ಒಟ್ಟು 1900 ಕಡೆಗಳಲ್ಲಿ , 109 ದಾಸರು , 1384 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಂಸಾರವೆಂದೆಂಬ ಮಾರಿಗೆ ಸಿಲುಕಿದೆಕಂಸಾರಿ ಕರುಣದಿಂದೆನ್ನ ನೋಡಯ್ಯ ಪ ಬಲಿಗಾಯತವಾದ ಕುರಿ ಮೆಲುವಂತೆ ಹೆಡ-ತಲೆ ಮೃತ್ಯುವನರಿಯದೆ ಮತ್ತನಾದೆ 1 ಕಂಡು ಕಂಡು ಪತಂಗ ಕಿಚ್ಚಿನೊಳ್ ಬೀಳ್ವಂತೆಕಂಡ ಕಂಡ ಹೇಯ ವಿಷಯಗಳಿಗೆರಗುವೆ 2 ಸತಿ ಅನ್ಯರರಸುವಂತೆಗತಿ ನೀನಿರಲು ಅನ್ಯರೆ ಗತಿಯೆಂಬೆ 3 ಒಂದು ಮೊಲಕೆ ಆರು ಹುಲಿ ಬಂದಡರುವಂತೆಬಂದೆಳೆವುತಲಿವೆ ಅರಿಷಡ್ವರ್ಗಗಳು 4 ಜೋಗಿಗಾಗಿ ಕೋಡಗ ಪಾಟು ಬಡುವಂತೆಲೋಗರಿಗಾಗಿ ನಾ ತೊಳಲಿ ಬಳಲುವೆ 5 ಶುಕನ ಓದುಗಳಂತೆ ಎನ್ನ ಓದುಗಳಯ್ಯಅಕಟಕಟವೆನಗೆ ಬಂಧಕವಾದುವೊ6 ಮಿಂದು ಮಿಂದು ಆನೆ ಹುಡಿ ಹೊಯ್ದು ಕೊಂಬಂತೆಮಂದಮತಿಯಾದೆ ಕರುಣಿಸೊ ಕೃಷ್ಣ 7
--------------
ವ್ಯಾಸರಾಯರು
ಸಂಸಾರವೆಂಬ ಸರ್ಪದ ಬಾಧೆಯನ್ನು ಕಂಸಾರಿ ಕೇಳು ಸೈರಿಸಲಾರೆ ಇನ್ನು ಪ ಕಚ್ಚಿ ಬಹುಕಾಲ ಕಡಿಮ್ಯಾಗಲೊಲ್ಲದು ಹೆಚ್ಚುತಲೆ ವೋಗುತಿದೆ ಪೇಳಲೇನು ಅಚ್ಯುತನೆ ನಿಮ್ಮ ನಾಮ ಮಂತ್ರದೌಷಧಿಯನ್ನು ಮುಚ್ಚಿ ಕೊಡುಯೆಂದು ಮನದಲ್ಲಿ ನಿಂದು 1 ಮತ್ತೆ ಮಹಾಪಾಪವೆಂಬ ವಿಷ ತಲೆಗೇರಿ ತತ್ತರಿಸಿ ಕಳವಳಗೊಳಿಸುತಲಿದೆ ಉತ್ತಮರಾ ಜ್ಞಾನವೆಂಬುತ್ತಾರವನೆ ಕೊಟ್ಟು ಹತ್ತುನೂರು ನಾಮದೊಡೆಯ ಹರಿಯೆ ಸಲಹೆನ್ನ 2 ಬೆಂದ ದುರ್ವಿಷಯಗಳು ಹಂದಿನಾಯ್ಗಳಿಗುಂಟು ಎಂದು ದೊರೆವುದೋ ದ್ವಿಜಾಗ್ರಕುಲವು ಎಂದಾದರೂ ಒಮ್ಮೆ ಬಯಸುವಂತಿ ಭಕುತಿ ಕೊಡು ತಂದೆ ಕದರುಂಡಲಗಿ ಹನುಮಯ್ಯನೊಡೆಯಾ 3
--------------
ಕದರುಂಡಲಗಿ ಹನುಮಯ್ಯ
ಸಾಕಯ್ಯ ಸಾಕು ಸಾಕಯ್ಯ ನಮ- ಗ್ಯಾಕಯ್ಯ ಇನ್ನವಿವೇಕ ಸಂಗತಿಪ ಬುದ್ಧಿ ಶೂನ್ಯರಿಗೆ ಬುದ್ಧಿಯನು ಹೇಳಲು ಮದ್ದಾನೆ ಮೈತೊಳೆವಂತಾಯಿತು 1 ಮರುಳ ಜನರಿಗೆ ಧರ್ಮವನರುಹಲು ಕುರುಡಗೆ ಕನ್ನಡಿ ತೋರಿದಂತಾದಿತು 2 ಶ್ರೀದವಿಠಲನೆಂದಜ್ಞಾನಿಗೆ ಬೋಧಿಸೆ ಬೋರ್ಗಲ್ಲ ಮುಂದೆ ವದರಿದಂತಾಯಿತು 3
--------------
ಶ್ರೀದವಿಠಲರು
ಸಾಕಲಾರದಿರೆ ಎನ್ನ ಯಾಕೆ ಪುಟ್ಟಿಸಿದ್ಯೊ ಹರಿಯೆ ಪ ಬೇಕು ಬೇಡದಿದ್ದರೆ ನಿನಗೆ -----ಯುಗ ಜನರೊಳೆನ್ನಾ ಅ.ಪ ಹಿಂದಿನಿಂದ ಬಂದಾ ದೋಷಗಳಿಂದ ನಾನು ಬಹಳ ಬೆಂದು ಬಳಲುತ ನಿನ್ನ ಪಾದವ ಹೊಂದಿ ನಿನ್ನ ಸೇರೆ ಬಂಧು ಬಳಗ ನೀನೆ ಇನ್ನು ಎಂದು ಮೊರೆಯ ಇಡಲೂ ತಂದೆ ತಾಯಿಗಳು ಕಂದನ ಪೊರೆದಂತೆ ಮಂದರಧರ ಶ್ರೀ ಮಾಧವ ಕೃಷ್ಣಾ 1 ವಸುಧೆಯೊಳಗೆ ನಿನ್ನ ಬಿಡದೆ ಮನಸಿನಲಿ ಸ್ತುತಿಸುವಾ ಪಶುಪತಿ ಪಾಲಕನೆ ಎನ್ನ ಪಾಲಿಸೊ ಕೈ ಹಿಡಿದೂ ಶಿಶುವಿನಂದ ನಿನ್ನ ನಿಜ ಸೇವಕ ಜನರಂತೆ ಸೂನುವು ಎನಗೆ ಅಡಗಿಸಿ ರಕ್ಷಿಸಿದರೆ ವಸುಧೆಯೊಳಗೆ ಎನ್ನ 2 ಎಲ್ಲ ಜನಕೆ ಇನ್ನು ಕರ್ತನಲ್ಲವೇನೊ ನೀನು ಎಲ್ಲರಂತೆ ಎನ್ನಾ ಕರುಣಿಸಿ ಯಾಕೆ ನೋಡವಲ್ಲೆ ಹೊಲ್ಲನೊ ನಾ ನಿಮಗೆ ನಿಮ್ಮ ಧ್ಯಾನದಲ್ಲಿರುವನಲ್ಲೊ ಭಲೆ `ಹೆನ್ನೆ ವಿಠ್ಠಲನೆ' ನೀನಿಷ್ಟು ಭಾಗ್ಯವಂತ ನಾಗಿ ಬಡವನ ನೋಡಿ 3
--------------
ಹೆನ್ನೆರಂಗದಾಸರು
ಸಾಕು ಸಾಕು ಇನ್ನು ಕಷ್ಟ ಅನೇಕಾ ಬೇಕು ಬೇಕು ನಿನ್ನ ಕರುಣ ಪ ಹಿಂದಿನಿಂದ ಎನ್ನ ಹೊಂದಿಬಂದ ದೋಷದಿಂದ ನಾನು ಬಹು ಬಳಲುತಲಿ ----------------------- ಎಂದು ಎಂದು ನಿಮ್ಮಂದ ದ್ವಯಪಾದ ಹೊಂದುವೆ ನಾನೆಂದೆನುತಲಿ----- ಬೆಂದುನೊಂದು ಈ ಚಂದದಿ ಈ ಪರಿಯಿಂದ ನಿನ್ನನಾ ಹೊಗಳುತಲಿ--- ಬೆಂದು ನೊಂದೆ ನಿನ್ನ ಮಂದಿರ ಸೇವಕನೆಂದು ಬಹಳ ಗೋವಿಂದ ಕೃಪಾಳು 1 ಘೋರ ರಾಕ್ಷಸ----ರಿದ ಅವರ ಸಂಹಾರವ ಮಾಡಿದ ಬಲವಂತ ------------------ ವೀರಶೂರ ಗಂಭೀರ ಕೃಪಾಕರ ವಾರಿಜೋದ್ಭವನ ಪಡೆದಂಥಾ ಸಾರಿಸಾರಿ ನಿಮ್ಮ ಸ್ಮರಿಸುವವರಿಗೆ ಸರ್ವ ಸಂಭ್ರಮವು ಮಾಡುವಂಥಾ ಕೀರುತಿ-----ರನು ಯನುತಲಿ ------ನಿಮ್ಮ ಸರ್ವೋತ್ತಮನಂಥಾ 2 ಗಾಧೆ ಬೋಧೆ ಗೊಳಗಾದೆ ಈ ಪರಿ ವೇದಾಂತ---ದೊಂದರಿಯೆ ಸಾಧು ಸಾಧಕರ ಬೋಧೆಗಳೆಂಬುವ ಸದಾ ಕರ್ಣದಿ ಕೇಳರಿಯೆ----ದರೆ ಮಾಧವ ಮಧುಸೂದನ ಧೊರಿಯೆ ವೇದ ಆದಿ ಅಗಾಧ ಗೋಚರನೆ ಪತಿ 'ಹೆನ್ನ ವಿಠ್ಠಲ’ ಹರಿಯೆ 3
--------------
ಹೆನ್ನೆರಂಗದಾಸರು
ಸಾಕುಮಾಡಿಸಭವ ಕಾಕುಜನರ ಸಂಗವ ಬೇಕು ನಿಮ್ಮ ಚರಣಧ್ಯಾನ ಲೋಕದವರ ಗೊಡವಿನ್ನೊಲ್ಲೆ ಪ ಖ್ಯಾತಿವಂತರೆಂದು ಬರಿದೆ ಮಾತಿನಿಂದ ಪೇಳುತಿನಿತು ನೀತಿಮಾರ್ಗವರಿಯಧಮ ಜಾತೀಹೀನರ ಜತೆ ಜನ್ಮಕೆ 1 ಕೆಟ್ಟಗುಣದ ರಾಶಿ ಮೊಟ್ಟೆ ಹೊಟ್ಟೆಯೊಳಗೆ ಇಟ್ಟುಕೊಂಡು ಶ್ರೇಷ್ಠರಂತೆ ನಟಿಸಿ ಪರರಿಗರಿಷ್ಟವರಿಪದುಷ್ಟರ ಗೋಷ್ಠಿ 2 ನಿತ್ತು ಕಾಯೋ ಕರುಣದೆನ್ನ ಮುಕ್ತಿದಾತೆನ್ನಯ್ಯ ರಾಮ 3
--------------
ರಾಮದಾಸರು
ಸಾಧಿಸದೆ ಹೊಳೆಯ ಹೃದಯದೊಳಿಹ್ಯ ಗೆಳಿಯ ಧ್ರುವ ಸಾಧಿಸಬೇಕೊಂದು ಪಾಲ ಭೇದಿಸಿ ನೋಡುವದ್ಹತ್ತುಪಾಲ ಎದುರಿಡುವಂತೆ ಗೋಪಾಲ ಬುಧಜನ ಪ್ರತಿಪಾಲ 1 ಸಾಧನವೆಂಬುದೆ ಸುಪಥ ಬೋಧವೆ ಸದ್ಗುರುಮಾರ್ಗ ಸ್ವಹಿತ ಸದಮಲಾನಂದಭರಿತ ಇದೇ ಶಾಶ್ವತ 2 ಸಾಧಿಸಿ ಸದ್ಗುರು ಕೃಪೆಯಿಂದ ಭೇದಿಸು ಮಹಿಪತಿ ನಿನಗಿಂದು ಚೆಂದ ಹೃದಯದೊಳ್ಹಾನ ಮುಕುಂದಬದಿಯಲಿ ಗೋವಿಂದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧು ಸಜ್ಜನ ಸಂತರ ಸಲಹುವ ಪತಿ ಹರಿ ಯಶೋದ ನಂದನಾ ಪ ಕನಕಾಂಬರಧರ ಕಮಲಸಂಭವ ಪಿತ ಇನಕುಲ ಭೂಷಣ ವೀರಾಧಿವೀರ ಘನಮಕುಟಧರ ಶಿರ ಕಾರುಣ್ಯಸಾಗರ ಅನಿಮಿತ್ತ ಬಂಧು ಜಗದಾದಿ ಪ್ರಿಯ ದಿನಕರ ಕೋಟಿ ತೇಜ ದೇವಾದಿದೇವ ದೀನರಕ್ಷಕ ರಾಮ ಜಾನಕಿ ಪ್ರೇಮಾ ಅನಿಮಿಷ ರೊಡೆಯ ಶ್ರೀ ಆದಿನಾರಾಯಣ ಕನಿಕರಿಸಿ ಎನ್ನಮೇಲೆ ಕೃಪೆ ಮಾಡೋ ಗೋವಿಂದಾ1 ವಾಸುಕಿಶಯನ ಶ್ರೀವಸುದೇವ ತನಯಾ ಸಾಸಿರನಾಮದ ಸರ್ವೇಶಾ ಈಶಾ ವಾಸುದೇವಾಕೃಷ್ಣಾ ವಾರಿಜೋದರ ಶ್ರೀನಿವಾಸ ವೇದೋದ್ಧಾರ ವೈದೇಹಿ ರಮಣ ಭೂಸುರ ವಂದಿತ ಪೂಜಿತ ಸರ್ವತ್ರ ಶ್ರೀಶವೇಣನಾದ ಶೀತ ಜನಪೋಷಾ ಭಾಸುತ ಕೀರ್ತಿ ವಿಶಾಲ ಭಕ್ತವತ್ಸಲ ದಾಸನು ನಾ ನಿನ್ನ ದಯಮಾಡಿ ರಕ್ಷಿಸೆನ್ನ 2 ಸುಂದರ ವದನ ಸುರೇಂದ್ರ ಅರ್ಚಿತ ಪರಮಾನಂದ ಮುಕುಂದ ಮಹಾದೇವನೆ ಹೊಂದಿ ನಿಮ್ಮಯ ಚರಣದ್ವಂದ್ವ ಪೂಜಿಪ ರಂದದಿ ಪುರವಂತ ಬಿರುದುಳ್ಳ ದೇವಾ ಸಿಂಧು ಶಯನನಾದ 'ಶ್ರೀಹೆನ್ನವಿಠ್ಠಲಾ’ ಕರೆದೆನ್ನ ------------------------- ------ ಎನ್ನನ್ನು ಕರುಣಿಸು ಕಾಯೋ
--------------
ಹೆನ್ನೆರಂಗದಾಸರು
ಸಾಂಬ ಶಿವ ಶರಣರಿಗೊಂದು ಶರಣಾರ್ಥಿ ಪ ನರಲೋಕದೊಳಗೆ ಸಂಚಾರವ ಮಾಡುವ ಪರಮಾತ್ಮ ಪರಿಪೂರ್ಣ ಎಲ್ಲ ಜೀವದೊಳೆಂದು ಅರಿತಂಥವನಿಗೊಂದು ಶರಣಾರ್ಥಿ ಮರೆಹೊಕ್ಕ ದೀನರನು ರಕ್ಷಿಪ ಪುಣ್ಯ ಪುರು ಪುರುಷ ಪ್ರಯತ್ನದಿಂದುದ್ಯೋಗವನು ಮಾಳ್ಪ ಸರಿವಂಥವರಿಗೊಂದು ಶರಣಾರ್ಥಿ 1 ಧಾರಣಿಯೊಳು ಪೆಸರೊಡೆದು ರಂಜಿಸುವಂಥ ಕಾರುಣಿಕರಿಗೊಂದು ಶರಣಾರ್ಥಿ ದವರಿಗೊಂದು ಶರಣಾರ್ಥಿ ನಿತ್ಯ ಕರ್ಮವ ರಚಿಸುವ ಚಾರು ಶೀಲರಿಗೊಂದು ಶರಣಾರ್ಥಿ ಸ್ಸಾರ ಮಾಡಿದಗೊಂದು ಶರಣಾರ್ಥಿ 2 ಕೆರೆಭಾವಿ ದೇವಾಲಯಗಳ ಕಟ್ಟಿಸಿ ದೇವರುತ್ಸವವನು ಬರಿಸುವಗೆ ದ್ಧರಿಸಿ ಭುಂಜಿಪಗೊಂದು ಶರಣಾರ್ಥಿ ಪರದಾರ ಪರದ್ರವ್ಯ ಪರದ್ರೋಹವಿಲ್ಲದ ಮಹಾ ಪುರುಷರಿಗೊಂದು ಶರಣಾರ್ಥಿ ಹರಿಹರರೊಳಗೆ ಭೇದವ ಮಾಡಿ ನಡೆಯದ ದುರಿತ ದೂರರಿಗೊಂದು ಶರಣಾರ್ಥಿ 3 ಸತ್ತು ಹುಟ್ಟುವ ಭವಶರಧಿಯ ಗೆಲುವಂಥ ಉತ್ತಮರಿಗೊಂದು ಶರಣಾರ್ಥಿ ನಿತ್ಯ ಸಾಲಿಗ್ರಾಮಂಗಳನು ಪೂಜಿಸಿ ಹರಿ ತೀರ್ಥಗೊಂಬನಿಗೊಂದು ಶರಣಾರ್ಥಿ ಕೃತ್ತಿ ವಾಸನ ಆಗಮೋಕ್ತದಿ ಪೂಜಿಪ ಭಕ್ತಿವಂತರಿಗೊಂದು ಶರಣಾರ್ಥಿ ತತ್ವ ವಿಚಾರ ವೇದಾಂತದ ಅರ್ಥವ ಯಾ ವತ್ತರಿದವಗೊಂದು ಶರಣಾರ್ಥಿ 4 ಅರವಟ್ಟಿಗೆಯನು ಚೈತ್ರದೊಳಿಕ್ಕಿ ಜನರಿಗೆ ನೀರೆರಸಿದವರಿಗೊಂದು ಶರಣಾರ್ಥಿ ಸಿರಿ ತುಳಸಿಯನ್ನು ನೇಮದಲಿ ಪೂಜಿಸುವಂಥ ಹರಿ ಶರಣರಿಗೊಂದು ಶರಣಾರ್ಥಿ ತರಣಿಯೆ ತ್ರಿಗುಣಾತ್ಮಕನೆಂದು ಹೃದಯದೊಳರಿ ದೆರಗುವಗೊಂದು ಶರಣಾರ್ಥಿ ಮರುಸುತನ ಕೋಣೆ ವಾಸ ಲಕ್ಷ್ಮೀಶನ ಚರಣ ಪಂಕಜಕೊಂದು ಶರಣಾರ್ಥಿ 5
--------------
ಕವಿ ಪರಮದೇವದಾಸರು
ಸಾರ ಪ ಪ್ರಶ್ನೆ:ಯಾತರಿಂದಲಿ ಕೇಳೆನ್ನಯಮನ ಬಹು ಪೂತವಾಗುವದು ಗುರುವರೇಣ್ಯ ಭೂತಳದಲಿ ಪರಮ ಪಾವನ ತೀರ್ಥ ಅನುದಿನ 1 ಉತ್ತರ:ಶ್ರಧ್ದ ಪೂರ್ವಕ ಶ್ರವಣಸಾಧನ ಮನ ಶುದ್ಧಿಗೆ ಇದೆ ಮುಖ್ಯ ಕಾರಣ ಉದ್ಭವಿಸುವದು ಭಕ್ತಿ ಜ್ಞಾನ ಅನಿ ಪ್ರಶ್ನೆ:ವಶವಲ್ಲಭವದಿ ಬಂದೊದಗುವ ನಾನಾ ವ್ಯಸನಗಳನು ಪರಿಹರಿಸುವ ಬೆಸಸುವದೆನ ಗೀ ಉಪಾಯವ ಚರಿಸಲೇನು ಗಿರಿಗುಹದಲಿ ತ¥ವÀ| ಉ.ವಸುದೇವಸುತನ ಸಂಕೀರ್ತನ ನಾನಾ ವ್ಯಸನ ಪರಿಹಾರಕ್ಕೆ ಕಾರಣ ಮುಸುಕಿರ್ದ ಮೇಘಕ್ಕೆ ಪವಮಾನ ಭವ ವ್ಯಸನಾಂಧಕಾರಕ್ಕೆ ರವಿಕಿರಣ 2 ಪ್ರ:ಏನು ಮಾಡಲಿ ಸದುಪಾಸನ ದೈವಾ ಧೀನದಿ ಬರುವ ವಿಘ್ನಗಳನ್ನು ಕಾಣೆನು ಪರಿಹಾರ ಕೃತಿಯನ್ನು ಇದ ಉ:ಬಿಡದಿರೊ ಕೃಷ್ಣನ್ನ ಸ್ಮರಣವ ಬರುವ ಯಡರುಗಳನು ಪರಿಹರಿಸುವ ದೃಢಮನದಲಿ ತಿಳಿವದು ಜವ ಪೋಪ ದ್ಯಡರು ಪ್ರಾಪಕವಾದ ಪಾತಕವ 3 ಪ್ರ:ಮೋಕ್ಷಫಲದ ಕಮಲಾಕ್ಷಣ ಅಪ- ರೋಕ್ಷ ವಾಗುವದಕ್ಕೆ ಸಾಧನ ಶಿಕ್ಷಿಸುವದು ಸದುಪಾಸನ ಆ ಉ:ಆದರದಿ ನೈರಂತರ್ಯದಿ ಯುಕ್ತ ಮಾಧವನಂಘ್ರಿಯ ಸ್ಮರಣದಿ ಸಾಧಿತ ಬಿಂಬಾಪರೋಕ್ಷದಿಸ ನ್ಮೊದ ಭರಿತನಾಗಿರು ಜಗದಿ 4 ಪ್ರ:ಏನು ಮಾಡಲು ಮುಕ್ತಿಸಾಧನವಾದ ಜ್ಞಾನ ವಿಜ್ಞಾನ ಸಂಪದವನ್ನ ಕಾಣುವದೆಂದಿಗೆ ತಿಳಿಸೆನ್ನ ಮುಂದೆ ಸಾನುರಾಗದಲಿ ಬೇಡುವೆ ನಿನ್ನ ಉ:ಭಕ್ತಿ ವೈರಾಗ್ಯದಿ ಕೂಡಿದ ಪುರು ಷೋತ್ತಮನಂಘ್ರಿ ಸಂಸ್ಮøತಿಯಿಂದ ಚಿತ್ತದಿ ಜ್ಞಾನ ವಿಜ್ಞಾನದ ಉತ್ಪ- ಮೋದ 5 ಪ್ರ:ಜಲಜನಾಭನ ಪದಯುಗದಲ್ಲಿ ನಿ- ಶ್ಚಲ ಭಕ್ತಿಯೆನಗೆ ಪುಟ್ಟುವದೆಲ್ಲಿ ಬಲುವಿಧ ಭಕುತಿಯ ಬಗೆ ಉ:ಜ್ಞಾನ ವೈರಾಗ್ಯದಿ ಕೂಡಿದ ನಂದ ಸೂನು ಪಾದಾಂಬುಜ ಸ್ಮøತಿಯಿಂದ ಪ್ರಾ- ಣೇಂದ್ರಿಯಾತ್ಮಾದಿಗಳಿಂದ ಅಧಿಕ ಕಾಣಿಸುವದು ಭಕ್ತಿ ಜವದಿಂದ 6 ಪ್ರ:ದೃಢತರವಾದ ವೈರಾಗ್ಯವ ಪೊಂದಿ ಪಡಿವೆನೆಂದಿಗೆ ಮಾಧವನ ದಯವಾ ಗಡನೆ ಪೇಳಿದಕೇನು ಪಾಯವ ನಿ- ಉ:ಜ್ಞಾನ ಭಕ್ತಿಗಳಿಂದ ಕೂಡಿದ ಶಿರಿ ವೇಣು ಗೋಪಾಲನ ಸ್ಮøತಿಯಿಂದ ಕಾಣುವಿ ಸಧೃಡ ವೈರಾಗ್ಯದ ಭಾಗ್ಯ ಶ್ರೀನಿಧಿ ಚರಣಾನು ಗ್ರಹದಿಂದ7 ಪ್ರಃಘನಲೌಕಿಕದಿ ಕೇಳೆನ್ನಯ ಮನ ನಿ- ಪುಣತರವೆನಿಸುವ ದನುದಿನ ಎನಗೆಂದಾಧ್ಯಾತ್ಮ ತತ್ವದಿ ಮನವೆರಗ ಲೆನಿಸುವದದೆ ಮುಕ್ತಿಸಾಧನ ಉ:ಅನುದಿನ ಶ್ರವಣಾದಿ ಸಾಧನ ದಿಂದ ಜನಿತ ಸದ್ಭಕುತಿಯೆ ಕಾರಣ ಮನದೊಳಾಧ್ಯಾತ್ಮ ತತ್ವಗಳನ್ನ ನೋಡಂ ಜನಯುಕ್ತ ನಯನ ದಂದದಿ ಮುನ್ನ 8 ಪ್ರಃಏನಿರುವುದು ಬಿಂಬಲಕ್ಷಣ ಮತ್ತೇ ನೇನು ಮಾಳ್ಪ ಕರ್ಮಗಳನ್ನು ಸಾನುರಾಗದಿ ಪೇಳುವದುಮುನ್ನ ಮನದಿ ಧ್ಯಾನವ ಮಾಡುವೆ ಪ್ರತಿದಿನ ಉ.ಇಂತಿರುವದು ಬಿಂಬ ಲಕ್ಷಣ ಬಹಿ ರಂತರದಲಿ ತಿಳಿವದು ಮುನ್ನ ಸಂತತ ಸೃಷ್ಟ್ಯಾದಿಗಳನ್ನ ದೇ ಹಾಂತಃ ಸ್ವಪ್ನದಿ ಸಂದರುಶನ 9 ಪ್ರ.ಎಲ್ಲಿರುವನು ಬಿಂಬ ದೇಹದಿ ಸಿರಿ ನಲ್ಲನು ವ್ಯಾಪ್ತವೆಂಬರು ಜಗದಿ ಎಲ್ಲದೇಶ ಗುಣಕಾಲದಿಯನ್ನ ಉ:ನಿಂತಿರುವನು ಸರ್ವಜೀವರ ಹೃದ ಯಾಂತರದಲಿ ವ್ಯಾಪ್ತನು ಪೂರಾ ಸಂತತ ಜೀವನ ವ್ಯಾಪಾರ ತಾನೆ ನಿಂತು ಮಾಡಿಸುವನು ನಿರ್ಧಾರ 10 ಪ್ರ:ಎಂತು ಮಾಡಲಿ ಬಿಂಬೋಪಾಸನ ಮುಕ್ತಿ ಪಂಥಕ್ಕೆ ಮುಟ್ಟಲು ಸೋಪಾನ ಅ- ನಂತ ಗುಣಾತ್ಮಕ ಬಿಂಬನ ಗುಣ ಚಿಂತಿಪರಿಗೆ ಬಂಧ ಮೋಚನ ಉ:ಇದೆ ತಿಳಿಬಿಂಬೋಪಾಸನÀ ಚತು ರ್ವಿಧ ದಿಂದಲಾತ್ಮ ಸಮರ್ಪಣ ಮೊದಲು ಆತ್ಮಾನಮೇವಾರ್ಪಣ ದ್ರವ್ಯ ಸದ್ಗುಣ ಕರ್ಮಸಮರ್ಪಣ 11 ಮಾಡಲಾವ ಧರ್ಮಗಳ ಮಾಡಲಿ ಮುನ್ನ ಜೀವರ ಬಂಧ ವಿಮೋಚನ ಮಾಳ್ಪ ಭಾಗವತ ಧರ್ಮಗಳನ್ನು ತಿಳಿದು ಶ್ರದ್ಧೆಯಿಂದಲ್ಲಿ ಮಾಡೋ ಮುನ್ನ ಹೃದ್ಗತ ಬಿಂಬೋಪಾಸಾನ ಮಾಡಿ ಸಿದ್ಧನಾಗಿ ಬಾಳೆಲೋ ಮುನ್ನಾ 12 ಪ್ರ:ಎಂತಿರುವದು ಗುರುಲಕ್ಷಣ ಮುಕ್ತಿ ಪಂಥವ ತೋರಿಸುವವರನ್ನ ಚಿಂತಿಸುವೆನು ಮನದೊಳುಮುನ್ನ ಭಗ ವಂತನ ಮಹಿಮೆ ಪೇಳುವರನ್ನ ಉ:ಜಲಜನಾಭನÀ ಪದಯುಗಲವ ಬಿಟ್ಟು ಚಲಿಸದಿರು ಲವ ನಿಮಿಷಾರ್ಧವ ಇಳಿಯೊಳಗಿಂಥಾ ಸದ್ವೈಷ್ಣವರನ್ನು ತಿಳಿದು ಸೇವಿಸುತಿರು ಮಾನವಾ 13 ಪ್ರ:ಏನು ಕೊಡಲಿ ಗುರುದಕ್ಷಿಣ ಈ ಕ್ಷೋಣಿಯಿತ್ತರು ಸರಿಗಾಣೆ ನಾ ಧ್ಯಾನವ ಮಾಡುವೆ ಪ್ರತಿದಿನಾ ಬಿಂಬ ಜ್ಞಾನವ ಕೊಟ್ಟು ರಕ್ಷಿಪರನ್ನ ಉ:ಆತ್ಮಾರ್ಪಣ ಮೇವದಕ್ಷಿಣ ಸಿರಿ ನಾಥ ನಿಂದನ್ಯ ವಸ್ತುಗಳನ್ನು ಪ್ರೀತಿಸರೆಂದಿಗೂ ಧನವನ್ನು ಈ ಮ- ಹಾತ್ಮರ ಸ್ಮರಿಸುತಲಿರು ಮುನ್ನ 14 ಕ್ಷೇತ್ರ ಕಾರ್ಪರದೊಳಗಿರುವಂಥ ಲಕ್ಷ್ಮಿ ಯುಕ್ತ ನರಸಿಂಹನೊಲಿಸುವಂಥ ಸ್ತೋತ್ರ ಮಾಲಿಕೆಯನ್ನು ಪಠಿಸುತ್ತ
--------------
ಕಾರ್ಪರ ನರಹರಿದಾಸರು
ಸಾರವಲ್ಲ ಸಂಸಾರವಿದು ಪ ತನುವಿನ ಪಾಶವು ವನಿತೆರ ಪಾಶವು | ಉಣಲುಡುಪಾಶಾ ಹಣಗಳ ಪಾಶವು | ಮನೆ ಪಶು ಪಾಶಾ ಇನಿತಿಹ ಪಾಶದ | ಮನುಜಗ ಸುಖವೆ 1 ಭ್ರಾಂತಿಯ ಮಂದಿರ ಚಿಂತೆಯ ಮಡುವು | ಪಂಥವು ನರಕದ ಕಂತುವಿನಾಶ್ರಯ | ಖಂತಿಯ ನೆಲೆಭವ ಜಂತುರ ನೋಡಲು | ಸಿಂತರ ಬೀಳುವಂತಿನಾ ಜನುಮಾ 2 ತಾಪತ್ರಯ ನಾನಾ ಪರಿಯಿಂದಲಿ | ವ್ಯಾಪಿಸಿಕೊಂಡಿಹ ದೀಪರಿ ಭವಣಿ | ಆ ಪರಗತಿ ನಿನಗಾಪೇಕ್ಷಾದರ | ಪಡಿ ತಂದೆ ಮಹಿಪತಿ ಬೋಧಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಾರಿ ಚೆಲ್ಯದ ನೋಡಿ ಹರಿರೂಪದ ಮಹಿಮ ಧ್ರುವ ತುಂಬಿ ತುಳುಕುತದೆ ಕುಂಭಿನಿಯೊಳು ಪೂರ್ಣ ಇಂಬುದೋರುತಲ್ಯದೇ ಡಿಂಬಿನೊಳಗೆ ತನ್ನ ಹಂಬಲಿಸಿ ನೋಡಿರ್ಯೋ ಗುಂಭ ಗುರುತವ 1 ಬಳೆದುಕೊಂಬುವಂತೆ ಹೊಳೆವುತದೆಲ್ಲ ಕಡಿಯ ಥಳಥಳಗುಡುತ ಸುಳುವು ತೋರುತಲ್ಯದೆ ಝಳಝಳಿಸುವ ಪ್ರಭೆ ಮಳೆಮಿಂಚುಗಳು 2 ಇಡಿದು ತುಂಬೇದ ನೋಡಿ ಅಡಿಗಡಿಗಾನಂದದಲಿ ಅಡಿಮೇಲು ತಿಳಿಯದೆ ಎಡಬಲದೊಳಾದ ಮೂಢ ಮಹಿಪತಿ ಪ್ರಾಣ ಬಿಡದೆ ಸಲಹುತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾರಿದ ಭಕ್ತಸಂಸಾರಿ ಮಾಲಿಂಗ ಕ್ಷೀರ ಗ್ರಾಮದಿ ನಿಂತ ಧೀರ ಮಾಲಿಂಗ ಪ ಹರ ಹರ ಮಹಾದೇವ ಶಿವಮಾಲಿಂಗ ವರ ಶಂಭೊ ಗಿರಿವಾಸ ಶಂಕರ ಮಾಲಿಂಗ ಉರಗ ಭೂಷಣ ಗಂಗಾಧರನೆ ಮಾಲಿಂಗ ಪರದೈವ ಶಶಿಮೌಳಿ ಗರುವ ಮಾಲಿಂಗ 1 ಖಂಡಲಪತಿಯೆ ದೋರ್ದಂಡ ಮಾಲಿಂಗ ತಂಡದ ಸುರರೊಳ್ ನಂಜುಂಡ ಮಾಲಿಂಗ ರುಂಡಮಾಲೆಯ ಧರಿಸಿಕೊಂಡ ಮಾಲಿಂಗ ಕೆಂಡಾಕ್ಷತೇಜ ಮಾರ್ತಾಂಡ ಮಾಲಿಂಗ 2 ಮಾರಹರನೆ ಶ್ರುತಿಸಾರ ಮಾಲಿಂಗ ಧೀರ ಬಾಣನ ದ್ವಾರ ಸಾರಿ ಮಾಲಿಂಗ ಮೂರುಪುರ ವೀರ ಸಂಹಾರಿ ಮಾಲಿಂಗ ಘೋರ ಸಂಸಾರ ಭವದೂರ ಮಾಲಿಂಗ 3 ಬ್ರಹ್ಮಾದಿ ಸುರವಂದ್ಯ ಹರ್ಮಿ ಮಾಲಿಂಗ ನಿರ್ಮಲ ರೂಪಕ ಧರ್ಮಿ ಮಾಲಿಂಗ ಕರ್ಮಬಂಧದ ನರವರ್ಮಿ ಮಾಲಿಂಗ ಉರ್ವಿಯೊಳು ನೀ ಬಹಳ ಪೆರ್ಮಿ ಮಾಲಿಂಗ 4 ನೀಲಕಂಠನೆ ನಿಗಮಶೀಲ ಮಾಲಿಂಗ ಪಾಲ ಕರಶೂಲ ಕಪಾಲಿ ಮಾಲಿಂಗ ಕಾಲ ಕಲ್ಪಾಂತಕ ಜಾಲ ಮಾಲಿಂಗ ಲೋಲಾಸ್ಥಿಮಾಲ ಸುರಮೂಲ ಮಾಲಿಂಗ 5 ಪ್ರಣವ ರೂಪಕ ಪಾರ್ವತಿ ಮಾಲಿಂಗ ತ್ರಿಣಯ ಗಣಸೇವಪರ ಧಣುರೆ ಮಾಲಿಂಗ ಮಣಿ ಕರ್ಣಾಭರಣ ಮಾಲಿಂಗ ಅಣುಮಹಾರೂಪ ಗುಣನಿಧಿಯೆ ಮಾಲಿಂಗ 6 ಪಂಥ ಬೇಡೆನ್ನೊಳು ನಿಶ್ಚಿಂತ ಮಾಲಿಂಗ ಸಂತತ ಸಲಹೆನ್ನ ಕಾಂತ ಮಾಲಿಂಗ ಅಂತರಾತ್ಮಕನಾದ ಶಾಂತ ಮಾಲಿಂಗ ಚಿಂತಿತಾರ್ಥವ ತೋರುವಂಥ ಮಾಲಿಂಗ 7 ಬೇಡಿದ ವರಗಳ ನೀಡೊ ಮಾಲಿಂಗ ಮಾಡಿದ ಸೇವೆಯ ನೋಡೊ ಮಾಲಿಂಗ ಜೋಡಾಗಿ ನಿನ್ನೊಳು ಕೂಡೊ ಮಾಲಿಂಗ 8 ಭೂಮಿಗೆ ವರಾಹತಿಮ್ಮಪ್ಪನಂತೆ ಗ್ರಾಮ ಮಂದಿರದೊಳು ನೆಲಸಿಹನಂತೆ ಪ್ರೇಮದಿ ಅದನೆಲ್ಲ ಕಡಿದುಕೊಡುವಂತೆ ಈ ಮಹಾ ಮಾಲಿಂಗ ಸ್ವಾಮಿ ದಯವಂತೆ 9
--------------
ವರಹತಿಮ್ಮಪ್ಪ
ಸಾರಿದೆನೊ ನಿನ್ನ ವೆಂಕಟರನ್ನ ಪ. ನೀರಜನಯನನೆ ನಿರ್ಮಲಗುಣಪೂರ್ಣ ಅ.ಪ. ಅನಾಥನು ನಾನು ಎನಗೆ ಬಂಧು ನೀನುನಿನ್ನವನೆಂದು ನೋಡೊ ನೀನಾಗಿ ದಯಮಾಡೊ 1 ಎನ್ನ ಕುಂದುಗಳನ್ನು ಎಣಿಸಲಾಗದೊ ದೇವಪನ್ನಗಾದ್ರಿವಾಸ ನೀನೆ ನಿರ್ದೋಷ 2 ದೇಶದೇಶದವರ ಪೊರೆವಂತೆ ಪೊರೆಯೆನ್ನಶೇಷಾಚಲಘನ್ನ ಶ್ರೀಶ ಹಯವದನ 3
--------------
ವಾದಿರಾಜ
ಸಾಲವ ಕೊಡದಿದ್ದರೆ ನಿನಗೆ | ನಾಲಿಗೆಂಬೊದು ಇಲ್ಲೊ ಉತ್ತರಾಡುವುದಕ್ಕೆ ಪ ಏಸು ದಿವಸದಿಂದ ಎಲ್ಲರ ಸೇವಿಸಿ | ಕಾಸು ಕಾಸಿಗೆ ನಾನು ಕೂಡಹಾಕಿ | ಲೇಸು ಉಳ್ಳವನೆಂದು ಕೊಟ್ಟರೆ ನೀ ನಿಂತು | ಮೋಸಗೊಳಿಸುವರೆ ಕಾಣಿಸಿಕೊಳ್ಳಿದಲೆ 1 ಬಡ್ಡಿ ಏನಾಯಿತೊ ಕೊಟ್ಟ ಗಂಟಿಗೆ ನಿನ | ಗಡ್ಡ ಬೀಳುವೆನೊ ಸಾಲವ ತೀರಿಸೊ | ಖಡ್ಡಿ ಮಾನವನೆಂದು ನೋಡ ಸಲ್ಲಾ ಎನ್ನ | ದೊಡ್ಡವರು ಕಂಡರೆ ಅಡ್ಡಗೈಸದೆ ಬಿಡರು 2 ಗುಣಿಸಿ ನೋಡಿದರೆ ಏನಯ್ಯಾ ಮುತ್ತಯ್ಯಾ ಯಾ ಕೆ ನಿಲ್ಲದೆ ನಿನಗೆ ಸಾಲವಿತ್ತೆ | ಧನವ ಎಣಿಸಲಾಗಿ ನೆಲೆಗಾಣೆಯಿನ್ನು ಸು | ಮ್ಮನೆ ಕೂಗದೆ ನಿಂದು ಋಣವ ತಿದ್ದು ಚಲುವಾ3 ಸಾಲಾ ಬಂದರೆ ಒಳಿತೆ ಇಲ್ಲದಿದ್ದರೆ ಕೇಳು | ಮೇಲೆ ಮೇಲೆ ಬಿದ್ದು ನಿನ್ನ | ಕೀಲಿಸಿ ಬಿಡದಲೆ ತೊಲಗ ಬಿಡೆ ದೇವಾ 4 ಬತ್ತಲಿದ್ದವರಿಗೆ ಭಯವಿಲ್ಲವೆಂಬೊ ಗಾದಿಗೆ | ನೆತ್ತಿಯೆತ್ತಿ ಮೋರೆ ತೋರ ಬೇಕೊ | ಹತ್ತರ ಇದ್ದು ತೀರಿಸಬೇಕೊ ಸರ್ವೇಶಾ | ಸುತ್ತಿ ಭಳಿರೆ ಸಂದೇಹ ಬೇಡ ನೀ ಬರೆದ ಬರಹ ನೋಡು 5 ಬಡತನ ಬಂದರಾಗ ನಾ ನಿನಗೆ ಬಾಯಿ | ಬಿಡುವೆನೆ ದೈನ್ಯದಲಿ ಭಾಗ್ಯವಂತಾ | ತಡ ಮಾಡಲಾಗದು ಕೊಡು ಎನ್ನ ಒಡಿವೆ | ಪೊಡವಿಲಿ ಪರರಿಗೆ ಸಲ್ಲದೊ ಸರ್ವೇಶಾ 6 ಗತಿಯಿಲ್ಲ ನಾನಪ್ರಮಾಣಿಕ ನಾನಹುದೆಂದು | ಸಂತತ ಸಂತರ ಮುಂದೆ ನುಡಿದು ಬಿಡುವೆ | ಪತಿತ ಪಾವನ ನಮ್ಮ ವಿಜಯವಿಠ್ಠಲ ನಿನ್ನ | ನುತಿಸಿಕೊಳ್ಳುತ್ತ ಕಾಲಕ್ರಮಣ ಮಾಡುವೆ 7
--------------
ವಿಜಯದಾಸ