ಒಟ್ಟು 1007 ಕಡೆಗಳಲ್ಲಿ , 87 ದಾಸರು , 789 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥ ಧರ್ಮರಾಯ ಸಂತೋಷ ಬಡಿಸುವ ಅನಂತ ಪ್ರಜರಿಗೆಲ್ಲ ಚಿಂತಾಮಣಿಯು ತಾಎಂಥ ಧರ್ಮರಾಯ ಇಂದಿವರಾಕ್ಷಿ ಪ. ಒಡಹುಟ್ಟಿದವರೆಲ್ಲ ಬಿಡದೆ ಸೇವಿಸುವರು ಕಡುಭಕ್ತಿಯಿಂದಲೆ ನಡೆನುಡಿ ಬಿಡದೆ 1 ಹರದೆಯರು ರಾಯಗೆ ಪರಿಪರಿ ಸೇವಿಸಿ ಎರಗೋರು ಕಾಲಕಾಲಕೆ ಪರಮ ಭಕ್ತಿಯಲಿ2 ಭೃತ್ಯರು ರಾಯಗೆ ಅತ್ಯಂತ ಸೇವಿಸಿ ಚಿತ್ತವ ಹಿಡಿಯಲು ಉತ್ತಮನೆಂದು 3 ದಾಸರು ರಾಯಗೆ ಸೋಸಿಲೆ ಸೇವಿಸಿಏಸೇಸು ಕಾಲಕ್ಕೆ ಈ ಸ್ವಾಮಿ ಬಯಸೋರು4 ವಿಪ್ರರು ರಾಯಗೆ ಒಪ್ಪೋದು ದೊರೆತನ ತಪ್ಪದೆ ಇರಲೆಂದು ಗೌಪ್ಯದಿ ಜಪಿಸೋರು 5 ಮಿಕ್ಕ ಜನರಿಗೆ ಸಕ್ಕರೆ ಹೇರಮ್ಮಲಕ್ಷ್ಮಿ ರಮಣಗೆ ಸಖ್ಯನು ರಾಯ 6 ಎಲ್ಲ ಜನಕೆ ರಾಯಬೆಲ್ಲದ ಹೇರಮ್ಮಚಲ್ವ ರಾಮೇಶನ ನಲಿವಿನ ಮುಂದೆ 7
--------------
ಗಲಗಲಿಅವ್ವನವರು
ಎಂದಿಗೀಪದ ಕರುಣಮಾಡುವೆಯೋ ನಿಮ್ಮ ಧ್ಯಾನಾ ನಂದ ಅಮೃತಪಾರ ನವಿನುಡಿಯ ಪ ಎಂದಿಗೀಪದ ಕರುಣಮಾಡಿ ಕರವ ಪಿಡಿದು ಮಂದಮತಿಯ ತರಿದು ಪೊರೆಯುವೆ ಸಿಂಧುಶಯನ ತಂದೆ ಶ್ರೀಹರಿ ಅ.ಪ ವಿಷಮಸಂಸಾರ ಮೋಹವನು ಬಿಡಿಸಿ ನಿಮ್ಮ ಭಜನ ಅಸಮ ಸುಖದೆನ್ನ ಮನವ ನಿಲ್ಲಿಸಿ ವ್ಯಸನ ಏಳರ ಕಾಟ ತಪ್ಪಿಸಿ ಬಿಡದೆ ಎನ್ನ ರಸನೆಮೇಲ್ನಿಮ್ಮ ನಾಮ ಸ್ಥಾಪಿಸಿ ವಸುಧೆ ಜನರ ಸುದ್ದಿ ಮರೆಸಿ ನಶಿಪ ಲೌಕಿಕದಾಸೆ ಕೆಡಿಸಿ ಕುಶಲಮತಿಯಿತ್ತು ಪಾಲಿಸುವ ಮಹ ಅಸಮಶುಭದಿನ ಕುಸುಮನಾಭ 1 ಹತ್ತು ಇಂದ್ರಿಯ ಮೂರು ಬಾಧೆ ತೊಲಗಿಸಿಬಿಡದೆ ಎನ್ನ ನೇತ್ರದೊಳು ತವಮೂರ್ತಿ ನಿಲ್ಲಿಸಿ ಸುತ್ತಿ ಕೊಲುವ ಮಾಯ ಮುಸುಕು ಹಾರಿಸಿ ನಿತ್ಯದೆನ್ನ ಚಿತ್ತದೊಳು ನಿಜಜ್ಞಾನ ಸ್ಥಿರಪಡಿಸಿ ಸತ್ಯ ಸನ್ಮಾನ್ಯಕ್ತನೆನಿಸಿ ನಿತ್ಯ ನಿರ್ಮಲ ನಿಮ್ಮ ಭಕ್ತರ ಉತ್ತಮ ಸಂದರುಶನವಿತ್ತು ತವ ಭೃತ್ಯನೆನಿಸೆನ್ನ ಸಲಹುವಂಥ 2 ಕ್ಲೇಶ ಪಂಚಕದುರುಲು ಪರಿಹರಿಸಿ ಅನುಮೇಷ ನಿಮ್ಮ ದಾಸಜನರಾವಾಸದೆನ್ನಿರಿಸಿ ಮೋಸಮರವೆಯ ಜಾಲ ಛೇದಿಸಿ ನಿಶಿದಿವದಿ ನಿಮ್ಮ ಧ್ಯಾನದೊಳೆನ್ನ ಮನವಐಕ್ಯೆನಿಸಿ ಮೋಸ ಪಾಶಗಳೆಲ್ಲನಾಶಿಸಿ ದೋಷರಾಶಿಯಿಂ ಮುಕ್ತನೆನಿಸಿ ಶ್ರೀಶ ಶ್ರೀರಾಮ ನಿಮ್ಮ ಚರಣ ದಾಸನೆನಿಸಿ ಪೋಷಿಸುವಂಥ 3
--------------
ರಾಮದಾಸರು
ಎಂದು ನಿನ್ನ ದಯವು ಆಗೋದೋ ಇಂದಿರೇಶ ದುರಿತ ಹಿಂದಕ್ಕ್ಹೋಗೋದೊ ಮಂದಬುದ್ಧಿಯಿಂದ ನಾಲಿಗೆ ಹಿಂದೆ ಮುಂದೆ ನೋಡುತಿಹುದು ಸಂದೇಹ ಬಿಟ್ಟು ಗೋವಿಂದನ್ನ ನೆನೆಯಲಿಕ್ಕೆ ಪ ಹರಿಯ ತನಯ ಹರಿಯು ಹರಿಯೆಂದು ಒರೆಯುತಿರಲು ಗಿರಿಯನ್ಹತ್ತಿಸಿ ಉರಿಗೆ ಕೆಡುಹಿದ ಕರುಣವಿಲ್ಲದ ಹಿರಣ್ಯಕನು ಪರಮ ಬಾಧೆ ಬಡಿಸುತಿರಲು ಕರೆಯೆ ಕಂಬದಿ ಬಂದು ನರ- ಹರಿಯ ನಾಮ ಕಾಯ್ತು ಅವನ 1 ಕಂತುಪಿತನೆ ನಿನ್ನ ಭಜಿಸದೆ ದ್ವಿಜನು ಕೆಟ್ಟು ಅಂತ್ಯಜ ಸ್ತ್ರೀಯಳ ಕೂಡಿ ಮೆರೆಯಲು ಅಂತ್ಯಕಾಲದಲ್ಲಿ ಏಕಾಂತದಿಂದ ಮಗನ ಕರೆಯೆ ಕಂತುನಯ್ಯ ನಿನ್ನ ನಾಮ ಎಂಥಗತಿಯ ಕೊಟ್ಟಿತವಗೆ2 ದುಷ್ಟಪತ್ನಿ ನುಡಿಗೆ ಉತ್ತಾನಪಾದ ತನ್ನ ಪುತ್ರನಿಂದ ರಹಿತನಾಗಲು ಅಚ್ಚುತನ ಧ್ಯಾನದಲಾಸಕ್ತನಾಗೆ ಉಗ್ರತಪಕೆ ಮೆಚ್ಚಿಕೊಟ್ಟ ನಮ್ಮ ಸ್ವಾಮಿ ಹೆಚ್ಚಿನ ಲೋಕ ಪದವಿ ಧ್ರುವಗೆ 3 ಬಂದು ಭರದಿ ಮಡುವ ಕಲಕುವೋ ಮದಡಗಜವ ಕಂಡು ಮಕರಿ ಕಾಲು ಹಿಡಿಯಲು ಬಂಧುಗಳಿಂದ ರಹಿತವಾಗಿ ಒಂದು ಸಾವಿರ್ವರುಷ ಬಾಳಲು ಇಂದಿರೇಶ ನಿನ್ನ ಸ್ಮರಣೆಯಿಂದ ಶಾಪ ವಿಮೋಚಿತನಾದ 4 ಸೃಷ್ಟಿಗಧಿಕ ನಿನ್ನ ದಯವಿರೆ ಪಾಂಡುಸುತರ ಪಟ್ಟದ ರಾಣಿ ಸಭೆಗೆ ಎಳೆಯಲು ವಸ್ತ್ರಹರಣ ಕಾಲದಲ್ಲಿ ಭಕ್ತಿಯಲ್ಲಿ ಭೀಮೇಶ- ಕೃಷ್ಣನ ಮುಟ್ಟಿ ಭಜಿಸೆ ಕೃಷ್ಣೆಗಾಕ್ಷಣ ತೃಪ್ತನಾಗಿ ಕೊಟ್ಟೆಯೊ ವಸನ 5
--------------
ಹರಪನಹಳ್ಳಿಭೀಮವ್ವ
ಎಂದೊಡನಾಡುವೆ ಎಂದರ್ಥಿಬಡುವೆ ಎಂದಿಗೆ ತಕ್ರ್ಕೈಸಿ ಸಂತೋಷಬಡುವೆ ಪ ಉತ್ಸವ ಮಂಟಪದೊಳಗೆ ಕುಳಿತು ಭಕ್ತ ವತ್ಸಲನೆಂದು ನುತಿಸಿಕೊಂಬನ ಕೂಡ 1 ಸಕಲ ಭೂಷಿತನಾಗಿ ಅಜಹರ ಸುರಮುನಿ ನಿಕರ ಕೈಯಿಂದ ಸ್ತುತಿಸಿಕೊಂಬನ ಕೂಡ 2 ಆಪೋಹಿಷ್ಠಾ ಮಯೋಭುವನೆಂಬೋ ಮಂತ್ರ ಆ ಪುರೋಹಿತರಿಂದ ಕಲಿತುಕೊಂಬನ ಕೂಡ 3 ನಾಲ್ವತ್ತುಮೂರು ಪದಂಗಳು ಮಾಡೆಂದು ಹೇಳಿದ ಹೇಮಾದ್ರಿ ಶಿಖರಾಕಾರನಕೂಡೆ 4 ದಂಡಿಗೆ ಕರೆದಲ್ಲಿ ಕೊಟ್ಟು ಅಮೃತದ ಕರ ಮಂಡೆಯಲ್ಲಿಟ್ಟ ಮಹಮಹಿಮನ ಕೂಡ 5 ಪಲ್ಲಕ್ಕಿ ಏರಿ ಪವಳಿಯ ಸುತ್ತಿ ಸರ್ರಗೆ ನಿಲ್ಲದೆ ಗುಡಿಪೊಕ್ಕ ನಿರ್ಮಳನ ಕೂಡ6 ವಾರಶನಿ ಚತುರ್ದಶಿ ಕೃಷ್ಣಪುಷ್ಯದಿ ಈ ರೀತಿಯಲಿ ಕೂಡ ಇಂದಿರೇಶನ ಕೂಡ 7 ರೌದ್ರಿ ಸಂವತ್ಸರ ಅರ್ಧರಾತ್ರಿಯಲಿ ಭದ್ರ ಮೂರುತಿಯಾದ ಭವಹರ ಕೂಡ 8 ಗುರುಪುರಂದರ ಉಪದೇಶನ ಬಲದಿಂದ ಸಿರಿ ವಿಜಯವಿಠ್ಠಲನ ಚರಣ ತಕ್ರ್ಕೈಸಿ 9
--------------
ವಿಜಯದಾಸ
ಎಂಬೆನು ವಿವೇಕ ಮನುಜಗೆ ಇರೆ ಎಂಬೆನು ಬ್ರಹ್ಮನು ಎಂಬೆಎಂಬೆನು ವಿವೇಕ ಮನುಜಗೆ ಇಲ್ಲದಿರೆ ಕತ್ತೆಯಮರಿಯದು ಎಂಬೆ ಪ ವೇದದ ನಿಜ ಅರ್ಥವ ತಿಳಿದಡೆ ಉತ್ತಮೋತ್ತಮನು ಎಂಬೆಕ್ರೋಧದಿ ತರ್ಕದಿ ಕಾದಾಡುವವನು ಕೋಳಿಯ ಹುಂಜನು ಎಂಬೆನಾನಾರೆನುತಲಿ ನಿಜವನು ತಿಳಿವನ ನಾರಾಯಣನು ಎಂಬೆನಾದದ ತಿಳಿವನು ನಿಂದಿಸುವಾತನ ಸರಸವಾಡೋ ಪಶು ಎಂಬೆ 1 ಮತಿಯ ವಿಚಾರದಿ ಜಗ ಬ್ರಹ್ಮವೆಂಬನ ವಿಚಾರವಾದಿಯು ಎಂಬೆಯತಿಗಳು ಬರೆ ಕುಳಿತೇಳದ ಮನುಜನಎಮ್ಮೆಯ ಮಗನವನೆಂಬೆಸುತ್ತಮುತ್ತಂಗನೆ ಮೋಹವ ತೊರೆದನ ಯೋಗಪುರುಷ ತಾನೆಂಬೆಗತಿಮತಿ ತೊರೆದಿಹ ನರನನು ಈಗಲೆ ಎಂಜಲು ತಿಂಬುವ ನಾಯೆಂಬೆ 2 ಪರಮಾರ್ಥದಿ ಶಮದಮದಿಂದಿಹನನು ಪಂಡಿತನೀಗಲು ಎಂಬೆಹಿರಿಯರ ಕಾಣಲು ಹಲ್ಲನೆ ಕಿರಿವನ ಹಿರಿಯಮುಸುವನು ತಾನೆಂಬೆಗುರಿಯನು ತಪ್ಪದೆ ದೃಷ್ಟಿಸಿ ನಡೆವನ ಗುಣಕೆ ಅತೀತನು ಎಂಬೆಬರಿಯ ಪ್ರತಿಷ್ಟೆಯ ಸಾಧಿಸುತಿರುವನ ಬರಡು ಗೊಡ್ಡು ಎಂದೆಂಬೆ 3 ನಾದದ ಧ್ವನಿಯನು ಕೇಳುತಲಿಹನನು ಜಗಜೀವನನು ಎಂಬೆನಾದದ ಸುಖವನು ಅರಿಯದ ನರನನು ಜೀನುಗಾರನು ಎಂದೆಂಬೆದಿನಕರ ಕೋಟಿಯ ತೇಜದಿ ಹೊಳೆವನ ದಿವ್ಯ ಮೂರುತಿ ಎಂದೆಂಬೆವನವನ ಅಲೆಯುವ ಬರಡು ಮುನಿಯನುವನಕೆಯ ತುಂಡದು ತಾನೆಂಬೆ4 ಆತ್ಮದ ಕಳೆಯನು ಅರಿತವನಿದ್ದರೆ ದೃಢದಲಿ ಬ್ರಹ್ಮನು ಎಂಬೆಸತ್ವಶಾಲಿ ಆ ಮಹಿಮರ ಜರೆವರ ಗುಡ್ಡದ ಗೂಗೆಯಮರಿ ಎಂಬೆಚಿನುಮಯ ಚಿನ್ಮಾತ್ರನೆ ತಾನಾದವನನು ಚಿದಾನಂದ ಗುರುವೆಂಬೆಕರೆಕರೆ ಎನಿಸುವ ಸಾಧು ವೇಷವನು ದೂರಕೆ ನೀ ನಿಲ್ಲೆಂಬೆ5
--------------
ಚಿದಾನಂದ ಅವಧೂತರು
ಎಲೆ ಮನಾ ವ್ಯರ್ಥಗಳೆವರೇ ಜನುಮವನು | ನೆಲಿಯ ನಿನ್ನರುವದಾ ಹೊಲಬು ಮರೆದು ಪ ಇಳಿಯೊಳಗ ನರದೇಹದಲಿ ಜನಿಸಿ ಕೊಡುವದು | ಸುಲಭವಲ್ಲವೊ ಹೋದ ಬಳಿಕ ನಿನಗದು ಮುಂದ ಅ.ಪ ಮೇದಿನಿಯೊಳಗ ಮಿಗಿಲಾದ ಜನ್ಮದಿ ಬಂದು| ಐದಿದಾವರ್ಣ ಕರ್ಮಾಧರಿಸಿ ಮಾಡುತಲಿ | ಗೈದು ನಿತ್ಯಾನಿತ್ಯ ವೈದಿಕ ವಿಚಾರವನು | ಆದಿ ಪುರುಷನ ಕಾಂಬ ಹಾದಿ ಕೂಡಿ | ಖೇದವನು ಕುಡುವ ವಿವಾದ ಗುಣವನೆ ನೀಗಿ | ಮೋದದಲಿ ಶರಣ್ಹೊಕ್ಕು ಸಾಧು ಜನರನು ಸರಿಸಿ | ವೇದಾಂತ ಬ್ರಹ್ಮ ಸೂತ್ರಾದಿ ವಾಕ್ಯಾರ್ಥವನು 1 ಬೋಧೆಯಲಿ ಪಡೆದು ಜ್ಞಾನೋದಯ ಕಾಣದೆ ಭವ ಶರಧಿಯನು ಗೆಲಲಾಗಿ | ಶರಣ ಜನರಿಗೆ ತೆಪ್ಪ ಪರಿಯಂದಾತಾಗಿಹ | ಹರಿನಾಮವ ನೆನೆದು ಹರಿಧ್ಯಾನಗೈವುತಲಿ | ಹರುಷದಲಿ ಪದಿನಾರು ತೆರ ಪೂಜಿಸಿ | ಪರಮ ಸದ್ಭಾವದಲಿ ಗುರುಡಿಂಗರ ಮೇಳದಲಿ | ಭರದಿ ತಾಳದಂಡಿಗೆಯ ಕರದೊಳಗ ತಾ ಪಿಡಿದು | ಶರೀರ ಭಾವನೆ ಮರೆದು ಭರಿತ ಪ್ರೇಮಿತನಾಗಿ | ಇರಳು ಹಗಲು ಪಾಡುತಲಿ ಹರಿಭಕ್ತನಾಗದೇ 2 ವನಧಿಯೊಳು ಥೆರೆಸಂಗ ಧನುಮತದಿದೋರ್ವ | ಗುಳ್ಳಿಯ ಪರಿಸೇವೆಯೀತನು ವೆಂದು-ದರಿಯು | ಆನದೊಳಗ ಉತ್ಕ್ರಷ್ಟ ತನದಿ ಮೆರೆಸ್ಯಾಡುತಿಹ | ಕನಕದಧಿದೇವಿ ಕಿವಿಯನು ಬೀಸುವಾಗ | ಅಣುಗ ಕರಿಯಂತೆ ಅರಕ್ಷಣದವಳು ಯಂದು ಅತಿ | ಹೆಣಗುತಿಹ ಸಾಯಾಸವನೆ ತ್ಯಜಿಸಿ ತಾ ದೊರಕಿ | ಧನಿತದರಿಂತುಷ್ಟವನು ಕರಿಸಿ ದೃಢದಿಂದ | ಘನ ನಂಬು ಗುರು ಮಹಿಪತಿ ಚರಣ ಬಿಡದಂತೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎಲ್ಲಿ ಸುವರಗಳು ಇಲ್ಲದಿದ್ದರೆ ಇವ | ನಲ್ಲದೆ ಮತ್ತಾರಾ | ವಲ್ಲಿ ಕಾಣದೆ ಪೋದೆ ಪ ಸಾರುವ ಶರೀರ ಧರಿಸಿ ಬಾಳಿದ ಮಹಾ | ಭಾರವಾಗಿದ್ದ ಪಾಷಾಣವ ಪೊತ್ತವ | ಗೊರುವ ನೆಲನಂದು ಕಾಷ್ಟದಿಂದಲಿ ಬಂದ | ಹಾರುವನಾಗಿ ತಿರದುಂಡು ಕುಲಧರ್ಮ | ಮೀರಿ ನಡೆದವ ಉಪವಾಸದವÀನಿಂದ | ಊರ ಎಂಜಲಿಗೆ ಹೇಸದೆ ಓಡಾಡಿದವ | ನಾರಿಯರ ವ್ರತ ಕೆಡಿಸಿ ರಾವುತನಾಗಿ | ಕಾಯ | ಆರಿಂದ ಜನಿತನಿವ ನೋಡಲಾಗಿ | ಧಾರುಣಿಯೊಳಗಿದ್ದವ ಸರ್ವರನ್ನ | ಮೀರಿ ನಡೆತÀಲಿದ್ದವ ಇವಗೆ ಮೆಚ್ಚಿ | ಧಾರಿ ಎಂದ ನಿನ್ನ ಮಗಳೆ ಬೇಕೆಂದವ 1 ಬಿರಿಗಣ್ಣೆನವನಿವ ಆವಾವ ಕಾಲಕ್ಕೆ | ಶಿರವಾಗಿ ಕೊಂಡಿಪ್ಪ ಶೀಲ ಸ್ವಭಾವದಿ | ಕೊರಳ ತಿರುಹಲಾರ ಕರುಳ ಮಾಲೆಯುವ | ಪರರ ಬಾಗಿಲ ಕಾವರಾಜ್ಯವಿಲ್ಲದವ | ಸುರರ ಕೋತಿಯ ಮಾಡಿ ಕುಣೆಸಾಡಿದವನಿವ | ದಿಗಂಬರನಾಗಿ ಚರಿಸಿದೆನೆಂದು ಕೋಪದಿಂದ | ಕರವಾಳ ಹಸ್ತದವ || ಪರಾಕ್ರಮ ಉರಗನ್ನ ಮೇಲಿದ್ದವ ಇವನ ಖೂನ | ಅರಿಯನು ದಾವದಾವ | ಭೇದವನಿಕ್ಕಿ | ತಿರುಗಿಸುವನು ಲೋಕವ ವಂಚಕನಿಗೆ | ಪರಮ ಪ್ರೀತಿಯಿಂದ ಕೊಟ್ಟದನೆಣಿಸುವ 2 ತನ್ನ ಜಾತಿಗಳನ್ನು ನುಂಗುವನವನಿವ | ಬೆನ್ನ ಮೇಲಿನ ಒಂದೆ ಬುಗುಟಿ ಪಲ್ಲಿನ ತುದಿ | ಮಣ್ಣು ತೋರುವನಿವ ವಿಕಾರ ಮೊಗದವ | ಕಣ್ಣು ಚುಚ್ಚಿದ ಒಬ್ಬ ಹಾರವನ್ನು ನೋಡಿ | ಹೆಣ್ಣಿಗಭಯವಿತ್ತು ಕಾದಿ ಸೋತವನಿವ | ರಣ್ಯ ವಾಗನಿವ ರಣದೊಳೋಡಿದನಿವ | ಅನ್ಯಾಯ ಪೇಳಿದ ನಂಬಿದವರಿಗೆ | ಮುನ್ನೆ ಕುದುರಿಯೇರಿದಾ ಇವನು ತಾನೆ | ಅನಂತ ಮಾಯಮೋದಾ ಎಂಥವರಲ್ಲಿ | ಪಾದ ಇಟ್ಟು ಇದ್ದು | ಕಣ್ಣಿಗೆ ಪೊಳಿಯೆ ಖೇಡ ಬಡಿಸವಂಥ | ಬಣ್ಣಾಣಿಗಾರನು ಬಂದೆಲ್ಲಿ ದೊರಕಿದಾ 3 ಮೀಸಿ ಕಟ್ಟಿಸಿಕೊಂಡಿವನೀವ ಪ್ರಳಯಾದಿ | ದ್ವೇಷವನಿಕ್ಕಿದ ದೇವದಾನವರಿಗೆ | ಏಸು ದಿವಸವಾಗೆ ಅದೋ ದೃಷ್ಠಾಯವನಿವ | ಭಿಕ್ಷೆ ಪಾತ್ರಿಯವ | ಬಿಗಿಯನೆ ಮುರದು ಬಿಟ್ಟವನಿವ | ಕೊಂಡ ಲಜ್ಜೆಗೇಡಿ | ಘಾಸೆತನಕೆ ಶೂರನು ಒಮ್ಮ್ಯಾದರು || ಮಾಡುತಲಿಪ್ಪನು ಇವನು ಹೆಣ್ಣು | ವೇಷ ಧರಿಸಿಕೊಂಬನು ಕೇವಲ ಅವ | ಕಾಶ ಯಿಲ್ಲದ ಸ್ಥಾನದಲ್ಲಿ ವೊಂದಿಪ್ಪನು 4 ದೃಷ್ಟಿ ಮುಚ್ಚದಿಪ್ಪನವನಿವ ಆವಾಗ | ಬೆಟ್ಟವೆ ಗತಿ ಎಂದು ಸೇರಿಕೊಂಡವನಿವ | ದಿಟ್ಟ ಕಠೀಣ ಕಾಯದವನಿವ ಎದುರಿಗೆ | ಎಷ್ಟಗಲ ಬಾಯದೆರೆದಿಪ್ಪ ಪಾದದ | ಬಟ್ಟಿನಿಂದಲಿ ನೀರು ಸುರಿಸುವ ಬಗೆ ಉಂಟು | ಕುಟ್ಟಿ ಮಾತೆಯ ಶಿರ ಕೆಡಹಿದನಿವ ಜಡೆ | ಗಟ್ಟಿಪ್ಪ ಚೋರನಾಯಕ ಮೌನಪ್ರಾಂತಕ್ಕೆ | ದುಷ್ಟನೆನಸಿ ಮೆರೆವ ಹತ್ತದೆಂದು || ಅಟ್ಟಿಬಿಟ್ಟರೆ ಬರುವ ತನ್ನೆಲ್ಲಿಗೆ | ಕೆಟ್ಟವರನ ಕರೆವ ಉತ್ತಮರನ್ನು | ಪಟ್ಟದ ರಾಣಿಗೆ ಪೇಳದೆ ಜವಾ | 5 ಜಲದೊಳಗಾಡುವನಿವ ಹೊರೆ ಹೊತ್ತು | ಕಲೆಪರಟಿಯಾಗಿ ತಿರುಗುವನಿವ ಮೂಗಿಲ್ಲಿ | ಳಿದು ಬಂದವನಿವ ಗೊಗ್ಗರÀ ಧ್ವನಿಯವ | ತಲುವರಿ ಇವ ತಾನೆ ಶಿಷ್ಯಗೆ ವಿದ್ಯವÀ | ಕಲಿಸಿ ಶ್ಯಾಪವ ಕೊಟ್ಟನವನಿವ ವೈರತ್ವ | ಬಳಸದವನ ಮೇಲೆ ಕಲ್ಲು ಹಾಕಿಸಿದವ | ಬಲು ಭಂಡುಗೋವಳ ಅನ ಬರದದು ಬಿಟ್ಟು | ಕಲಿಯಾಗಿ ಓಡಾಡಿದ | ಹೆರರಿಗಾಗಿ ಸ್ತಳ ದ್ರವ್ಯವ ಮಾಡಿದಾ ದಾನವರಿಂದ | ಬಲವಾವನು ಬೇಡಿದಾ ಬೊಮ್ಮಾಂಡದ | ಒಳಗೆ ಹೊರಗೆ ಕಾಡಿದಾ | ಬಹು ಠಕ್ಕನು | ತಿಳಿದು ತಿಳಿದು ಈರ್ವರಿಗೆಯಲ್ಲಿ ನೋಡಿದಾ 6 ಸವಿ ನೋಡದದರ ರೂಪನಾದವನಿವ | ಅವಯವಂಗಳೆಲ್ಲ ಮುದುರಿಕೊಂಡಿಪ್ಪಾನಿವ | ಅವನಿಗೋಡಿ ಪೋದನಿವ ಮೃಗವಲ್ಲ ಮಾ | ನವನಲ್ಲ ವದ್ಭೂತನಾಗಿ ತೋರುವನಿವ | ಬವರಿಗಾದವನಿವ ತನ್ನ ಕಾಲಕೆ ತಪ್ಪ | ಭವನವಿಲ್ಲದೆ ದಿನ ಕಳೆದವ ಯಾಗದ | ನ್ನವನುಂಡು ನಾನಾ ಶಸ್ತ್ರವನ್ನು ನುಂಗಿದವನಿವ || ಯುವತಿ ಧರಿಸಿದ ಸಂಗಾ ಹಾ | ರುವ ಪಕ್ಕಿ ದಿವಸ ದಿವಸ ತುರುಗಾನಾಗಿಪ್ಪದು | ಅವಧೂತ ಮಾರ್ಗ ತುಂಗಾ | ಪರ್ವತವನು | ಲವಕಾಲಬಿಡದೆ ಬಾಯಲಿ ಕಚ್ಚಿದ ರಂಗಾ 7 ಮಾರಧ್ವಜನನವತಾರ ತಾಳಿದನಿವ | ನೀರೋಳಗಡಿಗಿಪ್ಪ ಎರಡು ಭಾಗಗಲ್ಲಿ | ಕೋರೆಗಳದ್ದಿ ಮಸÀದು ಮತ್ಸರಿಸುತಿಪ್ಪ | ಚೀರಿ ಕೂಗುವ ಮಹಾ ಬೊಮ್ಮಾಂಡವಡದಂತೆ | ಮೂರಡಿಯೊಳಗೆ ತ್ರಿಲೋಕವÀನಿಟ್ಟವ | ಬೇರು ಕಡುವನಂತೆ ಕೊಡಲಿಕಾರನಿವ | ಆರೋಗಣಿಗೆ ಶಬರಿಯ ಹಣ್ಣು ಮೆದ್ದವ | ಬುದ್ಧ ಉದ್ದಂಡಾ ಏಕನು ಇವ || ಕೊಂಡ ಬಹು ಕಡೆ | ಬೀರಿದನ್ನವ ಕೈಕೊಂಡಾ ಒಂದು ತುತ್ತು | ಆರಗೀಯದಲೆ ಉಂಡಾ ಇವನನ್ನು | ಹಾರೈಸಿದವರಿಗೆ ಏನು ಲಕ್ಷ ಹೆಚ್ಚಳ ಕಂಡಾ 8 ಉದಕ ಬಿಟ್ಟರೆ ಬದುಕಲಾರದವನಿವ | ಎದೆಗಟ್ಟಿಯವನಲ್ಲಿ ಮುಟ್ಟಿ ನೋಡಿದರೆ | ಪೊದೆ ಪೊದರಿನೊಳು ಸೇರಿ ಕೊಂಡವನಿವ | ಎದುರಿಗೆ ಒಬ್ಬರ ಬರಗೊಡದವ ತನ್ನ | ಪದದ ಕೆಳಗೆ ಕೊಟ್ಟವನ ಇಟ್ಟವನಿವ | ಮದಕಾವ ಮಾಡಿ ತನ್ನೊಳು ತಾನೆ ಸೋತವ | ಸುದತಿಯುಳಟ್ಟಿದ ಪಾರ್ಥಗಾಳಾದ | ಚದುರ ಕ್ರೂರರಿಗೆ ಕ್ರೂರಾ ನಿರಂತರ | ಉದಧಿ ಎಂಬೊದೆ ಮಂದಿರಾ ಇವಗೆ ನೋಡು | ಬದರಿ ಗಿಡವೆ ಆಸರಾ ಏನೆಂಬೆನೊ | ಕದರು ಮೋರಿಯೆ ಶೃಂಗಾರ ತನ್ನಯ ಗುಣ | ಮೊದಲಿದೆ ಕಡೆ ಎಂದು ಆರಾರಿಗೆ ತೋರಾ 9 ಚಪಲಾಕ್ಷದವನಿವ ಚಲುವನೆಂತೆಂಬೆನೆ | ವಿಪರೀತ ನಿದ್ರೆ ಮಾಡುವನಿವ ಕರೆದರೆ | ಕುಪಿತವಾಗುವ ಕಿಡಿ ಉಗುಳುವನಿವ | ಕಪಟದಲ್ಲಿ ಗಟ್ಟಿ ತಲೆ ಹೊಡಕ ರಾಮ | ಕಪಿಯ ಮೋಸದಿಂದ ಕೆಡಹಿದ ಮಾವನ್ನ | ನಿಪತನ ಗೈಸಿದ | ದೋಷಕ್ಕೆ ಶಂಕಿಸಾ | ತ್ರಿಪುರವ ಕೆಡಸಿದ ಹರಗೆ ಸಾಯುಕವಾಗಿ | ಅಪಕಾರಿ ಝಗಳಗಂಟ ಒದಿಸಿಕೊಂಡ || ವಿಪುಳದೋಳೇನು ಒಂಟಾ ಉಚ್ಚರಿಸುವೆ | ಕೃಪಣ ಜನರಿಗೆ ನೆಂಟಾಸನಕ್ಯಾದರ | ಶಪತದಲ್ಲಿಗೆ ಪೊರವಂಟಾ ಉತ್ತಮರಿಂದ | ಉಪದೇಶವಿಲ್ಲದ ಬಾಳುವ ಮಹಾತುಂಟಾ 10 ಇವರೀರ್ವರಿಗೆ ಈಡೆ ತಪ್ಪಿಸಲು ಪದ್ಮ | ಭವಗಳವಲ್ಲವು ನಿನ್ನ ಕುವರಿಗೆ | ಸವಿಗಾರ ಇವನಲ್ಲದೆ ಮತ್ತಾವಾವಾ | ವಿವರಿಪೆ ಎಂಥವರಕೆ ಅಂಥ ಕನ್ನಿಕೆ | ಹವಣವಾಗಿದೆ ಸತ್ಯ ಸಂಕಲ್ಪವೆ ಸಿದ್ಧಾ | ಶ್ರವಣಾದಿ ಇಂದ್ರಿಂಗಳಿಗಗೋಚರಾ | ಸ್ಥವಿರ ಯೌವನ ಬಾಲ ಒಂದಾದರಿವನೆಲ್ಲಾ | ನವನವ ಬಗೆ ಸುಕಾಯಾ || ಮೋಹನ್ನ ಯಾ | ದವರಾಯಾ ಶಿರಿ ವಿಜಯವಿಠ್ಠಲ ಕೃಷ್ಣ | ಶಿವಕುಲ್ಲ್ಯ ಪುರಿ ನಿಲಯಾ ಭಕ್ತರ ಪ್ರೀಯಾ | ಮಾಯಾ ಜಗದ್ಗುರು | ಪವನವತಾರ ಶ್ರೀ ಆನಂದ ಮುನಿಗೇಯಾ11
--------------
ವಿಜಯದಾಸ
ಎಲ್ಲಿದ್ದರು ಕಾಯ್ವ ಯದುಕುಲತಿಲಕ| ಭಕ್ತ ರೆಲ್ಲಿದ್ದರು ಕಾಯ್ವ ಯದುಕುಲತಿಲಕ ಪ ಅಡವಿಯೊಳಿರಲು ಅರಣ್ಯದೊಳಿರಲು ಮಡುವಿನೊಳಿರಲು ಮರದ ಮೇಲಿರಲು ಪೊಡವಿಗೀಶ್ವರ ತಾನು ದೃಢಭಕ್ತನಂ ಬಿಡದೆ ರಕ್ಷಿಸುವ ಯೆಂತೆಂಬೊ ಬಿರುದು 1 ತಂದೆಯ ಬಾಧೆಗೆ ಕಂದ ನಿಮ್ಮನು ಕರೆಯೆ ಬಂದು ಕಂಭದಲಿ ನೀ ಕಾಯ್ದೆ ಗೋವಿಂದಾ ಅಂದು ದ್ರೌಪದಿ ಹಾಯೆಂದು ಬದರಲು ಕೇಳಿ ಆ ನಂದದಿಂದಕ್ಷಯವನಿತ್ತ ರಂಗನು ನೀನು 2 ಭರದೆ ಭಗದತ್ತನು ಅಸ್ತ್ರ ಬಿಡಲು ಕೊರಳ ಚಾಚಿದನಾಗ ಕರುಣಾವಾರಿಧಿಯು ವರುಣಗದೆಯನಾಗ ಮರುಳತನದಿ ಬಿಡೆ ಮರಳಿ ಅವನ ಉರುಳಿಸಿತು ಶೃತಾಯುವು 3 ಸಿಂಧುರಾಜನ ಶಿರವ ಅವನ ತಂದೆ ಕೈಯಲಿ ಹಾಕಿ ಬಂದ ಭಾರವನೆಲ್ಲಾ ಕಾಯ್ದೆ ಗೋವಿಂದ ಕರ್ಣ ಅಪ್ರಮೇಯನು ಭೂಮಿ ಕ್ಷಿಪ್ರದಿಂ ಒತ್ತಿದಾ 4 ಅಂದು ಅರ್ಜುನ ತನ್ನ ಕಂದನೊಡನೆ ಕಾದೆ ಹಿಂದಿನ ವೈರದಿಂ ಶಿರವನ್ನು ಹರಿಯೆ ಬಂದು ಮುಕುಂದ ಸಂಧಿಸಿ ಶಿರವನ್ನು ಆ ಇಂದಿರೆ ರಮಣ5 ಉತ್ತರೆ ಗರ್ಭವು ಬತ್ತಿ ಬೀಳಲು ಆಗ ಉತ್ತಮ ಋಷಿಗಳೆಲ್ಲರ ನೋಡಿ ನಿತ್ಯಬ್ರಹ್ಮಚಾರಿಗಳು ಪಾದದೀ ಮೆಟ್ಟಿದರೆ ಬದುಕುವುದೆಂದನು ಕೃಷ್ಣ 6 ಸನತ್ಕುಮಾರರು ಶೌನಕರು ಮೊದಲಾಗಿ ಪರುಶುರಾಮ ಹನುಮಾದಿಗಳು ಬ್ರಹ್ಮಚರ್ಯವು ನಮಗಿಲ್ಲವೆನುತ ಬ್ರಹ್ಮಚರ್ಯಕ್ಕೆ ಆಧಾರ ನೀನೆನ್ನಲು ವಾಮಪಾದದಿ ತುಳಿದೆಬ್ಬಿಸಿದನು ಶಿಶುವ 7 ಸರಸಿರುಹನಯನಾ ಫಣಿರಾಜಶಯನ ಶರಣಾಗತದುರಿತಾಪಹರಣ ದೈತೇಯಸಂಹರಣ ಗೋವರ್ಧನೋದ್ಧರಣ ಪೀತಾಂಬರಾಭರಣ ಕೌಸ್ತುಭಾಭರಣ 8 ಅಶ್ವತಾಮನ ಅಸ್ತ್ರ ವಿಶ್ವವನು ಸುಡುತಿರೆ ವಿಶ್ವನಾಯಕ ಶಮನ ಮಾಡಿ ಕಾಯ್ದು ಅಸಮಸಾಹಸದಿ ಚಕ್ರವ ಪಿಡಿದು ಗರ್ಭದ ಶಿಶುವನ್ನು ಕಾಯ್ದ ಕುಶಲಿ ವೆಂಕಟಕೃಷ್ಣ 9
--------------
ಯದುಗಿರಿಯಮ್ಮ
ಎಷ್ಟು ಪುಣ್ಯ ಮಾಡೀ ಕಂಬ ವಿಠ್ಠಲನ್ನ ಗುಡಿ ಸೇರಿತೋ ಪ. ಪುರಂದರ ದಾಸರನ್ನು ಕಟ್ಟಿಸಿಕೊಂಡು ತಾ ಪೂಜೆಗೊಂಡಿತೊ ಅ. ಎಲ್ಲಾ ಕಂಬಗಳಿದ್ದರೂ ಇಂತು ಇಲ್ಲೀ ಇದಕೆ ಈ ಖ್ಯಾತಿಯು ಬಂತು ಸುಜನ ವಂದಿಪರಿ ಪುಲ್ಲನಾಭನ್ನ ಕೃಪೆಯ ಪಡೆದಿತು 1 ಮಾಯಾಕಾರನು ನೀರನು ತಂದು ಈಯಲು ಪುರಂದರದಾಸರಿಗಂದು ನೋಯಿಸೆ ತಿಳಿಯದೆ ಮನಕದ ತಂದು ನ್ಯಾಯದಿ ಕಟ್ಟಿಸಿ ಹೊಡೆಸಿದನಂದು 2 ದಾಸರಂತೆ ತಾನು ವೇಷವ ಧರಿಸಿ ವೇಶ್ಯೆಗೆ ತನ್ನ ಕಂಕಣವನ್ನೆ ಕೊಡಿಸಿ ತಾಸೊತ್ತಿನಾ ರಾತ್ರೆ ಹೊಡೆದದ್ದ ನೆನಸಿ ವಾಸುದೇವ ಬೈಲಿಗೆಳೆಸಿದ ಬಿಗಿಸಿ 3 ಜ್ಞಾನ ಪುಟ್ಟಲು ಹರಿಮಾಯವಿದೆಂದು ಶ್ರೀನಿವಾಸ ತಾ ವಲಿದನು ಅಂದು ಆನಂದದಿಂದೊಂದು ಕವನ ಗೈದು ಶ್ರೀನಿಧೆ ಮುಟ್ಟಿತು ಮುಯ್ಯವಿದೆಂದು4 ದಾಸರ ಅಂಗವು ಸೋಕಿದ್ದರಿಂದ ಶ್ರೀಶನು ಹಗ್ಗದಿ ಬಿಗಿಸಿದ್ದರಿಂದ ದಾಸರ ಪೆಸರಲಿ ಮೆರೆವುದರಿಂದ ಭವ ಬಂಧ5 ಹಿಂದೆ ಕಂಬದಿ ನರಹರಿ ಅವತರಿಸೆ ಅಂದಿನ ಕಂಬವೆ ಈಗಿಲ್ಲ್ಲಿ ಉದಿಸೆ ಸಿಂಧುಶಯನನ್ನ ದಾಸತ್ವ ವಹಿಸೆ ಬಂದಿತು ವಿಠಲನ್ನ ಗುಡಿಯನಾಶ್ರೈಸೆ6 ಕರ್ಮ ಕಳೆವುದು ದಾಸರ ವಾಕ್ಶ್ರವಣ ಜ್ಞಾನವೀಯುವುದು ದಾಸರ ಉಪದೇಶ ಹರಿಯ ತೋರುವುದು ದಾಸರ ಸ್ಪರ್ಶವು ಮುಕ್ತಿಗೊಯ್ಯವುದು7 ಕಂಭವೆ ಸಾಕ್ಷಿಯು ಈ ಕಲಿಯುಗದಿ ಡಾಂಭಿಕ ಜನರಿಗೆ ತಿಳಿಯದು ಹಾದಿ ಬೆಂಬಿಡದೆ ಹರಿ ಕಾಯುವ ಭರದಿ ಇಂಬುಗೊಟ್ಟು ತನ್ನ ನಿಜ ದಿವ್ಯ ಪುರದಿ 8 ದಾಸರ ಮಾರ್ಗವೆ ಸುಲಭವೆಂತೆಂದು ದಾಸರ ಕೃಪೆ ದ್ವಾರ ವಲಿಯುವೆನೆಂದು ದಾಸರ ದೂಷಿಸೆ ಗತಿ ಇಲ್ಲೆಂದು ಶ್ರೀಶ ತಾನಿಲ್ಲೀ ನಿಂತನು ಬಂದು 9 ಶ್ರೀ ರಮಾಪತಿ ಓಡಿ ಬಂದ ನಿಲ್ಲೆಂದೂ ದ್ವಾರಕ ಪುರದೊಂದು ಕಂಭವೆ ಬಂದು ಸೇರಿತೊ ವಿಠಲನ ಮಂದಿರವಂದು ಸೂರೆಗೈದರೊ ಖ್ಯಾತಿ ದಾಸರು ಬಂದು 10 ನಿಜದಾಸರಂಗಸಂಗದ ಫಲದಿ ರಜತದ ಕಟ್ಟಿನಿಂ ಮೆರೆದಿತು ಜಗದಿ ಸುಜನರ ಸಂಗದಿ ಮುಕುತಿಯ ಹಾದಿ ಭುಜಗಶಯನ ತೋರುವ ನಿರ್ಮಲದಿ 11 ತತ್ವವನಿದರಿಂದ ತಿಳಿವುದು ಒಂದು ಉತ್ತಮತ್ವ್ವವು ಜಡಕಾಯಿತು ಬಂದು ಪಾದ ಸೋಂಕಲು ಅಂದು ವ್ಯರ್ಥವಾಗದು ಹರಿಭಕ್ತರೆ ಬಂಧು12 ಪಾಪ ನಿರ್ಲೇಪವಾಗೋದು ವಿಠ್ಠಲನ್ನ ಆಪಾದ ಮೌಳಿಯ ರೂಪ ದರುಶನ್ನ ಪರಿ ಖ್ಯಾತಿ ಪೊಂದಿತು ಕಂಬ ಘನ್ನ ಗೋಪಾಲಕೃಷ್ಣವಿಠ್ಠಲ ಸುಪ್ರಸನ್ನ 13
--------------
ಅಂಬಾಬಾಯಿ
ಎಷ್ಟು ಭಾಗ್ಯ ಎಷ್ಟು ಭಾಗ್ಯಕೃಷ್ಣನ ಮುಖವ ದಿಟ್ಟಿಸಿ ನೋಡಿ ಸುಖಿಸುವ ಸಭೆಯ ಜನರು ಪ. ಕಡಗ ಸರಪಳಿಯು ದಿವ್ಯ ಬೆಡಗಿನಾಭರಣಮುಕುಟ ಕಡಿಗಂಟೆ ಮುತ್ತುಗಳ ಜಡವುತಕಡಿಗಂಟೆ ಮುತ್ತುಗಳ ಜಡವುತಲಿ ರಂಗನಾಯಕನ ಎಡಬಲದಿ ಕುಳಿತ ಅರಸಿಯರು ಸಖಿಯೆ 1 ಕೆತ್ತಿಗೆ ಕುಸುರಾದ ಉತ್ತಮ ಆಭರಣಗಳುಮುತ್ತಿನ ಮಾಲೆಗಳು ಅಲಗುತಮುತ್ತಿನ ಮಾಲೆಗಳು ಅಲಗುತ ರಂಗಯ್ಯನ ಹತ್ತಿರ ಕುಳಿತ ದೊರೆಗಳು ಸಖಿಯೆ2 ಕುಂಡಲ ಮಂಡಿತ ಪಂಡಿತರೆಲ್ಲರುಭೂಮಂಡಲ ಪತಿಯ ಸ್ತುತಿಸುತ ಭೂಮಂಡಲ ಪತಿಯ ಸ್ತುತಿಸುತ ಸಭೆಯಲಿತಂಡ ತಂಡದಿ ಕುಳಿತಾರೆ ಸಖಿಯೆ 3 ಋಗ್ವೇದಾದಿಗಳೆಲ್ಲರು ಶಬ್ದವಾದದಿಂದಲಿರುಕ್ಮಿಣಿ ಪತಿಯ ಸ್ತುತಿಸುತರುಕ್ಮಿಣಿ ಪತಿಯನೆ ಸ್ತುತಿಸುತ ಸಭೆಯಲಿಹಿಗ್ಗಿ ಹರುಷದಲಿ ಕುಳಿತಾರೆ ಸಖಿಯೆ 4 ಮಿಂಚು ಮಡಿಯುಟ್ಟು ಪಂಚ ಮುದ್ರೆಯನೆ ಧರಿಸಿ ಚಂಚಲಾಕ್ಷನ ಸಭೆಯೊಳು ಚಂಚಲಾಕ್ಷನ ಸಭೆಯೊಳು ಜೋಯಿಸರುಪಂಚಾಂಗ ಹೇಳುತ ಕುಳಿತಾರೆ ಸಖಿಯೆ 5 ತಾಳ ಮದ್ದಳೆ ದಿವ್ಯ ಮೇಲೆ ತಂಬೂರಿಯವರು ಮೇಲು ಸ್ವರದಿಂದ ಸಭೆಯೊಳುಮೇಲು ಸ್ವರದಿಂದ ನುಡಿಸುತ ಕುಳಿತಾರೆ ಕಾಳಿ ಮರ್ದನನ ಸಭೆಯೊಳು ಸಖಿಯೆ 6 ಚಲುವ ರಾಮೇಶನ ಆದರದಿ ಸ್ತುತಿಸುತಲೆವೇದಗೋಚರನ ಸಭೆಯೊಳು ವೇದಗೋಚರನ ಸಭೆಯೊಳಗೆ ಹರುಷದಿಯಾದವರೆಲ್ಲ ಕುಳಿತಾರೆ ಸಖಿಯೆ 7
--------------
ಗಲಗಲಿಅವ್ವನವರು
ಎಷ್ಟು ಸುಖವ ಕೃಷ್ಣನ ನೋಡಿನೋಡಿಸುಖಿಸುವ ಜನರು ಎಷ್ಷು ಎಷ್ಟು ಭಾಗ್ಯದಿಂದ ತುಷ್ಟರು ಉತ್ಕøಷ್ಟರಿವÀರು ಪ. ಬಾಜಾರದೊಳಗೆಲ್ಲ ತೇಜಿ ಆನೆಯ ಸಾಲುಕಾಜಿನ ಕಂಬ ಕಿಡಕಿ ಕಮಲಾಕ್ಷಿಕಾಜಿನ ಕಂಬ ಕಿಡಕಿ ಮಹಲೊಳು ಜೂಜಾಡುವರು ಕಡೆಯಿಲ್ಲ 1 ನೀಟಾದ ಬೀದೀಲಿ ಥಾಟಾದ ಮನೆಗಳುಮಾಟಾದ ಪಗಡಿ ಚದುರಂಗ ಕಮಲಾಕ್ಷಿಮಾಟಾದ ಪಗಡಿ ಚದುರಂಗ ಜೂಜಿನ ಆಟ ಆಡೋರು ಕಡೆಯಿಲ್ಲ2 ಹಿಂಡು ಕಡೆಯಿಲ್ಲ 3 ಲಿಂಬೆ ಪೊಪ್ಪುಳಿ ಸೀರೆಯನ್ನುಟ್ಟು ತುಂಬ ವಸ್ತ್ರಗಳಿಟ್ಟುಕಂಬು ಕಂದರನ ಪುರದೊಳು ಕಮಲಾಕ್ಷಿಕಂಬುಕಂದರನ ಪುರದ ಬೀದಿಯೊಳಗೆಗೊಂಬೆ ಯಾಡುವರು ಕಡೆಯಿಲ್ಲ 4 ಮ್ಯಾಲಿನ ಬೀದೀಲಿ ಬಾಲಕಿಯರಿಂದೆಷ್ಟುಶ್ರೀಲೋಲ ರಾಮೇಶನ ಪುರದೊಳಗೆ ಕಮಲಾಕ್ಷಿಶ್ರೀಲೋಲ ರಾಮೇಶನ ಪುರದ ಬೀದಿಯೊಳಗೆ ಗೋಲಿಯಾಡುವರು ಕಡೆಯಿಲ್ಲ 5
--------------
ಗಲಗಲಿಅವ್ವನವರು
ಎಷ್ಟೆಂದು ಹೇಳಲಮ್ಮಯ್ಯಕೃಷ್ಣನ ದಯವ ದಿಟ್ಟ ಪಾಂಡವರಲ್ಲೆಪ್ರಾಣ ಇಟ್ಟುಕೊಂಡಿ ಹನಮ್ಮ ಪ. ನೀರಜಾಕ್ಷಗೆ ನಮಿಸಿ ವೀರರೈವರು ಮಹಾದ್ವಾರದಲ್ಲಿ ಹೋರೆಂದು ಸಾರಿ ಹೇಳಿದೆನಮ್ಮಮಾರನಯ್ಯನ ಪಿತನ ಮೋರೆ ನೋಡುತಲಿತೀವ್ರ ಕರೆತಾರೆ ಮುತ್ತಿನ ಹಾರ ನಿನಗೆ ಈವೆನೆಂದ1 ಇಂದು ಮುಖಿಗೆ ನಾನು ವಂದಿಸಿ ಐವರು ಹೊರಗೆ ಬಂದಾರೆ ಹೀಗೆಂದೆ ನಮ್ಮಯ್ಯಮಂದಹಾಸನು ದಯದಿಂದ ನೋಡುತಲೆನ್ನತಂದು ತೋರಮ್ಮ ತೋಳಬಂದಿ ನಿನಗೀವೆನೆಂದ2 ಪುಟ್ಟ್ಟಸುಭದ್ರೆ ಪಾಂಡವರ ಪಟ್ಟದರಾಣಿ ದ್ರೌಪತಿಅಷ್ಟೂರೂ ಬಂದಾರೆಂಬೊ ಉತ್ಕ್ರಷ್ಟ ಹೇಳಿದೆನಮ್ಮತುಷ್ಟÀನಾಗಿ ರಮಿಯರಸು ಥಟ್ಟನೆ ಕರೆತಾರೆÀಂದುಕೊಟ್ಟು ವೀಳ್ಯವ ದಯದ ವೃಷ್ಟಿಗರೆದನಮ್ಮ 3
--------------
ಗಲಗಲಿಅವ್ವನವರು
ಎಷ್ಟೆಷ್ಟು ಜನ್ಮಗಳ ಕಷ್ಟಂಗಳನು ಸಹಿಸಿ ನಿಷ್ಠೆಯಿಂ ತಪಗೈಯ್ದ ಶ್ರೇಷ್ಠಫÀಲದಿ ಕರವ ಪಿಡಿದೆ ಪೇಳುವದೇನು ನಡೆದ ಕಾರ್ಯಕೆ ಮನದಿ ಮಿಡುಕಲೇನು ಬಟ್ಟೆಗೇ ಗತಿಯಿಲ್ಲ ಪುಟ್ಟಿದಂತಿಹನಲ್ಲ ಹುಟ್ಟು ನೆಲೆಯರಿತಿಲ್ಲ ದಿಟ್ಟನಲ್ಲ ಅಹಿಂಸೆಯೆ ಮತ್ರ್ಯರಿಗೆ ಸಹಜಧರ್ಮವದೆಂದು ಬಹುನೀತಿ ಪೇಳುವನು ಬುದ್ಧನಿವನು ಬೆತ್ತಲೆಯೆ ಮನೆಮನೆಗೆ ಸುತ್ತುತಿಹನೆ ಉತ್ತಮಾಂಗನೆಯರ ಚಿತ್ರ ಚಲಿಸಿ ಮತನೆನ್ನಿಸಿ ನಲಿವ ಉನ್ಮತ್ರನಿವನೆ
--------------
ನಂಜನಗೂಡು ತಿರುಮಲಾಂಬಾ
ಏಕಾದಶಿ ಉತ್ಸವಗೀತೆ ಲೋಕನಾಯಕನ ಏಕಾದಶಿಯ ಉತ್ಸವಕೆ ಅ ನೇಕ ವಿಧದಿಂದ ಪಟ್ಟಣವ ಸಿಂಗರಿಸಿ 1 ಸುಣ್ಣ ಕೆಮ್ಮಣ್ಣಿಂದ ಕಾರಣೆಯನು ರಚಿಸಿ ಚೀಣೆ ಚೀಣಾಂಬರದ ಮೇಲುಕಟ್ಟುಗಳು 2 ಕದಳಿಯ ಕಂಬಗಳು ಗೊನೆಸಹಿತ ನಿಲ್ಲಿಸಿ ತೆಂಗು ಕ್ರಮುಕದ ಫಲವ ತಂದು ಸಿಂಗರಿಸಿ 3 ವಿಧ ವಿಧವಾದ ಪುಷ್ಪಗಳನು ತರಿಸಿ ಮದನನಯ್ಯನ ಮಂಟಪವ ಸಿಂಗರಿಸಿ 4 ಶುದ್ಧ ಪಾಡ್ಯದ ದಿವಸ ಮುದ್ದು ಶ್ರೀರಂಗ ಅಧ್ಯಯನೋತ್ಸವಕೆಂದು ಪೊರಟು ತಾ ಬಂದ 5 ಭಟ್ಟರು ವೇದಾಂತಿ ಜಯಿಸಿದರ್ಥವನು [ನಟ್ಟ]ಮಾವಾಸೆರಾತ್ರಿಯಲಿ ಅರೆಯರ್ಪಾಡಿದರು 6 ಸಂಧ್ಯಾರಾಗವ ಪೋಲ್ವ ಅಂಗಿಕುಲಾವಿ ಛಂದ ಛಂದದ ಆಭರಣವನು ಧರಿಸಿ 7 ಸಿಂಹನಡೆಯಿಂದ ಮೂರಡಿಯಲಿ ನಿಂದು ಮಹಾಶ್ರೀವೈಷ್ಣವರಿಗೆ ಶ್ರೀಪಾದವಿತ್ತು 8 ಮಂತ್ರಿ ಎದುರಲಿ ನಿಂತು ಮಾಲೆಗಳನಿತ್ತು ಕಂತುಪಿತ ಬಂದ ನಾಗಿಣಿಯ ಮಂಟಪಕೆ 9 ವಾಸುಕೀಶಯನಮಂಟಪದಲಿ ನಿಂತು ದಾಸಿ ವರವನು ಸಲಿಸಿದ ಕ್ಲೇಶನಾಶಕನ 10 ಸುರರಿಗೊಡೆಯನು ಸುಂದರಾಂಗ ತಾ ಬಂದು [ವರ]ಸುಲ್ತಾನಿ ಎದುರಲಿ ನಲಿನಲಿದು ನಿಂದು 11 ಕುಂದಣದ ಛತ್ರಿ ಚಾಮರಗಳಲುಗಾಡೆ ಇಂದಿರಾರಮಣ ಸತಿಯಿದುರೆ ನಲಿದಾಡೆ 12 ಆದಿಮೂರುತಿ ಮಂಟಪದೊಳು ನಿಂತು ಆದಿ ಆಳ್ವಾರುಗಳಿಗೆಲ್ಲ ಆಸ್ಥಾನವಿತ್ತು 13 ವಿಷ್ಣುಚಿತ್ತರು ಮಾಡಿದರ್ಥಂಗಳನ್ನು [ವಿಶೇಷ]ದಭಿನಯದಿಂದ ಪೇಳಿದರು14 ಅರೆಯರು ಬಂದು ತಾವೆದುರಲ್ಲಿ ಪಾಡೆ ಭೂ ಸುರೋತ್ತಮರೆಲ್ಲ ಹರುಷದಿಂ ನೋಡೆ 15 ಮಂಟಪದಲ್ಲಿ ನೇವೇದ್ಯವನ್ನು ಗ್ರಹಿಸಿ ವೈ ಕುಂಠವಾಸನು ಬಂದ ವೈಯ್ಯಾರದಿಂದ16 ದರ್ಪಣದೆದುರಲ್ಲಿ ನಿಂತು ಶ್ರೀರಂಗ ಕಂ ದರ್ಪನಾಪಿತ ಬಂದ ಆನಂದದಿಂದ 17 ಮದಗಜದಂತೆ ಮೆಲ್ಲಡಿಯಿಟ್ಟು ಬಂದು ಒದಗಿ ಮೂರಡಿಯಲ್ಲಿ ತಿರಿಗುತಾ ನಿಂದು 18 ಅಡಿಗೊಂದು ಉಭಯವನ ಗ್ರಹಿಸಿ ಶ್ರೀರಂಗ ಬೆಡಗಿನಿಂದಲೆ ಬಂದ ಮಂಟಪಕೆ ಭವಭಂಗ 19 ಶ್ರೀಧರನು ಮಂಟಪದಲ್ಲಿ ತಾ ನಿಂತು ಮ ರ್ಯಾದೆಯನಿತ್ತು ಶ್ರೀವೈಷ್ಣವರಿಗೆ 20 ವೈಯ್ಯಾರ ನಡೆಯಿಂದ ಒಲಿದೊಲಿದು ಬಂದು [ನಯ] ಸೋಪಾನದೆದುರಲಿ ನಲಿನಲಿದು ನಿಂದು 21 ಕರ್ಪೂರ ಪುಷ್ಪವನು ಬೆರೆಸಿ ತಾವ್ತಂದು ಅಪ್ರಮೇಯನ ಶಿರದೊಳೆರೆಚಿದರು [ಅ]ಂದು 22 ಇಂದಿರಾರಮಣ ಗುಂಭಾರತಿಯ ಗ್ರಹಿಸಿ ಎಂದಿನಂದದಿ ತನ್ನ ಮಂದಿರಕೆ ನಡೆದ 23 ಬಿದಿಗೆ ತದಿಗೆಯು ಚೌತಿ ಪಂಚಮಿಯಲ್ಲಿ ವಿಧವಿಧದ ಆಭರಣಮನೆ ಧರಿಸಿ 24 ಷಷ್ಠಿ ಸಪ್ತಮಿ ಅಷ್ಟಮಿ ನೌಮಿಯಲ್ಲಿ ಸೃಷ್ಟಿಯೊಳಗುಳ್ಳ ಶೃಂಗಾರವನೆ ಮಾಡಿ 25 ದಶಮಿಯ ದಿವಸದಲಿ ಕುಸುಮನಾಭನಿಗೆ ಶಶಿಮುಖಿಯ ಅಲಂಕಾರವನ್ನು ಮಾಡಿದರು 26 ಸುರರು ಅಸುರರು ಕೂಡಿ ಶರಧಿಯನು ಮಥಿಸೆ ಭರದಿ ಅಮೃತವು ಬರಲು ಅಸುರರಪಹರಿಸೆ 27 ಸುರರೆಲ್ಲರು ಬಂದು ಶ್ರೀಹರಿಗೆ ಇಡಲು ಮೊರೆ ಸಾಧಿಸುವೆನೆಂದೆನುತ ವರಗಳನು ಕೊಡಲು 28 ಎನಗೆ ತನಗೆಂದು ಹೋರಾಡುವ ಸಮಯದಿ ವನಜನಾಭನು ಮೋಹಿನಿಯ ರೂಪಿನಲಿ 29 ವಾರೆಗೊಂಡೆಯವನು ವೈಯ್ಯಾರದಿಂದ ಧರಿಸಿ ತೋರಮುತ್ತಿನ ಕುಚ್ಚುಗಳ ಅಳವಡಿಸಿ 30 ಹೆರಳು ರಾಗಟೆಯು ಬಂಗಾರಗೊಂಡ್ಯಗಳು ಅರಳುಮಲ್ಲಿಗೆ ಹೂವ ದಂಡೆಗಳ ಮುಡಿದು 31 ಪಾನಪಟ್ಟಿಯು ಸೂರ್ಯಚಂದ್ರಮರನಿಟ್ಟು ಫಣೆಯಲ್ಲಿ ತಿದ್ದಿದ ಕಸ್ತೂರಿ ಬಟ್ಟು 32 ಚಾಪವನು ಪೋಲುವಾ ಪುಬ್ಬಿನಾ ಮಾಯ ಆಪ್ತಭಕ್ತರನು ಕರುಣದಿಂ ನೋಡುವ ನೋಟ 33 ತಿಲಕುಸುಮವನು ಪೋಲ್ವ ನಾಸಿಕದ ಚಂದ ಥಳಥಳಿಸೆ ಮುತ್ತಿನ ಮುಕುರದ ಅಂದ 34 ಕುಂದಕುಸುಮವ ಪೋಲ್ವ ದಂತಪಂಕ್ತಿಗಳು ಕೆಂ[ದ]ವಳಲತೆಯಂತಿರುವ ಅಧರಕಾಂತಿಗಳು 35 ಚಳತುಂಬು ಬುಗುಡಿ ಬಾವುಲಿಗಳನಿಟ್ಟು ಥಳಥಳಿಪ ವಜ್ರದ ಓಲೆ ಅಳವಟ್ಟು 36 ಗಲ್ಲದಲಿ ಪೊಳೆಯುವ ದೃಷ್ಟಿಯ ಬೊಟ್ಟು ಮೊಗ ದಲ್ಲಿ ಮಂದಹಾಸದ ಕಾಂತಿ ಇನ್ನಷ್ಟು 37 ಕೊರಳೊಳಗೆ ಹಾರ ಪದಕವನು ತಾನಿಟ್ಟು [ಉರದಿ] ದುಂಡುಮುತ್ತಿನ ದಿವ್ಯಸರಗಳಳವಟ್ಟು 38 ಧರಿಸಿ ನಾನಾವಿಧ ಪುಷ್ಪ ಗಿಣಿಮಾಲೆಯನು ಅರಳುಮಲ್ಲಿಗೆ ಹೂವಸರಗಳಲಂಕರಿಸಿ 39 ಉಂಗುರ ವಂಕಿ ಬಾಜಿಯ ಬಂದುದ್ವಾರ್ಯ(?) ಕೈಕಟ್ಟು ಮುಂಗೈ ಮುರಾರಿಯನ್ನು ಇಟ್ಟು 40 ಬಿಳಿಯ ಪೀತಾಂಬರವ ನಿರಿಹಿಡಿದುಟ್ಟು ಥಳಥಳಿಪ ಕುಂದಣದ ವಡ್ಯಾಣವಿಟ್ಟು 41 ಅಂದುಗೆ ಗೆಜ್ಜೆಗಳ ಚಂದದಿಂದಿಟ್ಟು ಕುಂದಣದ ಪಾಡಗವನ್ನು ಅಳವಟ್ಟು 42 ಈ ರೂಪಿನಿಂದ ಅಸುರರನು ಮೋಹಿಸುತ ಸುರರಿಗೆ ಅಮೃತವನು ಎರೆದು ಪಾಲಿಸುತ 43 ಮೂರುಕಣ್ಣುಳ್ಳವನು ಮೋಹಿಸಿದ ರೂಪ ಈ[ರೇಳು]ಲೋಕದವರಿಗೆ ತೋರಿದನು ಭೂಪ 44 ಗರುಡಮಂಟಪದಲ್ಲಿ ನಿಂತು ಶ್ರೀರಂಗ ಬೆರಗಿನಿಂದೆಲ್ಲರಿಗೆ ಬಿಡದೆ ಸೇವೆಯನಿತ್ತು 45 ಆಳ್ವಾರುಗಳಿಗೆಲ್ಲ ವಸ್ತ್ರಗಂಧವನಿತ್ತು ಅವರವರ ಆಸ್ಥಾನಕ್ಕವರ ಕಳುಹಿಸುತ 46 ಬಂದು ಬಾಗಿಲ ಹಾಕಿ ಇಂದಿರಾರಮಣ ನಿಂದ ವೆಂಕಟರಂಗ ಆನಂದದಿಂದ 47
--------------
ಯದುಗಿರಿಯಮ್ಮ
ಏಕಿಷ್ಟು ಕರುಣವೊ ಶ್ರೀಕೃಷ್ಣದೇವ ಪ ನಾಲ್ಕ್ಹತ್ತು ಲೋಕದಲಿ ಸುಖ ಸೂರೆ ಮಾಳ್ಪೊ ಹರಿ ಅ.ಪ ಮುಕ್ತಗಣ ನೋಡಯ್ಯ ನಿತ್ಯಮುಕ್ತಳ ನೋಡು ಶಕ್ತವಿಧಿ ವಾಣೀಶ ಭಕ್ತಿ ದೇವ ಫಣಿ ರುದ್ರ ಇವರ ಸತಿಯರ ನೋಡು ಉತ್ತಮೋತ್ತಮ ಸುಖವ ಸೂರೆಗೊಂಬರೊ ಹರಿಯೆ 1 ನಿನ್ನಾರು ಮಹಿಷಿಯರ ಸುರಪ ಸುರಗಣ ನೋಡು ಪುಣ್ಯತಮ ಸುರಮನಿಯ ಭೃಗುವ ನೋಡು ಚಿಣ್ಣ ಪ್ರಹ್ಲಾದನನ್ನ ಬಲಿ ಧ್ರುವ ಭೀಷ್ಮನ್ನ ಇನ್ನು ದ್ರೌಪದಿ ಶುಕನ ಆನಂದ ನೋಡಂiÀi್ಯ 2 ಅಂಬರೀಷನ ನೋಡು ರಾವಣಾನುಜ ಜನಕ ಪರೀಕ್ಷಿತ ವೃತ್ತ ಶಬರಿ ತುಂಬಿದ ಸದ್ಭಕ್ತ ಋಷಿಪತ್ನಿಯರ ನೋಡು ಕಂಬನಿಯ ಸುರಿಸುವೆನೊ ಕರುಣಿಸೊ ಹೃದ್ಗøಹದಿ 3 ನೀಯೆನ್ನ ಸತ್ವ ನೀಯೆನ್ನ ಜ್ಞಾನ ನೀಯೆನ್ನ ಮನ ಬುದ್ಧಿ ಕರುಣ ನಿಧಿಯೆ ನೀಯೆನ್ನ ಪ್ರಾಣರತಿ ನೀಯೆನ್ನ ಸತ್ಕರಣ ನೀಯೆನ್ನ ಧೃತಿ ಶಾಂತಿ ನೀಯೆನ್ನ ಸರ್ವನಿಧಿ 4 ನೀ ಮಾಡೆ ನಾ ಮಾಳ್ಪೆ ನೀನಾಡಿಸಿದರಾಡ್ವೆ ಕಾಮದನೆ ಕಾಮಪಿತ ಜಯೇಶವಿಠಲ ಶ್ರೀ ರಮಣ ಸರ್ವೇಶ ಈ ಮನಸು ನಿನ್ನಲ್ಲಿ ಪ್ರೇಮದಿ ನೆಲಸಿ ಇರುವಂತೆ ಕೃಪೆಮಾಡು 5
--------------
ಜಯೇಶವಿಠಲ