ಒಟ್ಟು 2086 ಕಡೆಗಳಲ್ಲಿ , 116 ದಾಸರು , 1514 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀವರ ಹರಿ ವಿಠಲ | ಕಾಪಾಡೋ ಇವಳಾ ಪ ಭಾವುಕರ ಪಾಲ ನೆಂ | ದೇವೆ ಶ್ರುತಿ ಸಿದ್ಧ ಅ.ಪ. ಹರಿಸೇವೆ ಕೈಕಂರ್ಯ | ನಿರತಳಾಗಿ ಹಳೀಕೆಹರಿಗುರು ದಾಸ್ಯದಲಿ | ದೀಕ್ಷೆಕಾಂಕ್ಷಿಪಳೋ |ಹರಿಯ ತೈಜಸರೂಪಿ | ವರಮಾರ್ಗ ತೋರ್ಪಪರಿಹರಿಯ ನಿನ್ನಂಕಿತವ | ಇತ್ತಿಹೆನೊ ದೇವಾ 1 ಸಾರತಮ ಹರಿಯ ಜಗ | ನಿಸ್ಸಾರವೆಂದು ಸಂ |ಸಾರ ಶರಧಿಯ ಹಾಯೋ | ವಾರಿಜ ಸುನಾಭಾ |ಆರು ಮಾರ್ಭಕುತಿಗಳ | ವೈರಾಗ್ಯ ಸುಜ್ಞಾನಧೀರ ನೀ ಕರುಣಿಸುತ | ಕಡೆ ಹಾಯ್ಸೊ ಇವಳಾ 2 ಮೋದ ತೀರ್ಥರ ಮತದಿ | ಸಾಧನ ಸುಮಾರ್ಗದಲಿಹಾದಿ ಕ್ರಮಿಸುತ್ತಿಹಳೂ | ವೇದಾಂತ ವೇದ್ಯಾಹೇ ದಯಾ ಪೂರ್ಣಹರಿ | ಸ್ವಾಧ್ವಿಗೆ ತವನಾಮಸುಧೆಯನೆ ಉಣಿಸೊ ಸ | ರ್ಪಾರ್ದಿಗೇ ಓಡೆಯ 3 ಶಮದ ಮಾದಿಯನಿತ್ತು | ಭ್ರಮಮಾರ ಪರಿಹರಿಸೊಅಮಿತ ಮಹಿಮೋಪೇತ | ಸುಮನಸಾರಾಧ್ಯಕರ್ಮನಿಷ್ಕಾಮನದಿ | ರಮೆಯರಸಗರ್ಪಿಸುವಸುಮನೊಭಾವದಲಿ | ಕ್ರಮಿಪ ತೆರಮಾಡೋ 4 ನಿತ್ಯ ನಿಗಮಾತೀತ | ದೈತ್ಯ ಜನ ಸಂಹರ್ತಭೃತ್ಯಳಿಗೆ ಮೈದೋರಿ | ಹೃತ್ಕøಕ್ಷಿಯೊಳಗೇಪ್ರತ್ಯಕ್ಷನಾಗೆಂಬ | ಪ್ರಾರ್ಥನೆಯ ಸಲಿಸೋಹರಿಕರ್ತೃ ಕರ್ಮಾಖ್ಯ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಶ್ರೀವರನೆ ಬಾ ಮುಕುಂದ ಮಾಧವ ಕಾವರನ್ಯರು ಇಲ್ಲ ಗೋವಿಂದ ಕೇಶವ ಪ ವೇದವಿದಿತ ಹರಿ ಸಾದರ ಮುರವೈರಿ ಮೇದಿನೀಪತಿ ಕೋದಂಡ ಸುವಿಹಾರಿ1 ನೋಡಿ ನಿನ್ನಯ ಚರಣ ಹಾಡಿ ನಿನ್ನಯ ಸುಗುಣ ಬೇಡಿ ನಿನ್ನಯ ಕರುಣ ಪಾಡುವೆನೋ ಶರಣ 2 ಮಂಗಳ ಸುವಿಲಾಸ ಶೃಂಗಾರ ಭಾನುಭಾಸ ಮಾಂಗಿರಿವರವಾಸ ರಂಗೇಶ ಶ್ರೀನಿವಾಸ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀವಿನಾಯಕ ಪಿನಾಕಿ ಸುತ ಜಗ ದೇಕನಾಥನ ನಾಭಿಮಂದಿರ ಲೇಖಕಾಗ್ರಣಿ ವಿಷ್ಣುಕೀರ್ತನ ಮಾನಿ ಸಾಧಕನೆ ಪರಾಕು ನುಡಿಯುವೆ ನೂಕಿ ವಿಘ್ನವ ಸಾಕು ನಮ್ಮನು ನೋಕನೀಯನ ಭಜಿಸಲನುವಾಗೆಂದು ಬೇಡುವೆನು 1 ಕಾಣೆ ನಿನಗೆಣೆ ಮೂರುಲೋಕದಿ ಮಾನ್ಯನಾಗಿಹೆ ಸರ್ವರಿಂದಲು ಶ್ರೀನಿಧಿಯ ದಯದಿಂದ ಪ್ರಾಣಾವೇಶಸಂಯುತನೆ ಧ್ಯಾನ ಮಾಡುವೆ ವಿಶ್ವತೈಜಸ ನನ್ನು ಮಹದಾಕಾಶಮಾನಿಯೆ ಆನತಾಮರಧೇನು ಸಿದ್ಧಿವಿನಾಯಕನೆ ನಮಿಪೆ 2 ದೈತ್ಯಗಣಗಳಿಗಿತ್ತು ವರವು ನ್ಮತ್ತರನು ಮಾಡುತಲಿ ಶ್ರೀಪುರು ಷೋತ್ತಮನ ಸೇವಿಸುವೆ ವಿದ್ಯಾಧೀಶ ಸುಖಭೋಕ್ತ ಮಾತರಿಶ್ವನ ದಾಸರಿಗೆ ಹರಿ ಭಕ್ತಿ ವಿಷಯ ವಿರಕ್ತಿ ನೀಡುವೆ ಶಕ್ತಿ ನೀ ನಾಲ್ಕೆರಡು ಕಲ್ಪದಿ ಸಾಧಿಸಿರೆ ಪದವಿ 3 ವಕ್ರ ತುಂಡನೆ ನೀಗಿಸೆನ್ನಯ ವಕ್ರಬುದ್ಧಿ ವಿವೇಕನೀಡುತ ದಕ್ಕಿಸೈ ಶಾಸ್ತ್ರಾರ್ಥ ಚಯನವ ಚಾರುವಟು ಗಣಪ ರಕ್ತಗಂಧಪ್ರೀಯ ಸೋಮನ ಸೊಕ್ಕು ಮುರಿದೆಯೊ ಭೂಪ ಭಕ್ತಿಯ ಉಕ್ಕಿ ಸೈ ಹರಿಯಲ್ಲಿ ತವಕದಿ ಮಂಗಳಪ್ರದನೆ 4 ರಂಗ ಮಂದಿರ ದಕ್ಷಿಣಸ್ಥವಿ ಹಂಗಗಮನನ ರಾಣಿ ರುಕ್ಮಿಣಿ ಯಂಗದಲಿ ಪುಟ್ಟುತಲಿ ದಿತಿಜಾಂತಕನೆನಿಸಿಕೊಂಡು ಗಂಗೆಪಿತನನು ಸೇವಿಸಿದೆ ಮಾ ತಂಗಮುಖ ಮಹಕಾಯ ನಾರೀ ಸಂಗವರ್ಜಿತ ಬೀರು ಕರುಣಾಪಾಂಗ ದೃಷ್ಟಿಯನು 5 ಮೊದಲು ಪೊಜೆಯ ನಿನಗೆ ವಿಹಿತವು ವಿಧಿ ಭವಾದ್ಯರ ಪೊರೆವ ವಿಶ್ವನು ಮುದದಿ ನೀಡಿಹ ವರವ ಸಿದ್ಧಿಯ ಕೊಡುವೆ ಭಕ್ತರಿಗೆ ಮದದಿ ಬಿಡುವರಿಗೆಲ್ಲ ಖೇದವೆ ಒದಗಿ ಬರ್ಪುದು ಬಾಗಿ ಭಜಿಸುವೆ ಸದಯನಾಗುತ ವಿಷ್ಣು ಭಕ್ತರ ಸಂಗ ನೀಡೆನಗೆ 6 ವ್ಯಾಪ್ತ ದರ್ಶಿಯೆ ವಂದಿಸುವೆ ಪರ ಮಾಪ್ತ ಹರಿ ಭಕ್ತರಿಗೆ ನೀನಿಹೆ ಸೂಕ್ತ ಸಾಧನೆ ಗೈಸು ಖೇಶನೆ ಸೋಮಪಾನಾರ್ಹ ಆರ್ತನಿಹೆ ಬಹುಮೂಢ ಖರೆವೇ ದೋಕ್ತಮರ್ಮವ ಭಾಸಗೈಸಿ ಕೃ ತಾರ್ಥನೆನಿಸೈ ಮೃದ್ಭವ ವಿರೂಪಾಕ್ಷ ತತ್ವೇಶ 7 ಬರೆದೆ ಭಾರತ ವೇದವ್ಯಾಸರ ಕರುಣದಿಂದಲಿ ಭಕ್ತಿಯೋಗಿಯೆ ಶರಣು ಶೇಷಶತಸ್ಥರಿಗೆ ಗುರುವಿರ್ಪೆ ಹೇರಂಭ ದುರಳ ಗಣಗಳ ಕಾಟತಪ್ಪಿಸಿ ಹರಿಗೆ ಸಮ್ಮತವಿಲ್ಲ ದೆಡೆಯಲಿ ಮರುಳುಗೊಲ್ಲದ ಮನವು ನನಗಿರಲೆಂದು ಹರಸೆಂಬೆ 8 ಜಯಜಯತು ವಿಶ್ವಂಭರ ಪ್ರೀಯ ಜಯಜಯವು ಮೈನಾಕಿತನಯಗೆ ಜಯಜಯವು ಶ್ರೀಕೃಷ್ಣವಿಠ್ಠಲನ ದಾಸವರ್ಯನಿಗೆ ಜಯಜಯವು ಸದ್ವಿದ್ಯೆಕೋಶಗೆ ಮೀನಾಂಕ ಭ್ರಾತೃವೆ ಜಯಜಯವು ವಿಘ್ನೇಶ ಮಂಗಳಮೂರ್ತಿ ಗಣಪನಿಗೆ 9
--------------
ಕೃಷ್ಣವಿಠಲದಾಸರು
ಶ್ರೀವೆಂಕಟೇಶ ಪಾಹಿ ತಾವಕ ಭಕ್ತಿಂ ದೇಹಿ ಪ ವಾರಿಜನೇತ್ರಾ ವಾರಿದಗಾತ್ರಾ ನಾರದಸನ್ನುತಪಾತ್ರ ನರಮಿತ್ರ ಸುಚರಿತ್ರ 1 ಅಂಡಜಯಾನ ಕುಂಡಲಿಶಯನ ಖಂಡಪರಶು ಪರಿಪಾಲನ ಮುನಿಲಾಲನ ಸುರಖೇಲನ 2 ಪಂಕಜ ಚರಣ ಸಂಕಟಮೋಚನ ಕಾರಣ ಭವತಾರಣ ಗುಣಪೂರಣ 3 ದಶರಥಬಾಲಾ ದಶಮುಖಕಾಲ ದಶಶತಲೋಚನಪಾಲಾ ಭೂಪಾಲಾ ಸುರಮುನಿಲೋಲ4 ನವನೀತ ಚೋರ ಬೃಂದಾವನವಿಹಾರ ಬಹುದಾರಾ ಧುರಧೀರ 5 ಅಜನುತಪಾದ ಅಪಹೃತ ಖೇದ ಕಲುಷ ನಿರ್ಭೇದ ನುತವೇದ ಸುರಮೋದ 6 ವರವ್ಯಾಘ್ರಾಚಲ ವಿಹರಣ ಶೀಲ ವರದವಿಠಲ ಗೋಪಾಲ ಶ್ರೀಲೋಲ ಬಹುಲೀಲಾ 7
--------------
ವೆಂಕಟವರದಾರ್ಯರು
ಶ್ರೀವೇದವ್ಯಾಸತೀರ್ಥರು ನಮಿಸುವೆನು ನಮಿಸುವೆನು ಮುನಿವರ್ಯರೇ ಪ ಅಮಮ ನಿಮ್ಮಯ ಮಹಿಮೆಯ ಪೊಗಳಲೆನ್ನಳವೇ ಅ.ಪ. ಭಾವ ಬೋಧಾರ್ಯ ವಿಮಲ ಸತ್ಕರಜಾತಭಾವಿ ಬೊಮ್ಮನ ಮತದಿ ಪೂರ್ಣ ವಿಖ್ಯಾತಧಾವಿಸಿ ನಿಮ್ಮಡಿಗೆ ಓವಿ ನಮಿಪರ ತ್ರಾತಕಾವುದೆಮ್ಮನು ಬಿಡದೆ ಪಾವಮಾನಿಯ ಪ್ರೀತ 1 ಇಂದ್ರಗ ವರಜನಾಮ ಮಂದವಾಹಿನಿ ತಟದಿಚೆಂದುಳ್ಳ ಮಹತೆನಿಪ ವೃಂದಾವನದೊಳು |ಇಂದಿರೇ ರಮಣ ಶಿರಿ ರಾಮಚಂದ್ರನ ಮನದಿಛಂದಾಗಿ ಧ್ಯಾನಿಸುತ ನಿಂದ ಯತಿವರ್ಯಾ 2 ಮೋದ ಮುನಿ ಸದ್ಭಾವ ಬೋಧಿಸುತ ಶಿಷ್ಯರಿಗೆವೇದ ವ್ಯಾಸರ ಪ್ರೀತಿ ಆದರದಿ ಗಳಿಸೀ |ಮೋದ ದಾಯಕನೆನಿಸಿ ಸಾಧುಗಳ ಸಲಹುತ್ತಸಾಧಿಸಿದೆ ಸತ್ಕೀರ್ತಿ ರಾಜ ಸನ್ಮಾನ್ಯ 3 ತಿಮಿರ ಪಾದ ನೀ ತೋರೊ ಮುನಿಪ 4 ಬ್ರಹ್ಮಚರ್ಯಾಖ್ಯ ಮಹ ಮಹಿಮೆ ಪರಿಕಿಸಲು |ಸನ್ಮನದಿ ನೃಪನೆನ್ನ ನಿಮ್ಮ ಕೌಪೀನವಾ |ಒಮ್ಮನದಿ ಅಗ್ನಿಗಿಡೆ ದಹಿಸಲಾರದೆ ಪೋದಸನ್ಮಹಿಮ ವೇದೇಶ ಸನ್ನುತನೆ ಪೊರೆಯೋ 5 ಹರಿಭಕ್ತ ಸುರತರುವೆ ವರ ಸು ಚಿಂತಾಮಣಿಯೆಪರಮ ಸೇವಾಸಕ್ತ ಶರಣ ಸುರಧೇನು |ಹರಿಯ ಸರ್ವೋತ್ತಮತೆ ಸ್ಥಿರ ಪಡಿಸೆ ಸಂಚರಿಸಿಮೆರೆದ ವೇದವ್ಯಾಸ ತೀರ್ಥ ಸದ್ದಭಿಧಾ 6 ಘನಗಿರಿ ನರಹರಿಯ ಪದವನುಜ ಸಂಜಾತಮಿನುಗುತಿಹ ವಾಮನಾ ನದಿಯ ಸಂಗಮದಿಗುಣಪೂರ್ಣನಾದ ಗುರು ಗೋವಿಂದ ವಿಠ್ಠಲನ |ಮನದಿ ಧ್ಯಾನಾಸಕ್ತ ಪೊರೆಮಹ ವಿರಕ್ತ 7
--------------
ಗುರುಗೋವಿಂದವಿಠಲರು
ಶ್ರೀಶ ಕರುಣಾಭೂಷ ಶ್ರೀನಿವಾಸ ರಕ್ಷಿಸು ವೀಶಗಮನ ಪ. ತಂದೆ ತಾಯಿ ಸಹಜ ಮುಖ್ಯ ಬಂಧ ಬಳಗವೆಲ್ಲವು ನೀ- ಇಂದು ನಂಬಿದೆ ಇಂದಿರೇಶ ತನ್ನ ಮನಕೆ ಬಂದ ತೆರವ ಮಾಳ್ಪ ಭವ- ಸಿಂಧು ಪೊತ್ತ ನಿನ್ನ ದಾಸನೆಂದು ತಿಳಿದಾನಂದಗೊಳಿಸು 1 ನಿಗಮವೇದ್ಯ ನಿನ್ನೊಳಿರುವ ಅಘಟಿತಘಟನ ಶಕ್ತಿ ಬಗೆಯ ತೋರಿ ಪೊರೆವಿ ಎನ್ನ ಮಗುವಿನಂದದಿ ಅಗಣಿತಾನಂದ ಚಿದಾತ್ಮ ಜಗದಿ ನಿನ್ನ ಪೋಲ್ವ ಕರುಣಾ ಳುಗಳನೆಲ್ಯೂ ಕಾಣೆ ಶಕ್ರಾದಿಗಳು ಸೇರುವರು ನಿನ್ನನೆ 2 ಸರಸಿಜಾಕ್ಷ ಪಾದಪದ್ಮ ಸ್ಮರಣೆ ಮಾತ್ರದಿಂದ ಸರ್ವ ಪುರುಷಾರ್ಥಂಗಳೆಲ್ಲ ಸೇರಿ ಬರುವುದೆಂಬುದಾ ಅರಿಯದಂಥ ಮೂಢರೆಲ್ಲ ಬರಿದೆ ಬಯಲು ಭ್ರಾಂತಿಗೊಳಿಸುವ ಉರಗ ಶಿಖರವಾಸ ನೀನೆ ದೊರೆಯೆಂದು ನಾನೊರೆವೆ ಶ್ರೀಶ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀಶ ಕೇಶವ ವಿಠಲ ಸಲಹೊ ಇವನಾ ಪ ದೋಷದೂರನೆ ದೇವ | ರಾಶಿಪಾಪಂಗಳನುನಾಶಗೊಳಿಸುತ್ತ ನಿರ್ದೊಷನ್ನ ಗೈಯ್ಯೋ ಅ.ಪ. ಮೋದತೀರ್ಥರ ಮತದಿ | ಮೋದವನೆ ಪಡುತಿಪ್ಪಸಾಧುಜೀವಿಯು ನಿನ್ನ | ಪಾದಾಬ್ಜ ನಮಿಪವೇದೋದಿತವು ಎನ್ನೆ | ಬೋಧಗಳ ತಿಳಿಸುತ್ತಸಾಧನದಲ್ಲಿರಿಸಿವನ | ಕಾದುಕೋ ಹರಿಯೇ 1 ಮೂರ್ತಿ ಉಪ-ದೇಶಿಸಿಹೆನೋ ಸ್ವಾಮಿ | ಶ್ರೀಶ ನರಹರಿಯೇ 2 ಸರ್ವಜ್ಞ ಸರ್ವೇಶ | ದುರ್ವಿಭಾವ್ಯನೆ ಹರಿಯೆದರ್ವಿಜೀವನ ಕಾಯೋ | ಶರ್ವವಂದ್ಯನಿರ್ವಿಘ್ನತೆಯಲಿವಗೆ | ಸರ್ವಶಾಸ್ತ್ರಾರ್ಥಗಳಸರ್ವಸಾರವ ತಿಳಿಸೊ | ಸರ್ವಾಂತರಾತ್ಮ 3 ನಿತ್ಯ ಮಂಗಳನೇ 4 ಆವ ಸಂಸೃತಿಯೆಂಬ | ದಾವಾಗ್ನಿ ಪರಿಹರಿಸೆಶ್ರೀವರನೆ ನಿನ್ನ ಸ್ಮøತಿ | ಸರ್ವಕಾಲದಲಿದೇವ ಹಯ ಮುಖ ಗುರು | ಗೋವಿಂದ ವಿಠ್ಠಲನೆಈವುದೆನೆ ಬಿನ್ನಪವ | ಮಾವಿನುತ ಸಲಿಸೋ 5
--------------
ಗುರುಗೋವಿಂದವಿಠಲರು
ಶ್ರೀಶ ವೇದವ್ಯಾಸನಾದನು ಪ ಶ್ರೀಶ ವೇದವ್ಯಾಸನಾಗಲು ಸಾಸಿರ ನಯನ ಸಾಸಿರ ವದನ ಕರ ಮಿಕ್ಕ ಸುರರೆಲ್ಲ ತು- ತಿಸಿ ಹಿಗ್ಗುತ ಹಾರೈಸಲಂದು ಅ.ಪ. ದರ್ಪಕ ಜನಕ ಸರ್ಪತಲ್ಪನಾಗಿ ತಪ್ಪದನುಗಾಲ ಇಪ್ಪ ವಾರಿಧೀಲಿ ಕಂದರ್ಪ ಹರನೈಯ ಸುಪರ್ಣರಥನಾಗಿ ಒಪ್ಪಿಕೊಂಡು ಇಪ್ಪತ್ತು ಲಕ್ಷಗಲಿಪ್ಪ ಯೋಜನದ ಅಪ್ಪನ ಅರಮನೆ ದರ್ಪಣದಂತೆ ತಾ ರಪ್ಪಥ ಮೀರಿದಂತಿಪ್ಪದು ನೋಡಿ ಸಾ- ಮೀಪಕ್ಕೆ ವಾಣೀಶ ಬಪ್ಪ ಬೇಗಾ 1 ಬಂದು ಬೆನ್ನೈಸಿದ ಮಂದಮತಿ ಕಲಿ- ಯಿಂದ ಪುಣ್ಯಮೆಲ್ಲ ಹಿಂದಾಯಿತೆನೆ ಮು ಕುಂದ ಭಕ್ತನಿಗೆ ಒಂದೆ ಮಾತಿನಲಾ- ನಂದ ಬಡಿಸಿ ಪೋಗೆಂದು ಪೇಳೆ ಅಂದು ಸುಯೋಜನಗಂಧಿ ಗರ್ಭದಲ್ಲಿ ನಿಂದವತರಿಸುತ ಪೊಂದಿದ ಅಜ್ಞಾನ ಅಂಧಕಾರವೆಲ್ಲ ಹಿಂದು ಮಾಡಿ ಸುರ- ಸಂದಣಿ ಪಾಲಿಸಿ ನಿಂದ ದೇವ 2 ಕೆಂಜೆಡೆವೊಪ್ಪ ಕೃಷ್ಣಾಜಿನ ಹಾಸಿಕೆ ಕಂಜಾಪ್ತನಂದನದಿ ರಂಜಿಸುವ ಕಾಯ ಮಂಜುಳ ಸುಜ್ಞಾನ ಪುಂಜನು ವಜ್ಜರ- ನಿತ್ಯ ಅಂಜಿದಗೆ ಸಂಜೆಯ ತೋರಿ ಧನಂಜಯ ಶಿಷ್ಯ ನೀ- ಗಂಜದಂತೆ ಕರಕಂಜವ ತಿರುಹಿ ನಿರಂಜನ ಪೇಳಿದ ಕುಂಜರ ವೈರಿಯ ಭಂಜನನು 3 ಗಂಗಾತೀರದಲಿ ಶೃಂಗಾರ ಉಪವ- ನಂಗಳದರೊಳು ಶಿಂಗಗೋಮಾಯು ಭು ಮೂಷಕ ಮಾತಂಗ ಸಾರಮೇಯ ಕೊಂಗಹಂಗ ಸರ್ವಾಂಗ ರೋಮ ಶರಭ ವಿಹಂಗ ಶಾರ್ದೂಲ ಸಾ- ರಂಗ ಕುರಂಗ ಕುಳಿಂಗ ಪಾಳಿಂಗ ಪ್ಲ ವಂಗ ತುರಂಗ ಪತಂಗ ಭೃಂಗಾದಿ ತು- ರಂಗವು ತುಂಬಿರೆ ಮಂಗಳಾಂಗ 4 ಬದರಿ ಬೇಲವು ಕಾದರಿ ಕಾಮರಿ ಮಧುಮದಾವಳಿ ಅದುಭುತ ತೆಂಗು ಕದಳಿ ತಪಸಿ ಮದಕದಂಬ ಚೂ- ತದಾರು ದ್ರಾಕ್ಷಿಯು ಮೃದು ಜಂಬೀರವು ಬಿದಿರು ಖರ್ಜೂರ ಮೋದದಿ ದಾಳಿಂಬ ತುದಿ ಮೊದಲು ಫ ಲದ ನಾನಾವೃಕ್ಷ ಪದಲತೆಯ ಪೊದೆಯು ಫಲ್ಲಸೈ ಇದೆ ಆರು ಋತು ಸದಾನಂದ 5 ವನದ ನಡುವೆ ಮುನಿಗಳೊಡೆಯ ಕಾನನ ಸುತ್ತಲು ಆ- ನನ ತೂಗುತ್ತ ಧ್ವನಿಯೆತ್ತಿ ಬಲು- ಗಾನ ಪಾಡಿದವು ಗುಣದಲ್ಲಿ ಕುಣಿದು ಖಗಾದಿ ಗಣಾನಂದದಿಂದಿರೆ ವನನಿಕರ ಮೆಲ್ಲನೆ ಮಣಿದು ನೆ- ಲನ ಮುಟ್ಟುತಿರೆ ಅನಿಮಿಷರು ನೋ ಡನಿತಚ್ಚರಿಯನು ಪೇಳೆ 6 ಮೌನಿ ನಾರದನು ವೀಣೆ ಕೆಳಗಿಟ್ಟು ಮೌನವಾದನು ಬ್ರಹ್ಮಾಣಿ ತಲೆದೂಗಿ ಗೀರ್ವಾಣ ಗಂಧರ್ವರು ಗಾನ ಮರೆದು ಇದೇನೆನುತ ಮೇನಕೆ ಊರ್ವಸಿ ಜಾಣೀರು ತಮ್ಮಯ ವಾಣಿ ತಗ್ಗಿಸಿ ನರ್ತನೆಯ ನಿಲ್ಲಿಸಿ ದೀನರಾದರು ನಿಧಾನಿಸಿ ಈಕ್ಷಿಸಿ ಎಣಿಸುತ್ತಿದ್ದರು ಶ್ರೀನಾಥನ 7 ನಮೋ ನಮೋಯೆಂದು ಹಸ್ತ- ಕಮಲ ಮುಗಿದು ನಮಗೆ ನಿಮ್ಮಯ ಅಮಲಗುಣ ನಿಗಮದಿಂದೆಣಿಸೆ ಕ್ರಮಗಾಣೆವು ಉತ್ತಮ ದೇವ ಕೂರ್ಮ ಖಗಮೃಗ ಸಮವೆನಿಸಿ ಅ- ಚಮತ್ಕಾರದಲ್ಲಿ ನಾಮಸುಧೆಯಿತ್ತ ರಮೆಯರಸ ಆಗಮನತ8 ಇದನು ಪಠಿಸೆ ಸದಾ ಭಾಗ್ಯವಕ್ಕು ಮದವಳಿ ದಘವುದದಿ ಬತ್ತೋದು ಸಾಧನದಲ್ಲಿಯೆ ಮದುವೆ ಮುಂಜಿ ಬಿಡದಲ್ಲಾಗೋದು ಶುಭದಲ್ಲಿ ಪದೆಪದೆಗೆ ಸಂಪದವಿಗೆ ಜ್ಞಾನ- ನಿಧಿ ಪೆಚ್ಚುವುದು ಹೃದಯ ನಿರ್ಮಲ ಬದರಿನಿವಾಸ ವಿಜಯವಿಠ್ಠಲ ಬದಿಯಲ್ಲೆ ಬಂದೊದಗುವ 9
--------------
ವಿಜಯದಾಸ
ಶ್ರೀಶ ಶ್ರೀ ಕೇಶವನೆ ಬಾ ಪರುಮ ಪುರುಷ ಶೇಷರಾಯನ ಮುಕುಂದ ಶರಣರಾನಂದ ಪ ಭೂಸುರರು ನಡೆಮುಡಿದು ಪೂರ್ಣಕುಂಭವು ವೇದ ಓಲಗ ಛತ್ರ ಚಾಮರ ದಿಮಿಗೆ ಅ.ಪ ಸುತ್ತಿಬರುತಿಹ ದನುಜ ವೃಂದವೆಲ್ಲವ ತರಿದು ಮುತ್ತಿನಂಥಾ ತನುವು ಧೂಳಾಗಿರುವುದೋ ಒತ್ತುತೆಣ್ಣೆಯ ನಿನಗೆ ಮತ್ತೆಬಿಸಿನೀರೆರೆದು ಕತ್ತುರಿಯ ಹಣೆಗಿಟ್ಟು ನುಡಿಯನುಡಿಸುವೆನೋ 1 ಸರಸಿ ಪೀತಾಂಬರ ಶಿರಕೆ ಮಣಿಯಳವಡಿಸಿ ಕೊರಳಿನೊಳುಹಾಕಿ ತುಳಸೀಮಾಲೆಯ ಕರಕೆ ಕಂಕಣ ಶಂಖ ಚಕ್ರಗಧೆಯಾ ಕಮಲ ದೊರೆನಡುವಿಗೊಡ್ಯಾಣ ಸಿರಿಪದಕೆ ಕಡಗ 2 ಅಂಗಕ್ಕೆ ಶ್ರೀಗಂಧ ಅಗರುಚಂದನ ಧೂಪ ಮಂಗಳದ ದೀಪವೂ ಮಂತ್ರಪುಷ್ಪ ಶೃಂಗಾರ ಮೂರ್ತಿಗೆ ಕನ್ನಡಿಯು ಬೀಸಣಿಗೆ ಸಂಗೀತ ನರ್ತನವು ಸ್ತುತಿಸೇವೆಯೂ 3 ವಸುಮತೀಪಾಲನೆಯ ಸತತ ನೀಗೈಯುತ್ತ ಹಸಿದು ಬಳಲುತ್ತಿರುವೆ ಕೃಷ್ಣಪರಮಾತ್ಮ ಬಿಸಿಯಹೋಳಿಗೆ ತುಪ್ಪ ಹಸುನಿನಾ ಬಿಸಿಹಾಲು ಮೊಸರು ಶಾಲ್ಯನ್ನ ಫಲಪಾನಕದ ಸುಖಹೀರಿ 4 ಶ್ರೀದೇವಿ ಭೂನೀಳ ಇವರೊಡನೆ ತೃಪ್ತಿಯಂ ಶ್ರೀಧರ ಮೂರುತಿ ಹೃದಯ ಕಮಲದಲಿ ಕೂಡೋ ಸಾದರದಿ ಕರ್ಪೂರ ತಾಂಬೂಲವನು ಸದಿಯೋ ಮೋದದಿಂದಾರತಿಯ ಬೆಳಗುವೆನೋ ರಂಗಾ 5 ಜಯತು ಜಗದಾಧಾರ ಪುಷ್ಪಾಂಜಲಿಯೊಧೀರ ಜಯ ಸಾಧು ಹೃದ್ಭಾಸ ಹೆಜ್ಜಾ ಜಿವಾಸ ಜಯತು ಮಂಗಳ ನಾಮ ಶ್ಯಾಮಂಗೆ ಪ್ರಣಾಮ ಜಯತು ಕರುಣಾಸಿಂಧು ಜಯಭಕ್ತ ಬಂಧು 6
--------------
ಶಾಮಶರ್ಮರು
ಶ್ರೀಶನ ಚರಣದಾಸನಾಗಿರ್ದರೆ ಆಶಾಪಾಶ ನೀಗಿರಬೇಕು ಪ ಈಶನರಿತ ಗುರು ಶಿಷ್ಯನಾಗಿರ್ದರೆ ದೂಷಣ ಭೂಷಣ್ಹೋಗಿರಬೇಕು ಅ.ಪ ಹರಿಸರ್ಮಣಾಮೃತ ಸುರಿವನಾಗಿರ್ದರೆ ಧರೆಯ ಭೋಗ ಮೀರಿರಬೇಕು ಪರತತ್ತ್ವದ ಮೂಲರಿತವನಾದರೆ ಮರವೆ ಮಾಯ ಹಾರಿರಬೇಕು 1 ವೇದ ವೇದಾಂತವ ಸಾಧಕನಾದರೆ ವಾದ ವಾಂಛಲ್ಯವ ತೊಡೆದಿರಬೇಕು ಬೋಧ ಪಡೆದು ನಿಜ ಸಾಧುವಾದರೆ ನಾದಶಬ್ದವಡಗಿರಬೇಕು 2 ಮಾನಸಪೂಜೆಯ ಖೂನ ಬಲ್ಲ್ಯಾದರೆ ತಾನು ತನ್ನನು ಅರಿತಿರಬೇಕು ಧ್ಯಾನವಿಡಿದು ನಿಜಜ್ಞಾನಿಯಾದರೆ ಮಾನಭಿಮಾನಕ್ಹೊರತಿರಬೇಕು 3 ಬೋಗದ್ವಾಸನ್ಹಿಂಗಿ ಭಾಗವತನಾದರೆ ಕೂಗಿನ ನೆಲೆ ತಿಳಿದಿರಬೇಕು ಯೋಗ ಬಲಿಸಿ ಮಹಯೋಗಿಯಾದರೆ ರಾಗರಹಿತನಾಗಿರಬೇಕು 4 ಲಿಂಗವ ಧರಿಸಿ ಜಂಗಮನಾದರೆ ಸಂಗರಹಿತನಾಗಿರಬೇಕು ಅಂಗ ಮೂರು ನೀಗಿ ಲಿಂಗ ತಾನಾದರೆ ಲಿಂಗಾಂಗ ಸಮರಸ ತೋರಬೇಕು 5 ಸತ್ಯವರಿತು ಸತ್ಪುರುಷನಾದರೆ ಸತ್ತಂತೆ ಜಗದೊಳಿರಬೇಕು ಮೃತ್ಯುಗೆಲಿದು ಪರಮಾರ್ಥಿಕನಾದರೆ ಮತ್ರ್ಯರ ಗುಣ ಮರ್ತಿರಬೇಕು 6 ಘೋರ ಭವಾಂಬುಧಿ ಪಾರುಗಂಡಿರ್ದರೆ ಪಾರ ಹಾರೈಕೆ ಅಳೆದಿರಬೇಕು ಸಾರಮೋಕ್ಷ ತನ್ನ ಸೇರಬೇಕಾದರೆ ಧೀರ ಶ್ರೀರಾಮನೊಲಿಸಿರಬೇಕು 7
--------------
ರಾಮದಾಸರು
ಶ್ರೀಶೈಲದೊಳಗಿಪ್ಪ ಸ್ವಾಮಿ ಪುಷ್ಕರಣಿ ಇತಿ ಹಾಸವ ದಿಲೀಪನೃಪ ಬೆಸಗೊಳಲು ಕೇಳಿ ದು ಕೇಳಿ ಸಂತೋಷಿಸುವುದು ಪ ಮುನಿಕುಲೋತ್ತಮ ನೆನಿಸಿ ದುರ್ವಾಸಋಷಿ ದಿಲೀ ಪನ ಸದನವೈದಿರಲು ಕೇಳಿ ಸಂತೋಷದಲಿ ಮುಗಿದು ವಿಜ್ಞಾಪಿಸಿದನು ಋಷಿಗೆ ಅನಿಮಿಷೇಶಾ ವೆಂಕಟನ ನಾಮಧೇಯ ಕುಂ ಭಿಣಿ ಯೊಳಿಪ್ಪಾಖ್ಯಾನ ತೀರ್ಥಗಳ ವೈಭವಗ ದುರ್ವಾಸ ಪೇಳೊದಗಿದಿ 1 ಕೇಳು ರಾಜೇಂದ್ರ ವೆಂಕಟ ಪರ್ವತನು ಮೇರು ಶೈಲಾತ್ಮಜನು ವಾಯು ಶೇಷರ ಸುಸಂವಾದ ಸ್ವರ್ಣ ಮುಖರೀ ತೀರದಿ ಬೀಳಲ್ಕೆ ನೊಂದು ಪ್ರಾರ್ಥಿಸಿದ ಶೇಷನು ಎನ್ನ ಮ್ಯಾಲೆ ಮಲಗಿಪ್ಪ ತೆರದಂತೆ ದಯದಿಂ ನೀನೆ ಶೇಷಾದ್ರಿಯೆನಿಸುತಿಹುದು 2 ಈ ನಗೋತ್ತಮದಾದಿ ಮಧ್ಯಾವಸಾನ ಪ್ರ ಸೂನು ಫಲ ಸಂಯುಕ್ತ ಸಾನುಗಳ ಸುರುಚಿಕೋ ಪುಷ್ಕರಣಿ ತೀರ್ಥದ ತಟದಲಿ ಶ್ರೀನಿವಾಸನು ಬಂದು ನಿಂತ ಕಾರಣವೆನಗೆ ನೀನರುಪುವುದು ಯೆಂದು ಬೆಸಗೊಳಲು ದುರ್ವಾಸ ನೃಪಗೆ ಹರುಷೋದ್ರೇಕದಿ 3 ತೀರ್ಥೋತ್ತಮತ್ವ ಸಾಪೇಕ್ಷಿಯಿಂದಲಿ ಬ್ರಹ್ಮ ಪತ್ನಿ ಪೂರ್ವದಲಿ ಬ್ರಹ್ಮಾವರ್ತ ದೇಶದೊಳ ಪುಲಸ್ತಾಖ್ಯ ಮುನಿಪ ತತ್ತೀರದಲಿ ತಪವಗೈವೆನೆಂದೆನುತ ಬರೆ ಪುತ್ರನೆಂದರಿದು ಮನ್ನಿಸದಿರಲು ಕೋಪದಲಿ ನಿಷ್ಫಲವಯೈದಲೆಂದು ನುಡಿದ 4 ನದ್ಯೋತ್ತಮತ್ವ ಜಾಹ್ನವಿಗಿರಲಿ ಗುಣಗಳಿಂ ಸ್ವರ್ಧುನಿಯು ನೀಚಳಾದರೆಯು ಸರಿ ಲೋಕ ಪ್ರ ಪಾದ ಪ್ರಸಾದದಿಂದ ವಾಗ್ದೇವಿ ನುಡಿಗಳು ಭ ವದ್ವಂಶರೆಲ್ಲ ರಾಕ್ಷಸರಾಗಿ ಬಹಳ ವಿ ಪದಕೆರಗಿ ಬಿನ್ನೈಸಿದ 5 ಅನಭಿಜ್ಞ ಲೋಕೋಪಕಾರ ತಪವೆಂದರಿಯ ದನುಚಿತೋಕ್ತಿಗಳನಾಡಿದೆ ಮಯಾಕೃತದೋಷ ಮುನಿವರನು ಸಂಪ್ರಾರ್ಥಿಸೆ ಪುನರಪಿ ವಿಶಾಪವಿತ್ತಳು ಪ್ರಸನ್ಮುಖಳಾಗಿ ಜನಿಸಲೀ ಭವದ ಪ್ರಾಂತಕ್ಕೆವರ ವಿಭೀ ಭಗವದ್ಧ್ಯಾನಪರಳಾದಳು 6 ತೀರ್ಥೋತ್ತಮತ್ವ ಸಾಪೇಕ್ಷಯಿಂ ವಾಗ್ದೇವಿ ಮತ್ತು ತಪದಿ ಪ್ರೀತಿಗೊಳಿಸಲ್ಕೆ ದೇವದೇ ಬಿನ್ನೈಸಿದಳು ವಾಂಛಿತವನು ವ್ಯರ್ಥವಾಯಿತು ತಪವು ಬಹ್ಮ ಶಾಪದಲಿ ತೀ ರ್ಥೋತ್ತಮತ್ವವು ಕರುಣಿಸೆಂದು ಕೇಳ್ದುದಕೆ ಪ್ರ ಇನಿತೆಂದು ಕಾರುಣ್ಯಸಿಂಧು 7 ನದಿಯರೂಪಕೆ ಬ್ರಹ್ಮಶಾಪ ನಿನಗಾಯಿತ ಲ್ಲದೆ ಸರೋವರಕೆ ಬ್ಯಾರಿಲ್ಲ ಪುಷ್ಕರಣಿಗಳೊ ಸ್ವಾಮಿ ಪುಷ್ಕರಣಿ ಎನಿಸಿ ವಿಧಿಪತ್ನಿ ಶೇಷನೋದ್ದೇಶ ತ್ವತ್ ಸನ್ನಿಧಾ ನದಿ ವಾಸವಾಹೆ ಸಂದೇಹವಿಲ್ಲಿದಕೆ ಸ ಸಜ್ಜನರಿಗಖಿಳಾರ್ಥವೀವೆನೆಂದ 8 ಮೂರುವರೆ ಕೋಟಿ ತೀರ್ಥಗಳು ಭುವನತ್ರಯದೊ ಳಾರಾಧಿಸಿದರೆಯೆನ್ನ ಸ್ವಸ್ವ ಪಾಪೌಘ ಪರಿ ಧನುರ್ಮಾಸ ಸಿತಪಕ್ಷದ ಈರಾರುದಿನದಲರುಣೋದಯಕೆ ತೀರ್ಥ ಪರಿ ವಾರನೈದಿರಿ ಶುದ್ಧರಾಗುವಿರಿಯೆಂದು ತ ಪ್ರೇಷ್ಯತ್ವ ವಾಣಿಗಿತ್ತ 9 ವಾಣಿದೇವಿಯು ತೀರ್ಥರೂಪಳಾಗಲು ಕೃಷ್ಣ ವೇಣಿಸಮ ಬಕುಳ ಮಾಲಿಕೆ ತೀರ್ಥ ಭೂಮಾಭಿ ಹರಿಗೆ ನೈವೇದ್ಯರಚಿಸಿ ಪಾನೀಯ ಧೀ ಭೋಗ ಪತ್ನಿ ಪೂರ್ವದಿ ಸನ್ನಿ ಧಾನದಲ್ಲಿಪ್ಪೆನೆಂದೆನುತ ಪ್ರಾರ್ಥಿಸೆ ಶೇಷ ತಾನಿತ್ತ ಕಮಲಾಕಾಂತನು 10 ಸ್ವಾಮಿ ಪುಷ್ಕರಣಿ ನವತೀರ್ಥಮಾನಿಗಳಿಗೆ ಸು ಧಾಮವೆನಿಸುವಳು ತತ್ತನ್ನಾಮಗಳು ಪೇಳ್ವೆ ಅಗ್ನಿಯನು ಋಣವಿಮೋಚನಿ ಈ ಮಹಾ ವಾಯು ತೀರ್ಥಗಳ ಸುಸ್ನಾನಲ ಕ್ಷ್ಮೀ ಮನೋಹರನ ದರುಶನ ತತ್ವ್ರಸಾದಾತ್ರ ಅಲ್ಪಾಧಿಕಾರಿಗಳಿಗೆ 11 ಕವಿಭಿರೀಡಿತ ಪೂಜ್ಯನೆನಿಸುವನು ಪದ್ಮಸಂ ಭವನು ಪೂಜಕನೆನಿಪ ನೈವೇದ್ಯಕರ್ತೃ ಭಾ ಶರ್ವಶಕ್ರಾರ್ಕ ಮುಖ್ಯ ದಿವಿಜಗಣವಿಹರೆಂದು ಚಿಂತಿಸದೆ ಮರೆದು ಮಾ ನವರೆ ವರ್ತಿಪರೆಂದು ತಿಳಿವವನು ಘೋರ ರೌರವ ಧರಾತಳದೊಳೆಂದ 12 ಮೇರುನಂದನ ವೈಕುಂಠಾದ್ರಿಶತಯೋಜನದ ಮೇರೆಯೊಳು ಪುಣ್ಯತೀರ್ಥಗಳಿಪ್ಪವಲ್ಲೆಲ್ಲ ಮುಖ್ಯಾಮುಖ್ಯ ಭೇದದಿಂದ ನೂರೆಂಟು ತೀರ್ಥಗಳು ಮುಖ್ಯವೆನಿಸುವುವಿದರೊ ಳಾರುತ್ತಮೋತ್ತಮವುಗಳ ನಾಮ ಪೇಳ್ವೆನು ಕು ತುಂಬರ ಆಕಾಶಗಂಗ 13 ವಸುರುದ್ರ ಕಾಣ್ವಗ್ನಿ ಮನ್ವಿಂದ್ರಯಮ ಸೋಮ ಬಿಸರುಹ ಪ್ರೀಯ ನವಪ್ರಜ ಆಶ್ವಿನಿಗಳು ಶುಕ ಜಗಜ್ಜಾಡ್ಯಹರ ಬಾರ್ಹಸ್ವತಿ ದಶಪ್ರಚೇತಸ ಗರುಡ ಶೇಷವಾಸುಕಿಯು ಹೈ ಬ್ಬಸುರ ನಾರದ ವೈಶ್ವದೇವ ಸ್ವಾಹಾಸ್ವಧಾ ಹಸ್ತಿ ನಾರಾಯಣಾದಿ ಪಂಚ 14 ಶಿವರೂಪಿ ದೂರ್ವಾಸ ಪೇಳ್ದನಿನಿತೆಂದು ಜಾ ಹ್ನವಿಯೊಳಬ್ದ ಸ್ನಾನಫಲ ಧನುರ್ಮಾಸದೊಳು ವಾಗ್ದೇವಿ ಶುಕ್ಲಪಕ್ಷ ದ್ವಾದಶಿ ದಿವಸದಿ ಶುಚಿರ್ಭೂತನಾಗಿ ಸಂತೋಷದಲಿ ವಿವರಾಗ್ರಜೋದಯದಿ ಸ್ನಾನವನು ಮಾಡೆ ಐ ಶಿಷ್ಯನೆಂದರಿದು ದಯದಿ 15 ನಾರದ ಮುನೀಂದ್ರನುಪದೇಶದಿಂ ದಕ್ಷನ ಕು ಮಾರಕರು ಸಾಹಸ್ರ ತಮ್ಮ ತಮ್ಮಾಶ್ರಮದ ದಾಕ್ಷಣ್ಯವೆನಿಸುತಿಹ್ಯದು ಭೈರವಾಷ್ಟ ತೀರ್ಥ ಸಿದ್ಧಿಪ್ರದಾಯಕ ಕು ಮಾರಧಾರಿಕ ಪಶ್ಚಿಮದಲಿಹವು ಎಂಟಧಿಕ ತೀರ್ಥಾದ್ರಿಯೆನಿಸುತಿಹುದು 16 ತಾ ತಿಳಿ ಪುದಿತಿಹಾಸ ಶೌನಕಾದ್ಯರಿಗೆ ವರ ಪುಷ್ಕರಣಿಮಹಿಮೆ ಪ್ರೀತಿಯಿಂದಲಿ ತಿಳಿದು ಪಠಿಸುವವರಿಗೆ ಜಗ ನ್ನಾಥ ವಿಠಲ ಮನೋವಾಂಛಿತಗಳಿತ್ತು ಪುರು ಹೂತ ಲೋಕದಲಿ ಸುಖಬಡಿಸಿ ಪ್ರಾಂತಕೆ ತನ್ನ ಪುರವನೈದಿಪ ಕೃಪಾಳು17
--------------
ಜಗನ್ನಾಥದಾಸರು
ಶ್ರೀಸತ್ಯವ್ರತರು ಶಿರಿ ಸತ್ಯವ್ರತಸುರ ತರುವೆ ನಿಮ್ಮಯಪಾದವರಶತ ಪತ್ರಕ್ಕೆಭಿನಮಿಪೇ ಪ ಪರಮ ದುರ್ಮತದ್ವಾಂತ ಭಾಸ್ಕರವರಸುಜ್ಞಾನಾಕಾಂಕ್ಷಿಯಾಗಿಹೆನಿರತ ಶ್ರೀ ಮದಾನಂದ ತೀರ್ಥರವರಸು ಭಾಷ್ಯಾಮೃತವ ನುಣಿಸೋ ಅ.ಪ. ಪೊಗಳಲೆನ್ನಳವೆ ನಿಮ್ಮಗಣಿತ ಮಹಿಮೆಯಜನದಿ ವಿಖ್ಯಾತರೆ ಗುರುವೇ |ಸುಗುಣಿತವ ಭಕ್ತರ್ಗೆ ಕಾಡುವವಿಗಡ ಅಪಸ್ಮಾರ ಕುಷ್ಠವುಮಿಗಿಲು ರೋಗಾದಿಗಳ ಕಳೆಯುತಬಗೆ ಬಗೆಂದಲಿ ಸ್ತುತ್ಯರಾಗಿಹ 1 ಸರಿತು ಪ್ರವಹದಿ ಎರಡೆರಡು ಸುತರ್ಗಳಹರಣ ಪೋಗಲು ಖೇದದೀ |ವರದ್ವಿಜನು ರಘುನಾಥಾಖ್ಯ ಭಕ್ತಿಲಿಶಿರಿಸತ್ಯವ್ರತರನು ಸೇವೆಗೈಯ್ಯುಲುಅರಿತು ಸಂತಾನಾಷ್ಟ ಕಂಗಳತ್ವರಿತ ಕರುಣಿಸಿ ಪೊರೆದಗುರುವರ2 ಶಿರಿಸತ್ಯ ಸಮಧರೀ ವೃಂದಾವನದ ಬಳಿಶಿರಿಮನ್ಯಾಯಾಸುಧೆ ಪಠಿಸೇ |ಗುರುವರರು ಸಂತುಷ್ಟ ಪಡುತಲಿಶಿರವತೂಗಲು ಅಂತರಂಗದಿವರಸುವೃಂದಾವನವು ತನ್ನಯಶಿರವ ತೂಗುತ ತೋರಿತಚ್ಛರಿ 3 ವಾದಿಭಹರ್ಯಕ್ಷ ಮೇಧಾವಿ ವಿಭುಧೇಡ್ಯಸುಧಾಪಿವೃತಿ ಕರ್ತಾರ |ಮೇಧಿನಿಯ ಸಂಚರಿಸಿದುರ್ವಾದಿಗಳ ಬಲು ಖಂಡಿಸುತಭೋಧಿಸುತ ತತ್ವಗಳ ಸುಜನಕೆಹಾದಿಮೋಕ್ಷಕೆ ತೋರ್ದ ಯತಿವರ 4 ವೇದವಿದ್ಯಾಖ್ಯ ಸತ್ಕರಜರೆಂದೆನಿಸುತ್ತಮೋದ ತೀರ್ಥರ ಸೇವೆಗೈದೂ |ಹಾದಿ ಚರಿಸುತ ಸಾಂಗ್ಲಿಕ್ಷೇತ್ರದಿಆದರದಿ ವೃಂದಾವನವ ಪೊಕ್ಕುನಾದಗುರು ಗೋವಿಂದ ವಿಠಲನಮೋದ ಧ್ಯಾನಾಸಕ್ತ ಗುರುವರ 5
--------------
ಗುರುಗೋವಿಂದವಿಠಲರು
ಶ್ರೀಹರಿ ಮೂಜಗದೊಳು ನೀನು ತೇಜವುಳ್ಳವನಾಗಿ ಪ ಕಾಲದಿ ನಿನ್ನಯ ಮೇಲಿಹ ನಿರ್ಮಾಲ್ಯ ಮಾಲೆಯನೆಲ್ಲ ವಿಸರ್ಜಿಸಿ ತೊಳೆದು ನೀಲಮಾಣಿಕ ವಜ್ರಮಯವಾದ ಪೀಠದ ಮೇಲೆ ವಾಲಗವಾಗಿ ಲೀಲೆಯ ತೋರುತ1 ಮೊದಲು ಸಂಕಲ್ಪಿಸಿ ತುಳಸಿ ಶ್ರೀಗಂಧದಿ ಉದಕ ಶುದ್ಧವ ಮಾಡಿ ಅದರೊಳು ಬಳಿಕ ವಿಧಿಸಿಯೆ ಮತ್ತೇಳು ನದಿಯನುಚ್ಚರಿಸಲು ಒದಗಿ ಬಾರೆಲೊ ಕರಚರಣ ಮಜ್ಜನಕೀಗ 2 ಮಾನಸದಘ್ರ್ಯವು ಆಚಮನಗಳು ನಾನಾ ಪಂಚಾಮೃತ ಫಲವಭಿಷೇಕವು ಗಾನ ಸೂಕ್ತಗಳಿಂದ ಮಧುಪರ್ಕಾದಿಗಳು 3 ವಸ್ತ್ರವಾಭರಣವು ಯಜ್ಞಸೂತ್ರವ ತೊಡಿಸಿ ಚಿತ್ರವಾಗಿಹ ಗಂಧ ಅಕ್ಷತೆವಿಡಿಸಿ ಪತ್ರಪುಷ್ಪವು ಶ್ರೀತುಳಸಿ ಮಾಲೆಗಳಿಂದ ಸ್ತೋತ್ರವು ಸಾಹಸ್ರನಾಮಗಳಾಯಿತು 4 ಧೂಪಮಾಧ್ರೂಪಯ ದೀಪದ ದರುಶನವು ಆದಷ್ಟು ಸರ್ವೋಪಚಾರಗಳು ಕದಳಿ ನಾರಿಕೇಳÀವು ಪರಿ ನೈವೇದ್ಯ ದಯಾಪರಮೂರ್ತಿ 5 ಆಗರದೊಳು ಬೆಳೆದ ನಾಗವಲ್ಲಿಯ ದಳ ಪೂಗಿಯಫಲ ಸಹ ನಾಗಶಯನಗಿಟ್ಟು ಬೇಗದಿ ಮಂಗಳ ಪದಗಳ ಹೇಳಿ ಲೇ ಸಾಗಿ ಎತ್ತುವ ಅಮೋಘದಾರತಿಗಳ 6 ಮಾಡಿದ ಪೂಜೆಯ ನೋಡಿ ಕರುಣದಿಂದ ಬೇಡಿದಿಷ್ಟವನೀಯೊ ರೂಢಿಯ ಒಡೆಯ ಪಾಡಿ ಪೊಗಳುವೆ ನಿನ್ನ ಪಂಥ ಬೇಡೆನ್ನೊಳು ಅನುದಿನ ವರಾಹ ತಿಮ್ಮಪ್ಪ 7
--------------
ವರಹತಿಮ್ಮಪ್ಪ
ಶ್ರೀಹರಿ ಶ್ರೀರಮಾ ಮನೋಹರ ನಮೋ ನಮೋರ ಪ. ಸುಜ್ಞಾನಾನಂದ ವಿಮಾನರಂಜನ [ನಮೋ ನಮೋ] ಅ.ಪ ವಿಧಿಭವಾದಿ ವಂದಿತ ನಮೋ ನಮೋ ವೇದವಿದಿತ ವಿಶುದ್ಧರೂಪ ವಿಶ್ವವ್ಯಾಪಕ ವಿದ್ಯಾಧೀಶ ವಿಜ್ಞಾನದಾಯಕ 1 ದುರಿತಹರಣ ಭಕ್ತಭರಣ ಪರಮಪಾವನ ವರಶೇಷಾದ್ರೀಶ ವರದವೆಂಕಟ2
--------------
ನಂಜನಗೂಡು ತಿರುಮಲಾಂಬಾ
ಶ್ರೀಹರಿ ಸ್ತುತಿ ಆವಕಡೆಯಿಂದ ಬಂದೆ ವಾಜಿವದನನೆಭಾವಿಸುವ ವಾದಿರಾಜಮುನಿಯ ಕಾಣುತ ಪ. ನೇವರಿಸಿ ಮೈಯ ತಡವಿ ನೇಹದಿಂದಲಿ ಮೇಲುನೈವೇದ್ಯವನ್ನು ಇತ್ತು ಭಜಿಸುವೆ ಅ.ಪ. ಭಕುತಿಕಡಲೆ ಜ್ಞಾನವೈರಾಗ್ಯಬೆಲ್ಲದಮುಕುತಿ ಆನಂದಸುಖದ ಕ್ಷೀರಲಡ್ಡಿಗೆಯುಕುತಿ ಧ್ಯಾನಕೊಟ್ಟು ನೀನು ಎಲ್ಲಮಾತಲಿಶಕುತಿ ಸಂತೋಷ ಮಹಿಮೆ ತೋರಬಂದೆಯ 1 ಹೆತ್ತತುಪ್ಪ ಸಕ್ಕರೆಯ ಮಡ್ಡಿಮುದ್ದೆಯತುತ್ತುಮಾಡಿ ಕೊಡಲು ಅದನು ಮೆಲುತ ಮೆಚ್ಚುತಅತ್ಯಂತ ಸಂತೋಷ ನೀನು ಆಟತೋರುತಭೃತ್ಯ ವಾದಿರಾಜಮುನಿಯ ಸಲಹಬಂದೆಯ 2 ಫಲವ ಕೊಟ್ಟು ರಕ್ಷಿಸಿದಿ ವಾಜಿವದನನೆನಿಲುವೋ ಜ್ಞಾನಭಕ್ತಿಯನ್ನು ನೀಡಬಂದೆಯಸುಲಭ ಸುಮುಖ ಸುಪ್ರಸನ್ನ ಹಯವದನನೆಚೆಲುವ ಚಿನ್ಮಯಮೂರ್ತಿ ನಮ್ಮ ಸಲಹ ಬಂದೆಯ 3
--------------
ವಾದಿರಾಜ