ಒಟ್ಟು 2434 ಕಡೆಗಳಲ್ಲಿ , 111 ದಾಸರು , 1677 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯೋಗಿ ಭಾವ್ಯ ಪದ್ಮಮುಖದಿವ್ಯ ಲಕ್ಷಣಾಂಚಿತ ಪದಯುಗಳ 1ಚಂದ್ರ ಕುಲಾವತಂಸ ದ'ುತ ಕಂಸಪರಮಹಂಸ ಚಿದಾವರ್ಣ'ತೇಂದ್ರಮುಖ್ಯ 'ಹಗೇಂದ್ರ ವಾಹನೋಪೇಂದ್ರಕಾಳಿಯೋರಗ ಮದಹರಣ 2ಕಂಜದಳನಿಭಾಕ್ಷ ಸುಜನರಕ್ಷದನುಜಶಿಕ್ಷಾ ಪ್ರ'ೀಣ ಧನಂಜಯಾರ್ತಿಹರಮಂಜುಭಾಷಣ ನಿರಂಜನಾಗಣಿತನಿರುಪಮಲೀಲಾ 3ನಂದಕ ಪ್ರಹರಣ ಭೂರಿಕರಣಾವಾಲ್ಯಶರಣಾ ಗತಾವನನಂದನಂದನ ಸನಂದನಾದಿ ಮುನಿ ಬೃಂದವಂದ್ಯ ಸಕಲಜನ ಶರಣ್ಯಾ 4ದಂತಿರಾಜವರದಾ ರಾತ್ರಿ ಚರದಾವಾಗ್ನಿ ಶರದವ್ರಜಶ್ರೀಕಾಂತ ಮೌನಿಘನ ಚಿಂತನೀಯವೇದಾಂತವೇದ್ಯಕೋಸಲಪುರ ನಿಲಯಾ 5
--------------
ತಿಮ್ಮಪ್ಪದಾಸರು
ರಕ್ಷಿಸೊ ಜಾನಕಿ ಕಾಂತ ಶಾಂತ ಪ ತಕ್ಷಣದಲಿ ಉಪೇಕ್ಷೆಯ ಮಾಡದೆ ಅ.ಪ ದಕ್ಷ ನಾನಲ್ಲವೊ ಪೊಗಳಲು ಶಾಸ್ತ್ರ ವಿ ಚಕ್ಷಣೆಯರಿಯೆನೋ ಲಕ್ಷ್ಮೀನಾಥ1 ಸಂತತಪಡುತಿಹ ಚಿಂತೆಯ ಬಿಡುತಲಿ ಶಾಂತಿಯ ಪೊಂದುವ ತಂತ್ರವ ತೋರುತ 2 ಬೇಡುವ ವಿಧದಲಿ ರೂಢಿಯಿಲ್ಲದೆ ಬಲು ಪಾಡುಪಡುತಿಹೆನೋ ನೀಡುತ ಕರವನು 3 ಕ್ಷೀಣಿಸೆ ಉರುತರ ತಪಗಳಿಂ ತನುವನು ತ್ರಾಣವಿಲ್ಲವೋ ರಮಾಪ್ರಾಣನಾಥನೆ 4 ಕೆಟ್ಟಯೋಚನೆ ಎನ್ನ ಮುಟ್ಟದೆ ಮನವನು ಘಟ್ಟಿಯ ಮಾಡುತ ಶಿಷ್ಟ ಪ್ರಸನ್ನನೇ 5
--------------
ವಿದ್ಯಾಪ್ರಸನ್ನತೀರ್ಥರು
ರಂಗ ಬಂದಾ ನಮ್ಮ ಭಂಗಿಸಿ ಕಾಳಿಯ ಫಣಿಯಲಿಂದು ಪ ವಿಷಧರನುರಿಯಿಂದ ನಿಸಿದಿನಿ ಕುದಿಯುತಿಹ | ವಿಷಮಡುವನೆ ಪೊಕ್ಕು ಕುಶಲದಿಂದಲಿ ರಂಗ ಬಂದಾ 1 ಉರಗೇಂದ್ರ ಬಂದನದಿ ಶರೀರ ಬೆಳಿಸಿ ತನ್ನ | ಬಿರಿವಂತವನತನು ಹರಿಸಿ ಮದವಾ2 ನೂರೊಂದು ಹೆಡೆಗಳ ಚರಣದಲೊತ್ತಿ ತುಳಿದು | ಸುರರಾ ಗೀತದಿ ನೃತ್ಯ ಚರಿತವ ದೋರಿ 3 ಸತಿಯರ ಮೊರೆಕೇಳಿ ಪತಿದಾನವನೆ ಕೊಟ್ಟು | ಕ್ಷಿತಿಯೊಳು ಗೋಕುಲದುನ್ನತ ಭಾಗ್ಯದಲಿ 4 ತಂದೆ ಮಹಿಪತಿ ನಂದನ ಪ್ರಭು ಸ್ವಾ | ನಂದವ ಸುರನರ ವೃಂದಕ ಬೀರಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಂಗ ಮಂಗಳಂ ಸದಾ ಬೃಂದಾವನ ವಿಹಾರಿ ಪ ಕುಂದ ದಂದದಂತಿಹ ದಂತ ಭಾಸಿತ 1 ತುಳಸಿ ರೂಪದ ಅಲಕಭಾಸಿತಾಮಲಕ ಸನ್ನಿಭ ತಿಲಕ ಭಾಸುರ 2 ಕುಂಡಲೋಜ್ವಲಾ ಖಂಡಸೋದರ ಜಂಡರಾಕ್ಷಸ ಖಂಡನಶೀಲ 3 ಧೇನುನಾಮಕ ನಗರನಾಯಕ ಮಾನಿನೀ ಪ್ರಿಯ ಶ್ರೀನರಹರೆ 4
--------------
ಬೇಟೆರಾಯ ದೀಕ್ಷಿತರು
ರಂಗನಾಥನ ನೋಡುವ ಬನ್ನಿ ಶ್ರೀ- ಪ ರಂಗನ ದಿವ್ಯ ವಿಮಾನದಲ್ಲಿಹನಅ.ಪ. ಕಮನೀಯಗಾತ್ರನ ಕರುಣಾಂತರಂಗನಕಾಮಿತಾರ್ಥವೀವ ಕಲ್ಪವೃಕ್ಷನಕಮಲದಳನೇತ್ರನ ಕಸ್ತೂರಿ ರಂಗನಕಾಮಧೇನು ಕಾವೇರಿ ರಂಗನ1 ವಾಸುಕಿಶಯನನ ವಾರಿಧಿನಿಲಯನವಾಸುದೇವ ವಾರಿಜನಾಭನವಾಸವಾದಿ ಭಕ್ತ ಹೃದಯಾಂಬುಜದಲ್ಲಿವಾಸವಾಗಿರುತಿಹ ವಸುದೇವಸುತನ2 ಮಂಗಳಗಾತ್ರನ ಮಂಜುಳಭಾಷನಗಂಗಾಜನಕ ಅಜಜನಕನಸಂಗೀತಲೋಲನ ಸಾಧುಸಮ್ಮತನರಂಗವಿಠಲ ರಾಜೀವನೇತ್ರನ 3
--------------
ಶ್ರೀಪಾದರಾಜರು
ರಘುನಾಥ ದೀನಾನಾಥ ಸದ್ಗತಿದಾತ ನೋಡಿರ್ಯೋ ಜಾನಕಿ ಧವಗರ್ಪಿತವೆನೆ ಅವನಿಯೊಳಗೆ ಶಬರಿ ಘವಘವಿಸುತಿಹ ಅವಿರಳ ಪದದನುಭವ ನೀಡಿದಾ1 ದಾವನು ಶೃತಿಗಳು ಭಾವಿಸೆ ನುಡಿಯದು ದೇವನು ಹಿತಗುಜ ಕೇವಲ ವನಚರ ಜೀವರೊಳಾಡುತ ಸೇವೆಗೆ ನಲಿಯುತ ಕೈವಿಡಿ ಬಿತ್ತನು ಕೈವಲ್ಯಾದಾ 2 ಕುಂದದೆ ಬಾಂಧವ ನಿಂದಿಸಿ ನೂಕಲು ನೊಂದು ವಿಭೀಷಣ ಬಂದರ ಶರಣವ ತಂದೆ ಮಹಿಪತಿ ನಂದನ ಪ್ರಭು ಆ ನಂದದ ಸ್ಥಿರಪದ ಹೊಂದಿಸಿದಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರತಿಸಮಯಕೈದುತಿಹ ಸತಿರಚಿಸಿದುದ ಪೇಳ್ವೆಮತಿವಂತೆ ಅದರ ಭಾವವ ತಿಳಿದು ಪೇಳೆ ಪ ಕರಯುಗದಿ ವಜ್ರಮಯ ಕಂಕಣವ ಧರಿಸಿದಳುಅರಗಿಣಿಯ ನವಿಲ ಸೆರೆಯನು ಬಿಟ್ಟಳುಭರದಿ ಸಾಕಿ (ಸೆನಗಳ ?) ಕರೆದು ಕಳುಹಿದಳುಸರಸದಿಂ ದೀಪವನೆ ಮರೆಯೊಳಿರಿಸಿದಳು 1 ಯುವತಿ ಕೇಳ್ನಸುಗುತ ಕರ್ಣದೊಳೆ ಧರಿಸಿರ್ದಕುವಲಯವ ತೆಗೆದು ದೂರದೊಳಿಟ್ಟಳುತವೆ ಮಲ್ಲಿಕಾಮಂದಹಾಸವನೆ ಬೀರಿದಳುನವಮಣಿಹಾರವನೆ ಕೊರಳ್ಗೆ ಧರಿಸಿದಳು 2 ಭಾರ ಪಸರಿಸಲಾಗವರ ಕೆಳದಿ ರಾಮೇಶನಡಿಯ ಸ್ಮರಿಸಿದಳು 3
--------------
ಕೆಳದಿ ವೆಂಕಣ್ಣ ಕವಿ
ರಥವನೇರಿದ ರಥಗಾತ್ರ ಪಾಣಿ | ರಥಪತಿ ದಶರಥ ಸುತ ದಶರಥ ನೃಪ ಭಾಗೀ | ರಥಿ ವಿನುತಾ ಸು | ರಥನಯ್ಯ ಮನೋರಥ ದೇವ ಪ ಕರಿ ಭಯಂಕ ಹರ ಹರಿಣಾಂಕಾ | ಕಿರಣಶತ ಧಿಕ್ಕರಿಸುವ ದೇವಾ || ವರಮಣಿ ಭಕ್ತ ವರದಾಯುದಧಿ ತುರಗವು | ಪರತರ ತಮ ತರರಸ | ಪರಮ ಮಂಗಳ ಪುರುಷ ಪ್ರಧಾನಂ | ಪ್ರವಿಷ್ಠ ಭಾ | ಸುರ ಕೀರ್ತಿಹರ ನಿರುತ ಪ್ರದರು ಸುರಪತಿ 1 ಮಣಿಪ್ರಚುರ ಮುತ್ತಿನ ಮುಕುಟ ಸು | ಫಣಿ ಕಸ್ತೂರಿ ಕಂಕಣ ಕೇಯೂರ ಕಾಂ| ಕೌಸ್ತುಭ ಸೂರ್ಯನಗೆಲ್ಲ್ಲೆ | ವನಮಾಲೆ ಹರಿಮಣಿ ಪದಕ ಪಾ | ವನ ಪೀತಾಂಬರ ಮಿನಗುವ ಕಾಂಚಿ | ಝಣ ಝಣ ಮಹಾ | ಧ್ವನಿ ಚರಣ ಭೂಷಣವಾಗಿಯೂ ಮಾ | ನಿನಿ ಕೂಡಾ 2 ಎತ್ತಿದ ಶ್ವೇತಾತಪತ್ರ ಚಾಮೀಕರ | ವಿತ್ತ ನಭ ತುಳುಕುತ್ತಲಿರೆ ಧ್ವಜ | ಮಾತ್ರ ಬಂದಾಗಿ ತೂಗುತ್ತಿರಲು | ಸುತ್ತಲು ಊದುವ ತುತ್ತುರಿ ಶಂಖ | ವತ್ತಿ ಬಾರಿಸುವ ಮತ್ತೆ ವಾದ್ಯಗಳು | ತುತ್ತಿಸುವ ಮುನಿ | ಉತ್ತಮ ಜನ ಬಾ | ಗುತ್ತ ವಡನೆ ಬರುತಿರಲು 3 ವಸು ರುದ್ರಾದಿತ್ಯ ವಸುಜನರ ಪಾ | ಲಿಸುವೆನೆಂದು ದರಶನವು ಸರಸಿಜಗದಾಧರಿಸಿಕೊಂಡು ಅಷ್ಟ ರಸ ನಾಮಕ ಹರುಷದಿಂದ | ನಸುನಗುತ ನೀಕ್ಷಿಸಿಕೊಳುಂತ ಆ | ಲಸ ಮಾಡದೆ ರಂ | ಜಿಸುವ ಲೀಲಾಮಾನಸ ವಿಗ್ರಹ ಮೆ | ಚ್ಚಿಸಿದ ಜನರ | ವಶವಾಗಿಪ್ಪ ರಾಕ್ಷಸ ರಿಪು 4 ವನಧಿ ಚಿನ್ಮಯ ಉ | ಭಯಾ ಭಯ ಹಾರೆ | ಪಯೋವಾರಿ ನಿಧಿ | ಶಯನ ಚತುರ್ಬೀದಿಯಲಿ ತಿರುಗಿ | ಪ್ರೀಯದಿಂದಲಿ ಸ | ತ್ಕ್ರಿಯವಂತ ಜಯ ಜಯ ಪ್ರದಾ | ಸಾರಥಿ ನಿ | ರಯ ವಿದೂರ ವಿಜಯವಿಠ್ಠಲ ಸಾ | ಹಾಯವಾಗುವ ಗಿರಿಯ ವೆಂಕಟರಾಯ ಬಂದಾ 5
--------------
ವಿಜಯದಾಸ
ರಥವೇರಿ ಬರುತಿಹ ಗುರುರಾಯ ನಾ ನೋಡಮ್ಮಯ್ಯ ಪ ಅತಿಸದ್ಭಕುತಿಲಿ ಸ್ತುತಿಸುವರಿಗೆ ಸತ್ಪಥವನೆ ತೋರುವ ಕ್ಷಿತಿಪತಿದಾಸರೆ ಅ.ಪ ತಿದ್ದಿಹಚ್ಚಿದ ನಾಮ ಮುದ್ರೆಗಳಿಂದಲೋಪ್ಪುತಿಹರೇ ನೋಡಮ್ಮಯ್ಯ | ಕ್ಷುದ್ರರ ಮುಖಕೆ ಬೀಗ ಮುದ್ರೆಯ ನೊತ್ತುತ ಸದ್ವೈಷ್ಣವರ ನುದ್ಧರಿಸಿದ ಕರುಣೀ 1 ವರಶ್ರುತಿ ಸಮ್ಮತರಥ ನಿರ್ಮಿತವಾಗಿಹುದೇ ನೋಡಮ್ಮಯ್ಯ || ಸ್ಮರಪುರಹರ ಸಾರಧಿಯಾಗಿಹರೆಂದರಿತವರಿಗೆ ಶುಭಗರೆವ ದಯಾನಿಧೇ 2 ಶಾಮಸುಂದರನ ನಾಮಸುಧಾರಸವ ನೋಡಮ್ಮಯ್ಯ ಶ್ರೀಮಾನ್ ಮಾನವಿ ಕ್ಷೇತ್ರವೆ ತವನಿಜ ಧಾಮವೆಂದೆನಿಸಿ ಸುಸ್ತಂಭದೊಳಿಹರೇ 3
--------------
ಶಾಮಸುಂದರ ವಿಠಲ
ರಥವೇರಿ ಬರುತಿಹ ಗುರುವರನ್ಯಾರೆ ಪೇಳಮ್ಮಯ್ಯಾ ಪ ಟೀಕಾಕೃಧ್ಯ ತಿವರನಮ್ಮ ಅ.ಪ ಸ್ವೀಕರಿಸಿ ಮಾರುತನವತರಿಸಿ ಶೃತಿಸಮ್ಮತ ಶ್ರೀಮಧ್ಭಾಷ್ಯವತಾರಚಿಸಿ ಛಾತ್ರರಿಗೆ ವಿವರಿಸೆ ಕೇಳುತಲನುದಿನದಿ ಮಹಿಮ ಸುರಪತಿಯು ಕಾಣಮ್ಮ 1 ದೇಶಪಾಂಡ್ಯರಕುವರ ಕೇಳಲು ಗುರುವಚನ ಸಂಸಾರ ಸುಖವನ ಜಯ ತೀರಥರಮ್ಮ 2 ಸ್ಥಾಪಿಸಿದರು ಮುದದಿ ಶುದ್ಧಮಾಯಿ ಸುಭಟಧ್ವಜನಿಯ ಓಡಿಸಿದ ವಾಕ್ಸಾಯಕದಿಂದ ಮಧ್ವರಾಜಕೃತ ಸದ್ಗ್ರಂಥಗಳ ವಿಸ್ತಾರ ಮಾಡಿದ ಯತಿಧೀರಾ ಗೆಲಿದ ಪ್ರಸಿದ್ಧ ಕಾಣಮ್ಮ 3 ಚಾಮೀಕರಕೃತ ಚಾಮರ ಛತ್ರಗಳಿಂದ ಸೇವಿಪದ್ವಿಜರಿಂದ ಶ್ರವಣಕೆ ಪೀಯೂಷ ಭವಬಾಧೆ ಬಿಡಿಸಿದ ಶ್ರೀಮಳಖೇಡ ಸುಧಾಮ ಕಣಮ್ಮ4 ತೋಷಿತ ಬುಧನಿಕರ ಪಾವನತರಚರಿಯ ಶರಣುಜನಕೆ ಸುರತರುವೆನಿಸಿದ ಜಯರಾಯಾ ವಿದ್ವಜ್ಜನಗೇಯಾ ಧರೆಯೊಳು ಸಿರಿಕಾರ್ಪರ ನರಸಿಂಹನೆ ಪರನೆಂದರುಹಿದ ಗುರುವರನಮ್ಮ5
--------------
ಕಾರ್ಪರ ನರಹರಿದಾಸರು
ರಥಾರೂಢ ಮಾರುತ ವಂದಿತ ಯನ್ನಾ ಪಥವ ತೋರೋ ಬೇಗ ಮುಂದಿನ ಪಥವ ತೋರೋ ಬೇಗ ಪ ಸತೀಸುತರುಗಳು ಅತಿಹಿತರೆಂಬುದು ಮತಿಗಳ್ದು ಸದ್ಗತಿಯನು ಪಾಲಿಸು ಅ.ಪ. ದೀನ ಜನರ ಸುರಧೇನುವೆ ನೀ ಬಂಧು ಆನತ ಜನರನು ಮಾನದಿಂದ ಕಾಯೋ 1 ಹನುಮ ಭೀಮ ಮಧ್ವ ಮುನಿನುತ ದೇವನೀ ವನರುಹದಳನೇತ್ರ ಅನಿಮಿಷರೊಡೆಯ 2 ದುಷ್ಟ ಜನರುಗಳರಿಷ್ಟಗೋಸುಗ ಶಿಷ್ಟ್ಟಿಲಿ ಬಂದು ಸುಜನೇಷ್ಟಪ್ರದನಾದಿ 3 ಶಿರಿವತ್ಸಾಂಕಿತ ನಿನ್ನ ಚರಣಕಮಲದಲ್ಲಿ ನಿರುತ ಭಕುತಿಯಿತ್ತು ಪೊರಿಯುತ ಸರ್ವದಾ 4
--------------
ಸಿರಿವತ್ಸಾಂಕಿತರು
ರವಿಕುಲಾಂಬುಧಿ ಸೋಮನೆ ಭುವನ ಪಾವನ ರಾಮನೆ ಪ ಕವಿವರಾರ್ಚಿತ ಭೂಮನೆ ದಿವಿಜಸನ್ನುತ ನಾಮನೆ ಅ.ಪ. ಚಂಡ ರಾವಣನುಪವನದೊಳು ಚಂದ್ರ ಮಂಡಲಾಸ್ಯೆ ಇರುವಳು 1 ಸುಂದರಿ ನಿನ್ನನು ಧ್ಯಾನಿಪಳು ಕುಂದುತ್ತ ಚಿತ್ತದಿ ಶೋಕಿಪಳು ಬಿಡುವಳು ಬಂಧನ ದೊಳಿರುವಳು2 ಮಾಸಿದ ಸೀರೆಯನುಟ್ಟಿಹಳು ದೂಸರ ವೇಣಿಯ ಸುತ್ತಿಹಳು ಭೂಷ ವಿಶೇಷದೊಳಾಸೆಯನಿಡಳುಪವಾಸವನೆ ಗೈವಳು 3 ತಾಮರಸಾಕ್ಷಿಯು ನೊಂದಿಹಳು ರಾಮ ರಾಮೆನ್ನುವಳು 4 ಜ್ಞಾನ ವಿಜ್ಞಾನವ ಪೊಂದಿಹಳು ಪತಿ ಭಕ್ತಿದೇವಿಯಾಗಿರುವಳು ಧೇನುಪುರೀಶ ಕೇಳು 5
--------------
ಬೇಟೆರಾಯ ದೀಕ್ಷಿತರು
ರಾಘವ ಹರಿ ವಿಠಲ | ಕಾಪಾಡೊ ಇವಳಾ ಪ ಅಘದೂರ ಶ್ರೀ ಹರಿಯೇ | ಪಾಪಘಗಳ ಕಳೆದೂ ಅ.ಪ. ಮುಕ್ತಿಗೇ ಸೋಪಾನ | ತಾರತಮ್ಯ ಜ್ಞಾನಮತ್ತೈದು ಭೇದಗಳ | ಅರಿವನೆ ಇತ್ತೂಪ್ರತ್ಯಹರ ತವನಾಮ | ಚಿತ್ತದಲಿ ನೆನೆವಂಥಉತ್ತಮದ ಸಂಸ್ಕøತಿಯ | ಕೊಟ್ಟು ಕಾಪಾಡೋ 1 ಪರಿ | ಇತ್ತಿಹೆನೊ ಅಂಕಿತವಚಿತ್ತದೊಲ್ಲಭ ಹರಿಯೆ | ಕರ್ತೃ ಕರ್ಮದಲೀವ್ಯಾಪ್ತ ನೀನಾಗಿದ್ದು | ಸತ್ಸಾಧನೆಯ ಗೈಸೀಎತ್ತು ಭವದಿಂದಿವಳ | ಉತ್ತಮೋತ್ತಮನೆ 2 ಇತ್ತು ವೈರಾಗ್ಯವನು | ಮತ್ತೆ ಜ್ಞಾನ ಸಂಪದಇತ್ತು ಕಾಪಾಡಿವಳ | ಕರ್ತೃ ರಾಮಚಂದ್ರಾ |ಉಕ್ತಿ ಎನ್ನದು ಇದೂ | ಮತ್ತನ್ಯ ನಾನೊಲ್ಲೆಮುಕ್ತಿ ದಾಯಕ ಗುರೂ | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ರಾಘವೇಂದ್ರ ತೀರ್ಥ ಬೋಧಿಸುಭಾಗವತ ಗತಾರ್ಥರಾಘವ ಪದಾಂಬುಜ ಲಬ್ದಾರ್ಥ ಸರಾಗದಿ ಪಾಲಿಸು ನಿಜ ಪುರುಷಾರ್ಥ ಪ ತುಂಗಾತಟವಾಸ ರಾಘವಸಿಂಗನ ನಿಜದಾಸಪಂಗು ಬಧಿರ ಮುಖ್ಯಾಂಗ ಹೀನರನಪಾಂಗ ನೋಟದಿ ಶುಭಾಂಗರ ಮಾಡಿ 1 ಪಾದೋದಕ ಸೇವಾರತರಿಗಗಾಧ ಫಲಗಳೀವಬೂದಿ ಮುಖದ ದುರ್ವಾದಿಗಳೋಡಿಸಿಸಾಧು ಜನರಿಗಾಲ್ಹಾದ ಬಡಿಸುತಿಹ 2 ಭುಜಗಧರಾಧಿಪನಾ ವೊಲಿಸಿದಸುಜನ ಶಿರೋಮಣಿಯೇನಿಜ ಪದ ಯುಗಳವ ಭಜಿಸುವ ಜನರಿಗೆ(ವಿಜಯದ ನೆನಿಸುವ ದ್ವಿಜಕುಲನಂದನ)ವಿಜಯದ ಗೋಪತಿ ವಿಠಲ ನಂದನ 3
--------------
ಗೋಪತಿವಿಠಲರು
ರಾಘವೇಂದ್ರ ವಿಠಲ | ಪೊರೆಯ ಬೇಕಿವನ ಪ ಯೋಗಿಯನೆಗೈಯುತ್ತ | ಯೋಗಮಾರ್ಗದಲಿ ಅ.ಪ. ಪತಿ ಪ್ರಿಯನೇ 1 ಉತ್ತಮ ಸುಸಂಸ್ಕತಿಯ | ಪೊತ್ತು ಶ್ರಮಿಸುತ್ತಿಹಗೆಭಕ್ತಿ ಜ್ಞಾನಗಳನ್ನೆ | ಇತ್ತಿವನ ಸಲಹೋ |ಕರ್ತ ನೀನೆಂಬಮತಿ | ವ್ಯಕ್ತಿಗೈ ಇವನಲ್ಲಿಭಕ್ತಪರಿಪಾಲಕನೆ | ಅವ್ಯಕ್ತಮಹಿಮಾ 2 ಕರ್ಮಾಕರ್ಮಗಳ | ಮರ್ಮಗಳ ತಿಳಿಸುತ್ತಭರ್ಮಗರ್ಭನ ಪಿತನೆ | ಪೇರ್ಮೆಯಲಿ ಪೊರೆಯೋಕರ್ಮಗಳ ಮಾಳ್ಪಲ್ಲಿ | ನಿರ್ಮಮತೆ ನೀಡಯ್ಯನಿರ್ಮಲಾತ್ಮನೆ ಹರಿಯೆ | ಧರ್ಮಗಳ ಗೋಪ್ತಾ 3 ಸಾರ | ಉಣಿಸಿವಗೆ ಹರಿಯೆ 4 ಸರ್ವಜ್ಞ ಸರ್ವೇಶ | ಸರ್ವವ್ಯಾಪ್ತನೆ ದೇವಸರ್ವ ಪ್ರೇರಕ ಹರಿಯೆ | ಸರ್ವಾಂತರಾತ್ಮಾದುರ್ನಿಭಾವ್ಯನೆ ಗುರು | ಗೋವಿಂದ ವಿಠಲನೆದರ್ವಿ ಜೀವಿಯ ಪೊರೆಯೆ | ಬಿನ್ನವಿಪೆ ಹರಿಯೇ 5
--------------
ಗುರುಗೋವಿಂದವಿಠಲರು