿ ಜನರ ಮದ | ಛೇದನ ದಶಮತಿಬೋಧಪ್ರೀಯ ಗುರು | ಮೋದವ ಪಾಲಿಸು 2 ಪಂಚ ವೃಂದಾವನವಾ | ರಚಿಸುತಪಂಚರೂಪಿ ಹರಿಯಾ ||ಸಂಚಿಂತಿಸಿ ಭಕ್ತ | ವಾಂಛಿತ ಗರೆಯಲುಸಂಚುಗೊಳಿಸಿ ಪ್ರ | ಪಂಚವ ತೊರೆದೇ 3 ಅಮರೇಂದ್ರ ನಾಳ್ಬರಲೂ | ತ್ರೈವಿಕ್ರಮ ದುತ್ಸವದೋಳೂ ||ಸಮಯವಲ್ಲವಿದು | ನಿಮಗೆಂದೆನುತಲಿಕ್ರಮಿಸುವ ತೆರ ನೀ | ಮಾಡಿದೆ ಯತಿವರ 4 ಪೂವಿಲ್ಲನ ಪಿತನಾ | ಗುರುಗೋವಿಂದ ವಿಠ್ಠಲನಾ ||ಭಾವದಿ ಕಾಣುತ ಮೈಮರೆದ್ಹಿಗ್ಗುವಈ ವಿಧ ಸುಖ ಯಾವಾಗಲೂ ಕಾಣುವ 5
--------------
ಗುರುಗೋವಿಂದವಿಠಲರು
ಹರಕೆಯ ಮಾಡಿಕೊಳ್ಳೀ ಕೇಶವನಿಗೆ ಹರಕೆಯ ಕಟ್ಟಿಕೊಳ್ಳೀ ಪ ಹರಕೆಯ ತೀರಿಸಿಷ್ಟಾರ್ಥವ ಪಡಕೊಳ್ಳೀ ಹರುಷದಿ ಹರಿಗಾತ್ಮವರ್ಪಿಸಿಕೊಳ್ಳೀ ಅ.ಪ. ಭಜನೆಯ ಮಾಳ್ಪೆನೆಂದೂ ಕೇಶವನಿಗೆ ಭಜನೆಯರ್ಪಿಸುವೆನೆಂದೂ ಅಜಪಿತ ಶ್ರೀಹರಿದಾತನಾಗಿರುವಾಗ ಭಜಕರು ಕೊಡುವ ಭೋಜನ ಭಕ್ಷವ್ಯಾಕೇ 1 ಸ್ಮರಣೆಯ ಮಾಳ್ಪೆನೆಂದು ಕೇಶವನಿಗೆ ಸ್ಮರಣೆಯರ್ಪಿಸುವೆನೆಂದೂ ನಿತ್ಯ ತೃಪ್ತನುಯಿರೆ ಬರಿದೆ ನೈವೇದ್ಯವ ಸಲಿಸುವುದ್ಯಾಕೇ 2 ಸೇವೆಯ ಮಾಳ್ಪೆನೆಂದು ಕೇಶವನಿಗೆ ಸೇವೆಯರ್ಪಿಸುವೆನೆಂದೂ ಭಾವಜನಯ್ಯನೆ ತ್ರಿಜಗಪಾಲಕನಾಗಿ ದೇವತಾನಿರುತಿರೆ ಭವಭಯವ್ಯಾಕೇ 3 ವಂದನೆ ಮಾಳ್ಪೆನೆಂದು ಕೇಶವನಿಗೆ ವಂದನೆ ಕೊಡುವೆನೆಂದೂ ಚಂದದಿ ಹರಿತಾನೇ ಸೃಷ್ಟಿಗೀಶನುಯಿರೆ ಅಂದದಿ ಕೊಡುವ ದಾನಗಳವಾಗ್ಯಾಕೇ 4 ಆತ್ಮವ ಕೊಡುವೆನೆಂದೂ ಕೇಶವನಿಗೆ ಅತ್ಮವರ್ಪಿಸುವೆನೆಂದೂ ಸಾತ್ವಿಕ ಜನವಂದ್ಯ ದೂರ್ವಾಪುರದೊಳಿರೆ ಮತ್ಯಾಕೆ ಯೋಚನೆ ಭಕ್ತಿಯುಳ್ಳವಗೇ 5
--------------
ಕರ್ಕಿ ಕೇಶವದಾಸ
ಹರಿ ನಿನ್ನ ದಾಸರ ಸೇವೆಯ ಕರುಣಿಸೆನಗೆ ಸುರಪತಿಯ ನಾನೊಲ್ಲೆನೈ ಪ ಸ್ಮರನ ಹಾವಳಿ ಬಿಡಿಸಿ ಗುರುಭಕ್ತಿಯನು ಕೊಟ್ಟು ನಿರುತವು ನಿನ್ನ ನಾ ಸ್ಮರಿಸುವಂದದಿ ಮಾಡು ಅ.ಪ ಎಷ್ಟು ಸ್ಥಿರ ಮಾಡಿದಾಗ್ಯು ಎನ್ನ ಮನ ಬಟ್ಟ ಕುಚೆಯರ ಬಲೆಗೆ ಸಿಲುಕುತಲಿ ಬಿಟ್ಟು ನಿನ್ನಯ ಧ್ಯಾನ ಕೆಟ್ಟುಪೋಗುತಲಿದೆ ದಿಟ್ಟ ನಿನ್ನ ಮಗನ ಬಲುಹಿನ್ನೆಷ್ಟೆಂದು ಪೇಳಲೊ 1 ಕುಸುಮಗಂಧಿಯರ ಓರೆನೋಟವೆಂಬ ಮಸೆದ ಕಣೆಯ ತಾನು ಪೂಡುತಲಿ ಎಸೆ ಮೋಹತಿಗೆ ನಾ ಸೈರಿಸಲಾರೆನೋ ಬಿಸಜನಾಭನೆ ನಿನ್ನ ಸುತಗೆ ಪೇಳೋ ಬುದ್ಧಿ 2 ಅಂಗನೆಯರ ಸವಿ ನುಡಿಗಳಿಗೆ ನಾ ಮರುಗಿ ಭೃಂಗದಂತವರ ಬಲೆಗೆ ಬೀಳದಂತೆ ಸಂಗ ಸುಜನರಲ್ಲಿ ಇತ್ತು ಕಾಯೊ ದೇವ ಅಂಗಜಪಿತ ಶ್ರೀ ರಂಗೇಶವಿಠಲನೇ 3
--------------
ರಂಗೇಶವಿಠಲದಾಸರು
್ರೀಶಾಯ ನಮ:ಓಂ ರಮೇಶಾಯ ನಮ ಈಶಾಯ ನಮ:ಜಗದೀಶಾಯ ನಮ: ಸುರೇಶಾಯ ನಮ: ಪ ಭೂಧವ ನಮ:ಓಂ ಯಾದವ ನಮ: ಮಾಧವ ನಮ:ಮಧುಸೂದನ ನಮ:ಭವಭೇದ ನಮ: 1 ಅಚ್ಯುತ ನಮ:ಓಂ ಸಚ್ಚಿತ್ತ ನಮ: ಅಚ್ಯುತಾನಂತ ನಮ:ಮತ್ಸ್ಯಾವತರ ನಮ:ಇಚ್ಛಜಪಿತ ನಮ: 2 ತನುಶೀಲ ನಮ:ಓಂ ವನಮಾಲ ನಮ: ಘನಲೀಲ ನಮ:ಸುಜನಪಾಲ ನಮ:ಕುಜನಕಾಲ ನಮ: 3 ನರಹರಿ ನಮ:ಓಂ ಸಿರಿದೊರಿ ನಮ: ಶೌರಿ ನಮ: 4 ನುತಪ್ರೇಮ ನಮ:ಓಂ ಪಿತಕಾಮ ನಮ: ಸುಖಧಾಮ ನಮ:ಭಕ್ತ ಮುಕ್ತಿ ಸೋಮ ನಮ: ಓಂ ಶ್ರೀರಾಮ ನಮ: 5
--------------
ರಾಮದಾಸರು
ಇಂದುನಾಳ್ಯೊ ಈಗಾವಾಗೊ ಈಕಾಯಸ್ಥಿರವಲ್ಲಇಂದಿರೇಶ ನಿನ್ನ ನೆನೆವ ಮತಿಯ ನೀಡೊ ಮನ್ನಿಸಿ ನೋಡೊ ಪ.ಕುಚ್ಛಿತ ಕರ್ಮವಾಚರಿಸಿ ಕಶ್ಮಲ ಜನ್ಮನುಭವಿಸಿದುಶ್ಚಿತ್ತದಿ ಬಾಳ್ದೆನಯ್ಯ ದೂರಾದೆ ನಿಮಗೆ ದಮ್ಮ್ಮಯ್ಯಅಚ್ಚುತ ನಿನ್ನಿಚ್ಛೆಯಿಂದೆ ಆದಿವರ್ಣದವನಾದೆಸ್ವಚ್ಛಿತ ಭಕ್ತಿಯನಿಲಯ ಸುಜನಬಂಧು ಸುಗುಣಸಿಂಧು 1ಹೊಟ್ಟೆಯ ಹೋರಟೆಗಾಗಿ ಹೊತ್ತಾರೆದ್ದು ತಿರುಗಿ ತಿರುಗಿಕೆಟ್ಟ ವೃತ್ತಿಯನ್ನು ಹಿಡಿದೆ ಕೀಳುಮನುಜರೊಳಾಡಿದೆಬಿಟ್ಟೆ ನಿಮ್ಮ ಪೂಜೆಯನ್ನು ಬಿದ್ದೆ ಭವಾಂಬುಧಿಯನ್ನುವಿಠ್ಠಲ ಎನ್ನುದ್ಧರಿಸೊ ವಿದ್ವದ್ಹøದ್ಯ ವೇದವೇದ್ಯ 2ವೇದಶಾಸ್ತ್ರಾಭ್ಯಾಸವಿಲ್ಲ ವೇದಜÕರರ್ಚಿಸಲಿಲ್ಲಬೋಧವನು ಕೇಳಲಿಲ್ಲ ಬುದ್ಧಿ ಎನ್ನೊಳು ಚೂರಿಲ್ಲಸಾಧನವ ತಿಳಿಯಲಿಲ್ಲ ಸಾಧುಮಾರ್ಗವ ಕಾಣಲಿಲ್ಲಭೇದಜÕರೊಳ್ ಕೂಡಿಸೆನ್ನ ಭೀಮಪಾಲಾಭಿನವಲೀಲ 3ಕಾಂತೇರ ಕುಚೇಷ್ಟೆಗಳಿಗೆ ಕೀಳುಚ್ಚಾರದ ಮಕ್ಕಳಿಗೆಭ್ರಾಂತನಾಗಿ ಸ್ನೇಹ ತೋರ್ದ ಬಲೆಯೊಳ್ ಸಿಲುಕಿದೆಸಂತರಂಘ್ರಿ ಸಖ್ಯವನೊಲ್ಲೆ ಸತ್ಕಥೆಯನಾಲಿಸಲೊಲ್ಲೆಅಂತು ಮದವನಿಳಿಸಿ ಕಾಯೊಅಂಗಜಪಿತನೆ ಅಘರಹಿತನೆ4ಬಳಲಿಸಿದೆ ತನುವನು ಬಯಸಿ ಖಳರಾರ್ಥವನ್ನುನಳಿನಾಕ್ಷ ನಿನ್ನ ಬೇಡದೆ ನಾಸ್ತಿಕರಿಗೆ ಕೈಯನೊಡ್ಡಿದೆಹೊಳೆವ ಸುರಭಿಯ ಬಿಟ್ಟು ಹುಲಿಪಾಲಿಗಾಯಾಸಬಟ್ಟೆಕಳೆದೆನನಘ್ರ್ಯಾಯುಷ್ಯವ ಕುಚೇಲಮಿತ್ರ ಕರುಣನೇತ್ರ 5ವಿಷ್ಣು ತತ್ವವರಿಯದೆ ಧೀರ ವೈಷ್ಣವನೆನಿಸದೆಭ್ರಷ್ಟಮನವ ತೊಳೆಯದೆ ಬಹಿಛ್ಛಿನ್ನದಲ್ಲೆ ಮೆರೆದೆಶಿಷ್ಯ ಗುರುಗಳ ಜರಿದೆ ಶಠರನು ಅನುಸರಿಸಿದೆದುಷ್ಟವೃತ್ತಿಯನು ಬಿಡಿಸೊ ದುರ್ಗುಣಧಾಮನ ದುರಿತಶಮನ 6ಇಂದ್ರಿಯಗ್ರಾಮ ನಿನ್ನದು ಇಷ್ಟ ಬಳಗವು ನಿನ್ನದುಸೌಂದರ್ಯ ಸುಖ ನಿನ್ನದು ಸ್ವರೂಪ ಸ್ವಾತಂತ್ರ್ಯ್ರನಿನ್ನದುಮಂದಮತಿಯಿಂದ ಅಹಂಮತಿಯಲ್ಲಿ ನೊಂದೆ ಬಹುಕುಂದನೋಡದೆನ್ನ ಸಲಹೊ ಕುಂಜರವರದ ಕುಶಲಪದದ7ನಿನ್ನ ಕಥಾಮೃತವು ಕಿವಿಗೆ ನಿನ್ನ [ಕೀರ್ತನೆ ನಾಲಗೆಗೆ]ನಿನ್ನ ಲಾವಣ್ಯವು ಕಣ್ಣಿಗೆ ನಿನ್ನ ಸೇವೆ ಸರ್ವ ಇಂದ್ರಿಯಕ್ಕೆಎನಗೆ ಬೇಗ ಕರುಣಿಸಿ ಎಲ್ಲ ದುರಿಚ್ಛೆಗಳ ನೂಕುಇನ್ನು ದಾಸದಾಸ್ಯವು ಬೇಕೊ ಋಷಿಕುಲೇಶ ಹೃಷಿಕೇಶ 8ಅಚ್ಯುತಾನಂತಗೋವಿಂದ ಆದಿಪುರುಷ ಮುಕುಂದಸಚ್ಚಿದಾನಂದಸರ್ವೇಶ ಸುಚರಿತ್ರ ಕರಿವರದನೆಚ್ಚಿದೆ ತವ ಪಾದಾಂಬುಜ ನಮೊ ಬೊಮ್ಮಾದ್ಯರ ದೇವನಿಚ್ಚಪ್ರಸನ್ವೆಂಕಟ [ನಿನ್ನ ನೆನೆವ ಮ್ಮತಿಯನೀಡೊಮನ್ನಿಸಿ ನೋಡೊ] 9
--------------
ಪ್ರಸನ್ನವೆಂಕಟದಾಸರು
ಉಪಕಾರ ಮರೆವುದುಚಿತವಲ್ಲೋ |ತಪನಾಪ್ತಾಕ್ಷನೆ ನಮ್ಮ ಹಿರಿಯರಂದು ಮಾಡಿದಾ ಪಹರಿಯೆ ನಿನ್ನವರಿಗಮೃತವ ನೀಡುವೆನೆಂದು |ಭರದಿಂದ ಮಥÀನ ಮಾಡಿಸಿದೆ ಕಡಲ ||ಗರಳವುದ್ಭವಿಸಲು ದಿವಿಜರಂಜಲು ಆಗ |ತ್ವರದಿಂದದರಭಯ ಪರಿಹರಿಸಿದರಾರೊ 1ಆರಣ್ಯದೊಳು ನೀನಿರಲು ನಿನ್ನೊಲ್ಲಭಿಯ |ಆ ರಾವಣನೊಯ್ಯಲು ಕಪಿಗಳೆಲ್ಲ ||ಹಾರಲಾರೆವೊ ಸಮೂದ್ರಾ ಎನ್ನಲು ಬೇಗ |ಭಾರತೀ ರಮಣನೇ ಪೋಗಿ ವಾರ್ತೆಯ ತಂದ 2ಶರಧಿಕಟ್ಟುವುದಕ್ಕೆ ರೋಮ ರೋಮದಿ ಗುಡ್ಡ |ಧರಿಸಿ ತಂದನು ನೊಂದೆನೆನ್ನದಲೆ |ಹರಿಜಿತು ಶರದಿಂದ ಬಿಗಿಯೆ ಪ್ಲವಗರೆಲ್ಲಾ |ಧರಣಿ ಹೊಂದಲು ಸಂಜೀವನ ತಂದು ಉಳುಹಿದ 3ವಸುದೇವಜನಾಗಿ ನೀಂ ಜರಿಜನ ಭಯದಿಂದ |ವಸುಧೆಯೊಳಗೆ ನಿಲ್ಲಲಾರದಿದ್ದೆ ||ಶಶಿಕುಲದಲ್ಲಿವಾತಜನಿಸಿ ಅವನ ಕೊಂದು |ಕುಸುಮನಾಭನೆ ನಿನ್ನ ಭಯ ಬಿಡಿಸಿದನಲ್ಲೋ 4ಮಣಿಮಂತಜಗದೊಳು ನಿನ್ನ ಮಹಿಮೆಯನ್ನು |ಮುಣುಗಿಸಿದನು ತ್ವರಿತ ನಮ್ಮ ಗುರುವು ||ಘನಶಾಸ್ತ್ರಂಗಳ ರಚಿಸಿ ದುರ್ಮತವ ಸೋಲಿಸಿ |ಮನಸಿಜಪಿತನೇ ಪರನೆಂದು ಮೆರೆಸಿದ5ಇಷ್ಟು ಸೇವೆಯ ಮಾಡಿ ಮೆಚ್ಚಿಸಿದನು ಗೇಣು |ಬಟ್ಟೆಬೇಡಿದನೇನೋ ಆತ ನಿನ್ನ ||ಬಿಟ್ಟದ್ದಾನಾದಿತು ನಮ್ಮ ವಂಶಕರಿಗೆ |ಕೊಟ್ಟು ರಕ್ಷಿಸುವನು ಸ್ವಾಮಿ ಒಳ್ಳೆವನೆಂದು 6ಈಸು ಪರಿಯಿಂದ ನಮ್ಮ ಭಾರತೀಕಾಂತ |ತಾ ಸೋತಿರಲು ನಿನಗೆ ನಮ್ಮನೀಗ ||ಘಾಸಿಮಾಡದೆ ಸಲಹುವದುಚಿತವೋ ಶ್ರೀ ಪ್ರಾ- |ಣೇಶ ವಿಠ್ಠಲರೇಯ ಅಪಕೀರ್ತಿ ಕೊಳಬೇಡ7
--------------
ಪ್ರಾಣೇಶದಾಸರು
ಉಪ್ಪವಡಿಸಯ್ಯ ಕೃಷ್ಣ ಪ.ಉಪ್ಪವಡಿಸೈ ಬೊಮ್ಮನಪ್ಪ ಭುವನಾವಳಿಯಸ್ವಪ್ಪನಾದಿ ತ್ರಯವನಪ್ಪಿ ಪಾಲ್ಗಡಲ ಮಗಳಪ್ಪಿ ಅಹಿವರನ ಸುಪ್ಪತ್ತಿಗೆಲಿ ಒರಗಿಪ್ಪತಿಮ್ಮಪ್ಪವ್ರಜದಿ ದಯದಿಅ.ಪ.ಅರುಣಮೂಡಣವೇರೆ ತ್ವರಿತ ತಮಕುಲ ಜಾರೆಹರಿದವಭ್ರದ ತಾರೆ ತರಣಿಕರ ಬಳಿ ಸಾರೆಸರಸಿಜವಿಕಸತೋರೆ ಮರುತ ಪರಿಮಳ ಬೀರೆ ನೆರೆದುಹರುಷ ದಿವಿಗಣ ಬೀರೆ ಮೊರೆಯುತಿವೆ ಸುರಭೇರೆಪರಮಹಂಸರು ಮೇರೆ ಮರೆದು ಸ್ಮರಿಸುತಲೈದಾರೆಸರ್ವವೇದ ಘೋಷ ಹರಿಪರವೆನುತಲೈದಾರೆ ಕರುಣದಲಿವಸುಧ್ಯೆರೆದಕಾಷ್ಠಗಂಧಕುಸುಮಸರ ತಂದಿಹಳುಬಿಸಜಲೋಚನ ನಿಮ್ಮ ಸೊಸೆ ವಾಣಿ ಭಾರತಿಯುಲ್ಲಸದಿ ಪೊಂಭಾಂಡದಲಿ ಬಿಸಿನೀರು ತುಂಬಿಹರುಪಶುಪಸುಸುಪರ್ಣವಸನಉರಗೇಶ ರತುನನಾಸನಮಾಲ್ಯಸುರಪತಿಕಲಶ ವಹಿಸಿ ವರುಣಸ್ಮರತಿಲಕಹಸನ ಮಾಡುವ ಪಾವುಗೆಶಶಿಧರಿಸಿ ನಿಂದ ಸಂತಸದಿಸ್ವರ್ಧುನಿಯು ಗೋದೆ ಗೋವರ್ಧಿನಿಯು ಗಾತ್ರೆಅಜನರ್ಧಾಂಗಿ ಸರಸ್ವತಿ ಶ್ರೀವರ್ಧಿನಿಯು ಕಾವೇರಿನಿರ್ದೋಷಿ ಸರಯು ತುಂಗಭದ್ರೆ ಕಾಳಿಂದಿ ನರ್ಮದ್ಯೆಮರ್ದಿತಘೌಘೆಯು ಕುಮುದ್ವತಿ ವಂಜರೆ ಭೀಮೆನಿರ್ಧೂತಕಲಿಮಲಕಪರ್ದಿನಿಯು ತಾಮ್ರಪರ್ಣಿಊಧ್ರ್ವಗತಿಪ್ರದ ನದಿ ಬಂದಿರ್ದವಿದೆ ತೀರ್ಥ ಕ್ರಮಕಿನ್ನರರು ಸುರನಾಯಕ ಮನ್ನೆಯರು ಸಲೆ ದೇವಗನ್ನೆಯರುಕಿಂಪುರುಷಪನ್ನಗರು ವಿದ್ಯಾಧರನಿಕರ ತುಂಬುರರು ನಿನ್ನಗುಣಕೀರ್ತನೆಯ ಮಾರ್ಗೋನ್ನತದಚೆನ್ನ ಭೂಪಾಳಿ ದೇವ ಧನಶ್ರೀ ದೇಶಾಕ್ಷಿಸನ್ನುತವಸಂತ ಮಲಹ ನವೀನ ಮಾಳ್ಪ ಶ್ರೀಘನ್ನ ಸ್ವನಾಮಂಗಳನು ಪಾಡುವರಿದಕೋ ಧನ್ಯ ಸಂಗೀತಲೋಲ4ಸುರಮುನಿ ಭೃಗು ವಸಿಷ್ಠ ನರಪಋಷಿ ಸನಕಾದ್ಯಮರೀಚ್ಯತ್ರಿ ಪುಲಸ್ತ್ಯ ಆಂಗಿರ ಚ್ಯವನ ಸೌಭರಿಯು ಭಾರಧ್ವಾಜಗಸ್ತ್ಯ ಪರಾಶರ ಕಶ್ಯಪ ಜಮದಗ್ನಿ ಗಾಗ್ರ್ಯಮಾರ್ಕಂಡೇಯ ಬಕದಾಲ್ಭ್ಯ ಕರಂಧಮೋದ್ಧಾಲಕನುವರದಾಂಕ ಜಹ್ನುಮುನಿ ವರ್ಣಿಕುಲದಗಣಿತರುನೆರೆನೆರೆದುತುತಿಸಿಸುಖಭರಿತರಾಗುತ ನಿಮ್ಮ ಚರಣದೂಳಿಗಕ್ಷಿತಿಪರೊಳು ಮರುತ ಪ್ರಿಯವ್ರತ ಪ್ರಾಚೀನ ಬರ್ಹಿಪ್ರಥು ಗಯ ಧ್ರುವಿಕ್ಷ್ವಾಕು ದಿತಿಜಸುತ ಮಾಂಧಾತಪ್ರತಿಸಗರ ನಹುಷಬಲಿಶತಧನ್ವಿದೇಹಿ ದಶರಥಶ್ರುತಕೀರ್ತಿ ಶಿಬಿ ದೇವವ್ರತ ಅಂಬರೀಷನು ಭರತದ್ವಯ ಪುರೂರವ ಯಯಾತಿ ರಂತಿದೇವ ಪರೀಕ್ಷಿತನು ಮುಚುಕುಂದ ನಳ ಶತಪುಣ್ಯಶ್ಲೋಕ ನೃಪರತಿನಂದಗೋಕುಲದ ಗೋವಿಂದಗಾರ್ತರು ನಿದ್ರೆಹೊಂದೆದ್ದಾನಂದದಿಂ ದೀಪಗಳ ಪ್ರಜ್ವಲಿಸಿಮಿಂದು ಬ್ರಾಹ್ಮಿಯಲುಟ್ಟು ಪೊಂದೊಡಿಗೆ ಮಣಿದೊಡಿಗೆವಂದಿಸುತ ಗೃಹದೇವರ ದಧಿಮಥಿಸಿ ಬೆಣ್ಣೆಯಇಂದಿರೆರಮಣ ಮೆಲ್ಲಲೆಂದು ತೆಗೆದಿಡಲರುಹಬಂದಿಹರು ಗೋವಳರು ಮುಂದೆದ್ದು ತಮ್ಮ ಏಳೆಂದುಶ್ರೀಪತಿಯೆ ಬ್ರಹ್ಮಾದಿ ತಾಪಸರ ಪ್ರಭು ಏಳುದ್ವೀಪ ದ್ವೀಪಾಂತರದ ಭೂಪರರಸನೆ ಏಳುಕಾಪುರುಷ ಕಾಳ ಕುಮುದಾಪಹರಹರಿಏಳು ಕೋಪಹೇಪಾರ್ಥಸಖಸುಪ್ರತಾಪ ಜಗ ಎರಡೇಳುವ್ಯಾಪಕನೆ ವಿಬುಧಕುಲಸ್ಥಾಪಕನೆ ಮೂರೇಳುಕೂಪಕುಲನಾಶಕ ಚಮೂಪ ಸಂಹರ ಏಳು ದ್ರೌಪದೀ ಬಂಧು ಏಳು 8ಶ್ರುತಿಯ ತರಲೇಳು ಭೂಭೃತವ ಹೊರಲೇಳುಶುಭಧೃತಿಯನಾಳೇಳು ದುರ್ಮತಿಯ ಸೀಳೇಳಮರತತಿಯ ಸಲಹೇಳು ನಿಜಪಿತನ ಕಾಯೇಳು ಮಹಿಸುತೆಗೆಸತಿಯರಾಳೇಳು ಪತಿವ್ರತೆರ ಗೆಲಲೇಳುಕಲಿಖತಿಯ ಕಳಿಯೇಳು ಪಂಡಿತರುಳುಹಲೇಳು ನಮಗತಿಶಯ ಪ್ರಸನ್ನವೆಂಕಟಪತಿ ಕೃಷ್ಣ ಸದ್ಗತಿದಾತ ತಾತಯೇಳೈ 9
--------------
ಪ್ರಸನ್ನವೆಂಕಟದಾಸರು