ಒಟ್ಟು 1740 ಕಡೆಗಳಲ್ಲಿ , 115 ದಾಸರು , 1388 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರಿಯೇನು ನಿನಗಿದು ಸರಸಿಜನಯನನೆ ಚರಣ ಭಜಿಪರೊಳು ಕರುಣಿಸದಿರುವಿ ಪ ದೀನಜನರ ಬಂಧು ನೀನೆ ನಿರ್ದಯನಾದರಿ ನ್ನೇನು ಗತಿಯು ಎನಗೆ ಪ್ರಾಣಾಂತರ್ಗತನೆ ಹೀನ ನಿನಗಲ್ಲೇನೈ ಗಾನವಿಲೋಲ 1 ಇಂದಿರೇಶಾನಾಥಬಂಧುವೇ ನೀ ದಯಾ ಸಿಂಧು ನೀ ಸಲಹೆಂದು ಬಂದು ಮರೆಯ ಬಿದ್ದೆ ಬಂದ ಸಂಕಟದೊಳಗಿಂದ ಸಲಹದಿರೆ ಕುಂದು ನಿನಗಲ್ಲೇನೈ ಮಂದರನಿಲಯ 2 ನಂಬಿದ ಭಕ್ತರ ಇಂಬುದಾಯಕನು ನೀ ನೆಂಬ ಬಿರುದ್ಹೊತ್ತಿರುವಿ ಅಂಬುಜನಯನ ನಂಬಿದೆನು ನಿನ್ನ ಪಾದಾಂಬುಜ ದೃಢವಾಗಿ ಬೆಂಬಲಿ (ರ್ಪೊ) ರೆಯೆನ್ನ ಸಂಭ್ರಮದಿ ಶ್ರೀರಾಮ 3
--------------
ರಾಮದಾಸರು
ಸರ್ವ ವಿಪತ್ ಪರಿಹಾರ ಸ್ತುತಿ ಕರ್ಮ ಫಲದಾತನು ಶೂನ್ಯ ಪ ವಾಹನ ಪತನ ಉಕ್ಕಿ ಪ್ರವಹಿಸುವ ನದಿ ಮೊದಲಾದ್ದರಿಂದ ಏಕ ಕಾಲದಿ ಸಂಗ ಮರಣ ಸಂಭವಿಸುವುದು ಏಕೆಂದು ಶಂಕಿಸುತಿ ಕೇಳು ಶ್ರದ್ಧಾಳು 1 ಏಕ ಕಾಲದಿ ನಾನಾ ಜನರು ಸಂಗದಿ ಕೂಡಿ ಮಂದ ಮಾರುತ ಪುಷ್ಪವನದಿ ಶ್ರೀಕರ ಕಥಾ ಶ್ರವಣ ನಾಟಕ ಕೇಳಿಕೆಯು ಹೀಗೆ ಜನ ಸಂಘದಲಿ ನಾನಾ ಸಂಭವವು 2 ಒಂದೊಂದು ಮನುಜನಿಗು ಇಂಥಾ ಕಾಲದಿ ಇಂಥಾ ರೀತಿಯಲಿ ಇಂಥಾ ಸ್ಥಳದಲ್ಲಿ ಇಂಥಾ ಹಿತಕರವೊ ಅಹಿತವೊ ಕರ್ಮಗತಿ ಸಂಭವವು ಶ್ರೀದ ನಿಯಮಿಸುವ ವೈಷಮ್ಯವಿಲ್ಲದಲೆ 3 ಮಳೆ ಬಿಸಿಲುಭೂಕಂಪ ಚಂಡಮಾರುತ ಸುಳಿಸುಳಿದು ಪ್ರವಹಿಸುವ ನದಿ ಹರಡುವ ದಾವಾಗ್ನಿ ಎಲ್ಲ ಇಂಥಾ ಅಹಿತ ಸಂಭವದಿ ಸಿಲುಕುವರು ಅಲ್ಲಲ್ಲಿ ಬಹುಜನರು ಕರ್ಮಗತಿಯಲ್ಲಿ 4 ಘೋರ ಭೂಕಂಪದ ಪೀಡೆಗೆ ಯೋಗ್ಯರು ಯಾರು ಯಾರೊ ಒಳ್ಳೆವರೋ ಕೆಟ್ಟವರೊ ಹರಿಯು ಆ ಜನರನ್ನು ಕಂಪನಕೆ ಒಳಮಾಡಿ ಮರಣಾಂಗ ಹೀನತೆಯು ರಕ್ಷಣೆಯು ಈವ 5 ಭಿನ್ನ ಜೀವರು ಭಿನ್ನ ಕರ್ಮಗತಿ ಉಳ್ಳವರು ಭಿನ್ನ ಫಲಯೋಗ್ಯರು ಆದ ಕಾರಣದಿ ಕ್ಷೋಣಿ ಕಂಪನದಲ್ಲಿ ಮರಣ ಕೆಲವರಿಗೆ ಅಂಗ ಹೀನತೆ ಕೆಲವರಿಗೆ ರಕ್ಷಣೆ ಕೆಲವರಿಗೆ 6 ಘೃಣಿ ಹರಿಯು ಭೂಕಂಪ ಆಗುವ ಪೂರ್ವದಲೆ ಜನರು ಕೆಲವರನ್ನು ಬೇರೆ ಊರಿಗೆ ಕಳುಹಿ ಹಾನಿಗೊಳಿಸುವ ಕಂಪನಕೆ ಸಿಲುಕದಂತೆ ಇನ್ನು ಕೆಲವರನ್ನು ಅಲ್ಲಿ ಬಾರದೇ ಮಾಳ್ಪ 7 ಸಿಂಧು ವಿಜ್ಞಾನಂದ ಹರಿಯೇ ಕರ್ಮಾಧ್ಯಕ್ಷನು ಕರ್ಮಫಲದಾತ ಕರ್ಮ ಕೊಡದು ಫಲ ಕರ್ಮಾಧ್ಯಕ್ಷ ಶ್ರೀಹರಿಯೇ ಫಲದಾತ 8 ಸಂಘ ದುಃಖ ಪ್ರಾಪ್ತಿಯು ಹಾಗೆ ಭವಿಸುವುದು ಐಹಿಕ ವಿಷಯಜವು ಉದಾನಿಸಿ ಅಘದೂರ ಗುರುಗ ಶ್ರೀ ಹರಿಯ ಸ್ಮರಿಸು 9 ನರಜನ್ಮ ಹೊಂದಿದವ ಹರಿನಾಮ ಸರ್ವದಾ ಸ್ಮರಿಸುವುದು ಕರ್ತವ್ಯ ದೊರಕಿದ ಸ್ಥಳದಿ ಹರಿನಾಮ ಭಕ್ತಿ ಪೂರ್ವಕದಿ ನುಡಿಯಲೇ ಬೇಕು ನರಪಶÀು ಜಡಮತಿ ಮೂಢನು ನುಡಿಯ 10 ಹರಿಯೇ ಸರ್ವೋತ್ತಮನು ಮುಖ್ಯಕಾರಣ ವಿಷ್ಣು ಶ್ರೀರಮಾಪತಿಯೇ ಸ್ವತಂತ್ರ ಜಗನ್ನಾಥ ಸರಸಿಜೋದ್ಭವ ಶಿವ ಶಕ್ರಾದಿ ಸರ್ವರಿಗೂ ಪ್ರೇರಕನು ಸ್ವಾಮಿಯು ಚಿತ್ ಅಚಿತ್ ನಿಯಂತ 11 ವಿಹಿತ ಸಾಧನಕ್ಕೊದಗೆ ನ್ಯಗ್ರೋಧೋದುಂಬರ ಹರಿ ದೇಹ ಬೆಳಸುವ ಪೋಷಿಸುವ ರಕ್ಷಿಸುವನು ಅಹರ್ನಿಶಿ ಪಾಲಿಸುವ ಭಕ್ತವಾತ್ಯಲ್ಯದಿ ಮಹಾರ್ಹರ ರಕ್ಷಿಸಿದ ಪ್ರಹ್ಲಾದ ಗಜಪತಿಯ 12 ಹರಿಯ ಪಾದಕೆ ಅಭಿಷೇಕ ಮಾಡಿದ ಬ್ರಹ್ಮ ಹರನು ಕೈಲಾಸ ವಾಸನು ಆ ತೀರ್ಥ ಸಹಸ್ರನಾಮ ಬೃಹತೀ ಸಹಸ್ರ ಸಹ ಪಠಿಸುತ್ತಾ ಸತಿ ಪಾರ್ವತಿಗೆ ಎರೆದ 13 ಹರಿನಾಮ ಸಂಸ್ಮರಣೆ ಪೂರ್ವಕದಿ ಈ ನುಡಿಯ ಬರೆಯುವ ಪಠಿಸುವ ಕೇಳುವ ಭಕ್ತರನ್ನು ಶ್ರೀರಮಾಯುತ ಹರಿ ಸುರವೃಂದ ಸಹ ಬಂದು ಸಂರಕ್ಷಿಸುವ ಸರ್ವವಿಪತ್ ದೂರ ಮಾಡಿ 14 ವರಾಹ ನರಸಿಂಹ ಭೂತಿದ ದಯಾಬ್ಧಿ ಶ್ರೀ ಪ್ರಸನ್ನ ಶ್ರೀನಿವಾಸ ನಮೋ ಸದಾ ಶರಣು ಮಾಂಪಾಹಿ ಸಜ್ಜನರ 15
--------------
ಪ್ರಸನ್ನ ಶ್ರೀನಿವಾಸದಾಸರು
ಸರ್ವಾಂತರ್ಯಾಮಿ ನೀನೆ ಸರಿ ಸರ್ವಜ್ಞನು ಸ್ವಾಮಿ ಪ ಸರ್ವಶರೀರಕ ಸರ್ವನಿಯಾಮಕ ಅ.ಪ ಹರಿ ಕೊಡುವನು ಬಂದು ಹರಿಸುತನನು ಗುರಿಮಾಡಿದೆ 1 ಮನೆ ಕಾಣಿಸುವನು ಎಂದೂ ಜಾಣತನದಿ ಸಪ್ರಾಣರ ಮಾಡಿದೆ 2 ಕರದಪ್ಪುವನೆಂದು ಶರಣರ ಹರಣವನುಳುಹಿದೆ 3 ಶೈಲದ ಗುಹೆಯೊಳಗೆ ಮಲಗಿದ್ದ ನೃ ಪಾಲನ ಖತಿಯೊಳಗೆ ಮೇಲೆ ಶರಧಿಯೊಳಾಲಯ ಮಾಡಿದೆ 4 ದುರುಳ ಪುಲಿಯು ಬಂದು ಶರಣನ ಸಲಹಿದ ವರದವಿಠಲಹರಿ 5
--------------
ವೆಂಕಟವರದಾರ್ಯರು
ಸರ್ವಾಮಯ ಹರ ವಿಠಲನೇ | ಸರ್ವದಾನೀನಿವರ ಸಲಹ ಬೇಕೊ ಪ ಶರ್ವಾದಿ ಸುರವಂದ್ಯ ಸಾರ್ವಭೌಮ ಸ್ವಾಮೀಅ.ಪ. ತ್ರಿವಿಧ ಭವ ಹಾರೀ 1 ಸರ್ವಸೃಷ್ಟೀಶನೇ ಸರ್ವಪಾಲಕ ಹರಿಯೇಸರ್ವ ಸಂಹಾರಕನೇ ಸರ್ವೋತ್ತಮಾಸರ್ವಾಂತರಾತ್ಮ ಶ್ರೀ ವೆಂಕಟೇಶನೆ ನಿನ್ನಸರ್ವದಾ ಭಜಿಸುವಗೆ ಸರ್ವಮಂಗಳವೀಯೋ 2 ಭಾವಿಮರುತಲೀತ | ಭಾವ ಭಕುತಿಗಳಿಂದಸೇವಿಸುವ ಹಯಮೊಗನ | ತವ ದಿವ್ಯ ರೂಪಾಆವ ತನುಕರಣ ಮನ | ಸರ್ವಾರ್ಪಣೆಂಬ ಮತಿಓವಿನೀನಿವಗಿತ್ತು | ಪಾವನವಗೈಯ್ಯೊ 3 ಪಂಚಬೇಧದ ಜ್ಞಾನ | ಸಂಚಿಂತನೇ ಇತ್ತುಅಂಚೆವಹ ಮತ್ತೆ ಹರಿ | ಮಂಚವಿಪಗೇಂದ್ರಾ |ಮುಂಚೆ ತರತಮ ತಿಳಿಸಿ | ವಾಂಛಿತಾರ್ಥದ ನಿನ್ನಸಂಚಿಂತನೆಯಲೇ ಇರಿಸೊ ಪಂಚಾಸ್ಯ ಪ್ರಿಯನೆ 4 ಅದ್ವೈತ ಚಿಂತನೆಯನೀವೊಲಿದು ಇವಗಿತ್ತು | ಭಾವದಲಿ ತೋರೊ ತವರೂಪ |ಈ ವಿಧದಿ ಬಿನೈಪೆ ಪವನಾಂತರಾತ್ಮ ಗುರುಗೋವಿಂದ ವಿಠಲಯ್ಯ ಪಾಲಿಸೋ ಜೀಯಾ 5
--------------
ಗುರುಗೋವಿಂದವಿಠಲರು
ಸಲಹೊ ಶ್ರೀನಿವಾಸ-ಸುದ್ಗುಣ-ನಿಲಯವೆಂಕಟೇಶ ಜಲಜಾಂಬಕ ನೀನಲಸದೆ ಯೆನ್ನನು ಪ ವಾತವುಮಿತಿಮೀರಿ ಪಿತ್ತವ್ರಾತದೊಡನೆ ಸೇರಿ ಹೆಚ್ಚಿದ ಹೇತುವನೋಡಿ1 ಶ್ವಾಸನಿರೋಧದಲಿ ಸೇರಿದ-ಕಾಸಗಳುದರದಲಿ ಹೆಚ್ಚಿ ಬಲು ಘಾಸಿಪಡಿಸುತಿದೆ 2 ಕಾಯದ ಬಲವೆಲ್ಲಾ-ಕದಲುತ-ಮಾಯವಾದವಲ್ಲ ದಾಯತಪ್ಪಿ ದುರ್ವಾಯುವಿಂದ ತಲೆನೋಯುತ ದೇಹದೊಳಾಯಸ ಹೆಚ್ಚಿತು 3 ನಿದ್ರೆ ಬಾರದಯ್ಯಾ-ನಿಶಿಯೊಳ-ಗೆದ್ದಿರಬೇಕಯ್ಯಾ ಬಿದ್ದಾದ್ದಾಡಿಸುತಿದೆ 4 ಅನ್ನವರೊಚಕವು ಆಪ್ತರೊಳನ್ಯತೆಗೊಚರವು ಮುನ್ನವೈದ್ಯರುಗಳನ್ನು ಕಾಣೆ ನೀ ಕಣ್ಣತೆರದುನೊಡೆನ್ನ ಕಟಾಕ್ಷದಿ5 ರೋಗವುಘನವಯ್ಯಾ-ರೋದನೆ-ಯಾಗಿಹುದೆನಗಯ್ಯಾ ನೀನೇ ಗತಿಯೆಂದಿಗು 6 ಪರಮ ಪುರುಷ ನಿನ್ನ-ಚರಣವ ಮರಹೊಕ್ಕಿಹೆಮುನ್ನ ವರದ ವಿಠಲ ದೊರೆ ವರದಯಾನಿಧೇ 7
--------------
ಸರಗೂರು ವೆಂಕಟವರದಾರ್ಯರು
ಸಲಹೊ ಸಂತತ ಸಂತಿಕೆಲವೂರ ನಿಲಯ ಸಲೆ ನಂಬಿದೆನು ನಿನ್ನ ಜಲಜಾಂಘ್ರಿ ಪಿಡಿಕೈಯ್ಯ ಪ ಸೂನು ವೃಕೋದರ ಮೋದ ಮೌನಿ ನಾಮತ್ರಯದಿ ಅವತರಿಸುತಾ ದಾನವರ ಗರ್ವಾಖ್ಯ ಕಾನನಕೆ ಶಿಖಿ ಎನಿಸಿ ಪತಿ ಕೃಷ್ಣ ವ್ಯಾಸರನುಗ್ರಹಪಾತ್ರ 1 ವರದೇಶ ವಿಠಲನ ಚರಣ ಸೇವಕನಿಗೆ ಸ್ಥಿರವಾದ ವೃರಾಗ್ಯ ಜ್ಞಾನ ಭಕುತಿ ಗರೆದು ಪೊರೆಯುವದಕ್ಕೆ ಪುರದ ಹಿಂಭಾಗದಲಿ ಇರುವ ಕಾರಣ ನಿನ್ನ ಮೊರೆ ಹೊಕ್ಕೆ ಮರೆಯದಲೆ 2 ಇಂದು ಬೆಂದು ಪೋದವು ಎನ್ನ ಪಾಪವೆಲ್ಲ ಸಿಂಧುಜಾವರ ಶಾಮಸುಂದರನ ದಾಸರೊಳು ಪೊಂದಿಸೆಂದಡಿಗಡಿಗೆ ವಂದಿಸುವೆ ತ್ವತ್ವದಕೆ 3
--------------
ಶಾಮಸುಂದರ ವಿಠಲ
ಸಲಹೋ ಶ್ರೀನಿವಾಸ ಸದ್ಗುಣನಿಲಯ ವೆಂಕಟೇಶ ಪ ಜಲಜಾಂಬ ನೀನಲಸದೆ ಎನ್ನನು ಅ.ಪ ವಾತವು ಮಿತಿಮೀರಿ ಪಿತ್ತವ್ರಾತದೊಡನೆ ಸೇರಿ ಘಾತವು ಹೆಚ್ಚಿದ ಸೇರುವ ನೋಡಿ 1 ಶ್ವಾಸ ನಿರೋಧದಲಿ ಸೇರಿದ ಕಾಸುಗಳುದರದಲಿ ಕೇಶರಂಧ್ರವಕಾಶದೊಳೂಧ್ರ್ವ ಬಲು ಶ್ವಾಸ ಹೆಚ್ಚಿ ಘಾಸಿಪಡಿಸುತಿದೆ 2 ಕಾಯದಬಲವೆಲ್ಲಾ ಕದಲುತ ಮಾಯವಾದವಲ್ಲ ನೋಯುತ ದೇಹದೊಳಾಯಾಸ ಹೆಚ್ಚಿತು 3 ನಿದ್ರೆಬಾರದಯ್ಯ ನಿಶೆಯೊಳಗೆದ್ದಿರಬೇಕಯ್ಯಾ ಗುದ್ದಿಕೊಂಡು ಬಿದ್ದೊದ್ದಾಡಿಸುತಿದೆ4 ಅನ್ನವರೋಚಕವು ಅಪ್ತರೊಳನ್ಯತೆಗೋಚರವು ಕಾಣಿ ಕಣ್ಣತೆರೆದು ನೋಡೆನ್ನ ಕಟಾಕ್ಷದಿ5 ರೋಗವು ಘನವಯ್ಯಾರೋದನೆಯಾಗಿಹುದೆನಗಯ್ಯಾ ಭವ ರೋಗ ವೈದ್ಯ ನೀನೇಗತಿಯೆಂದಿಗು 6 ಪರಮಪುರುಷ ನಿನ್ನ ಚರಣವ ಮೆರೆಹೊಕ್ಕಿಹೆ ಮುನ್ನ ವರದವಿಠಲದೊರೆ ವರದದಯಾನಿಧೆ7
--------------
ವೆಂಕಟವರದಾರ್ಯರು
ಸಾಗರ ಸ್ಥಿತನಿಲಯ ಭೋಗೀಶ ಕೃತಶಯ್ಯ ವಾಗೀಶಸಂಸೇವ್ಯ ಭಜಕಭಾವ್ಯ ಅನಘ ಕರುಣಾಪಾಂಗ ಮಂಗಳಾಂಗ ಆದಿನಾರಾಯಣಾ ಆನಂದ ಪರಿಪೂರ್ಣ ಆಪನ್ನಿವಾರಣಾ ಅಪ್ರಮೇಯ ಸುರವಿರೋಧಿಕೃತಾಂತ ಸುರರಾಜವÀಂದಿತ ಧರಣೀ ಸುರಾರ್ಚಿತ ದಿವ್ಯಚರಿತ ಮುರಾರಿ ವಿನುತಾದ್ಭುತ ಪ್ರಭಾವ ಸ್ಮರತಾತ ಸ್ಥಿತಿಕರ್ತ ನಿತ್ಯವಿಭವ ವರಶೇಷಗಿರಿವಾಸ ಶ್ರೀನಿವಾಸ
--------------
ನಂಜನಗೂಡು ತಿರುಮಲಾಂಬಾ
ಸಾಂಬ ಶಿವ ಶರಣರಿಗೊಂದು ಶರಣಾರ್ಥಿ ಪ ನರಲೋಕದೊಳಗೆ ಸಂಚಾರವ ಮಾಡುವ ಪರಮಾತ್ಮ ಪರಿಪೂರ್ಣ ಎಲ್ಲ ಜೀವದೊಳೆಂದು ಅರಿತಂಥವನಿಗೊಂದು ಶರಣಾರ್ಥಿ ಮರೆಹೊಕ್ಕ ದೀನರನು ರಕ್ಷಿಪ ಪುಣ್ಯ ಪುರು ಪುರುಷ ಪ್ರಯತ್ನದಿಂದುದ್ಯೋಗವನು ಮಾಳ್ಪ ಸರಿವಂಥವರಿಗೊಂದು ಶರಣಾರ್ಥಿ 1 ಧಾರಣಿಯೊಳು ಪೆಸರೊಡೆದು ರಂಜಿಸುವಂಥ ಕಾರುಣಿಕರಿಗೊಂದು ಶರಣಾರ್ಥಿ ದವರಿಗೊಂದು ಶರಣಾರ್ಥಿ ನಿತ್ಯ ಕರ್ಮವ ರಚಿಸುವ ಚಾರು ಶೀಲರಿಗೊಂದು ಶರಣಾರ್ಥಿ ಸ್ಸಾರ ಮಾಡಿದಗೊಂದು ಶರಣಾರ್ಥಿ 2 ಕೆರೆಭಾವಿ ದೇವಾಲಯಗಳ ಕಟ್ಟಿಸಿ ದೇವರುತ್ಸವವನು ಬರಿಸುವಗೆ ದ್ಧರಿಸಿ ಭುಂಜಿಪಗೊಂದು ಶರಣಾರ್ಥಿ ಪರದಾರ ಪರದ್ರವ್ಯ ಪರದ್ರೋಹವಿಲ್ಲದ ಮಹಾ ಪುರುಷರಿಗೊಂದು ಶರಣಾರ್ಥಿ ಹರಿಹರರೊಳಗೆ ಭೇದವ ಮಾಡಿ ನಡೆಯದ ದುರಿತ ದೂರರಿಗೊಂದು ಶರಣಾರ್ಥಿ 3 ಸತ್ತು ಹುಟ್ಟುವ ಭವಶರಧಿಯ ಗೆಲುವಂಥ ಉತ್ತಮರಿಗೊಂದು ಶರಣಾರ್ಥಿ ನಿತ್ಯ ಸಾಲಿಗ್ರಾಮಂಗಳನು ಪೂಜಿಸಿ ಹರಿ ತೀರ್ಥಗೊಂಬನಿಗೊಂದು ಶರಣಾರ್ಥಿ ಕೃತ್ತಿ ವಾಸನ ಆಗಮೋಕ್ತದಿ ಪೂಜಿಪ ಭಕ್ತಿವಂತರಿಗೊಂದು ಶರಣಾರ್ಥಿ ತತ್ವ ವಿಚಾರ ವೇದಾಂತದ ಅರ್ಥವ ಯಾ ವತ್ತರಿದವಗೊಂದು ಶರಣಾರ್ಥಿ 4 ಅರವಟ್ಟಿಗೆಯನು ಚೈತ್ರದೊಳಿಕ್ಕಿ ಜನರಿಗೆ ನೀರೆರಸಿದವರಿಗೊಂದು ಶರಣಾರ್ಥಿ ಸಿರಿ ತುಳಸಿಯನ್ನು ನೇಮದಲಿ ಪೂಜಿಸುವಂಥ ಹರಿ ಶರಣರಿಗೊಂದು ಶರಣಾರ್ಥಿ ತರಣಿಯೆ ತ್ರಿಗುಣಾತ್ಮಕನೆಂದು ಹೃದಯದೊಳರಿ ದೆರಗುವಗೊಂದು ಶರಣಾರ್ಥಿ ಮರುಸುತನ ಕೋಣೆ ವಾಸ ಲಕ್ಷ್ಮೀಶನ ಚರಣ ಪಂಕಜಕೊಂದು ಶರಣಾರ್ಥಿ 5
--------------
ಕವಿ ಪರಮದೇವದಾಸರು
ಸಾಂಬಶಿವಾ ಜಯ ಸಾಂಬಶಿವಾ ಪ ಸುರರ ತೋರಿಕೆಗೆ ಬಂದು ಕೈಲಾಸ ಮಂದಿರ ಮಾಡೀ | ಧರೆಯೊಳು ಸರ್ವರ ಮನದಿರುವಾ 1 ತನ್ನವರನ್ನಯರು ಎಂಬಾ ಭಾವ ಭೇದವಿಲ್ಲದಲೆ ಉನ್ನಂತ ಸಂಪದ ಸಲಿಸುವಾ 2 ತಂದೆ ಮಹಿಪತಿ - ಪ್ರಭು ಶರಣೂ ಹೊಕ್ಕವರ ಚಿದಾ | ನಂದ ಸುಖಾಲಯ ಸೇರಿಸುವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಾಂಬಶಿವಾ ಭಕ್ತಿಮಾರ್ಗದಿ ನಡೆಸೋ ಅಂಬುಜಾಕ್ಷನ ದಿವ್ಯನಾಮವ ನುಡಿಸೋ ಪ ನಂಬಿದ ಭಕ್ತನ ಕೊರತೆಯ ಬಿಡಿಸೋ ಶಂಬರಾರಿಯ ಪಿತನ ಚರಣವ ಹಿಡಿಸೋ ಅ.ಪ ಮಾನವರಿಷ್ಟವ ಸಲ್ಲಿಸುವೆಯಂತೆ ದೀನರೊಳನುಕಂಪ ನಿನಗುಂಟಂತೆ ಜ್ಞಾನ ವೈರಾಗ್ಯ ನಿಧಿ ನೀನಂತೆ ದೀನಗೊಲಿದು ವರವೀಯುವೆಯಂತೆ 1 ಕಾಮಿತವೆನ್ನದು ಒಂದೇ ಅಯ್ಯ ಆ ಮಾಂಗಿರಿಪತಿ ಕರುಣೆ ಅದಯ್ಯ ರಾಮತಾರಕನಾಮ ಎನಗಿರಲಯ್ಯ ನೀ ಮನಮಾಡೆ ಕೃತಾರ್ಥ ನಾನಯ್ಯ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸಾರ ಬಂದೆ ಪ ಚಕ್ರಧರ ಧುರಧೀರ ನಾರಸಿಂಹ ನಾನು ಬಂದೆ ನಾನು ಬಂದೆ ಅ ಕಲ್ಲೊಳು ವಿಷಯ ಪುಟ್ಟಿಸಿದನಾ ಶುಭವಲ್ಲದ ದಿವಸದೊಳಿರಾ ನೋಡಿಇಲ್ಲದ ಬಯಲ ನಿಂದೆಯ ಪೊತ್ತು ಶುಕಾಮಲ್ಲರೊಡನೆ ಕಾದಿ ಮಲೆತ ಸಾಲ್ವರ ಕೊಂದುಮಡದಿಗೆ ರತ್ನ ತಂದುದರಿಂದ 1 ಮಡದಿಯ ಮನೆಯ ಅರ್ಭಕನಾಗಿ ಬಲುಗಡಿಯ ದಾನವನ ಕೊಂದನ ಸೂನುಬಡನಡುವಿನ ಠಾವಿಗೆ ಸಿಲ್ಕಿ ಸುಖಪಡದಿರೆ ರಾಯನಾ ಹಿಡಿದು ತೋಳು ಕಟ್ಟಿದುದರಿಂದ 2 ಮೂಲ ವೃಕ್ಷದಾಲಾರ ಮುಂದೆಯ ದಾನವರಿರ್ದಾಲಯ ದಹಿಪನೆಂಬುದಯ್ಯನಬಲಮಾಡಿ ಬಲಗೆ ಇಂದುರುಹಿದೆ ಕಾಗಿನೆಲೆಯಾದಿ ಕೇಶವ ಖಳನ ಗರ್ಭವಿಚ್ಛನ್ನಪ್ರಹ್ಲಾದಗೆ ಪ್ರಸನ್ನವಾದುದರಿಂದ 3
--------------
ಕನಕದಾಸ
ಸಾರಸಾಕ್ಷಿ ಬಾ ಬಾ ಬೇಗ ಸಾರಿ ನೀಂ ಪ. ಭೇರಿತಮ್ಮಟಾದಿ ಭಾರಿವಾದ್ಯಂಗಳು ಭೋರ್ಗರೆಯುತ್ತಿರಲು ನಾರಿ ನಿನ್ನ ಕಾಣಲು ಅ.ಪ. ಭಾವಜಾದಿ ಜನನೀ ಭಾರ್ಗವೀ ಕಲ್ಯಾಣಿ ದೇವದೇವನ ರಾಣೀ ಶ್ರೀಮತೀ ಪದ್ಮಿನೀ 1 ಕ್ಷೀರವಾರಿಧಿಜಾತೆ ಮಾರವೈರಿವಿನುತೆ ವಾರಿಜಾಸನ ಮಾತೆ ಸಾರಿ ಬಾ ಸುಪ್ರಿತೇ 2 ಶೇಷಶೈಲನಿಲಯೆ ವಾಸವಾದಿಗೇಯೆ ವಾಸುದೇವಜಾಯೇ ವಸುಮತೀ ತನಯೇ3
--------------
ನಂಜನಗೂಡು ತಿರುಮಲಾಂಬಾ
ಸಾರಸಾಕ್ಷಿ ಬಾ ಬಾ ಬೇಗ ಸಾರಿ ನೀಂಪ. ಸಾರಸಾಕ್ಷಿ ಬೇಗ ಚಾರುಪೀಠಕೀಗ ಅ.ಪ. ಭೇರಿ ತಮ್ಮಟಾದಿ ಭಾರಿವಾದ್ಯಂಗಳೂ ಭೊರ್ಗರೆಯುತಿರಲು ನೀರೆ ನೀ ಭರದೊಳು 1 ಭಾರ್ಗವಿ ಕಲ್ಯಾಣಿ ದೇವದೇವನರಾಣಿ ಶ್ರೀಮತೀ ಪದ್ಮಿನಿ2 ಕ್ಷೀರವಾರಿಧಿಜಾತೆ ಮಾರವೈರಿವಿನುತೆ ವಾರಿಜಾಸನ ಮಾತೆ ಸಾರಿ ಬಾ ಪ್ರಖ್ಯಾತೆ 3 ಶೇಷಶೈಲನಿಲಯೆ ವಾಸವಾದಿಗೇಯೆ ವಾಸುದೇವಜಾಯೆ ವಸುಮತೀ ತನಯೆ 4
--------------
ನಂಜನಗೂಡು ತಿರುಮಲಾಂಬಾ
ಸಾರಿದ ಡಂಗುರ ಯಮನು ಪ ಅಘ ನಾರೇರ ಎಳತಂದು ನರಕದಲ್ಲಿಡಿರೆಂದು ಅ.ಪ. ಹೊತ್ತಾರೆ ಎದ್ದು ಪತಿಗೆ ಎರಗದವಳ ಮೃತ್ತಿಕೆ ಶೌಚ ಮಾಡದೆ ಇಪ್ಪಳಾ ಬೆತ್ತಲೆ ಕುಳಿತು ಮೈದೊಳೆವಳ ನಾದಿನಿ ಅತ್ತೆ ಮಾವನ ಬೈವವಳೆಳೆದು ತನ್ನೀರೆಂದು 1 ತಿಲಕಾಯುಧವ ಬಿಟ್ಟು ಕುಂಕುಮವಿಡುವಳ ಬೆಳಗಾದ ಕಾಲಕ್ಕೂ ಮಲಗಿಪ್ಪಳ ಮಲಿನ ವಸ್ತ್ರದಲಿ ಪತಿಯ ಬಳಿಗೆ ಪೋಗುವಳ ಕಲಹಕಾರಿಯ ಹಿಡಿದೆಳೆದು ತನ್ನಿರಿಯೆಂದು 2 ಉತ್ತಮ ಗುರುಹಿರಿಯರನು ನಿಂದಿಸುವಳ ಪೆತ್ತ ಮಕ್ಕಳ ಮಾರಿ ಬದುಕುವಳ ಪ್ರತ್ಯೇಕ ಶಯ್ಯದಿ ಮಲಗಿ ಇಪ್ಪಳ ಪಿಡಿ ದೆತ್ತ ಎಳೆದು ತಂದು ನರಕದಲ್ಲಿಡಿರೆಂದು 3 ಜಲ ಜಕ್ಕಿ ಸಾಳಿ ಕಂಬಳಿ ಬೋಳಿ ಬಕ್ಕಿ ಗೊಂ ಡಳಿ ಮೊದಲಾದವು ದೈವವೆಂದು ತಿಳಿದು ಪಿಶಾಚಿ ಎಂಜಲ ಉಂಡು ಹಿಗ್ಗುವ ಲಲನೇರಾ ಸೆಳೆದು ತನ್ನಿರೋ ಎಂದು 4 ನಾಗೇಂದ್ರ ಶಯನನ ದಿನದುಪವಾಸದ ಜಾಗರ ಮಾಡದೆ ಮಲಗಿಪ್ಪಳಾ ಭಾಗವತ ಸಚ್ಛಾಸ್ತ್ರ ಕೇಳದೆ ಉನ್ಮತ್ತ ಳಾಗಿರುವಳ ಎಳೆದು ತನ್ನಿರೆಂದು 5 ಗಂಡ ನಿರ್ಧನಿಕನೆಂದಪಮಾನ ಮಾಳ್ಪಳ ಉಂಡ ಶೇಷಾನ್ನುವನುಣಿಸುವಳಾ ಕೊಂಡೆ ಮಾತುಗಳಾಡಿ ಕಳವಳಗೊಳಿಪಳ ಮಂಡೆಗೊದಲು ಹಿಡಿದು ಎಳೆದು ತನ್ನಿರಿ ಎಂದು6 ಉಡಲಿಲ್ಲ ಉಣಲಿಲ್ಲ ಇಡಲಿಲ್ಲ ತೊಡಲಿಲ್ಲ ಸುಡಲಿಗಂಡನ ಒಗೆತನವೆನ್ನುತಾ ಹಡೆದವರನು ನುಡಿನುಡಿಗೆ ಬಯ್ಯುತಿಪ್ಪಂಥ ಕಡು ಪಾಪಿಗಳ ಹೆಡ ಮುಡಿಗಟ್ಟಿ ತನ್ನಿರಿ ಎಂದು7 ಸಾಲೆಡೆಯಲಿ ಭೇದ ಮಾಡಿ ಬಡಿಸುವಳ ನೀಲಾಂಬರವನುಟ್ಟು ಮಡಿಯೆಂಬಳ ಬಾಲಕರ ಬಡಿದಳಿಸುತಿಪ್ಪಳ ಹಿಂ ಗಾಲ ತೊಳೆಯದವಳ ಎಳೆದು ತನ್ನಿರೋ ಎಂದು8 ಪತಿಗೆ ಬೇಕಾದವರ ಅಪಮಾನ ಮಾಳ್ಪಳ ಮೃತವತ್ಸ ಗೋವಿನ ಪಾಲುಂಬಳಾ ಹುತವಾದ ಅಗ್ನಿ ತೊಳೆದು ನಂದಿಸುವಳ ಮತಿಗೇಡಿಯ ಬಿಡದೆಳೆದು ತನ್ನಿರೋ ಎಂದು 9 ಒಲಿವ ಔಷಧ ಮಾಡಿ ಪತಿಯ ಬಳಲಿಸುವಳ ಮಲಮಕ್ಕಳೊಳು ಮತ್ಸರಿಸುತಿಪ್ಪಳಾ ಕಳವಿಲಿ ಕಾಂತನ ಧನವ ವಂಚಿಸುವಳ ಗಳಕೆ ಪಾಶವ ಕಟ್ಟ ಎಳೆದು ತನ್ನಿರೋ ಎಂದು 10 ಮಿಥ್ಯಾವಾದಿಯ ಕೂಡ ಸ್ನೇಹ ಮಾಳ್ಪಳಾ ವೃತ್ತಿಲಿ ಬದುಕುವಳೆಳೆದು ತನ್ನಿರೋ ಎಂದು 11 ಲಶನು ವೃಂತಕಾದಿಗಳನು ಭಕ್ಷಿಸುವಳಾ ಸೊಸೆಯರೊಡನೆ ಮತ್ಸರಿಸುತಿಪ್ಪಳಾ ಹಸಿದು ಬಂದವರಿಗೆ ಅಶನವಿಲ್ಲೆಂಬಳಾ ಉಸಿರು ಬಿಡದಂತೆ ಎಳೆದು ತನ್ನಿರೊ ಎಂದು 12 ತುಲಸಿ ವೃಂದಾವನಕಭಿನಮಿಸದವಳ ಜಲವ ಸೋಸದೆ ಪಾನವ ಮಾಳ್ಪಳಾ ಫಲ ಧಾನ್ಯಾದಿಗಳ ನೋಡದೆ ಪಾಕ ಮಾಳ್ಪಳ ಮಳೆ ಗಾಳಿ ನಿಂದಿಪಳ ಎಳೆದು ತನ್ನಿರೋ ಎಂದ 13 ಮೀಸಲು ಮಡಿ ಎನ್ನದೆ ಭಕ್ಷಿಸುವಳ ಕೇಶಿಯೊಡನೆ ಗೆಳೆತನ ಮಾಳ್ಪಳ ದಾಸೆರಿಂದಲಿ ಪಾಕ ಪಾತ್ರೆ ಮುಟ್ಟಿಸುವಳ ನಾಸಿಕ ಬಂಧಿಸಿ ಎಳೆ ತನ್ನಿರೋ 14 ಬಾಲಕರನು ತೊಟ್ಟ್ಟಿಲೊಳಿಟ್ಟು ತೂಗುತ ಪಾಲೆರೆವುತ ಬೀಸುತ ಕಟ್ಟುತಾ ಆಲಯದೊಳು ಕೆಲಸಗಳ ಮಾಡುತ ಲಕ್ಷ್ಮೀ ಲೋಲನ ಗುಣವ ಪಾಡುವರ ಮುಟ್ಟದಿರೆಂದು15 ಅರಿಷಣ ಕುಂಕುಮ ಪುಷ್ಟಾಂಜನ ವಸ್ತ್ರಾ ಸರಸವಾಡುತ ಸುಖ ಹರಿಗೆ ಅರ್ಪಿತವೆಂಬ ಹರಿದ್ದೇರಿದೆಡೆಗೆ ಕೈಮುಗಿದು ಬನ್ನಿರಿ ಎಂದು16 ಅಗಣಿತ ಮಹಿಮ ಶ್ರೀ ಜಗನ್ನಾಥ ವಿಠಲನ್ನ ಬಗೆಬಗೆಯಿಂದ ಪಾಡುತಲೀ ಹೊಗಳುವ ದಾಸರ ಬಗೆಯ ನೇಮಿಸಿ ಕಾಯ್ವ ಸುಗುಣೇರಿದ್ದೆಡೆಗೆ ಕೈಮುಗಿದು ಬನ್ನಿರೆಂದು 17
--------------
ಜಗನ್ನಾಥದಾಸರು