ಒಟ್ಟು 144 ಕಡೆಗಳಲ್ಲಿ , 56 ದಾಸರು , 141 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾರಜನಕನ ಮಾರಿ ನೋಡುತಸುಖವ ಸೂರೆಗೊಂಡರೆನೀರೆ ದ್ವಾರಕಾಪುರದವರು ಪ. ದಟ್ಟಾದ ಬೀದಿಯಲಿ ಪಟ್ಟಾವಳಿಯ ಜವಳಿ ಇಟ್ಟು ಮಾರುವರು ಕಡೆಯಿಲ್ಲಇಟ್ಟು ಮಾರುವರು ಕಡೆಯಿಲ್ಲದ್ವಾರಕಾಶೆಟ್ಟರ ಭಾಗ್ಯ ಸರಿಗಾಣಿ1 ಅಚ್ಚ ಜರತಾರಿ ಹೆಚ್ಚಿನ ಜವಳಿಯಚಿತ್ರದ ಮಲ್ಲಿಗೆ ನಡುವಿಟ್ಟಚಿತ್ರದ ಮಲ್ಲಿಗೆ ನಡುವಿಟ್ಟು ಅಲ್ಲಲ್ಲಿಹಚ್ಚಿ ಮಾರುವವರು ಕಡೆಯಿಲ್ಲ 2 ಜವಳಿ ಅಂಗಡಿ ಮುಂದೆ ಹವಳಗಾರರು ಅಲ್ಲಿ ಕೊಳ್ಳುವ ನಾರಿಯರು ಕಡೆಯಿಲ್ಲ ಕೊಳ್ಳುವ ನಾರಿಯರು ಕಡೆಯಿಲ್ಲ ದ್ವಾರಕಾಕಳೆಯ ವರ್ಣಿಸಲು ವಶವಲ್ಲ 3 ಕಂಚು ಹಿತ್ತಾಳೆ ಮಾರುವ ಕಂಚುಗಾರರಂಗಡಿಸಂಚಿತವಾದ ನವಧಾನ್ಯಸಂಚಿತವಾದ ನವಧಾನ್ಯ ಅಲ್ಲಲ್ಲಿಹಚ್ಚಿಮಾರುವವರು ಕಡೆಯಿಲ್ಲ4 ರಂಗ ರಾಮೇಶನ ನಗರೀಲೆ ಬಂಗಾರ ಬೆಳ್ಳಿ ಬೆಲೆ ಮಾಡಿಬಂಗಾರ ಬೆಳ್ಳಿ ಬೆಲೆ ಮಾಡಿ ಮಾರುವ ರಂಗದುಟಿಯವರುಕಡೆಯಿಲ್ಲ 5
--------------
ಗಲಗಲಿಅವ್ವನವರು
ಮುದದಿ ನಕ್ರನ ಕೊಂದು ಸಲಹಿದ ಸದುಭಕುತರ ಬಂಧು 1 ನಾರಿಯು ತನ್ನ ಕರೆದಾ ಮಾತ್ರದಿ ಸೀರೆಯ ಮಳೆಗರೆದಾ ಕ್ರೂರ ಖಳರ ಮುರಿದಾ ಪಾಂಡವ- ರಾರಣ್ಯದಿ ಪೊರೆದಾ ನಾರಗೆ ಅಜಮಿಳ ನಾರಾಯಣನೆನೆ ಪಾರುಗಾಣಿಸಿದಪಾರಗುಣನಿಧಿಯಾ 2 ಒಂದು ಬಾರಿಗೆ ಶ್ರೀಶನ ನೆನೆದರೆ ದುರಿತ ನಾಶಾ ಬೆಂದದ್ದು ಬಹುಪಾಶಾ ಅವಗಿ- ನ್ನೆಂದಿಗಿಲ್ಲವೊ ಕ್ಲೇಶಾ ತಂದೆ ಕದರಂಡಲಗಿ ಹನುಮಯ್ಯನೊಡೆಯ ಗೋ- ವಿಂದನ ನೆನೆದವರೆಂದಿಗು ಧನ್ಯರು 3
--------------
ಕದರುಂಡಲಗಿ ಹನುಮಯ್ಯ
ಮೃಡ ನೀನಾದೆನಡುವೆ ಜಡನಾದೆನ್ನ ಮೃಡನ ಮಾಡಯ್ಯ 1ತನುವೆರಡರೊಳಗಿರುವ ತತ್ವ ಗಣವೆನಿಸುವದುತನುಗಣಕೆ ನೀ ಸ್ವಾ'ುಯಾಗಿರಲು ಬಳಿಕಜನರೆಲ್ಲ ನಿನ್ನಡಿಯ ತನು'ನಲಿ 'ಘ್ನಗಳಕೊನೆಗಂಡು ಮನದಭೀಷ್ಟವ ಪಡೆಯುತಿಹರು 2'ಘ್ನೇಶನೆಂಬೊಂದು ಪದಕೆ ವರ್ಣತ್ರಯವು'ಘ್ನವೆಂಬೆರಡು ವರ್ಣದಿ ಜ್ಞಾನವೊಂದು'ಘ್ನಹತಿಯದಕೀಶ 'ಘ್ನೇಶ ನೀನೆ ನಿರ್'ಘ್ನದಿಂ ಜ್ಞಾನವನು ಕೊನೆಗಾಣಿಸಯ್ಯ 3ಮೊದಲ ವರ್ಣವೆ ಸಾಕ್ಷಿಯದರ ಕಡೆಯದು ಮಾಯೆುದಕೊಡೆಯನೆನುತಿಹುದು ಮೂರನೆಯ ವರ್ಣಅದರಿಂದ ಕರಣಪ್ರೇರಕನೆಂಬ ಹದನಾಗಿವೊದಗಿದುದು 'ಘ್ನೇಶನೆಂಬ ನಿನ್ನ ನಾಮ 4ಪರಮಾತ್ಮ ನೀನೆಂದು ನೆರೆ ತಿಳಿದು ನಿನ್ನಡಿಗೆಎರಗಿದೆನು ವ್ಯವಹಾರ ದೆಸೆುಂದಲೀಗತಿರುಪತಿಯ ವೆಂಕಟನೆ ವರದ ಗಣಪತಿಯೆಂದುಮೆರೆಯುತಿಹೆ ರಾಮೇಶನಾಲಯಾವಾಸ 5
--------------
ತಿಮ್ಮಪ್ಪದಾಸರು
ಯಾಕೆ ಮೈದೋರೆ ಗುರುರಾಯಾ | ನಮ್ಮ | ಸಾಕಿಸಲಹುವಾ ಮಹಿಪತಿ ಭಕ್ತ ಪ್ರೀಯಾ ಪ ಶರಣರುಪಚಾರ ಭಕುತಿಯ ಮನಿಲಿ ಸಿಲುಕಿದೆಯೋ | ದುರಿತ ಪರಿಹರಿಸಲಿಕ್ಕೆ ತೊಡಗಿದೆಯೋ | ಬೋಧ ಕೇಳಿಸಿದೆಯೋ ಪೂರ್ವ | ಜರ ಮುಕುತಿಗಾಣಿಸಲು ಹೋಗಿ ಆಲಿಸಿದೆಯೊ 1 ಕಂಗೆಡುತಲಿವೇ ನಿಮ್ಮ ಕಾಣದೀ ನಯನಗಳು | ಭಂಗು ಬಡುತಿವೇ ನುಡಿಯ ಕೇಳದೆ ಶ್ರವಣಗಳು | ಅಂಗ ಸಂಗಕ ಸಿರಕರಗಳು ಮರುಗಿ \ ಮುಂಗಾಣ ವೆದೆಗೆಟ್ಟು ಕರಣ ವೃತ್ತಿಗಳು 2 ಮಂದ ಭಾಗ್ಯರಿಗೆ ನಿಧಾನ ಮರಿಯಾದಂತೆ | ಇಂದು ಮಾಡಲಿ ಬ್ಯಾಡಾ ನ್ಯೂ ನಾರಿಸುದುಚಿತವೇ | ನಂದನರ ಸಲಹು ದಯದಿಂದ ಮೋದಲಂತೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಕ್ಷಿಸು ಎನ್ನನು ಪಕ್ಷಿವಾಹನ ಪಾಂಡು ಪಕ್ಷನೆ ತವ ಭಕ್ತಿಯಗಲಿಸದೆ ಲಕ್ಷಿಸಿ ಧ್ರುವನೊರೆದೆ ಲಕ್ಷ್ಮೀಶ ಮರೆಹೋದೆ ಪ ಕ್ಷಿತಿಯೊಳು ನಾಂ ಬಲು ಚತುರನೆನಿಪದು ರ್ಮತಿಯಿಂದ ಕಷ್ಟಕ್ಕೆ ಗುರಿಯಾದೆ ರತಿಪತಿಪಿತ ಎನ್ನ ಅತಿತಪ್ಪು ಮನ್ನಿಸಿ ಗತಿಗಾಣಿಸಿತ್ವಾಕ್ಯ ಅಖಿಲೇಶ ಯತಿನುತ ಸುರಪೋಷ ಹತಭವ ಗುಣಕೋಶ 1 ಮಂದಮತಿಯತನದಿಂದ ನಾ ಮಾಡಿದ ಹಿಂದಿನ ಅವಗುಣವೆಣಿಸದೆ ಪಾದ ಎಂದೆಂದು ಮರೆಯದೆ ಬಂಧುರಭಕ್ತಿಯ ವರ ನೀಡೊ ಕಂದನೊಳ್ದಯಮಾಡೊ ತಂದೆ ನೀ ಕಾಪಾಡೊ 2 ದುರುಲನೆನಿಸಿ ಬಲು ಧರಣಿಯೊಳ್ತಿರುಗುವ ಮರುಳುಗುಣವನೆನ್ನದೀಡ್ಯಾಡೊ ಹರಿಯ ದಾಸರ ಸಂಗ ಕರುಣದಿ ದೊರಕಿಸಿ ಪರಿಶುದ್ಧ ಮಾಡೆನ್ನ ಹೇಯ ಜನುಮ ಶರಣಜನರ ಪ್ರೇಮ ಕರುಣಿಯೆ ಶ್ರೀರಾಮ 3
--------------
ರಾಮದಾಸರು
ರಾಘವೇಂದ್ರ ತೀರ್ಥರು ಕರುಣಿಗಳೊಳಗೆಣೆಗಾಣಿ ನಾ ನಿನಗೆ ಸ ದ್ಗುರುವರ ರಾ‌ಘವೇಂದ್ರ ಚರಣ ಕಮಲಯುಗ ಮೊರೆಹೊಕ್ಕವರ ಮನದ ಹರಕೆಯ ನಿರುತ ಈವೆ ನೀ ಕಾವೆ ಪ ರಾಘವೇಂದ್ರ ಗುರುವೆ ನೀ ಗತಿ ಎಂದನು ರಾಗದಿಂದಲಿ ಭಜಿಪ ಭಾಗವತರ ದುರಿತೌಘಗಳಳಿದು ಚ ನ್ನಾಗಿ ಸಂತೈಸುವೆ ನೀ ಸನ್ಮೌನಿ 1 ಸುಧೀಂದ್ರ ಯತಿಕರ ಪದುಮ ಸಂಭವ ಮಧು ವದ ಪಾದಾಂಬುಜ ಮಧುಪಾ ತ್ರಿದಶ ಭೂರುಹದಂತೆ ಬುಧ ಜನರೀಪ್ಸಿತ ಒದಗಿ ಪಾಲಿಸಿ ಪೊರೆವೆ ಮದ್ಗುರುವೆ 2 ಕುಧರದೇವನ ದಿವ್ಯರದನದಿ ಜನಿಸಿದ ನದಿಯ ತೀರದಿ ಶೋಭಿಪ ಸದಮಲ ಘನಮಂತ್ರ ಸದನನಿಲಯ ಜಿತ ಮದನ ಶ್ರೀ ಜಗನ್ನಾಥ ವಿಠಲದೂತ 3
--------------
ಜಗನ್ನಾಥದಾಸರು
ರಾಘವೇಂದ್ರರು ಸುಂದರ ಗುರು ರಾಘವೇಂದ್ರರೆಂತೆಂಬುವೋ ಕರ್ಮಂದಿಗಳರಸನೆ ವಂದಿಸುವೆ ಪ ಸನ್ನುತ ಮಹಿಮರೆಂದು ನಾ ಬೇಡುವೆ ಅ.ಪ. ಪರಮ ಕರುಣೀ ನಿಜ ಚರಣ ಸೇವಕರನ್ನು ಉದ್ಧರಿಸುತಲನುದಿನ ಪೊರೆವನೆಂದೂಕರವ ಪಿಡಿದು ತ್ವರ ಪರಿಪರಿಯಲಿ ನಿನ್ನಾತಪೊರೆಯುವೆ ಕೈ ಪಿಡಿಯೆಂದು ಕರೆಯುವೆಧರೆಯೊಳಗೆ ನಿಮ್ಮಯ ಸರಿ ಧ್ವರೆಗಳ ಕಾಣೆ ಮ-ದ್ಗುರುವೆ ಯನ್ನಂಥ ಪಾಮರ ನರನ ಕಾಯೋದು ನಿಮಗಾಶ್ಚರ್ಯವೇವರಯೋಗಿವರ್ಯನೆ ನಿರುತ ಬೃಂದಾವನದಿ ರಾಜಿಪೊಮೆರೆವ ಮಂಗಳ ಚರಣ ತವಪದಸ್ಮರಿಪೆ ಸಂತತ ನೀಡು ತ್ವರಿತದಿಹರುಷದಲಿ ನಿರ್ಜರರ ತರುವೆ 1 ಪಾದ ಚಾರು ಭೂರಿ ಕಿಟೀತಜಧೀರ ನಿನ್ನನು ಸಾರಿದವರನು ಪಾರುಗಾಣಿಪನೆಂದು ಡಂಗುರಸಾರುತಲಿದೆಯದು ವೀರಸಲಿಸೊ 2 ಏಸೇಸು ಜನ್ಮದಿ ಕ್ಲೇಶವನನುಭವಿಸಿಘಾಸಿ ಮಾಡೆನೊ ಮನದಾಶೆಯಿಂದಾಹೇಸಿ ವಿಷಯಂಗಳು ಲೇಸುತಿಳಿದು ಮರೆಮೋಸಾದಿ ದುಷ್ಟರ ಸಹವಾಸದಿ ಸೇರಿದೆಮಂದಹಾಸಾದಿ ಸಂತೈಸು ರವಿ ಸಂಕಾಶಜನಹೃದೋಷ ಸಾಗರದಿಕಾಷಾಯವಸನ ಭೂಷಿತಾಂಗ ವ್ಯಾಸಮುನಿ ಭರದೀಗಜರಾಮಪುರದೀಶ ಮುಖರಿಗೆ ತೋಷ ನೀ ಗರದಿಈ ಸಮಯ ಸ್ತುತಿಸುವೆನುಶ್ರೀ ಸಮೀರ ಮತಾಬ್ಧಿ ಚಂದಿರಈಶಗೆದುರ ರತೀಶ ಸನ್ನುತಶ್ರೀಶ ಗುರು ಇಂದಿರೇಶನಂಘ್ರಿಗೆದಾಸ್ಯ ಭಾವ ರಹಸ್ಯ ತೋರಿದೆ 3
--------------
ಗುರುಇಂದಿರೇಶರು
ಲಕ್ಷ್ಮೀ ದೇವಿ ಕಾದಿರುವಳು ರುಕ್ಮಿಣಿ ಕೃಷ್ಣ ಬರುವನೆಂದು ಪ. ಕರವ ಪಿಡಿವನೆಂದು ಅ.ಪ. ವಿಪ್ರನ್ನ ಕಳುಹಿರುವೆನು ಕ್ಷಿಪ್ರದೊಳು ಗುಡಿಯೊಳಿಹೆನು ಅಪ್ರಮೇಯ ನಿನ್ನಡಿಗಳನ್ನು ಸುಪ್ರಕಾಶ ನಂಬಿರುವೆನೆಂದು 1 ಶಿಶುಪಾಲನೊಲ್ಲೆನೆಂದು ವಸುಧೀಶ ನೀನೆ ಗತಿಯೆಂದು ಹಸುಳೇಯ ಸಲಹು ಎಂದು ಬೆಸಸಿಹೆನು ಪತ್ರವೆಂದು 2 ರಥವೇರಿ ಬರುತಲಿಹನೊ ಪಥದೊಳು ಕಾದಿರುವನೊ ರತಿಪತೀ ಪಿತನ ಪದವ ಅತಿಶಯದಲಿ ಕಾಣುವ ತವಕದಿ 3 ಶಂಕಾತುರಂಗಳಿಂದ ಶಂಕರೀಯಪೂಜೆಗೈದು ಕಿಂಕಿಣಿಯ ನಾದದಿಂದ ಶಂಕರಾದಿವಂದ್ಯ ಬರುವ ಪಥದಿ ಬಂದು 4 ಬಂದಾನೋ ಬಾರನೋ ಎನುತಾ ಇಂದಿರೆಯ ಅರಸನ್ಹೊರತು ಪೊಂದಲಾರೆನನ್ಯರನೆನುತ ಸುಂದರೀಮಣಿ ಕೃಷ್ಣನಾಗಮ ನೋಡುತ 5 ದ್ವಾರಕಿಯಾ ನಾಥ ಬಂದು ಪಾರುಗಾಣಿಸುವನೆಂದು ಚಾರುಕರದೊಳೆತ್ತಿ ಎನ್ನ ದ್ವಾರಕೆಗೊಯ್ವ ಶ್ರೀ ಶ್ರೀನಿವಾಸನೆಂದು 6
--------------
ಸರಸ್ವತಿ ಬಾಯಿ
ಲಕ್ಷ್ಮೀರಮಣನೆ ರಕ್ಷಿಸೆನ್ನನು ಅಧೋಕ್ಷಜ ಹರಿ ಪ ಮಂದ ಬಿಡಿಸಿ ಸಲಹೋ ದೇವ ಇಂದು ಮುಂದು ಎನಗೆ ನೀ ಗತಿ ಎಂದು ನಂಬಿದೆ ಮಂದರಧರ ಗೋವಿಂದ ಮುಕುಂದ1 ಗರುಡಗಮನ ವಾಸುದೇವ ನಿರುತ ನಿನ್ನ ಭಜಿಪ ಭಕ್ತರ ಸ್ಮರಣೆ ಪಾಲಿಸೊ ಪರಮಪುರುಷ ಹರಿ ಶರಧಿಶಯನ2 ದೇಶದೇಶ ತಿರುಗಿ ಬಹಳ ಬೇಸರದಲೆ ಬಳಲಿದವರ ಕ್ಲೇಶಗಳನೆ ಕಳೆದು ಪರಮೋಲ್ಲಾಸ ನೀಡಿದ ಸಾಸಿರನಾಮದ ಒಡೆಯನೆ ವೆಂಕಟ 3 ಕ್ಷೀರವಾರಿಧಿ ಶಯನದೇವ ಮಾರಪಿತ ಮಹಾನುಭಾವ ಶರಧಿ ಪಾರುಗಾಣಿಸೋ ಪರಿಸರ ನೊಡೆಯನÉ ಉರಗಶಯನ 4 ಶಂಖು ಚಕ್ರಧಾರಿ ಶ್ರೀಹರಿ ಪಂಕಜಾಕ್ಷರೊಳು ವಿಹಾರಿ ಶೌರಿ ಶಂಕರಾನುತ ಪಂಕಜಲೋಚನ ವೆಂಕಟರಮಣ 5 ಕಪಟ ಸೂತ್ರಧಾರಿ ಚಪಲ ಬುದ್ಧಿಯ ಬಿಡಿಸೊ ಶೌರೀ ಅಪರಿಮಿತ ಮಹಿಮೆಗಳ ತೋರಿ ನಟಿಸಿ ಮೆರೆವ ಸಟೆಯಲ್ಲವೊ ನಾರದ ಮುನಿ ಸೇವಿತ 6 ಕಮಲಾಪತೆ ಪ್ರಿಯ ಜೀಯ ಕಮಲಸಂಭವ ಜನಕದೇವ ಕಮಲನಾಭ ವಿಠ್ಠಲ ಕಾಯೋ ಶ್ರಮವ ಹರಿಸೊಸುಮನಸರೊಡೆಯನೆ ಸುರಮುನಿ ಸೇವಿತ 7
--------------
ನಿಡಗುರುಕಿ ಜೀವೂಬಾಯಿ
ವಂದಿಪೆ ನಿನಗೆ ಗಣನಾಥ ಮೊದಲೊಂದಿಪೆ ನಿನಗೆ ಗಣನಾಥ ಪ ಬಂದ ವಿಘ್ನ ಕಳೆ ಗಣನಾಥ ಅ.ಪ. ಸಿಂಧುರವದನರವಿಂದ ನಯನ ಘನ ಸುಂದರ ಸತಿಯರ ಮಂದಿರ ನಿಲಯನೆ 1 ಹೂಡಿದ ಆಟಕೆ ಮಾಡಿದ ಯೋಚನೆ ಕಡೆಗಾಣಿಸು ಘಟ್ಟಿಕಾಣಿಕೆ ಕೊಡುವೆ 2 ಮಂಗಳಾಂಗ ಮಹಮಾದಗಮನಿಯಳ ತಂದು ತೋರೋ ತಂದೆವರದಗೋಪಾಲವಿಠ್ಠಲಪ್ರಿಯ 3
--------------
ತಂದೆವರದಗೋಪಾಲವಿಠಲರು
ವೇಣುಧರ ವಿಠಲಾ | ನೀನೆ ಪೊರೆ ಇವಳಾ ಪ ಕಾಣೆ ನಿನ್ಹೊರತು ಕಾ | ರುಣ್ಯ ಮೂರುತಿಯೆ ಅ.ಪ. ಸ್ವಾಪದಲಿ ಗುರುರೂಪ | ರೂಪ ಸಮ್ಮುಖದಲ್ಲಿಗೋಪಕೃಷ್ಣಾಕೃತಿಯ | ಪಡೆದಿಹಳು ಇವಳುಶ್ರೀಪತಿಯೆ ನಿನ್ನೊಲಿಮೆ | ಆಪಾರವಿರುತಿರಲುಪ್ರಾಪಿಸುತ ಅಂಕಿತವ | ಒಪ್ಪಿಸಿಹೆ ನಿನಗೇ 1 ಪಥ ತೋರೋ ಹರಿಯೇ2 ಪತಿ ಸುತನೆ | ಕಾರುಣ್ಯ ತೋರಿ ಆ-ಪಾರ ದುಷ್ಕರ್ಮಗಳ | ಪಾರಗಾಣಿಪುದೋ |ಮಾರುತನ ಮತದಲ್ಲಿ | ಧೀರೆ ಎಂದೆನಿಸಿ ಸಂ-ಸಾರ ಸಾಗರವನ್ನು | ದಾಟಿಸೋ ಹರಿಯೇ 3 ಸೃಷ್ಟಿ ಸ್ಥಿತಿ ಲಯ ಕರ್ತ | ಕೃಷ್ಣಮಾರುತಿ ದೇವಅಷ್ಟಸೌಭಾಗ್ಯಗಳ | ಕೊಟ್ಟು ಕಾಪಾಡೋವಿಷ್ಟರಶ್ರವ ಹರಿಯೆ | ನಿಷ್ಠೆ ಆಚಾರದಲಿಕೊಟ್ಟು ಕೈಪಿಡಿ ಇವಳ | ಜಿಷ್ಣುಸಖ ಹರಿಯೇ 4 ಸರ್ವದಾ ತವ ಮಹಿಮೆ | ಶ್ರವಣ ಸುಖ ಸಾಧನವಹವಣೀಸಿ ತವನಾಮ | ವಜ್ರಾಂಗಿ ತೊಡಿಸೀಭವವನುತ್ತರಿಸತ್ಕಿ | ಬಿನೈಪೆ ಶ್ರೀ ಹರಿಯೆಸರ್ವ ಸುಂದರ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಶಾರದಾವರ ಪ ಸಾರಿ ಸಂನ್ನುತಿಪ್ಪಾ | ವರವ ನೀಯೆನ್ನಪ್ಪಾ ಅ.ಪ ಪರ ಕಷ್ಟ ಪರಿಸೊ | ಇಷ್ಟಾರ್ಥ ಪಾಲಿಸೊ 1 ಭಾರವೊಪ್ಪಿಸಿದೆನು | ಪಾರಗಾಣಿಸಿದನು 2 ಮರೆಯ ಹೊಕ್ಕೆನೂ | ವರಕವಿತ್ವವನ್ನೂ | ಮೆರೆಯಿಸಿ ಇರಿಸೆನ್ನಾ ಸತ್ಕೀರ್ತಿ | ಸ್ಥಿರ ಸದಾನಂದಾರ್ತಿ 3
--------------
ಸದಾನಂದರು
ಶಿಶುಗಳಪರಾಧಕೆ ಶಿಕ್ಷೆ ಕಣ್ಣೀಲಲ್ಲದೇ ಯಶವ ಬಡಿಗೋಲವನು ಎತ್ತುವರೇ ರಂಗಾ ಪ ಇಲಿಗೆ ಹೆಬ್ಬುಲಿಯಾಕೆ|ಮೊಲಕೆ ಮದಗಜವ್ಯಾಕೆ| ಕಳೆತ ಹಣ್ಣಿಗೆ ಮತ್ತೆ ಕರಗಸ್ಯಾಕೆ| ಕಲೆ ಬಿದ್ದ ಕನ್ನಡಿಗೆ ಗುದ್ದಲಿಯ ತರಲೇಕೆ| ಗುಳಲಿ ಕಾಯಿಗೆ ಹೊತ್ತಗಲ್ಲ ವ್ಯಾಕೆ 1 ಹಳ್ಳಗೆ ಹಡಗವ್ಯಾಕೆ|ಕೊಳ್ಳಿಗೆ ಕೊಡ ಜಲವ್ಯಾಕೆ| ಮುಳ್ಳು ಮುರಿದುದಕ ಮೊನೆ ಹಾರಿ ಯಾಕೆ| ಮಲ್ಲಿಗೆ ಹೋವಿಗೆ ಬಂಧ ಹಗ್ಗದಲ್ಯಾಕೆ| ಹಲ್ಲಿ ಬೆದರಿಸೆ ಹೊಡೆವ ಭೇರಿಯಾಕೆ 2 ಜ್ಞಾನಹೀನರ ನಮ್ಮ ತಪ್ಪನೆಣಿಸಿದುರಿತ| ಮೊನೆಗಾಣಿಸುತ ಬನ್ನಿ ಬಡಿಸುವುದುಚಿತವೇ| ದೀನವತ್ಸಲ ತಂದೆ ಮಹಿಪತಿ ಸುತ ಪ್ರಭುವೇ| ನ್ಯೂನಾರಿಸದೇ ನಿನ್ನವನೆಂದು ಸಲಹೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ವೆಂಕಟೇಶ ಎನ್ನ ಸಲಹಲ್ಯಾಕೆ ಬಳಲುವೆ ಪ ದುರಿತ ಪರಿಹರಿಸೊ ಬಂದು ತಾಪವನ್ನು ಬಿಡಿಸೊ ಮಂದ ಬುದ್ದಿಯನ್ನೆ ಕೆಡಿಸೊ ಮದನನಯ್ಯ ಮಮತೆ - ಇಂದು ಎನ್ನ ಮಾತ ಲಾಲಿಸೊ ತಂದೆ ಕುಂದು ಎಣಿಸದೆನ್ನ ಪಾಲಿಸೊ 1 ನಕ್ರನ ಬಾಧೆಯೊಳಗೆ ಸಿಳುಕಿ ಗಜವು ನರಳುತಿರಲು ತ್ರಿ- ವಿಕ್ರಮನೆ ಸಲಹೊಯೆಂದು ಕರೆಯಲಾಗ ನಕ್ರನ ಚಕ್ರದಿಂದ ಹೊಡೆದು ಕೆಡಹಿದೆ ಆ ಗಜಕೆ ಬಂದ ವಕ್ರವನ್ನು ಬಿಡಿಸಿ ಸಲಹಿದೆ ಎನ್ನ ಮನದ ವಕ್ರವನ್ನು ಬಿಡಿಸಲಾಗದೆ 2 ತರಳ ಧ್ರುವನು ತನ್ನ ಪಿತನ ತೊಡೆಯ ಮ್ಯಾಲೆ ಬಂದು ಕುಳ್ಳಿರೆ ತರವೆ ನಿನಗೆ ಎಂದು ಸುರುಚಿ ತವಕದಿಂದ ಎಳೆಯಲವನ ಸ್ಥಿರಪದವಿಯಿತ್ತೆ ಕರುಣದಿ ನಾನು ನಿನ್ನ ಸ್ಮರಣೆಗೈವೆದಿವ್ಯನಾಮವ 3 ಆರು ಸಲಹುವರು ಎನ್ನ ಪಾರುಗಾಣಿಸುವರ ಕಾಣೆ ಸೇರಿದೆನೊ ಶೇಷಶಯನ ಶ್ರೀನಿವಾಸ ಎನ್ನನು ಸೇರಿತಲ್ಲವೆ ಬೇರೆ ವಿಚಾರವಿಲ್ಲದೆ ನಿನ್ನ ನಂಬಿದೆ 4 ದುಷ್ಟ ದನುಜರನ್ನು ಮುರಿದು ಧಾರುಣಿಯೊಳು ಇರುವೆ ಎನ್ನ ಕಷ್ಟವ ಬಿಡಿಸಿ ಕಾಯೊ ಕಮಲನಾಭ ಹೆಳವನ ಕಟ್ಟೆವಾಸ ವೆಂಕಟೇಶನೆ ಸಕಲ ಭಾರ ಸುಜನಪಾಲನೆ 5
--------------
ಹೆಳವನಕಟ್ಟೆ ಗಿರಿಯಮ್ಮ
ಶ್ರೀನಾಥ ವಿಠಲ ಹರಿ | ನೀನೆ ಪೊರೆ ಇವನಾ ಪ ಮಾನನಿಧಿ ಮಧ್ವಾಖ್ಯ | ವಂದಿತ ಸಂಚರಣಾ ಅ.ಪ. ಯೋನಿ ಆನೇಕದಲಿ | ಜನುಮಗಳ ತಾಪೊತ್ತುಮೌನಿ ಜನ ಸಂಯೋಗ | ಸತ್ಸಂಗಗಳ ಪಡೆದೂಧ್ಯಾನ ಸಾಧನಕಾಗಿ | ಮೌನಿರಾಯರ ಸೇವೆಸಾನುರಾಗದಿ ಗೈಯ್ಯೆ | ಶ್ರೀನಾಥ ಒಲಿದೇ 1 ದಾಸ ಸತ್ಪಂಥಾನು | ವಾಸಿಪೆನು ಎಂದೆನುತವಿೂೀಸಲದ ಸನ್ಮನದಿ | ಪ್ರಾರ್ಥಿಸುತ್ತಿಹಗೇಲೇಸು ತೈಜಸನಾಜ್ಞೆ | ಪೋಷಿಸುತ ವಿಠಲನ ಸಸೂಸಿ ಸೇವಿಸಿ ಇತ್ತೆ | ಅಂಕಿತವನಿವಗೇ 2 ಮಾರಾರಿ ಸದ್ವಿನುತ | ತಾರತಮ್ಯವ ತಿಳಿಸಿಮಾರೆರಡು ಭೇಧಗಳ | ಅರಹುತಲಿ ಇವಗೇಪಾರಗಾಣಿಸು ಭವವ | ನೀರೋಜೋದ್ಭವನಯ್ಯಕಾರುಣಿಕ ಶ್ರೀಹರಿಯೆ | ಕಾರುಣ್ಯ ಮೂರ್ತೇ 3 ಸಖನಾಗಿ ಇವನಲ್ಲಿ | ಸುಖ ಕವನ ಪೇಳಿಸುತ ಪ್ರಕಟ ಗೈ ತವರೂಪ | ನಿಕಟ ಹೃದ್ಗುಹದೀವಿಖನಸಾಂಡದ ಓಡೆಯ | ಸಕಲ ಪ್ರೇರಕ ನಿನ್ನಅಕುಟಿಲದೆ ಮನದಿಂದ | ಪ್ರಾರ್ಥಿಸುವೆ ಹರಿಯೇ 4 ಸಿರಿ ಭೂಮಿ ರಮಣನೇಅರಹಲೇನಿಹುದಿನ್ನು | ಸರ್ವಜ್ಞ ಮಾರ್ತೇಕರುಣ ದೃಷ್ಟಿಲಿ ನೋಡಿ | ಪರಿಹರಿಸೊ ದುಷ್ಕರ್ಮಹರಿಯೆ ಗುರು ಗೋವಿಂದ | ವಿಠಲ ಮಾರುತಿಯೆ 5
--------------
ಗುರುಗೋವಿಂದವಿಠಲರು