ಒಟ್ಟು 2492 ಕಡೆಗಳಲ್ಲಿ , 109 ದಾಸರು , 1416 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರಸಿಜಾಲಯವೆನಿಪ ಸೊಗಸಿನ ವರರತ್ನ ಮಂಟಪದೊಳು ಸಿರಿದೇವಿಯೊಡನೆÉ ನೀಂ ಶಯನಿಸು 1 ಚಪಲಾಕ್ಷಿ ಶ್ರೀದೇವಿಯುಪಚಾರದಿಂ ನಲಿದು ಅಪರಿಮಿತಾನಂದದಿಂ ಶಯನಿಸು 2 ಸಂಭ್ರಮದಿ ಕೇಳುತ್ತ ಅಂಬುಜೋದ್ಬವ ತಾತ ಅಂಬುಜಾನನೆಯೊಡವೆರಸಿ ನಲಿಯುತ 3 ಗರುಡ ಪವನಜರೆಂಬುವ ನಿನ್ನಂಘ್ರಿಸರಸಿಜವ ಸೇವಿಸುವ ಪರಮಭಕ್ತರು ಬಂದು ಕರಮುಗಿದು ನಿಂದಿರಲು ಕುಡುತೆ ಮುದವಂ4 ವರಶೇಷಗಿರಿನಿಲಯನೆÀ ಜಯಜಯತು ವರದನಾರಾಯಣನೆ ಕರವಿಡಿದು ಪೊರೆಯೆನ್ನ ದೊರೆ ಮರೆಯೆ ನಾನಿನ್ನ ಪರಮಮಂಗಳೆಯೊಡನೆ ನೀಂ ಪರುಕಿಸೆನ್ನ 5
--------------
ನಂಜನಗೂಡು ತಿರುಮಲಾಂಬಾ
ಸರಸಿಜಾಸನವಿನುತ ಸರಸ ಕರುಣಾಭರಿತ ಪರಮಪಾವನ ಚರಿತ ಪುಣ್ಯಗಾತ್ರ ಭಾರ್ಗವ ಮದಾಪಹ ಭುವನ ಮೋಹಕ ದೇಹ ಭಗರ ಕಾರ್ಮಕಭಂಗ ಮಂಗಳಾಂಗ ಇನಕುಲಾರ್ಣವ ಸೋಮ ತ್ರಿನಯನ ಮನಃ ಪ್ರೇಮ ಜನನಿಲಯ ಸುವಿರಾಮ ದಿವ್ಯನಾಮ ಸಾಕೇತಪುರಧಾಮ ಕಾಕುತ್ಯರಾಮ ರಾಕೇಂಧು ನಿಭವದನ ದುರಿತದಮನ ಶ್ರೀಕಾಂತ ಶೇಷಾದ್ರಿನಿಲಯ ಸದಯ
--------------
ನಂಜನಗೂಡು ತಿರುಮಲಾಂಬಾ
ಸರಸ್ವತಿ ಮಂಗಳಾರುತಿಯನೆತ್ತೀರೆ ವಾರಿಜಭವಮುಖಿಗೆ ಮಂಗಳಾರುತಿಯನೆತ್ತೀರೆ ಪ ಇಂದು ಬಿಂಬ ಸದೃಶ ವದನೆಗೆ ಲಾವಣ್ಯ ಖಣಿಗೆ ಅಂದ ಕುಂಕುಮಭೂಷಿತ ಫಣೆಗೆ ಹರಿದ್ರ ಭೂಷೆಗೆ ಸಂದ ಮೌಕ್ತಿಕ ಚಂಪಕ ನಾಸಿಕೆಗೆ ಚಂದ ಕರುಣಾಭರಣ ಭೂಷಿತೆಗೆ ಚಾಪ ಇಂದು ಛವಿಯ ಕಿರೀಟ ಭೃತೆಗೆ ಹಿಂದೆ ಜೋಲ್ವ ಕನಕವೇಣಿಗೆ ಮಂಗಳಾರುತಿಯನೆತ್ತಿರೆ 1 ಚಾರುವಸನ ಭೂಷಿತಾಂಗೆಗೆ ವಿದ್ಯುತ್ಸುಕಾಂತೆಗೆ ಹಾರಪದ ಶÀಮಿರೂಪ ಕಂಠೆಗೆ ಸುಕಂಬು ಶ್ರೀದೇವಿಗೆ ಸಾರ ವೇದಾಂಗ ಭೂತೆಗೆ ನೀರಜ ಪಲ್ಲವಗಾತ್ರೆಗೆ ಸಾರಸಾಕ್ಷಿ ಶಿರಿವಂತೆಗೆ ಮಂಗಳಾರುತಿಯನೆತ್ತಿರೆ2 ಕರದಿ ವೀಣೆ ಧರಿಪ ದೇವಿಗೆ ಪಾವನ್ನಗಾತ್ರೆಗೆ ಧರೆಯ ಸೃಷ್ಟಿಕರ್ತನರಸಿಗೆ ಮಂಗಳ ವಾಣಿಗೆ ಪರಿಪರಿಯಲಂಕಾರ ಭೂಷಿತೆಗೆ ಸರಸ ಕೋಮಲ ಪದ್ಮಪಾತೆಗೆ ಮರಕತಭೂಷಣ ಭಾಸೆಗೆ ನಿರುತ ಜನಕೆ ವಿದ್ಯಪ್ರದೆಗೆ ನರಸಿಂಹವಿಠ್ಠಲನ ಬಾಲೆಗೆ ಮಂಗಳಾರುತಿಯನೆತ್ತಿರೆ 3
--------------
ನರಸಿಂಹವಿಠಲರು
ಸರಸ್ವತಿಗೆ ಭಾರತಿಗೆ ಮಂಗಳವು ಹರಿಗೆ ಪ ವಾರುಣಿ ಸಾಪರಣಿ ಉಮೆಯರಿಗೆ ಅ.ಪ ಸುರಋಷಿಚಿರಪಿತ ರಾಜರಿಗೆ 1 ನರಶ್ರೇಷ್ಠ ವಿಪ್ರಾದಿ ಸುಜನರಿಗೆ2 ವಿಶ್ವವ್ಯಾಪಕ ಗುರುರಾಮವಿಠಲಗೆ 3
--------------
ಗುರುರಾಮವಿಠಲ
ಸರಳಕವಿ ರಾಮಾರ್ಯ ಹರುಷದಿ ವಿರಚಿಸಿದ ವರವೆಂಕಟೇಶನ ಪರಮಲೀಲೆಯ ಚರಿತೆಯುನ್ನತ ಕೀರ್ತಿಯಾಂತಿಹುದು ನರರ ಭಕ್ತಿಯ ಪೆರ್ಚಿಸಲ್ಕಿದು ಕರದ ದಿವ್ಯಜ್ಯೋತಿಯಪ್ಪುದು ಬರೆದಕವಿಯಾಸೂರಿವಂಶದ ಶರಧಿಚಂದಿರನು 1 ಭರತಭಕ್ತಿ ಯೆನಿಪ್ಪ ಚರಿತೆಯ ಬರೆದು ತಾನೇ ಭರತನಾಗಿಹ ಪರಿಯ ತೋರುವ ಭಕ್ತಿಬೋಧಕ ಭಾವಭಂಗಿಯಲಿ ಸರಸ ಸರಳತೆ ಲಲಿತಪದಗಳ ಶರಧಿಯಪ್ಪುದು ಕಾವ್ಯಮಿದನಾ ದರದಿ ಮುದ್ರಣಗೊಳಿಸಿ ಹಂಚಿದ ಕವಿಯು ಧನ್ಯನಲೇ 2 ಕವಿ ವಿಶಿಷ್ಠಾದ್ವೈತತತ್ವೋ ದ್ಭವನು ಹರಿಹರ ಭೇದರಹಿತನು ನವರಸಾಲಂಕೃತಯುತ ಗೋಕರ್ಣ ಮಹಿಮೆಯನು ಶಿವನ ಸನ್ನುತಿಗೈದು ರಚಿಸುತೆ ಭುವಿಯ ರಕ್ಷಣೆಗೈವ ಶಿವಕೇ ಶವರ ನಾಮವನೇಕ ವೊಬ್ಬನೆ ದೈವತಾನೆಂಬ 3 ಭಕ್ತಿಕಾವ್ಯಂಗಳನು ರಚಿಸಿಹ ಭಕ್ತನೀತನ ವಹ್ನಿಪುರಕಾ ಸಕ್ತಿಯಾಂತೈತರ್ಪುದೆಂದೆವು ವೇಂಕಟೇಶ್ವರನ ಭಕ್ತಿಬೋಧಕ ಕೃತಿಗೆ ಮಂಗಳ ದುಕ್ತಿಯುತ್ಸವಕಾಗಿ ನಾವತಿ ಭಕ್ತಿ ಸುಸ್ವಾಗತವನೀವೆವು ಕೈಗಳಂ ಮುಗಿದು 4 ಕೃತಿಯ ರಚನೆಗೆ ಮೋಹಗೊಂಡೆವು ಕೃತಿಯನೋದಿಸಿ ಕೇಳಿ ನಲಿದೆವು ಕೃತಿಯ ಬರೆದಾ ಕವಿಯ ಭಕ್ತಿಗೆ ಮನವ ತೆತ್ತಿಹೆವು ಕೃತಿಯ ಕರ್ತಗೆ ಮಣಿದು ಮಹದುಪ ಕೃತಿಯ ಗೈದಿಹಿರೆಂಬುದಲ್ಲದೆ ಕೃತಿಯ ಬರೆದವಗಾವಭಾಗ್ಯವನಿತ್ತು ತಣಿಸುವೆವು5 ಪರಮಭಕ್ತನಿಗಿಂದು ವಂದಿಸಿ ನೆರೆದ ಪಂಡಿತ ಪೌರಸಭಿಕರ ನೇಮಗಳಪೊತ್ತು ಹರಿಯ ಪಾದಂಗಳಿಗೆ ವಂದಿಸಿ ವರಕವಿಗೆ 'ಕವಿರತ್ನ’ ನೆನ್ನುವ ಬಿರುದನೀವೆವು ಸರಳಕವಿವರನಿದನು ಕೈಗೊಳಲಿ 6 ಗಮಕಕೋಕಿಲನೆನಿಪ ಕೌಶಿಕ ನಮಲಕೃತಿವಾಚನವಗೈಯಲು ಅಮಿತಸಂತಸದಿಂದ ವಿವರಿಸುತಂತರಾರ್ಥಗಳ ಕ್ರಮದಿ ಪೇಳಲು ಸೂರ್ಯನಾರಣ ನಮಿತ ಹರ್ಷಾಂಬುಧಿಯೊಳಿಳಿಯುತೆ ರಮೆಯ ರಮಣನ ಪಾದಕೆರಗಿದ ಸರಳಕವಿರತ್ನ7 ಆ ಮಹಾಮುನಿ ಸೂತನಂದದಿ ರಾಮಚರಿತಾಮೃತವ ರಚಿಸುತೆ ಆ ಮಹೇಶ್ವರನಾತ್ಮಲಿಂಗವು ಭೂಮಿಗಿಳಿದಾಕಥೆಯ ಕಾವ್ಯವ ನೀ ಮಹಾಮತಿ ರಚಿಸಿ ಮುಕ್ತಿಯ ಮಾರ್ಗವಿಡಿದಿಹನು8 ಸರಳಕವಿರತ್ನನಾಸೂರಿ ರಾಮಾರ್ಯತಾಂ ವಿರಚಿಸಲಿ ಸದ್ಭಕ್ತಿ ಕಾವ್ಯಗಳನೋರಂತೆ ಸಿರಿಕಾಂತನೀತಂಗೆ ದೀರ್ಘಾಯುರಾರೋಗ್ಯಗಳ ಕುಡಲಿ ಕಡುಕೈಪೆಯೊಳು ನೆರೆ ಗಮಕ ಕಲೆಯ ಸತ್ಕೀರ್ತಿ ವಿಸ್ತರಗೊಳಲಿ ಸಿರಿಗನ್ನಡಂ ಚಿರಂ ಬಾಳ್ಗೆ ಸುಕ್ಷೇಮದಿಂ ವರವಹ್ನಿಪುರದರಸನೆಲ್ಲರಂ ರಕ್ಷಿಸಲಿ ಭದ್ರಂ ಶುಭಂ ಮಂಗಳಂ9
--------------
ಪರಿಶಿಷ್ಟಂ
ಸರುವದ ಪಠಿಸಿರೊ ಚತುರವಿಂಶತಿನಾಮ ಸಿರಿವಿರಿಂಚಾದಿಗಳಿಗೇ ಪ್ರಿಯಕರ ನಾಮ ಪ ಮಾಧವ ಗೋವಿಂದನ ಶ್ರೀಶ ವಿಷ್ಣು ಮಧುಸೂಧನ ತ್ರಿವಿಕ್ರಮನ 1 ವಾಮನ ಶ್ರೀಧರ ಹೃಷಿಕೇಶ ಪದುಮನಾಭ ದಾಮೋದರ ಸಂಕರುಷಣ ವಾಸುದೇವನ 2 ಅನಿರುದ್ಧ ಪುರುಷೋತ್ತಮ ದೇವನ ಅಧೋಕ್ಷಜ ನಾರಸಿಂಹ ಅಚ್ಯುತರಾಯನ 3 ಜನಾರ್ಧನ ಉಪೇಂದ್ರ ಹರಿ ಶ್ರೀ ಕೃಷ್ಣಸ್ವಾಮಿಯ ಜನನ ಮರಣ ರಹಿತನಾದ ಶ್ರೀನಿವಾಸನ 4 ಈ ಮಹಾನಾಮಂಗಳ ಪ್ರೇಮದಿಂ ಪಾಡಲು ಕಾಮಿತಾರ್ಥವೀವ ಶ್ರೀ ರಂಗೇಶವಿಠಲ 5
--------------
ರಂಗೇಶವಿಠಲದಾಸರು
ಸರೋಜಲೋಚನೆ ಸಾರಿತ್ತ ಬೇಗನೆ ಪ. ನೀಲಕುಂತಲೆ ಬೇಗಬಾರೆ ಕೋಲನಾಡುವ ನೀಲಮೇಘಶ್ಯಾಮ ನಮ್ಮ ಪಾಲಿಸೆನ್ನುವ1 ತಂಗಿ ನಮ್ಮಯ ಅಂಗಳದೊಳು ರಂಗನಮುಂದೆ ಮಂಗಳಂ ಪಾಡುತಾವು ಸಂಗತದಿಂದೆ2 ಆರ್ಯಮಾತೆಗೆ ಭೂರಿಸಂಭ್ರಮ ತೋರಿ ಮೆರೆಯುವಾ ಶಾರದೋತ್ಸವ ಆರ್ಯಕೀರ್ತಿಯ ಸಾರವೆನ್ನುವ 3 ಶೇಷಶೈಲಾವಾಸನೊಲವಿಂ ದೇಶಮಾತೆ ಸಂ ತೋಷವಾಂತು ಬೆಳಗುವೋಲ್ ಜಯಘೋಷಗೈಯುವ4
--------------
ನಂಜನಗೂಡು ತಿರುಮಲಾಂಬಾ
ಸರ್ವದೈವ ಸ್ತುತಿಗಳು 1. ಶ್ರೀ ಗಣಪತಿ ಸ್ತುತಿಗಳು 163 ಗಜಮುಖ ಗಣಪ ಪಾಹಿಮಾಂ ಪ ತ್ರಿಜಗಾಧಿಪ ಸಂಪೂಜಿತ ಅಜವಂದಿತ ಏಕದಂತಂ ಅ.ಪ ಗಿರಿಜಾಸುತ ಸುಖವರ್ಧನ | ಉರಗಾಧಿಪ ಕಟಿಬಂಧನ ವರದಾ ಮೌಕ್ತಿಕ ರದನ [ವರಮಾಷಿಕವಾಹನಾ] 1 ಗಂಗಾಧರ ಮನಮಂದಿರ ಇಂಗಿತೇಷ್ಟದಾತಾರ ಮಂಗಳ ಪಾಶಾಂಕುಶಧರ ಮಾಂಗಿರೀಶ ಪ್ರಿಯಶಂಕರ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸರ್ವಮಂಗಳಸಾರ ಜಯ ಜಯ ಭವ್ಯ ಸಚ್ಚಿದಾನಂದ ಜಯ ಜಯ ಶ್ರೀರಾಮ 1 ಬೋಧನೈಕ ಸುಖ ಜಯ ಜಯ ವಾದ ದೂರವರ ಜಯ ಜಯ ಶ್ರೀರಾಮ 2 ನಿತ್ಯ ನಿರಂಜನ ಜಯ ಜಯ ತತ್ತ್ವ ತಾರಕ ಮಂತ್ರ ಜಯ ಜಯ ಶ್ರೀರಾಮ 3 ವಿಶ್ವರೂಪ ಜಯ ಜಯ ವಾಸುದೇವ ಜಯ ಜಯ ಶ್ರೀರಾಮ 4 ಚಂಡಕೋದಂಡಧರ ಜಯ ಜಯ ಚಂಡಕಿರಣ ಕುಲತಿಲಕ ಜಯ ಜಯ ಶ್ರೀರಾಮ 5 ಮುಕ್ತಿದಾಯಕ ರಾಮ ಜಯ ಜಯ ಪಾಲನ ಲೋಲ ಜಯ ಜಯ ಶ್ರೀರಾಮ 6 ಕಾಮಿತ ಫಲದಾತ ಜಯ ಜಯ ಸೋಮವಂಶಜ ದೇವ ಜಯ ಜಯ ಶ್ರೀರಾಮ 7 ಕೂರ್ಮ ವರಾಹ ಮತ್ರ್ಯಸಿಂಹ ವಾಮನ ಜಯ ಜಯ ಶಕ್ತ ಭಾರ್ಗವ ಕಲ್ಕಿ ಜಯ ಜಯ ಶ್ರೀರಾಮ 8 ಮೌನಿಮಂಡಲ ಮಧ್ಯಗ ಜಯ ಜಯ ಧೇನುಪುರಾವನಶೀಲ ಜಯ ಜಯ ಶ್ರೀರಾಮ 9
--------------
ಬೇಟೆರಾಯ ದೀಕ್ಷಿತರು
ಸರ್ವಾಮಯ ಹರ ವಿಠಲನೇ | ಸರ್ವದಾನೀನಿವರ ಸಲಹ ಬೇಕೊ ಪ ಶರ್ವಾದಿ ಸುರವಂದ್ಯ ಸಾರ್ವಭೌಮ ಸ್ವಾಮೀಅ.ಪ. ತ್ರಿವಿಧ ಭವ ಹಾರೀ 1 ಸರ್ವಸೃಷ್ಟೀಶನೇ ಸರ್ವಪಾಲಕ ಹರಿಯೇಸರ್ವ ಸಂಹಾರಕನೇ ಸರ್ವೋತ್ತಮಾಸರ್ವಾಂತರಾತ್ಮ ಶ್ರೀ ವೆಂಕಟೇಶನೆ ನಿನ್ನಸರ್ವದಾ ಭಜಿಸುವಗೆ ಸರ್ವಮಂಗಳವೀಯೋ 2 ಭಾವಿಮರುತಲೀತ | ಭಾವ ಭಕುತಿಗಳಿಂದಸೇವಿಸುವ ಹಯಮೊಗನ | ತವ ದಿವ್ಯ ರೂಪಾಆವ ತನುಕರಣ ಮನ | ಸರ್ವಾರ್ಪಣೆಂಬ ಮತಿಓವಿನೀನಿವಗಿತ್ತು | ಪಾವನವಗೈಯ್ಯೊ 3 ಪಂಚಬೇಧದ ಜ್ಞಾನ | ಸಂಚಿಂತನೇ ಇತ್ತುಅಂಚೆವಹ ಮತ್ತೆ ಹರಿ | ಮಂಚವಿಪಗೇಂದ್ರಾ |ಮುಂಚೆ ತರತಮ ತಿಳಿಸಿ | ವಾಂಛಿತಾರ್ಥದ ನಿನ್ನಸಂಚಿಂತನೆಯಲೇ ಇರಿಸೊ ಪಂಚಾಸ್ಯ ಪ್ರಿಯನೆ 4 ಅದ್ವೈತ ಚಿಂತನೆಯನೀವೊಲಿದು ಇವಗಿತ್ತು | ಭಾವದಲಿ ತೋರೊ ತವರೂಪ |ಈ ವಿಧದಿ ಬಿನೈಪೆ ಪವನಾಂತರಾತ್ಮ ಗುರುಗೋವಿಂದ ವಿಠಲಯ್ಯ ಪಾಲಿಸೋ ಜೀಯಾ 5
--------------
ಗುರುಗೋವಿಂದವಿಠಲರು
ಸಲಹೊ ಶ್ರೀಹರಿಯೆ ಎನ್ನ ಮೊರೆಯ ಚಿತ್ತೈಸಿ ಉರಗಾದ್ರಿವಾಸ ಶ್ರೀಹರಿ ಕೇಶಿಧ್ವಂಸಿ ಪ ಸಾರ ಶೃಂಗಾರ ಯದುವೀರ ಸಲಹೆನ್ನ ಮಧುವೈರಿ ಮೋಹನ್ನ 1 ಅಪ್ಪ ತಿಮ್ಮಪ್ಪ ಎನ್ನ ತಪ್ಪನೆಣಿಸದಲೆ ಸರ್ಪಶಯನ ಸರ್ವ ಶ್ರೇಷ್ಠ ಸಲಹೆನ್ನ 2 ರಂಗಉತ್ತುಂಗ ಅಂತರಂಗದಿ ಒಲಿದು ಮಂಗಳಕರ ಪಾಂಡುರಂಗ ಸಲಹೆನ್ನ 3 ಬಾರಿಬಾರಿಗೆ ನಿನ್ನ ಹಾರೈಸುತಿರುವೆ ಸಾರಸಾಕ್ಷನೆ ಸಾರ್ವಭೌಮ ಸಲಹೆನ್ನ 4 ಕಮಲ ಸಂಭವನಯ್ಯ ವಿಮಲಸ್ವರೂಪ ಕಮಲನಾಭ ವಿಠ್ಠಲ ಪೊರೆ ಎನ್ನದಾತ5
--------------
ನಿಡಗುರುಕಿ ಜೀವೂಬಾಯಿ
ಸವಿಲೀಲೆ ದೋರುತಿದೆ ಬಗೆಬಗೆನುಭವ ಬೀರುತಿದೆ ಧ್ರುವ ತುಂಬಿ ತುಳುಕ್ಯಾಡುತಿದೆ ಝಳಝಳನೆ ಥಳಗುಡುತಿದೆ ಬಲು ಸೂಸುತಿದೆ ಹೇಳಲಿನ್ನೇನದ ತಿಳಿಯಲಗಾಧವು ತನುಮನಕ್ಹರುಷಗಡುತಿದೆ 1 ಸುರಿಸುರಿದಾಡುವ ಸಾರಸವಿಯ ಸುಧಾರಸ ಭೋರ್ಗರೆಯುತಿದೆ ಇರುಳ್ಹಗಲೆನದ್ಯಾವಾಗನುದಿನ ಸದ್ಘನಸುರಿಮಳೆ ಧಾರಿಡುತಿದೆ ಪಾರಿಲ್ಲದ ಪರಾತ್ಪರ ದುರ್ಗಮಿದು ಪರಮಪಾವನ ಗೈಸುತಿದೆ ಪರಿಪರಿ ಸವಿದುಂಬುವ ಸುಜನರ ಸುಮುಖಕೆ ತಾನಿದಿರಿಡುತಿದೆ 2 ಪ್ರಭಕೆ ಪ್ರಭಾಕರವಾಗಿಹ ಭಾಸ್ಕರಕೋಟಿ ಪ್ರಕಾಶಿಸುತಿದೆ ಶುಭಕರವಾದ ಸದಾನು ಮಂಗಳ ನೆಲೆ ನಿಭವಾಗಿ ತೋರುತಿದೆ ಅಭಯಕರವ ಪಡೆದವಗೆನ್ನೊಡೆಯನ ಸುಖ ಸುಲಭಗುಡುತಿದೆ ಭಾಸುತಿದೆ ಗುರುಮಹಿಮೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಕು ಇಹಕೆನ್ನ ನೂಕದಿರು ತಂದೆ ಪರಾಕು ಮಾಡದೆ ಸಾಕು ದಯದಿಂದನೇಕ ಮಹಿಮನೆ ಏಕಾಮೇವಾದ್ವಿತೀಯ ಪ ಮಂಗಳಾಂಗ ಮಾತಂಗವರದ ವಿ- ಹಂಗಗಮನ ಭುಜಂಗಶಯನ ತು- ರಂಗವದನ ಶುಭಾಂಗ ರಿಪುಕುಲ- ಭಂಗ ಅಸಿತಾಂಗ ಅ.ಪ. ಶೃಂಗಾರಾಂಬುಧಿ ರಂಗ ನಿನ್ನಯ ಅಂಗಸಂಗಕ್ಕೆ ಅಂಗೀಕರಿಸಿದ ಸಂಗಿತರ ಚರಣಂಗಳಬ್ಜಕೆ ಭೃಂಗನಪ್ಪೆನೆಂತೊ 1 ಮಾನವಾವುದು ಸುಮ್ಮನಿರೆ ಪವ- ಮಾನವಂದಿತ ನಿನ್ನ ಪೋಲ್ವ ಸ- ಮಾನರಾರನು ಕಾಣೆ ಎನ್ನಭಿ- ಮಾನವಾಧೀಶ ಮಾನವಮಾನ- ಮಾನದಿಂದ ಕ್ರಮಾನುಸಾರನು ಮಾನಗೊಳಿಸದೆ ಮಾನವಿತ್ತು ದು- ಮ್ಮಾನವನೆ ಬಿಡಿಸೊ 2 ಬಲ್ಲೆ ನಿನ್ನಯ ಎಲ್ಲ ಪರಿಯಲಿ ಬಲ್ಲಿದರಿಗತಿ ಬಲ್ಲಿದನು ಸಿರಿ- ವಲ್ಲಭಾ ನೀನಲ್ಲದಿಲ್ಲೆಂದು ಎಲ್ಲ ತುತಿಸುತಿದೆ ಸೊಲ್ಲುವೊಂದನು ನಿಲ್ಲುತಲಿ ಕೇಳು ಎಲ್ಲು ಬಯಸದೆ ಇಲ್ಲಿಗೇ ಬಂದೆ ಕೊಲ್ಲು ಕಾಯ್ಸಿರಿ ವಿಜಯವಿಠ್ಠಲ ಬಲ್ಲದನು ಮಾಡೋ3
--------------
ವಿಜಯದಾಸ
ಸಾಕು ಜನ್ಮದ ಸುಖವು ಸಾಕಿನ್ನು ಹರಿಯೇ ಪ ಅನೇಕ ಜನ್ಮದ ಸುಖ ಬೇಡ ಹರಿಯೇ ಅ.ಪ ಹದಿನೆಂಟು ಸಾಸಿರ ವಿಧವಿಧ ಜನ್ಮವ ಮೊದಲು ಕಳೆಯುತಲೀಗ ನರನಾಗಿ ಜನಿಸೀ ಕ್ರೋಧ ಲೋಭಗಳಿಂದ ಮದ ಮಾತ್ಸರ್ಯಗಳಿಂದ ಅಧಿಕ ಮೋಹಿತನಾದೆ ಪದುಮಾಕ್ಷ ಪರಂಧಾಮಾ 1 ನರಜನ್ಮ ಹಿರಿದೆಂದು ಅರಿತವÀರು ಪೇಳ್ವರು ಹರಿ ನಿನ್ನ ನುತಿಸಿ ಪಾಡುವ ಭಕ್ತ ಜನಕೆ ಪರಮಪಾತಕ ಗೈದು ನರಕಕೆ ಪೋಪೆನ್ನ ಮರಳಿ ಕಳುಹಲಿಬೇಡ ಧರಣಿಗೆ ದೇವ ದೇವ 2 ನರಕದೆ ಸುಖವುಂಟು ಧರೆಯಲ್ಲಿ ಸುಖವಿಲ್ಲ ಕರುಣಾಕರ ದೇವ ಸಿರಿಕಾಂತನೇ ಧರೆಯೊಳು ನಾನಿಹೆ ಅರೆಘಳಿಗೇ ನಿನ್ನ ಪರಮನಾಮಾವಳಿಯ ಸ್ಮರಣೆಯ ಕೊಡುಸಾಕು 3 ಗಂಗೆಯ ಜನಕನೆ ಮಂಗಳ ಮೂರುತಿ ಮಾಂಗಿರಿವರವಾಸ ಶ್ರೀಶ್ರೀನಿವಾಸ ಅಂಗಜಾತನ ತಾತ ಶೃಂಗಾರ ಪೂರಿತ ಭಂಗ ಮಾಡಿಸಬೇಡ ರಂಗೇಶ ಭವಬೇಡ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸಾಕೊ ರಂಗ ಅರಸುತನ ಯಾಕೊ ಯಾಕೊಗೋಕುಲದ ಗೊಲ್ಲರು ನುಗಿಸಿ ಗಲ್ಲವ ಹಿಂಡಿಕಾಕು ಮಾಡಿದ್ದು ನಿನಗೆ ಬೇಕೊ ಬೇಕೊ ಪ. ರುದ್ರ ಬ್ರಹ್ಮ ಹತ್ಯಾಕಾರ ಕ್ಷುದ್ರ ಬಲೀಂದ್ರನು ಕದ್ದೊಯ್ದ ಸುವರ್ಣ ಮುಕುಟವಕದ್ದೊಯ್ದ ಸುವರ್ಣ ಮುಕುಟವ ಬಲರಾಮ ಮಧ್ಯಪಾನಿ ಎಂದು ನುಡಿದನು ನುಡಿದನು 1 ಮಗನ ಮಗನು ಬಲು ಕೊಂಡೆಗಾರನಾದ ಮಗಳ ಮಗ ನಿನ್ನ ಹಣಿಗಚ್ಚಿದ ಮಗಳ ಮಗ ನಿನ್ನ ಹಣಿಗಚ್ಚಿದ್ದು ಕಂಡುನಗತಾರೊ ನಿನ್ನ ಸರಿಯವರು ಸರಿಯವರು2 ಶುಕ ಪಿತೃದ್ರೋಹಿ ಪ್ರಲ್ಹಾದ ಭ್ರಾತೃದ್ರೋಹಿ ವಿಭೀಷಣಭ್ರಾತೃದ್ರೋಹಿ ವಿಭೀಷಣ ಇವರು ಮುಖ್ಯಪಾತ್ರರೊ ನಿನ್ನ ಕರುಣಕೆ ಕರುಣಕೆ3 ಸ್ವಾಮಿದ್ರೋಹಿ ಅಕ್ರೂರ ಗುರು ದ್ರೋಹಿ ಪ್ರಲ್ಹಾದ ಬ್ರಾಹ್ಮಣರ ದ್ರೋಹಿಗಳು ಯಾದವರು ಬ್ರಾಹ್ಮಣರ ದ್ರೋಹಿಗಳು ಯಾದವರು ನಿನ್ನ ಮುಖ್ಯಪ್ರೇಮಕ್ಕೆ ವಿಷಯರೊ ವಿಷಯರೊ4 ದುರುಳ ಶಿಶುಪಾಲನ ಸಭೆಯೊಳು ಬೈದದ್ದುಸರಿಬಂತೆ ರಾಮೇಶನ ಮನಸಿಗೆ ಮನಸಿಗೆ 5
--------------
ಗಲಗಲಿಅವ್ವನವರು