ಒಟ್ಟು 505 ಕಡೆಗಳಲ್ಲಿ , 42 ದಾಸರು , 408 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಗಕೆ ಶಾಂತಿಯನೀವ ಜಗನ್ನಾಥನೇ | ನಿನ್ನ ಬಗೆಯರಿತ ಸುಜನರಿಗೆ ಕ್ಲೇಶವಿನ್ನುಂಟೇ ಪ. ನಾನಾ ಇಂದ್ರಿಯಗಳಿಗೆÀ ನೀನೇ ಪ್ರೇರಕನಾಗಿ ನಾನಾ ವಿಧ ಸುಖದುಃಖ ತಗಲಿಸುತ ಮನಕೇ ಜ್ಞಾನವಂತರ ಹೃದಯ ವಾಸನಾಗಿರುತಿರ್ದು ಮಾನಿತರ ಬಳಲಿಸುವ ಕಾರಣವದೇನೈ 1 ಭೂಸುರÀರ ಮನಕ್ಲೇಶ ನಾಶಗೈಸುತ ಸತತ ಪೋಷಿಸೆಲೊ ಸ್ವಾಮಿ ಸಂತೋಷವಿತ್ತು ನಾಶರಹಿತನೆ ಭಕ್ತರಾಶೆ ಪೂರೈಪ ಗುಣ ರಾಶಿ ನಿನ್ಹೊರತಿಲ್ಲ ಅಬುಜಜಾಂಡದೊಳೂ2 ಮನಕೆ ಶಾಂತಿಯ ನೀಡೋ ಮಾಧವನೆ ಮಮತೆಯಲಿ ಮನದ ಅಭಿಮಾನಿಗಂತರ್ಯಾಮಿ ಸ್ವಾಮಿ ಚಿನುಮಯನೆ ಗೋಪಾಲಕೃಷ್ಣವಿಠ್ಠಲ ಪ್ರೇಮಿ ಘನ ಗುರುಗಳಂತರ್ಯಾಮಿಯೆ ಮಧ್ವನಾಥಾ3
--------------
ಅಂಬಾಬಾಯಿ
ಜಗದಾಖ್ಯ ವೃಕ್ಷ ಚಿಂತಿಪುದು ಬುಧರು ಪ ಭಗವಂತನೆಂಬ ಆಗಸದಲಿ ಪಸರಿಸಿದಅ.ಪ. ಚತುರಾಸ್ಯ ವಾಣಿ ಈರ್ವರು ಬೀಜ ಚಿತ್ಪ್ರ ಕೃತಿ ಪೃಥವಿ ಕರ್ಮವು ಬೇರು ತ್ರಿಗುಣತ್ವ - ವು ಕ್ಷಿತಿ ಜಲಾನಲ ವಾಯು ಗಗನ ಶಾಖೆಗಳಿಂದಕೆ ಶತಕಿರಣ ಉಪಕೊಂಬೆಯೆನಿಸಿ ಕೊಂಬವು ಇದಕೆ 1 ಅಹಂಕಾರ ಬಲದಿಂದ ಅಭಿವೃದ್ಧಿ ಐದುವುದು ಕುಸುಮ ತನ್ಮಾತ್ರ ರಸದಿ ಸಹಿತವಾರ ಪ್ರವೃತ್ತಿ ನಿವೃತ್ತಿ ಕರ್ಮಫಲ ಅಹರಹರ್ ಭುಂಜಿಪವು ತನ್ನಾಮ ಜೀವಖಗ 2 ನಾನು ನನ್ನದು ಎಂಬ ನೀಡ ದ್ವಯಗಳಿದಕೆ ಹೀನ ವಿದ್ಯಾದಿ ಪಂಚಕವೆ ಸರ್ಪಗಳಲ್ಲಿ ಶ್ರೀನಿಧಿ ಜಗನ್ನಾಥವಿಠಲ ಸಂರಕ್ಷಕನು 3
--------------
ಜಗನ್ನಾಥದಾಸರು
ಜಗನ್ನಾಥ ಸಮುದ್ರ ತೀರದಿ ಜಗನ್ನಾಥ ಸಮಗ್ರ ಸೇವೆಯ ಕೊಡುವಾತ ಪ ಸಮರ್ಥ ಫಲ್ಗುಣ ರಥಸೂತ ಸಮಸ್ತಲೋಕವ ಪೊರೆವಾತ ಅ.ಪ ಬಲಭದ್ರಾನುಜೆಯರನೊಡವೆರಸಿ ಜಲನಿಧಿ ಮಧ್ಯದಿ ದ್ರೋಣದಿಂದಿಳಿಸಿ ಒಲಿದು ವೈಕುಂಠಕೆ ಅವದಿರ ಕಳಿಸಿ ಸಲೆ ನಿಂದೆಯಾ ಜಗನ್ನಾಥನೆಂದೆನಿಸಿ 1 ಪಾಂಡವರಕ್ಷಕ ನೀಲಾಂಗಾ ಪುಂಡರೀಕಾಂಬಕಾ ಮದನಾಂಗಾ ಅಂಡಜವಾಹನ ರಿಪುಮದಭಂಗ ಕಂಡೆ ನಿನ್ನನಾ ಮಾಂಗಿರಿರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜಗನ್ನಾಥದಾಸರ ಸ್ತೋತ್ರ ಅಂಬುಜಾಕ್ಷಿ ಸ್ತಂಭದಿಹನ್ಯಾರೇ - ಸಾರೇ ಪ ನಂಬಿ ಭಜಿಸುವ ಭಕುತರ ಮನದಹಂಬಲ ನೀಡುವರೆ - ನೀರೇ ಅ.ಪ ಸುರರೊಡೆಯನೋಲ್ ಪರಿಪರಿಯಲೈ- ಶ್ವರ್ಯದಿಂ ರಾಜಿಸುವರ್ಯಾರೇಹರಿಕಥಾಮೃತ ಗ್ರಂಥ ವಿರಚಿಸಿಧರಣಿ ಸುರರುದ್ಧರಿಸಿದವರೆ 1 ಫುಲ್ಲಲೋಚನೆ ಬಲ್ಲೆಯಾ ಇವ -ರಿಲ್ಲಿರುವ ಕಾರಣವಿದೇನೆಫುಲ್ಲನಾಭನ ಪುಡುಕುತಲೀಪ್ರಹ್ಲಾದನನುಜ ಸಹ್ಲಾದರಿವರೆ 2 ಜಲಜ ತುಳಸಿಮಣಿ ಸುಮಾಲಿಕೆಗಳದಿ ಧರಿಸಿಹನ್ಯಾರೆ - ನೀರೇಕಲಿಯುಗದಿ ಕಮಲಾಪತಿ ವಿ- ಠಲನ ಒಲಿಸಿದಿಳೆಯೊಳಗೆ ಮೆರೆವರೆ 3
--------------
ಕಮಲಪತಿವಿಠ್ಠಲರು
ಜಗನ್ನಾಥದಾಸರು ತಂಗಿ ನೀ ಕೇಳಿದ್ಯಾ ಅಂಗನಾಮಣಿ ರಂಗನೊಲಿದ ಭಾಗವತರ ಮಹಿಮೆಗಳ ಪ ಶ್ರವಣಾದಿ ನವವಿಧ ಸವಿಯ ಭಕುತಿಯಿಂದ ಪ್ರವೀಣನೆನಿಸಿ ಮಾಧವನ ಧ್ಯಾನಿಪ ಖ್ಯಾತಿ 1 ಅಮಿತ ಮಹಿಮನಂಘ್ರಿ ಕಮಲಾಖ್ಯಪರ ಖ್ಯಾತಿ 2 ಶ್ರೀದವಿಠಲನ ಪಾದಭಜಕರಾದ ಸಾಧುವರ್ಯರ ಸುಬೋಧ ಬಣ್ಣಿಪರಾರೆ 3
--------------
ಶ್ರೀದವಿಠಲರು
ಜಗನ್ನಾಥದಾಸರು ರಕ್ಷಿಸೋ-ಗುರುವರ-ರಕ್ಷಿಸೋ ಪ ಈಕ್ಷಿಸೊ ಕರುಣ ಕಟಾಕ್ಷದಲಿನ್ನ ಶಿಕ್ಷಿಸು ಮಧ್ವಾಗಮವ ಮುನ್ನ ಉಕ್ಕಿಸು ಭಕ್ತಿ ವಿರಕ್ತಿ ಚೆನ್ನ | ಆಹ ಲಕ್ಷ್ಮೀಕಾಂತನ ಅಪರೋಕ್ಷದಲಿ ಕಂಡು ಪ್ರ- ತ್ಯಕ್ಷ ಔತಣ ಉಂಡ ದಕ್ಷ ಶ್ರೀ ಜಗನಾಥ ವಿಠಲನ ದೂತ ಅ.ಪ. ನರಸಿಂಹದಾಸರ ಕುವರಾ-ಧರಿಸಿದೆ ಶ್ರೀನಿವಾಸನಪೆಸರ ವರಕವಿತಾ ಹುಟ್ಟಿನ ಸಾರ-ಮೆರೆಯಿತು ಕೀರ್ತಿ ಅಪಾರ \ಆಹ ವರದೇಂದ್ರನ್ನ ಅಶುಕವಿತಿಯಲಿಪೊಗಳಿ ವರಶಿಷ್ಯನಾಗುತ ಮೂರೊಂದು ಶಾಸ್ತ್ರದಿ ಕಡುಹುಲಿ ಎನಿಸಿದೆ 1 ನ್ಯಾಯಶಾಸ್ತ್ರದಿ ಜಗಜ್ಜಟ್ಟೀ-ವೇದಾಂತರಸಗಳ ಭಟ್ಟಿ ಮಾಯಾವಶಿರ ಮೆಟ್ಟಿ-ಅಹಂಕಾರ ಶಿರದಲಿಟ್ಟಿ ಆಹ ಶ್ರೇಷ್ಠವಿಜಯದಾಸರು ಮನೆ ಮುಟ್ಟಿ ಕರೆದರು ನಿನ್ನ ಬಹು ಬಹು ಕಂಗೆಟ್ಟೀ ಬತ 2 ಹೋಯಿತು ಕಳೆಮುಖದಿಂದ ಕಚ್ಚಿತು ಭರದಿಂದ ಆಹ ಭರದಿ ಹರಿಯ ಕರುಣ ಜರುಗಿ ಪೋದುದಕಂಡು ಕೊರಗಿ ಕೊರಗುತ ಕ್ಷೇತ್ರ ತಿರುಗುತ ಕೊನೆಗೆ ಗುರು ರಾಘವೇಂದ್ರರ ಪುರವ ಸೇರುತ ಬಹಳ ಕಾಯ ದೆರಗಿ ಸೇವೆಯಗೈದೆ 3 ಕರುಣಾಮಯನು ಸ್ವಪ್ನದಿ ಗುರುವು- ಗುರು ದ್ರೋಹ ಕಾರಣ ವರುಹಿ ಸುರಿಸಿ ಆಶೀರ್ವಾದವ ಶಿರದಿ- ತೆರಳೆಂದ ವಿಜಯದಾಸರ ಬಳಿ ಆಹ ತೆರೆದು ಕಂಗಳು ಒಡನೆ ತರಿದು ಮದಮಾತ್ಸರ್ಯ ಕರೆದು ಕುಡಿಯುತ ಶಿಷ್ಯ- ವರನು ಎನಿಸುತ ಚರಣಸಾರುವ ಬಿಡದೆ ಗೋಪಾಲದಾಸರ 4 ಸ್ವಗುರುಭಾವವತಿಳಿದು ತನ್ನಾಯುವನೆ ಇತ್ತ ಆಹ ಕೊಂಡು ಆಯುರ್ದಾನ ತೊಂಡನೆಂದಡಿಗೆರಗಿ ಕೊಂಡು ಶ್ರೀಹರಿದಾಸ ಗಂಡುದೀಕ್ಷೆಯ ಒಡನೆ ತಾಂಡವಾಡುತ ಪೋಗಿ ಪಾಂಡುರಂಗನ ಪುರದಿ ಮಂಡೆ ಮುಳುಗಿಸೆ ನದಿಲಿ ಕಂಡೆ ಅಂಕಿತ ಶಿರದಿ 5 ಪಂಡಿತನಾನೆಂಬ ಹೆಮ್ಮೆ ಬರಿ-ಪುಂಡತನವಲ್ಲದೆ ಹರಿಯ ನಿಜ ನಿನ್ನ ಚರಿತೆ ಆಹ ತಂಡತಂಡದ ಕವನ ದಂಡೆ ಹಾರಲು ಹರಿಗೆ ಕೊಂಡು ಔಡಣ ನಡಿಸೆ ಉಂಡು ಸಂತಸದಿಂದ ತುಂಡುಗೈಯುವ ಭವವ ಕಂಡೆ ನಾಕವ ಭುವಿಲಿ 6 ದೇಶದೇಶಗಳ ಸಂಚರಿಸಿ-ಹೇಸಿ ಮತಗಳ ನಿರಾಕರಿಸಿ ಪೊರೆದೆ ಹರೆಸಿ ಆಹ ಭಾಷಾದ್ವಯ ಯೋಜನೆ ಮೀಸಲು ನಿನಗೆಂಬೆ ವ್ಯಾಸ ರಾಜಾದಿಗಳ ಆಶೆಯಂದದದಿ ತತ್ವ- ರಾಶಿ ತುಂಬುತ ಗ್ರಂಥರಾಜ ರಚಿಸುತ ಜಗಕೆ ತೋಷ ತಂದಿತ್ತಿಯೊ ದಾಸಜನರುಲ್ಲಾಸ 7 ಶ್ರೀಮದ್ಧರಿಕಥಾಮೃತಸಾರ-ನೇಮ ದಿಂದೋದುವನೆ ಧೀರ ತಾಮಸರಿಗಿದು ಬಹಳದೂರ- ನೀಮಾಡಿದೆ ಮಹೋಪಕಾರ ಆಹ ಕಾಮವರ್ಜಿತವಾಗಿ ಪ್ರೇಮದಿ ನರಹರಿಯ ಭಾಮಸಹ ಸಂತತ ನೇಮದಿಂ ಧ್ಯಾನಿಸುತ ನಿತ್ಯ ಸಕಲೇಂದ್ರಿಯ ವ್ಯಾಪಾರ ಧೂಮಕೇತುವು ಎನಿಸುತ ನಮ್ಮಘಕಾನನಕೆ 8 ಪ್ರಾಣೇಶ ಕರ್ಜಗಿ ದಾಸಾರ್ಯರವೃಂದ- ನೀನಾಗಿ ಪೂರೆದಂತೆ ಘನ ಅಭಿಮಾನದಿಂದ ದೀನರೆಮ್ಮಯವೃಂದ ಕಾಯೆಂಬೆ ಮುದದಿಂದ- ತಾಣ ನಿಮ್ಮದೆ ನಮಗೆ ದಾಸಪಂಥ ಸ್ತಂಭ ಆಹ ಕೃಷ್ಣಾಗ್ರಜ ಶಲ್ಯ ಸಹ್ಲಾದ ಮತ್ತಾ ಪುರಂದರ ದಾಸಾತ್ಮಜನೀನಂತೆ ದೀನಜನೋದ್ಧಾರಗೈಯ್ಯೆ ಮುಂದೇಳುಬಾರಿ ಜನ್ಮಯೆತ್ತು ವಿಯಂತೆ ಶರಣು ಕರುಣಾಮಯ 9 ಕನ್ನಡಕೆ ಮುಳ್ಳು ಕುವರ ನೀಮುದ್ದು ಆಹ ಶರ್ಕರಾಕ್ಷಸಗೋಸ್ಥ ಅನುಸಂಧಾನ ಕ್ರಮ ಸು ನೀಕವಡಗಿಸಿ ಕವನ ಕಡಲೊಳು ಸಾಕಿಹೆ ಹರಿ ಭಕ್ತಸಂಘವ ಹಿರಿಯ ದಾಸರ ಪಥವನನುಸರಿಸಿ ಶಕ್ತನಾವನು ಗುಣಿಸೆ ನಿನ್ನುಪಕಾರ ಜಗಕೆ 10 ಸಣ್ಣವನು ನಾ ನಿನ್ನು ಗುರುವೇ-ನಿನ್ನವ ಸತ್ಯ ಮನ್ಮನ ಪ್ರಭುವೆ ಮನ್ನಿಸಪರಾಧ ಕಲ್ಪ ಧ್ರುಮವೆ-ಚಿಣ್ಣರ ಸಲಹೆ ಪಿತಗೆ ಶ್ರಮವೆ ಆಹ ಘನ್ನ ಜಯತೀರ್ಥ ವಾಯ್ವಂತರ್ಗತ ಶ್ರೀ ಕೃಷ್ಣವಿಠಲ ತದ್ವನನೆಂದು ಭಜಿಸುವ ಭಾಗ್ಯ ಜನ್ಮಜನ್ಮಂತರ ಕೊಟ್ಟು ಕಾಪಾಡುವಂಥ ನಿನ್ನಭಯಕರವೆನ್ನ ಶಿರದಲಿಡುವಲಿ ಸತತ 11
--------------
ಕೃಷ್ಣವಿಠಲದಾಸರು
ಜನ್ಯಧರ ದೂರ್ವಾಸ ಪ್ರಮುಖ ಮುನಿ ಸ ನ್ಮಾನ ಕರುಣಿ ವಿಲಾಸ ಶ್ರೀ ಶ್ರೀನಿವಾಸ ಪ ಎನ್ನವಗುಣ ಸಹಸ್ರವೆಣಿಸದೆ ನಿನ್ನವರೊಳಗೆಣಿಸಿ ಅನುದಿನ ಮನ್ಮನಾಲಯದೊಳು ನೆಲಸು ಮೈ ಗಣ್ಣನನುಜ ವರಾಭಯ ಶ್ರೀಕರ ಅ.ಪ. ಕಾಮಿತಪ್ರದಕೋಲಾ ಅಂಜನಾಧಿರÀ ಧಾರ ಧಾಮ ಭೂಮಿ ವಿಲೋಲಾ ಶಂಖಣನೃಪವರದ ಹೇಮ ಲೋಚನ ಕಾಲಾ ದ್ವಿಜ ಮಹಿಳೆಯುಳುಹಿದ ಶಾಮಲಾಂಗ ಸುಶೀಲಾ ವೆಂಕಟ ಕುಲಾಲ ಭೀಮಗೊಲಿದ ಮಹಾಮಹಿಮನೆ ಪಿ ತಾಮಹನ ನಾಸೋದ್ಭವನೆ ವಿಯ ಜಾಮಾತ ಕಟಿಸು ತ್ರಾಮಸುತಸೂತ ಪ್ರಮೋದಾಸು ಧಾಮ ಸೌಖ್ಯ ಪ್ರದವರಾಹ ತ್ರಯೀಮಯನೆ ಪ್ರಣತಾರ್ತಿಹರ ಬಲ ಸದನ ಸಹಸ್ರನಾಮ ಸಾಮಜಪತಿ ಪೋಷಕ ರಿಪುವನ ಧೂಮಧ್ವಜ ವಿಧಿಭ ಸೇವಿತ ವ್ಯೋಮಾಳಕಸಖ ಸರ್ವಜ್ಞರ ಮಾಮನೋಹರ ಮನ್ನಿಪುದೆಮ್ಮ 1 ದೀನಜನ ಮಂದಾರ ದೇವಕಿಸುತ ಜಗ ತ್ರಾಣ ಗುಣ ಗಂಭೀರ ಪೃಥ್ವೀಶ ತೋಂಡ ಮಾನವರದ ಉದಾರ ಲುಬ್ದಕನ ವಿಷ್ವ ವೈನತೇಯ ವರೂಥ ಖಳ ಸ್ವ ರ್ಭಾನುವಿನ ತಲೆಗಡಿದು ರವಿಶಶಿ ಕವಿ ಶನಿಗಳ ಶ್ರೇಣಿಯಲಿ ಮಾನಿಗಳ ಮಾಡ್ಡ ಮ ಕಲಿಮಲಾಪಹಾರಿ ಕೃ ಶಾನುಸಖ ಸಂಪೂಜ್ಯ ಸುಮನಸ ಧೇನು ಶರಣ ಜನರ್ಗೆ ಸಂತತ ಆ ನಮಿಸುವೆ ನಳಿನಜಪಿತ ನಿ ನಿರವದ್ಯ ನಿರುಜ ಬ್ರ ಹ್ಮಾಣಿ ಸುರನಿಕರ ನಿಲಯನುಸಂ ಧಾನಕೆ ಕೊಡು ಬಹುವಿಧಕರ್ಮ 2 ಸೇವ್ಯ ದಾರವಿಂದ ಮಹಂತಾ ಸತ್ವಾದಿ ತ್ರಿಗುಣವಿ ದೂರ ದಿತಿಜ ಕೃತಾಂತಾ ಗುಣರೂಪ ಪಾರಾ ವಾರ ವಿಗತಾದ್ಯಂತಾ ಶ್ರೀ ಭೂಮಿಕಾಂತಾ ಕಮಠ ವರಹ ಕ ಕಶಿಪು ವಿದಾರಣನೆ ಭಾ ಗೀರಥಿಯ ಪದನಖದಿಪಡದಂಗಾರ ವರ್ಣನೆ ಭೃಗುಕುಲೋದ್ಭವ ವಾರಿನಿಧಿಬಂಧನ ವನೌಕಸ ವಾರ ಪೋಷಕ ನಂದಗೋಪ ಕು ಮಾರ ತ್ರಿಪುರ ವಿದೂರ ತುರಗವನೇರಿದ ಜಗನ್ನಾಥವಿಠಲ ಸಾರುವೆ ತವÀ ಪದಪಂಕಜ ಜಂ ಭವ ಭಯ ತಾರಕ ನಿನ್ನವರೊಳು ತತ್ವ ವಿಚಾರಕೊಡು ಚಿರಕಾಲದಲಿ 3
--------------
ಜಗನ್ನಾಥದಾಸರು
ಜಯ ಜಾನಕೀನಾಥ ಜಯ ಕುಶೀಲವ ತಾತ ಜಾಮಾತ ಪ ಜಯ ಜಯತು ಸುಖದಾತ ಜಯ ಜಗನ್ನಾಥ ಅ.ಪ ಮರುತಸಂಭವ ಪಕ್ಷ ಮಹನೀಯ ಸುಕಲಾಕ್ಷ ಸರಿಸಿಜದಳ ನಿಭಾಕ್ಷ ಸಾಧು ಸಂರಕ್ಷಾ ಶರಧಿ ಬಂಧನದಕ್ಷ ಶಾತ್ರವನಿಕರ ಶಿಕ್ಷ ವರವಿಶಾಲಸು ವಕ್ಷ ವಂದ್ಯ ಪಾಲಾಕ್ಷ 1 ಘೋರ ಪಾಪವಿದೂರ ಕುಜನಸಂಹಾರ ಸಾರತತ್ವವಿಚಾರ ಸದಸದ್ವಿಹಾರ 2 ಶಿವವಿನುತ ಶುಭನಾಮ ಜೀಮೂತನಿಭಶ್ಯಾಮ ನವತುಳಸಿದಳಧಾಮ ನತಜನಪ್ರೇಮ ಅವನಿಪಾಲಲಲಾಮ ಅಖಿಳಾಮರಸ್ತೋಮ ಕವಿಗೇಯ ಗುರುರಾಮವಿಠಲ ರಿಪುಭೀಮ3
--------------
ಗುರುರಾಮವಿಠಲ
ಜಯ ದೇವ ಜಯ ದೇವ ಜಯ ಜಗನ್ನಾಥ ದಯಗುಣದಲಿ ಪರಿಪೂರ್ಣ ಶ್ರೀಗುರು ಮನ್ನಾಥ ಧ್ರುವ ಅಂದಿಗಿಂದಿಗೆ ನೀನೆ ನಿತ್ಯನುಭವದಿಂದ ತಂದಿ ತಾಯಿ ನೀನೆ ಶ್ರೀಹರಿ ಮುಕುಂದ ಬಂಧುಬಳಗ ನೀನೆ ಕುಲಕೋಟಿಗಳಿಂದ ಎಂದೆಂದೆನಗೆ ನೀನೆ ಫಲದೊಲವಿಂದ 1 ಸೃಷ್ಟಿ ಜನ ಪಾಲಕ ನೀನೆ ಸದ್ಗುರು ರನ್ನ ಸೃಷ್ಟಿಯಲಿ ಪೊಗಳುತಲಿ ಶ್ರುತಿಸ್ಮøತಿಗಳು ನಿನ್ನ ಇಷ್ಟ ಕುಲದೈವಗಳೆಂಬುದು ನೀ ಎನ್ನ ದೃಷ್ಟಿಸಿ ಮಾಡುವ ಭಕ್ತಜನರಿಗೆ ಪಾವನ್ನ 2 ಮನೋಹರ ಮಾಡುವ ಮಂಗಳಕರಮೂರ್ತಿ ಘನ ಸುಖದಾಯಕ ನೀನೆ ಜ್ಞಾನದ ನಿಜಸ್ಫೂರ್ತಿ ಭಾನುಕೋಟಿತೇಜ ನೀನೆ ಸಕಲಸಾರ್ಥಿ ಅನುದಿನ ಮಾಡೊ ಮಹಿಪತಿ ಶ್ರೀಪಾದಕೆ ಆರ್ತಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯತೀರ್ಥ ಗುರುರಾಯ ಕವಿಗೇಯಾ ಪಾದ ದ್ವಯಕಭಿನಮಿಸುವೆ ಶುಭಕಾಯ ಪ ಪಾದ ಪಾದ ದ್ವಂದ್ವಾರಾಧಕರ ಸಂಬಂಧಿಗ ನರ ನೆಂದು ಪಾಲಿಪುದು ಕಾರುಣ್ಯ ಸಾಗರ ಮಂದ ನಾನು ಕರ್ಮಂದಿಗಳರಸ ಮು ಕುಂದನ ತೋರೋ ಮನಮಂದಿರದಲ್ಲಿ 1 ಹರಿಪಾದಾಂಬುಜಾಸಕ್ತ ನಿಜ ಭಕ್ತ ಜನರಾ ಪರಿಪಾಲಿಪ ಸಮರ್ಥ ಅಕ್ಷೋಭ್ಯ ತೀರ್ಥ ಕರಕಮಲ ಸಂಜಾತಾನಂದ ದಾತಾ ಪರÀಮಹಂಸ ಕುಲವರನೆ ವಂದಿಸುವೆ ಕರುಣದಿಂದಲೆನಗರುಪು ಸುತತ್ವವ 2 ಕಾಮಿತ ಫಲದಾತಾ ಜಗನ್ನಾಥ ವಿಠ್ಠಲ ಸ್ವಾಮಿ ಪರಮ ದೂತಾ ಸುವಿಖ್ಯಾತಾ ಶ್ರೀ ಮಧ್ವ ಮತಾಂಬರುಹ ಪ್ರದ್ಯೋತಾ ತಾಮಸಗಳೆದೀ ಮಹೀಸುರರ ಮ ಹಾಮಹಿತರ ಮಾಡ್ದೆ ಮುನಿವರ್ಯಾ 3
--------------
ಜಗನ್ನಾಥದಾಸರು
ಜಯಶ್ರೀ ರಾಮನ ಜಾನಕಿ ಪ್ರೇಮನ ಅನುದಿನ ಪ ಶುಭ ಕಲ್ಯಾಣನ ಮಾಧವ ಮುಕುಂದನ 1 ವಿಶ್ವ ಪ್ರಕಾಶನಾ --ನಂದದಿ ಹೃದಯ ಗೋವಿಂದನ ಬಿಡದಿನ್ನು 2 ಕಂದರ್ಪ ಜನಕನ ಕರಿರಾಜ ವರದನ ಸಿಂಧುಶಯನ ಹರಿ ಶ್ರೀ ಜಗನ್ನಾಥನ 3 ಸೌಂದರ್ಯ ರೂಪನ ಪುರುಷೋತ್ತಮನ ಕುಂದರದನ ಹರಿ ಕೋಮಲಾಂಗನ 4 ಪರಮ ಪುರುಷನ ಪತಿತಪಾವನನ ನರಹರಿರೂಪನ ನಾರಾಯಣನ 5 ಗರುಡಾರೂಢನ ಕರುಣಾಸಾಗರನ ಉರದಲಿ ಲಕ್ಷ್ಮಿಯ ಧರಿಸಿ ಕೊಂಡಿಹನ 6 ಉರಗಾದ್ರಿ ವಾಸನ ವಸುದೇವಸುತನಾ ಭವಪಾಪ ಸಂಹಾರನ 7 ಶರಣರ ಕಾಯುವನ ಶ್ರೀನಿವಾಸನ ಉರಗಶಯನನ ಹರಿವಾಸುದೇವನಾ 8 ಮಂಗಳಮೂರುತಿ ಮಹಾನುಭಾವನ ಗಂಗೆಯ ಪಡೆದನ ಘನ ಗಂಭೀರನ9 ಶೃಂಗಾರ ಭೂಷಣನ ಸುಗುಣ ಪ್ರತಾಪನ ಅಂಗನೆಯರೆಡ ಬಲದಲಿರುವನ 10 ರಂಗನಾಯಕನ ರಾಜಾಧಿರಾಜನ ಮಂಗಾರಮಣನ ಮಧುಸೂದನನಾ 11 ರಂಗವುಳ್ಳ ಪೀತಾಂಬರ ಧರನಾ ಕಂಬು ಕಂಧರನಾ 12
--------------
ಹೆನ್ನೆರಂಗದಾಸರು
ಜೋ ಜೋ ಜೋ ಜೋ ಸಹ್ಲಾದರಾಜ ಜೋ ಜೋ ಜೋ ಜೋ ಪ್ರಹ್ಲಾದನನುಜ ಜೋ ಜೋ ಜೋ ಜೋ ಜಾತರೂಪ ಶಯ್ಯಜ ಜೋ ಜೋ ಜೋ ಜೋ ಭಕ್ತಸುರ ಕಲ್ಪಭೂಜ ಪ ಮನುಜ ಮೃಗಾರ್ಯರ ಸುತನೆನಿಸಿಸುತ ಅಣುಗ್ರಾಮ ಬ್ಯಾಗವಾಟದಿ ಜನಿಸುತ ಮುನಿ ವರದೇಂದ್ರತೀರ್ಥರ ಸೇವಿಸುತ ಅನಿಲ ಸುಶಾಸ್ತ್ರವನರಿತ ಸುದಾತ 1 ಗುರುಧೇನುಪಾಲ ದಾಸಾರ್ಯರ ಮಮತ ಪರಿಪೂರ್ಣದಿಂದ ನೀ ಪರಮ ಪುನೀತ ಸಿರಿಜಗನ್ನಾಥವಿಠಲಾಂಕಿತ ಶರಧಿಜ ಭಾಗದಿ ಪಡೆದ ಪ್ರಖ್ಯಾತ 2 ಸರಸಿಜ ತುಲಸಿ ಸುಮಾಲೆ ಶೋಭಿತ ವರದಿ ಸ್ವಾದಿ ರಾಜೇಂದ್ರಾರ್ಯರ ಪ್ರೀತ ಹರಿಕಥಾಮೃತ ಗ್ರಂಥ ವಿರಚಿತ ಪುರುಹೂತರಾರ್ಯರ ಪ್ರೇಮದ ಪೋತ 3 ಗುಣನಿಧಿ ದ್ವಾಪರದಲ್ಲಿ ಪುಟ್ಟುತ ಫಣಿವರ ಕೇತನ ಮೊರೆ ಲಾಲಿಸುತ ದಿನಮಣಿ ಜಾತನ ದಿವ್ಯ ವರೂಥ ಮಾನಿತ ಮಾನವಿ ಕ್ಷೇತ್ರ ನಿವಾಸ4 ಶ್ರೀ ನಿಧಿ ಶಾಮಸುಂದರ ದಾಸ ದುರಿತ ವಿನಾಶ ಹೀನ ಮತಾಖ್ಯ ಪನ್ನಗಕುಲವೀಶ 5
--------------
ಶಾಮಸುಂದರ ವಿಠಲ
ತಾಮರಸ ನೆರೆ ನಂಬಿದೆ ಪ ಕಾಮಕ್ರೋಧವ ಕಳೆದು ನಿನ್ನ ನಾಮಾಮೃತವ ಪ್ರೇಮದಲಿ ಎನಗುಣಿಸೋ ಸ್ವಾಮಿ ಅ.ಪ. ಉಪರಾಗ ದಶಮಿ ದ್ವಾದಶಿ ದಿವಸ ಮೊದಲಾದ ಉಪೇಕ್ಷೆ ಮಾಡಿ ಕಳೆದೆ ಉಪಕಾರಯೆಂದು ನಿಜ ಉಕ್ತಿ ಪೇಳಿದರೆನಗೆ ಅಪಕಾರ ಕಾಣುತಿದೆಕೋ ನಿಪುಣನೆನಿಸುವೆನೆಂದು ಅಜ್ಞಾನಿಗಳ ಮುಂದೆ ತಪ ವೃದ್ಧರನ್ನು ಹಳಿವೆ ಸ್ವಪನದೊಳಗಾದರೊ ವೈರಾಗ್ಯ ಬಯಸದಲೆ ಕಪಟ ಮನುಜರೊಳಾಡಿ ನಿನ್ನ ಮರೆದೆ ಸ್ವಾಮೀ 1 ಮಾರನ ಉಪಟಳಾಕಾರದಲಿ ನಾ ಬಲು ಪೋರ ಬುದ್ಧಿಯನು ಮಾಡಿ ಆರು ಇಲ್ಲದ ಸಮಯದೊಳವಳು ಕಣ್ಣು ಸನ್ನೆಯ ಮಾಡಿ ಕೋರಿದ್ದು ಇತ್ತು ನೀಡಿ ಕ್ರೂರಮಾನವರೊಳಗೆ ಆಡಿ ವಾರಿಜನಾಭ ನಿನ್ನ ಆರಾಧನೆಯ ಮರೆದು ಧಾರಿಣೀ ಭಾರದೆ ಪರಲೋಕ ಮರೆದೆ 2 ಭೂಸುರರು ಚಂಡಾಲ ಜಾತಿಯೆನ್ನದೆ ಬಲು ಹೇಸಿಕಿಲ್ಲದೆ ತಿರುಗುವೆ ಪರಿ ವೇಷವನು ಧರಿಸಿ ಮೆರೆದೇ ಆಶೆಯುಳ್ಳ ಮಹಪಿಶಾಚಿಗೊಳಗಾಗಿ ಹರಿ ದಾಸ ಸಹವಾಸ ಜರೆದೆ ವಾಸುಕೀಶಯನ ವಸುದೇವತನಯನೆ ನಿನ್ನ ದಾಸನೆನ್ನಿಸದೆ ಅಪಹಾಸ ಮಾನವನಾದೆ 3 ಹರಿದಾಸರ ಬಳಿ ಅರಘಳಿಗೆ ಕೂತರೆ ಶಿರವ್ಯಾಧಿಯೆಂದೇಳುವೇ ದುರುಳ ದುರ್ವಾರ್ತೆಗಳ ಪೇಳಲು ಹಸಿವು ತೃಷೆ ಮರೆದು ಲಾಲಿಸಿ ಕೇಳುವೆ ತರುಣಿ ಮಕ್ಕಳು ಎನ್ನ ಪರಿಪರಿ ಬೈದರೆ ಪರಮ ಹರುಷವ ತಾಳುವೆ ಗುರುಹಿರಿಯರೊಂದುತ್ತರವನಾಡಲು ಕೇಳಿ ಧರಿಸಲಾರದೆ ನಾನು ಮತ್ಸರಿಪೆನವರೊಡನೇ 4 ನಾ ಮಾಡಿದಪರಾಧ ಎಣಿಸಿ ಬರೆದರೆ ಈ ಭೂಮಂಡಲವು ಸಾಲದಿಹುದೊ ಕ್ಷಮೆಯೊಳಗುಳ್ಳ ದುರ್ಮತಿ ಕೂಡಿಡಲು ಈ ಮತಿಯ ಅದು ಪೋಲದು ಹೋಮ ಜಪತಪಗಳನು ಎಷ್ಟು ಮಾಡಲು ಪಾಪ ಸ್ತೋಮ ಎಂದಿಗು ಪೋಗದೊ ಸಾಮಜವರದ ಜಗನ್ನಾಥ ವಿಠಲ ನಿನ್ನ ಕಾಣಿ 5
--------------
ಜಗನ್ನಾಥದಾಸರು
ತಿಳಿವುದನ್ನಮಯ ಕೋಶಗಳನು ಇಳೆಯೊಳಚ್ಯುತನ ದಾಸರು ನಿತ್ಯದಲಿ ಪ ಮೇದಿನಿ ಸಲಿಲನ್ನಮಯ ವಿಹಾಯಸ ವಾಯು ಮುಖ್ಯಪ್ರಾಣ ಮನೋಮಯಕೆ ಆದುದು ಮನ ಅಹಂಕಾರ ವಿಜ್ಞಾನಮಯ ವೇದ್ಯ ತತ್ತ್ವಾನಂದ ಮಯಕೆ ಅವ್ಯಕ್ತವನು1 ಕೃತಿ ಸಂಕರು ವಾಸುದೇವ ಮಾಯಾ ಘನ ಸುಲಕ್ಷಣ ಲಕ್ಷ್ಮೀ ನಾರಾಯಣರು ಮುಖ್ಯ ರೆನಿಸುವರು ಪಂಚಕೋಶದಲಿ ಎಂದೆಂದೂ 2 ಪ್ರಾಣಾಪಾನ ವ್ಯಾನೋದಾನ ಸಮಾನ ಪಂ ಚಾನಿಲರೂ ಅಲ್ಲಿಹರು ಮತ್ತು ದಾನವಾದಿಗಳಿಹರು ಭೂತ ಮಾತ್ರ ಕರ್ಮ ಜ್ಞಾನೇಂದ್ರಿಯಗಳು ತನ್ನಿಷ್ಟವಾಗಿಹವಲ್ಲಿ 3 ಅಬುಜ ಭವಾಂಡ ಪಿಂಡಾಂಡಕ್ಕೆ ಈ ತತ್ತ್ವ ಒಂಬತ್ತು ಆವರಣವೆಂದೆನಿಪವು ಕಂಬುಪಾಣಿಯ ರೂಪ ಲಕ್ಷ್ಮೀ ರೂಪವು ಪಂಚ ಇಂಬುಗೊಂಡಿಹವು ಚಿಂತಿಪುದು ಭೂಸುರರು 4 ಭೂಶನೇಶ್ವರ ವರುಣ ಸುರನದಿಗಳನ್ನಮಯ ಕೋಶದೊಳಗಿರುತಿಹರು ಪ್ರಾಣಮಯದಿ ಮೇಷವಾಹನ ಪ್ರವಹವಾಯು ಪ್ರಾವಹಿ ಮಹಾ ಕಾಶಾಧಿಪತಿ ಗಣಪರಧಿಪರೆಂದೆನಿಸುವರು 5 ಕಾಮೇಂದ್ರ ಶಿವ ರತೀಂದ್ರಾಣಿ ಪಾರ್ವತಿ ಮುಖ್ಯ ಈ ಮನೋಮಯಕಧಿಪರೆನಿಸುತಿಹರು ತಾಮರಸಭವ ವಾಯು ವಾಣಿ ಭಾರತಿ ಮುಖ್ಯ ಸ್ವಾಮಿಗಳೆನಿಸುವರು ವಿಜ್ಞಾನಕೋಶದಲಿ 6 ಆನಂದಮಯ ಕೋಶಕಭಿಮಾನಿ ಶ್ರೀನಿವಾಸನು ಪಂಚರೂಪಾತ್ಮಕಾ ಈ ನಿರ್ಜರರೊಳಿದ್ದು ತತ್ತದಾಹ್ವಯನಾಗಿ ಪಾನೀಯಜಾಂಡದೊಳಿಪ್ಪ ಕರುಣೀ 7 ಪೃಥಿವಿ ಗಂಧ ಘ್ರಾಣೋಪಸ್ಥಪ್ಪುರ ಸಂಜೀವಾ ಪ್ರಥಮ ಕೋಶದಿ ವಾಯು ಅಷ್ಟತತ್ತ್ವ ದ್ವಿತೀಯ ಕೋಶದಿ ತೇಜರೂಪ ಚಕ್ಷುಪಾದ ಪ್ರಥಮಾಂಗ ಸ್ಪರ್ಶ ತ್ವಕು ಪಾಣಿ ತತ್ವಗಳಿಹವು 8 ಆಕಾಶ ಶಬ್ದ ಶ್ರೋತ್ರವು ಪಿಂತೆ ಪೇಳ್ದಷ್ಟು ವಾಕು ಪ್ರಾಣಾದಿ ತತ್ತ್ವ ದ್ವಾದಶ ಕಾಮ ಶ್ರೀ ಕಂಠ ತತ್ವ ಮನ ಮನೋಮಯದಿ ವಿಜ್ಞಾನ ಕಮಲ ಭವ ನಂದ ಮಯತೆ ಅವ್ಯಕ್ತವನು 9 ಸ್ಥೂಲ ದೇಹಕೆ ಇನಿತು ಲಿಂಗ ತನುವಿನಲಿ ತತ್ತ ್ವ ಜಾಲ ಸೂಕ್ಷ್ಮಗಳಿಹವು ಗುಣ ಭೇದದಿ ಪೇಳುವೆನು ಅವ್ಯಕ್ತ ಮಹದಹಂಕಾರ ಮನ ಮೇಳೈಸಿಹವು ಸತ್ವಪರಿ ಭೇದದಲಿ 10 ರಜೋಪರಿಚ್ಛೇದದಲಿ ಜ್ಞಾನ ಕರ್ಮೇಂದ್ರಿಯವು ರಜನೀ ಗುಣದ ಮಾತ್ರ ಭೂತ ಇಹವು ಯಜಿಸು ಈ ತತ್ತ್ವ ಮಾನಿ ದಿವಿಜರನರಿತು ವೃಜಿನವರ್ಜಿತನಾಗಿ ಸುಪದವೈದುವಿ ಮನುಜ11 ಭೂಮ್ಯಭ್ರನ್ನ ಮಯನಳನೀಳಾಗಸ ಪ್ರಾಣ ಮಯ ಮ ನೋಮಯ ಮಹಾ ಅವ್ಯಕ್ತ ಸಮ್ಯಗಾನಂದ ವಿಜ್ಞಾನಮಯನೆನಿಸಿ ಗುರು ಸಮೀರನೊಳಗಿದ್ದು ಪಾಲಿಸುವ ಜಗವಾ 12 ಪಂಚಕೋಶದ ವಿವರ ತಿಳಿದ ಮಹಾತ್ಮರಿಗೆ ಕಿಂಚಿತಾದರು ದೋಷ ಬರಲರಿಯದು ಮಾರ್ಗಣ ಪಿತ ಜಗನ್ನಾಥ ವಿಠಲನು ಸಂಚತಾಗಾಮಿ ಕರ್ಮಗಳ ಫಲ ಬಿಡಿಸುವನು 13
--------------
ಜಗನ್ನಾಥದಾಸರು
ತುತಿಸಬಲ್ಲೆನೆ ನಾ ನಿನ್ನೆ ವೆಂಕಟರನ್ನ ಪ ಪತಿ ನಿನ್ನ ಬ್ರಹ್ಮ ಪಾ ರ್ವತಿ ಪತ್ಯಾದ್ಯಳವಡದುತುಳ ಮಹಿಮೆಗಳ ಅ.ಪ. ನಮಿಪ ಜನರ ಕಲ್ಪದ್ರುಮ ದುಷ್ಟದಾನವ ದಮನ ದಿವಿಜಕುಲೋತ್ತಮ ಲಕ್ಷ್ಮೀ ಪವನಾದಿ ಸುಮನಸಾರ್ಚಿತ ಪಾದಕಮಲ ಯುಗ್ಮನೆ ಅನು ಕಾಯ ಹೃ ತ್ತಿಮಿರ ಭಾಸ್ಕರ ಶ್ರೀ ಭೂರಮಣ ಸರ್ವಗ ಸದಾ ಗಮವೇದ್ಯ ವೇದವ್ಯಾಸ ಕಪಿಲ ದತ್ತ ಕುಮುದಾಪ್ತ ಕೋಟಿ ಭಾಸಾ ತದ್ಭಕ್ತರ ಸಮುದಾಯಕೀಯೋ ಲೇಸಾ ಆನತ ಬಂಧು ಸುಮುಖ ಸುಲಭನೆಂದಾ ನಮಿಪೆ ಎನ್ನರಸಾ 1 ಘನಮಹಿಮನೆ ವೃಂದಾವನವಾಸಿ ಸ್ವಪ್ರಯೋ ಜನವಿವರ್ಜಿತ ಗೋವರ್ಧನಧಾರಿ ಗೋ ಗೋಪೀ ಜನ ಮನೋರಂಜನ ಜನಕಜಾರಮಣ ಪೂ ತನಿ ಪ್ರಾಣಾಂತಕ ವೇದವಿನುತ ಶ್ರೀ ವತ್ಸಲಾಂ ಕೌಸ್ತುಭ ಮಣಿ ವೈಜಯಂತೀ ಸ ದ್ವನ ಮಾಲಾಂಚಿತ ಕಂಧರಾ ಸತ್ಕಲ್ಯಾಣ ಗುಣ ಜ್ಞಾನಾತ್ಮಕ ಶರೀರಾ ಸಂತತ ನಿಷ್ಕಿಂ ಚನ ಭಕ್ತಜನಮಂದಾರಾ ವಂದಿಸುವೆ ಮ ನ್ಮನದಲಿ ನಿಲಿಸೋ ಕರುಣಾ ಪಾರಾವಾರಾ 2 ಕವಿಭಿರೀಡಿತ ಪುಣ್ಯ ಶ್ರವಣ ಕೀರ್ತನ ಮತ್ಸ್ಯಾ ದ್ಯವತಾರಂತರ್ಯಾಮಿ ಪ್ರವಿವಿಕ್ತ ಭುಗ್ವಿಭು ಭುವನ ನಿಧಿಯ ಪೆತ್ತ ಸವನ ತ್ರಯಾಹ್ವಯ ಶಿವರೂಪಿ ಶಿವದ ಭೂರ್ಭೂವಸ್ವಸ್ಥ ಸ್ವಶ ಭಾ ರ್ಗವ ನಿನ್ನೊಳಿಪ್ಪ ದಾನವನ ಸಂಹರಿಸುವ ನೆವದಿಂದ ದಾಶರಥೀ ಸಂಗಡ ಯುದ್ಧ ತವಕದಿ ಮಾಡಿ ಭೀತಿ ಬಟ್ಟವನಂತೆ ಅವನಿಗೆ ತೋರ್ದ ರೀತಿ ವರ್ಣಿಸಲಿನ್ನು ಪವನಮುಖಾದ್ಯರಿಗವಶ ನಿನ್ನಯ ಖ್ಯಾತಿ3 ಗತಶೋಕ ಗಾಯಿತ್ರಿ ಪ್ರತಿಪಾದ್ಯ ತತ್ವಾಧಿ ಪತಿಗಳೆನಿಸುವ ದೇವತೆಗಳೊಳಗಿದ್ದು ಮಾ ರುತನಿಂದ ಒಡಗೂಡಿ ಪ್ರತಿದೇಹಗಳಲಿ ಯೋ ಗ್ಯತೆಯನರಿತು ಕರ್ಮಗತಿಗಳನೀವೆ ಸಾಂ ಪ್ರತ ಬೇಡಿಕೊಂಬೆ ಆನತರ ಸಂತೈಸೆಂದು ಪ್ರಥಮಾಂಗ ಪ್ರಿಯ ಸತ್ತಮ ಸೌಭಾಗ್ಯ ಸಂ ಭೃತಸಾರ ಸರ್ವೋತ್ತಮ ನೀನೆ ಪಾಂಡು ಸುತರಾದ ಧರ್ಮ ಭೀಮಾ ಪಾರ್ಥರ ಕಾಯ್ದೆ ಪ್ರತಿಗಾಣೆ ನಿನಗೆ ಸಂತತ ಪರಂಧಾಮಾ 4 ಕಲಿ ಮುಖ್ಯ ದೈತ್ಯ ಗಂಟಲಗಾಣ ಗುರುತಮ ಬಲಿಬಂಧಮೋಚಕ ಸುಲಭ ಚೆತ್ಸುಖದಾಯಿ ಫಲ ಚತುಷ್ಟಯನಾಮ ಫಲಸಾರ ಭೋಕ್ತø ಶಂ ಬಲನಾಗಿ ಭಕತರ ಸಲಹುವ ಕರುಣಿ ಶಂ ಫಲಿಪುರವಾಸಿ ಬಾಂಬೊಳೆಯ ಜನಕ ಲಕ್ಷ್ಮೀ ನಿಲಯ ನಿರ್ಗತ ದುರಿತಾ ಮನ್ಮನದ ಚಂ ಚಲವ ಬಿಡಿಸೋ ನಿರುತಾ ಬೇಡಿಕೊಂಬೆ ತಲೆ ಬಾಗಿ ಸರ್ವಗತಾ ನೀನಹುದೆಂದು ತಿಳಿಸೋ ತೀವ್ರದಿ ಮುಪ್ಪೊಳಲುರಿಗನ ತಾತಾ 5 ಉದಿತ ಭಾಸ್ಕರನಂತೆ ಸುದತೇರಿಂದೊಡಗೂಡಿ ಉದರ ನಾಮಕ ನೀನು ಉದರದೊಳಿದ್ದೆನ್ನ ಉದಕಗಳಿಗೆ ನಿತ್ಯಾಸ್ಪದನಾಗಿ ಜೀವರ ಹೃದಯದೊಳಿರುತಿಪ್ಪೆ ಸದಸದ್ವಿಲಕ್ಷಣಾ ವಿಧಿಭವ ಶಕ್ರಾದಿ ತ್ರ್ರಿದಶರೊಂದಿತ ಪಾದ ಬದಿಗನಾಗಿರಲು ಪಾಪ ಕರ್ಮಗಳು ಬಂ ದೊದಗುವುವೇನೋ ಶ್ರೀ ಪಾ ಬಿನ್ನೈಸುವೆ ಬುಧ ಜನರಂತಸ್ತಾಪಾ ಕಳೆದು ನಿತ್ಯ ಬೆದರದಂದದಲಿ ಮಾಳ್ಪುದು ದೋಷ ನಿರ್ಲೇಪಾ 6 ಪಣಿಗಣ್ಣ ಸ್ವರದಿಂದಾಗ್ರಣಿಯಾದ ದುಷ್ಟ ರಾ ವಣನ ಬಾಹುಬಲ ಗಣಿಸಿದೆ ನಿಶಿತ ಮಾ ರ್ಗಣದಿ ಸದೆದು ವಿಭೀಷಣಗೆ ನೀ ಲಂಕಾಪ ಟ್ಟಣ ಭೋಗ ತತ್ಕಾಲ ಉಣಲಿತ್ತು ಭಕ್ತಗೆ ಪ್ರಣತ ಕಾಮದನೆಂಬೋ ಗುಣ ನಿನ್ನಲ್ಲಿದ್ದ ಕಾ ರÀಣದಿ ಪ್ರಾರ್ಥಿಸುವೆ ನಿನ್ನಾ ದಾಸರೊಳು ಗಣಿಸು ನೀ ದಯದಿ ಎನ್ನಾ ತಪ್ಪುಗಳ ನೀ ನೆಣಿಸಲಾಗದು ಪ್ರಸಾನ್ನಾ ಪಾಲಕನೆ ಕುಂ ಭಿಣಿಸುರರನು ಕಾಯೊ ಕ್ಷಣಾ ಲಕ್ಷ್ಮನಣ್ಣಾ 7 ಬಿಸಜ ಸಂಭವನ ನಿರ್ಮಿಸಿ ನಾಭಿಕಮಲದಿ ಸಶರೀರದೊಳು ಸುಮನಸರ ಪಡೆದು ನಿನ್ನಾ ಪೆಸರಿಟ್ಟು ಅವರವರೊಶನಾದೋಪಾದಿ ತೋ ರಿಸಿದಿ ನೀ ಸ್ವಾತಂತ್ಯ ಅಸಮನೆಸಿಕೊಂಡು ಬಸಿರೊಳಗಿಟ್ಟು ಪೊಂಬಸರಾದಿ ಸುರರ ಪಾ ಲಿಸುವಿ ನೀ ಪ್ರತಿ ಕಲ್ಪದಿ ನರಕ ಸ್ವರ್ಗ ವಸುಮತಿ ಯಮ ಲೋಕದಿ ನರಕ ಸ್ವರ್ಗ ವಸುಮತಿ ಯಮ ಲೋಕದಿ ವಾಸಿಸುತ ರ ಕ್ಕಸರನಂಧಂತಮದಿ ದಣಿಸುತಿಪ್ಪ ಪ್ರಸವಿತ್ತ ನಾಮ ವಂದಿಸುವೆ ಪ್ರಮೋದೀ 8 ಆಪದ್ಭಾಂಧವ ಬಹುರೂಪಾ ರುಕ್ಮಿಣೀಶಾ ತಾಪಸ ಜನರ ಹೃತ್ತಾಪದರ ಧರ್ಮ ಸುಜನ ಲೋ ಕೋಪಕಾರಕ ಧರ್ಮ ವ್ಯೂಪ ಊಧ್ರ್ವಗ ನಿರ್ಗು ಣೋಪಾಸಕರ ಸಲಹಲೋಸುಗದಿ ಸ ಲ್ಲಾಪದಿ ಬಹ ಕಲಹಾ ಮನ್ನಿಸೋ ಭವಾ ಕೂಪಾರ ನಾವಿಕ ಭೂಪತಿ ವರಹಾ 9 ಕೂರ್ಮ ಕ್ರೋಡ ವಪುಷ ಹಿರಣ್ಯಕ ಶಿಪುವಿನ ಸೀಳ್ದ ಕಾಶ್ಯಪಿಯಾಚಿಕನೆ ದುಷ್ಟ ನೃಪರ ಸಂಹರಿಸಿದ ಕಪಿವರ ಪೂಜಿತ ದ್ರುಪದಾತ್ಮಜೆಯ ಕಾಯ್ದ ತ್ರಿಪುರಾರಿ ಕಲಿಮುಖ್ಯ ರುಪಟಳ ಬಿಡಿಸಿದ ಕೃಪಣವತ್ಸಲ ಕಲ್ಕಿ ಅಮಿತ ರೂಪಾತ್ಮಕ ಸುಫಲ ಚಿತ್ಸುಖ ಭರಿತಾ ತ್ರೈ ಲೋಕಕ್ಕೆ ಪ್ರಪಿತಾಮಹನೆ ನಿರುತಾ ಪ್ರಾರ್ಥಿಸುವೆ ನಿ ನ್ನಪರೋಕ್ಷವಿತ್ತು ಪಾಲಿಪುದೆಮ್ಮ ಸ್ವರತಾ 10 ವಟಪತ್ರಶಯನ ವೆಂಕಟಗಿರಿ ನಿಲಯ ನಿ ಷ್ಕುಟಿಲ ದುರ್ವಿಷಯ ಲಂಪಟವ ಸದೆದು ನಿನ್ನ ಭಟಜನರಿಗೆ ಧರ್ಮ ಘಟಕನಾಗುವೆ ನಿತ್ಯ ವಟುರೂಪಿ ಎಡಪಾದಂಗುಟದಿ ಅಬ್ಬಜಾಂಡ ಕಟಾಹ ಭೇದಿಸಿ ದೇವ ತಟನೀಯ ಪಡಿಯೋ ಧೂ ರ್ಜಟಿ ತಲೆಯೊಳು ಧರಿಸಿ ನಿನ್ನ ನಾಮ ಪರಿಸುತ್ತ ಸತಿಗೆರಸಿ ಕುಣಿದನೆಂದು ತ್ಕಟದಿ ಕೈಗಳ ಬಾರಿಸಿ ಜಗನ್ನಾಥ ವಿಠಲ ಸರ್ವೋತ್ತಮ ದಿಟನೆಂದುದ್ಫಟಸೀ11
--------------
ಜಗನ್ನಾಥದಾಸರು