ಒಟ್ಟು 3274 ಕಡೆಗಳಲ್ಲಿ , 123 ದಾಸರು , 2242 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾಲೆಯರು ನಿನ್ನ ಲಾಲಿಸುವರೋ ಸೋಲದಿರು ಮನವ ಗೋಪಾಲ ಪ ಲೋಲತನದಿ ಬಾಲ ನಿನಗೆ ಕಾಲ ಕಳೆಯಲು ಅ.ಪ ಪೊಂದಲೋಸುಗ ಸುಂದರಿಯರು ಸಂದು ಮಾಡುವರೊ ಮುಕುಂದ ಮಂದಹಾಸದಿಂದ ನಿನಗೆ ಗಂಧ ಪೂಸುವರೊ ಗೋವಿಂದ 1 ಓರೆಗಣ್ಣಿನ ನೋಟದಿಂದ ಸೂರೆಗೊಳುವರೊ ನಾರೇರು ಕೋರಿಕೆಯನು ಮೀರಿದರೆ ನೀ ದೂರು ಮಾಡುವರೊ ಮುರಾರೆ 2 ಮುರಳಿನಾದವ ಮಾಡೆ ನಿನ್ನ ತೆರಳ ಬಿಡರಿವರು ಮನೆಗೆ ಸರಳನೆಂದು ಅರಿತು ನಿನ್ನ ಮರುಳು ಮಾಡುವರೊ ಶ್ರೀ ಕೃಷ್ಣ 3 ಎನ್ನ ಮನವನು ತಿಳಿಯುವುದಕೆ ಕನ್ಯೆಯರಿಗಳವೇ ಪೇಳಮ್ಮ ಇನ್ನು ಪೋಗುವುದಿಲ್ಲವೆ ಪ್ರ ಸನ್ನಳಾಗಮ್ಮ ಯಶೋದೆ 4
--------------
ವಿದ್ಯಾಪ್ರಸನ್ನತೀರ್ಥರು
ಬಿಂಕವ್ಯಾತಕ್ಕೆನಮ್ಮ ಕೂಡ ಬಿಂಕವ್ಯಾತಕ್ಕೆಅಕಳಂಕ ರುಕ್ಮಿಣಿಯರಮನೆಗೆ ಅಹಂಕಾರದಲಿ ಮುಯ್ಯ ತಂದು ಪ. ವಾತನೊಡಗೂಡಿ ಜನಿಸಿ ಆತನಮದುವೆ ಮಾಡಿಕೊಂಡೆನೀತಿಯೇನ ನಿನಗೆ ದ್ರೌಪತಿಈ ಮಾತು ಕೇಳಿ ಮಂದಿ ನಗರೆ 1 ಹುಟ್ಟು ಹೊಂದು ನಾರಿ ನೀನುಎಷ್ಟೊಂದು ಗರವು ನಮ್ಮ ಕೂಡಯಾಕೆ ಕೃಷ್ಣನ ಅರಸಿ ರುಕ್ಮಿಣಿಗೆಒಂದಿಷ್ಟರೆ ದೋಷ ತೋರ ಸಖಿಯೆ2 ಜನನ ಮರಣವೆಂಬೆರಡು ಜಾಣಿ ರುಕ್ಮಿಣಿಬಲ್ಲಳೇನ ಜನನಿ ಬೊಮ್ಮಗ ಎನಸಿತಾನೆ ಜಗದಿ ಖ್ಯಾತಿ ತುಂಬಿಲ್ಲವೇನ ಈ ಜಗದಿ ಖ್ಯಾತಿ ತುಂಬಿಲ್ಲವೇನ 3 ನಿತ್ಯ ನಿತ್ಯ ಮೂರುತಿ ಕೃಷ್ಣನ ಭಜಿಸಿನಿತ್ಯ ತೃಪ್ತಳು ಎನಿಸುತಿಹಳು 4 ಅತ್ತಿಗೆಯರೆಂಬೊ ದಿವ್ಯ ಅರ್ಥನಾಮವ ಜಪಿಸಿಮತ್ತೆ ರಾಮೇಶನ ಅರಸಿಯರಿಬ್ಬರಭೃತ್ಯಳಾಗಿ ಭಾಗ್ಯವ ಪಡಿಯೆ5
--------------
ಗಲಗಲಿಅವ್ವನವರು
ಬಿಗಿಯದಿರು ಬಿಗಿಯದಿರು ಎಲೆ ಮಾನವಾಧಿಗಿ ಧಿಗಿ ಧಿಗಿಯೆನುತ ನಿನಗೇಕೆ ಗರ್ವ ಅ ವಿರಕ್ತಿಯಲಿ ಹನುಮನೆ ವಿವೇಕದಲಿ ವಸಿಷ್ಠನೆಶೂರತನದಲಿ ಶಂತನುತನಯನೇನೊಸ್ವರದಲಿ ತುಂಬುರನೆ ಗೀತದಲಿ ನಾರದನೆಪರಾಶರ ಮುನಿಯೆ ವ್ರತತಿ ಪಟ್ಟದಲ್ಲಿ 1 ಚೆಲುವಿನಲಿ ರಾಮನೆ ಸತ್ಯದಿ ಹರಿಶ್ಚÀ್ಚಂದ್ರನೆಛÀಲದಲ್ಲಿ ಋಷಿ ವಿಶ್ವಾಮಿತ್ರನೇನೋಬಲದಲ್ಲಿ ವಾಲಿಯೇ ಹಲಧರನೆ ಹಿರಣ್ಯಕನೆಬಿಲು ವಿದ್ಯದಲಿ ಪರಶುರಾಮನೇ ನೀನು 2 ತ್ಯಾಗದಲಿ ಕರ್ಣನೇ ಭೋಗದಲಿ ಶತಮಖನೆಯೋಗದಲಿ ಶುಕಸನಕ ಜನಕನೇನೋಭಾಗ್ಯದಲಿ ಬಲಿಚಕ್ರವರ್ತಿಯೋ ದಶಶಿರನೊದೀರ್ಘದಲಿ ಮೇರುವೇ ಮಂದರವೆ ನೀನು 3 ಶಕ್ತಿಯಲಿ ಕಾಲನೆ ಭುಕ್ತಿಯಲಗಸ್ತ್ಯನೆಮುಕ್ತಿ ಪಡೆವಲ್ಲಿ ಖಟ್ಟಾಂಗರಾಯನೇನೊ 4 ಶಾಪದಲಿ ಬ್ರಹ್ಮನೆ ತಾಪದಲಿ ಸೂರ್ಯನೆಕೋಪದಲಿ ಮಹೇಶನೇನೋ ನೀನುತಪದಲ್ಲಿ ಹನುಮನೆ ವ್ರತದಿ ರುಕ್ಮಾಂಗದನೆಕೃಪೆಯಲ್ಲಿ ಶ್ರೀ ಕೃಷ್ಣದೇವನೆ ನೀನು 5
--------------
ವ್ಯಾಸರಾಯರು
ಬಿಟ್ಟನ್ಯಭಜನೆಯ ಕಂಡು ಪ ಹೊಚ್ಚಿ ಸುಳಿದಟ್ಟಿ ಸುಡುವ ಅಡವಿಗಿಚ್ಚಿನ ಭಯಕೆ ಬೆಚ್ಚಿ ಅರಗಿನ ಮನೆಯ ಹೊಗುವವನಂತೆ ಅಚ್ಚರಿಯೆನಿಸೆ ದಹಿಪ ತಾಪತ್ರಯಕ್ಕಳುಕಿ ತುಚ್ಛ ದೈವಗಳ ಮರೆಯೊಗುವ ಮನುಜರಕಂಡು 1 ಉರಿಯ ಮಳೆಗರೆಯುತಿರೆ ತೃಣಗೇಹವನು ಹೊಕ್ಕು ಹರಣವನುಳುಹಿಕೊಂಬೆನೆಂಬಂತೇ ಉರುಬೆ ನಾನಾ ರೋಗಗಳುಳುಹಲು ಹಲವು ದೈವಗಳಿ ಗೆರಗಿ ಜೀವನಕೆ ಕಳಕಳಿಪ ಮನುಜರ ಕಂಡೂ 2 ಮುಗಿಲಗಲ ಧರೆ ಜರಿಯುತಿರೆ ಹುಲ್ಲಿನಣಬೆಯೊಡ್ಡಿ ಮಿಗೆ ಬಾಳ್ವೆನೆಂಬ ಮರುಳನಂದದೀ ಉಗಿದಸಿಯ ಮೃತ್ಯುವಿನ ಭಯಕೆ ನಾನಾದೇವ ತೆಗಳಮರೆಯೊಗುವ ಮನುಜರ ಕಂಡು 3 ಘುಡು ಘುಡಿಸಿ ಸಿಡಿಲೆರಗುತಿರೆ ತನ್ನ ಕೈ ವಿಡಿದ ಕೊಡೆಯ ಮರೆಗೊಂಡುಳಿವೆನೆಂಬಂತೇ ಮುಡಿವಿಡಿದೆಳೆವ ಕಾಲನ ಭಯಕೆ ನಾನಾದೈವ ದಡಿವಿಡಿದೆರಗಿ ಹಲು ಬಿಡುವ ಮನುಜರ ಕಂಡು 4 ಯಾತಮುಳಿದರೆ ಜಗದಲುಳಿದವರಾರು ಮ ತ್ತೀತನುಳುಹಿದನನು ಕೊಂದವನಾವ ಇ ದೇತಕರಿಯರೋ ನರರು ಅಕಟಕಟ ವೈಕುಂಠ ನಾಥ ಪರಿಪೂತನ ಪದಕಮಲವ ಭಜಿಸರೆಂದು 5 ನೀರಡಿಸಿ ಜಾಹ್ನವಿಯ ತೀರದಲಿ ಭಾವಿಯಾ ನೀರ ಕುಡಿವ ಮಾನವನ ತೆರದೀ ಹರಿಯ ಚರಣವಿರಲು ಭೂರಿದೈವಂಗಳಿನ್ನೇಕೆ ಭಜಿಸುವೆ ಮನುಜ ಹರಿ ಕಾರುಣ್ಯನಿಧಿ ವೈಕುಂಠವಲ್ಲಭ ಬೇಲೂರ ಚೆನ್ನಿಗರಾಯ ಕೃಪಾನಿಧಿಯಿರಲು 6
--------------
ಬೇಲೂರು ವೈಕುಂಠದಾಸರು
ಬಿಟ್ಟಿರಲಾರೆ ಬಾ ಗೋವಿಂದಾ ಸೃಷ್ಟಿಶಾನಂದ ಪ ಬಿಟ್ಟಿರಲಾರೆ ಮನಮುಟ್ಟಿ ಭಜಿಪೆನಯ್ಯ ಅಷ್ಟಮಹಿಷೇರ ಸಹಿತ ನಾಟ್ಯವಾಡುತ ಬೇಗ ಬಾ ಅ.ಪ ಗೊಲ್ಲರ ಮನೆ ಪೊಕ್ಕು ಪಾಲ್ಬೆಣ್ಣೆಗಳ ಮೆದ್ದು ಚೆಲ್ವ ಲಲನೇರ ಗಲ್ಲ ಮುದ್ದಾಡುತ ಬೇಗ 1 ಮಂದಗಮನೆಯರ ಮಂದಹಾಸದಿ ಅಪ್ಪಿ ದ್ವಂದ್ವ ಕುಚದಲ್ಲಿಟ್ಟ ನಂದಜ ಕರಗಳಿಂದ 2 ಮಿರಿಮಿರಿ ಮಿಂಚುವ ಕಿರೀಟ ಕುಂಡಲ ಧರಿಸಿ ವಾರೆ ನೋಟದಿ ನಾರೇರ ಮನ ಸೆಳೆವ 3 ಸುಮನಸರೊಂದಿತ ಯಮುನಾ ಪುಳಿನದಿ ವಿಮಲ ವೇಣುಸ್ವರದಿ ಕಮಲಾಕ್ಷಿಯರೊಲಿಸಿದ 4 ಶ್ರೀವತ್ಸ ಕೌತ್ಸುಭ ಪವಳ ಮುತ್ತಿನಹಾರ ನ್ಯಾವಳ ಸರಿಗಿಟ್ಟು ಗೋವಳರೊಡಗೂಡಿ 5 ತುತ್ತೂರಿ ಝಾಂಗಟೆ ಒತ್ತಿ ಪಿಡಿದಿಹ ಕಹಳೆ ಬತ್ತೀಸ ರಾಗದಿ ತತ್ಥೈವಾದ್ಯದೀ 6 ಎತ್ತಿ ಪಿಡಿದಿಹ ಛತ್ರಿ ಸುತ್ತು ಮಾಗಧ ಮಂದಿ ಸ್ತೋತ್ರವ ಮಾಡೆ ನೇತ್ರೋತ್ಸವ ತೋರುತ 7 ದಿವಪನ ಸೋಲಿಪ ನವ ಪೀತಾಂಬರ ಧರಿಸಿ ಭುವನವ ಮೋಹಿಪ ನವ ಸುವಿಶೇಷನೆ 8 ವಿಜಯ ರಾಮಚಂದ್ರವಿಠಲರಾಯನೆ ನಿಜ ಪರಿವಾರದಿಂ ಭಜಕರ ಪಾಲಿಪ 9
--------------
ವಿಜಯ ರಾಮಚಂದ್ರವಿಠಲ
ಬಿಟ್ಟು ಬನ್ನಿರೊ ಸಂಸಾರದ್ಹಂಬಲ ಪ. ಸೃಷ್ಟಿಪತಿಯ ಸೇರಿ ನೀವು ಸುಖಿಸಬನ್ನಿರೊ ಅ.ಪ. ಹೆಂಡಿರುಮಕ್ಕಳು ಎಂಬೋ ಹಂಬಲ ಬೇಡಿರೊಕೊಂಡವರಲ್ಲ ಕೊಡುವರಲ್ಲ ಮುಂದಿನ ಗತಿಯನು 1 ಎಷ್ಟು ಮಾಡಿ ಗಳಿಸಿ ತಂದರು ಸಾಲದೆಂಬರೊನಷ್ಟಮಾಡಿ ಇವನ ಬದುಕು ಎಲ್ಲ ತಿಂಬರು 2 ನಡುಬೀದಿಯಲಿ ಇವನ ಎಳೆದು ಸೆಳೆವರೊಕಡೆಗಣ್ಣು ಕುಡಿಹುಬ್ಬು ನೋಟದಿಂದಲಿ 3 ಉಂಡು ಉಟ್ಟು ಗುಂಡಿನಂತೆ ಮನೆಯಲಿರುವರೊಚಂಡ ಯಮನದೂತರು ಬಂದು ಎಳೆದು ಒಯ್ವರೊ4 ಮುಟ್ಟಿ ಭಜಿಸಿರೊ ಹಯವದನನಂಘ್ರಿಯನೆಟ್ಟನೆ ಮುಕ್ತಿಮಾರ್ಗ ತೋರಿಕೊಡುವೆನೊ 5
--------------
ವಾದಿರಾಜ
ಬಿಟ್ಟು ಬರಲಾರಳಮ್ಮಯ್ಯಪಟ್ಟಮಂಚವ ಭಾವೆಬಿಟ್ಟರೆ ರುಕ್ಮಿಣಿ ಕೃಷ್ಣನ ಬೆರೆದಾಳೆಂಬೊ ಅಂಜಿಕೆಯಿಂದ ಪ. ಪಾದ ಸಿಕ್ಕಿತೋ ಸಿಗದೆಂದುಚಿಕ್ಕ ಚನ್ನಿಗಳ ಕೈವಶಚಿಕ್ಕ ಚನ್ನಿಗಳ ಕೈವಶವಾಗದಂತೆಜಪ್ಪಿಸಿಕೊಂಡು ವಟವಾದಳೆ 1 ಶಂಬರಾರಿ ಪಿತನ ತಂಬುಲಸಿಗದೆಂದು ಚುಂಬನದ ಸಮಯ ಚಿಗಿಳೀತುಚುಂಬನದ ಸಮಯ ಚಿಗಿಳೀತು ಎಂತೆಂಬೊಹಂಬಲದಿ ಒಳಗೆ ಕುಳಿತಳೆ2 ನಲ್ಲೆ ರಂಗಯ್ಯನ ಎಲ್ಲೆಲ್ಲಿ ಬಿಡಲೊಲ್ಲೆಎಲ್ಲ ನಾರಿಯರ ನೆರವಿಕೊಂಡುಎಲ್ಲ ನಾರಿಯರ ನೆರವಿಕೊಂಡು ಮನೆಯೊಳುನಿಲ್ಲಗೊಡರೆಂಬೊ ಭಯದಿಂದ3 ಒಗೆತನ ನಗೆಗೀಡಾಯಿತು ನೋಡೆ ಈ ಬಗೆ ಎಲ್ಲೆ ಕಾಣೆ ಜಗದೊಳು ಈ ಬಗೆ ಎಲ್ಲೆ ಕಾಣೆ ಜಗದೊಳು ರುಕ್ಮಿಣಿ ತಗಿ ನಿನ್ನನಡತೆ ತರವಲ್ಲ4 ಅನಂತ ಮಹಿಮಗೆ ಇನ್ನೆಂಥ ಕಾವಲತನ್ನ ನಿಜರೂಪ ಅವರಲ್ಲಿತನ್ನ ನಿಜರೂಪ ಅವರಲ್ಲಿ ರಮಿಸೋದುತನ್ನ ಮನದಲ್ಲಿ ನಿಜ ಮಾಡಿ5 ಸಾಗರಶಾಯಿ ಮನಕೆ ಹ್ಯಾಂಗೆ ಬಂದೀತುಎಂದು ಹೀಗೆ ಕೈ ಮುಗಿದು ತಲೆಬಾಗಿಹೀಗೆ ಕೈ ಮುಗಿದು ತಲೆಬಾಗಿ ರುಕ್ಮಿಣಿಆಗೊಂದು ಮನದ ಬಯಕೆಲ್ಲ6 ಎಷ್ಟು ಜಪಿಸಿ ನೀನು ಠಕ್ಕಿಸಿ ಕೃಷ್ಣನ ಇಟ್ಟಾನೆ ರಮಿಯ ಎದಿಮ್ಯಾಲೆ ಇಟ್ಟಾನೆ ರಮಿಯ ಎದಿಮ್ಯಾಲೆ ರುಕ್ಮಿಣಿ ಇಷ್ಟರ ಮ್ಯಾಲೆ ತಿಳಕೊಳ್ಳ7
--------------
ಗಲಗಲಿಅವ್ವನವರು
ಬಿಡು ಬಿಡು ಇನ್ನು ಸೋಗಾಚಾರ | ಒಡಿಯ ಬಲ್ಲನು ನಾನು ನಿನ್ನ ವಿಚಾರ ಪ ತುಡಗತನ ಕಲಿತು ನೆರೆಹೊರೆಯವರ ಮನೆಯಲ್ಲಿ | ಗಡಿಗೆ ತುಪ್ಪಾ ಬೆಣ್ಣೆ ಮೊಸರು | ಹಾಲು | ಕುಡಿದು ಛೀ ಹಳಿ ಕದ್ದ ಕಳ್ಳನೆನೆಸಿಕೊಂಡ | ಪಡಚುತನವಲ್ಲದೆ ಭಾರಕನು ನೀನಲ್ಲ 1 ಸೀರಯನು ಕದ್ದಂದು ಕಡವಿನ ಮರವನೇರಿ | ಊರ ನಾರಿಯರ ಮಾನಕ್ಕೆ ಸೋತು || ಜಾರತನದವನಾಗಿ ತಿರಗಿ ಜಗದಾ ಭಂಡ | ಪೋರರಿಗೆ ಪೋರನಲ್ಲದೆ ಹಿರಿಯನಲ್ಲ2 ಮುನಿಗಳೆಜ್ಞದಲ್ಲಿ ತಿರಿತಂದು ಗೊಲ್ಲತೆರ | ತನುಜರ ಸಂಗಡಲಿದ್ದು ಎಂಜಲುಂಡು | ಮನುಜದೇಹವ ತೆತ್ತು ಬಿನಗು ಲೀಲಾಕೃತಿ | ದನಗಾವಿ ಎಲ್ಲದೆ ದೊರೆ ಮಗನು ನೀನಲ್ಲ 3 ಯಾತಕ್ಕೆ ಬಾರದ ಕುನಪೆಣ್ಣಿಗೆ ಮೆಚ್ಚಿ | ಮಾತುಳನ ಕೊಂದು ಮುತ್ತೈಯಗೊಲಿದು | ಭೀತಿಯಲಿ ಪರರಾಯನ ಮಗಳ ಕೊಂಡು ಬಂದ | ಯಾತರ ಪೌರುಷದವನು ಲೋಕದೊಳಗೆಲ್ಲ 4 ತೊತ್ತಿನ ಮಗನಲ್ಲಿ ವುಂಡು ಬಿಗಿಸಿಕೊಂಡು | ಮಿತ್ರಭೇದವನಿಕ್ಕಿ ಬಂಧುಗಳಿಗೆ | ತೆತ್ತಿಗನು ನೀನಾಗಿ ವಾಜಿಗಳ ಪಿಡಿದು | ಹತ್ಯವ ಮಾಡಿಸಿದೆ ಉತ್ತಮನು ನೀನಲ್ಲ 5 ಅಣ್ಣ ತಮ್ಮಂದಿರನು ಅಗಲಿಸಿ ವೈರದಲಿ | ನುಣ್ಣಗೆ ಒಬ್ಬರೊಬ್ಬರ ಕೊಲ್ಲಿಸಿ | ಇನ್ನೇನು ಉಸರುವೆನು ಕಟ್ಟಕಡಿಗೆ ಎಲ್ಲ | ನಿನ್ನ ಕುಲವನು ಕೊಂದೆ ಇದು ಪುಶಿಯಲ್ಲ 6 ತಿಳಿಯಲಾರರು ನಿನ್ನ ಠಕ್ಕು ಠವಳಿಯ ಮಾಯ | ಜಲಜ ಸಂಭವ ಶಿವ ಇಂದ್ರಾದ್ಯರು | ಸುಲಭ ದೇವರದೇವ ವಿಜಯವಿಠ್ಠಲರೇಯ |ವೊಲಿದ ದಾಸರಿಗೆ ಸಂತಾನ ಕುಲದೀಪ7
--------------
ವಿಜಯದಾಸ
ಬಿಡು ಬಿಡು ಚಿಂತೆಯ ಮೂಢಾ ನ- ಮ್ಮೊಡೆಯನುಪೇಕ್ಷೆಯ ಮಾಡ ಬಡವರ ತಪ್ಪನು ನೋಡ ಸಂ- ಗಡಲಿಹ ಗರುಡಾರೂಢ ಪ. ನೆನೆವರ ಮನದಲ್ಲಿರುವ ನಿಜ ಜನಕೆ ದಯಾರಸ ಸುರಿವ ಕನವಿಕೆ ಎಂಬುದ ತರಿವ ಸ್ಮರ ಜನಕ ಸಿರಿಯ ಕರೆತರುವ 1 ಮಾಡುವ ಕರ್ಮಗಳೆಲ್ಲ ಫಲ ಕೊಡಿಸುವನು ಸಿರಿನಲ್ಲ ರೂಢಿಪರೊಳಗಿರಬಲ್ಲ ಬೇ- ರಾಡುವ ಮಾತೇನಿಲ್ಲ 2 ನೋಡಲು ಸಿಕ್ಕುವನಲ್ಲ ಬೇ- ಗೋಡಿ ಪಿಡಿಯಲೊಶನಲ್ಲ ದೂಡುವ ದೈತ್ಯರನೆಲ್ಲ ದಯ ಮಾಡಲಿವಗೆ ಸರಿಯಿಲ್ಲ 3 ಸರ್ವತ್ರದಲಿ ಸ್ಮರಿಸುವನು ರಿಪು ಪರ್ವತಗಣ ದುಶ್ಚ್ಯವನ ಗರ್ವಿ ದೈತ್ಯವನದವನ ಸುರ ಸಾರ್ವಭೌಮನೆಂಬುವನ 4 ಸತಿಸುತ ಗ್ರಹ ಭೂಧನಕೆ ಶ್ರೀ- ಪತಿಯೆ ಪಾಲಕನಿದಕೆ ವ್ಯಥೆಗೊಳದಿರು ದಿನದಿನಕೆ ಸ- ಮ್ಮತಿನಹಿಗಿರಿಪತಿ ಘನಕೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ಬಿಡೆನು ನಿನ್ನಯ ಪಾದವಾ ಮುಖ್ಯ ಪ್ರಾಣ ಬಿಡೆನು ನಿನ್ನ ಪಾದಾ ಕಡಲ ಹಾರಿದೆನೆಂಬ ಸಡಗರದಿಂದೆನ್ನ ಕಡೆಹಾಯಿಸದೆ ಬೇಗ ಪ. ಹದಿನಾಲ್ಕು ಲೋಕದೊಳು ವ್ಯಾಪಕವಾಗಿ ಮುದದಿಂದ ಹಂಸ ಮಂತ್ರವ ಜಪಿಸುತ ಮಧುವೈರಿಯನು ಒಲಿಸಿ ಕಡೆಗೆ ಅಜ- ಪದವನೈದುವಿ ಸುಖದಿ ವಿಧುಕಳಾಧರ ವಾಸವಾದ್ಯರ ಮುದದಿ ರಕ್ಷಿಸಿ ದೈತ್ಯ ಪುಂಜವ ವಿಬುಧ ಗಣಾರ್ಚಿತ 1 ಮತಿವಂತನಾದಮ್ಯಾಲೆ ತ್ವತ್ಪಾದವೇ ಗತಿಯೆಂದು ನಂಬಿಹೆನು ನೀ- ನಿತ್ತ ಶಕುತಿಯಿಂದ ಪೂಜೆಯನು ಮಾ- ಡುತ ನಿನ್ನ ಪ್ರತಿಮೆಯ ನಮಿಸುವೆನು ವಿತತ ಮಹಿಮನೆ ಪೂರ್ವಭವ ದುಷ್ಕøತಗಳೆನ್ನನು ಪತನಗೊಳಿಪದನತುಳ ನೀ ನೋಡುತ್ತ ಎನ್ನನು ಜತನಮಾಡದೆ ವಿತಥ ಮಾಳ್ಪರೆ 2 ಹಿಂದೆ ತ್ರೇತಾಯುಗದಿ ಈ ಧರಣಿಗೆ ಬಂದು ನೀ ಕಪಿರೂಪದಿ ಅರ- ವಿಂದ ಬಾಂಧವನನು ಸೇರಿದಿ ಇಂದ್ರ ನಂದನನಿಂಗೆ ರಾಜ್ಯವ ಇಂದಿರೇಶನ ದಯದಿ ಕೊಡಿಸಿ ಪು- ರಂದರಗೆ ವರವಿತ್ತ ಬಲದಶ ಕಂಧರನ ಜವದಿಂದ ಗೆಲಿದನೆ 3 ಭೀಮನನೆನಿಸಿ ಕೀಚಕರ ನಿ- ರ್ನಾಮ ಗೊಳಿಸಿ ಜಯಿಸಿ ಕಿಮ್ಮೀರ ಬಕಮಾಗಧರ ಸೀಳಿಸಿ ಸಾಮಗಾಯನ ಲೋಲಕೃಷ್ಣನ ಪ್ರೇಮ ರಸಪೂರ್ಣೈಕ ಪಾತ್ರನಿ- ರಾಮಯನೆ ಧೃತರಾಷ್ಟ್ರತನಯಸ್ತೋಮವನು ತರಿದಮಲರೂಪ 4 ಕಡೆಯಲಿ ಕಲಿಯುಗದಿ ನೀ ಯತಿಯಾಗಿ ಮೃಡನ ತರ್ಕವ ಖಂಡಿಸಿ ಜ್ಞಾನಾ ನಂದಕದಲಿ ಕೃಷ್ಣನ ಸ್ಥಾಪಿಸಿ ಮಾಯಿಗಳನ್ನು ಬಡಿದು ದೂರದಲೋಡಿಸಿ ಪೊಡವಿಗಧಿಪತಿ ಪಾವನಾತ್ಮಕ ಒಡೆಯ ಶೇಷಾಚಲನಿವಾಸನ ಮೆರದನೆ ತಡವ ಮಾಡದಲು 5
--------------
ತುಪಾಕಿ ವೆಂಕಟರಮಣಾಚಾರ್ಯ
ಬಿಡೊ ಬಿಡೊ ಬಡಿವಾರಾ ಬೀರದಿರು ನಡಿ ನಡಿ ಹೋಗೈ ಸಾಕು ಪ ಗಂಡನುಳ್ಳವಳೆಂದರಿಯದೆ ನೀನೆಂಥಾ ಪುಂಡಾಟಿಕೆ ಯಾರಿಗೆ ಬೇಕೊ 1 ತಕ್ಕ ಬುದ್ಧಿ ಹೇಳುವರಿಲ್ಲದೆ ನಿ - ನ್ನಕ್ಕ ತಂಗಿಯರನೆ ಸೋಕೊ 2 ಶ್ರೀದವಿಠಲ ಸುಮ್ಮನೆ ಹೋಗದೆ ನಡು ಬೀದಿಯೊಳಗೆ ಮಾಡೊರೆ ಹೋಕು 3
--------------
ಶ್ರೀದವಿಠಲರು
ಬಿನ್ನವೆನ್ನೆಣೆಸದಿರು ಎಲೆ ಮಾನವಾ ಚನ್ನಕೇಶವ ಸ್ವಾಮಿ ಒಲಿದು ಪಾಲಿಸುವಾ ಪ ವಸುಧೆಯಲಿ ಚಲಿಸುತಿಂತ ಸಕಲ ಜಂತುಗಳೆಲ್ಲ ಹಸನಾಗಿ ತಿಳಿಯದೆ ನಿನ್ನಾತ್ಮವೆಂದು ತೃಷೆ ಕ್ಲೇಶಗಳು ಮುರಿದೊಗೆವ ಜೀವವನು ಕಸಕಸರಿ ಮಾಡದಿರು ಪರರಾತ್ಮವೆಂದು 1 ಅವರಿವರು ಬಂಧುಗಳು ಅಪ್ತೇಷ್ಟ ಸಹೃದರು ಇವರವರು ದೂಷಕರು ಪರಜಾತಿಯೆಂದು ಸವಿಸುತಲಿ ಮನಸನ್ನು ಪರಪಂಚವೆನಿಸುತ್ತ ಭವವನ್ನೆ ಸೆಲೆ ನಂಬಿ ಪರರಾತ್ಮವೆಂದು 2 ದಾಸದಾಸರಿಗೆಲ್ಲ ವಂದನೆಯ ಮಾಡುತ್ತ ದಾಸರೆಲ್ಲರು ಜಗದಿ ಏಕಾತ್ಮರೆಂಬ ವಾತನೆಯ ನಂಬದಲೆ ಬಿನ್ನಾತ್ಮರೆಂದೆಣಿಸಿ ವಾಸುಕೀಶಯನನೂ ಭಿನ್ನಾತ್ಮನೆಂದು 3
--------------
ಕರ್ಕಿ ಕೇಶವದಾಸ
ಬಿನ್ಯೈಪೆ ನಿನಗಾನು ಭೀಮಸೇನ ಪ ಬನ್ನಬಡುತಿಹ ಜನರ ಭಯವ ಪರಿಹರಿಸೆಂದು ಅ.ಪ. ನೀಚರಿಂದಲಿ ಬಂದ ಭಯಗಳಿಂದಲಿ ಜನರು ಯೋಚಿಸುವರೆಮಗಾರು ಗತಿಯೆನುತಲಿ ಕೀಚಕಾಂತಕ ನಿನ್ನ ಕೀರ್ತಿ ಬಹುವಿಧ ಕೇಳಿ ಯಾಚಿಸುವೆ ನಿನಗಾನು ಎಲ್ಲರನು ಸಲಹೆಂದು 1 ಭವ ವಿಮೋಚಕನು ನೀನೆ ಸಚ ರಾಚರಕೆ ಸಂತತ ಪುರೋಚನಾರಿ ಪ್ರಾಚೀನ ಕರ್ಮಾಬ್ಧಿ ವೀಚಿಯೊಳು ಮುಳುಗಿಹ ಖೇಚರೇಂದ್ರಾಹಿಪ ತ್ರಿಲೋಚನರ ಗುರುವೆ 2 ಖಚರೋತ್ತಮನೆ ನಿನ್ನ ಸುಚರಿತೆಗಳನು ಕೇಳಿ ರಚನೆಗೈಯ ಬಲ್ಲೆನೆ ಅಚಲ ಸತ್ವ ಪ್ರಚಲಿಸುತಿಹ ಮನೋವಚನ ಕಾಯುವ ಘಟೋ ಪ್ರಚಯ ಮಾಡುವುದೆಂದು 3 ಲೋಚಿತದ ಧರ್ಮಗಳ ಸೂಚಿಸೆಮಗೆ ಪಾಚಕನೆ ನಿನ್ನಡಿಗೆ ಚಾಚುವೆನು ಶಿರ ಸವ್ಯ ಸಾಚಿ ಸೋದರನೆ ದಯದಿ ಗೋಚರಿಸಿ ಸಲಹೆಂದು 4 ವಾಚಾಮಗೋಚರ ಜಗನ್ನಾಥ ವಿಠ್ಠಲನ ಶ್ರೀ ಚರಣ ಭಜಕನೆ ನಿಶಾಚರಾರಿ ಮೈಚರ್ಮ ಸುಲಿದು ದುಶ್ಯಾಸನನ ರಕುತ ಪರಿ ಷೇಚನೆಯ ಮಾಡಿದೆ ಮಹೋಚಿತವಿದೆಂದರಿದು 5
--------------
ಜಗನ್ನಾಥದಾಸರು
ಬುದ್ಧಿಮಾತು ಹೇಳಿದರೆ ಕೇಳ ಬೇಕಮ್ಮ ಮಗಳೆ ಮನ ಶುದ್ದಳಾಗಿ ಗಂಡನೊಡನೆ ಬಾಳ ಬೇಕಮ್ಮ ಪ ಮಾತು ಮಾತಿಗೆ ಮಾತ ಜೋಡಿಸಿ ಆಡಬೇಡಮ್ಮಮಗಳೆ ಪ್ರೀತಿ ಪಡುವ ಗಂಡನೆಂದು ಹೆಮ್ಮೆ ಬೇಡಮ್ಮ ನೀತಿ ತಪ್ಪಿ ನಡಿಯಬೇಡ ಯೆಂದಿಗಾದರೂ ಮಗಳೆ ಸೋತು ನಡೆಯಲು ಲೇಸುಯೆಂದು ತಿಳಿಯ ಬೇಕಮ್ಮ 1 ಅತ್ತೆ ಮಾವ ಗಂಜಿ ಕೊಂಡು ನಡಿಯ ಬೇಕಮ್ಮ ಮಗಳೆ ಮತ್ತೆ ಪತಿಯ ಮನವ ಮೆಚ್ಚಿಸಿ ಬಾಳ ಬೇಕಮ್ಮ ದುಡಿಯ ಬೇಕಮ್ಮ ಮಗಳೆ ಚಿತ್ತದಲ್ಲಿ ಹರಿಯ ಭಕ್ತಿ ಬಿತ್ತಬೇಕಮ್ಮ 2 ನೋಟ ಆಟದಲ್ಲಿ ಮಮತೆ ಬಹಳ ಬೇಡಮ್ಮ ಮಗಳೆ ಕೊಟ್ಟು ಕ್ರಯವ ತಿಂಡಿ ತಿಂಬೊ ನಡತೆ ಬೇಡಮ್ಮ ಕೂಟ ಜನರ ಮಾತು ಕೇಳೆ ಕೇಡು ಕೇಳಮ್ಮ ಮಗಳೆ ಸಾಟಿ ನಾನು ಗಂಡಗೆಂದು ಹಠವು ಬೇಡಮ್ಮ 3 ಕ್ಲೇಶ ಕೇಳಮ್ಮ ಮಗಳೆ ಗಂಡ ತಂದುದೆ ದೊಡ್ಡದೆಂದು ಉಂಡು ಬಾಳಮ್ಮ ಗಂಡೀ ನಂತೆ ಮೆರೆಯ ಬಾರ್ದು ತಗ್ಗಿ ನಡೆಯಮ್ಮ ಮಗಳೆ ತೊಂಡಳಾಗಿ ಹರಿಗೆ ಬಾಳೆ ಸುಖವು ನಿನಗಮ್ಮ 4 ಹರಿಯು ಕೊಟ್ಟರೂಪವೆ ಛಂದ ಲಜ್ಜೆ ಬೇಡಮ್ಮ ಮಗಳೆ ಬರಿಯ ವೇಷ ನಾಟಕದಂತೆ ಮೋಸ ಕಾಣಮ್ಮ ಜರಿಯ ಬೇಡ ಹಿರಿಯರ ಮಾತು ಹಾನಿ ಹೌದಮ್ಮ ಮಗಳೆ ಮರಿಯೆ ಹರಿಯ ಭವವು ತಪ್ಪದು ಜೋಕೆ ನೋಡಮ್ಮ 5 ಸೊಲ್ಲು ಕೇಳಮ್ಮ ಮಗಳೆ ನಲ್ಲನ ಬಲುಮೆಗೆ ಒಳ್ಳೆ ಗುಣವೆ ಮುಖ್ಯ ತಿಳಿಯಮ್ಮ ಮಗಳೆ ಒಳ್ಳೆ ಮಾತನಾಡಿ ಸರ್ವರ ಹಿತವ ಕೋರಮ್ಮ 6 ಏನೇ ಬಂದರು ಜರಿದು ಪತಿಯ ನುಡಿಯ ಬೇಡಮ್ಮಮಗಳೆ ನಿನ್ನದೆಂದು ಪುಟ್ಟಿದ ಮನೆಯ ತಿಳಿಯ ಬೇಡಮ್ಮ ಮಾನವೆ ಮುಖ್ಯ ಮಾನಿನೀಗೆ ತಿಳಿದು ಬಾಳಮ್ಮಾ ಮಗಳೆ ಮಾನವು ನೀಡೆ ಮಾನವು ಬಾಹೋದು ಮರ್ಮ ತಿಳಿಯಮ್ಮ 7 ನಾನು ನಾನು ನಾನೆಂಬೋದೆ ಹೀನ ಕೇಳಮ್ಮಾ ಮಗಳೆ ಸಾನುರಾಗದ ನುಡಿಯೆ ಸಕ್ಕರೆ ಕೀರ್ತಿ ಉಳಿಸಮ್ಮ ಸ್ನಾನ ಪಾನದಲ್ಲೇ ಮುಳುಗದೆ ಹರಿಯ ಸೆನೆಯಮ್ಮ ಮಗಳೆ ಶ್ರೀನಿವಾಸನ ಭಕ್ತರ ಪೂಜೆ ಯತ್ನದಿ ಮಾಡಮ್ಮಾ 8 ಪರರ ಸಿರಿಯ ನೋಡಿ ಮನದಿ ಕೊರಗ ಬೇಡಮ್ಮ ಮಗಳೆ ಹರಿಯು ನೀಡಿಹ ಸಿರಿಯೆ ಸಾಕುಯೆಂದು ಸುಖಿಸಮ್ಮ ಯರವಿನಿಂದ ಒಡವೆ ವಸ್ತ್ರ ಧರಿಸ ಬೇಡಮ್ಮ ಮಗಳೆ ಅರಿತು ಹರಿಯ ಗುಣಗಳ ಮನದಿ ನೆನೆದು ನೆನೆಯಮ್ಮ 9 ಸತತ ನಗೆ ಮೊಗಳಾಗಿ ಬಾಳು ಗಂಟು ಬೇಡಮ್ಮ ಮಗಳೆ ಸತತ ಕಾಯುವ ಹರಿಯೇಯೆಂದು ದೃಢದಿ ಭಜಿಸಮ್ಮ ಕೇಳಮ್ಮಾ ಮಗಳೆ ನಿತ್ಯ ಸುಖಿಸಮ್ಮ 10 ಪತಿಯ ಭಕ್ತಿಯೆ ತಾರಕ ನಿನಗೆ ಧೋರಣೆ ಬೇಡಮ್ಮ ಮಗಳೆ ಪತಿಯ ಜರಿಯುತ ವ್ರತಗಳ ಮಾಡೆ ಫಲವೇ ಇಲ್ಲಮ್ಮ ರತಿಯಿಂ ನುಡಿದಿಹೆ ಶೃತಿಗಳಸಾರ ಯುಕ್ತಿಗಳಮ್ಮ ಮಗಳೆ ಮೊರೆಯ ಹೋಗಮ್ಮ 11
--------------
ಕೃಷ್ಣವಿಠಲದಾಸರು
ಬೆಟ್ಟವಿಳಿದು ಬೇಗಬಾರೊ ಜಗ- ಜಟ್ಟಿ ಹನುಮನೆ ನಿನಗೆ ಸರಿಯಾರೊ ಕರುಣವ ಬೀರೊ ಚರಣವ ತೋರೊ ಪ ದುಷ್ಟದಶಕಂಠನ ಪಟ್ಟಣದಿ ರಾಮನ ತಿಳುಹಿ ಕುಶಲವ ಪಡಿಸಿದೆ ಮುದವ 1 ವನವ ಭಂಗಿಸಿ ಬಂದು ದನುಜರ ಶಿಕ್ಷಿಸಿ ತಾಳಿ ಚಿಂತೆಯನು ಕಂಡೆ ಸೀತೆಯನು 2 ಸೀತೆ ಕುರುಹ ರಘುನಾಥಗೆವೊಪ್ಪಿಸಿ ಕೀರ್ತಿಯಂ ಮೆರೆದೆ ಸೇವೆಯಗೈದೆ 3 ಕ್ಷಣದಿ ಲಕ್ಷಣಗೆ ಪ್ರಾಣವನಿತ್ತೆ ಧೀರಾ ವಜ್ರ ಶರೀರ 4 ಭರತಗೆ ತಿಳುಹಿಸಿ ಹರುಷ ಪೊಂದಿಸಿದೆ ಹಾರ ಕೈಕೊಂಡೆ ಘಟಿಕಾದ್ರಿಯೊಳ್ನಿಂದೆ5
--------------
ಗುರುರಾಮವಿಠಲ