ಒಟ್ಟು 2835 ಕಡೆಗಳಲ್ಲಿ , 118 ದಾಸರು , 1997 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭವ ಭಾವಿಸುವೊದು ಸೂಚನಾ | ಪಾವನರಂಗಾ | ಜೀವಾಂತರಂಗ | ಜೀವ ತುರಂಗಾ | ಹೃದ್ದಾವರೆಯಲಿ ನಿಲ್ಲು | ಆವಾವ ಬಗೆ ಸು | ರೂಹ | ಆವಾಗ ತೋರುತ ಪ ನಂದನಂದನಾ ಆನಂದಾ | ನಾಗನಾ | ಬಂಧಾ | ಬೀಡಾದೆಕ್ಕೆಂದಾ | ದಾ ಖಳನ ಕೊಂದೆ | ನಂದವ್ರಜದ ಗೋವಿಂದಾ | ಯಶೋದೆ ಕಂದಾ | ಮಂದನು ನಾನು | ಇಂದೀಗ ನೀನು | ಬಂದು ಸುರಧೇನು | ಪೊಂದು | ಇನ್ನೇನು | ಮುಂದಣ ಇಹಸುಖ | ಒಂದು ವಲ್ಲೆನು ಸಖ | ಕಂದ ನಂದದಿ ನೋಡು | ಕುಂದದ ವರವ ಕೊಡು | ಎಂದೆಂದಿಗೆ ಪದದ್ವಂದಾರವಿಂದಕೆ | ವಂದಿಸುವೆನು ಬಾ | ಲೇಂದು ವದನ ಪೊರಿಯೋದೆ ಲೋಕದ ತಂದೆ 1 ಮಂದರಧರ ಮಾಧವಾ | ಮಹದಾದಿ ದೇವಾ | ಬೋವಾ | ಇಚ್ಛೈಸಿದರೆ ಕಾವಾ | ವಾಸುದೇವ | ನಿಂದು ಕರೆವೆನು ಒಂದೆ ಮನಸನು | ತಂದು ವೇಗಾನು | ಸಂಧಿಸೆಂಬೆನು | ಚಂದ ಚಂದದಿ ನಿನ್ನನಂದಕೆ ಹಿಗ್ಗುವೆ | ಪತಿ | ಬಂಧು | ಅತಿ ದಯಾಸಿಂಧು || 2 ಶ್ರೀಲತಾಂಗೀಯ ರಮಣಾ ಶೃಂಗಾರ ಚರಣಾ | ಮಾಲಾ ಕೌಸ್ತುಭಾ ಭರಣಾ | ಶೀಲಾ ಸದ್ಗುಣಗಣ ಸಿದ್ಧಸವ್ಯಾಕಾರಣ | ನೀಲಲೋಹಿತ ಪಾಲಿಪನೆ ಪ್ರೀತ | ಮೂಲೋಕದ ದಾತಾ | ಲಾಲೀಸಿ ಮಾತಾ | ಪಾಲ ಸಾಗರಶಾಯಿ ಪತಿತ ನರನ ಕಾಯಿ | ಮೇಲುಗಿರಿಯಲಿಪ್ಪಾ | ಮೇಲಾದ ತಿಮ್ಮಪ್ಪಾ ವಾಲಗ ವೆಂಕಟ | ಶೈಲಾ ವಿಜಯವಿಠ್ಠಲಾ | ನೀಯೋ ಗೋಪಾಲಾ 3
--------------
ವಿಜಯದಾಸ
ಭವ ಶರಧಿ ತಾರಕನೇ - ನಾಕರವಾ ಮುಗಿವೆ - ಎನ್ನ ಕರುಣದಲ್ಲಿ ನೋಡೋ ಪ ಎರಡು ಭಾಗದಿ ಶ್ರೀ ಧರಣೇರಿಂದೊಪ್ಪುತತ್ವರಿತದಿ ದಯಮಾಡು ಉರಗಾಗಿರಿ ವೆಂಕಟ ಅ.ಪ. ತೇರಿನೊಳಿಪ್ಪ ಶೃಂಗಾರ ಪುರುಷನೆ ಬಂ-ಗಾರ ಮಾಣಿಕದಲಂಕಾರವ ಧರಿಸಿದಮಾರಮಣನೆ ವನಜಾರಿವದನ ಬಲು-ಶೂರ ಸಮರಧೀರ ನಾರಾಯಣ ಕಂಸಾರೇ ||ನರ ಕಂಠೀರವ ಕಮಲನಾಭನಾರದ ಮುನಿ ಪ್ರಿಯ ಚಾರು-ಚರಿತ ಪನ್ನಗಾರಿಗಮನ ಮದ-ನಾರಿಯ ಸಲಹಿದ ಧೀರ ಮುರಾರಿ 1 ನಿಂದರೆ ಬಪ್ಪುದು ಸಿಂಧುಶಯನ ದಯ-ದಿಂದ ಎನ್ನನು ನೋಡು-ಕಣ್ದೆರೆದೀಕ್ಷಿಸಿ |ಕಂದಗೊಲಿದು ಕಂಬದಿಂದ ಬಂದಸುರನಕೊಂದು ಕರುಳಹಾರ ಕಂಧರದಿ ತಾಳಿದೇ ||ಮಂದಮತಿವನೆಂದಲೇ ಗೋ-ವಿಂದ ಗೋವಳ ವೃಂದದೊಡನೆ ಕಾ-ಳಿಂದಿಯ ಧುಮುಕಿ-ಫಣೀಂದ್ರನ ಶಿರದಲಿಧಿಂ ಧಿಮಿ ಧಿಮಿಕೆಂದು ಕುಣಿದ ಹರಿ 2 ಜಲದೊಳ ಪೊಕ್ಕು ಆ ಇಳೆಯ ತಸ್ಕರನು ದುಂ-ಬಲಗೊಂಡು ಮಡುಹಿ ನಂಬಿದ ಪ್ರಹ್ಲಾದ ಹಂ-ಬಲಿಸೆ ಧರ್ಮದಿ ಕಾಯ್ದೆ ಸಲೆ ಕ್ಷತ್ರಿಯಕುಲವನಳಿದೆ-ನಿನ್ನೊಳು ನೀನೇ ಕಾಯ್ದೆ ||ಮಲೆತ ಮಾವನ ಕೊಂದೆ ಸಲೆಖಳ ತ್ರಿಪುರನ ಗೆದ್ದು ಕಲಿಯ ಸಂಹರಿಸಿದೆಸುಲಭ ಮೂರುತಿ ಮೋಹನವಿಠ್ಠಲಚೆಲುವ ತಿರುವೇಂಗಳ 3
--------------
ಮೋಹನದಾಸರು
ಭವ ಸಂಸಾರ ಶರಧಿಯ ಗುರು ಅಂಬಿಗ ದಾಟಿಸಿದಶಿವನ ಮಾಡುತಲೆನ್ನ ಮುಕ್ತಿಗೇರಿಸಿದ ಪ ಬಯಕೆಗಳೆಂಬ ತೆರೆಯು ತಾಪತ್ರಯಗಳೆ ಲಹರಿಯುಪ್ರಿಯಗಳೆಂಬುವೆ ನೊರೆಯು ಕ್ಲೇಶವೆಂಬುದೆ ಹರಿಯು 1 ತಿಳಿವು ಇಲ್ಲದ ಮಡುವು ಕಸಿವಿಸಿ ಎಂಬುದೆ ದಡವುಬಲು ಅವಿವೇಕವೆ ಗುಡುಗು ಸುಖದುಃಖಗಳೆಂಬುವು ತೆರೆಯು 2 ಸುಳಿ 3 ಸಂದಣಿಯೆಂಬುವು ಜಲಚರವು ಸಡಗರವೆಂಬುದೆ ತಳವುಹೊಂದಿಹ ಚಿಂತೆಯೆ ದಡವು ಸ್ಥಿರವಿಲ್ಲದುದೇ ಗಡುವು 4 ಜ್ಞಾನದ ನಾವೆಗಳಿಂದ ಪ್ರಣವದ ಹುಟ್ಟುಗಳಿಂದದಾಟಿಸಿದ ಚಿದಾನಂದ ಅಂಬಿಗ ಛಲದಿಂದ 5
--------------
ಚಿದಾನಂದ ಅವಧೂತರು
ಭವತಿ ಭಿಕ್ಷಾಂ ದೇಹಿ ಪರಬ್ರಹ್ಮಭವದೂರ ಮಾಂಪಾಹಿಭುವನ ಪಾವನ ಪರಮಾನಂದ ವರಗುಣಾಸುವಿಮಲ ಶಾಂತಿ ಸದ್ಭಕ್ತಿ ಜೀವನ್ಮುಕ್ತಿ ಪ ನಿತ್ಯ ನಿರ್ಮಲ ಜ್ಞಾನ ವಿಚಾರ ಪ್ರ-ವೃತ್ತಿ ವಿವೇಕದಾನಸತ್ಯ ಸದ್ವಿನಿಯ ಸಶ್ರವಣ ಮಾನಸಯೋಗಚಿತ್ತ ನಿಧಿಧ್ಯಾಸ ಜಪತಪವ್ರತ ಪೂಜಾ 1 ದೋಷರಹಿತ ಭಾಷ ದುರಿತಗುಣನಾಶ ಪರಮ ಸಂತೋಷಕ್ಲೇಶ ವಿದೂರ ವಿಶೇಷ ವಿರಾಗವಿಶ್ವಾಸ ವಿಹಿತ ಸದ್ಧರ್ಮ ವಿಚಾರ 2 ಪಾವನ ಪರಿಪೂರ್ಣ ಹೃದಯ ಸದಾದೇವ ನಾಮಸ್ಮರಣಭಾವ ಭರಿತ ಧ್ಯಾನ ಧಾರಣಯೋಗ ಸ-ದ್ಭಾವ ಬ್ರಹ್ಮ ಆದಿಕೇಶವ ದಾಸತೆ 3
--------------
ಕನಕದಾಸ
ಭವದ ಬಂಧವಿನ್ನೆನಗೆ ಯಾಕೆ ಭವಹರಣ ನಾಮ ಎನ್ನ ಜಿಹ್ವೆಯೊಳಗೆ ಇರುತಿರಲು ಪ ದುರಿತ ಭೀತಿ ಯಾಕೆ ಎನಗೆ ಕರ್ಮದ ಲೇಪವ್ಯಾಕೆ ಎನಗೆ ಕುಲ ಚಲಗಳ್ಯಾಕೆ ಎನಗೆ ಮಡಿಯು ಮೈಲಿಗ್ಯಾಕೆ ಅನುದಿನದಿ ಪಾವನಾತ್ಮಕನ ನೆನವು ಎನ್ನ ಮನದೊಳಿರಲು 1 ನಷ್ಟ ಪ್ರಪಂಚಂಟಿನ್ನ್ಯಾತಹೆÉ ಬಿಟ್ಟ ಬಡತನ ತಂತಿನಗ್ಯಾಕೆ ಹುಟ್ಟು ಸಾವು ಕಷ್ಟ ಮತ್ತ್ಯಾಕೆ ಕೆಟ್ಟ ಯಮನ ಅಂಜಿಕಿನ್ನ್ಯಾಕೆ ಸೃಷ್ಟಿ ಕರ್ತನ ಶಿಷ್ಟಪಾದ ನಿಷ್ಠೆಯೆನ್ನೊಳು ಗಟ್ಟಿಯಿರಲು 2 ನಿತ್ಯ ನೇಮ ಪೂಜೆ ಯಾಕೊ ಮತ್ತೆ ಜಪ ತಪವು ಯಾಕೊ ನಿತ್ಯ ನಿರ್ಮಲಾನಂದ ರೂಪಿ ಸತ್ತು ಚಿತ್ತನಂದದಾತ ಮುಕ್ತಿದಾಯಕ ಶ್ರೀರಾಮ ಪಾದ ಭಕ್ತನಾಗಿ ನಾ ಮೆರೆಯುತಿರಲು 3
--------------
ರಾಮದಾಸರು
ಭಾಗಣ್ಣಾ | ಗುರು ನಿನ್ನ ಪೊಗಳುವೆನಯ್ಯಾಕರುಣದಿ ಪಿಡಿಕೈಯ್ಯಾ | ಮುರಹರ ಕುವರಯ್ಯಾ ಪ ನಗಧರ ಮೊಮ್ಮಗ ಮಗನೀ ಯೆನ್ನನುಖಗವರ ವಹ ಪ್ರಿಯ ಪಾಲಿಸೊ ಜೀಯಾ ಅ.ಪ. ಜ್ಞಾನ ಸದ್ಭಕ್ತಿ ವಿರಕ್ತಿಯ ಮೂರ್ತೀ | ಸಾರುವೆ ತವಕೀರ್ತೀಗಾನ ಲೋಲನ ಸೇವಿಸೆ ಜಾಗರ್ತೀ | ಮಾಡುವೆ ಶರಣಾರ್ತೀ |ಘನ್ನ ಮಹಿಮ ಕಾರುಣ್ಯ ಮೂರುತೀಎನ್ನವ ಗುಣ ಮರೆದು ಸಲಹೊ ವಿಶ್ವಂಭರ 1 ಜಲಧಿ ವಿಹಾರನೆಸುಲಭದಿ ಸಾಧನ ಪಾಲಿಸೋ ಜೀಯ 2 ಅರುಹಲೇತಕೊ ಎನದುರಿತ ಸಮೂಹ | ನೀನಲ್ಲವೆ ದುರಿತಹರತುರು ತನ್ನ ಕರುವನೆ ಮರೆವುದೆ ಆಹಾ | ಪಾಲಿಸು ತವನೇಹಾಸಿರಿಪತಿ ಗುರುಗೋವಿಂದ ವಿಠಲನಚರಣಾಂಬುಜದೊಳು ನಿಲಿಸೆಲೊ ಮನವಾ 3
--------------
ಗುರುಗೋವಿಂದವಿಠಲರು
ಭಾಗವತರ ಭಾಗ್ಯನಿಧಿಯೆ ಭೋಗಿಶಯನ ಭೋ ಶ್ರೀರಾಮ ಪ ವೇದಾಗಮಕೆ ಸಿಲುಕದಂಥ ನಾದಬ್ರಹ್ಮಾಯೋಧ್ಯ ರಾಮ ಸಾಧುಜನಸಂಪ್ರೀತ ಭವರೋಗ್ವೈದ್ಯ ಸಾಧನ ಸಾಧ್ಯ ರಾಮ 1 ಬೋಧ ರಾಮ ಮಹದಾದಿ ರಾಮ 2 ಕಂಟಕ ದೂರ ರಾಮ ಪರಕೆಪರಮ ಪರಮಪುರುಷ ಸರುವ ಜಗದಾಧಾರ ರಾಮ 3 ಹತ್ತು ಅವತಾರೆತ್ತಿ ಭೂಭಾರ್ಹೊತ್ತು ಇಳುಹಿದ ಸತ್ಯ ರಾಮ ಜಗತ್ಕರ್ಮ ರಾಮ 4 ದಾಸಜನರಭಿಲಾಷೆಯನು ಪೂರೈಸಲೋಸುಗ ಈಶ ರಾಮ ಶೇಷಾಚಲನಿವಾಸನಾದ ದಾಸಗಣ ಸಂತೋಷ ರಾಮ 5 ಅಸಮ ಪಾದಕುಸುಮಗಳನಿಟ್ಟೊಸುಧೆ ವೈಕುಂಠೆನಿಸಿ ರಾಮ ಜನರಿಂಗೊಸೆದು ರಾಮ6 ಬ್ರಹ್ಮಾದಿಗಳ ಹಮ್ಮನಳಿದ ಕರ್ಮಚರ ಪರಬ್ರಹ್ಮ ರಾಮ ಸುಖಧಾಮ ರಾಮ 7 ದಾತ ರಾಮ ಗುರುನಾಥ ರಾಮ 8 ತತ್ವದರ್ಥ ಉತ್ತರಿಸೆನ್ನ ಕಟ್ಟುಮಾಡೊ ಶಿಷ್ಟರಾಮ ಮೂರ್ತಿ ರಾಮ 9 ಹುಟ್ಟಿಬರುವ ಕಷ್ಟದ್ಹಾದಿ ಕಟ್ಟುಮಾಡೊ ಶಿಷ್ಟರಾಮ ನಿಷ್ಠೆಯಿಂ ನಿಮ್ಮ ಮುಟ್ಟಿ ಭಜಿಪ ಪಟ್ಟಗಟ್ಟೆಲೊ ದಿಟ್ಟ ರಾಮ 10 ದಾಸಜನರ ವಾಸದಿರಿಸೊ ಕೇಶವ ಜಗದೀಶ ರಾಮ ದೋಷರಾಶಿ ನಾಶಗೈದು ಪೋಷಿಸೆನ್ನನನುಮೇಷ ರಾಮ 11 ವೇದ ವಿದ್ಯದ್ಹಾದಿಸಾಧನ ಭೋಧಿಸೆನಗ್ವಿನೋದ ರಾಮ ಪಾದಭಕ್ತಿ ಮೋದದಿತ್ತು ಭವಬಾಧೆಯಳಿ ಸುಖಸ್ವಾದ ರಾಮ 12 ಕಳಿ ಮಮಜೀವ ರಾಮ ಬಿಡಿಸೆನ್ನಯ ರಾಮ 13 ಮತ್ತೆ ಮತ್ತೆ ಪೃಥ್ವಿ ಮೇಲೆ ಸತ್ತು ಹುಟ್ಟಿ ಬೇಸತ್ತೆ ರಾಮ ಕರ್ತು ನಿನ್ನ ಗುರ್ತು ಅರಿಯದನರ್ಥವಾದೆನಾತ್ಮ ರಾಮ 14 ಆಸೆಯೆಂಬ ಪಾಶದಿಂದ ಘಾಸಿಯಾದೆ ಭವನಾಶ ರಾಮ ದೋಷದೂರೆನ್ನ ಕ್ಲೇಶಗಳನು ನಾಶಿಸೈ ದಯಭೂಷ ರಾಮ 15 ಅರಿದು ಅರಿದು ಉರಿವದೀಪದೆರಗುವ ಹುಳದಿರವು ರಾಮ ಸಿರಿಯ ರಾಮ 16 ಮರೆದು ನಾನು ಧರೆಗೆ ಬಿದ್ದು ದುರಿತದೊಳಗೆ ಬೆರೆದೆ ರಾಮ ಪೊರೆಯೊ ರಾಮ 17 ಕರುಣಿಸುತ ತಂದೆ ರಾಮ ಬಯಲ್ಹರಿಸು ರಾಮ 18 ಮಾನ ಅಭಿಮಾನ ನಿನ್ನದು ಧ್ಯಾನಿಪರ ಸುರಧೇನು ರಾಮ ಜ್ಞಾನವಿತ್ತು ಮಾನದಿಂದ ನೀನೆ ಪೊರೆ ಜಗತ್ರಾಣ ರಾಮ 19 ಭಿನ್ನವಿಲ್ಲದೆ ನಿನ್ನ ನಂಬಿ ಧನ್ಯನಾದೆನಿನ್ನು ರಾಮ ಎನ್ನ ಮನಸಿಗಿನ್ನು ಸಂತಸವನ್ನು ಕೊಡು ಪಾವನ್ನ ರಾಮ 20 ಭೃತ್ಯನ ಮಹ ಚಿತ್ತಭ್ರಮೆ ಮುರಿದೊತ್ತಿ ಕರಪಿಡಿದೆತ್ತು ರಾಮ ಭಕ್ತಿಯುಕ್ತಿ ಮುಕ್ತಿ ಸುಖವನಿತ್ತು ಪೊರೆ ಗುರುದತ್ತ ರಾಮ 21 ನಿಖಿಲವ್ಯಾಪಕ ಅಖಿಲರಕ್ಷಕ ಸಕಲಬಲ ನೀನೇಕ ರಾಮ ಮುಕುತಿಸಂಪದ ಸಿದ್ಧಿ ನೀನೆ ಭಕುತಪ್ರಿಯ ಲೋಕೈಕ ರಾಮ 22 ಭಿನ್ನವಿಲ್ಲದೆ ನಿನ್ನ ನಾಮವನ್ನು ಪೊಗಳುವರಿನ್ನು ರಾಮ ಮಾನ್ಯರಾಗನನ್ಯ ಸುಖಸಂಪನ್ನರೆನಿಪನನ್ಯ ರಾಮ 23 ಉದಯದೆದ್ದು ಪದುಳದೀನಾಮ ಓದಿಕೇಳಲು ಸದಾ ರಾಮ ಸದಯ ರಾಮ 24 ನಿತ್ಯ ಭಕ್ತಿಯಿಂ ಬರೆಯುತ್ತ ಪಠಿಸಲು ಕರ್ತುರಾಮ ಮುಕ್ತಿಯೆಂಬ ಸಂಪತ್ತನಿತ್ತು ಬಿಡದ್ಹತ್ತಿರಿರುವನು ಸತ್ಯ ರಾಮ 25
--------------
ರಾಮದಾಸರು
ಭಾರ ನಮ್ಮಪ್ಪನಿಗೀ ಸಂಸಾರ ಉಪ್ಪಿನ ಹೇರಂತಿದು ಬಹುಕ್ಷಾರ ಕೈ- ತಪ್ಪಿದರೆ ಬಾರದು ಸಣ್ಣ ಚೂರಾ ಪ. ಅಗಳಿನಾಶೆಗೆ ಪೋಗಿ ನಿಗಳ ಕಂಠಗೆ ಸಿಲುಕಿ ನೆಗೆದು ಬೀಳ್ವ ಮಚ್ಛ್ಯಗಳಂದದಿ ಬಹು ಹಗರಣಗೊಳ್ಳುತ ಮರುಳಾಗಿಹೆನು 1 ಬಾಲಬುದ್ಧಿಯೊಳೆರಡು ಶಾಲೆ ಕೊಂಡರೆ ಪರರ ಮೇಲೊಡ್ಡುತ ಬಹು ಸಾಲಗಾರನೋಲೆ ಕೋಳುಗೊಂಬನು ಪಂಚಗೋಲ ಸುಖತಿಯಲಿ 2 ಪುಣ್ಯಕರ್ಮವ ಮಾಡಿ ತನ್ನದೆಂದರೆ ನಿಲದು ದಾನವರೊಯ್ವರು ಘನಪಾತಕಗಳು ಬೆನ್ನ ಬಿಡವು ಮಕ್ಷಿಕಾನ್ನದಂತಿಹವು 3 ಕರ್ಮಶಾಸ್ತ್ರವ ಗಹನ ಮರ್ಮವ ತಾಳದ ನರನಾ ನಿರ್ಮಲ ಮಾಡಲು ಚವರ್i ತೊಳಿಯೆ ದು- ಷ್ಕರ್ಮ ಕಲುಷವನು ನಿರ್ಮೂಲಗೊಳಿಸದೆ 4 ಹೇಸಿಕೆ ಜೊಲ್ಲಿನ ಮುಸುಡಾ ಹಾಸಿಕೆಯಿಂದೆತ್ತುತಲಿ ದೂಷಿಸುತನ್ಯರ ಮೀಸೆಯ ತಿರುಹುತ ಲೇಸಗಾಣದೆ ಬಹು ಮೋಸಗೊಂಡಿಹೆನು 5 ಹಸ್ತಪಾದಾದಿಗಳ ಮೃತ್ತಿಕೆಯಿಂದಲಿ ತೊಳೆವ ತತ್ವ ನೋಡಲು ಕಣ್ಣು ಕತ್ತಲೆ ಬರುವುದು ಕತ್ತೆಗೆ ಷಡ್ರಸವೆತ್ತಲು ದೊರೆಯದು 6 ಸ್ನಾನದ ರೀತಿಯನಿನ್ನೇನೆಂದು ವರ್ಣಿಪೆನು ಮಾನವರಿದಿರು ನಿಧಾನದಿ ನಡೆವುದು ಮಾನಸ ವೈಶಿಕಧಾನಿಯಾಗಿಹುದು 7 ಮಡಿಯೆಂದು ಕೂತಿರಲು ಮಡದಿ ಹತ್ತಿರ ಬರಲು ಒಡವೆಯ ನೋಡುತ ಅಡಿಗೆಯ ಪಣ್ಕೆಯ ನುಡಿಯಲ್ಲದೆ ಜಪಗೊಡವೆಯೇನಿರದು 8 ಪಾಕ ಪೂರಣವಾಗೆ ಈಗ ಸಾಕೆಂಬೆ ಹರಿಪೂಜೆ ಶಾಕಾದಿಗಳು ವಿವೇಕವಾಗದಿರೆ ಭೀಕರಿಸುತ ಅವಿವೇಕನಾಗುವೆನು 9 ತದನಂತರದಿ ಪರರ ಕದನವನೆಬ್ಬಿಸುತಲಿ ಒದಗುತ ನಾನಾ ವಿಧದಲಿ ಎನ್ನಯ ವದನ ತುಂಬುವ ಮಾರ್ಗದಿ ದಿನ ಕಳೆವೆನು 10 ಇಂತು ದಿವಾಯುಷವನ್ನು ಸಂತರಿಸುತ ನಿಶೆಯೊಳ್ ಕಂತು ಕಲಾಪದ ಭ್ರಾಂತಿಗೊಂಡು ಮರ ದಂತೆ ಬೀಳಲು ನಿಮಿಷಾಂತರ ದೊರೆಯದು 11 ಪಾರಾವಾರದಕಿಂತ ಘೋರವಾಗಿರುವೀ ಸಂ- ಸಾರದಿ ಸಿಲುಕಿದರ್ಯಾರು ಕಾವರಿಲ್ಲ ಶ್ರೀರಮಾಪತಿ ಚರಣಾರವಿಂದವೆ ಗತಿ 12 ಈ ವಿಧ ದುಷ್ಕøತದಿಂದ ಕಾವನು ನೀ ಗೋವಿಂದ ಪಾವನಾತ್ಮಕ ಶೇಷಾವತಾರ ಗಿರಿ ಭವ ನಾವ ಮುಕುಂದ 13
--------------
ತುಪಾಕಿ ವೆಂಕಟರಮಣಾಚಾರ್ಯ
ಭಾರ ನಿನ್ನದು ತಂದೆ ಸಿಂಧು ಎಂದೆಂದು | ಗುರುವರ್ಯ ಬಂದು ಕರುಣಿಸುವನು ಮದ್ಬಂಧೊ 1 ಮಂಗಳಾತ್ಮನೆ ಎನ್ನ ಅಂಗದಲಿ ನೀನಿಂದು ಪೊಂಗಳಧರನ ತೋರಯ್ಯ | ಅಜರಾಯ ಭಂಗಬಡಲಾರೆ ಭವದೊಳÀು 2 ನಾರಾಯಣನ ಪುತ್ರ ನಾರಾಯಣಗೆ ಮಿತ್ರ ನಿರವದ್ಯ | ನೀಡಭಯ ಕರುಣಾತ್ಮ ಗುರುವೆ ಒಲಿದಿಂದು 3 ಕಾಮರೂಪನೆ ಹರಿಯನೇಮದಲಿ ಕಪಿಯಾಗಿ ಆ ಮಹಿಮೆಗುಂಗುರ ಅರ್ಪಿಸಿ | ಅಗ್ನಿಯಲಿ ತಾಮಸರ ಹುರಿದೆ ಪುರದಲ್ಲಿ 4 ಮರಳಿ ಶರಧಿಯ ದಾಂಟಿ ಭರದಿ ರಘುಪತಿ ಚರಣ ಸರಸಿಜದಿ ಚೂಡಾಮಣಿಯನ್ನು | ಒಪ್ಪಿಸಿ ಹರಿ ಅಂಗ ಸಂಗ ಪಡೆದಯ್ಯ 5 ಸಿಂಧÀುವನು ಬಂಧಿಸಿ ಬಂದ ವಿಭೀಷಣಗೆ ಕುಂದದೆ ಅಭಯ ಕೊಡಿಸಿದೆ | ದಯಸಿಂಧು ನಿಂದೆನ್ನ ಒಳಗೆ ಮುದವೀಯೊ 6 ದೇವೇಶನಾಜ್ಞೆಯಲಿ ಜೀವೇಶ ಸಂಜೀವ ಪರ್ವತ ತಂದು ಕಪಿಸೈನ್ಯ | ಎಬ್ಬಿಸಿ ಮೊದಲೆಡೆಗೆ ಬಗೆದ ಕುಶಲಾತ್ಮ 7 ದಶಶಿರನ ಕೊಲ್ಲಿಸಿ ವಸುಧಿಪುತ್ರಿಯ ತಂದು ನಸುನಗುತ ರಾಮಚಂದ್ರಾಗೆ | ಒಪ್ಪಿಸಿ ವಿ ಭೀಷಣಗೆ ರಾಷ್ಟ್ರ ಕೊಡಿಸಿದೆ 8 ಪ್ರೇಮದಿ ಭರತನು ಸ್ವಾಮಿ ಬರಲಿಲ್ಲೆಂದು ಕಾಯ ಬಿಡುತೀರೆ | ಉಳುಹಿದೆ ಶ್ರೀ ರಾಮನಾಗಮನ ತಿಳುಹೀಸಿ9 ತುಷ್ಟನಾದೆನು ಹನುಮ ಇಷ್ಟ ನೀ ಬೇಡೆನಲು ಪಾದ ಪಿಡಿಯಲು | ಭಕ್ತಿಯಲಿ ಪಟ್ಟಾಭಿರಾಮ ತನ್ನಿತ್ತ 10 ಆಖಣಾತ್ಮಕಾಯನೆ ಅಕಳಂಕ ಗುಣಧಾಮ ನಿಖಿಲಾತ್ಮ ಹರಿಯ ಪೂಜಿಪ | ದೃಢಮಹಿಮ ಶ್ರೀಕೃಷ್ಣ ಭಕ್ತಾ ಕಲಿಭೀಮ 11 ಶಿಶುಭಾವದಲಿ ನೀನು ಶತಶೃಂಗ ಗಿರಿವಡೆದು ನಸುನಗುತ ಜನನಿಗಭಯವ | ನಿತ್ತಂಥ ಪಶುಪಾಲ ಪರನೆ ಪೊರೆಯೆನ್ನ 12 ದುರ್ಯೋಧನನ ತ್ರಾಣ ತಂತುಗಳ ಹರಿದಾಡಿ ಸರ್ವೇಶ ಹರಿಗೆ ಪ್ರಿಯಮಾಡಿ | ನಲಿದಂಥ ಸರ್ವಜ್ಞ ಭೀಮ ಬಿಡೆ ನಿನ್ನ 13 ದುಶ್ಯಾಸನನ ಮಹಾದುಶ್ಯೀಲ ಸ್ಮರಿಸುತ್ತ ಪಶುವಂತೆ ವಧೆಯ ಮಾಡಿದಿ | ರಣದೊಳು ಸುಸ್ವಾದ ಗುಣಸಾರ ಮಹವೀರ 14 ಮಾನಿನಿಯ ಸಂಕಲ್ಪ ತ್ರಾಣನೀ ಪೂರೈಸಿ ಪ್ರಾಣಸಖನಾಗಿ ಸಲಹಿದೆ | ಜಯಭೀಮ ಪಾಣೆ ಪಿಡಿಯೆನ್ನ ಮಹಘನ್ನ 15 ದುರಾರಾಧಕ ದುಷ್ಟ ಜರಸಂಧನ ಸೀಳಿ ಮುರಾರಿ ಮತ್ಪ್ರೀತಿ ಬಿಡಿಸಿದೆ | ದೀಕ್ಷೆಯಲಿ ತ್ರಿ ಪುರಾರಿ ವಂದ್ಯಾಗತಿ ನೀನೆ 16 ನಾರಾಯಣಾಸ್ತ್ರವನು ವೀರ ಗುರುಸುತ ಬಿಡಲು ಚೀರಿ ನಮೋಯೆನ್ನೆ ನೃಪರೆಲ್ಲ | ಸ್ಮøತಿ ತಪ್ಪೆ ಧೀರ ಎದುರಾಗಿ ನೀ ನಿಂತೆ 17 ಗರಡಿಯಲಿ ಕೀಚಕನ ಮುರಿದು ಮುದ್ದೆಯ ಮಾಡಿ ಮರಿಯದೆ ಅವನ ಅನುಜರ | ಸದೆಬಡಿದು ಮೋದ ನೀನಿತ್ತೆ 18 ಉರಗ ಬಂಧವ ಹರಿದು ಕರಿ ಮುಂದೆ | ನೀನಿಂತೆ ಸರ್ವನಿತ್ಯಾತ್ಮ ಕೃಷ್ಣಾತ್ಮ 19 ಮಧುವೈರಿ ಧ್ಯಾನದಲಿ ಕುದುರೆ ಆಟವನಾಡಿ ಮುದದಿಂದ ಕುರುಪನ್ಹೆಗಲೇರಿ | ಹುದುಗ್ಯವನ ಮುದದಿಂದ ನಲಿದೆ ಕಮಲಾಕ್ಷ 20 ಅರಗಿನ ಮನೆಯಲ್ಲಿ ವೈರಿಜನರ ಕೊಂದು ಪೊರೆದೆ ನೀ ಜನನಿ ಅನುಜರ | ಪಂಜರನೆ ಧರೆಯೊಳಗೆ ಎನ್ನ ಸಲಹಯ್ಯ 21 ಹಿಡಿಂಬನ ಕೊಂದು ವರ ಹಿಡಿಂಬಿಯ ಕೈಪಿಡಿದು ನಡೆದೇಕ ಚಕ್ರಪುರದಲ್ಲಿ | ಬಕನೊರಸಿ ನಡಕ ಬಿಡಿಸೀದಿ ಸುಜನರ 22 ವ್ಯಾಸದೇವನ ಕಂಡು ಸೂಸಿದ ಸದ್ಭಕ್ತಿ ಪಾಶದಲಿ ಕಟ್ಟಿ ಒಳಗಿಟ್ಟು | ಪೂಜಿಸುತ ಲೇಸಾಗಿ ಮುಂದೆ ನಡೆದಯ್ಯ 23 ನೀ ಸ್ವಯಂವರ ಸಭೆಯ ವೇಷಾಂತರದಿ ಪೊಕ್ಕು ವಾಸುದೇವನ ಕಂಡು ಆನಂದ | ತುಳುಕುತ್ತ ಆ ಸತಿಯ ತಂದೆ ವಿಜಯಾತ್ಮ 24 ರಾಜರೆಲ್ಲರ ಹಿಡಿದು ರಾಜಸೂಯಯಾಗವನು ಪೂಜೆಯನು ಮಾಡಿ ಮೆರದಯ್ಯ 25 ಲಕ್ಷ್ಮೀವನಕ್ಹೋದಂತೆ ಪಕ್ಷಿಯರ ಒಡಗೂಡಿ ದಕ್ಷನೆ ನೀನು ವನವಾಸ | ಅಜ್ಞಾತ ಪಕ್ಷವ ಕಳೆದು ಮರಳಿದೆ26 ಸಂಗರವ ನೀ ಹೂಡಿ ಭಂಗಿಸಿ ಕೌರವನ ರಂಗನ ಮುಂದೆ ಅರ್ಪಿಸಿ | ವಂದಿಸಿ ಮಂಗಳಾತ್ಮಕನೆ ಸಲಹೆಮ್ಮ 27 ನಿರ್ಮಲ ರಾಜ್ಯವನು ಧರ್ಮಂಗೆ ನೀನಿತ್ತೆ ನಿರ್ಮೂಲಗೈದು ಅರಿಗಳ | ಕೊಂದ ಪರ ಧರ್ಮಪರರನ್ನು ಪೊರೆದಯ್ಯ 28 ಮಧ್ವಾಖ್ಯ ಮಹವೀರ ಶುದ್ಧ ಸತ್ವ ಶರೀರ ಉದ್ಧರಿಪುದೊಂದೆ ವ್ಯಾಪಾರ | ಕೈಕೊಂಡ ವಿದ್ಯಾಧಿಪತಿಯೆ ಸಲಹೆನ್ನ 29 ಶ್ವಾಸ ನಿಯಾಮಕ ಪ್ರಭುವಾಸವೆ ನಿನ್ನಿಂದ ಉಸರಲೇನಯ್ಯ ನಿನ್ನಲ್ಲಿ | ಜೀವೇಶ ಸೂಸುವ ಭಕ್ತಿ ನೀಡಯ್ಯ 30 ವೇದ ಚೋರನ ಮಡುಹಿ ಸಾದರದಿ ಸುಜನಕ್ಕೆ ಬೋಧ ಮಾಡೆಂದು ಶ್ರೀ ವಿಷ್ಣು | ಕಳುಹಿದ ಮಧ್ವಾಖ್ಯ ಗುರುವೆ ಪರಿಪಾಹಿ 31 ಸುರರು ದುಂದಭಿ ಮೊರೆಯೆ ದುರುಳರ ಎದೆಯು ನಡುಗಲು | ಹರುಷದಲಿ ಮೆರೆದು ನೆರೆದರು ಸುಜನರು 32 ಕೈವಲ್ಯ ನೀನಿತ್ತೆ ಶ್ರೀವಲ್ಲಭನ ಪ್ರಥಮಾಂಗ | ಪ್ರಸನ್ನ ನೀವಲಿದು ಹರಿಯ ತೋರಯ್ಯ 33 ಹುಣಿಸೆ ಬೀಜದಿ ಪಿತನ ಘನೃಣವ ತೀರಿಸಿದಿ ಅಣಿಮಾದಿ ಸಿದ್ಧಿ ತೃಣವಯ್ಯ | ನಿನಗಿನ್ನು ಗುಣಪೂರ್ಣ ಹರಿಯ ಪ್ರತಿಬಿಂಬ 34 ಶಿವಭಟ್ಟನನು ಗೆದ್ದು ಜಯಾಂಕ ರಸ ತೋರೆ ವಿಪ್ರ ಸುರರು ಪೂಜಿಸೆ | ನಲವಿಂದ ಅವನಿಯೊಳು ಪೊಳೆದೆ ರವಿಯಂತೆ 35 ವಿದ್ಯಾಧಿಪತಿ ಗುರುವೆ ವಿದ್ಯೆ ಪೇಳಿದ ದ್ವಿಜಗೆ ಸದ್ಭಕ್ತಿ ದಕ್ಷಿಣೆ ನೀನಿತ್ತೆ | ಕರುಣಾತ್ಮ ಉದ್ಧರಿಸು ಎನ್ನ ದ್ವಿಜರತ್ನ 36 ಜನನಿ ಜನಕರು ತಡಿಯೆ ಅನುವಾದ ಸುತನಿತ್ತು ಘನವಾದ ತುರ್ಯ ಆಶÀ್ರಮ | ಕೈಗೊಂಡು ಸುನವ ಪದ್ಧತಿಯ ತೋರಿದೆ 37 ಅಚ್ಯುತ ಪ್ರೇಕ್ಷಕರಿಗೆ ಹೆಚ್ಚಾದ ದಯದಿ ಹರಿ ನಿನ್ನ | ವೊಯ್ದಿತ್ತ ಅಚ್ಚುಮೆಚ್ಚುವ ನೀ ಹರಿಗೆಂದು 38 ವಾದಿಗಳ ಭಂಗಿಸಲು ಸಾದರದಿ ಯತಿ ಕರಿಯೆ ಛೇದಿಸಿ ಖಳರ ಮದವನ್ನು | ಹರಿಸಿದೆ ಸ್ವಾದ ಗುಣಸಿಂಧು ಮದ್ಬಂಧು 39 ಬಾಳೆಗೊನೆಗಳ ಮೆದ್ದು ಬಾಡಲೇತಕೆ ಉದರ ಪೇಳೆಂದ ಯತಿಗೆ ಜಠರಾಗ್ನಿ | ಬ್ರಹ್ಮಾಂಡ ಕೊಳ್ಳುವದುಯೆಂದು ವರದಯ್ಯ 40 ವಾದಗಳ ಪರಿಹರಿಸಿ ಬೋಧಿಸಲು ಆ ದ್ವಿಜರು ಪಾದಕ್ಕೆ ಎರಗಿ ನಮೋ ಎಂದು ಅಮರರಿಗೆ ಆ ಬೋಧವೊ ಮಹಿಮೆಯೆಂದಾರು 41 ಬದರಿಯಾತ್ರೆಯಲಿ ಸುರನದಿಯು ತಾ ಮಹಿಪಡೆದು ಮುದದಲ್ಲಿ ಬಂದು ನಮಿಸಲು | ಶಿಷ್ಯಜನ ಯೈದಿ ಭಕ್ತಿಯನು ನಮೋ ಎಂದು 42 ಹರಿಯಂತೆ ನರಿಗಳನು ತುರಕ ದೂತರ ಜರಿದು ನರಪನಿಂದರ್ಧ ಮಹಿಮೆಯನ್ನು | ಪಡೆದಂಥ ಯರಡೇಳು ಭುವನ ಅಧಿಪತಿ 43 ಸತ್ಯತೀರ್ಥರ ಬಳಿಗೆ ದೈತ್ಯ ವ್ಯಾಘ್ರನು ಬರಲು ಮೃತ್ಯುವಿನ ಪುರಕೆ ಕಳುಹಿದೆ | ಲೀಲೆಯಲಿ ಭೃತ್ಯತ್ವಯೆನಗೆ ನೀಡಯ್ಯ 44 ಸೂಸುವಾ ಭಕ್ತಿಯಲಿ ವ್ಯಾಸದೇವನ ಕಂಡು ಈಶ ಸಲಹೆಂದು ಎರಗಲು | ಮನವುಬ್ಬಿ ಬಾ ಸುತನೆ ಎಂದು ತಬ್ಬಿದ 45 ಆನಂದ ಮೂರ್ತಿಯ ಆನಂದ ಸಂಗವನು ಆನಂದದಿಂದ ನೀ ಯೈದಿ | ನಂದ ಆನಂದ ತೀರ್ಥ ಕೊಟ್ಟೆಯೊ 46 ನಾರಾಯಣನಲಿ ಕರೆದೊಯ್ಯೆ ಬದರಿಪನ ಚರಣಾಬ್ಜಕೆರಗಿ ಹರಿಲೀಲೆ | ಸ್ಮರಿಸಿದ ಗುರುರತ್ನ ಸಲಹೊ ಧನ್ಯಾತ್ಮ 47 ಅಚ್ಯುತನ ಸಂಗದಲಿ ಚಿತ್ಸುಖವ ಉಂಡುಬ್ಬಿ ಹೆಚ್ಚಿನ ಪದವಿ ಇಲ್ಲೆಂದು | ನಲಿದಂಥ ಅಚ್ಯುತಾತ್ಮಾನೆ ಸಲಹೆನ್ನ 48
--------------
ಜಯೇಶವಿಠಲ
ಭಾರತಿ ಬುದ್ಧಿಯನು ತಿದ್ದಮ್ಮ ಮಧ್ವರಮಣಿ ಪ ಸದ್ದು ಇಲ್ಲದೆ ಶಿದ್ಧಿಯನು ಕೊಟ್ಟು ಉದ್ಧರಿಸು ಮಾತೇ ಅ.ಪ. ಯೇನು ಅರಿಯದಾ ಕಂದ ನಿನ್ನನು ನಂಬಿದ ಕಾರಣದಿ 1 ಪರಮ ಕರುಣಾಸಿಂಧುಯಂದುನೀನೆ ಗತಿಯೆಂದು ಬಂದೆ 2 ಸಫಲ ಮಾಡಲೇಬೇಕು ಬಯಕೆಯನು ತಂದೆವರದಗೋಪಾಲವಿಠಲನ ಪ್ರೀಯ 3
--------------
ತಂದೆವರದಗೋಪಾಲವಿಠಲರು
ಭಾರತೀಶ ಪ್ರಿಯ | ವಿಠಲ ಪೊರೆ ಇವಳ ಪ ನೆರೆನಂಬಿ ಬಂದಿಹಳ | ಪೊರೆಯೊ ಶ್ರೀಹರಿಯೇ ಅ.ಪ. ದಾಸ ದೀಕ್ಷೆಯ ಜ್ಞಾನ | ಲೇಸು ಪಡೆದವಳಲ್ಲಆಶೆಪಳು ತವದಾಸ್ಯ | ಮೇಶ ಮಧ್ವೇಶಆಶೆ ಮಾತ್ರಕೆ ಒಲಿದು | ಪೋಷಿಸಲಿ ಬೇಕಯ್ಯಹೇ ಸದಾಶಿವ ವಂದ್ಯ | ವಾಸ ವಾನುಜನೆ 1 ಪತಿಸುತರು ಬಾಂಧವರ | ಹಿತದಲ್ಲಿ ಮತಿಯಿತ್ತುಅತುಳ ವಿಭವದಿ ಮೆರೆಸಿ | ಕೀರ್ತಿಕೊಡಿಸೋಕೃತಿ ಪತಿಯೆ ತವಚರಣ | ಸತತ ನೆನೆಯುವ ಭಾಗ್ಯಪಥದಲ್ಲಿ ಇರಿಸಿ ಕೃತ | ಕೃತ್ಯಳೆಂದೆನಿಸೋ 2 ಉದಧಿ ಶಯನಾ |ಹದುಳದಲಿ ಮೂರೆರಡು | ಭೇದ ತರತಮಜ್ಞಾನವದಗಿಸುತ ಪೊರೆ ಇವಳ | ಮಧು ಮಥನ ಹರಿಯೇ 3 ನಿನ್ನ ನಾಮವ ಬಿಟ್ಟು | ಅನ್ಯ ಸಾಧನ ಕಾಣೆಚೆನ್ನ ಈ ಕಲಿಯುಗದಿ | ಅನ್ನಂತ ಮಹಿಮಾಘನ್ನ ದಯವನಧಿ ಆ| ಪನ್ನ ಜನರಕ್ಷಕನೆನಿನ್ನೊಲಿಮೆ ಉಳ್ಳನಕ | ಇನ್ನಾವ ಭಯವೋ 4 ಭಾವಜ್ಞ ನೀನಾಗಿ | ಪಾವಕಳೆ ಸಲಹೋ5
--------------
ಗುರುಗೋವಿಂದವಿಠಲರು
ಭಾರತೀಶ ಕಾಂತ ವಿಠಲ | ಪೊರೆಯ ಬೇಕಿವಳ |ಭೂರಿ ದೈವರ ಗಂಡ | ಮರುತಾಂತರಾತ್ಮಾ ಅ.ಪ. ಸುಕೃತ | ರಾಶಿ ಒದಗಲು ಈಗದಾಸ ಪಂಥಕೆ ಮನವ | ಆಶಿಸುತ್ತಿಹಳೋಆಶುಗತಿ ಮತ ಪೊಂದಿ | ದೋಷಗಳ ಕಳೆದಿಹಳಕೇಶವನೆ ಪೊರೆಯೆಂದು | ಲೇಸು ಬಿನ್ನವಿಪೇ 1 ಮೂರೆರಡು ಭೇದಗಳು | ತಾರತಮ್ಯವ ತಿಳುಹಿಆರು ಮೂರೂಭಕ್ತಿ | ವೈರಾಗ್ಯ ಭಾಗ್ಯಸಾರ ತತ್ವ ಜ್ಞಾನ | ದರಿವ ಇವಳಿಗೆ ಇತ್ತುಪಾರುಗೈ ಭವದ ಕೂ | ಪಾರ ಶ್ರೀ ಹರಿಯೇ 2 ಲೌಕಿಕ ಸುಸಖ್ಯ | ವೈದೀಕವೆಂದೆನಿಸುತ್ತಕಾಕು ಸಂಗವ ಕೊಡದೆ | ನೀ ಕೊಟ್ಟು ಸತ್ಸಂಗಪ್ರಾಕ್ಕು ಕರ್ಮವ ಕಳೆದು | ಸಾಕ ಬೇಕೆಂದಿವಳಮಾಕಳತ್ರನೆ ಹರಿಯೆ | ನಾಕೇಳ್ವೆ ವರವಾ 3 ಪತಿಯೆ ಪರದೈವ ವೆಂ | ಬತಿ ಶಯದ ಮನೆಯಿತ್ತುಹಿತದಿ ಹರಿ ಗುರು ಸೇವೆ | ಸತತ ಒದಗಿಸುತಗತಿಗೋತ್ರ ನೀನೆಂಬ | ಮತಿಯನೇ ಕರುಣಿಸುತಕ್ಷಿತಿಯೊಳಿವಳನು ಮೆರೆಸೊ | ಪತಿತ ಪಾವನ್ನಾ 4 ದೇವ ಹೂತಿಯ ಪೊರೆದ | ಆವ ಕಪಿಲಾತ್ಮಕನೆಭಾವದಲಿ ಮೈದೋರಿ | ನೀವೊಲಿಯಲೆಂದೂಭಾವದಲಿ ಬಿನ್ನವಿಪೆ | ಬಾವಜ್ಞ ಸಲಿಸುವುದುದೇವ ದೇವನೆ ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಭಾರತೀಶನ ಸೇರಿರೋ ಭವವಾರಿಧಿ ದಾಟುವರೆ ಸಾರ ತೋರುವ ಪ. ತುಂಗ ವಿಷಯಾಂಗಜನಿತೋತ್ತುಂಗ ತರಂಗದೊಳು ಅಂಗಜಾತ ತಿಮಿಂಗಿಲನು ತಾನುಂಗುವ ನಿಮಿಷದೊಳು ಮಂಗಳಾತ್ಮಕ ಮಾರುತನ ಸದಪಾಂಗಲೇಶವನೈದೆ ಸುಲಭದಿ ರಂಗನಿರವನು ತೋರಿ ಸಲಹುವ 1 ತ್ರೇತೆಯೊಳಗಿನ ಜಾತನಿಗೆ ರಘುನಾಥನ ತೋರಿಸಿದ ಕಾತುರದ ಪುರಹೂತನನು ಯದುನಾಥನಿಗೊಪ್ಪಿಸಿದಾ ಭೂತನಾಥನ ವಾಕ್ಯಬಲದಿಂದಾತ್ಮ ಜೀರಿಗೈಕ್ಯಪೇಳುವ ಪಾತಕಿಗಳನು ಗೆದ್ದು ತ್ರಿಜಗನ್ನಾಥ ಮುತ್ತಿದನೆಂದು ಮೆರಸಿದಿ 2 ಸೂತ್ರನಾಮಕ ಪ್ರಣವನಾಯಕ ಕ್ಷತ್ರಪುರದೊಳಿರುವಾ ಶತ್ರುತಾಪನ ಶೇಷಗಿರಿ ಪತಿಪುತ್ರನೆನಿಸಿ ಮೆರೆವಾ ಚಿತ್ರಕರ್ಮ ಚಿರಂತನಾಣುಗ ಪುತ್ರಮಿತ್ರಕಳತ್ರ ಭಾಗ್ಯದ ನೇತ್ರ ವಿಷಯ ಪರತ್ರ ರಕ್ಷಕ ಧಾತ್ರಪದಸತ್ಪಾತ್ರನೆನಿಸುವ 3
--------------
ತುಪಾಕಿ ವೆಂಕಟರಮಣಾಚಾರ್ಯ
ಭಾವನೆ ಬಲಿದನಕಾ ಒಣಭಕ್ತಿಯ ಮಾಡಿದರೇನು | ದೇವದೇವೋತ್ತಮನಾಪಾದ ಸುಮ್ಮನೆ ಸಿಲ್ಕುವದೇನು ಪ ಸಂಜಿವನಿಲ್ಲದಲೇ ಸಾವಿರ ಗಿಡ ಮೂಲಿಕಿದ್ದೇನು | ರಂಜಕ ತಾನಿಡದೇ ಯಂತ್ರದಿಗುರಿವಡ್ಡಿರಲೇನು 1 ಸೂರಿಯನುದಯಿಸದೇ ಕನ್ನಡಿ ಕಣ್ಣುಗಳಿದ್ದೇನು | ಗುರುರಾಯನ ಕರುಣಾ ಪಡಿಯದೆ ಮಂತ್ರ ಕಲಿತೇನು 2 ಅನುಭವಿಸದೇ ಸುಖವಾ ಜ್ಞಾನದ ಮಾತಾಡಿದರೇನು | ಘನಗುರು ಮಹಿಪತಿ ಸ್ವಾಮಿಯ ನೆನಯದೆ ಜನುಮವೇನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಾವವಿಲ್ಲದ ಬಯಲ ಭಜನೆಗೆ | ದೇವನೆಂದಿಗು ವಲಿಯನು | ಈ ವಿಷಯ ಫಲದಾಸೆ ಮನದೊಳು | ಭಾವಿಸುತ ವೃತ ತಪಗಳ್ಯಾತಕೆ ಪ ಮೀನು ನೀರೊಳಗಿದ್ದರೇನೈ | ಧ್ಯಾನವನು ಬಕ ಮಾಡಲು | ಮೌನದಲಿ ಕೋಗಿಲೆಯು ಇದ್ದರ | ದೇನು ವನವಾಶ್ರಯಿಸಿ ಮರ್ಕಟ 1 ಉರಗ ಪವನಾಹಾರ ಭಸ್ಮವ | ಖರ ವಿಲೇಪನ ಮಾಡಲು | ತರು ದಿಗಂಬರವಾಗಿ ಮಂಡುಕ | ಕೊರಳೊಳಕ್ಷರ ಜಪಿಸಲೇನದು 2 ಮೂಷಕ ಗುಹ್ಯಲಿರಲೇ | ನರಿತು ಗಿಳಿ ಮಾತಾಡಲು | ಗುರು ಮಹಿಪತಿ ಬೋಧವಾಲಿಸಿ | ಹರಿಯ ಭಾವದಿ ನಂಬಿ ಸುಖಿಸಿರೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು