ಒಟ್ಟು 8009 ಕಡೆಗಳಲ್ಲಿ , 129 ದಾಸರು , 4271 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ಶರಣರ ಸುರಧೇನು ಜಯ ಜಯ ಸೀತಾರಮಣ ಪ ಸೊಕ್ಕಿದ ದೈತ್ಯರ ಬಾಧಿಗಾರದಿಹ ದೇವರ್ಕಳ ಮೊರೆಯನು ಕೇಳಿ ಮಿಕ್ಕನುಜರ ಕೂಡ ಬೆಳೆದು ಅಕ್ಕರದಲಿ ಕಾಯದು ಬರಲಿ ನಕ್ಕಿ ಕೈವಿಡಿದನೇ ಜಯತು 1 ಆಖರ ದೂಷಣರಳಿದು ತಾಕಪಿಕರಢಿಯನೆ ಕೂಡಿ ಬೇಕಾದ ಸ್ಥಿರಪದ ನೀಡಿ ಸಾಕೇತ ಪುರಾಧೀಶ ಜಯತು 2 ಲಲನೆ ದಾಮದಲಿ ಕುಳ್ಳಿರಲಿ ಬಲಕವಶಿಷ್ಠ ಭರತ ಶತೃಘ್ನ ಕೂಡೆ ನೆಲಿಛತ್ರ ವಿಡಯೆ ಲಕ್ಷ್ಮಣನು ಉಳಿದಸುರನರರು ಕುಳ್ಳಿರಲಿ ಬೆಳಗಿದಳಾರತಿ ಜಯತು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯಜಯತು ಶುಭಕಾಯ ಜಯಜಯತು ಹರಿಪ್ರೀಯಜಯತು ಜೀಯ ಮಧ್ವಾಖ್ಯಮುನಿರಾಯಪ. ರಾಮಾವತಾರದಲಿ ಹನುಮಂತನಾಗಿ ನೀತಾಮಸನ ಪುರವ ಅನಲಗಾಹುತಿಯನಿತ್ತೆಭೂಮಿಜೆಯ ಕುಶಲವನು ರಘುನಾಥಗರುಹಿದೆಸ್ವಾಮಿಕಾರ್ಯವ ವಹಿಸಿ ಖಳರ ನೀ ತರಿದೆ 1 ದ್ವಾಪರಾಂತ್ಯದಲಿ ಶ್ರೀಕೃಷ್ಣನಂಘ್ರಿಯ ಭಜಿಸಿಪಾಪಿಮಾಗಧ ಬಕ ಕೀಚಕಾದಿಗಳಕೋಪದಿಂದಲಿ ತರಿದು ಕುರುಕುಲವ ನೀನಳಿದೆ ಪ್ರ-ತಾಪದಿಂದಲಿ ಮೆರೆದೆ ಖಳರ ನೀ ಮುರಿದೆ 2 ಮಾಯಿಗಳು ಹೆಚ್ಚಿ ಮತವೆಲ್ಲ ಸಂಕರವಾಗಿತಾಯಿಗಳಿಲ್ಲದ ಶಿಶುಗಳಂತೆ ಸುಜನರಿರಲುನೀಯವತರಿಸಿ ಮತವೆಲ್ಲ ಉದ್ಧರಿಸಿ ನಾ-ರಾಯಣನೆ ಮೂಜಗಕೆ ಪರದೈವವೆಂದೊರೆದೆ 3 ದುರುಳ ವಾದಿಗಳಿಗುತ್ತರವ ಕೊಡಬೇಕೆನುತಸರುವ ಶಾಸ್ತ್ರಾಮೃತವ ಸೃಜಿಸಿ ವಾಕ್ಯಗಳ ಕ್ರೋಡಿಸಿದರುಶನ ಗ್ರಂಥಗಳ ರಚಿಸಿ ಶಿಷ್ಯರಿಗಿತ್ತೆಪರಮ ತತ್ವದ ಖಣಿಯೆ ಗುರುಶಿರೋಮಣಿಯೆ 4 ನಿನ್ನ ಮತವೇ ವೇದಶಾಸ್ತ್ರಗಳ ಸಮ್ಮತವುನಿನ್ನ ಮತವೇ ಇಹಪರಕೆ ಸಾಧನವುಪನ್ನಂಗಶಯನ ಶ್ರೀ ಹಯವದನದಾಸರೊಳುನಿನ್ನ ಪೋಲುವರುಂಟೆ ಮಧ್ವಮುನಿರಾಯ 5
--------------
ವಾದಿರಾಜ
ಜಯಜಯಾ ಶ್ರೀನಿವಾಸಾ ಜಗದೀಶಾ ವೆಂಕಟೇಶಾ ದಯದಿಂದಲಿ ಪಾಲಿಸೆನ್ನಾ ದೋರಿನಿಜ ಪ್ರಕಾಶಾ ಪ ಉರಗಾದ್ರಿಯಲ್ಲಿ ಬಂದು ಭೂವೈಕುಂಠಿದೇಯಂದು ಕರದಿಂದ ಮಹಿಮೆದೋರಿ ತಾರಿಸುವ ಜನದಿಂದು 1 ಧರ್ಮಾರ್ಥ ಕಾಮ್ಯ ಚತುರ್ವಿಧಮುಕ್ತಿಗಳು ಧರ್ಮವರಿತೆಸಾಧುರಿಗೆ ನೀಡುತಿಹೆ ದಯಾಳು 2 ಕುಲಧರ್ಮದಿಂದಲೆನೆಗೆ ಮಾನ್ಯತಾನಬಂದ್ಹಾಂಗೆ ವಲಮೆಯಿಂದ ಪರಗತಿಗೆ ಕುಡುಮಾನ್ಯತೆನವೀಗ 3 ಮಂದರೊಳು ಮಂದನಾನು ಜ್ಞಾನಭಕ್ತಿಯರಿಯೆನು ತಂದೆ ಮಹಿಪತಿಸ್ವಾಮಿ ಇಂದು ಉದ್ಧರಿಸುನೀನು 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯತೀರ್ಥ ಗುರು ಹೃದ್ಗುಹಾಂತರ ವಾಸ ವಾಯ್ವಂತರ್ಗತ ಶ್ರೀ ಕೃಷ್ಣಯ್ಯ ಜೀಯಾ ಪ ಕಾಯೈಯ ನಿನ್ನವ ನಿವನೆಂದು ಅನುದಿನದಿ ಕಾಯ ಮನ ವಚನದಲಿ ನಿನ್ನ ನೆನವಿರಲಿ ಜೀಯಾ ಶ್ರೀ ವಿಜಯರಾಯರ ಸೇವೆ ಕಾರ್ಯಗಳಿಗಭಯವ ನಿಡೈಯಾ ಜೀಯಾ 1 ಲೌಕಿಕದಲ್ಲಿಹನೆಂದು ನಿರಾಕರಿಸದೇಲೆ ನಿನ್ನ ಏಕಾಂತ ಭಕುತಿಯನಿತ್ತು ಸಲಹೋ ಶ್ರೀ ಕಳತ್ರನೆ ಇವನ ವ್ಯಾಕುಲಗಳ ಹರಿಸಿ ಕೃಪಾಕಟಾಕ್ಷದಿ ನೋಡಿ ಕಾಯಬೇಕೈಯಾ 2 ಭಕ್ತವತ್ಸಲ ನಿನ್ನ ಭಕ್ತನಿವನೆಂದೆನಿಸು ಭಕ್ತಿಬಲಜ್ಞಾನ ಸಾಧನವನಿತ್ತು ಶಕ್ತನೆನಿಸಿಹಪರದಿ ಭಕ್ತಿನಿನ್ನೊಳು ಇರಲಿ ಮುಕ್ತರೊಡೆಯ ಕೃಷ್ಣವಿಠಲ ಶ್ರೀ ವೆಂಕಟೇಶ 3
--------------
ಕೃಷ್ಣವಿಠಲದಾಸರು
ಜಯತೀರ್ಥ ಗುರು ಹೃದ್ಗುಹಾಂತರವಾಸ ಪ ವಾಯುವಂತರ್ಗತ ಕೃಷ್ಣಯ್ಯ ಜೀಯ್ಯ ಅ.ಪ ಕಾಯಯ್ಯಇವ ನಿನ್ನವನೆಂದು ಅನುದಿನ ಕಾಯ ವಾಚದಲಿ ನಿನ್ನ ನೆನವಿರಲಿ ಜೀಯ ಶ್ರೀ ವಿಜಯರಾಯರ ಸೇವಾ ಕಾರ್ಯಗಳಿಗಭಯವ ನೀಡಯ್ಯ 1 ಲೌಕಿಕದಲ್ಲಿಹನೆಂದು ನಿರಾಕರಿಸದಲೆ ನಿನ್ನ ಏಕಾಂತ ಭಕ್ತಿಯನಿತ್ತು ಸಲಹೋ ಶ್ರೀ ಕಳತ್ರನೆ ಇವನ ವ್ಯಾಕುಲವ ಹರಿಸಿ ಕೃ ಪಾ ಕಟಾಕ್ಷದಿ ನೋಡಿ ಕಾಯಬೇಕಯ್ಯ 2 ಭಕ್ತವತ್ಸಲ ನಿನ್ನ ಭಕ್ತನಿವನೆಂದೆನಿಸೊ ಭಕ್ತಿಬಲಜ್ಞಾನ ಸಾಧನವನಿತ್ತು ಭಕ್ತವತ್ಸಲನೆಂಬೊ ಬಿರುದು ನಿನ್ನೊಳು ಇರಲಿ ಮುಕುತರೊಡೆಯ ದೇವಾ ಶ್ರೀ ವೇಂಕಟೇಶ 3
--------------
ಉರಗಾದ್ರಿವಾಸವಿಠಲದಾಸರು
ಜಯತೀರ್ಥ ಮುನಿವರ್ಯ ಪ ದಯತೋರಿ ಪೊರೆಯಯ್ಯ ವಿಜಯಸಾರಥಿಪ್ರಿಯ ಅ.ಪ ಶ್ರೀಶಶಯನಾವೇಶ ಮಹೇಶ ಪ್ರತಿಬಿಂಬ ಸು ರೇಶ ಯತಿಕುಲಾಧೀಶ ಪಾಲಿಸಯ್ಯ ಏಸು ನಿನ್ನಯ ಕರುಣರಾಶಿ ಎಂತಿಹುದಯ್ಯ ಆಸೆ ಸಲಿಸಲು ಮನೆಗೆ ಲೇಸಾಗಿ ನೀ ಬಂದೆ 1 ಪಶುಪತಿಯ ಮತ ದಹಿಸಿ ಅಸುಪತಿಯ ಮತ ಮೆರೆದೆ ವಸುಮತಿಯ ಸುರನಾಗಿ ಬಂದು ನಿಂದೆ ಪಶುಪ್ರಾಯನೆಂದೆನ್ನ ಉದ್ಧರಿಸಲೋಸುಗದಿ ಬಿಸಜತವಪಾದ ಪಾಂಸವನಿತ್ತೆ 2 ಜಯಗುರುವೆ ಶ್ರೀ ವಿಜಯದಾಸರಲ್ಲೆನ್ನ ಮನೋ ಜಯವು ಪುಟ್ಟಿಸಿದ ನಿನ್ನ ಕರುಣವೆಂತೊ ಸೃಜಿಸಿ ತೋರಿದ ಸ್ವಪ್ನ ನಿಜವು ಆಗಲಿ ಎಂದು ಬಿಜಯ ಮಾಡಿದೆ ನಿನ್ನ ನಿಜದಾಸರೊಡನೆ 3 ಜಯಗುರುವೆ ನಿಮ್ಮ ಹುದ್ಗುಹದಲಿ ನಲಿಯುತಿಹ ವಾಯುವಂತರ್ಗತ ಕೃಷ್ಣನ ತೋರೋ ಜಯತು ಶ್ರೀ ವೇಣುಗೋಪಾಲ ಮೂರ್ತೇ ಜಯತು ಶ್ರೀ ವೇಣುಗೋಪಾಲನೆಂದೆನಿಸಿಯ್ಯ 4 ಸೃಷ್ಟಿಗೆ ಬಂದು ನಾನೆಷ್ಟು ಜನ್ಮವ ಕಳೆದೆ ಪುಟ್ಟಿದೆನೋ ನಾನೀಗ ಈ ಜನ್ಮದಿ ಪುಟ್ಟಲಿಲ್ಲವೋ ಜ್ಞಾನ ಹರಿ ಗುರುಸ್ಮರಣೆಗೆ ಇಟ್ಟಕಡೆಗಣ್ಣÂನೋಳಿಷ್ಟು ನೋಡಯ್ಯ5 ವಾದಿಮಸ್ತಕ ಭೇದಿ ಮೋದತೀರ್ಥರ ತತ್ತ್ವ ಛೇದಿಸಿ ವಾಕ್ ಯುದ್ದ ಯೂಥಪಗಳನೆಲ್ಲ ಗೆದ್ದು ಸತ್ತತ್ತ್ವದಾ ಸಿಂಹನಾದವ ಮಾಡ್ದೆ 6 ಮಧ್ವರಾಯರಿಗೆ ನೀ ಮುದ್ದುಮೊಮ್ಮಗನಯ್ಯ ಸದ್ವಿದ್ವದ್ಗ್ರಂಥ ಭಾರವನೆ ವಹಿಸಿ ಮುದ್ದು ತೊತ್ತೆನಿಸಿ ಎತ್ತಾಗಿ ಸೇವಿಸಿ ಯತಿಯಾಗಿ ನಿಂದ ತತ್ತ್ವಮುತ್ತಿನ ಖಣಿಯೆ 7 ಇಳೆಯೊಳಗೆ ನಿನ್ನಂಥ ಕರುಣಾಳುಗಳ ಕಾಣೆ ಅಳವಲ್ಲ ವರ್ಣಿಸಲು ನಿನ್ನ ಗುಣಗಳನು ಮಳಖೇಡವಾಸ ಯತಿಕುಲಾಧೀಶಾ 8 ಗುರುವೆ ನಿನ್ನಯ ಕರುಣಕವಚ ತೊಟ್ಟವರ ಚರಣಕಮಲದೊಳಿಹ ಮಧುಪನೆಂದೆನಿಸೋ ನಿರುತ ದೃಢಭಕುತಿ ಶ್ರೀ ವೇಂಕಟೇಶನೊಳಿಟ್ಟುಪೊರೆಯೊ ಶ್ರೀ ಗುರುವರಾಗ್ರಣಿಯೆ ನಮೋ ಎಂಬೆ9
--------------
ಉರಗಾದ್ರಿವಾಸವಿಠಲದಾಸರು
ಜಯತೀರ್ಥರು ಕಂಡೆ ಕಂಡೇ ಗುರುಗಳ - ಕಂಡೆ ಕಂಡೇ ಪ ಕಂಡೆ ಕಂಡೆನು ಕರುಣ ನಿಧಿಯನುತೊಂಡರನು ಬೆಂಬಿಡದೆ ಕಾಯ್ವರ ಅ.ಪ. ತಂದೆ ವೆಂಕಟೇಶ ವಿಠಲ ದಾಸರ | ಮಂದಿರದಿ ವಾತದ್ವಿತಿಯ ಪೆಸರಿನವಂದನೀಯರು ಗೈಯ್ಯುತಿರ್ಪುದ | ಅಂದ ಪುಜೆಯ ಛಂದದಿಂದಲಿ 1 ಯೋಗಿ ಕುಲಮಣಿ ಟೀಕಾಚಾರ್ಯರ 2 ಕಾಯಜನ ಶರ ಭಯವಿದೂರನ | ಮಾಯಿಮತ ಮಹತಿಮಿರ ಸೂರ್ಯನಪಾವಮಾನಿ ಮತಾಬ್ಧಿ ಚಂದ್ರನ | ಜಯ ಮುನೀಂದ್ರನ ವೀತ ಶೋಕನ 3 ಹಿಂಡು ಮಾಯ್ಗಜ ಗಂಡು ಸಿಂಹನ 4 ವಾತ ಸುತನಲಿ ಸೀತೆ ಪತಿಯನುಪ್ರೀತಿಯಿಂದಲಿ ಭಜಿಪ ಯತಿಗಳ | ದೂತ ಗುರು ಗೋವಿಂದ ವಿಠಲನ 5
--------------
ಗುರುಗೋವಿಂದವಿಠಲರು
ಜಯತು ವೈಕುಂಠರಮಣಾ ಉಪ್ಪವಡಿಸಾ ಪ ವಾಕಾರವಳಿಯೆ ಬಾಲಕತನವನಳ ವಡಿಸಿ ಶ್ರೀಕರಾಂಬುಜದಿಂದ ಪಾದಾಂಗುಟವ ಪಿಡಿದ ತನುಜನಂದದೀ ವಾಕ್ಕಿಂಗೆ ದೃಷ್ಟಾಂತವಾಗಿ ಪವಡಿಸಿಹ ಲ ಬೇಕು ನಲಿದುಪ್ಪವಡಿಸಾ 1 ಮಣಿಯ ಬೆಳಗಿನಲಿ ಸುರನಿಕರವೆಡಬಲದಿ ಸಂ ದಣಿಸಿ ಬರಲು ನಾರದ ತುಂಬುರರು ಭವದೀಯ ಗುಣಗಣಂಗಳ ಪಾಡಲೂ ಗುಣನಿಧಿಗಳೆನಿಪ ಶ್ರೀದೇವಿ ಭೂದೇವಿಯರು ಕ್ಷಣವಗಲಲರಿಯದೇ ಪಾದಾಂಬುಜವ ಮನ ದಿವಿಜ ಮಣಿಯೆ ಟಿಲಿದುಪ್ಪವಡಿಸಾ 2 ನಿಗಮನಾಲಕು ಕುಂದಣದ ಸರಪಣಿಗಳಾಗೆ ಬಗಸಿಗಂಗಳ ಭಾವಕಿಯರಾಗಿ ಉಪನಿಷ ತ್ತುಗಳು ನೆರೆದಾನಂದದೀ ಮುಗುದರರಸಾ ಮುಕುಂದಾಯೆನಲು ನಲಿಯೆ ಪಾಲ್ಗಡಲಲೊಡೆಯ ವೇಲಾಪುರದ ಚೆ ನ್ನಿಗರಾಯ ವೈಕುಂಠರಮಣ ತವಶರಣ ಜನ ರುಗಳ ಸಲಹುಪ್ಪವಡಿಸಾ 3
--------------
ಬೇಲೂರು ವೈಕುಂಠದಾಸರು
ಜಯದೇವ ಜಯದೇವ ಜಯ ರಾಘವ ರಾಮಾ ದಯದಲಿಯಚ್ಚರನೀವದು ಸ್ಮರಿಸಲುತವನಾಮಾ ಪ ಹಭವ ಭವಮುಖರಮೊರೆಯನು ಕೇಳುತಲಿ ದಶರಥ ಕೌಲಸ್ಯರಾ ಬಸಿರಿಂದುದಿಸುತಲಿ ರುಷಿ ಮುಕರಕ್ಷಿಸಿ ತಾಟಕಿ ದೇಹದಿಬಿಡಿಸುತಲಿ ವಸುಧಿಲಿ ಶಿಲೆಯನು ಪಾದದದಿಮೆಟ್ಯುದ್ಧರಿಸುತಲಿ 1 ಹರುಷದಿ ಕೌಶಿಕನೊಡನೆ ಮಿಥಿಲೆಗೆ ಪೋಗುತಲಿ ಹರದು ಮುರಿದು ಜನಕಜೆ ಮಾಲೆಯ ಧರಿಸುತಲಿ ಬರಲಾನಂದದಿ ಭೃಗುಪತಿ ದಶರಥ ದರಶನ ಪಾಡುತಲಿ ಅರಸುತನಕ ಕೈಕೆಯು ಬ್ಯಾಡೆನೆ ನಡೆದೈತ್ವರಿಲಿ 2 ವನದಲಿ ಭಂಗಿಸಿಶೂರ್ಪನಖಿಖರ ದೂಶಣರಾ ಅನುವರ ಕಾಂಚನ ಮೃಗವಾ ಬೆಂಬೆತ್ತಲು ದೂರಾ ಜನಕಜೆಯಾಕೃತಿ ವೈಯ್ಯಲು ಕಪಟದಿದಶಶಿರಾ ಅನುಭಜಟಾಯುವಿನಿಂದಲಿ ಕೆಳಿ ನಡದೆ ಧೀರಾ 3 ಪಥದಲಿ ಮುರಿದುಕಬಂಧವ ಶಬರಿಗೆ ಗತಿನೀಡಿ ಪ್ರಥಮದಿ ಹನುಮನ ಕಂಡು ವಾಲಿಯ ಹತಮಾಡಿ ರತಿಯಲಿ ಸುಗ್ರೀವಜಾಂಭವ ಸೈನ್ಯದ ಲೋಡಗೂಡಿ ಕ್ಷಿತಿಜೆಯಾ ಸುದ್ದಿಯತರಿಸಿ ನಡೆದೈನಲಿದಾಡಿ 4 ಸೇತುವೆ ಗಟ್ಟಿಸಿ ಶರಣವ ಬರಲು ವಿಭೀಷಣನು ಭೀತಿಯ ಹಾರಿಸಿಸೈನ್ಯದಿ ದಾಟಿದೆ ಶರಧಿಯನು ನೀತಿಯ ತಪ್ಪಿದ ರಾವಣ ಕುಂಭಶ್ರವಣರನು ಖ್ಯಾತಿಲಿ ಮಡಹಿದೆ ಅವರಾಸಂತತಿ ಸಂಪದನು 5 ಶರಣಗಸ್ಥಿತಪರಪದವಿತ್ತು ದೇವರ ಶೆರೆಬಿಡಿಸಿ ಮರಳಿದಯೋಧ್ಯಕಪುಷ್ಪಕದಿಂ ಸೀತೆಯವರೆಸೀ ಮೆರೆವತ್ಸಜರಜನನಿಯರ ಸಕಲರಸುಖಬಡಿಸಿ ಸುರಮುನಿಜನರನುಸಲಹಿದೈ ಸಾಮ್ರಾಜ್ಯವನು 6 ನಾಮದಮಹಿಮೆ ಹೊಗಳಲು ಶೃತಿಗಳಿಗಳವಲ್ಲಾ ಪ್ರೇಮದಿಸವಿಸದುಂಬುವ ಶಿವ ಸೀತಾಬಲ್ಲಾ ನೇಮದಿಸುರನಂದಾನ್ನರ ಬವ ತರಿಸಿದರಲ್ಲಾ ಕಾಮಿತ ದಾಯಕ ಗುರುಮಹಿಪತಿ ಪ್ರಭುಶಿರಿನಲ್ಲಾ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯದೇವ ಜಯದೇವ ಜಯರಾಮಲಿಂಗಾ ಜಯಜಯವೆಂದು ಬೆಳಗುವೆ ಆರತಿ ಸುರತುಂಗಾ ಪ ಸ್ವಾನಂದದ ನಿಜಕಾಶೀಪುರದಿಂದ ಅತ್ಯರಳಿ ನಾನಾಸ್ಥಳಗಳ ನೋಡುತ ಬಂದು ನೀತೀರ್ಥದಲಿ ದೀನೋದ್ದಾರ ಕಾಪಾಪನಾಶನಿ ಹರಿಸುತಲಿ ಖೂನವ ತೋರಿದೆ ಓಂಕಾರೇಶ್ವರನೆನಿಸುತಲಿ 1 ಕಾಲ ಕೆರಾಘವಸುಖದರುಕ್ಷಣಲೆಂದು ತಳಿಯೊಳುಖ್ಯಾತಿಗೆ ಬಂದು ರಾಮೇಶ್ವರನೆಂದು ನಲಿದರುಗಿರಿಜಾನಂದಿಸರ್ವದೇವರು ಬಂದು ಸಲುಹುವೆ ಭಕ್ಷರಿಗಿಷ್ಟಾರ್ಥವ ನೀಡುತಲಿಂದು 2 ನಿನ್ನಯ ಮಹಿಮೆಯ ಹೊಗಳಲು ಮನುಜರಿಗಳವಲ್ಲಾ ಮುನ್ನಾಭರಣವ ಆಗಿಹಶಶಿನೇತಾಬಲ್ಲಾ ಎನ್ನೊಳು ಬೀರುತರಕ್ಷಿಸುಘನ ತಾರಕನೊಲ್ಲಾ ಸನ್ನುತ ಮಹಿಪತಿ ನರದನ ಪ್ರಭು ಪಾರ್ವತಿನಲ್ಲಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯಮಂಗಳಂ ವೈಕುಂಠನಿಲಯಗೆ ಪ. ಆಮನಸಿಜನಯ್ಯಗೆ ಭುಜಗಭೂಷಣ ಪ್ರಿಯಗೆ ತ್ರಿಜಗತ್ಪತಿ ಪುರುಷೋತ್ತಮಗೆ ಭಜಕರಕ್ಷಕ ಶ್ರೀ ವಿಜಯಸಾರಥಿಗೆ ದ್ವಿಜರಾಜಗಮನ ಅಜಾಮಿಳವರದಗೆ 1 ಆಪನ್ನಿವಾರಣ ಅಪ್ರಮೇಯನಿಗೆ ತಾಪತ್ರಯಹರ ಶ್ರೀಪತಿಗೆ ತಾಪಸವಂದಿತ ಕೋಪವಿರಹಿತ ಗೋಪಾಲಕನಂದನ ಯದುಪತಿಗೇ 2 ಸನಕಾದಿಮುನಿಗಳಿಂದನವರತವು ಪೂಜೆಯನು ಕೈಗೊಂಬ ವನಜಾಕ್ಷಗೆ ಘನಶೇಷಗಿರಿವಾಸ ಚಿನ್ಮಯರೂಪ ಶ್ರೀ ವನಜನಾಭವೇಂಕಟಗೆ ಮಂಗಳಂ ಶ್ರೀ ಲಕ್ಷ್ಮೀಕಾಂತಗೆ3
--------------
ನಂಜನಗೂಡು ತಿರುಮಲಾಂಬಾ
ಜಯಮಂಗಳಂ ಶುಭೋದಯ ಮಂಗಳಂ ಭಯಹರಗೆ ತಿರುಪತಿಯ ವೆಂಕಟೇಶ್ವರಗೆ ಪ ಸುರಲೋಕವನು ಪಡೆದ ಶಿರದಮಕುಟದ ಪ್ರಭೆಗೆ ಸ್ಮರಚಾಪವನು ಪೋಲ್ವ ಪುರ್ಬುಗಳ ಚೆಲುವಿಕೆಗೆ ತುಂಬಿ ತುಳುಕುವ ನಯನಗಳಿಗೆ 1 ಕನಕಕುಂಡಲಗಳಿಗೆ ಘನ ನಾಸಿಕದ ಮಣಿಗೆ ಮಿನುಗುತಿಹ ಮುಗುಳುನಗೆಯೊಗುವ ಮುಖಕೆ ಇನಕೋಟಿಪ್ರಭೆಗೆ ಮಿಗಿಲೆನಿಪ ಕೌಸ್ತುಭಮಣಿಗೆ ವನಮಾಲೆಯನು ಧರಿಸಿ ಶೋಭಿಸುವ ಕಂಠಕೆ 2 ಭುಜವೆರಡರಲಿ ಶಂಖಚಕ್ರಗಳನುರೆ ಧರಿಸಿ ಅಜಸುರಾದ್ಯರು ಬಿಡದೆ ಭಜಿಪ ಪದವ ಭಜಿಪರಿಗೆ ಭವಶರಧಿ ಕಟಿಪ್ರಮಾಣವಿದೆಂದು ಅಜಪಿತನು ತೋರುತಿಹ ಕರಚತುಷ್ಟಯಕೆ 3 ಹದಿನಾಲ್ಕು ಲೋಕಕಾಶ್ರಯವಾಗಿ ತೋರುತಿಹ ಪದುಮಭವನನು ಪಡೆದ ನಾಭಿಸಹಿತ ಉದರಮಂಡಲಕೆ ಮತ್ತದರಡಿಯ ಶೋಭಿಸುವ ಹದಿನಾರು ಬಣ್ಣದಪರಂಜಿ ಕಟಿಸೂತ್ರಕೆ 4 ಕಿರಿಘಂಟೆಸರದೊಡನೆ ಹೊಳೆವ ಪೀತಾಂಬರಕೆ ಗರುಡನಂಸದಿ ಮೆರೆವ ಊರುಗಳಿಗೆ ಸುರನದಿಯ ನೆರೆ ಪಡೆದ ಚರಣದುಂಗುಟಗಳಿಗೆತಿರುಪತಿಯ ವೆಂಕಟನ ದಿವ್ಯ ಮೂರುತಿಗೆ 5
--------------
ತಿಮ್ಮಪ್ಪದಾಸರು
ಜಯಮಂಗಳೆನ್ನಿರೆ ದೇವಗೆ | ಸಂಗೀತದಿಂದಲಿ ಶ್ರೀಶಯನಿಗೆ ಪ ನಾಗವೇಣಿಯರು ನಾರದವರದಗೆ 1 ರಾವಣಾರಿ ರಘುವೀರನಿಗೆ 2 ಸೀಮಂತಿನಿಯರು ಕೋಮಲಾಂಗಗೆ 3
--------------
ಶಾಮಸುಂದರ ವಿಠಲ
ಜಯರಘುರಾಮಾ | ಸದ್ಗುಣ ಧಾಮಾ | ದಯದಾಗರ ಘನಶಾಮಾ ಪ ಜಯರಘರುರಾಮಾ | ಸದ್ಗುಣ ಧಾಮಾ ದಯದಾಗರ ಘನ ಶಾಮಾ | ಭಯಹರನೇಮಾ ರಣನಿಸ್ಸೀಮಾ | ತ್ರಯಂಬಕ ವಿಶ್ರಾಮಾ | ಪ್ರಿಯಕರ ನಾಮಾ ಪೂರಿತ ಕಾಮಾ | ಶ್ರಯಸುದಾಯಕ ಮಹಿಮಾ 1 ಸುರಸಹಕಾರ ಇನಕುಲೋದ್ದಾರಾ | ಧರಣೀಸುತೆ ಮನೋಹಾರಾ | ಶರಯುತೀರಾಯೋಧ್ಯ ವಿಹಾರಾ | ಚರಿತಪಾರಾ ವಾರಾ | ಪರಮೋದಾರಾ ಸರ್ವಾಧಾರಾ | ದುರತಾವಳಿವಿದಾರಾ 2 ವನರುಹಾಸನ ವಂದಿತಚರಣಾ | ಜನನಿ ಕೌಶಲ್ಯಾ ನಿಧಾನಾ | ಅಣುರೇಣು ಜೀವನಾ ವ್ಯಾಪಕಪೂರ್ಣ | ಕನಕಾಂಬರ ಭೂಷಣ | ಮುನಿಜನ ರಂಜನಾ ದೈತ್ಯವಿಭಂಜನಾ | ಮಹಿಪತಿ ನಂದನ ಪ್ರಾಣಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯರಾಘವ ಜಯರಾಘವ ಜಯರಾಘವ ರಾಮಾ| ಶ್ರಯಕಾರಣಸುಖಪೂರಣ ಭವತಾರಣ ನಾಮಾ ಪ ಜಗಪೋಷಣ ಮೃದುಭಾಷಣ ಸುರತೋಷಣಕಾರಿ| ಅಘಶೋಷಣ ಕುಲಭೂಷಣ ಖರದೂಷಣ ಹಾರಿ 1 ಅತಿಸುಂದರ ಗುಣ ಮಂದಿರ ದಶಕಂದರ ಹರಣಾ| ಧೃತಮಂದಿರ ಗಜೇಂದರ ಪ್ರಯಾ ಸಾಂದರ ಕರುಣಾ 2 ಪತಿ ವಾಣೀಪತಿ ದಿವಸಾಪತಿ ಧೇಯ| ಗುರುಮಹೀಪತಿ ಸುತಸಾರಥಿ ಸೀತಾಪತಿರೇಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು