ಒಟ್ಟು 5079 ಕಡೆಗಳಲ್ಲಿ , 129 ದಾಸರು , 3553 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತ್ರಿಜಗ ಪಾಲಿಸುವನೆ ಎಲ್ಲ ಸುಖವನಿತ್ತು ಉದಧಿ ಆಲಯ ಶರಣ್ಯ ವಿಟ್ಠಲ ಪ ಹೃದಯಕಮಲ ಮಧ್ಯದಲಿ ಮುದದಿ ಖಗವನೇರಿ ಚರಿಪ ಯದುಕುಲಾಬ್ಧಿ ಜಾತ ಚಂದ್ರ ವಿಧಿಶಿವಾದಿ ಉಡುಗಣಾರ್ಚಿತ 1 ದಿಟ್ಟಭಕ್ತ ಕೊಟ್ಟ ಇಟ್ಟಗೀ ಮೆಟ್ಟಿನಿಂತಿ ಸಿಟ್ಟು ಇಲ್ಲದೆ ಹೊಟ್ಟೆ ಮನೆಯ ಮಾಡಿಕೊಟ್ಟಿ ಕೆಟ್ಟಮಾತು ನುಡಿದ ಚೈದ್ಯಗೆ 2 ಕರಗಳನ್ನೆ ಕಟಿಯಲಿಟ್ಟು ಶರಣುಬಂದ ಭಕ್ತಗೆ ಭವ ಪರಿಮಿತಿಯ ತೋರಿ ನಿರುತ ಪೊರೆಯುವಂಥ ಕರುಣನಿಧಿಯೇ 3 ಪುಂಡರೀಕ ವರದನೆಂದು ಹಿಂಡುಭಕ್ತರು ಪೊಗಳುತಿಹರೊ ಪುಂಡರೀಕ ತೋರಿಸಿನ್ನು 4 ಶ್ರೀ ನರಹರಿಯೆ ನಿನ್ನ ಗಾನ ಮಾಡಲೆಷ್ಟು ಸಾಮ ಗಾನಕೆ ನಿಲುಕದ ಮಹಿಮ ಜ್ಞಾನ ಭಕ್ತಿ ಇತ್ತು ಬೇಗ 5
--------------
ಪ್ರದ್ಯುಮ್ನತೀರ್ಥರು
ಥರವಲ್ಲ ಸ್ವಾಮಿ ಥರವಲ್ಲ ಪ. ಥರವಲ್ಲ ಸ್ವಾಮಿ ಈ ತೆರನ ಮಾಡುವುದು ಕರುಣ ಸಾಗರನೆಂಬ ಬಿರುದಿನ್ನು ನಿಲದು ಅ.ಪ. ಊರೊಳಗಿಹ ಜನರೆಲ್ಲರು ಕೂಡಿ ವಾರಿಜಾಕ್ಷನ ದಾಸನೆಂದು ಕೊಂಡಾಡಿ ಸಾರಿಸಾರಿಗೆ ನಿನ್ನ ಕೀರ್ತನೆ ಮಾಡಿ ಪೋರ ಪೇಚಾಡುವನೆಂಬರು ಕೂಡಿ1 ಪಾರಾಯಣದ ಪುಸ್ತಕವ ಕಟ್ಟಿಟ್ಟು ವಾರಿಜನಾಭ ನಿನ್ನಯ ಪೂಜೆ ಬಿಟ್ಟು ಕಾರಿ ಕೆಮ್ಮುತ ಬಿದ್ದಿರುವ ದೊಡ್ಡ ಗುಟ್ಟು ಯಾರ ಮೇಲಿನ್ನು ತೋರಿಸಲೆನ್ನ ಸಿಟ್ಟು 2 ಮೋಹ ಪಾಶದಿ ಮುಸುಕಿ ಕಟ್ಟಿದರೆ ಬಹ ಪಾತಕಗಳಿಗೆಲ್ಲ ನಾನಿದಿರೆ ನೀ ಹದಿನಾಲ್ಕು ಲೋಕೇಶನೆಂದೊದರೆ ದೇಹವ ಬಳಲಿಸಿದರೆ ನಾನೇನ್ಹೆದರೆ 3 ನಂಬಿರೊ ಭಕ್ತ ಕುಟುಂಬಿಯನೆಂದು ಅಂಬುಜಸಂಭವನ್ಯಾಕೆಂದನಂದು ಹಂಬಲಿಸಿದರು ನೀ ದಯದೋರದಿಂದು ಬೊಂಬೆಯೆ ಸರಿಯೆಂದು ಜನರೆಂಬೊ ಕುಂದು 4 ಸರ್ವದೋಷಹರ ಸಾಗರಜೇಶ ನಿರ್ವೇದದಿಂದ ನಾ ನುಡಿದೆನಾಕ್ರೋಶ ಸರ್ವಕಾಲಕು ಸಲಹುವ ನೀನೆ ಶ್ರೀಶ ಶರ್ವಾದಿ ವಂದ್ಯ ಶೇಷಾಚಲವಾಸ 5
--------------
ತುಪಾಕಿ ವೆಂಕಟರಮಣಾಚಾರ್ಯ
ಥರವೆ ಪೋಗೋದು ನೀನು ಕರವೀರಪುರಕೆ ಹೀಗೆ ಪ ಲೋಲ ಲೋಚನೆ ಕೇಳೆ ಆಲದೆಲೆಯ ಮ್ಯಾಲೆಲೋಲಾಡುತ ಸುಕಲ್ಪದಿ ಮರೆತೀಗ ಅ.ಪ. ಮಂದಜಾಕ್ಷಿಯೆ ನಿನ್ನ ಮಂದಹಾಸಕೆ ಮೆಚ್ಚಿಸುಂದರ ವೈಕುಂಠ ಮಂದಿರ ಕಟ್ಟಿಸಿದ 1 ಹಿಂದೆ ಒಂದು ಮುನಿ ತಂದ ಕುಸುಮವನ್ನು ದಯ-ದಿಂದಲೆ ಮುಡಿಸಿದ ಇಂದಿರೇಶನ ಬಿಟ್ಟು 2
--------------
ಇಂದಿರೇಶರು
ದ ಮುದದಿಂದ ಮನವಾರೆ ನಾಂ ಪ. ಕಾಮಜನಕನ ಪ್ರೇಮದ ರಾಣಿಯೆ ಭೂಮಿಸುತೇ ಶ್ರೀಮಹಿತೆ ಕೋಮಲಗಾತ್ರೆ 1 ಗಾನವಿನೋದಿನಿ ದಾನವಭಂಜಿನಿ ಶ್ರೀನಾರಿ ಮೈದೋರಿ ಪೊರೆ ದಯೆತೋರಿ 2 ದೋಷರಹಿತ ಶ್ರೀ ಶೇಷಗಿರೀಶನ ದಾಸರ ಸಂತೋಷದಿ ನೀಂ ಪೋಷಿಪುದೆನ್ನುತೆ 3
--------------
ನಂಜನಗೂಡು ತಿರುಮಲಾಂಬಾ
ದಂಡಿಸಬೇಡೈ ದಯೆದೋರೈ ಕರದಂಡದಳಾಂಬಕನೆಪ. ಕಂಡೀಶವಿನುತ ಬ್ರಹ್ಮಾಂಡಪಾಲ ಮಾ- ರ್ತಾಂಡಮಂಡಲಗ ಶುಂಡಾಲವರದಅ.ಪ. ಕ್ಷೇಮದಿ ಶ್ರೀಹರಿನಾಮವ ವರ್ಣಿಸೆ ನೇಮಾನುಷ್ಠಾನದೊಳಿರಲು ನಾ ಮಾಡಿದ ನಾನಾವಿಧ ಪಾಪವ ತಾಮಸಗೊಳಿಸುವ ಕಾಮಕ್ರೋಧಗಳಿಂ1 ಶಿಷ್ಟಾಚಾರದೊಳಿಷ್ಟನಾಗಿ ಪರ ಮೇಷ್ಠಿಜನಕ ಜಯ ಜಯವೆನಲು ಭ್ರಷ್ಟಾಲೋಚನೆ ಪುಟ್ಟಿಸಿ ಪಾಪದ ಬಟ್ಟಿಯ ಹೊದ್ದಿಪ ದುಷ್ಟಸಂಗದಿಂ2 ನಾರಾಯಣ ನರಹರಿಯೆನ್ನುವ ವ್ಯಾ- ಪಾರವ ನಾ ಮಾಡುತ್ತಿರಲು ಆರೋಹಣಾವರೋಹಣ ನಾದವಿ- ಕಾರಗೊಳಿಪ ಶಾರೀರಪ್ರಕೃತಿಯಿಂ 3 ಆರ್ಕಾರಣ ರಿಪುಗಳಿಗೈ ಸರ್ವ ದೇ- ವರ್ಕಳ ಮಸ್ತಕಮಣಿ ನೀನೈ ತರ್ಕಾಗಮ್ಯ ಲಕ್ಷ್ಮೀನಾರಾಯಣ ಅರ್ಕಾಮಿತಪ್ರಭ ಕಾರ್ಕಳಪುರವರ4
--------------
ತುಪಾಕಿ ವೆಂಕಟರಮಣಾಚಾರ್ಯ
ದಂತಿವದನ ವಿಘ್ನದಂತಿನಿಚಯಕೆ ಹರಿ ದಂತಿವರದನ ಪ್ರಪೌತ್ರ ವಿನಂತಿಯ ಕೇಳೊ ಪ ಕಂತುವೈರಿಯ ಪುತ್ರ ಪರಮ ಪವಿತ್ರ ಕಳತ್ರ 1 ಸಾದರಲಿ ನಿನ್ನಾರಾಧಿಸುವೆ ಮುನ್ನ ನೀ ದಯದಿ ವಿಘ್ನ ನಿವಾರಿಸೊ ಮೋದಕ ಪ್ರಿಯಾ 2 ರಂಗೇಶವಿಠಲನ ರಾಗದಿಂ ಪಾಡುತ ಮಂಗಳ ಮೂರುತಿಯೆ ಉತ್ತಂಗ ಪ್ರಭಾವ 3
--------------
ರಂಗೇಶವಿಠಲದಾಸರು
ದತ್ತವಧೂತ ಶ್ರೀ ಗುರು ಸಾಕ್ಷಾತ ನಿತ್ಯವಾಗಿಹ್ಯ ನಿಜ ನಿರ್ಗುಣನೀತ ಪ ನಿರ್ಗುಣ ನಿಶ್ಚಲ ಗಗನಾಕಾರ ಸುಗುಣದಲಿ ತಾನೆ ಸಹಕಾರ 1 ಸಹಕಾರನಹುದು ಸದ್ಗುರುನಾಥ ಬಾಹ್ಯಾಂತ್ರದಲಿ ತಾನೆ ಪ್ರಖ್ಯಾತ 2 ಪ್ರಖ್ಯಾತನಹುದು ತ್ರಿಗುಣರಹಿತ ಮುಖ್ಯಮುನಿಗಳಿಗೆ ಮೋಕ್ಷ ಸುದಾತ 3 ದಾತನಹುದು ತ್ರೈಲೋಕ್ಯದೊಳೀತ ಈತನೆ ವಿಶ್ವದೊಳಗೆ ದೈವತ 4 ದೈವತನಹುದು ದೇವಾದಿಗಳಾತ್ಮ ಮೂರ್ತಿ ಶ್ರೀಹರಿ ಸರ್ವಾತ್ಮ 5 ಹರಿ ಸರ್ವಾತ್ಮನಾಗಿಹ ನಿಜಪೂರ್ಣ ಪರಿಪರಿ ಆಗುವ ಅಗಣಿತಗುಣ 6 ಅಗಣಿತಗುಣ ಅಗಾಧ ಅಪಾರ ನಿಗಮಗೋಚರ ನಿರುಮಪ ನಿರ್ಧಾರ 7 ನಿರ್ಧಾರನು ನಿಜನಿಷ್ಟರಪ್ರಾಣ ಸಾಧಕರಿಗೆ ಸದ್ಗತಿ ಸಾಧನ 8 ಸಾಧನದೊಡೆಯನಹುದು ಶಾಶ್ವತ ಆದಿದೇವ ಸಕಲಾಗಮ ಪೂಜಿತ 9 ಪೂಜಿತ ಬ್ರಹ್ಮಾದಿಗಳ ಕೈಯ ಮೂಜಗದೊಳು ರಾಜಿಸುತಿಹ 10 ರಾಜಿಸುತಿಹ ತಾ ರಾಜರಾಜೇಂದ್ರ ಸುಜನರ ದೃಷ್ಟಿಯೊಳಿಡದಿಹ ಸಾಂದ್ರ 11 ಸಾಂದ್ರವಾಗಿಹನು ಸಾರ್ವಭೌಮ ಇಂದ್ರಾಧಿಕÀರೊಂದಿತ ಮಹಿಮ 12 ಮಹಿಮನಹುದು ಮುನಿಜನ ಮಂದಾರ ಧ್ಯಾಯಿಸುವರ ನಿಜ ಸಾಕ್ಷಾತಾರ 13 ಸಾಕ್ಷಾತಾರ ಶ್ರೀಗುರು ಜಗದೀಶ ಮೋಕ್ಷಾಧಿಕರಿಗಳಾತ್ಮ ಉಲ್ಹಾಸ 14 ಉಲ್ಹಾಸವೆ ನಿಜ ವಸ್ತುವೆ ತಾನು ಕಲ್ಪದ್ರುಮ ನಿಜ ಕಾಮಧೇನು 15 ಕಾಮಧೇನುವಾಗಿ ರಕ್ಷಿಸುವ ಬ್ರಹ್ಮನಿಷ್ಠರ ಹೃದಯದಲಿ ಭಾಸಿಸುವ 16 ಭಾಸುವ ಭಾಸ್ಕರಕೋಟಿ ಪ್ರಕಾಶ ಋಷಿ ಮುನಿಗಳ ನಿಜಮಾನಸ ಹಂಸ 17 ಹಂಸನಾಗಿ ವಿಶ್ವಂಭರಿತ ಸೂಸುವ ಸರ್ವಾಂತ್ರಲಿ ಅನಂತ 18 ಅನಂತ ಕೋಟಿ ಬ್ರಹ್ಮಾಂಡನಾಯಕ ಅನುಭವಿಗಳಿಗೆ ದೋರುವ ಕೌತುಕ 19 ಕೌತುಕದೋರಿದ ಕರುಣದಲ್ಯನಗೆ ಜೀವಪಾವನಗೈಸಿದ ಜಗದೊಳಗೆ 20 ಜಗದೊಳು ಸ್ತುತಿಸುವೆನು ಅನುದಿನ ಶ್ರೀಗುರು ದತ್ತವಧೂತ ಪೂರ್ಣ 21 ಪೂರ್ಣ ಸ್ಮರಿಸುವೆನು ಮನದೊಳು ನೋಡಿ ಪುಣ್ಯ ಪ್ರಭೆಯ ನಿಜ‌ಘನ ಒಡಗೂಡಿ22 ಒಡಗೂಡಿದ ನಿಜಾನಂದದ ಗತಿಯು ಕ್ಷಿತಿಯೊಳು ಕೊಂಡಾಡಿದ ಮಹಿಪತಿಯು 23
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದತ್ತಾತ್ರೇಯ ಸ್ವಾಮೀ ಕೃಪೆ ಮಾಡೈ ನೀಯನ್ನ ಮ್ಯಾಲ ಪ ಅನಿಮಿಷಮಾನಸ ಸಂಚಾರಾ ಅನಾಥ ಜನ ಸಂಕಟ ಪರಿಹಾರಾ ದೀನ ದಯಾಲ ರಮಾವರಾ ನೆನೆವರ ಸಹಕಾರಾ 1 ಅನಸೂಯಾಕರ ಸಂಪುಟರನ್ನಾ ಘನತರ ಚರಿತ ಪರಮ ಪಾವನ್ನಾ ಅನುಪಮ ತ್ರೈಜಗ ಜೀವನ್ನಾ ವನರುಹವದನಾ2 ಸರಸಿಜೋದ್ಭವ ನುತ ಮನ್ನಾಥಾ ವರ ನಿಗಮಾ ಗೋಚರ ಅನಂತಾ ಕರುಣಾಂಬುಧಿಯೇ ಸರ್ವಾತೀತಾ ಗುರು ಮಹಿಪತಿ ದಾತಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದತ್ತಾತ್ರೇಯನ್ನಮೋ ದತ್ತಾತ್ರೇಯಾ ಅತ್ರಿ ವರದಾಯಕನೇ ದತ್ತಾತ್ರೇಯಾ ಪ ಭಕುತಿ ಮಾಡಲು ಮೆಚ್ಚಿ ಅನಸೂಯಾ ಕರದೊಳಗ ಸುಕುಮಾರ ವೇಷದವತಾರ ತಾಳಿ ಪಥ ದೋರಲಿಕೆ ಅಕಳಂಕ ಯೋಗ ರೂಪವ ಭರಿಸಿದೆ 1 ಉದಯದೊಳು ವಾರ್ಣಾಸಿಸುರನದಿಯಲಿ ಸ್ನಾನ ವದಗಿ ಕೊಲ್ಹಾಪುರಕ ಮಧ್ಯಾಹ್ನದೀ ವಿದಿತ ಭಿಕ್ಷವನುಂಡು ಪೋಗಿ ಸಂಜೆಗೆ ಮಾಹು ನಿತ್ಯ ವಿಧಿಯಲಿ ಚರಿಸುವೇ2 ದತ್ತಹರಿ ಸಾಕ್ಷಾತ ಉನ್ಮದೋನಂದದಾಯಕ ದತ್ತವರ ಮುನಿ ದಿಗಂಬರ ಬಾಲಕಾ ನಿತ್ಯ ಪ್ರಕಾಶಮಯ ಜ್ಞಾನಸಾಗರನೆಂಬರ ದುರಿತ ಭಯವಾರಿಸುವೆ3 ಆವನಾಗಲಿ ಮರೆದು ನಿಮ್ಮ ನಾಮವ ನೆನೆವ ಠಾವಿನಲಿಸುಳಿವ ಪ್ರತ್ಯಕ್ಷದಿಂದಾ ಭಾವದಿಂದಲಿ ಸ್ಮರಿಸಿದವಗ ಇಹಪರ ಸುಖವ ನೀವ ಕರುಣಾಳು ದೀನೋದ್ಧಾರಕಾ 4 ಇಪ್ಪತ್ತು ನಾಲ್ಕು ಗುರುಗಳ ಕ್ರಮವ ದೋರಿಭವ ಮುಪ್ಪು ಬಿಡಿಸಿದೆ ಯದುರಾಯಗಂದು ಒಪ್ಪಿನಿಂದಲಿ ಗುರು ಮಹಿಪತಿ ಪ್ರಭುಯನಿಸಿ ತಪ್ಪ ನೋಡದೆ ನಂದ ನುದ್ಧರಿಸಿದೆಲೆ ದೇವಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದಯ ಬಾರದೇಕೋ ಹರೀ | ಹೇ ಮುರಾರೀ ಪ ದಯಾ ಪೂರ್ಣನೆಂದೂ | ತ್ರಯ ಪೇಳ್ವುದಯ್ಯ ಅ.ಪ. ವೈರಿ ಪ್ರೀತ ||ಯಾಮ ಯಾಮಕೆ ತವ | ನಾಮ ಸ್ಮøತಿಯನಿತ್ತುಕಾಮ ಜನಕ ಸಾರ್ವ | ಭೌಮನೆ ಕಾಯೋ1 ವಸ್ತುವೆಂದರೆ ನೀನೆ ಸರಿ | ನೀನೆ ದೈತ್ಯಾರಿಸ್ವಸ್ತಿವಾಚಕ ಶ್ರೀ ಹರೀ | ಹೇ ಶೌರೀ ||ವಾಸ್ತು ದೇವರೊಳು | ಶಿಸ್ತಿಗೆ ಬಿಂಬಿಸೆವಾಸ್ತು ನಿರ್ಮಾಣಕೆ | ಅಸ್ತು ಎಂದೆನಿಸೋ2 ಧಾನ್ಯದನಾಗೀಹ | ಧಾರುಣಿ ಎನಿಸೀಹಮಣ್ಣಿಗೆ ಪರ್ಯಾಯ | ಹೊನ್ನನಿತ್ತಿಹೆ ಜೀಯನಿನ್ನರ್ಚನೆಯ ಗೃಹ | ವನ್ನೂ ನಿರ್ಮಿಸಿ ಪೊರೆಮಾನ್ಯ ಮಾನದ ಗುರು | ಗೋವಿಂದ ವಿಠಲನೆ 3
--------------
ಗುರುಗೋವಿಂದವಿಠಲರು
ದಯ ಬಾರದ್ಯಾಕೊ ರಾಘವಾ ಪ ಕಾಯಬೇಕು ಯೆಂದು ಕೊರಗಿ ಮೊರೆಯಿಡೆ ನ್ಯಾಯವೇನು ಯೆನ್ನ ಮರತುಬಿಡುವದು ಅ.ಪ ಅಂದು ಅಜಮಿಳನು ಅಂತ್ಯಕಾಲದಲ್ಲಿ ಕಂದ ನಾರ ಬಾಯೆಂದು ಕರಿಯಲು ಅಂದ ಮಾತುಗಳಿಗೆ ಅತಿ ಹರುಷಿಸಿ ಬಂದ ಯಮನ ಬಾಧೆ ಬಿಡಿಸಲಿಲ್ಲವೇನೊ 1 ಹರಿಯೆ ಗತಿಯೆಂದು ಹೊಗಳು ಕಂದನ ಹರುಷವಿಲ್ಲದೆ ಪಿತ ಕಷ್ಟಪಡಿಸಲು ಊರು ತೋರದಂತಾ ಸ್ತಂಭದಿಂದ ಬಂದು ಮೂರು ಜಗವು ಅರಿಯೆ ಮನ್ನಿಸಲಿಲ್ಲವೇನೊ 2 ಸರ್ಪಶಯನನೆ ಸಾರ್ವಭೌಮನೆ ನಾಸಿಕ ಶ್ರೋತ್ರವಳಿದನೇ ಅಪ್ಪ ಗುರುವರ ವಿಜಯವಿಠ್ಠಲನೇ ಒಪ್ಪದಿಂದ ವಲಿವ ವರದರಾಜನೇ 3
--------------
ವಿಜಯದಾಸ
ದಯ ಬೀರೋ | ದಯಾ ನಿಧೆ | ದಯ ಬೀರೋ ಪ ದಯ ಬೀರೆ ದುರ್ಭವ | ಭಯ ಪರಿಹರ ನಿರ್‍ಭಯನಾಮಕ ಹರಿ | ಹಯಮುಖ ಕೃಷ್ಣಯ್ಯ ಅ.ಪ. ಪಾಪಿ ನಾನಹುದೋ | ಹೇ ಪಾವನ ಮೂರ್ತೇನೀ ಪೋಷಿಸದಿರೆ | ಕಾಪಾಡೋರ್ಯಾರೋ 1 ಮಣಿ ಅಮಿತಾಭ | ಘನ ಮಹಿಮನೆ ಕೃಷ್ಣ 2 ಕರ ಬಿಸಜ ಸಂಪೂಜ್ಯನೆಹಸಗೆಡಿಸುವ ದುರ್ | ವಿಷಯವ ಹರಿಸೀ 3 ಕರ್ಮ ನಾಮಕನೇ 4 ಕಡಗೋಲು ನೇಣನು | ಪಿಡಿದು ಭಕ್ತೀ ಎಂಬಮುಡುಪ ಕೊಳ್ಳುವ ಗುರು | ಗೋವಿಂದ ವಿಠಲಯ್ಯ 4
--------------
ಗುರುಗೋವಿಂದವಿಠಲರು
ದಯ ಮಾಡೊ ಪ್ರೀಯಾ ದಾಸರ ಶುಭೋ-ದಯ ವಿಜಯರಾಯ ಸಾ |ಹಯವಾಗಿ ಒದಗುವೋಭಯ ನಿವಾರಣ ಮಾಡಿ ಪ ಪ್ರಬಲವಾಗಿಹ ಮೋಹ ನಿಬಿಡವಾದದರಿಂದಅಭಯದಾಯಕ ನಿನ್ನ ಶುಭವಾದ ಪಾದಕ್ಕೆಅಭಿವಂದಿಸದಲೆ ಅಲ್ಪರ ಸೇರಿಅಬಲನಾಗುತಲೆ ಪಾಪದ ವನಧಿUಭೀರ ನೋಡದಲೆ ಬಾಳಿದೆ ಯನ್ನಅಭಿಮಾನದೊಡೆಯನೆ ಅಗಡು ಮಾಡದಲೆ 1 ದುರಿತ ಪರಿ ವರಗಳ ಗರೆವ ಕಾರಣ ನಿನ್ನಬಿರಿದು ನಾ ಬಲ್ಲೆ ಎನ್ನಯ ಭಾರಸರಿ ನಿನ್ನದಲ್ಲೆ ಲೌಕೀಕದಪರಿ ಮತ್ತೊಂದೊಲ್ಲೆ ಇಹಪರದಲ್ಲೆ ಪರಮ ಸೌಖ್ಯಕೆ ನಿನ್ನ ಸ್ಮರಣೆ ವಂದಲ್ಲೆ 2 ಪಾಮರ ಜನರಿಗೆ ಸುಮಾರ್ಗಗೋಸುಗಶ್ರೀಮನೋಹರ ನಿನ್ನ ಪ್ರೇಮದಿಂದಲಿ ಸೃಜಿಸಿಭೂಮಿಯೊಳಿಡಲೂ ಹರಿಯ ದಿವ್ಯನಾಮ ನಾ ಬಿಡಲು ದುರ್ವಿಷಯವಕಾಮಿಸಿ ಕೆಡಲೂ | ಸುಮ್ಮನಿರದೆಯಾಮ ಯಾಮಕೆ ನಿನಗೆ ನಾ ಮೊರೆಯಿಡಲೂ 3 ಜಗದಂತರ್ಯಾಮಿಯ ಹಗಲು ಇರುಳು ಬಿಡದೆಸುಗುಣ ಮಾರ್ಗದಲಿದ್ದು ಬಿಗಿಯಾದ ಕವನಕ್ಕೆಬಗೆ ತೋರಿದವನೆ ಹರಿಯ ಕ್ಷಣ ಅಗಲದಿದ್ದವನೆ ಕಾಮದ ಬಲಿಗೆಸಿಗದೆ ನಡೆವವನೆ ಅನುನಯದಿ ಕರವಮುಗಿದು ಬೇಡುವರಲ್ಲಿ ಮುದದಿಂದ ನಲಿವನೆ 4 ಎನ್ನೊಬ್ಬಗಲ್ಲ ಈ ಬಿನ್ನಪ ಕರುಣಾಳೆನಿನ್ನ ಪೊಂದಿದವರ ಮನ್ನಿಸಿ ಸಲಹಯ್ಯಾಬೆನ್ನು ಬಿಡದಲೆ ವ್ಯಾಸ ವಿಠ-ಲನ್ನ ಪಾಡುತಲೆ ಕಾಲವ ಕಳೆವ ಸನ್ಮಾರ್ಗವನೆ ತೋರೋ ತಡಮಾಡದಲೆ 5
--------------
ವ್ಯಾಸವಿಠ್ಠಲರು
ದಯ ಮಾಡೊ ರಂಗಾ ದಯ ಮಾಡೊ ರಂಗಾ ದಯ ಮಾಡೊ ನಾ ನಿನ್ನದಾಸನೆಂತೆಂದು ಪ ನಾನಾ ಜೀವಗಳ ಬಲೆದಾಟಿ ಬಂದೇ ಹೀನ ನರಜನ್ಮಕೆ ಬಂದು ಶರಣೆಂದೇ 1 ಪೋಗಲಾರೆನು ಪತ್ತೆ ಯೋನಿಜನ್ಮಕ್ಕೇ ಬೇಗದಿ ಪರಿಯೆನ್ನ ಸಲಹೊ ಶರಣೆಂದೇ 2 ಸರಸದಿ ಶ್ರೀಹರಿಯನ್ನು ಕೀರ್ತಿಸುವೆ ಸಿರಿ ಚನ್ನಕೇಶವಾ ಪೊರೆಯೊ ಶರಣೆಂದೇ 3
--------------
ಕರ್ಕಿ ಕೇಶವದಾಸ
ದಯ ಮಾಡೋ ಗುರುವೇ ದಯ ಮಾಡೋ ಪ ದಯ ಮಾಡೋ ಗುರುವೇ ನಿನಗೆದುರಾರೀ ಧರೆಯೊಳಗೆ ಸದಮಲ ಮೂರುತೀ ಶ್ರೀ ರಾಗವೇಂದ್ರಾ ಅ.ಪ ಭಕ್ತರ ಪೊರೆಯಬೇಕೆಂಬೀಕಾರಣದಿಂದ ಸಿದ್ಧ ಹಸ್ತಾನಾಗಿ ಬಂದು ನಿಂತಿರುವೇ ಕಂಡ ಕಂಡಾ ದೈವಂಗಳ ಪೂಜಿಸಿ ಪರಿಪರಿಸ್ತುತಿಸುತ ಬಳಲಿ ಬೆಂಡಾದೆನೈ ಸದ್ಗುರುವೇ 1 ಭಕ್ತಿಯಾ ಲಿಟ್ಟು ಮಾಡಿದಪರಾಧಂಗಳ ಒಂದೆಣಿಸಾದೆ ಎನ್ನನು ಮನಿಸು ಪ್ರಭುವೇ 2 ಶ್ರೀ ರಾಘವೇಣದ್ರಾ ದಾರಿಯಕಾಣೆ ಸಂತೈಸು ಜೀಯಾ 3 ಧೊರೆ ರಾಘವೇಂದ್ರಾ ಕಾಯೋ ಶ್ರೀ ಗುರು ರಾಘವೇಣದ್ರಾ 4
--------------
ರಾಧಾಬಾಯಿ