ಒಟ್ಟು 2071 ಕಡೆಗಳಲ್ಲಿ , 107 ದಾಸರು , 1650 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಕ್ಷೆಸೆನ್ನ ಈ ಕ್ಷಣದಲುಪೇಕ್ಷೆ ಮಾಡದೆ ಪಕ್ಷಿವಾಹನ ಪರಮಪುರುಷ ಲಕ್ಷ್ಮಿನಾಯಕ ಪ ಅಂದಂದಿಂದ ಕೈಯಹಿಡಿದು ಚಂದದಿಂದ ಎನ್ನಬಿಡದೆ ಇಂದು ನಿನ್ನ ದ್ವಂದ್ವ ಚರಣಕ್ಹೊಂದಿದ ದಾಸನು ಎಂದು 1 ಕಷ್ಟಿ ಇವನು ಎಂದು ಕರುಣ ದೃಷ್ಟಿಯನೆ ತೋರುಬೇಗ ಸೃಷ್ಟಿಗೊಡೆಯ ನಾದ ಶ್ರೀ ಕೃಷ್ಣಮೂರುತಿ ನೀನೆ ಗತಿ 2 ಇಂದು ಮಾಡಿದಂಥದೆಂಥಾ ದೋಷವೊ ಹರಿಯೆ ಇಂದು ಎನ್ನ ಬಾಧಿಸುವುದು ಏನು ಕಾರಣವೊ ಕೃಷ್ಣಾ 3 ಸಜ್ಜನರ ರಕ್ಷಕ ದೇವ ಸರ್ವಜನರ ಪೋಷಕ ನೀನೆ ದುರ್ಜನರ ಖಂಡಿಸಿದ ಮೂಜ್ಜಗ ಪಾಲಕ ನೀನೇ ಎಂದೂ 4 ಪುಂಡರೀಕವರದ ಭೂಮಂಡಲಾಧಿಪತಿಯೆನಿಸಿ ಮಹಿಮವುಳ್ಳದೇವ 5 ಭಾವಜನಯ್ಯ ಭವ ಸ್ತೋತ್ರ ಪ್ರೀಯಾ ಪೊರೆಯದಲಿರುವದು ದೇವಾ 6 ಗಂಗೆ ಜನಕ ಮಂಗಳಾಂಗ ಕರುಣಾಸಾಗರ ಘನಗಂಭೀರಾ ರಂಗ `ಹೆನ್ನವಿಠಲ' ಕೃಪಾಂಗ ದೇವೋತ್ತುಂಗ ಹರಿಯೆ7
--------------
ಹೆನ್ನೆರಂಗದಾಸರು
ರಂಗ ಕೊಳಲನೂದುತ ಬಂದಯಶೋದೆಯ ಕಂದ ಪ ಕೊಳಲ ಧ್ವನಿಗೆ ವಿರಹವು ನಾರಿಯರಿಗೆಕಳಕಳÀವಾಗಲು ಕಳಕಳಿಸುತ ಅ.ಪ. ಶೃಂಗಾರ ಕೊಳಲ ಗಾಯನ ಮಾಡೆಸ್ತ್ರೀಯರು ನೋಡೆ ರಂಗನ ಪಾದದಲಿ ಮನ ಹೂಡೆಭೃಂಗಾಮೃತ ತೈಲದಿಅಂಗನೆಯರು ಝಳಕವ ಮಾಡೆದೇವರ್ಕಳು ನೋಡೆತುಂಗವಿಹಂಗ ಭುಜಂಗ ನವಿಲು ಸಾ -ರಂಗ ಗಿಣಿಯು ಮಾತಂಗ ಮರಿಯು ಕು-ರಂಗ ಮಧ್ಯೆ ಚರಣಂಗಳೆಡೆಗೆ ವೇ-ದಂಗಳೆರಗೆ ಕಾಮಂಗಳಲುಗೆ ನೇ-ತ್ರಂಗಳಿಗತಿ ಚಿತ್ರಂಗಳಾಗೆ ಆರಂಗನೂದ್ವ ಸಾರಂಗ ಕೇಳಿ ಋಷಿಪುಂಗಸಹಿತ ತಾವುಗಳು ಬರೆ ನರ-ಸಿಂಗನೂದಿದ ಜಗಂಗಳ ಮೋಹಿಸಿ1 ಬಂಗಾರ ಬಟ್ಟಲೊಳಗೆ ಅಂದುಕ್ಷೀರವ ತಂದು ರಂಗಗರ್ಪಿಸುವೆವು ನಾವೆಂದುಹರುಷದೊಳಂದು ಅಂಗನೆಯರು ಮೈಮರೆತು ನಿಂದುಒಲಿಯಬೇಕೆಂದು ಮಂಗಳ ಮಹಿಮನು ನೀನೆಂದುಅತಿಭಕುತಿಯೊಳಂದುತುಂಗ ವಿಕ್ರಮನ ಪದಂಗಳಿಗೆರಗಲುರಂಗ ನೆಗಹಿ ಕರಂಗಳ್ಹಿಡಿಯ ಮೋ-ಹಂಗಳಿಂದ ವಿರಹಗಳ್ಹೆಚ್ಚಿ ರವಿಕೆಂಗಳುಡೆಯ ಕುಚಂಗಳು ಬಿಟ್ಟಾ-ಲಿಂಗಿಸುತಿರೆ ಶ್ರೀ ಮಂಗಳಾಂಗಗೆ ಪು-ಷ್ಪಂಗಳಿಂದ ವರುಷಂಗಳು ಮೇಲ್ ಸುರ-ರಂಗಳು ಸುರಿಯೆ ಉತ್ತುಂಗ ಮಹಿಮ ಹರುಷಂಗಳ ಬೀರುತ ಅಂಗನೆಯರಿಗೆ 2 ಮಂದಿರ ಮಾನಿನಿಯರು ಬಿಟ್ಟುಮನದಲಿ ಕಂಗೆಟ್ಟುಮಂದರೋದ್ಧರನಲ್ಲೆ ಮನವಿಟ್ಟುಕರೆಕರೆಯ ಬಿಟ್ಟುಚಂದದಿ ಕರ್ಪೂರ ವೀಳ್ಯವನಿಟ್ಟುಸಡಗರವ ತೊಟ್ಟುಒಂದಾಗಿ ಚೆದರುತ ತೋಷವ ತೊಟ್ಟುತ್ವರೆ ಬರುವರು ಅಷ್ಟುಅಂದದಿಂದಲಾನಂದವೇರಿ ಮು -ಕುಂದನಂಘ್ರಿ ಮುದದಿಂದ ಸ್ಮರಿಸಿ ಬರು-ವಂದ ನೋಡಿ ಗೋವಿಂದ ಕೊಳಲ ಬಹುಅಂದದೊಳಿಡೆ ಈ ಇಂದುವದನೆಯರುಚಂದ್ರನುದಯವಾದಂತೆ ಆಯ್ತು ಮನಗಂಧ ಕಸ್ತೂರಿ ತಂದು ಆಗ ಹರಿಕಂದರದೊಳಗಿಡೆ ರಂಗವಿಠಲ ದಯದಿಂದ ನೋಡ್ದ ಪುರಂಧ್ರಿಯರನ್ನು3
--------------
ಶ್ರೀಪಾದರಾಜರು
ರಂಗ ಬಾರೈಯ್ಯ ದೇವೋತ್ತುಂಗ ದಯಾಂತರಂಗ | ಅಂಗಜನಯ್ಯ ನರಶಿಂಗಾ ಸಾರಸಾಪಾಂಗ || ಮಂಗಳ ಮಹಿಮಾ ವಿಹಂಗ ಘೋರ ಭವಭಂಗರಹಿತ ರಣರಂಗ ವಿಜಯ || ಸನ್ನುತ ಶೃಂಗಾರಾಂಗ ರಮಾಂಗನಾಸಂಗ ಪ ಶತಕೋಟಿ ಭಾಸ್ಕರ ಯುತತೇಜ ಮರುತಾಂತರ್ಗತ | ಹರಿಮೃದು ಭಾಷಣ | ಕೌಸ್ತು ಭಾಭರಣ | ಜಿತದಿತಿಸುತಬಾಲ | ಶ್ರಿತಭಕ್ತ ಮಂದಾರ | ಪತಿತ ಪಾವನ ಶ್ರೀರಾಮ ಪಟ್ಟಾಭಿರಾಮ | ಅತುಲಿತ ಚರಿತ ಕಾಮಿತ ಫಲದಾಯಕ | ಶತ ಧೃತಿ ಜನಕಾಚ್ಯುತ ಸರ್ವೋತ್ತಮ | ಸತತವು ನೀನೇ ಗತಿಯೆಂದೆನುತಲಿ | ಹಿತದಿ ನಾನು ನಿಮ್ಮ ಸ್ತುತಿಸುತಲಿರುವೆನು 1 ನಂದನಂದನ ವೇಣುನಾದ ವಿನೋದ ಜಗದ್ವಂದ್ಯ ಶ್ರೀವತ್ಸಲಾಂಛನ ವಾಸುಕಿಶಯನ | ಮಂದಹಾಸ ಮುಚುಕುಂದವರದ ರಾಕೇಂದುವದನ | ಗೋವಿಂದ ಇಂದಿರಾನಂದ ಸಿಂಧು ಗಂಭೀರಾ | ಮುಕುಂದ ಧರಣೀಧರ ಕುಂದರದನ ಕಾಳಿಂದಿರಮಣ ಗಜೇಂದ್ರನ ಸಲಹಿದ ಛೆಂದದೆನ್ನ ಮೊರೆಯಿಂದಿಗೆ ಲಾಲಿಸೊ ಪರಮಾತ್ಮ ಸರಸಿಚೋದರ ಸಕಲಾಣುರೇಣು ಪರಿಪೂರ್ಣ 2 ನಿರುಪಮಧೀರ ಶರಣಾಗತ ರಕ್ಷಣ ಮಧುಸೂದನ ಸುರವರ ಪೂಜಿತ ಚರಣಾಂಭೋರುಹ ಕೃಪಾಕಾರ ಹರುಷದಲಿ 3
--------------
ಹೆನ್ನೆರಂಗದಾಸರು
ರಂಗನಂಘ್ರಿಯಂಗುಷ್ಠೆ ಸಂಗೆ ಭವಭಂಗೆ ಪ ಉಪೇಂದ್ರ ಭಗವಂತ ಪಟುರೂಪ ಧರಿಸಿ ಚಂದ್ರಮಂಡಲ ಮೀರಿ ಬೆಳದಜಾಂಡವನೊಡಿಯೆ ಸಾಂದ್ರಗುಣದಿಂದ ಉದ್ಭವಿಸಿದೆ ಜನನಿ 1 ಕಮಲವನು ತೊಳಿಯಲಾವೇಗದಿಂದ ವಿಮಲಗತಿಯಲಿ ಬಂದು ಮಂದಾಕಿನಿ ಎನಿಸಿ ಸುಮನ ಸಾವನಿಯಲ್ಲಿ ಪರಿದೆ ಸ್ವರ್ಣನದಿಯೇ2 ಧ್ರುವಲೋಕಕಿಳಿದು ಅಮರಾಲಯವ ಸಾರಿದೆ ತವಕದಿಂದಲಿ ಧುಮುಕಿ ಚತುರಭಾಗವಾದೆ ಭವ ಪರಿಹರಿಸಿ ಭಾಗೀರಥಿ ಎನಿಸಿದೆ 3 ಭವದೊರೆ ಭಗೀರಥಗೆ ಒಲಿದು ಬರುತ ಜವನ ಮನಿಯ ಕೊಡ ಮಣಿಕರ್ಣಿಕೆ ನೆರದೆ4 ಅಳಕನಂದನೆ ನಿನ್ನ ಸ್ಮರಣೆ ಮಾಡಿದ ಜನಕೆ ಕುಲಕೋಟಿ ಉದ್ಧಾರ ನಿಃಸಂದೇಹಾ ಮಜ್ಜನ ಪೊಳೆವ ವೈಕುಂಠಪುರ ಅವನ ಹೃದಯದಲಿ5 ಕುಲಪ್ರವಹವಾಗಿದ್ದ ಜೀವರ ಪುಣ್ಯವನು ಹೇಳಿ ಕೇಳುವವನಾರು ಮೂಲೋಕದಿ ಸೀಲಗುಣ ಸಂಪನ್ನೆ ವರುಣನರ್ಧಾಂಗಿನಿ ಕಾಲ ಕಾಲಕೆ ನಿನ್ನ ಧ್ಯಾನದಿಂದಲ್ಲಿರಿಸು 6 ದೇಶದೇಶದಲಿಂದ ಬಂದ ಸುಜನರ ಪಾಪ ಮಾಧವ ಚಲುವ ಶ್ರೀನಿವಾಸ ಯದುಪತಿ ವಿಜಯವಿಠ್ಠಲನ ಸುತೆ ಖ್ಯಾತೇ 7
--------------
ವಿಜಯದಾಸ
ರಂಗನಾಥನೆ ನೀಲಘನಂಗ ದೇವರದೇವ ಗು-ಣಂಗಳ ಖಣಿಯೆ ನಿನ್ನ ಪದಂಗಳು ಗತಿಯೆಮಗೆ ಪ. ಉಭಯಕಾವೇರಿ ಮಧ್ಯದಲಭಯನೀವುತ ಪವಡಿಸಿದಬುಜಲೋಚನನೆ ನಿನ್ನ ವಿಭವಕ್ಕೆ ನಮೋಯೆಂಬೆ 1 ದೋಷದೂರನೆ ಭೂಮಿಗೆ ಭೂಮೋಹನನೆ ರಂಗಶ್ರೀಶ ನಿನ್ನ ನಂಬಿದೆ ಶೇಷÀಶಯನ ಕಾಯೊ 2 ಚೆಲುವ ನಿನ್ನನು ಪೋಲುವರಿಲ್ಲ ಮೂಜಗದೊಳು ಲಕುಮಿಯನಲ್ಲ ನಿನ್ನನು ಬಣ್ಣಿಸಲಳವಲ್ಲವೋ ಹಯವದನ 3
--------------
ವಾದಿರಾಜ
ರಂಗಯ್ಯ ನಿನಗಿದು ಸರಿಯೇನು ಹರಿಯೆ ಪ ಮಂಗಳಮಹಿಮ ಕೃಪಾಂಗ ತವ ಪಾದಾಂತ ರಂಗದಿ ಭಜಿಪರ್ಗೆ ಭಂಗವೆ ಜಗದೊಳು ಅ.ಪ ಪರಿಪರಿ ಮೊರೆಯಿಟ್ಟು ಸೆರಗೊಡ್ಡಿ ಚರಣದಿ ನಿರುತದಿಂ ಬೇಡಲಮರೆ ಕಾಯದಿರುವರೆ 1 ದೀನದಯಾಳುವೆ ನೀನೆ ಗತಿಯೆನ್ನುತ ಧ್ಯಾನಿಪ ಬಡವರ ಮಾನ ಕಾಯದಿಹ್ಯರೆ 2 ನಿನ್ನ ಬಿಟ್ಟರೆ ಅನ್ಯಯಿನ್ನಿಲ್ಲ ಜಗದಿ ಭಾರ ನಿನ್ನದೇ ಶ್ರೀರಾಮ 3
--------------
ರಾಮದಾಸರು
ರಂಗವಲಿದ ರಾಯರ ಪಾಡಿರೆ ಪ ಸಲೆನಂಬಿದವರ ಕಲುಷಗಳೋಡಿಸಿ ಸಲುಹಲು ಸ್ತಂಭದಿ ನೆಲೆಸಿದಂಥ ರಾಯರ 1 ಬಾಗಿ ನಮಿಸಿ ಮುಂ ನವ್ಯಾತಕೆ ತವ ಸೂಸು ನಾನಲ್ಲವೆ | ಮಾನವಿ ನಿಲಯ 1 ದಾಸವರ್ಯನೆ | ಭಾಸುರಸ್ತಂಭ ನಿವಾಸ ಧೀರನೆ ಈ ಸಮಯಿದಿ ಷಡ್ದ್ವೇಷಿಗಳೆನ್ನತಿ ಘಾನಿಗೊಳಿಸುವರುದಾಸೀನ ಮಾಡದೆ 2 ಸಾಧು ಶೀಲನೆ ಪ್ರಹ್ಲಾದ ನನುಜ ಸÀಹ್ಲಾದ ಶಲ್ಯನೆ ವಾದಿರಾಜ ಶತಮೇಧ ನಾಮಾರ್ಯರ ಪಾದಾರಾಧಕ ಭೇದ | ಬೋಧಕ 3 ಭಾರತಿವರ ಕೃತ ಶಾಸ್ತ್ರಮರ್ಮವಿಚಾರ ಬಂಧೂರ ಸಾರಸಭವ ಪಿತ | ಶ್ರೀರಮಾಪತಿ ಸಾರ ವಕ್ತಾರ 4 ಪ್ರೇಮಸಾಗರ ನೀ ಮರೆದರೆ ಈ ಪಾಮರನಿಗೆ ಯಮ ಧಾಮವೆ ಗತಿ ನಿಜ ಹೇ ಮಮ ಸ್ವಾಮಿ 5
--------------
ಶಾಮಸುಂದರ ವಿಠಲ
ರಘುಕುಲ ತಿಲಕ ವಿಠಲ ಇವಳ ಘಾವಳಿಗಳನುಬಗೆಹರಿಸಿ ಕಾಪಾಡ ಬೇಕೋ ಹರಿಯೇ ಪ ಭೃಗುವರದ ನಿನ್ನಂಘ್ರಿ ಸೇವೆಯಲಿ ಮಹಭಕ್ತಿಮಿಗೆ ಜ್ಞಾನ ಕೊಟ್ಟಿವಳ ಕಾಪಾಡ ಬೇಕೋ ಅ.ಪ. ಶಬರಿ ಎಂಜಲನುಂಡ | ಕಾರುಣ್ಯ ಮೂರುತಿಯೆಅಭಯದನು ನೀನಾಗಿ ವಂಶ ಉದ್ಧರಿಸೋ |ಕುಭವ ಪರಿಹರಕಾಗಿ ಸಾಧನವು ಎಂದೆನಿಪಶುಭ ಸದಾಗತಿ ಮತದಿ ದೀಕ್ಷೆಯನೆ ಈಯೋ 1 ಪಾದ ಸೇವಕಳೀಗೆಭೇದ ಪಂಚಕ ತಿಳಿಸಿ ಸಾಧನವಗೈಸೋ 2 ಸರ್ವಜ್ಞ ಸರ್ವೇಶ ಹಯಮೊಗಾತ್ಮಕನಾದಸರ್ವ ಸುಂದರ ಗುರುಗೋವಿಂದ ವಿಠಲ |ಸರ್ವದಾ ಸರ್ವತ್ರ ನಿನ್ನ ಸ್ಮøತಿಯನೆ ಕೊಟ್ಟುದರ್ವಿಜೀವಿಯ ಸಲಹೆ ಬಿನ್ನವಿಪೆ ನಿನಗೇ 3
--------------
ಗುರುಗೋವಿಂದವಿಠಲರು
ರಘುನಾಥ ದೀನಾನಾಥ ಸದ್ಗತಿದಾತ ನೋಡಿರ್ಯೋ ಜಾನಕಿ ಧವಗರ್ಪಿತವೆನೆ ಅವನಿಯೊಳಗೆ ಶಬರಿ ಘವಘವಿಸುತಿಹ ಅವಿರಳ ಪದದನುಭವ ನೀಡಿದಾ1 ದಾವನು ಶೃತಿಗಳು ಭಾವಿಸೆ ನುಡಿಯದು ದೇವನು ಹಿತಗುಜ ಕೇವಲ ವನಚರ ಜೀವರೊಳಾಡುತ ಸೇವೆಗೆ ನಲಿಯುತ ಕೈವಿಡಿ ಬಿತ್ತನು ಕೈವಲ್ಯಾದಾ 2 ಕುಂದದೆ ಬಾಂಧವ ನಿಂದಿಸಿ ನೂಕಲು ನೊಂದು ವಿಭೀಷಣ ಬಂದರ ಶರಣವ ತಂದೆ ಮಹಿಪತಿ ನಂದನ ಪ್ರಭು ಆ ನಂದದ ಸ್ಥಿರಪದ ಹೊಂದಿಸಿದಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಘುರಾಯ ಯನ್ನಮನವ ನಿಲಿಸಲಾಗದೇ ನಿನ್ನ ಚರಣ ಕಮಲಲಿದ್ದು ತನ್ನ ಹರಿ ಬೀಳದಂತೆ ಪ ಹನುಮನೊಡನೇ ಕಾಂತ ಮಾತ ಅನುವರದಲಿ ಆಡುತಿರಲು ವನಧಿ ಘೋಷವನ್ನೆ ಕಂಡು ವನಜ ಕರವನೆತ್ತಿಕೊಂಡು ನಿಲ್ಲಲು ಎನಲು ತ್ಯಜಿಸಿ ತನ್ನದರ್ಪನು ಆಸ್ಥಳದಿ ಧರೆಯದೋರಿ ಸುಮ್ಮನಿಪ್ಪನು ಆಂದಿಗಿಂದಿಗಿನಿತು ವಾಕ್ಯ ಮೆರೆದಪ್ಪನು 1 ಶರಧಿ ಮಥನದಲ್ಲಿ ಮುಣುಗು ತಿರಲು ಗಿಲಿಯನೆತ್ತಿ ನಿಳಹಿ | ಹೊರೆದೆ ಸುರರ ಬಳಿಕಧರಣಿ ಹಿರಣ್ಯಾಕ್ಷ ವಯ್ಯಲಾಗ ವರಹರೂಪದಿಂದ ಮೂಡಿದೇ ಈ ಜಗವ ಕೊರೆದಾಡಿ ಲೆತ್ತಿ ಆಡಿದ ಅಧೃವನ ತಿರಗದಂತೆ ಅಢಳ ನೀಡಿದೆ 2 ನಿನ್ನ ಕಥೆಯ ಶ್ರವಣಮಾಡಿ ನಿನ್ನ ನೋಡಿ ಕೂಡಿ ಪಾಡಿ ನಿನ್ನ ನಿರ್ಮಾಲ್ಯ ಘ್ರಾಣಿಸುತಲಿ ನಿನ್ನದಾಸ ನೆನಿಸಿ ಧನ್ಯಗತಿಯ ಪಡೆವ ತೆರದಲಿ ನಿಲಿಸಬೇಕು ಎನ್ನ ಮನವ ಕರುಣದಿಂದಲಿ ಮಹಿಪತಿಸುತನ್ನ ಸ್ವಾಮಿ ಸಲಹು ಜಗದಲಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಘುವೀರನ ಕಂಡನು ಕಪಿವೀರ ಕಲಿಕಲ್ಮಷದೂರ ಪ ಅಘವರ್ಜಿತ ಪನ್ನಗಶಯನನೆಂದು ಬಗೆದು ಮನದಿ ಕರಮುಗಿದನು ದೂರದಿ ಅ.ಪ. ಶಿರಭಾಗದಿ ಮೆರೆವ ಜಟಾಮಕುಟ | ಚಿಕುರಾಳಿಯಿಂದ ಪರಿಶೋಭಿಪ ಸುಂದರ ಲಲಾಟ | ಕಮಲಾಕ್ಷಗಳಲಿ ನಾಸಿಕ ಬಲು ಮಾಟ ಸ್ಮರಲಾವಣ್ಯ ಧಿಕ್ಕರಿಸುವ ಸುಂದÀರ ಶರಧಿ ಗಂಭೀರನ 1 ಆಜಾನುಬಾಹುಗಳತಿ ಪ್ರಶಸ್ತ | ಸುರಚಾಪದಂತೆ ರಾಜಿಪ ಧನುವ ಧರಿಸಿದ ಹಸ್ತ | ವಿಶಾಲ ವಕ್ಷಕೆ ಈ ಜಗದೊಳಗುಪಮೇಯದೆತ್ತ | ದೋಷನಿರಸ್ತ ಮೂಜಗದೊಳಗತಿ ಸೋಜಿಗನೆನಿಪ ಸು ತೇಜದಿ ರಾಜಿಪ ರಾಜಕುಮಾರನ 2 ಸುಂದರ ತ್ರಿವಳಿಗೊಪ್ಪುವ ಉದರ | ನೆರೆ ಗಂಭೀರ ಚಂದದಿ ಶೋಭಿಪ ನಾಭಿಕುಹರ | ಚೀರಾಂಬರಧರ ಬಂಧುರ ಕಟಿತಟ ಬಲು ರುಚಿರ | ನೋಳ್ಪರ ಚಿತ್ತಹರ ಕುಂದಿಲ್ಲದ ಪದದ್ವಂದ್ವ ಸುಶೋಭಿತ ಸುಂದರಾಂಗ ಶ್ರೀ ಕರಿಗಿರೀಶನ 3
--------------
ವರಾವಾಣಿರಾಮರಾಯದಾಸರು
ರಥವಾನೇರಿದ ಶ್ರೀ ಹನುಮಂತ | ಭೀಮ ಬಲವಂತ ಪ ಗತ ಶೋಕನ ಪದ | ರತಿ ಇಚ್ಛಿಪರಿಗೆಹಿತದಿಂದಲಿ ಸದ್ | ಗತಿಯ ಕೊಡುವೆನೆಂದು ಅ.ಪ. ಪತಿ ಕರಿಸೆನ್ನಲು |ಪ್ರತಿ ಪ್ರತಿ ತತುವರು | ಗತ ವಿಭವದಲಿರೆಪ್ರತಿ ನಿನಗಿಲ್ಲೆಂದೆ | ನುತಲಿ ತೋರಿದ 1 ಗರ ಉದುಭವಿಸಲುಹಿತದಿಂದಲಿ ಜಗ | ಪತಿಯಾಣತಿಗಳ |ಪತಿ ಕರಿಸುತ ನೀ | ಪಾತ್ರಗ ಗರವನುಮತಿ ವಂತನೆ ಕುಡಿ | ದತಿಶಯ ತೋರಿದೆ 2 ಮೂರು - ಕೋಟಿಯ ರೂಪ - ಧರನೆ | ಮೂರ್ವಿಕ್ರಮ ಸೇವಕನೆಮೂರು ಲೋಕಂಗಳ ವ್ಯಾಪಕನೆ | ರಕ್ಕಸಾಂತಕನೆ ||ಆರು ಮೂರುಗಳು | ಎರಡೊಂದನೆ ದಶನೂರು ಮೇಲೆ ಆ | ರ್ನೂರ್ ಜಪಗಳ |ಮೂರು ಭೇದ ವಿಹ | ಜೀವರುಗಳಲಿವಾರ ವಾರಕೆ ನೀ | ಗೈಯ್ಯುವೆ ಗುರುವೇ 3 ವಿಶ್ವ ಕ ಕರ್ಮ ಸಮೂಹವಸಾಕ್ಷಾತ್ತಾಗಿ ತಾನೆ | ಗೈಯ್ಯುವೆನೆಂದು 4 ಆನನ ಕಮಲಕೆಭಾನುವೆನಿಸುತಲಿ | ದುಶ್ಯಾಸನನಗೋಣ ಮುರಿದುರದಿ | ಕೋಣನ ವಿರಚಿಸಿಶೋಣಿತ ಕುಡಿದಂತೆ | ಕಾಣುವೆನೆಂದು 5 ಚಕ್ರಧರ | ಅಂಬುಜ ನಯನನಬೆಂಬಿಡದಲೆ ನೀ | ಸಂಭಮ್ರದಲಿ ನಿನ |ಅಂಬಕದಲಿ ನಿನ | ಬಿಂಬನ ಕಾಣುತತ್ರ್ಯಂಬಕನಿಂ ಸಂ | ಭಾವನೆ ಗೊಳ್ಳುತ 6 ಮಾಘ ಶುದ್ಧವು ನವಮಿಯ ದಿನದಿ | ಪಾರ್ಥಿವ ವತ್ಸರದಿಸಾಗರ ಕಟ್ಟೆ ಯತಿ ಸಮ್ಮುಖದಿ | ಕುಳ್ಳಿರುತಲಿ ರಥದಿ ||ನಿಗಮಗಳಿಗೆ ಸಿಗ | ದಗಣಿತ ಗುಣಮಣಿಖಗವರ ಗುರು ಗೋ | ವಿಂದ ವಿಠ್ಠಲನ |ಸುಗುಣ ಗಣಂಗಳ | ಬಗೆ ಬಗೆಯಿಂದಲಿಪೊಗಳುವರಘಗಳ | ನೀಗುವೆನೆನ್ನುತ 7
--------------
ಗುರುಗೋವಿಂದವಿಠಲರು
ರಥಾರೂಢ ಮಾರುತ ವಂದಿತ ಯನ್ನಾ ಪಥವ ತೋರೋ ಬೇಗ ಮುಂದಿನ ಪಥವ ತೋರೋ ಬೇಗ ಪ ಸತೀಸುತರುಗಳು ಅತಿಹಿತರೆಂಬುದು ಮತಿಗಳ್ದು ಸದ್ಗತಿಯನು ಪಾಲಿಸು ಅ.ಪ. ದೀನ ಜನರ ಸುರಧೇನುವೆ ನೀ ಬಂಧು ಆನತ ಜನರನು ಮಾನದಿಂದ ಕಾಯೋ 1 ಹನುಮ ಭೀಮ ಮಧ್ವ ಮುನಿನುತ ದೇವನೀ ವನರುಹದಳನೇತ್ರ ಅನಿಮಿಷರೊಡೆಯ 2 ದುಷ್ಟ ಜನರುಗಳರಿಷ್ಟಗೋಸುಗ ಶಿಷ್ಟ್ಟಿಲಿ ಬಂದು ಸುಜನೇಷ್ಟಪ್ರದನಾದಿ 3 ಶಿರಿವತ್ಸಾಂಕಿತ ನಿನ್ನ ಚರಣಕಮಲದಲ್ಲಿ ನಿರುತ ಭಕುತಿಯಿತ್ತು ಪೊರಿಯುತ ಸರ್ವದಾ 4
--------------
ಸಿರಿವತ್ಸಾಂಕಿತರು
ರಾಘವೇಂದ್ರ ತೀರ್ಥರು ಕರುಣಿಗಳೊಳಗೆಣೆಗಾಣಿ ನಾ ನಿನಗೆ ಸ ದ್ಗುರುವರ ರಾ‌ಘವೇಂದ್ರ ಚರಣ ಕಮಲಯುಗ ಮೊರೆಹೊಕ್ಕವರ ಮನದ ಹರಕೆಯ ನಿರುತ ಈವೆ ನೀ ಕಾವೆ ಪ ರಾಘವೇಂದ್ರ ಗುರುವೆ ನೀ ಗತಿ ಎಂದನು ರಾಗದಿಂದಲಿ ಭಜಿಪ ಭಾಗವತರ ದುರಿತೌಘಗಳಳಿದು ಚ ನ್ನಾಗಿ ಸಂತೈಸುವೆ ನೀ ಸನ್ಮೌನಿ 1 ಸುಧೀಂದ್ರ ಯತಿಕರ ಪದುಮ ಸಂಭವ ಮಧು ವದ ಪಾದಾಂಬುಜ ಮಧುಪಾ ತ್ರಿದಶ ಭೂರುಹದಂತೆ ಬುಧ ಜನರೀಪ್ಸಿತ ಒದಗಿ ಪಾಲಿಸಿ ಪೊರೆವೆ ಮದ್ಗುರುವೆ 2 ಕುಧರದೇವನ ದಿವ್ಯರದನದಿ ಜನಿಸಿದ ನದಿಯ ತೀರದಿ ಶೋಭಿಪ ಸದಮಲ ಘನಮಂತ್ರ ಸದನನಿಲಯ ಜಿತ ಮದನ ಶ್ರೀ ಜಗನ್ನಾಥ ವಿಠಲದೂತ 3
--------------
ಜಗನ್ನಾಥದಾಸರು
ರಾಘವೇಂದ್ರಯತಿ ಗುರುರಾಯರ ಮಹಿಮೆ ಕೇಳಿರಿ ನಮ್ಮ ಗುರುರಾಯರ ಮಹಿಮೆ ಪ ಪರಮ ಭಕುತಿಯಿಂದ ಸ್ಮರಿಸುವ ಸುಜನರ ದುರಿತಗಳÀ್ಹರಿಸಿ ಸದ್ಗತಿ ಪಥವ ತೋರುವ ಅ.ಪ ಇಂದಿರೇಶನ ಮಹಿಮೆ ಪೊಗಳುವ ಭಕ್ತ ಸಂದಣಿ ಪೊರೆಯುವರ ಹಿಂದಿನ ಅಘಗಳನೊಂದೂ ನೋಡದೆ ಶ್ರೀ- ಮುಕುಂದನ ಭಜಕರ ಸಂಗಡ ನೀಡುವ ದಿವ್ಯ 1 ದೇಶ ದೇಶದೊಳಿವರ ಮಹಿಮೆಗಳ ಉ- ಲ್ಲಾಸದಿ ಪೊಗಳುವರ ದಾಸರೆಂತೆಂದು ಸಂತೋಷದಿ ಸೇವಿಪ ಮೀಸಲ ಮನದವರ ಪೋಷಿಸುತಿರುವಂಥ 2 ಹಲವು ಸಾಧನವೇತಕೆ ತನುಮನವ ಶ್ರೀ- ಹರಿಗೆ ಸಮರ್ಪಿಸಿರಲು ಕುಲಕೋಟಿ ಪಾವನ ಮಾಳ್ಪ ಶ್ರೀ ಗುರುಗಳ ಚರಣ ಸೇವಕರೆಂದು ಸಿರಬಾಗಿ ನುತಿಸಿರೊ 3 ನಿದ್ರೆ ಮಾಡುವ ಬಾಲೆಯ ಕರಗಳಿಗೆ ಶ್ರೀ- ಮುದ್ರಾಧಾರಣ ಮಾಡಿಹ ಸಜ್ಜನರಿಗಿವರ ಭಯ ವಜ್ರಕವಚವು ಸತ್ಯ ಹೃದ್ಗøಹದಲಿ ರಾಮಭದ್ರ ಮೂರುತಿ ಕಾಂಬ 4 ಸವಿನಯ ತೋರುವರ ಕನಲಿಕೆ ಕಳೆದು ಶ್ರೀ ಕಮಲನಾಭ ವಿಠ್ಠಲನೊಲುಮೆಯ ಪಡೆದ ಮಂತ್ರಾಲಯ ನಿಲಯ5
--------------
ನಿಡಗುರುಕಿ ಜೀವೂಬಾಯಿ