ಒಟ್ಟು 4311 ಕಡೆಗಳಲ್ಲಿ , 123 ದಾಸರು , 2721 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನಗಾರು ಸರಿಯಿಲ್ಲ-ಎನಗನ್ಯ ಗತಿಯಿಲ್ಲ ಪ ನಿನಗೂ ನನಗೂ ನ್ಯಾಯ ಪೇಳುವರಿಲ್ಲ ಅ.ಪ ಪಾದ ಪೊಂದಿರುವೆಬಂದ ವಿಷಯಂಗಳಿಗೆ ಎನ್ನನೊಪ್ಪಿಸಿಕೊಟ್ಟುಅಂದಗಾರನಂತೆ ನೋಡುವುದುಚಿತವೆ1 ಪರಿ ನರಕಕ್ಕೆ ಗುರಿಮಾಡುವಿಪರಸತಿಯರ ಒಲುಮೆ ನಿನಗೊಪ್ಪಿತೆಲೊ ಕೃಷ್ಣದೊರೆತನಕಂಜಿ ನಾ ಶರಣೆಂಬೆನಲ್ಲದೆ 2 ನಿನ್ನಾಜ್ಞದವನೊ ನಾ ನಿನ್ನ ಪ್ರೇರಣೆಯಿಂದಅನ್ನಂತ ಕರ್ಮವ ನಾ ಮಾಡಿದೆಎನ್ನವಗುಣಗಳನೆಣಿಸಲಾಗದೊ ಸ್ವಾಮಿಮನ್ನಿಸಿ ಸಲಹಯ್ಯ ಪರಮ ಪುರುಷ ಕೃಷ್ಣ 3
--------------
ವ್ಯಾಸರಾಯರು
ನಿನಗೆ ಅಚ್ಚರವಲ್ಲ ಅನುಮಾನಸಲ್ಲಾ ಇನಿತು ಶ್ರಮ ಕಳೆಯದಿರೆ ಘನತಿಲ್ಲ ನಿಮದಲ್ಲ ಪ ಹಿಂದೆ ನಿನ್ನ ಅಜ್ಞಾ ನಾ ಒಂದು ಮೀರಿದಕೆ ನೀ ಇಂದು ಭವಭವಣೆ ಬಹುಪರಿಯಿಂದಲೀ ತಂದು ನೋಯಿಸಿ ಮನಸುನಿಂದದಲೆ ಪರರಿಗೆ ಇಂದು ಮೊರೆಯನು ಹೋಗಿಸುವುದು ಥರವೇ ಹರಿಯೇ 1 ಒಂದು ತಿಳಿಯದಲೆ ನಾನು ಅಂದ ಮಾತಿಗೆ ಮನಸು ನೊಂದು ಈ ತೆರದಿ ಮಾಡುವುದು ರೀತೇ ಕಂದನಪರಾಧಗಳ ಒಂದು ನೋಡದ ಜನನಿ ಯಂದದಲಿ ನೀ ಪಾಲಿಸುವುದು ಸ್ವಾಮೀ ಪ್ರೇಮೀ 2 ಜಾತಮಗನನು ನಿಜತಾತ ಪರರಿಗೆ ತಾನು ಆತುರಾದಿಂದಲಿ ಮಾರಿದಂತೆ ದೂತರನು ಜಗದೇಕÀನಾಥ ನೀ ಪರಿಪರಿ ಫಾತಿಸಲು ಇನ್ನಾರು ಪೊರೆªರೈಯ್ಯಾ ಜೀಯಾ 3 ನಂಬಿದವರನ್ನು ನೀ ಅಂಬಿನಲಿ ಹೊಡೆವರೆ ಅರಿ ಪದುಮ ಗದಧರಪಾಣಿಯೆ ತುಂಬಿದ್ಹರಿಗೋಲಲ್ಲಿ ಇಂಬುಗೊಂಡಿರುವಾಗ ಅಂಬುಧಿಮುಣುಗಿಸುವದು ಥರವೇನೋ 4 ಯಾತಕೀಸೊ ಮಾತು ಸೋತೆ ನಾ ನಿನಗೀಗ ವಾತದೇವನ ತಾತ ಸೀತಾನಾಥಾ ನೀತ ಶ್ರೀಗುರುಜಗನ್ನಾಥ ವಿಠ್ಠಲರೇಯ ಮಾತು ಲಾಲಿಸಿ ಪಾಲಿಸುವದು ಇನ್ನಾ ಚೆನ್ನಾ 5
--------------
ಗುರುಜಗನ್ನಾಥದಾಸರು
ನಿನಗ್ಯಾಕೆ ದುರ್ಮತಿ ಎಲೆ ಕೋತಿ ಪ ಅನುದಿನದಿ ನಾನು ನನದೆಂಬ ಅ.ಪ ಮೊದಲಿಂದಲಿ ಅವಿವೇಕದಿಂದ ಮೋಹಪಡುತ ನೀನಿರಲ್ ತುದಿಗೆಯಮನ ಬಾಧೆಯಹುದು ಬಲು 1 ಚಪಲಾತ್ಮರಾದವರಲಿ ಸೇರಿ ಚಾಟು ಮಾತುಗಳಾಡುವೇ ವಿಪರೀತ ಜ್ಞಾನವಿದಲ್ಲವೇ 2 ನಡೆನುಡಿಗಳಾದಿಯಾದ ಎಲ್ಲಕು ನಾಥ ನೀನೆಯೇನಲಾ ದೃಢವಾಗಿ ನಿನ್ನೊಳು ತಿಳಿದು ನೋಡೋ 3 ಸುರರು ಹಿತವಾಗದೆಂದಿಗು ನೀನಲ್ಲ ದೊರೆ 4 ಭಾರ ಗುರುರಾಮವಿಠಲ ಪೊರೆಯುವನು 5
--------------
ಗುರುರಾಮವಿಠಲ
ನಿನಗ್ಯಾಕೋ ಜನರಂಜನೆ | ವಣಾ ಭಂಜನೆ ಪ ಎಲ್ಲವಿದ್ಯವ ಸಾಧಿಸಿ ಮೆರೆಯಬೇಕೆಂಬ | ಬಲ್ಲವಿಕೆ ಹೆಮ್ಮೆಗೆ ಬೀಳುರೆ | ಯಳ್ಳಿಗೆ ಬೆಲ್ಲವ ಹುಯಲು ಹೋದಂತವಯ | ಸುಳ್ಳಿನ ಭ್ರಾಂತಿ ಕಳುವರೇ 1 ಹೆಣಗುತಿ ದೀಕ್ಷಿತನೆಂಬ ಮನ್ನಣಿಗ್ಯಾಗಿ | ದಣಿವರೆ ಕರ್ಮದಿ ದಣ್ಣನೆ | ಮುಣುಗುವವನ ತೆಲಿಮ್ಯಾಲ ಕಲ್ಲನ್ನಿಟ್ಟರೆ | ಗಣಿಸದೇ ದಾಟಲು ಬಲ್ಲನೆ 2 ಶರಣ ಕೊಳಬೇಕೆಂದು ಬೂದಿ ರುದ್ರಾಕ್ಷಿಯ | ಧರಿಸಿ ಕಾವಿಯ ಸೋಗು ಮಾಡುವರೆ | ಹರುಷದಿ ಖಜ್ಜಿಗೆ ಬಿಸಿನೀರು ಹೊಯ್ದಂತೆ | ಮರುಳೆ ಜನ್ಮ ಸಾಧನ ಕೂಡುರೇ 3 ಕಾಲನುಕೂಲವಿದ್ದ ಕೈಯಲಿ ಪರಗತಿ | ಕೀಲವರಿತು ಜ್ಞಾನ ಪಡೆವುದ | ಕೊಳ್ಳೆ ಹೋದ ಬಳಿಕ ಕೂಗುವ ಪರಿಯಲಿ | ಚಾಲವರಿದರಾಗ ಬಾರದು 4 ಒಂದೇ ನಿಷ್ಠೆ ಒಂದೇ ಮಾರ್ಗದಿ ಮನ | ದಂದುಗ ಬಿಟ್ಟು ಶರಣ ಹೊಕ್ಕರೆ | ತಂದೆ ಮಹಿಪತಿ ಸುತ ಪ್ರಭು ಬೀರುವ | ಮಂದನಾಗದೇ ತಿಳಿ ಇನ್ನಾದರೆ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನ ಅರುಸುತನಕ್ಕೇನೆಂಬೆನೊ ವೆಂಕಟೇಶಾ ಘನ್ನಗಿರಿಯ ವಾಸ ಕಮಲಾಸನ ಜನಕ ತಿರುಮಲೇಶಾ ಪ ಹರುವ ಸರ್ಪಯಿರುವ ಚೋರ ಶರಧಿ ಉರೆವ ಕಿಚ್ಚು ಕರೆವ ಮೃತ್ಯು ಸುರಿವ ಮಳೆ ಬಿರುವನೆಲ್ಲ ಹೊಡೆವ ದೈತ್ಯಾ ತೊರೆವ ಸನ್ನ್ಯಾವ ಮೇರೆ ತಪ್ಪಿ ಭರದಿ ತನಗೆ ಇದಿರು ಬಂದವ ಕಾಣುತತಿ ಹರಿಯ ನಾಮ ಮುಟ್ಟುವ ದೇವ ಶ್ರೀನಿವಾಸಾ1 ಸೃಷ್ಟಿ ಜನರಿಗೊಂದು ಆಳು ಕೊಟ್ಟು ವೇಗದಿಂದ ಕರಿಯ ಲಟ್ಟಿದವರ ಕಾಣೆನಯ್ಯಾ ಎಷ್ಟೆಷ್ಟು ದೂರದಿಂದಲಿ ಕಟ್ಟಿಕೊಂಡು ಹೊನ್ನು ಹಣಗಳ ತಮಗೆ ತಾನೆ ಅಟ್ಟಹಾಸದಿಂದ ಮಂಗಳವ ಪಾಡಿ ಪೊರ ಮಟ್ಟ ಒಪ್ಪ ತಿರುವೆಂಗಳಾ2 ಹದಿನೆಂಟು ಜಾತಿಯವರು ಒದಗಿ ಮುದದಿಂದ ಕುಣಿದು ಪದೋಪದಿಗೆ ಹಾಡಿ ಪಾಡುತ ಹದುಳವಾದ ಪಂಚವಾದ್ಯ ಎದುರುನಿಂದು ಧ್ವನಿಯ ಮಾಡುತಾ ದಾಸರೆಂಬೊ ಅಟ್ಟಹಾಸದ ಮಾತು ನುಡಿಯುತ್ತ ನಿತ್ಯ ನಿನ್ನ ಮದುವೆಯೆಂದು ಸುಖವು ಸುರಿಯುತ್ತಾ 3 ಎಲ್ಲರಿಲ್ಲಿಗೆ ಬಂದರೇನು ಯಿಲ್ಲ ಪು ಣ್ಯಲೇಶ ಮಾತ್ರ ಸಲ್ಲದಯ್ಯಾ ಮುಕ್ತಿಗವರು ಇಲ್ಲೆ ಸುಖವು ಬಟ್ಟು ಕಡಿಗೆ ಎಲ್ಲೆಲ್ಲಿ ಜನಿಸಿ ಬಹು ಭವದ ಪಲ್ಲಡಿಯೊಳಗೆ ಜನಿಸಿ ಜ್ಞಾನ ವಿಲ್ಲದೆ ಸಲ್ಲುವರು ದುರಿತವ ವಹಿಸಿ 4 ಮನುಜರೆಣಿಕೆ ಏನು ಮತ್ತೆ ವನಜ ಸಂಭವ ಈಶ ಮುಖ್ಯ ಅನಿಮಿಷರೆಲ್ಲ ಬಂದು ಭಯದಿ ಮನಸಿನಲಿ ನಿನ್ನ ಅರಸುತನದ ಶೌರ್ಯ ಮಣಿದು ನಮಸ್ಕರಿಸುತಾ ವಾಲ್ಗೈಸುತಾ ಹೊಣಿಯೊ ವಿಜಯವಿಠ್ಠಲ ಎನುತಾ 5
--------------
ವಿಜಯದಾಸ
ನಿನ್ನ ಕಂಡೆನು ದೇವ ನಿನ್ನ ಕಂಡೆ ಘನ್ನ ಮಹಿಮನೆ ಮತ್ತುರೇಶಾ ಕುಂಚೂರವಾಸಾ- ಪ ಪನ್ನೀರಿನಿಂದ ನಿನ್ನಂಗವನು ತೊಳೆದು ಬಲು ಚನ್ನಸಿರಿಗಂಧದ ಪನ್ನೆರಡು ನಾಮ ಚೆಲು ವನ್ನಿರಿಸಿ ಪಣೆಗೂಧ್ರ್ವ ಪುಂಡ್ರ ರಕ್ತಾಕ್ಷತೆಯನು ಎನ್ನ ಕೈಯಿಂದಲೇ ಇಡುವಂತೆ ನೀನೆ ಮಾಡು 1 ಒಪ್ಪಿಹುದು ಕೊರಳಲ್ಲಿ ಶ್ರೀ ತುಳಸಿ ಮಾಲೆ ನ- ಕುಸುಮ ನಿಕರ ತಪ್ಪದಲಿ ಓರಂತೆ ಇಪ್ಪ ಭೂಷಣ ನೋಡಿ ಒಪ್ಪ ನಿನ್ನೋಜೆಯನ್ನೆಷ್ಟು ಪೊಗಳಲಿ ಹಾಡಿ2 ಮಾನವನು ನಾಮವು ಜ್ಞಾನಿ ಪವಮಾನನೇ ಮಾನ್ಯವಾಯಿತೆ ನಿನಗೆ ಆಶ್ಚರ್ಯವೋ ಮಾನ ರಕ್ಷಕ ಸ್ವಾಮಿ ನರಸಿಂಹ ವಿಠ್ಠಲನೇ ಪ್ರಾಣದೇವಾನೆಂಬ ನಾಮವಿಟ್ಟಿಹನೋ 3
--------------
ನರಸಿಂಹವಿಠಲರು
ನಿನ್ನ ಚಂದ್ರಕೋಟಿ ತೇಜ ಚಕ್ರಧರನ ಭೃತ್ಯಾ ಪ ತ್ರಿದಶ ದೈತ್ಯರು ಕೂಡಿ ತೀವ್ರದಿಂದಲಿ ತಾವು ಮಂದರ ಶೈಲ ತವಕದಿ ತಂದಾಗ ಉದಧಿಯೊಳಿಟ್ಟು ಸರ್ಪವನೆ ಸುತ್ತಿದರು ಪಿಡಿದು ಮುದದಿಂದ ಕಟಿಯಲು ಮುನಿದು ಮಹರೋಷದಿ ಅದು ನೋಡಿ ಮದನಾರಿ ಕಂಗೆಡಲು ಅಂಜದೆ ನೀನು ಸುರರು ಸುಖಬಡಲು 1 ವಾತನ ಸುತನಾಗಿ ವಾಲಿಯ ತಮ್ಮನ ಕೂಡಿ ಭೂತಳಾಧಿಪ ರಾಮಚಂದ್ರನ ಪದವಾರಿ ಜಾತಕ್ಕೊಂದನೆ ಮಾಡಿ ವೃತ್ತಾಂತವನು ಪೇಳಿ ಆತುರದಲಿ ಪುರಹೂತನಂದನ ನಿ ರ್ಭೀತನ ಕೊಲ್ಲಿಸಿ ಶರಧಿಯನು ಹಾರಿ ಸೀತೆಗುಂಗುರ ಕೊಟ್ಟು ಬೆಳೆದ ಚಲ್ವ- ವಾತಹತಮಾಡಿ ಲಂಕಾಪುರವ ಸುಟ್ಟ 2 ಪಾಂಡುಚಕ್ರವರ್ತಿ ಕುಂತಿಯಲಿ ಜನಿಸಿ ಮಂಡಲದೊಳು ಮಹಾಶೂರನೆನಿಸಿ ವಿಷ ಉಂಡು ದಕ್ಕಿಸಿಕೊಂಡು ಉರಗಲೋಕದಲ್ಲಿದ್ದು ತಾಂಡ ಭಾದಿಯ ಗೆದ್ದು ಹಿಡಿದು ಹಿಡಂಬನ ಹಿಂಡಿ ಬಕಾಸುರನ ಖಂಡರಿಸಿ ಕೀಚಕನ ಮಂಡಲದೊಳಗೆ ನಿಂದೆ ವಿರಾಟನ್ನ ದಿಂಡುಗೆಡುಹಿ ಕದನದಲಿ ವೇಗ ಕೊಂದೆ 3 ಬುದ್ಧಿಹೀನರಾಗಿ ಬಾಳಿದ ಮನುಷ್ಯರ ಶುದ್ಧಾತ್ಮರನ ಮಾಡಿ ಶುಭವೇಗದಲಿ ಶ್ರೀ ಮುದ್ರೆಧಾರಣ ಕೊಟ್ಟು ಜ್ಞಾನಾಂಬುಧಿಯೊಳಿಟ್ಟು ಅದ್ವೈತ ಮತ ಕಾಲಿಲೊದ್ದು ಪರವಾದಿ ಎದ್ದೋಡಿ ಬಂದು ತಿರುಗಿ ನಿಮ್ಮ ಉದ್ಧರಿಸಿ ಅವರವರ ದೋಷ ಹೋಯಿತು ಕರಗಿ4 ಭೂವ್ಯೊಮ ಪಾತಾಳದೊಳಗೆ ಎದುರುಗಾಣೆ ವಾಯು ಹನುಮ ಭೀಮ ಮಧ್ವನೆಂದಿನಿಸಿದೆ ಕಾಯಜ ಜನಕನ ಪದವ ಪೂಜಿಸಿ ಅಂಬು ಜೆಯನ ಪದವಿ ಪಡೆದು ಹರ ಇಂದ್ರಾದಿಗಳಿಗೆ ನಾಯಕನೆನಿಸಿದೆ ನಾನಾ ದುರಿತವಾಗಿ ಮಾಯಿಗಳೆಲ್ಲ ತರಿದೆ ಸುಭಕುತರ ಆಯತದಿಂದ ಪೊರೆದೆ ವಿಜಯವಿಠ್ಠಲರಾಯ ವೆಂಕಟನ ಒಲಿಮೆಯಿಂದಲಿ ಮೆರೆದೆ5
--------------
ವಿಜಯದಾಸ
ನಿನ್ನ ದರುಶನಕೆ ಬಂದವನಲ್ಲವೊ ಪುಣ್ಯವಂತರ ದಿವ್ಯ ಚರಣ ನೋಡಲಿ ಬಂದೆ ಪ ಎಲ್ಲೆಲ್ಲಿ ನಿನ್ನ ವ್ಯಾಪ್ತತನವಿರಲಿಕ್ಕೆ ಇಲ್ಲಿಗೆ ಬರುವ ಕಾರಣವಾವುದೊ ಸೊಲ್ಲಿಗೆ ಕಂಭದಲಿ ತೋರಿದ ಮಹಾಮಹಿಮ ಅಲ್ಲಿ ಇಲ್ಲೇನಯ್ಯ ಬಲ್ಲ ಭಜಕರಿಗೆ1 ಕರೆದಾಗಲೆ ಓಡಿ ಬಂದೊದಗುವ ಸ್ವಾಮಿ ಮರಳಿ ಗಾವುದ ಎಣಿಸಿ ಬರಲ್ಯಾತಕೊ ನೆರೆ ನಂಬಿದವರಿಗೆ ಆವಲ್ಲಾದರೇನು ಅರಿದವರ ಮನದೊಳಗೆ ನಿಂದಾಡುವ ಚಂದವಾ 2 ಕಠಿನವೊ ನಿನ್ನ ಭಕುತರನ ನೋಡುವ ಲಾಭ ಸಟೆಯಲ್ಲಾ ವೇದಗಳು ಸಾರುತಿವಕೊ ವಟು ಮೊದಲಾದ ವೈಷ್ಣವಾಗ್ರೇಸರಂಘ್ರಿ ತ್ರಿಟಿಯಾದರೂ ಎನಗೆ ಸೋಕಲು ಗತಿಗೆ ದಾರಿ3 ಧ್ಯಾನಕ್ಕೆ ಸಿಲುಕುವನೆ ನಿನ್ನ ಕಾಣಲಿಬಹುದು ಜ್ಞಾನಿಗಳು ಎಂತು ಬರುವರೊ ಅಲ್ಲಿಗೆ ಅನಂತ ಜನುಮದಲ್ಲಿ ಜಪ ತಪ ಹೋಮ ವ್ರತ ಏನೇನು ಮಾಡಿದರು ಇಷ್ಟು ಜನ ಕೂಡುವದೇ4 ನೀನಿದ್ದ ಸ್ಥಾನದಲಿ ಸಕಲ ಪುಣ್ಯಕ್ಷೇತ್ರ ನೀನಿದ್ದ ಸ್ಥಾನದಲಿ ಸರ್ವತೀರ್ಥ ನೀನಿದ್ದ ಸ್ಥಾನದಲಿ ಸಮಸ್ತ ತಾತ್ವಿಕರು ನಾನಿತ್ತ ಬರುವುದು ನಿನಗೆ ತಿಳಿಯದೆ ಸ್ವಾಮಿ5 ಇದನೆ ಲಾಲಿಸು ಜೀಯಾ ನಿನ್ನದೊಂದೇ ಮೂರ್ತಿ ನಿದರುಶನವಲ್ಲದೆ ಮಿಗಿಲಾವುದೊ ಪದೋಪದಿಗೆ ಮಧ್ವಮತ ಹೊಂದಿದ ಸುಜನರ ಹೃದಯದೊಳಗಾನಂತಪರಿ ನಿನ್ನ ರೂಪಗಳು 6 ಭಳಿರೆ ತಿರುಮಲರಾಯ ನಿನ್ನ ಕರುಣಾ ರಸಕೆ ವೊಲಿದು ಭಕುತರಿಗಾಗಿ ಮದುವೆ ಹಮ್ಮಿಕೊಂಡೆ ಸುಲಭ ದೇವರದೇವ ವಿಜಯವಿಠ್ಠಲ ವೆಂಕಟಾ7
--------------
ವಿಜಯದಾಸ
ನಿನ್ನ ದಾಸನು ನಾನು ಎಂತಾಹೆನಯ್ಯಅನ್ನಂತ ಅಪರಾಧಕಾಕರಾದವನು ಪ. ಅರುಣೋದಯವ ಜರಿದು ಆಹ್ನಿಕ ಕರ್ಮವ ತೊರೆದುಪೊರೆವ ನಿನ್ನಡಿಯ ಮರೆದುದುರುಳರಿಗೆ ಬಾಯ್ದೆರೆದು ದೈನ್ಯದಲಿ ಪಲ್ಗಿರಿದುಮರಿಯಾದೆಗೆಟ್ಟು ತಿರಿದುಇರುಳು ಹಗಲೆನ್ನದೆ ಈ ವಿಧದಿ ಹೊಟ್ಟೆಯಹೊರೆದು ಇದು ಪುಣ್ಯ ಇದು ಪಾಪವೆಂದರಿಯದವ 1 ಜಟ್ಟಿಗಳ ಮನೆಯ ನಾಯಂತೆ ಒಳ್ಳೆಬಟ್ಟೆಗಳತೊಟ್ಟವರ ಹಿಂದೆ ತಿರುಗಿಅಟ್ಟುಂಡು ಬಾಳಿಬದುಕಿದ ತಮ್ಮ ಹಿರಿಯರುಕೆಟ್ಟು ಮುರಿದುದನು ಪೇಳಿಉಟ್ಟ ಅರಿವೆಯ[ಕೋರಿ] ಹೊಟ್ಟೆ ಬಾಯನೆ ತೋರಿಕೊಟ್ಟುದಕೆÉ ತೃಪ್ತನಾಗದೆ ಅವರ ಬಯ್ವವನು 2 ವೃತ್ತಿ ಅಲ್ಲದ ಶೂದ್ರ ವೃತ್ತಿಗಳನನುಸರಿಸಿ ಅ-ಕೃತ್ಯ ಶತಗಳನು ಮಾಡಿಸತ್ಯ ಶೌಚಂಗಳ ಬಿಟ್ಟು ಶ್ರವಣ ಮನನಾದಿ ಪ್ರ-ಸಕ್ತಿಗಳ ಹೋಗಲಾಡಿಉತ್ತಮರು ತಾಯಿತಂದೆ ಗುರುಹಿರಿಯರುಗಳಅರ್ಥಗಳನಪಹರಿಸಿ ಅವರ ನಿಂದಿಸುವನು 3 ಪರ್ವ ಉಪರಾಗ ದ್ವಾದಶಿ ಅಯನಗಳಲ್ಲಿಸರ್ವವಿಹಿತಗಳ ಮೀರಿಉರ್ವಿಯೊಳು ಉಳ್ಳ ಯೋಗ್ಯರನೆಲ್ಲ ಹಳಿದೆನ್ನನಿರ್ವಾಹಗಳನೆ ತೋರಿದುರ್ವಿಚಾರದಿ ಸ್ವಲ್ಪಧನಕಾಗಿ ಎನ್ನೊಳಿಹಪೂರ್ವಸಂಚಿತಮಂತ್ರ ತುಚ್ಛರಿಗೆ ಮಾರಿದವ 4 ಛಲ ಚಾಡಿ ಡಂಭ ಮಿಥ್ಯಾಜ್ಞಾನ ದುರ್ವಿಷಯಕುಲಸತಿಯ ಕೂಡೆ ಕಲಹಕಳವು ಕಠಿಣೋಕ್ತಿ ದುಷ್ಟಾನ್ನಭೋಜನ ಮದುವೆ-ಗಳ ಮುರಿವ ಪಾಪಚಿಂತೆಹಳಿವ ಹರಿವಾಸರ ವ್ರತಭಂಗದಿಂದ ನಾನಾಗಿಸುಲಭ ಹಯವದನನ್ನ ಮರೆತ್ಹಾಳುಹರಟೆಯವ 5
--------------
ವಾದಿರಾಜ
ನಿನ್ನ ನಂಬಿದವರ್ಗೆ ನಿನ್ನಂದವೆ ಬಂದುದಿನ್ನೇನಿನ್ನೇನು ಪ್ರಸನ್ನ ರಾಘವ ದಶ'ಧವಾುತೆ'್ಮುರ'ನ್ನೇನಿನ್ನೇನು ಪಕೊರಳು ಗೊ್ಯುಕತೆುಂದ ಕಂಗೆಡುತಿದೆ ಲೋಕ'ನ್ನೇನಿನ್ನೇನುಪರರ ಬಾಧೆಗೆ ಕಲ್ಲುಹೊರುವಾಟ ಒದಗಿದುದಿನ್ನೇನಿನ್ನೇನುಧರೆಯ ಬಗೆದು ಬೆರತಿಂಬ ಕಾಲವು ಬಂದುದಿನ್ನೇನಿನ್ನೇನುಕರುಳ ಬಗೆದು ರಕ್ತಗುಡಿವ ಭಯವು ತೋರಿತಿನ್ನೇನಿನ್ನೇನು 1ದಾನಗೈಯಲು ಸ್ಥಾನ ಹಾನಿಯಾಗುವದಾುತಿನ್ನೇನಿನ್ನೇನುಜ್ಞಾನ ಕುಲದಿ ಪುಟ್ಟ ಕ್ಷಾತ್ರ ಜೀವನ ಬಂದುದಿನ್ನೇನಿನ್ನೇನುಮಾನಿನಿ ದುರುಳನಾಧೀನವಾಗುವದಾುತಿನ್ನೇನಿನ್ನೇನುಸೂನುವ ಪರರೆತ್ತಿಕೊಂಡೊಯ್ವ ತೆರಬಂದುದಿನ್ನೇನಿನ್ನೇನು 2ಉಟ್ಟ ಬಟ್ಟೆಯು ಪೋಪ ಸಮಯ ತಾನೊದಗಿದುದಿನ್ನೇನಿನ್ನೇನುದಿಟ್ಟ 'ಪ್ರರು ರಾವುತರಾಗುವಂತಾುತಿನ್ನೇನಿನ್ನೇನುದಿಟ್ಟಿಸಿ ನೋಡೆ ನೀನೆಮ್ಮನೆನ್ನುವರಾಗದಿನ್ನೇನಿನ್ನೇನುಹುಟ್ಟು ಹೊಂದುಗಳಡಗುವ ಕಾಲ ತಾ ಬಂದುದಿನ್ನೇನಿನ್ನೇನು 3ಕರುಣದಿಂದೀಕ್ಷಿಸಿ ಕಾಯ್ವವ ನೀನಿರಲಿನ್ನೇನಿನ್ನೇನುದುರಿತ ಕೋಟಿಗಳ ದ'ಪುದು ನಿನ್ನಯ ನಾಮ'ನ್ನೇನಿನ್ನೇನುಸ್ಮರಣೆ ಮಾತ್ರದಿ ಧನ್ಯರಹೆವಾವು ಭಯ ಪೋಪುದಿನ್ನೇನಿನ್ನೇನುವರ ವಾರಣಸೀವಾಸದಿಚ್ಛೆ ಪುಟ್ಟಿದುದೆಮಗಿನ್ನೇನಿನ್ನೇನು 4ಕರುಣದಿಂ ಚಿಕ್ಕನಾಗಪುರದಿ ನೀನೆಲಸಿದೆುನ್ನೇನಿನ್ನೇನುಗುರುವಾಸುದೇವಾರ್ಯ ರೂಪುದಾಳಿದೆಯಾಗಿುನ್ನೇನಿನ್ನೇನುಕರೆದು ಜ್ಞಾನಾಮೃತವೊರೆದು ರಕ್ಷಿಸಿದೆ ನೀನಿನ್ನೇನಿನ್ನೇನುಚರ[ಣ ಕಮಲಗಳ ನಂಬಿದೆವು ನಾನಿನ್ನೇನಿನ್ನೇನು] 5
--------------
ತಿಮ್ಮಪ್ಪದಾಸರು
ನಿನ್ನ ನಂಬಿದೆ ಓ ಶಾರದೇ ಪ ಸನ್ನುತಾಂಗಿ ಇನ್ನೂ ಕರುಣ ಬಾರದೆ ಅ.ಪ ಸಕಲಕಳಾಧರೆ ಸಕಲಕಲಾಧರೆ ವಿಕಸಿತ ಸುಮಹಾರೆ ಜ್ಞಾನಸಮೀರೆ ಪ್ರಕಟಿತ ಮಧುರ ಜಪಮಾಲಾಕರೆ ಶಿಖಿ ವೀಣಾಧರೆ ಮೃದುತನುರುಚಿರೆ 1 ಧಾತಾ ಮನೋನ್ಮಣಿ ಧ್ವಾಂತ ಸಂಹಾರಿಣಿ ಪಾತಕವಾರಿಣಿ ಮಾತೆ ಕಲ್ಯಾಣಿ ಭೂತಲ ಕಣ್ಮಣಿ ರಾಗತರಂಗಿಣಿ ಖ್ಯಾತಚರಿತ ಮಾಂಗಿರಿವರತೋಷಿಣಿ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಿನ್ನ ನಂಬಿದೆ ಶಾರದೇ | ಭಕ್ತಿಗೆ ಮತಿ- | ಯನ್ನು ಪಾಲಿಸ ಬಾರದೇ ಪ ನಿನ್ನ ನಂಬಿದೆ ನಾನು | ಎನ್ನ ಜಿಹ್ವೆಯೊಳ್ ನೀನು | ಖಿನ್ನತ್ವಗೊಳ್ಳದೆ | ಸನ್ನುತೆ ನೆಲಸವ್ವ ಅ.ಪ ಜಡಮತಿಯನು ತ್ಯಜಿಸಿ | ನೀ ದಯದಿಂದ | ದೃಢಮತಿಯನು ಪಾಲಿಸಿ || ಕಡಲ ಶಯನ ಸೊಸೆ | ಪೊಡವಿಗಧಿಕವಾದ | ಮೃಡನ ಸ್ಮರಿಪ ಜ್ಞಾನ | ತಡೆಯದೆ ಕರುಣಿಸು 1 ತ್ವತ್ಸಂಗವನು ಪಾಲಿಸಿ | ನೀ ದಯದಿಂದ | ದುಸ್ಸಂಗವನು ಛೇದಿಸಿ || ಸತ್ಸಂಗವೆನಗಿತ್ತು | ಮತ್ಸಂಗ ನೀನಾಂತು | ತ್ವತ್ಸುಗುಣ ನುಡಿಗಳ | ಹೃತ್ಸರೋಜದೊಳಿರಿಸೆ 2 ಸನುಮತ ಪಥಗಾಣಿಸಿ | ಕಏತೆಗಳ | ಮನದಲ್ಲಿ ಸ್ಥಿರಗೊಳಿಸಿ || ಜನನ ಮರಣವೆಂಬ | (ವನ) ದೊಳಗೆನ್ನನು | ವಿನಯದಿ (ಂದಲಿ) ಪಾರ | ಗಾಣಿಸೆ ಶಾರದೆ 3 ದಾಸನೆಂದೆನಿಸೆಯೆನ್ನ | ಕೀತಿ9ಗಹಿತ | ದೋಷವ ತ್ಯಜಿಸೆ ಮುನ್ನ || ಕ್ಲೇಶಗೈವರ ಮನ | ಲೇಸಿನೊಳ್ ವಂಚಿಸಿ | ವಾಸವ ಕರುಣಿಸೆ 4 ಚಿನುಮಯಾತ್ಮಕನಿರುವ | ವೈಕುಂಠದ | ಘನತರ (ಸತ್) ಪದವಿಯ || ಪತಿ | ಪಿತ ಶ್ರೀನಿವಾಸನ | (ಅನುಯಾಯಿ) ಸೇವೆಗ | ಳೆನಗಿತ್ತು ಪಾಲಿಸೆ 5
--------------
ಸದಾನಂದರು
ನಿನ್ನ ನಂಬಿದೆನೊ ಬ್ರಹ್ಮಣ್ಯತೀರ್ಥಾರ್ಯಾ ಸನ್ನುತಚರಣಪಾವನ ಸುಚರ್ಯಾ ಪ ಘನ್ನ ಭವದ ಭಯವನ್ನು ಕಳೆದು ಯತಿ ರನ್ನ ಎನ್ನನು ಧನ್ಯನ ಮಾಡೋ ಅ.ಪ. ಪುರುಷೋತ್ತಮ ಸುತೀರ್ಥರ ಪ್ರಿಯ ಸುಕುಮಾರ ದುರಿತೌಘಜೀಮೂತ ಚಂಡ ಸಮೀರ ಸುರುಚಿರ ತುಳಸಿ ಪಂಕಜಮಣಿಹಾರ ಧರಿಸಿ ಮೆರೆವೊ ದಿನಕರನವತಾರ ಕರುಣದಿ ತವ ಶ್ರೀಕರಚರಣಾಂಬುಜ ದರುಶನವನು ಕೊಡು ಗುಣಗಣನಿಧಿಯೇ 1 ಸೇವಕಜನರಿಗೆ ದೇವತರುವೆನಿಪ ಶ್ರೀವಿಠಲನಪಾದತಾವರೆ ಮಧುಪ ಕೋವಿದ ಜನರು ಸಂಭಾವಿಸಿ ಸ್ತುತಿಪ ಪಾವನ್ನ ಪಾದಾರ್ಚಿತ ಭಾವಜ ಮುನಿಪ ಪಾವನ ಸುಮತರ ಜೀವರ ಚಂದ್ರನೆ ಪಾವನ ಮತಿ ಕೊಡು ನೀ ಒಲಿದೆನಗೆ 2 ಪರ ತತ್ವಜ್ಞಾನ ವರವ ಪಾಲಿಸು ಸರ್ವವಿದ್ಯಾಪ್ರವೀಣ ನರಸಿಂಹವಿಠಲ ಶ್ರೀಹರಿ ಸನ್ನಿಧಾನ ಕರುಣಾಪಾತ್ರನೆ ದಿವ್ಯವರಪೂರ್ಣಜ್ಞಾನ ಹರಿಗುರುಭಜನ ತ್ವತ್ಪದ ವ್ಯಾಸಾರ್ಯರ ಗುರುವೆಂದೆನಿಸಿದೆ ಧರೆಯೊಳು ಮೆರೆದೆ 3
--------------
ನರಸಿಂಹವಿಠಲರು
ನಿನ್ನ ನೀ ತಿಳಿದುಕೊಳ್ಳಣ್ಣ ಇನ್ನಾರ ಪ ಸತ್ತು ಹೋಗುದು ಕಾಷಾಯಮತ್ತೆ ಮಮತೆ ಮಾಡುವಿ ನೀ 1 ಪಾದ ಪಿಡಿವದಕೆ ಭ್ರಾಂತಿ ಮುಸುಕ್ಯಾತಕೆ ನಿನ್ನ 2 ನಾನಾ ದೇಶವ ನೋಡಿದಿಏನ ಗಳಿಕಿ ನೀ ಮಾಡಿದಿ 3 ಮಾನವ ತನುವು ದೊರಕಿತು ಜ್ಞಾನದ ರತ್ನ ಸಿಕ್ಕಿತು 4 ಸಾರಾಯ ವಾದ ಶಬ್ದವನೆಸಾರಿದ ಜ್ಞಾನಬೋಧ ಮುನಿ 5
--------------
ಜ್ಞಾನಬೋದಕರು
ನಿನ್ನ ನೋಡಿ ಧನ್ಯನಾದೆನೋ | ಶ್ರೀವೇದ ವ್ಯಾಸನಿನ್ನ ನೋಡಿ ಧನ್ಯನಾದೆನೋ ಪ ನಿನ್ನ ನೋಡಿ ಧನ್ಯನಾದೆ | ಯಜ್ಞಕುಂಡ ದೇಶದಲ್ಲಿಘನ್ನ ಮಹಿಮ ಪೂರ್ಣ ಸಂ | ಪನ್ನ ಮೂರುತಿ ಬಾದರಾಯಣ ಅ.ಪ. ಪಾದ ಭಜಿಸಿ ಅರ್ಚಿಸಿರುವ 1 ನವಸುಮೂರ್ತಿಗಳಲಿ ನಿನ್ನ | ನವ ಸುಭಕ್ತಿಗಳನು ಬೇಡೆನವ ಸುಮಹಿಮೆ ತೋರೆ ಕರಗ |ಳವಲಂಬನದಿ ದಯವ ತೋರ್ದ 2 ಅಷ್ಟು ಮೂರ್ತಿಗಳಲಿ ತಮ್ಮ | ಇಷ್ಟ ಮೂರ್ತಿಯನ್ನೆ ಇರಿಸಿಅಷ್ಟದಿಗಿಭದಂತೆ ಮೆರೆದ | ಅಷ್ಟ ಶಿಷ್ಟರಿಗಿತ್ತ ಮುನಿಯು 3 ನಿರ್ಜರ ಅಂಘೇರಿ ಮಣೂರ 4 ವಿನುತ | ವಕ್ರ ಮನದ ಜನಕೆ ಅಮಿತ್ರ 5 ಯೋಗ ಪಟ್ಟಕ ವಸನ ಚೆಲ್ವ | ಯೋಗದಾಸನ ಕೂರ್ಮದುಪರಿನಾಗನಂತೆ ಪೋಲ್ವ ಜಟಾ | ಸೋಗಿನಿಂದ ಮೆರೆವ ದೇವ 6 ಮೂರ್ತಿ ಭೋಕ್ತ ತ್ರಯ ಸುಮೂರ್ತಿಯಜ್ಞ ಗುರು ಗೋವಿಂದ ವಿಠಲ | ಭಗ್ನ ಗೈಸೊ ಮಾಯ ಪಟಲ 7
--------------
ಗುರುಗೋವಿಂದವಿಠಲರು