ಒಟ್ಟು 1326 ಕಡೆಗಳಲ್ಲಿ , 96 ದಾಸರು , 1086 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಯೆ ಅಚ್ಯುತಾನಂತ ಗೋವಿಂದದುರುಳಹಿರಣ್ಯಕ ಅಸುರ ಅವತರಿಸಿದರೆ ಎಲ್ಲಿಪರಿಪರಿಯ ಲೋಕ ಪಾತಾಳ ಸ್ವರ್ಗವ ಗೆದ್ದುಪಡೆದು ಅವನ ಸತಿಯ ಸುರಪತಿಯು ಎಳೆತರಲುಅಲ್ಲಿ ಗರ್ಭದಲಿ ಪ್ರಹ್ಲಾದನಿಹನೆಂದುಹರಿಯೆ ಚಂಡಹಿರಣ್ಯಕ ಅಸುರ ದಂಡಿಸುವದುಷ್ಟಮರ್ದನ ದೂರಾತಿದೂರ ಜಗ-ಪರಿಪರಿಯಿಂದ ತುತಿಸುತ್ತ ಕರಗಳ ಮುಗಿಯೆಇತ್ತ ಸುರರೆಲ್ಲ ತಮ್ಮ ತತ್ತಸ್ಥಾನಕೆ ಪೋಗೆಒರೆದೊರೆದು ಪೇಳಿ ಬಹು ಬಗೆ ಬಗೆಯಿಂದಲಿನಮ್ಮ ಅಂತರ ತತ್ವ ನಿಶ್ಚಯವೆ ಇದು ಸರಿಅನ್ಯರಲ್ಲವು ನಾವು ಹಿತವರೆ ನಿನಗಿನ್ನುಭಿನ್ನ ದೇಹ್ಯವುನೋಡುಮುನ್ನಿಂದಲಿ ಇನ್ನುಬಾಧ್ಯ ಬಾಧಕ ಹರಿಯೆ ಸಾಧ್ಯ ಸಾಧನಕೆಹರಿಚಂಡಮಾರ್ಯರು ತಾವು ಚೆಲುವ ಬಾಲಕಿ ಕೇಳುಆವ ವಿಪರೀತವನೆ ಅಲ್ಲದ್ದು ನುಡಿದನುಏಸುಬಗೆಯಿಂದ ಉಪಾಯದಲಿ ಕೇಳಿದರುಈಸು ದಿನ ಇವ ಎನ್ನ ಸುತನು ಎಂದರಿದಿದ್ದೆನಾನಾ ಬಗೆಯಿಂದ ವಧೆಗೇನೇನು ಉಪಾಯಎಲ್ಲಿ ಪ್ರಹ್ಲಾದ ನಿನ್ನೊಡೆಯನು ಇನ್ನುಭುಂಗಿ ಭುಂಗಿಗೆ ಬ್ರಹ್ಮಾಂಡವೆಲ್ಲ ಗದ್ದರಿಸಿನ್ನುಬಿರಬಿರನೆ ಕಣ್ಣುಗಳ ಬಿಡುವುತ್ತ ಹೂಂಕರಿಸಿಕೆಡಿಸದೆ ತಾನಿತ್ತವರಸತ್ಯವೆಂದೆನಿಸಿಪರಿಪರಿಯಿಂದ ಸಿರಿದೇವಿಗೆಇದೆ ಸಮಯವೆಂದುಸಿರಿಅಜಭವಾದಿಗಳೆಲ್ಲಪರಿಪರಿಯಿಂದಸುರ ಋಷಿಪಿತೃ ಗಂಧರ್ವಕಂದ ಪ್ರಹ್ಲಾದನ್ನ ಮುಂದಕ್ಕೆ ಕರೆದು ನಿಮ್ಮಮೆಚ್ಚಿದೆನು ಪ್ರಹ್ಲಾದ ವರವ ಬೇಡೆಂದೆನಲುಆಗ ಪ್ರಹಲ್ಲಾದಗೆ ಕರಕಮಲಗಳಿಂದಹರಿಯೆ ಜಗಕಿನ್ನು ಇರತೋರಿನ್ನು ಪ್ರಹಲ್ಲಾದಜಯ ಜಯತು ಪ್ರಹ್ಲಾದವರದ ಜಗದಾಧಾರ
--------------
ಗೋಪಾಲದಾಸರು
ಹಲವನು ಯೋಚಿಸಲೇನು ಫಲ ಬರಿ |ಜಲವನು ಮಥಿಸಲಿನ್ನೇನು ಫಲ ||ಕುಲಜನು ಶೂದ್ರನ ಲಲನೆಯ ಕೂಡುತ |ಸಲಿಲದಿ ಮುಳುಗಿದರೇನು ಫಲ ||ಜಲಜಾಕ್ಷನ ಪದದೊಲುಮೆಯಿಲ್ಲದೆನರ|ಬಲಯುತ ತಾನೆನಲೇನು ಫಲ1ಪರಸತಿ ಪರಧನದಾಸೆಯೊಳಿರ್ಪನು |ಸುರನದಿಮುಳುಗಿದರೇನು ಫಲ ||ಪರಮಾತ್ಮನ ತಮ್ಮ ಹೃದಯದಿ ಕಾಣದೇ |ಧರೆಯಲ್ಲರಸಿದರೇನು ಫಲ2ಕಾಣದೆ ಕುಣಿಯೊಳು ಬಿದ್ದಾನೆಯು ಬಲು |ತ್ರಾಣಿಯಂತಾದರಿನ್ನೇನು ಫಲ ||ಕ್ಷೋಣಿಯೊಳಗೆ ಹರಿದಾಸರ ಜರೆಯುತ |ಜ್ಞಾನಿಯು ತಾನೆನಲೇನು ಫಲ3ಧೂರ್ತತನದಿ ಹಣ ಗಳಿಸುತ ಲೋಭದಿಸ್ವಾರ್ಥವೆಂದೆನಿಸಿದರೇನು ಫಲ ||ಪಾತ್ರಾಪಾತ್ರವನೆಣಿಸದೆ ದಾನವ |ಅರ್ತಿಯೊಳೆಸಗಿದರೇನು ಫಲ4ಪತಿಯನು ವಂಚಿಸಿರೂಪಮಾರುವಸತಿ|ವ್ರತಗಳ ಮಾಡಿದರೇನು ಫಲ ||ರತಿಪತಿಪಿತಗೋವಿಂದನ ನೆನೆಯದೆ |ಗತಿಯನುಬಯಸಿದರೇನು ಫಲ5xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ
ಹಸೆಗೆ ಬಾರೊ ಕುಸುಮನಯನ ಕುಶಲದಿಂದಲಿ ಬೇಗನೆಶಶಿಮುಖಿಯರ್ ಕರೆವರು ನಿನ್ನ ವಸುಧೆಪಾಲ ರಾಮನೊಪಅಸಮ ವೀರನನೆ ಗೆಲಿದು ಪಶುಪತಿಯ ಬಿಲ್ಲಮುರಿದುಕುಸುಮಬಾಲೆ ಕೊರಳೊಳ್ ಧರಿಸಿವಸುಧೆಸುತೆಯಕರವಪಿಡಿದು1ಕುಶಲದೀ ನಗುನಗುತಾ ಪಸರಿಸುವಿ ಮಂಟಪಕೆ ಹಸೆಗೆಧರಣಿ ಪಾಲರ್ ಲಜ್ಜೆವೆರಸಿ ಮೆರೆವ ಕೀರ್ತಿ ವಿಬುಧರೊಲಿಸೆದುರುಳದೈತ್ಯ ಕ್ರೋಧವರಿಸಿ ಸುರರುರಗದಲ್ಲಿನಿಂದುಹರುಷದಿ ಸುಮ ವರ್ಷವನ್ನು ಕರೆಯುವರೈ ಸರಸದೀ2ಜನಕರಾಯ ಹರುಷದಿಂದ ಜನಕೆ ಓಲೆ ಬರೆಯೆ ಕಂಡುಘನದಿ ದಿಬ್ಬಣ ಕೂಡಿ ಬಂದ ಜನಕ ಜನನಿಯರಿಗೆ ನಮಿಸಿಅನುನಯದಿಂ ಮನ ಓಲೈಸಿ ದನುಜಾಂತಕ ಗೋವಿಂದನೇ3<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ
ಹಾಳು ಮಾಡಿದ ಹನುಮ ಸಾಲು ವನಗಳ |ಧಾಳಿ ಕೊಟ್ಟನಿತರ ಜನಕೆ |ಕೇಳಲಿದನು ದನುಜನೆಂದು ಪಚರರು ಪೇಳಲವನು ಖತಿಯ |ಲಿರುವ ದಳವ ಕಳುಹಲದನು ||ತರಿದ ಭಯವಬಡದೆ ಮುಂದಕೆ |ಚರಣವಿಡದೆ ಬಹು ಸಮರ್ಥ 1ಹರಿಜಿತ ಬಲು ಭರದಿ ಬರಲು |ಥರವು ಸಿಗುವದಿವನ ವಶಕೆ ||ಮೂರೇಳು ಮುಖನ ಕಾಂಬುವೆನೆನುತ |ಕರವಮರೆದ ಮರುತ ಕುವರ 2ದಾನವ ಪತಿಯಲ್ಲಿ ಪೋಗಿ |ಏನು ಯೋಚನೆಯನ್ನು ಮಾಡದೆ ||ತಾನು ಗಂಭೀರ ಸ್ವರದಿ ಪೇಳ್ದ |ಪ್ರಾಣೇಶ ವಿಠ್ಠಲನ ಮಹಾತ್ಮೆಯನ್ನು 3
--------------
ಪ್ರಾಣೇಶದಾಸರು
ಹೆಣ್ಣ ನಿಚ್ಛಿಸುವರೆ ಮೂಢ - ಇದನುಕಣ್ಣು - ಮೈ ಮನಗಳಿಂಗಳಿಂ ಸೋಂಕಲು ಬೇಡ ಪ.ತಾಯಾಗಿ ಮೊದಲು ಪಡೆದಿಹುದು - ಮತ್ತೆಬಾಯಯೆಂದನಿಸಿ ಕಾಮದಿ ಕೆಡಹುವುದುಕಾಯದಿ ಜನಿಸುತ ಬಹುದು - ಇಂತುಮಾಯೆಯು ನಿನ್ನ ಬಹು ವಿಧದಿ ಕಾಡುವುದು 1ಹಿತ ಶತ್ರುವಾಗಿ ಹೊಂದುವುದು - ನಿಮಿಷರತಿಗೊಟ್ಟುನಿತ್ಯ ಮುಕ್ತಿಯ ಸೆಳೆಯುವುದುಕ್ಷಿತಿಯ ಪೂಜ್ಯತೆ ಕೆಡಿಸುವುದು - ಮುಂದೆಶತಜನ್ಮಗಳಿಗೆ ಹೊಣೆಯಾಗಿ ನಿಲ್ಲುವುದು2ಬಗೆಯದು ತನುವೆಲುವುನರ - ಖಂಡ - ಅದರೊಳಗೆ ವಾಯುರಂದ್ರ ಕಿಸುಕುಳದ ಉದ್ಧಂಡಭಗವೆಂಬುದು ಮೂತ್ರದಭಾಂಡ - ಆದನೊಗಡಿಸದೆ ನಿಜಸುಖವಿಲ್ಲಕಂಡೆಯ3ವಶನಾದ ವಾಲಿಯ ಕೊಲಿಸಿಹುದು - ಹೀಗೆಹೆಸರು ಮಾತ್ರದಿ ದಶಶಿರನಳಿದಿಹುದುಶಶಿಯಂಗದಲಿ ಕ್ಷಯವಿಹುದು - ಹೀಗೆಹೆಸರು ಪಡೆದ ಕೀಚಕನನಳಿದಿಹುದು 4ಪಶುಪತಿಯ ದೆಸೆಗೆಡಿಸಿಹುದು - ಹೀಗೆವಸುಧೆಯೊಳ ಜೀವರ ಹಸಗೆಡಿಸಿಹುದುವಸುಧೇಶನ ನಾಮ ಮರೆಸುವುದು - ನಮ್ಮಅಸಮ ಪುರಂದರವಿಠಲನ ತೊರೆಸುವುದು 5
--------------
ಪುರಂದರದಾಸರು
ಹೆಸರು ತಂದಿರ್ಯಾ ಭಿಕ್ಷಕೆ |ಹೆಸರು ತಂದಿರ್ಯಾಪಅಸಮವೀರರೆಂಬ ಹೆಸರು |ಕುಶಲಗಾರರೆಂಬ ಹೆಸರುಶಶಿಯಂತೆ ಶೋಭಿಸುವ ಶಿಶುವು |ಕುಲಕೆ ಯೋಗ್ಯನೆಂಬ ಹೆಸರು ||ಹೆಸರು||1ದಾನಶೀಲರೆಂಬ ಹೆಸರು |ಮಾನವಂತರೆಂಬ ಹೆಸರು |ಸಾನುರಾಗದಲ್ಲೂ ಆತ್ಮ |ಜ್ಞಾನಿಗಳೆಂದೆಂಬ ಹೆಸರು2ಹಿರಿಯ ಮನೆತನದ ಹೆಸರು |ಗುರುಗಳಾ ಭಕ್ತಿಯಲಿ ಹೆಸರು |ಪರಮಭಾಗವತರ ತೆರದಿ |ಹರಿಯ ಶರಣರೆಂಬ ಹೆಸರು3ಪುತ್ರವತಿಯರೆಂಬ ಹೆಸರು |ಸತ್ಯಶೀಲೆಯರೆಂಬ ಹೆಸರು |ಪತಿಯ ಸೇವೆಯಲ್ಲಿನಿರತ|ಪತಿವ್ರತೇಯರೆಂಬ ಹೆಸರು4ಸತ್ಯಸಂಧರೆಂಬ ಹೆಸರು |ತತ್ವಜÕರೆಂದೆಂಬ ಹೆಸರು |ಚಿತ್ತ ಶುದ್ಧರೆನಿಸಿ | ಗೋವಿಂದಾನ |ದಾಸರೆಂಬ ಹೆಸರು5
--------------
ಗೋವಿಂದದಾಸ