ಒಟ್ಟು 4215 ಕಡೆಗಳಲ್ಲಿ , 121 ದಾಸರು , 2577 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನ್ಯಾಯ ವೇನೋ ಕೃಷ್ಣಯ್ಯ _ ನ್ಯಾಯವೇನೋ ಪ ಜೀಯ ನಿನ್ನ ಸ್ಮರಣೆ ಕೊಡದೆ ಎರಡು ಭ್ರಷ್ಟ ಮಾಡಿಸೊದು ಅ.ಪ. ಇತ್ತಲಿಲ್ಲ ಅತ್ತಲಿಲ್ಲ ಅರ್ಥಮಾನ ಹೋಯಿತಲ್ಲಾ ಕಾಲ ಕಳೆಸಿ ಸುತ್ತಿ ಸುತ್ತಿ ಚರಿಸೋದು 1 ಹೊಟ್ಟೆಬಟ್ಟೆಗಾಗಿ ಹೊಗಿ ಕೆಟ್ಟ ಜನರ ಸೇವೆ ಮಾಡಿ ಕಾಯ ಭ್ರಷ್ಟನಾಗಿ ಮಾಡೋದೆನ್ನ 2 ಮಾಯಪಾಶದಲ್ಲಿ ಹಾಕಿ ಹೇಯ ವಿಷಯ ಆಶೆಕೊಟ್ಟು ನ್ಯಾಯ ಮಾರ್ಗ ತೋರದೇನೆ ನೋಯಿಸೋದು ಎನ್ನನೀನು 3 ಮೋಸಮಾಡಿ ಪರರಗಂಟು ಆಶೆಯಿಂದ ಕೂಡಿಹಾಕಿ ಘಾಸಿಭವದಲಿ ನೂಕಿ ಕ್ಲೇಶಪಡಿಸುವುದು ಎನ್ನ 4 ಇಂದು ಎಂದು ಹೇಳಿ ಮಂದನಾಗಿ ಕಾಲಕಳೆಸಿ ಪಾದ ದ್ವಂದ್ವ ಧ್ಯಾನ ಮರೆಸೋದು 5 ಮಧ್ವಮತದಲ್ಲಿ ಪುಟ್ಟಿ ಮಧ್ವಗ್ರಂಥ ಓದದೇನೆ ಶುದ್ಧಮೂಢನಾಗಿ ತಿರುಗಿ ಗದ್ದನೆನಿಸುವುದು ಎನ್ನ6 ಇನ್ನು ಮುನ್ನು ನೀನೆ ಗತಿ ಎನ್ನ ಕೈ ಪಿಡಿಯೊ ಬೇಗ ಘನ್ನ ನವನೀತಧರ ಚೆನ್ನ ಶ್ರೀ ತಾಂಡವ ಕೃಷ್ಣವಿಠಲ 7
--------------
ಕೃಷ್ಣವಿಠಲದಾಸರು
ನ್ಯಾಯವಾಕೊ ನ್ಯಾಯವಾಕೊ ತೋಯಜಾಕ್ಷನಲ್ಲದಿಲ್ಲ ಪ ಸಾವÀಧಾನ ಚಿತ್ತನಾಗಿ ಮಾಯನೀಗಿ ಜ್ಞಾನಗೂಡಿ ಸೇವೆ ಮಾಡೆಲೊ ದಾಸಜನರ ದಿವ್ಯತತ್ವವು ತೋರುತದೆ 1 ವೃತ್ತಿಬಲಿಸಿ ನಿತ್ಯದಿ ಹರಿ ಕೀರ್ತನದಿ ನಿನ್ನ ಚಿತ್ತನಿಲಿಸಿ ಸತ್ಯದಿಂದರಿಯುತ್ತಲಿರ್ದರೆ ಸತ್ಯವಸ್ತುವು ಅರ್ಥವಾಗ್ವುದು 2 ಮಹಾತ್ಮರ ನಿಜವಾಕ್ಯ ನಂಬಿ ದುರಾತ್ಮತನವಂ ದೂರಮಾಡಿ ಮಹಾತ್ಮೆ ಕಾಂಬುದು 3
--------------
ರಾಮದಾಸರು
ಪಂಕಜಾಸನ ವಂದ್ಯ | ವೆಂಕಟಾದ್ರಿ ವಿಠಲ ತವಕಿಂಕತನ ವಿತ್ತವಗೆ | ಸಂಕಟವ ಕಳೆಯೊ ಪ ಮಂಕುಹರಿಸುಜ್ಞಾನ | ದಂಕುರಕೆ ಮನಮಾಡಿಬಿಂಕದಿಂ ಪೊರೆಇವನ | ಅಕಳಂಕ ಮಹಿಮಾ ಅ.ಪ. ಸತ್ಯಶೌಚಾಚಾರ | ಕೃತ್ಯದಲಿ ಮನವಿರಿಸುನಿತ್ಯತವ ಮಹಿಮಗಳ | ಸುತ್ತಿಇರಲಿ ಇವಗೇನಿತ್ಯನೂತನ ಮಹಿಮ | ತತ್ವಗಳ ತಿಳಿಸುತ್ತಭೃತ್ಯವತ್ಸಲ ಕಾಯೋ | ಮೃತ್ಯುಹರದೇವಾ 1 ತತ್ವಾರ್ಥ ತಿರುಳುಗಳೆ | ಚಿತ್ರಿಸುವ ಕಲೆವೃದ್ಧಿವಿಸ್ತರೀಸಿವನಲ್ಲಿ | ನಿಸ್ತುಲಾತ್ಮಕನೇ |ಅರ್ಥಕಾಮಸುರೂಪ | ಪೊತ್ತುಪೊರೆಯುವ ದೇವಾಪ್ರತ್ಯೇಕ ಪ್ರಾರ್ಥನೆಯ | ಕೃತ್ಯವೇಕಿನ್ನು 2 ನಾನು ನನ್ನದು ಎಂಬ | ಹೀನಮತಿಕಳೆದಿನ್ನುನೀನು ನೀನೇ ಎಂಬ | ಜ್ಞಾನಮಹಬರಲೀ |ಪ್ರಾಣ ಪ್ರಾಣನೆ ಜಗ | ತ್ರಾಣನಹುದೆಂಬ ಸುಜ್ಞಾನ ಪಾಲಿಸಿ ಪೊರೆಯೋ | ಮನಿಮಧ್ವ ವರದಾ 3 ಮೀನಾಂಕ ಜನಕಾಮಾನಮೇಯಾನುಭವ | ಸಾನು ಕೂಲಿಸುವಕೋನೇರಿವಾಸ ಕಾರುಣ್ಯ | ತೋರಿವಗೇ4 ಗೋವತ್ಸದನಿ ಕೇಳಿ | ಆವುಧಾನಿಸುವಂತೆನೀವೊಲಿದು ಕಾಪಾಡು | ಬಾವುಕರ ಪಾಲಾ |ಪೂವಿಲ್ಲನಯ್ಯಗುರು | ಗೋವಿಂದ ವಿಠಲತವಪಾವನವ ಪದ ತೋರೆ | ಓವಿ ಪ್ರಾರ್ಥಿಸುವೆ 5
--------------
ಗುರುಗೋವಿಂದವಿಠಲರು
ಪಕ್ಕಿವಾಹನ ದಯಸಿಂದು ನೀ ಎನ್ನ ಚಿಕ್ಕ ಮನತುರಗವನ್ನು ನೀನೆ ತಿದ್ದೊ ಪ ಕತ್ತಲೆಯೊಳು ಬಲು ಕಾಲಕಳದೆಯಾಗಿ ಮತ್ತೆ ಬೆಳಕು ಕಂಡು ಬೆದರುತಿದೆ ಕತ್ತಲಂಜಿಕೆ ತೋರಿ ಬೆಳಕಿನ ರುಚಿಯನು ಇತ್ತು ಕುಶಲಗತಿ ಕಲಿಸಯ್ಯ 1 ಹಿಂದಕ್ಕೆ ತಿರಗದೆ ತಾನಾಗಿ ಬ್ಯಾಗನೆ ಮುಂದಕೆ ನಡೆದು ಪರರ ಬೆಳಸುಗಳ ಒಂದನ್ನ ಬಯಸದೆ ಪದ್ಧತಿ ಬಿಡದಂತೆ ಒಂದಾಗಿ ಗಮ್ಯಸ್ಥಾನವ ಸೇರಿಸಯ್ಯ 2 ವಿಧಿನಿಷೇಧಗಳೆಂಬ ಗಿಲಕಿಯ ದನಿಗೈಸಿ ಹೆದರಿಸೊ ಸನ್ಯಾಯ ಕಶದಿಂದಲೀ ಮುದದಿ ಭಕುತಿ ಗುಣವ ಕೊರಳು ಕಟ್ಟಿ ಬಿಗಿದು ಪದುಮಾಕ್ಷ ನಿನ್ನ ಪಾದವ ಸ್ತುತಿಸಯ್ಯ 3 ಉತ್ತಮ ಗುಣವುಳ್ಳ ವಾಜಿಯಿದನೆ ಮಾಡಿ ವಸ್ತು ಎನ್ನದು ಮಾತ್ರವೆಂದೆನಿಸಿ ಚಿತ್ತಕೆ ಬಂದಂತೆ ಇದಿರಾರು ನೀ ನಿತ್ಯ ಹತ್ತಿ ಹರಿಸುವನು ಸನ್ಮತವೆನಗೆ 4 ಲೇಸಾದಾ ಹಯಗಳೊಳು ನೀನೆವೆ ಜಗದೊಳು ಲೇಸು ಮಾಡಿದೆಯೆಂಬ ವಾರ್ತಿ ಕೇಳಿ ವಾಸುದೇವವಿಠಲ ನಿನಗೆ ಬಿನ್ನೈಸಿದೆ ದಾಸನ ಮಾತು ಲಾಲಿಸೆ ಕಾಯೋ ಸರ್ವೇಶ5
--------------
ವ್ಯಾಸತತ್ವಜ್ಞದಾಸರು
ಪಕ್ಷಿವಾಹನ ಸತ್ಯಭಾಮೆ ಸದನದ್ವಾರದಿ ನಿಂತು ಸದನದ್ವಾರದಿ ಮಿತ್ರೆ ಎನಗೆ ಕದವ ತೆಗೆಯೆ ಬರುವೆ ತೀವ್ರದಿ 1 ಸಾಕೊ ಸಾಕೊ ನಿನ್ನ ಸಂಗ ಯಾಕೊ ಕೃಷ್ಣನೆ ನಮಗಿನ್ಯಾಕೊ ಕೃಷ್ಣನೆ ಅ- ನೇಕ ಸ್ತ್ರೀಯರಿಂದ ರಮಿಸ್ಹೋಗಾದಿ ಪುರುಷನೆ 2 ವಾಕು ವಾಕು ತಿಳಿಯದೊ ವಿ- ವೇಕದಿಂದ ನಿಂತು ಪೇಳೆ ಮಾತುಯೆನ್ನೊಳು 3 ಎನ್ನ ಬಿಟ್ಟು ಅನ್ಯಸ್ತ್ರೀಯರ ಮನೆಗೆ ಪೋಗುವಿ ಸ್ತ್ರೀಯರ ಮನೆಗೆ ಪೋಗುವಿ ಘನ್ನ ಘಾತಕತನದಿಂದಿಲ್ಲಿಗಿನ್ನು ಬರುವರೆ 4 ನಿನ್ನ ಸರಿಯಸವತೇರೆನಗೆ ಸತಿಯರಲ್ಲವೆ 5 ಅತ್ತಸಾಗೊ ರುಕ್ಮಿಣಿ ಒಲವು ಚಿತ್ತವ್ಹಿಡಿಯದೆ ಆಕೆ ಚಿತ್ತವ್ಹಿಡಿಯದೆ ಲೆತ್ತಪಗಡೆನಾಡದ್ಹೀಗೆ ಇತ್ತ ಬರುವರೆ6 ಕಾಳಕತ್ತಲು ಪ್ರಳಯಜಲದಿ ಕಾದುಕೊಂಡೆನ್ನ ಇರುವೋಳು ಕಾದುಕೊಂಡೆನ್ನ ಆದಿಲಕ್ಷ್ಮಿ ಮುನಿದರೆನಗಿನ್ನಾ ್ಹ್ಯಗೆ ಭಾಮಿನಿ 7 ಜಾಂಬುವಂತೇರ್ಹಂಬಲಬಿಟ್ಟು ಬಂದ ಕಾರಣ ನೀನು ಬಂದ ಕಾರಣ ಆ- ನಂದ ಬಡಿಸುತವರ ಗೃಹದಲ್ ಹೊಂದಿಕೊಂಡಿರು 8 ಜಾಂಬುವಂತೇರಿಂದ ಬಂದ ನಿಂದ್ಯ ಕಳೆದನೆ ನಾ ಅಪನಿಂದ್ಯ ಕಳೆದೆನೆ ತಂದು ರತ್ನತೋರಿ ನಿನ್ನ ತಂದೆ ಭಾಮಿನಿ 9 ಕಮಲನಾಭ ಕಾಳಿಂದಿ ಕಳವಳಿಸುವಳೊ ಕಾಣದೆ ಕಳವಳಿಸುವಳೊ ಕಾಣದೆ ಕಾಲಕಳೆಯೊದ್ಯಾ ್ಹಗಿನ್ನಾಕೆ ಆಲಯಕೆ ಪೋಗೊ 10 ಭಾಳ ತಪಸಿಲ್ವಲಿಸಿ ಭಾರ್ಯಳಾದ ಬಗೆ ನೀ ಅರಿಯದೆ 11 ನೀಲವರ್ಣ ನೀಲಾದೇವಿ ನಿನ್ನ ಕಾಣದೆ ಇರುವಳು ನಿನ್ನ ಕಾಣದೆ ಗಮನ ನಿಲ್ಲದೆ ನೀ ಪೋಗೊ 12 ಸಪ್ತಗೂಳಿ ಕಟ್ಟಿ ನಾ ಸಮರ್ಥನೆನಿಸಿದೆ ಬಲು ಸಮರ್ಥನೆನಿಸಿದೆ ನೀಲ ನನಗೆ ಶ್ರೇಷ್ಠಳಲ್ಲವೆ 13 ಎದ್ದು ಪೋಗಾಕಿದ್ದಸ್ಥಳಕಿಲ್ಲಿರಲು ಸಲ್ಲವೊ 14 ಅರಸರಾಕೆ ಅಗ್ರಜರೈವರು ಕರೆಸಿ ಕೇಳೋರೆ ಎನ್ನ ಕರೆಸಿ ಕೇಳೋರೆ ಹೋಗಿ ಹರುಷ ಬಡಿಸದಿರಲು ಆಕೆನ್ನರಸಿ ಅಲ್ಲವೆ 15 ಆಕೆ ಸಿಟ್ಟಿಲಿಂದ ದೃಷ್ಟಿತೆಗೆದು ಎನ್ನ ನೋಡಳೆ 16 ನಿನಗೆ ಇಷ್ಟು ಕ್ರೋಧ ನಿಷ್ಠೂರ್ವಚನ ಬ್ಯಾಡೆ ಭಾಮಿನಿ 17 ಲಕ್ಷಣ ದೇವೇರಲ್ಲಿ ಭಾಳಾಪೇಕ್ಷವಲ್ಲವೆ18 ನಾನು ಲಕ್ಷಣೆಯನೆ ತಂದೆ ಕೇಳೆ ಸತ್ಯಭಾಮೆ ನೀ 19 ಹತ್ತು ಆರು ಸಾವಿರ-ಶತ ಪತ್ನೇರಿಲ್ಲವೆ ನಿನಗೆ ಪತ್ನೇರಿಲ್ಲವೆ ತಿರುಗಿ ಸುತ್ತಿ ಸುತ್ತಿ ಹಾದಿ ಹೀಗೆ ತಪ್ಪಿಬರುವರೆ 20 ದಾರಮನೆಗೆ ಹೋಗಲೆನ್ನ ದೂರು ಮಾಡೋರೇ ಹೀಗೆ ದೂರು ಮಾಡೋರೇ ಸ್ವಾಮಿ ಪಾರಿಜಾತಕೊಟ್ಟ ಸತಿಯಲ್ಲೊ ್ಹೀಗಿರೆಂಬರೆ 21 ಸರಸವಾಡದಿರೊ ಶ್ರೀರಮಣ ಅರಸೇರ್ಯಾತಕೊ ನಿನಗೆ ಅರಸೇರ್ಯಾತಕೊ ಹರುಷದಿಂದ ಎರಗದೆನ್ನ ಶಿರಸಿದ್ಯಾತಕೊ 22 ಶ್ರೀಶ ಎನ್ನ ಮನದಲಿರೊ ಭೀಮೇಶಕೃಷ್ಣನೆ ಇರೊ ಭೀಮೇಶಕೃಷ್ಣನೆ ನಿನ್ನ ವಿಲಾಸ ಬಯಸದಿರುವರ್ಯಾರೊ ಇಂದಿರೇಶನೆ 23
--------------
ಹರಪನಹಳ್ಳಿಭೀಮವ್ವ
ಪಂಚಮಿಯ ದಿನ ವಿಭವ ನಮ್ಮ ಶ್ರೀನಿವಾಸನ ಮಹಾತ್ಮವ ಮಾನಿನಿ ರನ್ನೆ ನೀ ಪೇಳೆ ಭಕ್ತಾ- ಧೀನದ ಚರಣದ ಲೀಲೆ ಭಾನು ಉದಯದಲಿ ವೀಣಾದಿ ಸು- ಗಾನ ವಾದ್ಯ ನಾನಾವಿಧ ರಭಸದಿ1 ಎತ್ತಲು ನೋಡಿದಡತ್ತ ಜನ- ಮೊತ್ತವಿಲಾಸವಿದೆತ್ತ ಚಿತ್ತದಿ ನಲಿನಲಿದಾಡಿ ತೋಷ- ವೆತ್ತಿರುವನು ಒಟ್ಟುಗೂಡಿ ಸುತ್ತುಮುತ್ತು ಒತ್ತೊತ್ತಿಲಿಹರು ವಿ- ಪ್ರೋತ್ತಮ ಶ್ರೀಹರಿಭಕ್ತರ ಮಯವಿದು2 ಚಾಮರ ಛತ್ರ ಸಿಗುರಿಯು ಜನ- ಸ್ತೋಮ ಪತಾಕೆ ತೋರಣವು ಹೇಮದ ಕಂಚುಕಿ ಈಟಿ ಗುಣ- ಧಾಮನ ಬಿರುದುಗಳ್ ಕೋಟಿ ಆ ಮಹಾಭೇರಿ ಪಟಹ ನಿಸ್ಸಾಳಕ ಸಾಮಗಾನ ಸಾಮ್ರಾಜ್ಯವೋಲಿಹುದು3 ಬಾಲರು ವೃದ್ಧ ಯೌವನರು\ಜನ- ಜಾಲವೆಲ್ಲರು ಕೂಡಿಹರು ಲೋಲ ಸ್ರೀಮುಂದ್ರಾಂಕಿತದಿ ಬಹು ವಿ- ಶಾಲ ದ್ವಾದಶನಾಮ ಮುದದಿ ಆಲಯದೊಳಗಿಹ ಬಾಲಕಿಯರು ಸಹ ಸಾಲಂಕೃತ ಸಮ್ಮೇಳದಿ ನಲಿವರು4 ಒಂದು ಭಾಗದಿ ವೇದಘೋಷ ಮ- ತ್ತೊಂದು ಭಾಗದಿ ಜನಘೋಷ ಇಂದಿನ ದಿನದತಿಚೋದ್ಯ ಏ- ನೆಂದು ವರ್ಣಿಸುವದಸಾಧ್ಯ ಚಂದಿರಮುಖಿ ಯಾರೆಂದೆನಗುಸುರೆಲೆ ಮಂದರಧರ ಗೋವಿಂದನ ಮಹಿಮೆಯ5 ಊರ್ವಶಿ : ಕೇಳಿದ್ಯಾ ನಳಿನಾಕ್ಷಿ ಶ್ರೀಹರಿಲೀಲೆ ಪೇಳಲೇನದಾ ಮೂರ್ಲೋಕದೊಳಗೀ ವಿ- ಶಾಲವ ನಾ ಕಾಣೆಪ. ಸೋಜಿಗ ಸೌಭಾಗ್ಯ ಸಂಪದಕಿದು ಬೀಜ ಕಾಣೆಲೆ ರಾಜೀವನಾಭನ ಪೂಜಾವಿನೋದದಿ ರಾಜವದನೆ ವನಭೋಜನದಿಂದಿನ1 ನೇತ್ರದ ಕಲ್ಮಷವಡಗುವದು ಪವಿತ್ರವಾಗಿಹ ಗೋತ್ರಕುಮಾರಿ ಪ್ರೀತ್ಯರ್ಥದಿ ಕೊಟ್ಟಿಹ ರಾತ್ರಿ ಪೂಜೆ ಗೈವ ಮಾತ್ರದಿ ಪೊರಟರು2 ನೂತನವೆಂದು ನೀ ಪೇಳುವಿ ಚಂದಿರ ಮುಖಿ ಜನಸಂದಣಿಗಳು ಮಹಾ ಮಂದಿ ಓಲೈಸುವರಿಂದು ಮುಕುಂದನ3 ಬಾರೆ ನಾರೀಮಣಿ ವೈಯ್ಯಾರೆ ನೀರೆ ಬಾರೆಪ. ನಿನ್ನಿಂದಾಯಿತ್ತು ಪುಣ್ಯ ಸಂಪಾದನೆ ಕಣ್ಣಾರೆ ಕಾಣುವ ಯೋಗಭೋಗ1 ಎನಗತಿ ಮನವು ನಿನಗತಿ ಛಲವು ಜನುಮಾಂತರ ಪುಣ್ಯವೈಸೆ ನೀ2 ರಂಭೆ : ಏನಮ್ಮ ಬಾರಿತ್ತಲು ನೋಡೀತನ್ಯಾರಮ್ಮಾ ಭಾನುಕೋಟಿ ಪ್ರಕಾಶದಿಂದ ಮೆರೆವನಮ್ಮಾಪ. ಅನವರತದಿಂದ ಬರುವ ಪುರುಷನಲ್ಲ ಮೀನಕೇತನ ಶತರೂಪ ಕಾಣೆ1 ನೂತನ ಪುರುಷನಿವನ್ಯಾರೆಂದರಿಯೆನಮ್ಮಾ ಶಾತಕುಂಭದ ಮಂಟಪವೇರಿ ಬರುವನಮ್ಮಾ2 ಸುರುಚಿರಫಣಿಪ ಪೆಡೆ ಶಿರದೊಳಿರುವದಮ್ಮಾ ತರತರ ರತ್ನವರದ ಬಾಯೊಳಿರುವದಮ್ಮಾ3 ಕೊರಳೊಳು ಕೌಸ್ತುಭವ ಧರಿಸಿಕೊಂಡಿಹನಮ್ಮಾ ಪರಮ ಪುರುಷನಂತೆ ತೋರುವನು ಅಮ್ಮಾ4 ಬಾಲಾರ್ಕನಂತೆ ಮುಖ ಪ್ರಜ್ವಲಿಪುದು ನೀಲಮಾಣಿಕ್ಯ ಕಾಂತಿಯ ಸೋಲಿಪುದು5 ತೋರಲರಿಯೆ ಕಾಲಿಗೆರಗುವೆನು ಪೇಳಬೇಕು ಸಖಿಯೆ6 ಕರದೊಳು ಶಂಖಚಕ್ರವ ಧರಿಸಿಕೊಂಡಿಹನಮ್ಮಾ ಬೆರಳೊಳು ವಜ್ರದುಂಗುರವನಿಟ್ಟವನಮ್ಮಾ7 ವರರತ್ನಖಚಿತದಾಭರಣದಿಂದ ಮೆರೆವ ಚರಣ ಸರೋಜದೊಳು ರೇಖೆಯಿಂ ಶೋಭಿಸುವ 8 ವಲ್ಲಭೆಯರ ಸಹಿತುಲ್ಲಾಸದಿ ಬರುವ ಖುಲ್ಲರ ಮಾನಸಕೆ ಝಲ್ಲೆನಿಸಿ ಮೆರೆವ9 ಬಲ್ಲಿದ ಪುರುಷನಿವನೆಲ್ಲಿಂದ ಬಂದ ಎಲ್ಲವ ಪೇಳೆಲೆಗೆ ನಲ್ಲೆ ಸದಾನಂದ10 ಊರ್ವಶಿ : ನೋಡು ನಿತ್ಯಾನಂದಕರನ ಮೂಡಗಿರಿಯಿಂದೋಡಿ ಬಂದನ ನೋಡೆಪ. ಛಪ್ಪನ್ನೈವತ್ತಾರು ದೇಶ ಸರ್ಪಶೈಲ ರಾಜವಾಸ ಚಪ್ಪರ ಶ್ರೀ ಶ್ರೀನಿವಾಸ1 ತಿರುಗುತ್ತಿಪ್ಪಾ ತಿರುಮಲೇಶ ಶರಣ ರಾಮನ ಭಕ್ತಿಪಾಶ ದುರುಳಿನಲಿ ನಿಂದಿರ್ಪಶ್ರೀಶ ತರಿಸುವನು ಕಾಣಿಕೆ ವಿಲಾಸ2 ಪಟ್ಟದರಸನಾದ ದೇವ ಸೃಷ್ಟಿಯಾಳುವಜಾನುಭಾವ ದೃಷ್ಟಿಗೋಚರವಾಗಿ ಕಾಯ್ವ ಇಷ್ಟವೆಲ್ಲವ ಸಲಿಸಿ ಕೊಡುವ 3 ಊರ್ವಶಿ : ಬಂದ ಗೋವಿಂದ ಸಾನಂದದಿ ಭಕ್ತರ ವೃಂದ ನೆರಹಿ ವನಕೆ ಅಂದಣವೇರಿ ಮುಕುಂದನೊಲವಿನಲಿ ಕುಂದಣ ಮಂಟಪವೇರಿ ಮತ್ತೊಬ್ಬನು ಸಂದರುಶನವಂ ನೀಡುತ ಯಿಬ್ಬರು ಒಂದಾಗುತ್ತಾನಂದವ ಬೀರುತ್ತ 1 ಅಕ್ಕ ನೀ ನೋಡು ಬಹುಮಾನದಿ ಸಿಕ್ಕಿದಿ ಬಿರುದು ಪೊತ್ತಾ ಉಕ್ಕುವದತಿ ತೋಷ ಸ್ತುತಿಪಾಠಕ ಜನಗಳ ಮಿಕ್ಕಿ ನೊಡುವ ನೋಟಕೆ ಮನಸಿನೊಳು ಝಕ್ಕೆನ್ನುವ ಕ್ಷಿತಿಗಕ್ಕಜ ತೋರುತ್ತಾ 2 ಪವಿತ್ರ ನಿಶಾನಿಧಾರಣಾ ಪವಿತ್ರಗೈಯುವ ಕಾರಣ ಮಿತ್ರಮಂಡಳವನು ಮೀರಿ ಪೊಳೆವುತಿಹ ರತ್ನಖಚಿತ ಮಂಟಪದಲಿ ಮಂಡಿಸಿ ಧಾತ್ರಿಯೊಳಗೆ ಅನ್ಯತ್ರವಿಲ್ಲೆಂಬುವ ಕೀರ್ತಿಯ ಧರಿಸಿ ಜಗತ್ರಯಪಾವನ 3 ನಿಸ್ಸಾಳ ಪಟಹ ಭೂರಿ ಜನ ಜಾಲ ಕೂಡಿರುವ ಮೇಳವಿಸುತ್ತನುಕೂಲಿಸಿ ಬಹು ಬಿರು ದಾಳಿಗೆ ಸಂಭ್ರಮದೇಳಿಗೆಯಿಂದಲಿ ಕೋಲು ಪಿಡಿದು ಓಹೋಯೆಂಬಂಥ ವಿ- ಶಾಲ ಭಕ್ತರ ಮೇಲು ಸಂತೋಷದಿ 4 ದೇಶದೇಶದ ಜನರು ನಾನಾ ವಿಧ &ಟಿ
--------------
ತುಪಾಕಿ ವೆಂಕಟರಮಣಾಚಾರ್ಯ
ಪಚ್ಚ ಪವಳದ ಕೋಲಅಚ್ಚ ಮುತ್ತಿನ ಕೋಲ ತುಚ್ಚಗೊಯ್ಸಿದ್ರೌಪತಿಗೆ ಹುಚ್ಚು ಹಿಡಿಸುವ ಕೋಲ ಪ. ಧಿಟ್ಟೆರಿಬ್ಬರು ನಮಗೆ ಇಟ್ಟರು ಅಣೆಯ ಕೃಷ್ಣಯ್ಯ ಇದಕೆ ನಗಬಹುದು ಕೋಲಕೃಷ್ಣಯ್ಯ ಇದಕೆ ನಗಬಹುದು ಮುಯ್ಯವ ಕೊಟ್ಟುಬಾಹುದಕೆ ತಡವ್ಯಾಕೆ ಕೋಲ 1 ಜಾಣಿಯರಿಬ್ಬರು ನಮಗೆ ಆಣಿಯನಿಟ್ಟರು ವೇಣುಗೋಪಾಲ ನಗಬಹುದು ಕೋಲವೇಣುಗೋಪಾಲ ನಗಬಹುದು ಮುಯ್ಯವ ಕ್ಷಣದೊಳು ನಾವು ತಿರುಗಿಸುವೆವು ಕೋಲ2 ಹರಿಯ ತಂಗಿಯರ ಗರುವಿನ ಮುಯ್ಯವತಿರುಗಿಸಿ ಬಂದು ಉಣಬೇಕು ಕೋಲ ತಿರುಗಿಸಿ ಬಂದು ಉಣಬೇಕು ಎನುತಲೆ ಹರಿಣಾಕ್ಷಿ ಭಾಮೆ ನುಡಿದಳು ಕೋಲ3 ರಂಗರಾಯರ ಮುದ್ದು ತಂಗಿಯರ ಹಂಗಿನ ಮುಯ್ಯ ತಿರುಗಿಸುವೆ ಕೋಲ ಹಂಗಿನ ಮುಯ್ಯ ತಿರುಗಿಸುವೆ ಮುಖವ ಭಂಗಿಸಿ ಬಾಹೊ ಸಭೆಯೊಳು ಕೋಲ4 ಇಂತು ರಾಮೇಶನ ಕಾಂತೆಯರೆಂಬುವರ ಪಂಥವ ಬಿಡಿಸಿ ಬರಬೇಕು ಕೋಲಪಂಥವ ಬಿಡಿಸಿ ಬರಬೇಕು ಮುಯ್ಯದ ಭ್ರಾಂತಿಯ ಹಿಡಿಸಿ ಕೊಡಬೇಕು ಕೋಲ 5
--------------
ಗಲಗಲಿಅವ್ವನವರು
ಪಂಢರಪುರವಾಸ ಪಾಲಿಸೊ ಶ್ರೀಶ ಪ ಶ್ರೇಷ್ಠ ಭಕ್ತನು ಕೊಟ್ಟ ಇಟ್ಟಿಕಲ್ಲಿನ ಮ್ಯಾಲೆ ಗಟ್ಯಾಗಿ ನಿಂತಿದ್ದ ವಿಠೋಬ ದಯಮಾಡೊ 1 ಪಾಂಡುರಾಯನ ಸುತ ಗಾಂಡೀವರ್ಜುನ ದೂತ ಬಂಡಿ ನಡೆಸಿದಾತ ಪುಂಡರೀಕ್ವರದನೀತ2 ಮುಕುತಿದಾಯಕ ಮುದ್ದು ರುಕುಮಿಯ ರಮಣನೆ ಭಕುತ ವತ್ಸಲಯೆನಗೆ ಸಕಲಾಭೀಷ್ಟವ ನೀಡೊ 3 ಬುಕ್ಕಿ ್ಹಟ್ಟು ತುಳಸಿಮಾಲೆ ಕಟ್ಟಿ ಕೊರಳಿಗೆ ಹಾಕಿ ದಾತ 4 ಲೋಕ ಲೋಕದೊಳಗಿದ್ದಾನೇಕ ಜೀವರನೆಲ್ಲ ಸಾಕಿ ಸಾಕಾಯ್ತೆ ಕರವೇಕೆ ಟೊಂಕದಲ್ಲಿಟ್ಟಿ 5 ಸೃಷ್ಟಿಸ್ಥಿತಿಯು ಜನಸಂರಕ್ಷಣೆ ಮಾಡಿ ನಿನ್ನ ರಟ್ಟೆ ಸೋತವೆ ಟೊಂಕಕಿಟ್ಟು ಕಯ್ಯನು ನಿಂತೆ 6 ಕಂಬದೊಳಗೆ ನಿಂತ ಪುರಂದರದಾಸರು ವಂದನೆಮಾಡೆ ಇವರೆ ನಾರಂದರೆಂದು ನಾ ತಿಳಿದೆ 7 ರುಕ್ಮಿಣಿ ಸತ್ಯಭಾಮೆ ರಾಧೆ ಲಕ್ಷುಮಿಯೇರ ಹತ್ತಿಲೆ ನಿಂತ ನಮ್ಮಪ್ಪ ವೆಂಕಟರಮಣ 8 ಭೀಮರಥಿಯ ಸ್ನಾನ ಸ್ವಾಮಿ ನಿಮ್ಮ ದರುಶನ ಭೀಮೇಶಕೃಷ್ಣನ ಧ್ಯಾನ ಮಾಡುವೋದ್ವೈಕುಂಠಸ್ಥಾನ 9
--------------
ಹರಪನಹಳ್ಳಿಭೀಮವ್ವ
ಪಂಢರಿನಾಥ ವಿಠಲ | ತೊಂಡನನು ಸಲಹೊ ಪ ಅಂಡಜಾದಿಪತುರಗ | ಕುಂಡಲಿಯ ಶಯನಾ ಅ.ಪ. ಭವ ಸಮುದ್ರಕೆ ಪೋತ | ತವಪಾದವಾಶ್ರಯಿಸಿಬವಣೆಗಳ ಕಳೆವೆನೆನೆ | ತವಕದಿಂದಿರುವಾ |ಇವನ ಕೈ ಪಿಡಿಯುತ್ತ | ಧೃವವರದ ಸಲಹೋಮಾಧವನೆ ಭಿನ್ನವಿಪೆ ಶ್ರೀ | ಪವನ ವಂದಿತನೇ 1 ಅಂತರಂಗದ ದೈತ್ಯ | ಸಂತತಿಯು ಕೊಡುತಿಪ್ಪಸಂತಾಪ ಹರಿಸಿ ಮ | ಧ್ವಾಂತರಾತ್ಮಾ ಹರಿಯೆಸಂತತವು ತವನಾಮ | ಚಿಂತೆಯಲ್ಲಿರಿಸುತ್ತಸಂತಸವ ಬಡಿಸೊ ಶ್ರೀ | ಕಂತುಹರಸಖನೇ 2 ಇಂದು | ಆಶಿಸುತ್ತಿಹನೇ |ಲೇಸಾದ ಸತ್ಪಂಥ | ದಾಶಯವ ತಿಳಿಸುತ್ತದಾಸನಾಗೆಂದೆನುತ | ಆಶಿಷವನೀವೇ 3 ಹರಿಗುರೂ ಸದ್ಭಕ್ತಿ | ಪರತತ್ವ ಸುಜ್ಞಾನಮರುತ ಮತ ದೀಕ್ಷೆಯನು | ವಿಷಯ ವೈರಾಗ್ಯ |ಕರುಣಿಸುತ ತರಳನ್ನು | ಪೊರೆಯೆಂದು ಬಿನ್ನೈಪೆಕರಿವರದ ಕಮಲಾಕ್ಷ | ಕಾರುಣ್ಯ ನಿಧಿಯೇ 4 ಗಾನಲೋಲನೆ ಇವಗೆ | ಧ್ಯಾನ ಸಾಧನ ಕೊಟ್ಟುಕಾಣಿಸೋ ಹೃದ್ಗುಹದಿ | ಮೌನಿಜನವಂದ್ಯ |ಜಾಣಗುರೂಗೋವಿಂದ | ವಿಠಲ ಮಧ್ಭಿನ್ನತವನೀನಾಗಿ ಸಲಿಸೆಂದು | ಆನಮಿಸಿ ಬೇಡ್ವೆ5
--------------
ಗುರುಗೋವಿಂದವಿಠಲರು
ಪಂಢರಿಯ ಬಿಟ್ಟಲ್ಲಿ ಹೆಂಡತಿಯ ಕರಕೊಂಡುಬಂದ ಕಾರಣ ತಿಳಿಯದೋಹೆಂಡತಿಯ ಕಾಟವೊ ಇದು ನಿನ್ನ ಆಟವೊಭಕ್ತಭೂ'ುಗೆ ಓಟವೊಪಂಢರಿಯ ಬಿಟ್ಟಿಲ್ಲಿ ಬಂದ ಕಾರಣವೇನುಪೇಶಯ್ಯ ಪಾಂಡುರಂಗಾsಚಂದ್ರಭಾಗಾ ತೀರ ಸುಂದರ ಮಂದಿರವುಇಂದಿರಾರಮಣ ನಿನಗಲ್ಲಿ 1ಅರುಣೋದಯಕೆ ನಿತ್ಯ ಪಂಚಾಮೃತದ ಸ್ನಾನನವನೀತ ಬಾು ತುಂಬಾsಜರತಾರಿ ಮುಂಡಾಸು ಭರ್ಜರಿ ನಿಲುವಂಗಿಸೊಂಪಿನಂಚಿನ ಮಡಿಯು ನನಗೆತರತರದ ಪುಷ್ಪಗಳು ಎಳೆ ತುಳಸಿ ವನಮಾಲಿಕೊರಳೊಳಗೆ ವೈಜಯಂತಿಪರಿಮಳದ ಗಂಧ ಕಸ್ತೂರಿ ಫಣಿಯಲಿಟ್ಟುವೈಭವದಿ ಪೂಜಿಸುವರು 2ಅಂದಚೆಂದದ ರತ್ನ ಮುತ್ತಿನಾಭರಣಗಳುತರತರದ ಸೊಗಸಾದ ಪಂಚಪಕ್ವಾನ್ನಗಳುಸರಿಯಾಗಿ ಮಧ್ಯಾಹ್ನ ಮಾಪೂಜೆ ನಡೆಯುವದುಭಕ್ತರಿಗೆ ಲೆಕ್ಕ'ಲ್ಲಾ sಪಾದಕ್ಕೆ ಹಣೆ ಹಚ್ಚಿ ತಿಕ್ಕುವರು ಮೇಲೆದ್ದುನಿಂತುಬಿಡುವರು ಅಲ್ಲಿ ದಬ್ಬಿದರು ಎಚ್ಚರಿಲ್ಲಾಇಂಥ ಭಕ್ತಿಯ ಭಾವ ಇನ್ನೆಲ್ಲಿಯೂ ಕಾಣೆಭಕ್ತವತ್ಸಲ 'ಠ್ಠಲಾs 3ಗೋಧೂಳಿ ಕಾಲಕ್ಕೆ ಪಾದಪೂಜೆಯು ಮಹಾಧೂಪ ದೀಪೋತ್ಸವಗಳುsಆಪಾದಮೌಳಿ ಪರ್ಯಂತ ದರ್ಶನ ಪಾದಸ್ಪರ್ಶದಾ ಆನಂದವೋsರಾತ್ರಿ ಹತ್ತಕ್ಕೆ ಶಯನೋತ್ಸವದ ವೈಭವವುನೋಡಿದವರೇ ಧನ್ಯರುsಸಚ್ಚಿದಾನಂದಮೂರ್ತಿ ಅಲ್ಲಿ ಪ್ರತ್ಯಕ್ಷಭಕ್ತರಿಗೆ ಕಾಣುತಿಹನು 4ಸತ್ಯವಾದೀ ಜಗಕೆ ಪಂಚಭೇದವು ನಿತ್ಯಸರ್ವತ್ರ ತಾರತಮ್ಯಸೃಷ್ಟ್ಯಾದಿ ಅಷ್ಟ ಕರ್ತೃತ್ವ 'ಠ್ಠಲಗುಂಟು'ಠ್ಠಲನೆ ಸವೋತ್ತಮಾsಹರಿಯು ಸರ್ವೋತ್ತಮನು ವಾಯು ಜೀವೋತ್ತಮನುಮೂಲಗುರು ಮುಖ್ಯ ಪ್ರಾಣನುಮಧ್ವಮತವೇ ಮತವು ಸಕಲಶ್ರುತಿಸಮ್ಮತವುನಿತ್ಯ ತತ್ತ್ವಜ್ಞಾನವುs 5ಅಣುರೇಣು ಪರಿಪೂರ್ಣ ಸರ್ವಗುಣ ಸಂಪನ್ನನಿರ್ದೋಷ ನಿರ್'ಕಾರಾsಸರ್ವತಂತ್ರ ಸ್ವತಂತ್ರ ಸರ್ವಾಂತರ್ಯಾ'ುಸರ್ವಜ್ಞ ಸರ್ವಸ್ವಾ'ುsಸಚ್ಚಿದಾನಂದಾತ್ಮ ಪೂರ್ಣಾತ್ಮ ಪರಮಾತ್ಮನಿತ್ಯತೃಪ್ತನು ಶ್ರೀಹರಿsನಿರ್ಗುಣ ನಿರಾಕಾರ ಅ'ುತಗುಣ ಆಕಾರತ್ರಿಗುಣವರ್ಜಿತ ತ್ರಿಧಾಮಾs 6ಕಾರ್ಯಕಾರಣ ಅಂಶಿ ಅಂಶಾವತಾರಅಂತರ್ಯಾ'ುಯಾಗಿ ಇಹನುsಪ್ರೇರ್ಯಪ್ರೇರಕನಾಗಿ ಬಾದ್ಯ ಬಾಧಕನಾಗಿವ್ಯಾಪ್ಯ ವ್ಯಾಪಕನು ತಾನುsಯಾರು ತನ್ನನೆ ನಂಬಿ ಸರ್ವಸ್ವವನು ನೀಡಿದಾಸರಾಗುವರೊ ಅವರನ್ನುsಕ್ಲೇಶಗಳ ಕಳೆದು ಭವಪಾಶ ಬಂಧವ ಬಿಡಿಸಿಶ್ರೀಶ ಕೈಪಿಡಿದು ಪೊರೆವಾs 7'ಷ್ಣು ಸರ್ವೋತ್ತಮತ್ವ ತಿಳಿಯದ ಜ್ಞಾನಶೂನ್ಯರಿಗೆಬೇಸತ್ತು ಇಲ್ಲಿ ಬಂದ್ಯಾ sಭಕ್ತ ಪ್ರಹ್ಲಾದನವತಾರ ರಾಯರು ಇಲ್ಲಿಬಂದದ್ದು ಕೇಳಿ ಬಂದ್ಯಾ sಮಧ್ವಸಿದ್ಧಾಂತ ಪದ್ಧತಿಗೆ ಅನುಸರಿಸಿಪೂಜೆಗೊಂಬಲು ಬಂದೆಯಾsಮುದ್ದುಭೂಪತಿ'ಠಲ ಬಿದ್ದೆ ನಿನಪಾದಕ್ಕೆಉದ್ಧಾರ ಮಾಡೊ ಸ್ವಾ'ು 8ಫಲಶ್ರುತಿಚಿತ್ತನಿರ್ಮಲರಾಗಿ ಭಕ್ತಿಭಾವದಿ ನಿತ್ಯ'ಠ್ಠಲಾಷ್ಟಕ ಪಠಿಸಲು'ಠ್ಠಲನು ಕೈಪಿಡಿದು ಕಷ್ಟಗಳ ಪರಿಹರಿಸಿಇಷ್ಟಾರ್ಥಗಳ ಕೊಡುವನುsಸತ್ಯ'ೀ ಮಾತಿದಕೆ ಸಾಕ್ಷಿ ಬೇಕಾದರೆಪ್ರತ್ಯಕ್ಷ ಪಾಂಡುರಂಗಾsಕಾವೇರಿ ಶ್ರೀರಂಗ ಕಂಬೆವರದರಾಜಗಲಗಲಿಯ ನರಸಿಂಗನೋs 9
--------------
ಭೂಪತಿ ವಿಠಲರು
ಪತಿ ಗೋಪಾಲ | ವಿಠಲ ಕಾರುಣಿಕಾ ಪ ನೀನಾಗಿ ಒಲಿದಿವನ | ಪೊರೆಯೆ ಪ್ರಾರ್ಥಿಸುವೇ ಅ.ಪ. ಉತ್ತಮ ಸುಸಂಸ್ಕøತಿಯ | ಪೊತ್ತು ಜನಿಸುತ ಸರ್ವಕರ್ತೃ ನಿನ್ನಯ ಸೇವೆ | ಅರ್ಥಿಯಂ ಗೈವೆ |ಅರ್ಥಿಸುವ ನಿನ್ನ ದಾಸತ್ವ ದೀಕ್ಷೆಯನೂಸುಪ್ರೀಶ ತೋರ್ದಪರಿ | ಇತ್ತಿಹೆನೊ ಅದಗೇ 1 ಕರ್ಮನಾಮಕನೆ ದುಷ್ಕರ್ಮಗಳ ಪರಿಹರಿಸಿನಿರ್ಮಲ ಸುಸಾಧನಕೆ | ಸನ್ಮಾರ್ಗ ತೋರೋ |ಮನ್ಮಥನ ಜನಕ ತವ | ನಾಮಸ್ಮರಣೆಯ ಕವಚಪೇರ್ಮೆಯಿ ತೊಡಿಸಿ ಸ | ದ್ಧರ್ಮರಥನೆನಿಸೋ 2 ವೃದ್ಧ ಜನಗಳ ಸೇವೆ | ಬುದ್ಧಿಪೂರ್ವಕಗೈದುಮಧ್ವಮತ ಸಚ್ಛಾಸ್ತ್ರ | ತಿದ್ದಿ ಪೇಳುವಲೀ |ಶುದ್ಧಬುದ್ದಿಯನಿತ್ತು | ಉದ್ದರಿಸಬೇಕಿವನಹದ್ದುವಾಹನದೇವ | ಮಧ್ವಾಂತರಾತ್ಮಾ 3 ಅಧಿಭೂತ ಅಧ್ಯಾತ್ಮ | ಅದಿದೈವದೊಳು ನಿನ್ನಅದುಭೂತ ವ್ಯಾಪ್ತಿಯನೆ | ವದಗಿಸಿ ಮನಕೇ |ಬುಧ ಜನೇಢ್ಯನೆ ದೇವ | ಸದಯದೀ ತರಳಂಗೆಹೃದಯದಲಿ ಮೈದೋರಿ | ಮುದವನೇ ಬೀರೋ 4 ದೀರವನು ಎಂದೆನಿಪ | ಪಾವಮಾನೀಯ ಪ್ರಿಯಕೇವಲಾನಂದಮಯ | ಮಾವಿನೋಧೀಸಾವಧಾನದಿ ತರಳ | ಭಾವುಕಗೆ ಒಲಿಯೆಂದುಓದಿ ಭಿನ್ನವಿಪೆ ಗುರು | ಗೋವಿಂದ ವಿಠಲ 5
--------------
ಗುರುಗೋವಿಂದವಿಠಲರು
ಪತಿ ವಿಠಲ ನೀನಿವಳ ಕಾಯಬೇಕೊ ಪ ಕರುಣಾದ್ರ್ರ ಹೃದಯ ನಿನ್ನಡಿಗೆ ಮೊರೆಯಿಡುವೇ ಅ.ಪ. ಮಾನವ ಸುಜನ್ಮದಲಿ ನೀನಿವಳ ತಂದಿರುವೆಜ್ಞಾನಸಾಧನವ ಮಾರ್ಗ ಕಾಣದಲೆ ಬರಿದೇ |ಮಾನಿನಿಯ ಆಯುಷ್ಯ ಬರಿದೆ ಪೋಯಿತು ಹರಿಯೆನೀನಾಗಿ ಸಲಹಿವಳ ದೀನಜನ ಬಂಧೋ 1 ಪಂಚಭೂತಾತ್ಮಕದ ಈ ದೇಹ ಸ್ಥಿರವಲ್ಲಕೊಂಚಮತಿಯನು ಕಳೆದು ಸರ್ವಾಂತರಾತ್ಮ |ಪಂಚಭೇದವನರುಹಿ ಮುಂಚೆ ತರತಮ ತಿಳಿಸಿಪಂಚ ಪಂಚಾತ್ಮಕನೆ ಸಲಹ ಬೇಕಿವಳಾ 2 ಹರಿಗುರೂ ಸದ್ಭಕ್ತಿ ಮರಳಿ ವೈರಾಗ್ಯವನೆ ಕರುಣಿಸೂವುದು ಹರಿಯೆ ದುರಿತಾಂಧ ರವಿಯೆ ಹರಿಗೋಲುಭವನಿಧಿಗೆ ಎಂದೆನಿಪ ತವನಾಮ ಸ್ಮರಣೆ ಸಂತತವಿತ್ತು ಪೊರೆಯ ಬೇಕಿವಳಾ 3 ಜೇನು ಸವಿಯಂತಿಪ್ಪ ಆನಂದಕರ ಶಾಸ್ತ್ರಮಾನನಿಧಿ ಮಧ್ವಾಖ್ಯ ಸಾನುರಾಗದಲೀ |ಕ್ಷೋಣಿಸುರರುದ್ಧಾರ ಕಿತ್ತಿಹುದ ನೀನರುಹಿಜ್ಞಾನಗಮ್ಯನೆ ಕಾಯೊ ಪ್ರಾಣಾಂತರಾತ್ಮ 4 ಇಂದೀವರಾಕ್ಷಹರಿ ದ್ವಂದ್ವಗಳ ಸಹನೆಯನುತಂದೆ ಕರುಣಿಸಿ ಕಾಯೊ ಕಂಜದಳ ನೇತ್ರಅಂದು ಇಂದಿಗು ಮುಂದೆ ಎಂದೆಂದು ಗತಿ ನೀನೆಎಂದು ನಂಬಿಹೆ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಪತಿತಪಾವನ ನಾಮ ಪೂರ್ಣಕಾಮಾ | ಗತಿಯ ಪಾಲಿಸೊ ಎನಗೆ ಗುರುಸಾರ್ವಭೌಮಾ ಪ ಹದಿನಾರು ಸಾವಿರ ಸುದತಿಯರೆಲ್ಲರು | ತ್ರಿದಶವಿರೋಧಿಯ ಸದನದಲ್ಲಿ || ಮದದಿಂದ ಸೆರೆಬಿದ್ದು ಹದುಳ ಕಾಣದೆ | ಸುತ್ತಿಸಿದರು ಮನದೆ ನಾರದನಿಂದ ನಲಿದಾಡಿ1 ಕಾರ್ತಿಕ ಮಾಸದಲಿ ಕಾಂತೆಯ ಒಡಗೂಡಿ | ಕಾರ್ತರಥವನೇರಿ ಕೀರ್ತಿಪುರುಷಾ || ಧೂರ್ತನ ಕೊಂದು ಬಾಲೆಯರಾರ್ತವ ಪರಿಹರಿಸೆ | ತೀರ್ಥಧರಾದಿಗಳು ನರ್ತನದಲಿ ಪೊಗಳೆ 2 ಇಂದುಮುಖಿಯರ ಬಂಧನ ತರಿದವರು | ಅಂದು ಉತ್ಸಾಹದಿಂದ ದ್ವಾರಾವತಿಗೆ || ಮಜ್ಜನ ಮಾಡೆ | ಮಂದಾರ ಮಳೆ ನಭದಿಂದ ಸುರಿಯೆ 3 ದೇವ ಶೃಂಗಾರವಾಗೆ ವೇದಾದಿಗಳು ನಿಂದು | ತಾವೆಲ್ಲ ಮಣಿಭೂಷಣಾವಳಿಯಿಟ್ಟು || ನೋವ ಪೋಗಾಡಿಸಿ ಪಾವನರಾಗಿ ಸುಖ- | ವನಧಿಯೊಳು ಮೀಯುತ್ತ ಕೊಂಡಾಡೆ 4 ನರಕಾಸುರನ ಕೊಂದು ಇರಳು ಈ ಪರಿಯಲ್ಲಿ | ಹರಿಮಾಡಿದ ಚರಿತೆ ತಿಳಿದುದನು- || ಚ್ಚರಿಸಿದವನ ಕುಲ ನರಕದಿಂದುದ್ಧಾರ | ಮೊರೆಹೊಕ್ಕೆ ಇದÀಕೇಳಿ ವಿಜಯವಿಠ್ಠಲರೇಯಾ 5
--------------
ವಿಜಯದಾಸ
ಪತಿಮಂದಿರದಲಿ ನೀ ಸುಖವಾಗಿ ಬಾಳು ನಿನ್ನ ಪತಿಗಹಿತಕರ ಸಂಗ ತ್ಯಜಿಸಮ್ಮ ಮಗಳೆ ಪ ಉದಯ ಪೂರ್ವಕೆ ಎದ್ದು ಹರಿಯ ಸ್ಮರಣೆಯ ಮಾಡು ಮುದದಿ ಗುರುಹಿರಿಯರಿಗೆ ವಂದನೆಯ ಮಾಡು ಮದನನಯ್ಯನ ಭಜಕರನು ಕಂಡು ನಲಿದಾಡು ಪದುಮನಾಭಗೆ ಪಟ್ಟದರಸಿಯಾಗಮ್ಮ1 ರತ್ನಾಕರನು ತಂದೆ ಎನುತ ಗರ್ವಿಸಬೇಡ ಮತ್ತೆನಗೆ ಸರಿಯಾರು ಎಂದೆನಲು ಬೇಡ ಚಿತ್ತಜನಯ್ಯನ ಮನವರಿತು ನಡೆಯಮ್ಮ ಹೊತ್ತು ಹೊತ್ತಿಗೆ ಪತಿಯ ಸೇವೆ ನಿರತಳಾಗಿ2 ಬಿಟ್ಟಕಂಗಳು ಮುಚ್ಚದವನು ಎಂದೆನಬೇಡ ಬೆಟ್ಟ ಬೆನ್ನಿಲಿ ಪೊತ್ತನೆನಲು ಬೇಡ ಗಟ್ಟಿ ನೆಲವನು ಕೆದರಿ ಅಲಸಿದನೆನಬೇಡ ಹೊಟ್ಟೆಯ ಕರುಳನು ಬಗೆದವ ನೆನೆಬೇಡ 3 ಕಡುಲೋಭಿದಾನ ಬೇಡಿದನು ಎಂದೆನಬೇಡ ಪೊಡವಿಪಾಲಕರ ಕೆಡಹಿದನು ಎನಬೇಡ ಮಡದಿಯ ತಂದ ಕಪಿವಡೆಯನು ಎನಬೇಡ ತುಡುಗತನದಿ ಪಾಲ್ಬೆಣ್ಣೆ ಚೋರನೆಂದೆನಬೇಡ 4 ಉಡಿಗೆ ಉಡದ ಮಾನಗೇಡಿ ಇವನೆನಬೇಡ ತುಡಗತನದಿ ರಾಹುತನಾದನೆನಬೇಡ ಕಡಲಶಯನ ಕಮಲನಾಭ ವಿಠ್ಠಲನ ಗುಣ ಒಡೆದು ಪೇಳದೆ ಗುಟ್ಟಾಗಡಗಿಸಿ ನಡೆಯಮ್ಮ 5
--------------
ನಿಡಗುರುಕಿ ಜೀವೂಬಾಯಿ
ಪತಿಯಿಂದಲೆ ಸದ್ಗಿತಿಯೆಂಬುವಳು ಅತಿಮತಿಯೆನ್ನುವಳು ನಮ್ಮ ಶ್ರೀದೇವಿ ಪ ಕ್ಷಿತಿಯೊಳು ತನ್ನಯ ಪತಿಯೊಳು ಸಲ್ಲದೆ ಇತರವನೆಣಿಪಳೆ ಮೂದೇವಿ ಅ.ಪ ಗಂಡನು ಪುಂಡನು ಕುರುಡನು ಕುಂಟನು ಭಂಡಾಂಗನೆಯಂ ಕಲಹಿಪಳೆ ಮೂದೇವಿ 1 ಅತ್ತೆಮಾವನ ಹೇಳಿಕೆಗೆ ಪ್ರ ತ್ಯುತ್ತರಳಲ್ಲ ಶ್ರೀದೇವಿ ಕತ್ತೆಯಂತೆ ತಾ ಬಗಳುವ ಕಳ್ಳ ಚಿತ್ತಿನಿ ಹವುದೆಲೊ ಮೂದೇವಿ 2 ಅರಿಸಿನ ಕುಂಕುಮ ಹಣೆಯೊಳಗಿಡುವಳು ಅಡಿಯಾ ಗಿರುವಳು ಶ್ರೀದೇವಿ ಅನು- ಕರಿಸಲು ಬಾರದೆ ಕಳವಳಗೊಳುವಳು ಕರಠೆಕಮಾನಳು ಮೂದೇವೀ 3 ಶಿರಬಾಗಿ ತನ್ನರಸನ ಸೇವೆಯ ಹರುಷದೊಳಿರುಪವಳೆ ಶ್ರೀದೇವೀ ಕರಸಲು ಬಾರದೆ ಕಳವಳಗೊಳುವಳು ಕರಟಕ ತನುವಳು ಮೂದೇವೀ 4 ಇರುವ ಅತಿಥಿ ಅಭ್ಯಾಗತಗಳಿಗುಪ ಚರಿಸುವಳೆ ನಮ್ಮ ಶ್ರೀದೇವಿ ಗುರುವು ತುಲಶಿರಾಮಯೆಂದೆನ್ನುತ ಭಜಿಸದೆ ಯಿರುವಳೆ ಮೂದೇವೀ 5
--------------
ಚನ್ನಪಟ್ಟಣದ ಅಹೋಬಲದಾಸರು