ಒಟ್ಟು 304 ಕಡೆಗಳಲ್ಲಿ , 77 ದಾಸರು , 265 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಮಿಸುವೆನು ವ್ಯಾಸಾರ್ಯ | ಸುಮನಸರಿಗತಿ ಪ್ರೀಯ ವಿಮಲಕೀರ್ತಿ ಸುಶಯ್ಯ ಯತಿವರಾರ್ಯ ಪ ಅಮಮ ನಿಮ್ಮಯ ಕೀರ್ತಿ ಪೊಗಳಲಳವೇ ಎನಗೆಸುಮನಸ ಮುನಿಯನುಗ್ರಹೀತಾ - ಖ್ಯಾತಾ ಅ.ಪ. ಕನಕ ಕಶ್ಯಿಪು ಸುತನೆ | ಧನಕನಕ ತೃಣಗಣನೆಅಣು ಘನನ ಶ್ರೀ ಚರಣ | ವನಜ ಭ್ರಮರಾ |ಮನುಜಮೃಗ ವೇಷ | ಶ್ರೀ ನರಹರಿಯ ಮೂರ್ತಿಯನುಘನವಾದ ಸ್ತಂಭದೊಳು | ಕರೆದು ತೋರಿಸಿದೇ 1 ಮತ್ತೆ ನೀ ತ್ರೇತೆಯಲಿ | ಹತ್ತು ತಲೆ ರಾವಣನಭ್ರಾತೃವಾಗವತರಿಸಿ | ಕೀರ್ತಿಯಲಿ ಮೆರೆದೇ |ಭೃತ್ಯ ಭಾವದಿ ನಮಿಸಿ | ಸತ್ಯಾತ್ಮ ಶ್ರೀಹರಿಯವಿಸ್ತರದ ಕೀರ್ತಿಯಲಿ | ಲಂಕ ಪತ್ತನವಾಳ್ದ 2 ನರಪ ಪ್ರತೀಪನಾ | ಪರಸೂನು ವೆಂದೆನಿಸಿ ಕುರುಪತಿಯ ಋಣಸೇವೆ | ಸರಿಯಾಗಿ ಸಲಿಸೀ |ಮರುತಾತ್ಮ ಭೀಮನಿಂ | ವರವನೇ ಪಡೆಯುತ್ತವರ ಕಲೀಯಲಿಯತಿ | ವರನೆನಿಸಿ ಮೆರೆದೇ 3 ಬ್ರಹ್ಮಣ್ಯಯತಿ ಕರಜ | ಬ್ರಹ್ಮ ಬ್ರಾಹ್ಮಣ ಪ್ರೀಯಬ್ರಹ್ಮಣ್ಯ ಪ್ರೀಯ ಸು | ಬ್ರಹ್ಮಣ್ಯನಾವೇಶನೇ |ಬ್ರಹ್ಮಾಸ್ಮಿ ಎಂದೆನಿಪ | ಬ್ರಹ್ಮದ್ವೇಷಿಯ ನಿಕರಬ್ರಹ್ಮಾಂಡದಲಿ ತರಿದೇ | ಬ್ರಾಹ್ಮಣರ ಪೊರೆದೇ 4 ಭಾಗವತ ಪ್ರೀಯ 5
--------------
ಗುರುಗೋವಿಂದವಿಠಲರು
ನರಹರಿ ತೀರ್ಥಯತಿವರ್ಯ ಇಷ್ಟೆಂದೊ ಚರಿಯ ಪ ಸುರವಿನುತ ಪದಹರುಷತೀರ್ಥರ ಕರಕಮಲ ಸಂಜಾತರೆನಿಸುತ ಧರೆಯೊಳಗೆ ಸಿರಿಸಹಿತರಾ ಮನ ಕರೆದು ಧರೆಸುರ ಜನಕೆ ತೋರಿದ ಅ.ಪ ಚರಿಸುತ ಬರಲು ಗಜಪುರದಿ ಪುರ- ದರಸನಿಲ್ಲದಿರೆ ಯೋಚಿಸುತ ಕರಿಕರದಿ ವರಮಾಲಿಕೆಯ ಕೊಡಲಾಕ್ಷಣದೀ ಯತಿ ವರರ ಕಂಠದಲಿ ಹಾಕಲು ಜನ ಸಭದಿ ಪುರಜನದ ಪ್ರಾರ್ಥನದಿ ದ್ವಾದಶ ವರುಷ ಪ್ರಜರನು ಪೊರೆದು ಕೋಶದೊಳಿ- ರುವ ಧರಿಜಾಸಹಿತ ರಾಮನ ತರಿಸಿ ಪೊರಟರು ಕುದುರೆಯೇರುತ1 ಆ ಮಹಾಮುನಿಪರು ತ್ವರದಿ ಬಂದು ಶ್ರೀ ಮದಾನಂದ ತೀರ್ಥರ ಪದಯುಗದಿ ಪ್ರೇಮವಂದನ ಪೂರ್ವಕದಿ ಸೀತಾ ರಾಮಮೂರ್ತಿಯ ನೊಪ್ಪಿಸಿದರು ಕರದೀ ಶ್ರೀ ಮನೋಹರ ನಂಘ್ರಿಯುಗಲವ ಪ್ರೇಮದಿಂದಲಿ ಪೂಜಿಸುತಲಿರೆ ಈ ಮಹಾತ್ಮರ ಕರೆದು ಕೊಟ್ಟರು ನೇಮದಿಂದರ್ಚಿಸಿರಿ ಎನುತಲಿ 2 ಭಾಸುರ ಹೇಮಮಂಟಪದಿ ನಿತ್ಯಾ ಶ್ರೀಸೀತಾರಾಮನರ್ಚಿಪರು ವೈಭವದೀ ಭೂಸುರ ಕೃತ ವೇದಘೋಷದಿ ಮತ್ತೆ ವ್ಯಾಸಸೂತ್ರಗಳ ನಾಮಾವಳಿ ಪಠಣ ದಿ ದೇಶ ದೇಶಗಳಲ್ಲಿ ಚರಿಸುತ ತೋಷತೀರ್ಥರ ಮತವ ಬೋಧಿಸಿ ಸಿರಿ ನರ ಕೇಸರಿಗೆ ಪ್ರಿಯದಾಸರೆನಿಸಿದ 3
--------------
ಕಾರ್ಪರ ನರಹರಿದಾಸರು
ನಾಗವೇಣಿಯೆ ಕರೆದು ತಾರೆ ನಾಗಶಯನನಾ ಪ ನಗಧರ ಪ್ರಿಯನೆನಿಪ ನಾಗವರದನಾ ಅ.ಪ ಜಲವಪೊಕ್ಕು ತಮ ನಲಿದ ಜಲರುಹಾಕ್ಷನಾ ಜಲಧಿ ಮಥನವನ್ನು ಗೈದ ಚೆಲುವರರಸನಾ 1 ಧರಣಿಪೊಯ್ದ ಖಳನ ಸೀಳ್ದ ನಳಿನನಾಭನಾ ಭರದಿ ಹೊಳೆವ ಕಂಬದಲ್ಲಿ ತರಳಗೊಲಿದನಾ 2 ಧರಣಿ ಈರಡಿಯ ಮಾಡಿ ಸುರರ ಪೊರೆದನಾ ಧರಣಿಪಾಲಕುಲವ ತರಿದ ಪರಶುರಾಮನಾ 3 ಧರಣಿಸುತೆಯನೊಯ್ದ ಖಳನ ಶಿರವನರಿದನಾ ತರಳತನದಿ ವೊರಳನೆಳೆದ ತರಳ ಕೃಷ್ಣನಾ 4 ತರುಣಿಯರ ವ್ರತವನಳಿದು ಪುರವಗೆಲಿದನಾ ಹರುಷದಿಂದ ತುರಗವೇರಿ ನಲಿವ ಸುಗುಣನಾ 5 ಸುರಪುರದಿ ನಲಿವಿನಿಂದ ನೆರೆದು ನಿಂದನಾ ಶರಣರಕ್ಷ ಲಕ್ಷ್ಮಿಯರಸ ಪರಮಪುರುಷನಾ 6
--------------
ಕವಿ ಲಕ್ಷ್ಮೀಶ
ನಾರಾಯಣ ಎನ್ನಿರೊ ನರಹರಿ ನಾರಾಯಣ ಎನ್ನಿರೊ ಪ. ನಾರದ ವಂದಿತ ನಗೆಮೊಗ ಚನ್ನಿಗ ಅ.ಪ. ಆದಿ ಪ್ರಹ್ಲಾದನ ಮೋದದಿ ಪೊರೆದನ ಸಾಧಿಸಿ ಅಂತ್ಯದಿ ಅಜಮಿಳನಂತೆ 1 ಕರುಣವ ಬೀರುತ ಕರೆದು ಮಾರುತಿಯನ್ನು ಶರಣನ ಮಾಡಿದ ನಿರುತ ಶ್ರೀರಾಮನ 2 ಮುದ್ದು ಭೀಮಾರ್ಜುನರಲ್ಲಿದ್ದು ರಣದೊಳಾಗ ತಿದ್ದಿ ತಾ ಹೃದಯದೊಳಗಿದ್ದ ಶ್ರೀ ಕೃಷ್ಣರನ್ನ 3 ಮಧ್ವಮುನಿಯೊಳಗಿದ್ದ ಮನ ಮಧ್ವಮತವ ಗೆದ್ದ ಮುದ್ದು ಮಧ್ವಪತಿಯ ನೀವು 4 ಅಖಿಳಾಂಡನಾಯಕ ಸಖನಾದ ಪಾಂಡವರಿಗೆ ನಿಖಿಳಲೋಕದ ಪ್ರಿಯ ಭಕ್ತರ ಸಖನಾಗುವ ಶ್ರೀ ಶ್ರೀನಿವಾಸನೆಂದು 5
--------------
ಸರಸ್ವತಿ ಬಾಯಿ
ನಿಂದಾಸ್ತುತಿಗಳು ಎನ್ನ ಕೈಬಿಡುವೆಯೇನೋ ಪ ನಿನ್ನ ನಂಬಿದೆನಯ್ಯ ಭಕ್ತವತ್ಸಲನೆಂದು ಭಾರ ನಿನಗಿರೆ ಅ.ಪ ತಾಪಸಿಯಂತೆ ನಿನ್ನ ವಕ್ಷವನೊದ್ದು ತಾಪವನು ತೋರ್ಪಿದೆನೇನೋ ಗೋಪಿಯಂದದೆ ನಿನ್ನ ಒರಳಿಗೆ ಬಿಗಿದೆನೇ ಭೂಪ ಶಿಶುಪಾಲನಂದದೆ ಬೈದೆನೇ [ಚಾಪವಿಟ್ಟು] ಭೀಷ್ಮನಂದದೆ ಕಾದಿಪೆನೇನೋ ಶ್ರೀಪತಿ ನೀನೆನ್ನ ದೂರ ಮಾಡುವೆಯಲ್ಲ 1 ಜಾರಚೋರನು ನೀನೆಂದು ಯಶೋದಗೆ ದೂರು ಹೇಳದೆನೇ ಕೌರವನಂತೆ ಕಂಬಕೆ ಕಟ್ಟಿರೆಂದೆನೆ ಸಾರಿದೆನೇನೋ ಸತ್ರಾಜಿತನಂತೆ ಚಾರುರತ್ನವ ಕದ್ದ ಅಪರಾಧಿ ನೀನೆಂದು ಆ ರುಕ್ಮನಂತೆ ನಾರಿಚೋರನೆಂದೆನೆ 2 ಪುರುಹೂತನಂತೆ ನಾನು ಮಳೆಯಕರೆದು ಗಿರಿಯನ್ನು ಹೊರಿಸಿದೆನೇ ಧರಣಿಯ ಬಲಿ[ಯಿಂದ ಬೇಡುತಲಿರುವಾಗ ವರಮುನಿಯಂತೆ ಕಿಂಡಿಯ ಮುಚ್ಚಿದೆನೆ] ನರನಂತೆ ರಥವ ನಡಸೆಂದು ಹೇಳಿದೆನೇನೋ ಉರಗನಂತೆ ಕಟ್ಟಿದೆನೇ ಮಾಂಗಿರಿರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಿನಗೇನಾಯಚ್ಚರಿಲ್ಲೋ|ಕೇಳಾತ್ಮಾ| ಪಾದ ಭಕುತಿಯ ತೊರೆದಿಪ ನಾನಾ ಯೋನಿಯಲಿ ತೊಳಲಿ | ಭವದು:ಖ | ಕಾನನದಲಿ ಬಳಲಿ | ಮಾನವ ಜನುಮ ಬಂದು ಹರಿ ಹರಿ1 ವಿಷಯ ಸುಖವ ಬೆರೆದು | ಬೇಕಾದ | ಸ್ವಸುಖವನೆಗಳದು | ಅಶನ ವ್ಯಸನದಲಿ ಪಶುವಿನ ಪರಿಯಲಿ | ನಿಶಿದಿನವನುಗಳೆದೇ ಹರಿ ಹರಿ2 ಸಾಧು ಸಂಗಕತ್ಯಗಳೀ | ಕುಜನರಾ | ಹಾದಿಯಿಂದಲಿ ಮರಳೀ | ಸಾದರ ವಿವೇಕ ದೀಪ ಮನೆಯೊಳಿಟ್ಟು | ಸಾಧಿಸೋ ನಿಜ ಘನವಾ ಹರಿ ಹರಿ3 ಅರಗಳಿಗೆಯ ನೋಡಲು ಶ್ರೀಹರಿ | ಸ್ಮರಿಸದೆ ತಾ ನಿರಲು | ಕರೆದು ವಡಿಯ ನಿನ್ನ ತನು ಲೇಶವ ಕೇಳಲು | ತೆರಗಾಣಿ ನುಡಿಗಳಿಗೇ ಹರಿ ಹರಿ4 ಹಿಂದಾದ ಮತಿಗಳಿಯೋ ಇನ್ನಾರೆ | ಪಥ ವರಿಯೋ | ಭವ | ಬಂದಗೆಲಿದು ಸುಖಿಸೋ ಹರಿ ಹರಿ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನ ನಂಬಿದವರ್ಗೆ ನಿನ್ನಂದವೆ ಬಂದುದಿನ್ನೇನಿನ್ನೇನು ಪ್ರಸನ್ನ ರಾಘವ ದಶ'ಧವಾುತೆ'್ಮುರ'ನ್ನೇನಿನ್ನೇನು ಪಕೊರಳು ಗೊ್ಯುಕತೆುಂದ ಕಂಗೆಡುತಿದೆ ಲೋಕ'ನ್ನೇನಿನ್ನೇನುಪರರ ಬಾಧೆಗೆ ಕಲ್ಲುಹೊರುವಾಟ ಒದಗಿದುದಿನ್ನೇನಿನ್ನೇನುಧರೆಯ ಬಗೆದು ಬೆರತಿಂಬ ಕಾಲವು ಬಂದುದಿನ್ನೇನಿನ್ನೇನುಕರುಳ ಬಗೆದು ರಕ್ತಗುಡಿವ ಭಯವು ತೋರಿತಿನ್ನೇನಿನ್ನೇನು 1ದಾನಗೈಯಲು ಸ್ಥಾನ ಹಾನಿಯಾಗುವದಾುತಿನ್ನೇನಿನ್ನೇನುಜ್ಞಾನ ಕುಲದಿ ಪುಟ್ಟ ಕ್ಷಾತ್ರ ಜೀವನ ಬಂದುದಿನ್ನೇನಿನ್ನೇನುಮಾನಿನಿ ದುರುಳನಾಧೀನವಾಗುವದಾುತಿನ್ನೇನಿನ್ನೇನುಸೂನುವ ಪರರೆತ್ತಿಕೊಂಡೊಯ್ವ ತೆರಬಂದುದಿನ್ನೇನಿನ್ನೇನು 2ಉಟ್ಟ ಬಟ್ಟೆಯು ಪೋಪ ಸಮಯ ತಾನೊದಗಿದುದಿನ್ನೇನಿನ್ನೇನುದಿಟ್ಟ 'ಪ್ರರು ರಾವುತರಾಗುವಂತಾುತಿನ್ನೇನಿನ್ನೇನುದಿಟ್ಟಿಸಿ ನೋಡೆ ನೀನೆಮ್ಮನೆನ್ನುವರಾಗದಿನ್ನೇನಿನ್ನೇನುಹುಟ್ಟು ಹೊಂದುಗಳಡಗುವ ಕಾಲ ತಾ ಬಂದುದಿನ್ನೇನಿನ್ನೇನು 3ಕರುಣದಿಂದೀಕ್ಷಿಸಿ ಕಾಯ್ವವ ನೀನಿರಲಿನ್ನೇನಿನ್ನೇನುದುರಿತ ಕೋಟಿಗಳ ದ'ಪುದು ನಿನ್ನಯ ನಾಮ'ನ್ನೇನಿನ್ನೇನುಸ್ಮರಣೆ ಮಾತ್ರದಿ ಧನ್ಯರಹೆವಾವು ಭಯ ಪೋಪುದಿನ್ನೇನಿನ್ನೇನುವರ ವಾರಣಸೀವಾಸದಿಚ್ಛೆ ಪುಟ್ಟಿದುದೆಮಗಿನ್ನೇನಿನ್ನೇನು 4ಕರುಣದಿಂ ಚಿಕ್ಕನಾಗಪುರದಿ ನೀನೆಲಸಿದೆುನ್ನೇನಿನ್ನೇನುಗುರುವಾಸುದೇವಾರ್ಯ ರೂಪುದಾಳಿದೆಯಾಗಿುನ್ನೇನಿನ್ನೇನುಕರೆದು ಜ್ಞಾನಾಮೃತವೊರೆದು ರಕ್ಷಿಸಿದೆ ನೀನಿನ್ನೇನಿನ್ನೇನುಚರ[ಣ ಕಮಲಗಳ ನಂಬಿದೆವು ನಾನಿನ್ನೇನಿನ್ನೇನು] 5
--------------
ತಿಮ್ಮಪ್ಪದಾಸರು
ನೀನೆ ದಯಾನಿಧಿಯು ಶ್ರೀ ಗುರುರಾಯ ನೀನೆ ದಯಾನಿಧಿಯು ಧ್ರುವ ಕರುಣದಿ ಕುಂತಿಯ ಪುತ್ರರಿಗೆ ಒಲಿದು ಕಾಳ ನಿರ್ಮಿಸಿ ಕೌರವರಳಿದು ಉಳಿಯದೆ ಇಳೆಯೊಳು ವಂಶವ ಸವರಿದ ಶೇಷಶಯನ ಶ್ರೀ ಕೇಶವ ನೀನೆ 1 ನರಗೊಲಿದು ನರಕಾಸುರನ ಮರ್ದಿಸಿ ನಾರಗನೆಂದಜಮಿಳನ ನೀ ತಾರಿಸಿ ನಾರದಗೊಲಿದು ನಾಟ್ಯವನಾಡಿದ ನರಹರಿಯು ನಾರಾಯಣ ನೀನೆ 2 ವೇದವ ಕದ್ದೊಯಿದಸುರನ ಸೀಳಿ ಮಚ್ಛವತಾರದ ರೂಪವ ತಾಳಿ ಮಾವನ ಕೊಂದ ಮಾನ್ಯರ ಮಡುಹಿದ ಮಾಧವ ನೀನೆ 3 ಗೋಕುಲದಲಿ ಪುಟ್ಟಿ ಧರೆಯೊಳು ಬೆರಳಲಿ ಗೋವರ್ಧನ ಗಿರಿಯನೆತ್ತಿ ಗೋಕುಲ ಕಾಯ್ದಿ ಗೋಪಿಯರಿಗೊಲಿದ ಗೋಪಾಲಕೃಷ್ಣ ಗೋವಿಂದನು ನೀನೆ4 ಸೃಷ್ಟಿನೆಲ್ಲ ಬೆನ್ನಿಲಿ ತಾಳಿದ ಶೇಷನ ಸಂ ಕಷ್ಟವ ಪರಿಹರಿಸಿದ ಶಿಷ್ಟ ವಿಭೀಷಣಗೊಲಿದು ಪಟ್ಟವಗಟ್ಟವು ವಿಷ್ಣವು ನೀನೆ 5 ಮದನನೊಲಿದು ಕಾಳಿಂಗನ ತುಳಿದು ಕದನದಲಿ ಬಾಣಾಸುರನಳಿದು ಮೇದಿನಿಯೊಳು ಮರೆ ಇಲ್ಲದೆ ದೈತ್ಯರ ಮರ್ದಿಸಿದ ಮಧುಸೂದನನು ನೀನೆ 6 ತ್ರಿಪುರವನಳಿದು ತ್ರಿಗುಣವ ತಾಳಿದ ತೆತ್ತೀಸ ಕೋಟಿ ದೇವರುಗಳಿಗಾಳಿದ ಅಕ್ರೂರಗೊಲಿದು ಚರಿತ್ರವದೋರಿದ ತ್ರಿಜಗಪತಿ ತ್ರಿವಿಕ್ರಮ ನೀನೆ7 ವಾಲಿಯನಳಿದು ವಾಲ್ಮೀಕಿಗೊಲಿದು ಬಲಿಚಕ್ರನ ಮುನಿಮುಂದಲಿ ಸುಳಿದು ಬ್ರಾಹ್ಮಣನಾಗಿ ದಾನವ ಬೇಡಿದ ಮಾನ್ನವಗೊಲಿದ ಶ್ರೀ ವಾಮನ ನೀನೆ 8 ಸೃಷ್ಟಿನೆಲ್ಲ ನಿರ್ಮಿಸಿ ವಕ್ಷ ಸ್ಥಳದಲಿ ಶ್ರೀ ಮಹಾಲಕ್ಷ್ಮಿಯ ಧರಿಸಿದ ಶ್ರೀನಿಧಿ ಶ್ರೀಪತಿ ಶ್ರೀಗುರುಮೂರುತಿ ಶ್ರೀದೇವಿಗೊಲಿದಿಹ ಶ್ರೀಧರ ನೀನೆ 9 ದಾಸರ ಕ್ಲೇಶಕಿಲ್ಮಿಷಗಳ ತೊಳೆದು ಅಂಬರಿಷ ರುಕ್ಮಾಂಗದಗೊಲಿದು ಶುಕ ಶೌನಕ ಪರಾಶರ ಮುನಿಗಳಿಗೆ ಹರುಷನಿತ್ತ ಹೃಷಿಕೇಶನು ನೀನೆ 10 ಕ್ಷಿತಿಯೊಳು ದೃಢ ಪತಿವ್ರತೆಗೊಲಿದು ಯತಿ ಮುನಿಗಳಿಗಿನ್ನು ಗತಿಗಳನಿತ್ತು ಪತಿತರ ತಾರಿಸಿ ಪಾವನಗೈಸಿದ ಪರಂಜ್ಯೋತಿ ಪದ್ಮನಾಭನು ನೀನೆ 11 ದೇವಕಿಗೊಲಿದು ಸ್ಥಾಪಿಸಿ ಧರೆಯೊಳು ದ್ವಾರಕಿಯಲಿ ನಿಜ ಲೀಲೆಯು ತೋರಿದ ದುರಿತ ವಿಧ್ವಂಸನ ದೇವಕಿ ಪುತ್ರ ದಾಮೋದರ ನೀನೆ 12 ಸಿದ್ದ ಶರಣರಿಗೊಲಿದ ಸದ್ಗತಿ ಸುಖಸಾಧನ ಸಹದೇವಗದೋರಿದ ಸಂಭ್ರಮದಿ ಸುಧಾಮಗ ಒಲಿದು ಸಂತೋಷವನಿತ್ತ ಸಂಕರುಷಣ ನೀನೆ 13 ವಸುಧಿಯೊಳು ಭಸ್ಮಾಸುರನ ಮರ್ದಿಸಿ ಭಾಷೆಯನಿತ್ತು ಭಕ್ತರ ಪಾಲಿಸಿ ಋಷಿ ವೇದವ್ಯಾಸಗೊಲಿದಾತನು ವಸುದೇವಸುತ ವಾಸುದೇವನು ನೀನೆ 14 ವಿದುರುದ್ಧವ ಗರುಡಗೊಲಿದು ಭೃಗುಮುನಿ ಕಪಿಲ ಯೋಗೇಂದ್ರನ ಸಲಹಿದ ಸ್ಥಿರಪದವಿತ್ತರೊಂದು ಮಂದಿಗೆ ಪ್ರಸನ್ನವಾದ ಪ್ರದ್ಯುಮ್ನನು ನೀನೆ 15 ಸೀತಾ ಸುದ್ದಿಯ ತಂದವಗೊಲಿದು ಹತ್ತು ತಲೆಗಳ ಇದ್ದವನಳಿದು ಕದ್ದುಬೆಣ್ಣೆಯ ಮುದ್ದೆಯ ಮೆದ್ದು ಉದ್ದವಗೊಲಿದ ಅನಿರುದ್ಧನು ನೀನೆ 16 ಸೋಕಿಸಿ ಪೂತಣಿಯ ಕಾಯವು ಹೀರಿದ ಭಕ್ತ ಪುಂಡಲೀಕನ ಸಲಹಿದ ಭಕ್ತಿಗೆ ಒಲಿದು ಮುಕ್ತಿಯನಿತ್ತ ಪರಮ ಪರುಷ ಪುರುಷೋತ್ತಮನು ನೀನೆ 17 ಅಕ್ಷಯವೆಂದು ರಕ್ಷಿಸಿ ಸಭೆಯೊಳು ದ್ರೌಪದಿ ಕರುಣಕಟಾಕ್ಷದಿ ಸಲಹಿದ ಭಕ್ತವತ್ಸಲನಾಗಿ ಗಜೇಂದ್ರಗೆ ಅಧೋಕ್ಷಜ ನೀನೆ 18 ನರನಾರಿಯು ನಾಂಟೀಶರನಾಗಿ ನಖಮುಖದಲಿ ಹಿರಣ್ಯಕನ ಸೀಳಿ ಭಕ್ತಪ್ರಹ್ಲಾದಗ ಒಲಿದು ಸ್ತಂಭದಿ ಪ್ರಕಟಿಸಿದ ನರಸಿಂಹನು ನೀನೆ 19 ಅನಿಳ ಸ್ನೇಹಿತ ಅಜಗ್ನಾನಗ ಒಲಿದು ಅಹಲ್ಯಾ ಶಾಪ ವಿಮೋಚನ ಮಾಡಿದ ನೆಚ್ಚಿದ ಧ್ರುವನ ನಿಜ ಭಕ್ತಿಗೆ ಒಲಿದು ಅಚಲ ಪದವಿತ್ತುಚ್ಯುತ ನೀನೆ 20 ಜಗದೊಳು ಭಕ್ತಜನರಿಗೆ ಒಲಿದು ಜಾಹ್ನವಿ ನಿರ್ಮಿಸಿ ಜನಕನ ಸಲಹಿದ ಸಾಧು ಸಜ್ಜನ ಮುನಿ ಸಂಜೀವನ ಜಾನಕೀಪತಿ ಜನಾರ್ಧನನು ನೀನೆ 21 ಅಂಗದಗೊಲಿದಾನಂದವನಿತ್ತು ಕುಂದದೆ ಕರೆದುಪಮನ್ಯುನ ಸಲಹಿದ ದಿನಕರ ಚಂದ್ರ ಕಳಿಯಗಳಿತ್ತು ಇಂದ್ರಗೆ ಒಲಿದ ಉಪೇಂದ್ರನು ನೀನೆ 22 ಧರೆಯೊಳು ಭಕ್ತನ ಜನ್ಮವು ಹರಿಸಿ ಹರಿಶ್ಚಂದ್ರನ ಕ್ಲೇಶವು ಪರಿಹರಿಸಿದ ಸುರಮುನಿಗೊಲಿದ ಶ್ರೀ ಹರಿಯು ನೀನೆ 23 ಕಾಳಿ ಮಥನವು ಮಾಡಿ ಕರುಣದಿ ಸುರರಿಗೆ ಅಮೃತವನಿತ್ತು ಸಲಹಿದ ಕಲ್ಕ್ಯಾವತಾರದ ಲೀಲೆಯ ತೋರಿದ ಕಪಟ ನಾಟಕ ಶ್ರೀ ಕೃಷ್ಣನು ನೀನೆ 24 ಸಂಧ್ಯಾನದ ಸಾಹಾಯವನಿತ್ತು ಕಾಯದಿ ಸದ್ಗತಿ ಸಾಧನದೋರಿದ ನರಕೀಟಕ ಮಹಿಪತಿ ತಾರಕ ಗುರುಮೂರ್ತಿಯ ಪರಮ ದಯಾನಿಧಿಯು ನೀನೆ 25
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೀನೆ ಸರ್ವ ಸೂತ್ರಧಾರನು ಪ ಕರ್ತು ನೀನೆ ಆದಿಶಕ್ತಿ ವಸ್ತು ಅ.ಪ ಮೂರು ಗುಣಗಳಲ್ಲಿ ನಿಲ್ಲಿಸಿ|| ಸಾರ ಮೂರು ಆರು ದೋಷದೂರ | ಮೂರು ಸುಖಕ್ಕೈಕ್ಯನೆನಿಸೊ 1 ತರಳ ಧ್ರುವನ ಮನವ ಪರಿಕಿಸಿ | ಮೇಲ್ ಲೋಕವಿತ್ತೆ | ನಿರತ ಭಕ್ತಿ ಪಾಲಿಸಿದ | ದುರಿತಹರನೆ ಶರಣು ಶರಣು 2 ಕರೆದು ಪತ್ನೀಸುತರನಿತ್ತು | ನಿಲದೆ ಮೋಕ್ಷದೊಳಗೆ ಪೊರೆದೆ 3 ಭೋಗದೀಶರಾಗಿ ಸುಖದ | ಸಾಗರದೊಳು ಮೆರೆದರಯ್ಯ 4 ತಂದೆ ಶ್ರೀನಿವಾಸ ನಿನ್ನ | ಮಂದಿರದೊಳೆನ್ನ ಸಲಹೊ 5
--------------
ಸದಾನಂದರು
ನೆರೆನಂಬಿದವನೆ ಧನ್ಯಾ ಈ ಗುರುಪದ ಪ ನೆರೆನಂಬಿದವ ರಘತರಿವ ವೇದವ್ಯಾಸ ಕರ ಪಾದ ಅ.ಪ ವರಮಣಿಯೊಳು ಶಿರಿತನದಿಂದಲ್ಲಿ ಮೆರೆವ ನಾಯ ಕರ ಮಂದಿರದಿ ಜಾತರಾಗಿ ಪರಮ ಮಹಿಮರಾದ ಗುರು ರಘೋತ್ತಮರಿಂದ ಪರವಿದ್ಯೆಯನು ಪೊಂದಿ ಚರಿಸಿ ದಿಗಂತದಿ ವರವೇದ ವ್ಯಾಸರಿಂದ ತುರಿಯಾಶ್ರಮ ಪಡೆದು ಸಚ್ಚಿಷ್ಯರಿಂದÀ ಸಂತತ ಪ್ರವಚನ ಮಾಡುತಲಿ ಆನಂದ ತೀರ್ಥರ ಮತ ಶರಧಿಗೆ ಪೂರ್ಣ ಚಂದಿರನೆನಿ ಪರ ಪದ 1 ಯಾದವಾರ್ಯರಿಗೆ ಅಗಾಧ ಮಹಿಮರು ಈ ಪೂರ್ಣಬೋಧ ಗ್ರಂಥಾರ್ಥ ಗ್ರಂಥಗಳನ್ನು ಟೀಕಾ ಕೃ ಕೌವÀುುದಿಗಳನು ರಚಿಸಿದಂಥಾ ವಾದಿ ಮಾತಂಗ ಮೃಗಾಧಿಪರನ್ನು 2 ಕರೆದು ಶಿಷ್ಯರಿಗೆ ಹರಿ ಪಾದಂಗುಟದಿಂದ ಸುರನದಿಯನು ಸಾಕ್ಷಾ- ತ್ಕರಿಸಿ ತೋರಿಸಿದಂಥ ಗುರು ಕೃಷ್ಣದ್ವೈಪಾಯನ ತೀರ್ಥರಿಗೆ ಘನವಾದ ಮಹಿಮೆಯನಾ ಸುರತರು ಸಮ ಚರಣ 3 ವೃಂದಾವನದೆಡೆ ಒಂದು ಪ್ರದಕ್ಷಿಣಿ ವಂದನೆ ಮಾಡಲು ಮಂದನಾದರು ಪ್ರಾಜ್ಞನೆಂದು ಕರೆಸುವನು ವಂಧ್ಯೆಯಾದರು ಬಹುಕಂದರ ಪಡೆವಳುಸಂದೇಹವ್ಯಾಕಿಲ್ಲಿ ದೂರಮಾಡುತಲಿ ಆ ನಂದವ ಗರಿಯುವರ ಭಕ್ತರ ದುರಿತಾಂಧಕಾರಕ್ಕೆ ರವಿ ಯಂದದಲಿಪ್ಪರ 4 ವರಭೀಮಾತೀರದಿ ಪರಿಶೋಭಿಸುವ ಮಣಿ ಪುರದಿ ಪಂಡಿತ ಭೂಮಿ ಚರಣಾರಾಧಕರನು ಸುಮಂದಿರದಿ ಕುಳಿತು ನಿತ್ಯ ಮೂಲದಲಿ ಮೆರೆವ ಧೇನಿಸುತಿಪ್ಪ ಗುರುವೇದೇಶರ ಶುಭ ಚರಣ ಯುಗಲವ 5
--------------
ಕಾರ್ಪರ ನರಹರಿದಾಸರು
ನೊಂದು ಬಂದೆನೊ ಕಾಂತೇಶ | ಕೈಯನೆ ಪಿಡಿಯೊ ಮಂದಭಾಗ್ಯಳ ಜೀವೇಶ ಪ. ಅಂದು ಶ್ರೀ ರಾಮರ ಸಂದೇಶವನ್ನೆ ಭೂ- ನಿಂದನೆಗೆ ಅರುಹುತಲಿ ಬಹು ಆನಂದಪಡಿಸಿದ ವಾನರೇಶ ಅ.ಪ. ಶೌರಿ | ಭಕ್ತರ ಕಾಯ್ವ ದುರಿತದೂರನೆ ಉದಾರಿ ಚರಣಕ್ಕೆ ನಮಿಸುವೆ ಹರಿಗೆ ಪರಮಾಪ್ತನೆ ದುರಿತ ತರಿಯುತ ಪೊರೆಯೊ ಗುರುವರ ರಾಮಕಿಂಕರ 1 ಗುರುಕರುಣದ ಬಲದಿ | ಅರಿತೆನೊ ನಿನ್ನ ಚರಣ ನಂಬಿದೆ ಮನದಿ ಪರಿ ಭವಕ್ಲೇಶ ಪರಿಯ ಬಣ್ಣಿಸಲಾರೆ ಹರಿವರನೆ ದಯಮಾಡು ಶ್ರೀ ಹರಿ ದರುಶನವನನವರವಿತ್ತು 2 ಕಾಂತನ ಅಗಲಿರಲು | ಚಿಂತೆಯಲಿ ಭೂ ಕಾಂತೆ ವನದೊಳಗಿರಲು ಸಂತೋಷದಿಂ ರಾಮನಂತರಂಗವನರುಹಿ ಸಂತಸವಪಡಿಸುತಲವನಿಸುತೆಯ ನಿಂತೆ ರಾಮರಿಗ್ಹರುಷ ತೋರಿ 3 ದ್ರುಪದ ಸುತೆಯಳ ಕೀಚಕ | ದುರ್ಮನದಲಿ ಅಪಮಾನಪಡಿಸೆ ದುಃಖ ತಪಿಸಿ ನಿನ್ನನು ಬೇಡೆ ಆ ಪತಿವ್ರತೆ ಸತಿ ಕುಪಿತದಿಂದಲಿ ಖಳನ ಕೊಂದೆ ಅಪರಿಮಿತ ಬಲಭೀಮ ಪ್ರೇಮ 4 ಮಿಥ್ಯಾವಾದದ ಭಾಷ್ಯಕೆ | ಸುಜ್ಞಾನಿಗಳ್ ಅತ್ಯಂತ ತಪಿಸುತಿರೆ ವಾತಜನಕನಾಜ್ಞೆ ಪ್ರೀತಿಯಿಂದಲಿ ತಾಳಿ ಘಾತುಕರ ಮತ ಮುರಿದ ಮಧ್ವನೆ ಖ್ಯಾತಿ ಪಡೆದೆÀ ಸಿದ್ಧಾಂತ ಸ್ಥಾಪಿಸಿ 5 ಪ್ರಾಣಪಾನವ್ಯಾನ | ಉದಾನ ಸ ಮಾನ ಭಾರತಿ ಕಾಂತನೆ ಜ್ಞಾನಿಗಳಿಗೆ ಪ್ರೀತ ಜ್ಞಾನ ಭಕ್ತಿಪ್ರದಾತ ದೀನಜನ ಮಂದಾರ ಕಾಯೊ ದೀನಳಾಗಿಹೆ ಕೈಯ ಮುಗಿವೆ 6 ನೋಯಲಾರೆನೊ ಭವದಿ | ಬೇಗನೆ ತೋರೊ ಧ್ಯೇಯ ವಸ್ತುವ ದಯದಿ ವಾಯುನಂದನ ನಿನ್ನ ಪ್ರಿಯದಿಂ ನಂಬಿದೆ ಕಮಲ ದ- ಳಾಯತಾಕ್ಷನ ಮನದಿ ತೋರಿ7 ಹರಣ ನಿನಗೊಪ್ಪಿಸಿದೆ | ಸುರವಂದಿತ ಕರೆದು ಮನ್ನಿಸಿ ಕಾಪಾಡೊ ಸಿರಿವರನನು ಹೃತ್ಸರಸಿಜದಲಿ ತೋರೊ ಧರೆಯ ವಸ್ತುಗಳ್ ಮಮತೆ ತೊರೆಸು ಹರಿಯ ನಾಮಾಮೃತವನುಣಿಸು 8 ಈ ಪರಿಬಂದೆ ಅನಿಲ | ನಿನ್ನೊಳು ವಾಸ ಗೋಪಾಲಕೃಷ್ಣವಿಠ್ಠಲ ಶ್ರೀಪತಿ ಕೃಪೆಯಿಂದ ನೀ ಪ್ರೀತನಾಗುತ ಕೈಪಿಡಿದು ಸಂತೈಸು ಕರುಣದಿ ಭಾಪುರೇ ಕದರುಂಡಲೀಶ 9
--------------
ಅಂಬಾಬಾಯಿ
ನೋಡಯ್ಯ ನಿನ್ನ ದಾಸರ ಮೇಲೆ ಕೃಪೆಗಳನುಮಾಡಯ್ಯ ಮನ್ಮನಕೆ ಸಂತಸವನುತೀಡಯ್ಯ ಭವಭಯದ ಪಾತಕಂಗಳ ದಾನವಾಡ ಗುಡ್ಡದ ತಿರುಮಲೇಶ ಸರ್ವೇಶ ಪ ಆದಿಯಲಿ ವೇದಗಳ ಕದ್ದುಕೊಂಡೊಯ್ದವನಸಾಧನಂಗೆಯ್ವೆನೆಂದಾಕ್ಷಣದೊಳುಪೋದನೆಲ್ಲೆನುತ ಶರನಿಧಿಯೊಳಗೆ ಪೊಕ್ಕ ಮ-ತ್ತಾ ದಿತ್ಯನಂ ಕೊಂದು ತಿಕ್ಕಿಮುಕ್ಕೆನೀ ದಯಾ ಪಾತ್ರನೆಂಬುದ ಕೇಳಿ ನಾನರಿತೆಭೂ ಧರೆಯ ಸುರರ ನೀ ಸಲುಹಲಾಗಪೋದ ನಿಗಮಂಗಳನು ತಂದು ಸಲೆ ರಕ್ಷಿಸಿದೆಆದಿ ಮತ್ಸ್ಯವತಾರ ಶರಣೆಂಬೆನು 1 ಮೂರ್ತಿ ನೀನಂದು ಬೇರೆಸುಮತವನು ಬೆನ್ನಲ್ಲಿ ಸಲೆ ಆತು ರಕ್ಷಿಸಿದೆಕಮಠಮೂರುತಿ ನಿನಗೆ ಶರಣೆಂಬೆನು 2 ಚಿನ್ನಗಣ್ಣವನೆಂಬನೊರ್ವ ಖಳ ಭೂದೇವಿಕನ್ನಿಕೆಯನೊಯ್ಯುತಿರೆ ಕನಲಿ ಮನದಿಇನ್ನು ಅವನನು ಸೆಣಸಿ ಜಯಿಸುವವರನು ಕಾಣೆನೆನ್ನುತಲಿ ರೋಮಗಳನುಬ್ಬೆತ್ತುತತನ್ನ ಮುಂಗೋರೆಗಳ ಮಸೆದೊಡನೆ ರಕ್ಕಸನಬೆನ್ನಟ್ಟಿ ಬರಸೆಳೆದು ಸದೆದೊರಗಿಸಿಚೆನ್ನಾಗಿ ಧರಣಿಯನು ತಂದು ಸಲೆ ರಕ್ಷಿಸಿದೆಹನ್ನೆರಡು ಪೆಸರವನೆ ಶರಣೆಂಬೆನು3 ಹೇಮಕಶ್ಯಪನೆಂಬ ನಾಮಜನ ಸುತನೊರ್ವನಾ ಮಹಾಘನವೆಂದು ನೆನೆಯುತಿರಲುತಾಮಸದ ಖಳ ತನ್ನ ತನುಜನನು ಮಥಿಸುತಿರೆರಾಮನನು ತೋರೆಂದು ಬಾಧಿಸುತಿರೆಧೂಮಜ್ವಾಲೆಗಳೊಡನೆ ಭುಗುಭುಗಿಲು ಛಿಟಿಲೆನುತಆ ಮಹಾ ರಕ್ಕಸನ ಪೊಡೆಯ ಸೀಳಿಪ್ರೇಮದಲಿ ಪ್ರಹ್ಲಾದಗೊಲಿದು ಪಟ್ಟವನಿತ್ತೆಸಾಮಜಾರಿಯ ವದನ ಶರಣೆಂಬೆನು 4 ಬಲಿಯಧ್ವರದ ಸಾಲೆಗೊಂದು ವೇಷವನಾಂತುಸಲೆ ಬಂದು ಧರೆಯ ಮೂರಡಿಯ ಬೇಡೆಒಲಿದು ಇತ್ತಪೆನೆನಲು ಧಾರೆಯನೆರೆಯಲಸುರಕುಲಗುರುವು ಜುಳಿಗೆಯೊಳು ತಡೆದು ನಿಲಲುಸಲಿಲ ವರ್ಜಿತ ನಯನನನು ಮಾಡಿ ಆಕಾಶನೆಲವೆರಡು ಪಾದವನ್ನಳೆದ ಬಳಿಕತಲೆ ಮೇಲೆ ಇರಿಸೆನಲು ತಳಕಿಳಿಸಿ ಅವನ ಬಾ-ಗಿಲ ಕಾಯ್ದ ವಾಮನನೆ ಶರಣೆಂಬೆನು 5 ರೇಣುಕೆಯ ಬಸುರಿನಲಿ ಜನಿಸಿ ಪಿತನಾಜ್ಞೆಯನುಮಾಣಬಾರದು ಎಂಬ ಮತವ ಪಿಡಿದುಕ್ಷೂಣವಿಲ್ಲದೆ ತಾಯ ಶಿರವರಿದು ತಂದೆಯನುಪ್ರಾಣಹತ್ಯವ ಮಾಡಿದರ ಕುಲವನುಕ್ಷೋಣಿಗೆರಗಿಸಿ ಕಾರ್ತವೀರ್ಯಾರ್ಜುನನ ಮಡುಹಿಜಾಣತನದಲ್ಲಿ ಭೂದಾನಗಳ ಭೂಸುರರಕಾಣುತಲೆ ಕರೆಕರೆದು ಕೊಟ್ಟೆಯೈ ನೀನು ಪೂಬಾಣಜನಕನೆ ರಾಮ ಶರಣೆಂಬೆನು 6 ಸೀತೆಯನು ಕದ್ದು ಒಯ್ದವನ ಕೊಲ್ಲುವ ಭರದಿಭೂತಳದ ಕಪಿಗಳನು ಕೂಡಿಕೊಂಡುಸೇತುವೆಯ ಕಟ್ಟಿ ಶರನಿಧಿ ದಾಟಿ ಬರಲಾಗಭೂತಗಣ ಸಂತತಿಯು ನಡುನಡುಗುತಿರಲುಚೇತನದ ರಾವಣೇಶ್ವರ ಕುಂಭಕರ್ಣ ಸ-ತ್ತ್ವಾತಿಶಯ ರಕ್ಕಸರ ಇರಿದೊರಗಿಸಿಮಾತು ಲಾಲಿಸಿ ವಿಭೀಷಣಗೆ ಪಟ್ಟವನಿತ್ತದಾತ ರಘುನಾಥನೇ ಶರಣೆಂಬೆನು 7 ಶಕಟ ಕುಕ್ಕುಟ ಧೇನುಕಾಸುರರ ಪೂತನಿಯಬಕ ವತ್ಸಹಕ ವೃಷಾಸುರ ಮುಖ್ಯರಪ್ರಕಟದಿಂದರಿದು ಕರಿಯನು ಸೀಳಿ ತನಗೆ ಸಂ-ಮುಖರಾದ ಮಲ್ಲರನು ಇರಿದೊರಗಿಸಿಮುಕುರ ದಂತ್ಯದ ಹಮ್ರ್ಯದೊಳಗಿಂದ ಕಂಸನಪುಕಪುಕನೆ ತಿವಿದವನನಿರಿದೊರಗಿಸಿಸಕಲವೆಸೆದಿರ್ದ ಮಧುರಾಪುರವ ಉಗ್ರಸೇನಕಗಿತ್ತ ಕೃಷ್ಣನೇ ಶರಣೆಂಬೆನು 8 ಮೂರು ಪುರದಬಲೆಯರ ವ್ರತಗಳನೆ ಕೆಡಿಸಲಿಕೆಬೇರೊಂದು ಅಶ್ವತ್ಥ ವೃಕ್ಷವಾಗಿನಾರಿಯರ ವ್ರತಭಂಗಗೆಯ್ಯಲಾ ದೆಸೆಯಿಂದಊರುತ್ರಯವದು ತಿರುಗುವುದು ನಿಲ್ಲಲಾಗನೀರ ಮಸ್ತಕದಲ್ಲಿ ಧರಿಸಿದನ ಕರವಿಲ್ಲನಾರಿಯೊಳು ನಾರಾಯಣಾಸ್ತ್ರವಾಗಿಘೋರತನವೆತ್ತ ತ್ರಿಪುರದ ಕೀಲ ಪರಿದ ಮದನಾರಿ ಸಖ ಬುದ್ಧನೇ ಶರಣೆಂಬೆನು 9 ಮದವೆತ್ತ ರಕ್ಕಸರು ಮಹಿಯೊಳಗೆ ಹೆಚ್ಚಲುತ್ರಿದಶಾಂತ ನಡನಡನೆ ನಡುಗುತಿರಲುಬೆದರಬೇಡೆನುತ ಅಭಯವನಿತ್ತು ಮುದದಿಂದಸುಧೆಯೊಳಗೆ ಬಂದು ಜನಿಸಿಕುದುರೆವಾಹನನಾಗಿ ಕುಂಭಿನಿಯ ಮೇಲೆ ತನಗಿದಿರಾದ ರಾವುತರನಿರಿದೊರಗಿಸಿಮೊದಲ ಭಾಷೆಯನು ದಿವಜರಿಗಿತ್ತೆ ಬೇಗದಲಿಚದುರ ಕಲ್ಕ್ಯವತಾರ ಶರಣೆಂಬೆನು10 ಇಂತು ದಶ ಅವತಾರಗಳನೆತ್ತಿ ರಕ್ಕಸರಸಂತತಿಯನೊರಸಿ ಭೂಭಾರವಿಳುಹಿಕಂತುಪಿತ ತಿರುವೆಂಗಳೇಶ ತಿರುಮಲೆಯೊಳಗೆಚಿಂತಿಸುವ ಭಕ್ತರನು ಪಾಲಿಸುತಲಿದಂತಿರಾಜನ ಪೊರೆದು ದಾನವಾಡಿಗೆ ಬಂದುನಿಂತಾದಿಕೇಶವನೆ ಶರಣೆಂಬೆನು 11
--------------
ಕನಕದಾಸ
ನೋಡಿದೆ ವೇಂಕಟ ನಿನ್ನ ಪ ಕೊಂಡಾಡಿ ಬೇಡಿದೆ ವರವನ್ನ ಆಹಾ ರೂಢಿಯೊಳಗೆ ನಿನಗೆ ಈಡುಗಾಣೆನೊ ದೇವ ನಾಡುದೈವಗಳೆಲ್ಲ ಒಡಿಪೋದವೊ ಸ್ವಾಮಿ ಅ.ಪ ಮಣಿಗಣಮಯದ ಕಿರೀಟ, ಕಪ್ಪುವ ರಣಕುಂತಲದ ಲೋಲ್ಯಾಟ, ಯುಗತ ರಣಕುಂಡಲ ಬಹು ಮಾಟ ಅರ ಗಿಣಿ ಶÀಶಿಪೋಲ್ವ ಲಲಾಟ ಆಹಾ ಎಣೆಗಾಣೆ ಕಸ್ತೂರಿ ಮಣಿರ್ದಿಪ ಭ್ರೂಯುಗ ಕುಣಿಯುತ ಸ್ಮರಧನು ಗಣಿಸದೊ ಎಲೋದೇವಾ 1 ವಾರಿಜಯುಗಸಮನಯನ, ನಾಸ ಚಾರುಚಂಪಕ ತೆನೆ, ವದನದೊಳು ತೋರುವ ಸುಂದರರದನ ಪಂಕ್ತಿ ಸಾರಿದಾಧರ ಬಹು ಅರುಣ, ಆಹಾ ಸಾರಸಮುಖದೊಳು ಸೇರಿ ಶೋಭಿಪ ಚುಬಕ ಕೂರುಮಯುಗಕದಪು ಸಾರಕಟಾಕ್ಷವ 2 ಕಂಧರಾಂಕಿತ ಸತ್ರಿರೇಖಾ, ಕಂಠ ಪೊಂದಿಪ್ಪೊದ್ವರ್ತುಲ ಕ್ರಮುಕ, ಕೊರಳ ಸುಂದರಕೌಸ್ತುಭಪದಕ, ಬಹು ಬಂಧುರ ಚೆÉೈತ್ರ ಸುರೇಖ ಆಹಾ ಹಿಂದೆ ಸಿಂಹÀದ ಹೆÉಗಲಿನಂದದಲೊಪ್ಪಿದ ಸ್ಕಂಧದಿ ಶೋಭಿಪ ಒಂದು ಸರಿಗೆಯನ್ನು 3 ಸ್ವನ್ನ ಏಕಾವಳಿಹಾರಾ, ಬಾ ಪುತ್ಥಳಿ ಸಿರಿಯಾಕಾರ, ಬಹು ಚನ್ನವಾಗಿಹ ನಾನಾಹಾರ, ಶುಭ್ರ ವರ್ಣ ಶೋಭಿಪ ಜನಿವಾರ ಆಹಾ ಇನ್ನು ಗುಂಡಿನಮಾಲೆ, ಘನ್ನ ಜಲಸರಪಳಿ ಉನ್ನತದಾನಘ್ರ್ಯ ರನ್ನ ಜಯಂತಿಯಾ 4 ಶಿರಿವತ್ಸಲಾಂಛನಹೃದಯ, ಸುರ ಕರಿಕರತೆರಬಾಹು ಶಿರಿಯಾ, ನಾಲ್ಕು ಕರಗಳೊಪ್ಪವವೀಪರಿಯ, ಮೇಲಿ ನ್ನೆರಡು ಹಸ್ತದಿ ಶಂಖ ಅರಿಯ ಆಹಾ ವರರತ್ನ ಮುದ್ರಿಕೆ ಧರಿಸಿದ ಬೆರಳುಳ್ಳ ಕರತೋಡ ಕಡಗಕ್ಕೆ ಸರಿಗಾಣೆ ಧರೆಯೊಳು 5 ಪರಮವೈಕುಂಠದಕಿಂತ ಈ ಧರಿತಳವದಿಕವೆನ್ನು ತಾ ಬಲ ಕರದಿಂದ ಜನಕೆ ತೋರುತಾ ಬಾಹು ಎರಡು ಆಜಾನುಪೂರಿತಾ ಆಹಾ ಸ್ವರಣರತ್ನ ಖಚಿತ ವರನಾಗಭೂಷಣ ಧರಿಸಿ ಟೊಂಕದಿ ವಾಮಕರವಿಟ್ಟು ಮೆರೆವೋದು 6 ಹಸ್ತಯುಗದಿ ತೋಡ್ಯ ಕಡಗ, ಪ್ರ ಶಸ್ತ ರತ್ನದ್ಹರಳಸಂಘ ರಚಿತ ಸಿಸ್ತಾದÀ ಉಂಗುರ ಬೆಡಗ, ಬಹು ವಿಸ್ತರಾಂತರ ಭುಜಯುಗ ಆಹಾ ಹಸ್ತಿವರದ ಸಮಸ್ತಲೋಕಕೆ ಸುಖ ವಿಸ್ತಾರ ನೀಡುತ ಸಿಸ್ತಾದ ದೇವನ 7 ಉದರ ತ್ರಿರೇಖ ರೋಮಾಳಿನಾಭಿ ಪದುಮ ಶೋಭಿಪ ಗುಂಭಸುಳಿ ಮೇಲೆ ಉದಯಾರ್ಕ ಪೋಲುವ ಕಲೆ ಇಂದ ಸದಮಲಾಂಬರಪಟಾವಳಿ ಆಹಾ ಬಿದುರಶೋಭಿüತ ಮಹಾಚÀದುರದೊಡ್ಯಾಣವು ಪದಕ ಮುತ್ತಿನ ತುದಿ ವಿಧವಿಧ ಪೊಳೆವೋದು 8 ರಂಭೆ ಪೋಲುವ ಊರುಸ್ತಂಭ, ಇಂದು ಡಿಂಬ ಭಕ್ತ ಕ ದಂಬ ಮೋಹಿಪ ವಿಡಂಬ ಆಹಾ ಅಂಬುಜಾಸನಪಿತನ ತುಂಬಿದ ಮೀನ್ಜಂಘ ನಂಬಿದ ಜನರನ್ನ ಇಂಬಾಗಿ ಸಲಹೋನಾ 9 ಪರಡೆರಡು ಮಾಣಿಕ್ಯಾವರಣ, ಪೊಳೆವ ಕಿರುಗೆಜ್ಜೆನೂಪುರಾಭರಣ ಇಟ್ಟು ಮೆರೆವೊ ಗಂಗೆಯ ಪೆತ್ತ ಚರಣ ಯುಗ ನಿರುತ ಭಜಿಪರೊಳತಿ ಕರುಣ ಆಹಾ ಮರೆಯದೆ ಮಾಡುತ ಪರಿಪರಿ ಸೌಖ್ಯವ ಕರೆದುನೀಡುವನಹಿಗಿರಿವಾಸ ಶ್ರೀಶÀನ್ನ 10 ಪೋತೇಂದು ನಖಯುತ ಬೆರಳ ಸಾಲು ದೂತತತಿಗೆ ಸುಖಗಳನಿತ್ತು ನೀತಙÁ್ಞನ ಭಕ್ತಿಗಳ ನಿತ್ಯ ಪ್ರೀತಿಪಡೆಯೆ ಮುಕ್ತಿಗಳ ಆಹಾ ವಾತಗುರುಜಗನ್ನಾಥವಿಠಲನತಿ ನಿತ್ಯ 11
--------------
ಗುರುಜಗನ್ನಾಥದಾಸರು
ನೋಡೆ ಗೋಪ್ಯಮ್ಮ ಕೃಷ್ಣಂಚಾಳಿಯ ನೀ ಮಾಡಿಬಿಟ್ಟಿಯೆ ಇಂಥ ಗೂಳಿಯ ಇಂಥ ಧಾಳಿಯ ಪ ಹಾಲು ಮೊಸರ ಕೆನೆ ಬೇಡುವ ಕಡ- ಗೋಲಿಂದ್ಹೊಡೆದು ನಮ್ಮನ್ನೋಡುವ ಬಂದು ಕಾಡುವ1 ತುಪ್ಪದ ಕೊಡ ಧಪ್ಪನೊಡೆದಾನೆ ಕಂ- ದರ್ಪನಪ್ಪನು ಈತೇನ್ಹುಡುಗನೆ ಇಂಥ ತುಡುಗನೆ 2 ಕರೆದು ಕೈಯಲಿ ಬೆಣ್ಣೆಯ ಮುದ್ದೆ ನೀ ಕೊಟ್ಟೆ ್ಹೀಳೆ ಭೀಮೇಶ ಕೃಷ್ಣಗೆ ಬುದ್ಧಿ 3
--------------
ಹರಪನಹಳ್ಳಿಭೀಮವ್ವ
ಪರಮ ಸಂಜೀವನವು ಗುರು ನಿಮ್ಮನಾಮ ಸರುಮುನಿಯು ಸೇವಿಸುವ ದಿವ್ಯನಾಮ ಧ್ರುವ ದುರಿತ ಹರಿಸಿದ ನಾಮ ಮೊರೆಯ ಹೊಕ್ಕವರ ಸ್ಥಿರ ಹೊರೆವ ನಾಮ ತರಳ ಪ್ರಲ್ಹಾದನವಸರಕೆ ಒಲಿದಿಹ ನಾಮ ಸ್ಮರಿಸುವರ ವಜ್ರಪಂಜರ ನಿಮ್ಮ ನಾಮ 1 ಧರೆಯೊಳಗೆ ದ್ರೌಪದಿಯ ಸ್ಮರಣಿಗೊದಗಿದ ನಾಮ ಕರುಣದಿಂದಭಿಮಾನಗಾಯ್ದ ನಾಮ ದಾರಿದ್ರ್ಯವನು ಸುಧಾಮನಿಗಿಂಗಿಸಿದ ನಾಮ ಸಿರಿ ಸಂಪತ್ತವು ಅಯಿತೀ ನಾಮ 2 ಹರುಷಕರವಿತ್ತು ಉಪಮನ್ಯಗೊಲಿದ ನಾಮ ಕ್ಷೀರಸಾಗರದ ನಾಮ ಶರಣುಹೊಕ್ಕವರ ಪರಿಪರಿ ಕಾಯ್ದ ನಾಮ ಧೀರ ಧ್ರುವಗಚಳ ಪದವಿತ್ತ ನಾಮ3 ಕರೆದು ನಾರಗ ನೆಂದವನ ತಾರಿಸಿದ ನಾಮ ಪರಮಪಾತಕ ಪರಿಹರಿಸಿದ ನಾಮ ವರ ಮುನಿಜನರ ತೃಪ್ತಿಗೈಸುವ ನಾಮ ಪರಮ ಭಕ್ತರ ಪ್ರಾಣಪ್ರಿಯ ನಾಮ 4 ದುರಿತ ದಾರಿದ್ರ್ಯ ವಿಧ್ವಂಸಗೈಸುವ ನಾಮ ಕರುಣಸಾಗರ ಪರಿಪೂರ್ಣ ನಾಮ ನರಕೀಟಕ ಮಹಿಪತಿಯ ತಾರಕ ನಾಮ ಪರಮ ಸಾಯೋಜ್ಯ ಗುರು ದಿವ್ಯ ನಾಮ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು